ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡಿರಯ್ಯ ಈ ರೂಢಿಯ ಜನರೆಲ್ಲಾ ಮೂಡಲಗಿರಿವಾಸನಾ ವೆಂಕಟೇಶನಾ ಪ ಬೇಡಿದ ವರಗಳ ಭಕ್ತ ಸಮೂಹಕೆ ನೀಡುತಲಿ ಕೊನೆಗೆ ನಿಜಪದವೀವನಾ ಅ.ಪ ಹರಿಬ್ರಹ್ಮರೊಳಾವನುತ್ತಮನೆಂದು ಪರೀಕ್ಷಿಸೆ ಭೃಗುಮುನಿಯು ತೆರಳಿಬಂದು ಅಜಹರನೊಪ್ಪದೆತಾ- ಪರಮಪದಕೆ ಬರಲು ಪರಿ ಸಿರಿಯ ತೊಡೆಯ ಮೇಲೆ ಹರಿಮಲಗಿರೆ ಕಂಡು ಚರಣದಿಂದ ಹೃದಯಕೆ ತಾಡನೆ ಮಾಡಲು ಪರಮ ಭಕುತಿಯಿಂದ ಋಷಿಯ ಪೂಜಿಸಿದ 1 ಸಿರಿಕರವೀರಪುರವನೈದಲು ಧರೆಯೊಳು ವೆಂಕಟಗಿರಿಯ ಸಾರುತ- ಲ್ಲಿರೆ ವಲ್ಮೀಕದಲಿ ಸರಸಿಜಭವ ಶಿವರು ತುರುಕರುವಾಗಿ ಪಾ ಲ್ಗರೆಯೆ ವಲ್ಮೀಕದಲಿ ದೊರೆ ಚೋಳನ ಭೃತ್ಯಗೋವನು ಭಾದಿಸೆ ಶಿರದೊಳಾಂತು ನೃಪಗೆ ಶಾಪವನಿತ್ತ 2 ಮನುಜನೋಲ್ ನಟಿಸುತಲಂಬರರಾಜನ ತನುಜೆಯ ಕೈಪಿಡಿದು ನೆನೆವರಿಗೆ ತಿರುಪತಿಯೆ ವೈಕುಂಠ- ವೆನುತ ಸಾರಿ ಒಲಿದು ಘನಮಹಿಮೆಗಳನು ತೋರಿ ಸಕಲರಿಂ ಗುಣನಿಧಿ ಶ್ರೀಗುರುರಾಮವಿಠಲ ಈ ಘಣಿಗಿರಿಯೊಳಗಿರುತಿಪ್ಪ ತಿಮ್ಮಪ್ಪ 3
--------------
ಗುರುರಾಮವಿಠಲ
ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ. ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ 1 ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ 2 ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ 3 ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ 4 ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ5
--------------
ಗುರುಗೋವಿಂದವಿಠಲರು