ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದ್ದರೇನಯ್ಯಾ ಜ್ಞಾನವಿಲ್ಲದ ಮೇಲೆ ಪ ದೀನರಕ್ಷಕ ನಿನ್ನ ಧ್ಯಾನ ಮಾಡದವನೆ ಅ.ಪ. ಸತಿಸುತ ಬಾಂಧವರು ಬಹಳಿದ್ದರೇನು ಗತಿ ಕಾಣಿಸುವರೇನೋ ದೇವರ ದೇವ ಪತಿತಪಾವನ ನಿನ್ನ ಅತಿಭಕುತಿಯಿಂದ ಸ್ತುತಿಸಿ ಹಿಗ್ಗದಂಥ ಪಾಮರ ಮನಿಜನೆ 1 ಕ್ಷೇತ್ರಮಾನ್ಯಗಳೇಸಿದ್ದರೇನು ಪಾತ್ರೆ ಪದಾರ್ಥಗಳ್ ಗೃಹದಿ ತುಂಬಿದ್ದರೇನು ಪಾತ್ರಂಗಳ ನೋಡಿ ದಾನಧರ್ಮಂಗಳ ಮಾಡಿ ಮಹ ಯಾತ್ರೆಗಳ ಚರಿಸದೆ ಗಾತ್ರವ ಪೋಷಿಪಗೆ 2 ರಾಶಿ ವಿದ್ಯವಿರಲು ಅದರಿಂದ ಫಲವೇನು ಕೋಶವು ಕೊರೆಯಿಲ್ಲದೆ ಇರುತಿರ್ದರೇನೊ ವಿನುತ ಶ್ರೀ ರಂಗೇಶವಿಠಲನೊಳು ಲೇಶ ಭಕುತಿಯಿಲ್ಲದ ಹೇಸೀಕೆ ಮನದವನೆ 3
--------------
ರಂಗೇಶವಿಠಲದಾಸರು
ನೀಚ ಮಾನವರಿಗೆಸಿರಿ ಬಂದರೇನು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಈಚಲ ಮರ ದಟ್ಟ ನೆರಳಾದರೇನು ಪ.ನಾಚಿಕಿಲ್ಲದ ನರರು ಬಾಗಿದರೇನುಹೀಚಿನೊಳಿಹ ಫಲ ಹಣ್ಣಾದರೇನು ಅಪಹೊಲೆಯರೊಳು ಪದುಮಿನಿ ಹೆಣ್ಣು ಹುಟ್ಟಿದÀರೇನುಮೊಲೆಯ ತೊರೆಯದ ನಾಯಿ ಈದರೇನುಕಳಹೀನ ಕಾಮಿನಿಗೆ ಕಾಂತಿ ಹೆಚ್ಚಿದರೇನುಬಿಲದೊಳಗೆ ಸರ್ಪ ಹೆಡೆಯೆತ್ತಿದರೇನು ? 1ಕೋತಿಯ ಮೈಯೊಳುಭಾಂಡ ತುಳಕಲೇನುಹೋತಿನ ಗಡ್ಡವು ಹಿರಿದಾದರೇನುಯಾತಕೂ ಬಾರದ ಬದುಕು ಬಾಳಿದ್ದರೇನುರೀತಿಯಿಲ್ಲದ ನೆರೆಯ ಸ್ನೇಹವಿನ್ನೇನು 2ರಕ್ಷಣೆಯಿಲ್ಲದ ರಾಜ ರಾಜಿಸಲೇನುಭಿಕ್ಷೆ ಹುಟ್ಟದ ಊರು ತುಂಬಿದ್ದರೇನುಲಕ್ಷ್ಯವಿಲ್ಲದವಗೆ ಲಕ್ಷ್ಯ ಬಂದರೇನುಪಕ್ಷಪಾತವಿಲ್ಲದವನ ಅಶ್ರಯವಿನ್ನೇನು 3ಫಣಿಯ ಮಸ್ತಕದ ಮೇಲೆ ಮಣಿಯ ಮಿಂತಲೇನುಉಣಿಸಿ ದಣಿಸದ ಧನಿಯಿದ್ದರೇನುಋಣಗೇಡಿ ಮಕ್ಕಳ ರಟ್ಟೆ ಬಲಿತರೇನುಕ್ಷಣಚಿತ್ತವಿಲ್ಲದವನ ಸ್ಮರಣೆಯು ಇನ್ನೇನು 4ಸಾಕಲಾರದಾತನ ಸತಿಯ ಮೋಹವೇನುಜೊತೆ ಮಾಡದಾ ಹಣ ಗಳಿಸದರೇನುಕಾಕುಮಾನವರ ಸೇವೆ ಮಾಡಿದರೇನುಬೇಕೆಂದು ಭಜಿಸಿರೋ ಪುರಂದರವಿಠಲನ 5
--------------
ಪುರಂದರದಾಸರು