ಒಟ್ಟು 213 ಕಡೆಗಳಲ್ಲಿ , 52 ದಾಸರು , 177 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಿರಿನಲ್ಲ ಕೇಳುತಲೆನ ಸೊಲ್ಲ ಬಾರೊ ಬಾರೆನುತಲಿ ಭಕ್ತವತ್ಸಲನೆ ಬಾರಿ ಬಾರಿಗೆ ನಿನ್ನ ಬೇಡಿಕೊಂಬುವೆನು ಪ ಕಡಲೊಳು ಮುಣಿಗಜಗ್ವೇದವ ತರುವ ಕ್ಷೀರಾಂಬುಧಿ ಕಡೆವ ಕಡು ಕ್ರೋಡರೂಪದಿ ಬೇರನೆ ಕಡಿವ ಅಸುರನ ಒಡಲೊಡೆವ ಬಡವನಾಗ್ಯಜ್ಞ ಶಾಲೆಗೆ ನಡೆವ ಕೊಡಲಿಯನೆ ಪಿಡಿವ ಹೊಡೆದ್ಹತ್ತು ಶಿರ ಕಾಳಿ ಮಡುವ್ಹಾರಿ ತ್ರಿಪುರರ ಮಡದೇರನ್ವೊಲಿಸ್ವಾಜಿ ಹಿಡಿದೇರೋಡಿಸುವನೆ 1 ಕಣ್ಣು ತೆರೆದೆವೆಯಿಕ್ಕದಲೆ ನೋಡಿ ಬೆನ್ನಲಿ ಗಿರಿ ಹೂಡಿ ಮಣ್ಣುಕೆದರುತಲವನ ದಾಡೆ ಕರುಳ್ಹಾರವ ಮಾಡಿ ಸಣ್ಣ ತ್ರಿಪಾದ ದಾನವ ಬೇಡಿ ಮನ್ನಿಸಿ ತಪ ಮಾಡಿ ಅ- ದಧಿ ಬೆಣ್ಣೆಗಳನು ಕದ್ದು ಹೆಣ್ಣುಗಳನೆ ಕೆಡಿಸ್ಹಯವನ್ನೇರಿ ಮೆರೆವನೆ 2 ನಾರುತ್ತ ಮೈಯ ನೀರೊಳಗಿರುವ ಮಂ- ದಾರವನ್ಹೊರುವ ಕ್ವಾರೆ (ಕೋರೆ?)ಯಲಿ ಧರೆಯ ಮ್ಯಾಲಕೆ ತರುವ ಕರಿ (ಕರೆಯೆ?) ಕಂಬದಿ ಬರುವ ಘೋರ ತ್ರಿವಿಕ್ರಮನಾಗಿ ತೋರುವ ತಾಯಿಯ ಶಿರ ತರಿವ ನಾರ್ವಸ್ತ್ರಬಿಗಿದುಟ್ಟ ಭೀಮೇಶಕೃಷ್ಣನೆ ಭಂಗ ಮಾಡಿ ತುರುಗವೇರಿ3
--------------
ಹರಪನಹಳ್ಳಿಭೀಮವ್ವ
ಹೂವ ಕೊಡೆ ದೇವಿ ಹೂವ ಕೊಡೆಯಾವಾಗಲೂ ನಿಮ್ಮ ಸಿರಿಮುಡಿಯೊಳಗಿರ್ಪ ಪ ವರಮಹಾಲಕ್ಷ್ಮಿ ನಿಮ್ಮ ಸಿರಿಮುಡಿಯನೆ ಕಟ್ಟಿಪರಿ ಪರಿ ಧೂಪ ಧೂಮಗಳನಿಕ್ಕಿಪರಿಮಳಿಸುವ ಸಂಪಿಗೆಯ ಪೂಸರವ ಸಿಂ-ಗರಿಸಿರಲಾಮಾಳಿಕೆಯೊಳು ಸಂಪಿಗೆ ಹೂವ 1 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸರಸಿಜ ಮೊದಲಾದ ಕುಸುಮದಿಂದಪರಿಮಳಿಸುವ ನಿಮ್ಮ ಸಿರಿಮುಡಿಯೊಳಗಿರ್ಪಅರಳಿದ ಮಲ್ಲಿಗೆ ಹೂವ ಕಂಡೆ ಹೂವ 2 ವ್ಯೋಮಗಂಗೆಯೊಳಿಂದ ಹೇಮಕಾಮರಸವಕಾಮಿನಿಯರು ಕೊಯ್‍ತಂದದನುಶ್ರೀ ಮಹಾದೇವಿ ನಿಮ್ಮ ತುರುಬಿಗೆ ಮುಡಿಸಿರ-ಲಾ ಮಹಾಕುಸುಮ ಮಾಲಿಕೆಯೊಳು ತಾವರೆ ಹೂವ 3 ಮುತ್ತಿನ ಲಹರಿಯ ರತ್ನದ ರಾಗಟೆಯಸುತ್ತ ಮುತ್ತಲೂ ರಾರಾಜಿಸುವಪುತ್ಥಳಿಯ ಚಿನ್ನದಂತೆ ಘಮಘಮಿಸುವಉತ್ತಮವಾದ ಸುವರ್ಣದ ಕೇದಗೆ ಹೂವ 4 ಜಾತಿ ರತ್ನದ ನಡುವೆ ಜ್ಯೋತಿಯ ತೆರನಂತೆನೂತನವೆನಿಸಿ ಪ್ರಜ್ವಲಿಸುತಿಹಶಾತಕುಂಭದ ಚೌರಿಯ ಮೇಲೆ ಮುಡಿಸಿದಜಾತಿಮಲ್ಲಿಗೆ ಸಂಪಿಗೆ ಸೇವಂತಿಗೆ ಹೂವ 5 ಇಂದೀವರದಳನಯನೆ ಶುಭಪ್ರದೆಇಂದು ನಿಭಾನನೆ ಹೂವ ಕೊಡೆಮಂದಗಮನೆ ನಿಮ್ಮ ತುರುಬಿನೊಳೊಪ್ಪುವಮಂದಾರದ ಮೋಹನ ಮಾಲಿಕೆಯೆಂಬ ಹೂವ 6 ಚಂದ್ರಗಾವಿಯ ಸೀರೆ ಚೆಲುವ ಮುತ್ತಿನಸರದಿಂದಲೆಸೆವ ದೇವಿಹೂವ ಕೊಡೆಮುಂದಲೆ ಮುತ್ತಿನ ಸರದ ಮೇಲೊಪ್ಪುವಬಂಧುರಪೂಗಪುನ್ನಾಗ ಪಾರಿಜಾತದ ಹೂವ 7 ದೇವಿ ನಿಮ್ಮನು ಪೂಜೆಗೈದು ಮೆಚ್ಚಿಸಬಲ್ಲನಾವನೀ ಧರೆಯೊಳುಹೂವ ಕೊಡೆಪಾವನಾತ್ಮಕಿಯ ಪರಾಕ ಮಾಡದೆ ವರ-ವೀವ ಸಮಯವಿದು ಹೂವ ಕೊಡೆ ಹೂವ 8 ಮುತ್ತೈದೆತನವನು ನಿತ್ಯ ಸೌಭಾಗ್ಯವಉತ್ತಮ ಧನಕನಕಾಂಬರವಪುತ್ರ ಸಂತಾನವ ಕೊಡುವೆನೆನುತ ಕರ-ವೆತ್ತಿ ಅಭಯವಿತ್ತು ಹೂವ ಕೊಡೆ ಹೂವ 9 ಎಂದೆಂದೂ ಈ ಮನೆಗೆ ಕುಂದದ ಭಾಗ್ಯವಚಂದವಾಗಿಹ ಛತ್ರಚಾಮರವಚಂದ್ರ ಸೂರ್ಯರ ಪೋಲ್ವ ನಂದನರನುದಯ-ದಿಂದಲಿ ಕೊಟ್ಟು ರಕ್ಷಿಪನೆಂದು ಸೂಡಿದ ಹೂವ10 ವರದಾನದಿಯ ತೀರವಾಸ ಶ್ರೀ ಕೆಳದಿಯಪುರವರಾಧೀಶ ರಾಮೇಶ್ವರನಪರಮ ಪಟ್ಟದ ರಾಣಿ ಪಾರ್ವತಿ ನಿಮ್ಮಯಸಿರಿಮುಡಿಯೊಳಗಿರ್ಪ ಹೂವ ಕೊಡೆ ಹೂವ 11
--------------
ಕೆಳದಿ ವೆಂಕಣ್ಣ ಕವಿ
ಕಥನಾತ್ಮಕ ಅರಸಿಕೊಂಬೆ ಮನಸ್ಸಿಗೆ ಬಂದವಳ ಪ ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು | ಕೊಂಡು ಮಾತಾಡಿ ಬೇಡಿದ 1 ನಾರಿಯರು ನಿನಗೆ ಉಂಟಾಗ ಈರೈದು ಸಾವಿರ ಪರಾಕು 2 ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ | ಸತಿ ವೇಗ ಪೋಗು ನೀ ಸಾಗು 3 ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ | ಒಂದೊಂದು ಮನೆಯಲಿ ಸೋಜಿಗ ಅತಿಶಯ | ಅಂದು ನಾರದಗೆ ತಾ ತೋರಿದ ಬಿರುದಾ 4 ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ | ಪರಿಯಂತ ಏಕಾಂತ 5 ಚದುರಂಗ ನಗೆಕೂಟ ಒಂದು ಮನೆ | ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ | ಬಿಗಿದಪ್ಪಿ ಸವಿನಾಡುವ ನೋಡಾ6 ಹೋಯಿದಾಟ ಒಂದು ಮನೆ | ಮನ್ಯರಾದ ಶುದ್ಧಿ ಮಕ್ಕಳ ಶೋಭನಾ | ಪಯಣಗತಿಯಲಿದ್ದ ವಾರ್ತಿ ಒಂದರ್ಥಿ7 ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ | ಕರಕೊಂಡು ಕುಡಿಯುತಾ | ಕುಸುಮವ ಮುಡಿಸುತ ನುಡಿಸುತಾ8 ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ | ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ | ದಾನ ಧರ್ಮಗಳ ಕೊಡುವನು ನಡೆವನು 9 ಮಿಂದುಂಡು ಒಂದು ಮನೆ | ಅನಂತ ಇದ್ದಾ ಅನಿರುದ್ಧಾ10 ಬಂದು ಹರಿಯ | ಚರಣಕ್ಕೆ ಬಿದ್ದು | ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ 11
--------------
ವಿಜಯದಾಸ
ಪುರಾಣವಿಷಯ ಶ್ರೀವೆಂಕಟೇಶ ಕಲ್ಯಾಣ ಇನ್ನೆಂದಿಗೋ ನಿನ್ನದರುಶನ ಶೇಷಾದ್ರಿವಾಸ ಪ ಪನ್ನಂಗಶಯನ ಪ್ರಸನ್ನರ ಪಾಲಿಪ ಘನ್ನಮಹಿಮ ನೀನೆನ್ನನುದ್ಧರಿಸೂಅ.ಪ ವರ ಸುರಮುನಿಗಳ ವೃಂದ ನೆರಹಿದ ಯಾಗಗಳಿಂದ ಪರಮಾದರದಿಂದಿರುವ ಸಮಯದಿ ನಾರದ ಮುನಿ ಬಂದೊದಗಿ ನಿಂದ ಇ- ಸುರಮುನಿವಚನದಿ ಭೃಗುಮುನಿವರ ಪೋಗಿ ಹರುಷದಿ ಶ್ರೀಹರಿ ಉರಗಶಯನನಾಗಿ ಹರುಷದಿ ಮುನಿಪಾದ ಕರದಲಿ ಒತ್ತುತ ಕರುಣದಿ ಸಲಹಿದೆ ದುರಿತವ ಹರಿಸಿ ಹರಿಭಕುತರ ಅಘಹರಿಸಿಕಾಯುವಂಥ ಕರುಣಿಗಳುಂಟೇ ಶ್ರೀಹರಿ ಸರ್ವೋತÀ್ತುಮಾ 1 ಸ್ವಾಮಿ ನೀನಿಜಧಾಮವನೇ ತೊರೆದೂ ಸ್ವಾಮಿಕಾಸಾರ ತೀರದಿ ನಿಂದೂ ಧಾಮವನರಸಿ ವಲ್ಮೀಕವನೆ ನೋಡಿ ಸನ್ಮುದವನ್ನೇ ತೋರುತ ಕಮಲ ಭವಶಿವ ತುರುಕರುರೂಪದಿ ಕಾಮಧೇನು ಪಾಲ್ಗರೆಯುತಾ ಈ ಮಹಿಮೆಯನ್ನೇ ಬೀರುತಾ ಭೂಮಿಗೊಡೆಯ ಚೋಳನೃಪಸೇವಕನು ಧೇನುವನ್ನು ತಾ ಹೊಡೆಯಲು ಕಾಮನಯ್ಯ ನೀನೇಳಲು ಭೀಮವಿಕ್ರಮವ ತೋರಲು ಕ್ಷಮಿಸಿದೆ ನೃಪನ ದಯಾಳು ಅಮಿತ ಸುಗುಣಪೂರ್ಣ ಅಜರಾಮರಣ ನೀ ಮಸ್ತಕಸ್ಪೋಟನ ವ್ಯಾಜವ ತೋರಿ ಪ್ರೇಮದಿ ಗುರುಪೇಳ್ದೌಷಧಕಾಗಿ ನೀ ಮೋಹವ ತೋರಿದೆ ವಿಡಂಬನಮೂರ್ತೇ 2 ಮಾಯಾರಮಣನೆ ಜೀಯಾ ಕಾಯುವೆ ಜೀವನಿಕಾಯಾ ತೋಯಜಾಂಬಕ ಹಯವನೇರಿ ಭರದಿ ತಿರುಗಿತಿರುಗೀ ವನವನೆÀಲ್ಲ ಮೃಗನೆವನದಿ ನಿಂದು ನೋಡಿದೇ ಪ್ರಿಯಸಖಿಯರ ಕೂಡಿ ಪದುಮಾವತಿಯು ತಾ ಹಯದಿ ಕುಳಿತ ನಿನ್ನ ನೋಡಲು ಪ್ರಿಯಳಿವಳೆನಗೆಂದು ಯೋಚಿಸಿ ಕಾಯಜಪಿತ ನಿನ್ನ ಹಯವನೆ ಕಳಕೊಂಡು ಮಾಯದಿಂದ ನೀ ಮಲಗಿದೆ ತೋಯಜಮುಖಿಯಳ ಬೇಡಿದೇ ಆ ಯುವತಿಯನ್ನೇ ಸ್ಮರಿಸುತಾ ಶ್ರೀಯರಸನೆ ನೀನು ಸ್ತ್ರೀರೂಪದಿ ಹೋಗಿ ಶ್ರೀಯಾಗಿಹಳಿನ್ನು ಶ್ರೀಹರಿಗೀಯಲು ಶ್ರೇಯವೆಂದು ಆಕಾಶನನೊಪ್ಪಿಸಿ ತಾಯಿಯಭೀಷ್ಟವನಿತ್ತೆ ಸ್ವರಮಣಾ 3 ಸಕಲಲೋಕೈಕನಾಥಾ ಭಕುತರಭೀಷ್ಟಪ್ರದಾತಾ ಭಕುತನಾದ ಆಕಾಶನೃಪತಿಯು ಬಕುಳೆ ಮಾ- ತ ಕೇಳಿ ಅಭಯವಿತ್ತು ಮನ್ನಿಸಿ ಪದುಮಾವತಿಯ ಪರಿಣಯ ಶುಕರ ಸನ್ಮುಖಹಲ್ಲಿ ಅಕಳಂಕ ಮಹಿಮ- ಗೆ ಕೊಟ್ಟನು ತಾ ಲಗ್ನಪತ್ರಿಕಾ ಸ್ವೀಕರಿಸುವದೀ ಕನ್ನಿಕಾ ಈ ಕಾರ್ಯಕೆ ನೀವೆ ಪ್ರೇ ಸಕಲಸಾಧನವಿಲ್ಲಿನ್ನು ಲೋಕೇಶಗರುಹಬೇಕಿನ್ನು ಲೋಕಪತಿಯೆ ಸುರಕೋಟಿಗಳಿಂದಲಿ ಈ ಕುವಲಯದಿ ನಿನ್ನಯ ಪರಿಣಯವೆಸಗಲು ಭಕುತಜನಪ್ರಿಯ ಶ್ರೀವತ್ಸಾಂಕಿತ 4 ಖಗವರವಾಹನ ದೇವಾ ಅಗಣಿತಮಹಿಮ ಗೋಮಯನೆನಿಸಿ ಸುರರ ಪೊರೆಯುತಾ ಅಗಣಿತ ಸುರಗಣ ಕಿನ್ನರರು ಸಾಧ್ಯರು ತರು ಫಲ ಖಗಮೃಗ ರೂಪವ ಬಗೆಬಗೆ ಇಹೆ ಪೊಗಳಲಳವೇ ಗಿರಿವರವು ಹಗಲು ಇರುಳು ಭಗವಂತನೆ ನಿನ್ನನ್ನು ಪೊಗಳುತಿಹರು ನಿನ್ನ ಭಕುತರು ಮೊಗದಲಿ ನಿನ್ನ ದಾಸರು ಗೋವಿಂದ ಮುಕುಂದ ಎನ್ನುತಾ ಯುಗ ಯುಗದೊಳು ನೀನಗದೊಳು ನೆಲಸಿಹೆ ಜಗದ ದೇವ ರಾಜಿಸುವವನಾಗಿಹೆ ಮಿಗಿಲೆನಿಸಿದ ಶ್ರೀ ವೆಂಕಟೇಶಾ ಸದ್ಗುಣ ಸಚ್ಚಿದಾನಂದ ಮುಕುಂದ ಗೋವಿಂದಾ 5
--------------
ಉರಗಾದ್ರಿವಾಸವಿಠಲದಾಸರು
(ಆ) ಮಹಾಲಕ್ಷ್ಮೀ ಸ್ತುತಿಗಳು ಅರಿತು ಸಿಂಗರಮಾಡಿ ಅರಿತು ಸಿಂಗರ ಮಾಡಿ ಪ ಗರುವ ಚೆನ್ನಿಗರಾಯ ಬರುತಿಹನೆ ಬೇಗಾ ಅ.ಪ ಅಳಿಕುಂತಳೆಗೆ ನೋಡಲಲರ್ದ ಸಂಪಿಗೆ ಯೇಕೆ ಚೆಲುವ ಜಾಜಿಯ ಕಮ್ಮಲರ ತುರುಬಿರಮ್ಮಾ ಹೊಳೆವ ಚಂದಿರಮುಖಿಗೆ ವಳಿನವೇತಕೆ ಕೈಗೆ ಅಲರ್ದ ನೈದಿಲೆ ಕುಸುಮವನೆ ಕೊಡಿರೆಯಮ್ಮಾ 1 ಕೀರವಾಣಿಗದೇಕೆ ಜವ್ವಾಜಿ ಪರಿಮಳವು ಚಾರುಕತ್ತುರಿ ಹದನ ಮಾಡಿರಲು ಮುನ್ನಾ ತೋರ ಕುಚಗಿರಿಗಳಿಗೆ ವಜ್ರಭೂಷಣವೇಕೆ ಹಾರವಿದೆ ತಂದಿರಿಸಿ ಮಂಜುಳವಿದೆನಿಸೀ 2 ಲಾವಣ್ಯನಿಧಿಯೀಕೆ ಬೇರೆ ಸಿಂಗರವೇಕೆ ತೀವಿದಂಗದಕಾಂತಿ ನಯನ ವಿಶ್ರಾಂತೀ ಶ್ರೀವೇಲಪುರದಲ್ಲಿ ನೆಲಸಿಹ ಕರುಣದಿಂದ ದೇವ ವೈಕುಂಠಕೇಶವನರಸಿಯೀಕೇ 3
--------------
ಬೇಲೂರು ವೈಕುಂಠದಾಸರು
(ಇ) ಶ್ರೀಕೃಷ್ಣಲೀಲೆ ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ 1 ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ 2 ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ 3 ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ 4 ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ 5 ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ6 ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ 7 ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ8 ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ 9 ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ 10 ಕಂಗಳ ಕುಡಿ ನೋಟಂಗಳಿÀಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ11 ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ 12 ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ 13 ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ14 ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ 15 ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತÀ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ16 ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ 17
--------------
ವ್ಯಾಸರಾಯರು
(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು
ಅಂಗನೆ ನೋಡುವ ಬಾರೆ ಪ ಹೀಂಗಿರಲಾರೆ ನಿನ್ನಾಣೆ ಕಂಗಳು ಪಡೆದ ಫಲವ ರಂಗಕೊಳಲುನೂದುತ ಗೋ-ಪಾಂಗನೆಯರೆಲ್ಲ ನೆರೆದು ಸಂಗಡ ಲೋಲಾಡುತಿಪ್ಪುದ ಅ.ಪ. ಅಧರ ಪಾನವ ತಾ ಸೂರೆಗೊಂಬುದತಾನು ನೆಲೆಸಿದ ವೃಕ್ಷ ಮೂಲಗ-ಳೇನು ಸುಕೃತಮಾಡಿದವೋ ಭೂಲತಾವನದಾ ಪುಣ್ಯಗಳೇನೆಂಬೆನಾನು ಮಾಡಿದ ಪೂರ್ವಸಂಚಿತಏನು ಒದಗಿತೊ ಕೃಷ್ಣರಾಯನವೇಣು ಗೀತಾಮೃತವ ಸವಿವರೆ1 ಹುಲ್ಲೆಯ ಹಿಂಡುಗಳೆಲ್ಲ-ಪುಲ್ಲನಾಭನ ಕೊಳಲ ಧ್ವನಿಯ ಸೊಲ್ಲನಾಲೈಸುತ ವೇಗದಿಚೆಲ್ಲ ಗಂಗಳೇರಂತೆ ಕೃಷ್ಣನಲ್ಲಿ ಚಿತ್ತವೆರಗಿ ಅನ್ಯ-ವಿಲ್ಲದಿಪ್ಪ ಸಡಗರವನ್ನುಪಲ್ಲವಾರುಣ ಪಾಣಿಯಿಂದಮೆಲ್ಲನೆ ಮಧುರಾಗೀತವಕಲ್ಲು ಕರಗುವಂತೆ ಹಾಡಲುಹುಲ್ಲು ಮೇಯುವ ತುರುಗಳೆಲ್ಲತಲ್ಲಣದಿಂದಲಿ ಬಂದುವಲ್ಲಭರಂತೆ ನೋಡಲು 2 ಅರಗಿಳಿ ಹಂಸಗಳೆಲ್ಲ ತರುಗಳ-ಕೊಂಬೆಗಳನೇರಿಪರಮ ಹರುಷದಿ ಕುಳ್ಳಿರ್ದು ಕೊರಳ-ಕಲರವಗಳುಳುಹಿಪರಮ ಪುರುಷನ ಧ್ಯಾನದಿಂದ ಯೋಗಿಗಳ ತೆರದಿ ಮೈಮರೆದುಕರಗಿ ಕಂಬನಿಗಳನೆ ಸುರಿಸುತಸರಸಿಜಾಕ್ಷನ ವೇಣುಗೀತದಸ್ವರಗಳನಾರೈದು ಬಾಹ್ಯವತೊರೆದು ಪರಮಹಂಸರಂತೆನಿರುತ ಕೃಷ್ಣನ ಪಾದಯುಗಳಸರಸಿಜದ ಲೋಲ್ಯಾಡುವ ಸುಖವ 3
--------------
ವ್ಯಾಸರಾಯರು
ಅಪರಾಧವೆಣಿಸದಲೆ ಕೃಪೆಮಾಡು ತಂದೆಅಪಣಾರ್ಯಕೃತ ಸ್ತೋತ್ರಪ್ರಿಯ ರಾಘವೇಂದ್ರ ಪವರ್ಣಾಶ್ರಮಕೆ ಉಚಿತ ಧರ್ಮಕರ್ಮವ ಬಿಟ್ಟುಹೊನ್ನು ಹೆಣ್ಣು ಮಣ್ಣಿಗಾಗಿ ಧಡಪಡಿಸಿಮನ್ನಿಸದೆ ಗುರು'ರಿಯರನು 'ೀಯಾಳಿಸಿಕಣ್ಣು ನೆತ್ತಿಯ ಮೇಲೆ ಬಂದು ನಾ ಮೆರೆದೆ 1ಹಂದಿಯಂದದಿ ಕಂಡ ಕಂಡಲ್ಲಿ ಬಾಯೊಳಗೆತಿಂಡಿ ತಿನಿಸು ತುರುಕಿ ಹೆಂಡಮದವೇರಿಖಂಡವನು ಬೆಳಸಿ ಮುಸಗಾಡುತ ಕೋಣನ ತೆರದಿಕಂಡದ್ದು ಮಾಡಿ ನಾ ದಣಕೊಂಡೆ ನಾ ತಂದೆ 2ದೇಹ ಕುಗ್ಗಿತು ಈಗ ದೇಹ ಹಾಳಾುತುಆ ಹರೆಯ ಮಬ್ಬಳಿದು ಮುದಿ ಮಂಗನಾದೆಶ್ರೀಹರಿ ಭೂಪತಿ'ಠ್ಠಲನು ನೆನಪಾದಕರುಣದಿಂದ ಕೈಪಿಡಿದು ಉದ್ಧರಿಸು ತಂದೆ 3
--------------
ಭೂಪತಿ ವಿಠಲರು
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ ಬೊಮ್ಮ ಮಗನೆಂಬೊ ಧೈರ್ಯಕೆ ಪ. ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ ಪೆರ್ಮೆ ಗುಣಗಣನಿಲಯನ ಅ.ಪ. ಹೊಳೆವ ಶ್ರೀರೂಪು ವಟಪತ್ರದಲ್ಲಿ ಪ್ರಳಯಜಲಧಿಯ ಶಯನನ ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ ಗೋಪಿ 1 ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ ಪುರುಷರೂಪವ ಧರಿಸಿದ ಪರಮಮಂಗಳ ಮೂರುತಿಯ ತನ್ನ ಗೋಪಿ 2 ಕತ್ತಲೆಯನು ನುಂಗಿ ತತ್ವಂಗಳನು ಕೊಂಡು ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು ತತ್ವಸಾರದಿಂದೊಪ್ಪುವ ಕೊಮರನ ಗೋಪಿ 3 ಅದಭ್ರಸೃಷ್ಟಿಗಳಿಗಗೋಚರನಾದ ಆದಿಮೂರುತಿ ¸ಚ್ಚಿದಾನಂದನ ಸದಾ ತನಯನೆಂದೆತ್ತಿ ಮುದ್ದಿಸಿ ಸುಖ ಗೋಪಿ 4 ಚತುರುಭುಜ ಶಂಖ ಚಕ್ರ ಗದೆ ಪದುಮ ಸುತಪ ಪ್ರಶ್ನೆಗೆ ವರವಿತ್ತ ಶ್ರುತಿಶಿರೋಮಣಿಯೆಂದರಿಯದೆ ತಾ ಗೋಪಿ 5 ಬೊಮ್ಮಕಲುಷಾನಂತ ಸಹಸ್ರಗಳ ನಿಮಿಷಮಾತ್ರದಿ ಪಡೆದನ ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ ರನ್ನವೆ ಮಗನೆಂದಳೆ ಗೋಪಿ6 ಅನ್ನಂತ ರವಿತೇಜಕಿರೀಟದ ಅನ್ನಘ್ರ್ಯ ಸರ್ವಾಭರಣ ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ ಗೋಪಿ 7 ಅನ್ನಂತಾನಂತ ಜೀವಗಣಗಳು ಅನ್ನಂತಾನಂತ ಕರ್ಮಗಳು ಅನ್ನಂತಾನಂತ ಗಾಯತ್ರಿಗೆ ಕÀರ್ತೃ ವಿಷ್ಣು ಗೋಪಿ 8 ಅನ್ನಂತಾಸನ ಶ್ವೇತದ್ವೀಪ ವೈಕುಂಠ ದನ್ನವರತ ವಾಸವಾಗಿಪ್ಪನ ಅನ್ನಿಮಿಷರ ಯೋಚನೆಗೆ ಒಲಿದನ ಗೋಪಿ 9 ಧರ್ಮದÀ ವೃದ್ಧಿಗೆ ಧರ್ಮದ ಹಾನಿಗೆ ತನ್ನಿಚ್ಛೆಯಲವತರಿಸಿದ ಮಮ ಪ್ರಾಣಾಹಿ ಪಾಂಡವನೆನಿಸಿದ ಗೋಪಿ 10 ಉದ್ದಾಮ ಕಾಂಚೀದಾಮ ಕಂಕಣ ಶ್ರೀ- ಮುದ್ರೆಯ ಶ್ರೀವತ್ಸಕೌಸ್ತುಭಧರನ ಮಧ್ವಮುನಿಗೆ ತಾನೊಲಿದು ಬಂದನ ಗೋಪಿ 11 ಸರಸಿಜಬೊಮ್ಮಾಂಡ ಒಡೆದಾಗ ವಿರಿಂಚಿ ತೊಳೆದ ಪಾದೋದಕವ ಹರ ಸೇವಿಸಲಾಗ ಶಿವನ ಮಾಡಿದ ಹರಿಯ ಮಗನೆಂದಳೆ [ಗೋಪಿ] 12 ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ ದೇವರಿಂದಲ್ಲಿ ಕೀರ್ತಿಸಿಕೊಂಡು ಭಾವಕಿ ದೇವಕಿ ವಸುದೇವನಲ್ಲಿ ಪಿತೃ ಗೋಪಿ 13 ಶಿಶುರೂಪವ ತೋರಿದ ಬೊಮ್ಮನ ಕಂಡು ವಸುದೇವಗೆ ನದಿ ಎಡೆ ಬಿಡೆ ಸಾಸಿರನಾಮ ಚಿತ್ರವಾಗಿದ್ದ ಜಗ- ಗೋಪಿ 14 ಪಾಲಗಡಲಲ್ಲಿ ಪವಡಿಸಿಪ್ಪನ ಕಾಲಮೇಲೆ ಮಲಗಿಸಿಕೊಂಡು ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ ಗೋಪಿ 15 ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ ವೇದ ವಿಭಾಗವ ಮಾಡಿದನ ಆದರದಿಂತುಂತೆಂದು ಕಲಿಸಿ ಸಂ ಗೋಪಿ 16 ಭಾನುಶತಕೋಟಿತೇಜಪ್ರಕಾಶನ್ನ ಆನಂದವನೆ ನೋಡಿ ಮನ ಉಬ್ಬಿ ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು ಗೋಪಿ 17 ಶೃಂಗಾರನಿಧಿಯನ್ನು ಬಾಯೆಂದು ಕರೆದು ರ- ಥಾಂಗಪಾಣಿಯನೆ ಎತ್ತಿಕೊಂಡು ತಿಂಗಳನೋಡಯ್ಯ ಕಂದ ಎಂದಾತನ ಗೋಪಿ 18 ಸನ್ನಕಾದಿಗಳಯ್ಯನ ಪಿತನ ಕರೆ ದೆನ್ನ ಮಾಣಿಕವೆಯೆಂದಪ್ಪಿಕೊಂಡು ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ ಗೋಪಿ 19 ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು ಇಂದಿರೆಯನೆ ಅಪ್ಪಿದ ತೋಳು ಶಂಭರಾರಿಯ ಪಿತ ತೋಳನ್ನಾಡೈ ಎಂದು ಗೋಪಿ 20 ಪಾದ ಉ- ದ್ದಂಡ ಬಲಿಯಮೆಟ್ಟಿದ ಪಾದ ಪುಂಡರೀಕಾಯತವಾದ ಪಾದದಿ ಪ್ರ- ಗೋಪಿ 21 ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ ಇತ್ತ ಬಾ ಹೊರೀಯೆಂದಾದರಿಸಿ ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ ಗೋಪಿ 22 ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ ರಮ್ಮೆಯನರಸುವನಚ್ಚರಿಯ ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ ಗೋಪಿ 23 ತಾಯ ಮೊಗವ ನೋಡುತ್ತಾಕಳಿಸುತ ಬಾಯಲ್ಲೀರೇಳುಲೋಕವ ತೋರೆ ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ- ಗೋಪಿ 24 ಜ್ಞಾನಘನನ ವಿಶ್ವತೋನಯನನ ಆನಂದಚರಿತ್ರನ ಅವ್ಯಕ್ತನ ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ ಗೋಪಿ 25 ಹಾಲ ಹರವಿಯ ಒಡೆದು ಬಂದು ಗೋ- ಪಾಲ ನೀನೆಲ್ಲಿಗೆ ಪೋದೆಯೆಂದು ಕಾಲಕರ್ಮಂಗಳಿಗೆ ಕಾರಣವಾದೋನ ಗೋಪಿ 26 ಜಗದುದರ ಜಂಘಿಸುತ ಅಡಿಯಿಡೆ ಮೃಗಲೋಚನೆ ಮೈಮರೆದಿರೆ ಅಗಣಿತಮಹಿಮನು ಚರಿಸುತ ಬರ ಗೋಪಿ 27 ಆಮ್ಮಹಾ ಮತ್ತಿಯ ಮರನ ಮುರಿದು ಸುರರು ಜಯವೆನ್ನೆ ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ ಗೋಪಿ 28 ಕತ್ತಲೆಯೊಳಗಿದ್ದು ಅಂಜಿದ ಮಗನೆಂದು ಶ್ರುತಿಮಂತ್ರಗಳಿಂದುಚ್ಚರಿಸಿ ಮೃತ್ಯುಂಜಯನ ಪಿರಿಯನೆತ್ತಿಕೊಂಡು ಗೋಪಿ 29 ಶೇಷಶಾಯಿಯ ಹಾಸಿ ಮಲಗಿಸಿ ಚಾರು- ವೇಷನ್ನ ನಿದ್ರಿಗೈಸುವೆನೆಂದು ಸಾಸಿರಮುಖಭೂಷಣನ ಪಾಡುತ್ತ ಸಂ- ತೋಷದಿ ಮೈಮರೆದಳೆ ಗೋಪಿ30 ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ ಜೋಗುಳ ಪಾಡುವ ಯಶೋದೆÉಯ ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು- ಗೋಪಿ 31 ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ ವರ ಸಿಂಹಾಸನವಾಗಿಪ್ಪನೆಂದು ಸಿರಿಯಕೂಡೇಕಾಂತದಲಿಪ್ಪನ್ನ ಗೋಪಿ 32 ಪಾದ ನಿಮ್ಮಣ್ಣನ ಶಿರದಲೊಪ್ಪಿದೆÀಯೆಲೆ ಕಂದ ಸುರವರರ ಭಾಗ್ಯನಿಧಿಯೆ ಬಲರಾಮ ಗೋಪಿ 33 ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು ಪುಣ್ಯಾಂಗನೆ ಮೈಮರೆದಿರೆ ಅಣ್ಣ ಆಶನು ಬೆಣ್ಣೆಯ ಕಳಹೋದ ಚಿಣ್ಣನ ಕಾಣೆನೆಂದಳೆ ಗೋಪಿ34 ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು ಗೋಪಿ 35 ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ ಮೆಟ್ಟಿ ನೆಲವು ಜಗ್ಗಿದನೆಂದು ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ ಗೋಪಿ 36 ಕಂದನ ಎತ್ತಿಕೊಂಡು ರಾಜ್ಯದಂಗನೆಯರ ಮಂದಿರವನೆ ಪೊಕ್ಕು ಬರುತಿರೆ ಒಂದೊಂದು ಕೌತುಕವನೆ ಕಂಡಾನಂದ ಗೋಪಿ 37 ಶಶಿಮುಖಿಯಂಗಳದ ಹಾಲಹಳ್ಳ ಮೊಸರ ಮಡುವು ಬಾಗಿಲ ಮುಂದೆ ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ ಗೋಪಿ 38 ವಾರಿಧಿಯೊಳಗಿದ್ದ ಪನ್ನಗಶಾಯಿಯ ತೇರ ಮೇಲೆ ಇದ್ದ ಬಾಲಕನ ಮೂರುತಿ ಒಂದೆಂಬೋ ಅ- ಗೋಪಿ 39 ದ್ರೌಪದಿಗಕ್ಷಯವಿತ್ತನ ಗುರು ಸಾಂ- ದೀಪಗೆ ಸುತನ ತಂದಿತ್ತನ ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ- ಗೋಪಿ 40 ಘಾತಪುತ್ರರ ಆರು ಮಂದಿಯ ತರಹೇಳಿ ಮಾತೆಯೆಚ್ಚರಿಸೆ ಅಂಗೀಕರಿಸಿ ಅತಿ ಬೇಗದಿಂದಣ್ಣನ ತಂದು ತೋರಿದ ಅ- ಗೋಪಿ 41 ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ ದೇಕ ಕಾಲದಿ ರೂಪೆರಡಾಗಿ ಆ ಕರುಣಾಬ್ಧಿಯ ಮಾಯಾರೂಪಿÀನ ಪರಿ- ಗೋಪಿ 42 ಪೂತನಿ ಶಕಟವತ್ಸಾಸುರ ವೃಷಭÀನ ಪಾತಕಿ ಚಾಣೂರ ಕುಂಜರನ ಘಾತಿಸಿ ಕಂಸನ್ನ ರಂಟೆಯಾಡಿದ ಬಲು ಭೂತನ್ನ ಮಗನೆಂದಳೆ ಗೋಪಿ43 ಬಾಲತನದಲ್ಲಿ ಸಖನಾಗಿ ಬಂದು ಕು- ಚೇಲ ತಂದವಲಕ್ಕಿಯ ಧರಿಸಿ ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ ಲೋಲನ್ನ ಮಗನೆಂದಳೆ ಗೋಪಿ&ಟಿbsಠಿ
--------------
ವಾದಿರಾಜ
ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಇಂದಿರೇಶ ಭಾಗವತ ಎಂದು ಬರುವನು ಇಲ್ಲೆ ಮಂದಸೂನನುನಮಗೆ ಮುಂದೆ ಗತಿಯೇನುದ್ಧವಾಒಂದು ಕಾರ್ಯವು ಬಾರದಂದಿನಾದಿಈಶ ಸುರಸುಂದರನು ಪೋದನಲ್ಲೋ ಉದ್ಧವಾ ಪ ಪತಿ ಸುತರ ಪರಿಚರಿಸುತಿಹ ನಮ್ಮಮರುಳು ಮಾಡಿದನುದ್ಧವಾ 1 ತೊರೆದು ಮನೆ ಧನಗಳನೆ ಬರಲು ಬಳಿಯಲಿ ಭಾಳತರಲಿ ಮಾಡಿದನುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 2 ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆತುರುಬಿನೊಳಗಿಟ್ಟುದ್ಧವಾಸರಸ ಸೌಂದರ್ಯಕ್ಕೆ ಮರುಳಾದನಿವನೆಂದುಗರುವ ಮಾಡಿದೆವುದ್ಧವಾಅಂತು ನಮ್ಮನು ಬಿಟ್ಟು ಮರೆಯಾಗಿ ರೋಧಿಸಲುಭರದಿ ಬಂದನುದ್ಧವಾ 3 ಕೋಲು ಕುದುರೆಯನೇರಿ ಬಾಲಕರಕೂಡಿ ತಾ ಕೇಳಿ ಮಾಡಿದನುದ್ಧವಾಲೀಲೆ ಚತುರರ ಸದೃಶ ಬಾಲೆಯರಕೂಡಿ ತಾ ಕೋಲನಾಡಿದನುದ್ಧವಾ4 ದಧಿ ಬೆಣ್ಣೆ ನಮ್ಮಾಲಯದೊಳುತಿಂದು ಭಾಳ ಮೋಹಿಸಿದನುದ್ಧವಾ 5 ಗರಳ ಹರಿಸಿನುದ್ಧವಾಉರಿಯ ನುಂಗುತ ಮುಖದಿ ಬೆರಳೊಂದುಹತ್ತೊಂದು ವರುಷ ಇಲ್ಲಿದ್ದುದ್ಧವಾಅರಿಯಲಿಲ್ಲವೊ ನಾವು ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 6 ಒಂದಿನಾದರೂ ಒಮ್ಮೆ ಮನದಿ ಗೋಕುಲದವರಇಂದು ಸ್ಮರಿಪನೆ ಉದ್ಧವಾಚಂದ್ರ ವದನೇರ ಸ್ನೇಹ ಕೂಡಿ ಪುರದೊಳು ನಮ್ಮನಿಂದು ಮರೆತನೆ ಉದ್ಧವಾ 7 ಬಂದು ಬಳಗವ ಬಿಟ್ಟು ಮಧುರೆಗೆಲ್ಲರುನಿನ್ನ ಹಿಂದೆ ಬರುವೆವೊ ಉದ್ಧವಾಕಂದರ್ಪ ಪಿತನಿವನ ಸ್ಮರಿಸುತಲೆ ದೇಹದಿಪ್ರಾಣವೊಂದೇ ಉಳಿದಿಹುದುದ್ಧವಾ8 ಪರಮ ವೈಕುಂಠನು ಸರತಿಯಲೆ ತೋರಿಸುತಮರುಳು ಮಾಡಿದನುದ್ಧವಾಗಿರಿಗಿರಿ ಝರಿಯೊಳಗೆ ಚರಿಸಿ ಚಿನ್ನದ ಚರಯಗುರುತು ಮಾಡಿದನುದ್ಧವಾಅರಿಯಲಿಲ್ಲವೋ ಸಿರಿಯರಸ ಇವನೆಂದುಪರಿಮೋಹಿಸಿದೆವುದ್ಧವಾ 9
--------------
ಇಂದಿರೇಶರು
ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಇವನಾ ನೆಲೆಗಾಣೆ ನಮ್ಮಯ್ಯಾ ಸಣ್ಣವನೇ ಪ ಒರಳವನೆಳೆದೊಯ್ದು ಮರಗಳ ಕೆಡೆಹಿಡಿದ| ಭರದಿ ಪೂತನಿಯಸುವ ಹೀರಿದಾ ನಮ್ಮಯ್ಯಾ 1 ಬೇರಳಲಿ ಗಿರಿಯೆತ್ತಿ ತುರುಗಳ ಕಾಯ್ದಾ| ತೆರೆದು ಬಾಯೊಳು ಜಗವ ತೋರಿದ ನಮ್ಮಾಯ್ಯಾ 2 ವೇಣುನಾದ ಮಾಡಿ ತೃಣಪಶು ಮೊದಲಾದ| ಏಣಾಕ್ಷಿಯರ ಮನವಾ ಭ್ರಮಿಸಿದಾ ನಮ್ಮಯ್ಯಾ 3 ಕಾಳಿ ಮಡುವ ಹೊಕ್ಕು ಕಾಳಿಂಗನೆಳೆತಂದಾ| ಲೀಲೆ ತೋರಲು ಹರಿ ಉದಿಸಿದ ನಮ್ಮಯ್ಯಾ 4 ಗುರುಮಹಿಪತಿ ಸ್ವಾಮಿ ಸುರುತರು ಎನಗಾದಾ| ನರನೆಂಬವರ ಬಾಮಾ ಬಿಗಿಸಿದ ನಮ್ಮಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಷ್ಟೇಕೆ ನಿರ್ದಯ ಶ್ರೀಹರಿಯೇ ಸೃಷ್ಟೀಪತಿಯೆ ಪ. ಮುಟ್ಟಿ ಭಜಿಪರ ನಿಟ್ಟಿಸಿ ನೋಡದೆ ನಿಷ್ಠುರವಾಗಿಹುದಿಷ್ಟವೆ ನಿನಗಿದು ಅ.ಪ. ಸಣ್ಣ ಮಾತುಗಳಾಡಿದೆನೇನೊ ದೆನ್ನ ತಲೆಯ ಮೇಲಿನ್ನೊಗೆಯದಿರು 1 ಕೋರೆಯ ತೋರುತ ಕೊಸರುವುದೇಕೋ ಶ್ರೀಹರಿ ನೀ ನೀರೀತಿ ಮಾಡುವ ಬಗೆಯಿನ್ನೇಕೋ ನೀರಜಭವಪಿತ ನೀನೇನಗೈದರು ಸೇರಿದೆ ನಿನ್ನನು ಸಾರೆನದಾರನು 2 ಸಿಂಗನ್ನ ಪೋಲುವ ಮುಖ ಧರಿಸಿ ಕಂಗೆಡೆ ಭಯದಿ ಜಗಂಗಳ ನಡುಗಿಪ ನುಂಗಲು ಬರುವಾಸಿಂಗನ ಬಗೆ ಸಾಕೋ 3 ಮುನ್ನಾ ಶುಕ್ರನ ಕಣ್ಣನು ತಿವಿದಾ ಪುಲ್ಲಿನತುದಿಯಿಂ ಎನ್ನೀ ಕಣ್ಣನ್ನು ತಿವಿಯದಿರಣ್ಣಾ ನಿನ್ನೀಕರದೊಳಿಹ ಘನ ಕೊಡಲಿಗೆ ನೀ ನಿನ್ನಾರನು ಗುರಿಗೈಯದಿರೆಂಬೆನು 4 ಶಿಲೆಯಾಗಿದ್ದವಳ ಕಲುಷವ ಕಳೆದು ಪಾವನೆಯೆನಿ ಕಾಳಿಂಗನ ಫಣೆಯೊಳು ಕುಣಿಕುಣಿದೇ ಭಳಿರೆನೆ ಬಾಲ ಗೋಕುಲ ಬಾಲೆಯರೆಲ್ಲರ ಜಾಲವಿದ್ಯೆಯಿಂ ಮರುಳುಗೊಳಿಸಿದೆ 5 ತುರುಗವನೇರುತ ತರುಬಲು ಬೇಡೈ ಧರೆಯೊಳು ನೀನೆತ್ತಿದ ಪರಿಪರಿ ರೂಪವ ಸ್ಮರಿಸಿ ಸ್ಮರಿಸಿ ಮನಬೆರಗಾಗಿದೆ ಹರಿ6 ಶರಣಾಭರಣನೇ ನೀನೆಂದು ಮನದೆಂದು ಮರೆಬೇಡುವೆನೈ ಬಳಿಸಂದು ವರಶೇಷಗಿರಿ ದೊರೆನೀನಿಂದು 7
--------------
ನಂಜನಗೂಡು ತಿರುಮಲಾಂಬಾ