ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತರಾತ್ಮನ ದ್ಯಾನವನ್ನು ಅಂತರಂಗದಿ ಮಾಡೋ ನೀನು ಸಂತತ ನಿರ್ಮಲನಾಗಿ ನಲಿದಾಡು ಮನವೆ ಪ ನರದೇಹಕ್ಕೆ ಬಂದು ನೀನು ಇರುವಂಥಾ ಸಾರ್ಥಕವೇನು ಗುರುಕರುಣಕವಚವ ತೊಟ್ಟು ಕರ್ಮವ ಸುಟ್ಟು ಮಾಯಾ ಮೋಹವೆಲ್ಲವ ತರಿದು ಷಢ್ವೈರಿಗಳ ಶಿರವನು ಸರಸ ಹೃದಯದಿ ಮೆರೆವ ಜ್ಯೊತಿಯ ಬೆಳ ಗಿರುವ ಕೋಟಿಪ್ರಕಾಶದÀಂತಿಹ 1 ಬಿಡದೆ ಶ್ರೀ ಗುರುವಿನ ಪಾದಾ ಪಿಡಿದು ನಿತ್ಯಾನಂದ ಬೋಧಾ ಕಡಲ ತೆರೆಯೊಳು ಮಿಂದು ಕಾಮನ ಕೊಂದು ಅಡಿಗಡಿಗೆ ತತ್ವಾಮೃತರಸ ನಡುವಿರಳು ಶೀತ ಕಿರಣಕೋಟಿಯ ಪಡೆಯಕಟ್ಟಿದ ತರಣಿಯಂತಿಹ 2 ಮಂದಮತಿಯ ಕಳೆದು ಚಿದಾ ನಂದನ ಶ್ರೀ ದಿವ್ಯಪಾದ ಹೊಂದಿ ಬ್ರಹ್ಮಾ ನಂದರಸವಾ ಬಿಡದೆ ಸೇವಿಸುವ ಶಿವಾ ನಂದವನು ಕೈಕೊಂಡು ವಿಮಲಾ ನಂದ ದತ್ತಾತ್ರೇಯನೊಳಾಡುವಾ ಎಂದಿಗೂ ಆಳವಿಲ್ಲದಾತ್ಮನ ಚಂದವನು ನೋಡುತ್ತನಿನ್ನೊಳು 3
--------------
ಭಟಕಳ ಅಪ್ಪಯ್ಯ
ಇಂದು ಶೇಖರ ರಕ್ಷಿಸೋ ಎನ್ನ ತಂದೆ ಶಂಕರ ಹಿಂದೆ ಪೊಂದಿದ ದೇಹದ ಮತ್ತಿಂದು ಹಿಡಿಯುತ ಪ ಹಿಂದೆ ಬಿಸುಟೊಡಲು ಮರು ಕೊಳಿಸಿ ಸಾರಿ ಬಂದುದು ತಂದೆ ತಾಯಿಯ ಗಣನೆ ಉರ್ವಿಸಿಕವನು ಮೀರಿತು ಅಂದು ಮೊದಲು ಜನನೀಸ್ತನವನುಂಡು ಪಾಲಸವಿದುದು ಇಂದು ಕಂದು ಗೊರಳನೆ 1 ಕಾಲ ಬಾಲವನಿತೆ ಬಾಳು ಬದುಕಿನೊಳಗೆ ತೊಳಲಿ ಬಳಲಲು ಕಾಯದೊಳಗೆ ಮುಸುಕಲು ಕೊಳುವೋದೆ ಯಮಗೆ ಶೂಲ ಪಾಣಿ ನೀಲಕಂಠನೆ 2 ಎನ್ನದಾನದೆಂಬ ಹಮ್ಮವಶದಿ ಸುಮ್ಮನೆ ಹೊನ್ನು ಹೆಣ್ಣು ಮಣ್ಣು ಮೂರು ತನ್ನದೆಂದು ನಂಬುತ ಬನ್ನ ಬಟ್ಟು ಸಾಯುತ ಭವದಶರಧಿ ಬೇಗೆಯನ್ನು ಈಸಲಾರೆನೋ 3 ಸಿಂಧು ತೆರೆಯೊಳು ಮಂದ ಗಜವು ಕುಣಿಯೋಳ್ ಬಿದ್ದು ಏಳಲಾರದಂದದಿ ಇಂದ್ರಜಾಲದೊಳಗೆ ಸಿಲುಕಿಮಂದಗೆಟ್ಟು ನೊಂದೆನೋ 4 ದುರಿತ ಮರಣ ಕಾಲದೊಳಗೆ ನಾಮಸ್ಮರಣೆ ಯಾದಗುವಂದದಿ ತರಣಿ ತಮವ ಕಡಿಸಿ ಧರೆಯ ಬೆಳಗುವಂತೆ ಹೃದಯದಿ ಕರುಣದಿಂದಲಿ ನಿರುತಸಲಹೋ ಇಕ್ಕೆರಿ ಅಘೋರೇಶಲಿಂಗನೆ 5
--------------
ಕವಿ ಪರಮದೇವದಾಸರು
ಕಾಯೊ ಸುಖಸಾರ ಮಾಯಾವಿದೂರ ಭಾವಜನಯ್ಯ ಭಕುತರ ಪ್ರಿಯಕರ ಪ ಕಾಯಕಾಂತಾರದೊಳು ನೋಯುತ ವಿಧ ವಿಧ ಬಾಯ ಬಿಡುವೆನಯ್ಯ ತೋಯಜಾಕ್ಷನೆ ನೋಡೊ 1 ಸಂಸಾರತೆರೆಯೊಳು ಹಿಂಸೆ ಪಡುತ ಮತಿ ಕಂಸಾರಿ ಕರುಣಿಸೊ 2 ಜಡಭವತೊಡರನು ಕಡೆಹಾಯ್ಸಿ ಕೊಡುಮುಕ್ತಿ ಕಡುದಯಾನಿಧೆ ಎನ್ನೊಡೆಯ ಶ್ರೀರಾಮನೆ 3
--------------
ರಾಮದಾಸರು