ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ ಜ್ಞಾನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜ್ಞಾನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ ಜ್ಞಾನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀರಂಗನಾಥ ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ ಕಾಯೊ ಕಾಯೊ ಕಾವೇರಿ ನಿಲಯನೆ ಕಾಯೊ ವಾಙ್ಮನ ಪೂರ್ವಕದಿ ತವ ತೋಯಜಾಂಘ್ರಿಯ ನಂಬಿದೆನುಭವ ಮಾಯಗೆಲುವ ಉಪಾಯ ತೋರಿ ಅ.ಪ ದೇವಾಧಿದೇವ ನೀನು | ಪ್ರಣತ ಜನರಿಗೆ ದೇವತರು ಮಣಿಧೇನು | ಎಂದರಿತು ನಿಷ್ಟಿಲಿ ಧಾವಿಸಿ ಬಂದೆ ನಾನು | ರಘುವಂಶ ಭಾನು ಕಾವನಯ್ಯ ನೀನೊಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು ಭಾವ ಭಕ್ತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ 1 ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ | ಎನ್ನಪರಾಧವ ಮನ್ನಿಸೊ ಹಯವದನ | ವೈಕುಂಠ ಸದನ ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ ಸನ್ನಿಧಾನದಿಂ ಬಂದೆ ತಂದೆ 2 ನೇಸರ ಕುಲಜಾತ | ವೇದೋಕ್ತಕ್ರಮದಿಂ ಭೂಸುರ ಕರಪೂಜಿತ | ಕೌಶಿಕನ ಯಜ್ಷವ ಪೋಷಕ ಪವನಪಿತ | ಪಾವನ್ನ ಚರಿತ ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ ದೋಷಕಳೆಯುವ | ಭೇಷಪುಷ್ಕರಣೀಶ ಕೇಶವ ದಾಶರಧಿ ಶ್ರೀ ಶಾಮಸುಂದರ 3
--------------
ಶಾಮಸುಂದರ ವಿಠಲ