ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ
ಪೆಣ್ಣೆಂದರಿದು ಮೆಚ್ಚಿ ಕೆಡಬೇಡ ನಿನ್ನ ತಿನ್ನುವ ಮರಿಗಿದು ತಿಳಿ ಮೂಢ ಪ ತಾಯಾಗಿ ಮೊದಲು ನಿನ್ನ್ಹಡೆದಿಹ್ಯದು ಪುನ: ಮಾಯಾಗಿ ಬೆನ್ನ್ಹತ್ತಿ ಸುಡುತಿಹ್ಯದು ಬಾಯೊಳು ಮೊಲೆಯಿಟ್ಟು ಬೆಳೆಸಿಹ್ಯದು ಮತ್ತು ಕೈಯೊಳು ಮೊಲೆಯಿಟ್ಟು ಕೊಲುತಿಹ್ಯದು 1 ಸುತನೆಂದು ಮುದ್ದಿಟ್ಟು ಒಲುತಿಹ್ಯದು ಮತ್ತು ಪತಿಯೆಂದು ನಿಜಮತಿ ಸುಲಿತಿಹ್ಯದು ರತಿಗೊಟ್ಟು ಅತಿಮೋಹದಾಡುವುದು ನಿನ್ನ ಗತಿಗೆಡಿಸಿ ಜವಗೀಡು ಮಾಡುವುದು 2 ಕಣ್ಣುಸನ್ನೆಯ ಮಾಡಿ ಕರಿತಿಹ್ಯದು ಬಹು ಬಣ್ಣ ಮಾತಾಡಿ ಸೋಲಿಪುದು ಕುನ್ನಿಯಂತೆ ನಿನ್ನ ಮಾಡುವುದು ಬಲು ಬನ್ನಬಡಿಸಿ ಬಾಯಿ ಬಿಡಿಸುವುದು 3 ಶ್ವಾನನಂದದಿ ಕೂಗಲ್ಹಚ್ಚುವುದು ಮಾನಾಭಿಮಾನ ತೊರೆಸುವುದು ನಿಜ ಜ್ಞಾನಕೆಡಿಸಿ ಪಾಪದ್ಹಾಕುವುದು 4 ತಂದ ಪುಣ್ಯವನೆಲ್ಲ ಸೆಳೆತಿಹ್ಯದು ಬಲು ಮಂದನೆನಿಸಿ ಕುಣಿಸ್ಯಾಡುವುದು ತಂದೆ ಶ್ರೀರಾಮಪ್ರೇಮ ಕೆಡಿಸುವುದು ನಿಜಾ ನಂದ ಮುಕ್ತಿಗೆ ಕಿಡಿ ಹಾಕುವುದು 5
--------------
ರಾಮದಾಸರು
ಸೂಳೆವೆಂಗಳ ನಂಬಬೇಡಅವರ ಖೇಳಮೇಳವ ಬಿಡೋ ಮೂಢಬಲು ಜಾಲಗಾತಿಯರ ಬಲೆಗೆ ಸಿಕ್ಕದಿರುಯಮನಾಳೆ ಮುಡಿಸುವನೆ ಬಿಡುಬಿಡುಗಾಡ ಪ ಸುರತಸುಖವ ತೋರಿಸುವರುಮನೆಯೊಳಿರುವ ಧನವ ತರಿಸುವರುಪರಪುರುಷನಿದಿರು ಮಾಡುವರುಧನ ಬರಿದಾಗೆ ತಪ್ಪು ಹೊರಿಸುವರುಕಡೆಗೆ ತಿರಿದು ತಾರಂದು ಕೈಯಲಿ ತೂತುಗರಟವಕರೆದು ಕೊಡುವರು ಬೈವರು ದೂರುವರು1 ಗುರುಹಿರಿಯರ ತೊರೆಸುವರುಮನೆಯೊಳಿರುವ ಮಕ್ಕಳ ಮರಸುವರುಧನ ಬರುವತನಕ ನೋಡುವರುಬಾರದಿರೆ ಛಿ ಹೋಗೆಂದು ದೂಡುವರು ಗಂಧಪರಿಮಳ ತಿಲಕ ತಾಂಬೂಲ ಕ್ರಮುಕದೊಳುಮರುಳು ಮದ್ದಿಕ್ಕಿ ಕೈವಶವ ಮಾಡುವರು2 ಹೆಂಡತಿಯನು ತೊರಸುವರುಕಂಡ ಕಂಡ ಪುರುಷರ ಕೂಡುವರುಮಂಡೆಗೆ ಮದ್ದನೂಡುವರು ಕಡೆಗೆಭಂಡಾಟವ ಮಾಡುವರು...........(ಅಸಮಗ್ರ)
--------------
ಕೆಳದಿ ವೆಂಕಣ್ಣ ಕವಿ
ಹೆಣ್ಣ ನಿಚ್ಛಿಸುವರೆ ಮೂಢ - ಇದನುಕಣ್ಣು - ಮೈ ಮನಗಳಿಂಗಳಿಂ ಸೋಂಕಲು ಬೇಡ ಪ.ತಾಯಾಗಿ ಮೊದಲು ಪಡೆದಿಹುದು - ಮತ್ತೆಬಾಯಯೆಂದನಿಸಿ ಕಾಮದಿ ಕೆಡಹುವುದುಕಾಯದಿ ಜನಿಸುತ ಬಹುದು - ಇಂತುಮಾಯೆಯು ನಿನ್ನ ಬಹು ವಿಧದಿ ಕಾಡುವುದು 1ಹಿತ ಶತ್ರುವಾಗಿ ಹೊಂದುವುದು - ನಿಮಿಷರತಿಗೊಟ್ಟುನಿತ್ಯ ಮುಕ್ತಿಯ ಸೆಳೆಯುವುದುಕ್ಷಿತಿಯ ಪೂಜ್ಯತೆ ಕೆಡಿಸುವುದು - ಮುಂದೆಶತಜನ್ಮಗಳಿಗೆ ಹೊಣೆಯಾಗಿ ನಿಲ್ಲುವುದು2ಬಗೆಯದು ತನುವೆಲುವುನರ - ಖಂಡ - ಅದರೊಳಗೆ ವಾಯುರಂದ್ರ ಕಿಸುಕುಳದ ಉದ್ಧಂಡಭಗವೆಂಬುದು ಮೂತ್ರದಭಾಂಡ - ಆದನೊಗಡಿಸದೆ ನಿಜಸುಖವಿಲ್ಲಕಂಡೆಯ3ವಶನಾದ ವಾಲಿಯ ಕೊಲಿಸಿಹುದು - ಹೀಗೆಹೆಸರು ಮಾತ್ರದಿ ದಶಶಿರನಳಿದಿಹುದುಶಶಿಯಂಗದಲಿ ಕ್ಷಯವಿಹುದು - ಹೀಗೆಹೆಸರು ಪಡೆದ ಕೀಚಕನನಳಿದಿಹುದು 4ಪಶುಪತಿಯ ದೆಸೆಗೆಡಿಸಿಹುದು - ಹೀಗೆವಸುಧೆಯೊಳ ಜೀವರ ಹಸಗೆಡಿಸಿಹುದುವಸುಧೇಶನ ನಾಮ ಮರೆಸುವುದು - ನಮ್ಮಅಸಮ ಪುರಂದರವಿಠಲನ ತೊರೆಸುವುದು 5
--------------
ಪುರಂದರದಾಸರು