ಒಟ್ಟು 67 ಕಡೆಗಳಲ್ಲಿ , 27 ದಾಸರು , 47 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ವಂದಿಸುವೆ ನಾನಿಮ್ಮ ನನುದಿನ ವಂದಿಸುವೆ ಗಣನಾಥನೆ ವಂದೆ ಮಾನಸದಿಂದಲಿ ಪ ಭುಜಗಭೂಷಣ ಪಾರ್ವತೀಶನ ಪುತ್ರನೆನಿಸಿದ ದೇವನೆ ಆದಿಪೂಜೆಯ ಗೊಂಬನೆ 1 ಮೇಲ್ ಮಾಡಿದನೆ ಕೋಮಲಾಂಗನೇ 2 ಬೇಡುತಿಹ ಭಕ್ತರಿಗೆ ವಿದ್ಯಾವೃಷ್ಟಿಯನು ಕೊಡುತಿರುವನೆ ಪಾಲಿಸೆನಗೆ ಮತಿಯನು 3 ಅಂಗಭೇದ ವಿನೋದನಾದನೆ ಆರುಮುಖದವನಣ್ಣನೆ ಮಾನದಲಿ ಕಡೆ ಹಾಯಿಸು 4 ಗುಳಗಿ ಗಡುಬಿನಪ್ರಿಯನೆ ನಲಿಯುವವನೆ
--------------
ಹೆನ್ನೆರಂಗದಾಸರು
ಅಧ್ಯಾಯ ಒಂದು ಜಯ ವಿಬುಧನುತರ ಚರಣ ಜಯತು ನಾಗಾಭರಣ ಜಯ ಭಕ್ತ ಜನ ಶರಣ ಜಯ ದುಃಖಹರಣ 1 ಜಯತು ಖಳಕೃತಕದನ ಜಯಜಯತು ಜಿತಮದನ ಜಯ ಜಯತು ಸುಖಸದನ ಜಯ ಪಂಚವದನ2 ಜಯತು ಶ್ರೀಶಕೈಲಾಸ ಜಯ ಭಜಕವಿಶ್ವಾಸ ಜಯ ಅನಂತಾದ್ರೀಶ ಪ್ರಿಯಪಾರ್ವತೀಶ 3 ಪದ ಮುಂಚೆ ನುತಿಸುವೆ ಭಕುತಿಯಿಂದಲಿ ಪಂಚವದನನ ಪಾದಪಂಕಜ ಚಂಚಲಾಗದಲಿರಲಿ ಮನ ಮತಿ ಮುಂಚೆ ಕೊಡುಯೆಂದು ಹಿಂಚೆ ಕುಲ ದೇವಾದಿ ಪದಯುಗ ವಂಚನೆಯು ಇಲ್ಲದಲೆ ನುತಿಸುವೆ ಹಂಚಿಕಿಂದಲಿ ಕುಶಲಬುದ್ಧಿ ಪ್ರಪಂಚ ಕೊಡುಯೆಂದು 1 ಮನಸಿಜನ ಗೆದ್ದವರು ಮೇದಿನಿಯ ಹುಡಿಕಿದರಿಲ್ಲಾ ಮತ್ತೀಮನಸು ಗೆದ್ದವರುಂಟೆಯೆಲ್ಲರಿ ಗನುಭವಾಗಿಹುದು ಮನಸಿಜನ ಗೆದ್ದಂಥ ರುದ್ರನು ಮನಕೆ ತಾ ಅಭಿಮಾನಯಾಗಿಹ ನೆನುತ ಮೊದಲಾತನನ ನುತಿಸಿದೆ ಮನಸಿನೊಳಗಿಟ್ಟು 2 ಸಾರಲಿಂಗ ಪುರಾಣದರ್ಥದ ಸಾರಿ ತಿಳುವುತ ಮತ್ತೆ ಗ್ರಂಥ ವಿ ಚಾರ ಮಾಡುತ ಅದರ ಅರ್ಥವ ಪೂರ್ಣ ತಿಳಕೊಂಡು 'ಶ್ರೀರತಾನಂತಾದ್ರಿ' ರಮಣನ ಸಾರ ಕೃಪೆಯಿಂದಲೆಯೆ ಪೇಳುವೆ ಪಾರ್ವತೀಶಗೆ ಪ್ರೀತಿಕರ ಶಿವ ಪಾರಿಜಾತವನು 3 ಪದ ಪೂರ್ವದಲ್ಲಿ ಪಾರ್ವತಿಯು ಪರ್ವತಶ್ರೇಷ್ಠ ಹಿಮ ಪರ್ವತದ ಮಧ್ಯದಲ್ಲಿ ಸರ್ವಗುರು ಕೈಲಾಸ ಪಾರ್ವತೀಶನ ಮನ:ಪೂರ್ವಕದಿ ಬಯಸುತಲ ಪೂರ್ವ ತಪ ಮಾಡುತಿರುವಳಲ್ಲೆ ಪಾರ್ವತಿಯ ಕಷ್ಟ ಹಿಮಪರ್ವತನು ತಾ ನೋಡಿ ಸರ್ವ ಕಾರ್ಯವ ಬಿಟ್ಟು ಇರುವ ಬಲು ಚಿಂತೆಯಲಿ ಸರ್ವಸಂಪನ್ನಳಾಗಿರುವಳೆನ್ನ ಮಗಳು ಈ ಪಾರ್ವತಿಗೆ ತಕ್ಕ ವರನಿರುವನಾರೆಂದು 1 ಬಂದನಾಗಲ್ಲವನ ಮಂದಿರಕೆ ನಾರದನು ಮುಂದೆ ಗಿರಿರಾಜ ಅಲ್ಲಿಂದ ಆತನಕಂಡು ಇಂದು ಇಲ್ಲಿಗೆ ನೀವು ಬಂದು ಕಾರಣವೇನುಯೆಂದು ಕೇಳಿದನು ಅಂದ ಮಾತನ್ನು ಕೇಳಿ ಮುಂದೆ ಮುನಿರಾಜ ತಾ ಮಂದಹಾಸದಿ ನಗುತವೊಂದೊಂದು ಕಥೆ ಪೇಳಿ ಛಂದದಲಿ ಮನಸಿಗಾನಂದ ಬಡಿಸುತ ನುಡಿದ ಬಂದ ಕಾರ್ಯವ ಅವನ ಮುಂದೆ ವಿಸ್ತರದಿ 2 ಪದ ತಿಳಿಯೋ ನೀ ಗಿರಿರಾಜ ನಾ ಬಂದ ಕಾರ್ಯವ ತಿಳಿಯೋ ನೀ ಗಿರಿರಾಜ ಭೋರಾಜರಾಜಾ ತಿಳಿಯೋ ನಿನಗೊಬ್ಬಳಿಯ ಬಂದಿಹ ನಳಿಯನಾಗಿ ಮುಖಕಳೆಯು ಉಳ್ಳವ ಇಳೆಯೊಳಿಂಥಾ ಅಳಿಯನ ಸಮ ಅಳಿಯನಿಲ್ಲ ಕಾಲ್ಗಳೆಯುದಲೆ ಇರು ಪ ಹರಿಯಿರುವ ಪ್ರಖ್ಯಾತಾ ಸರ್ವರಿಗೆ ಆತನೆ ದೊರೆಯೆನಿಸಿಕೊಂಬಾತಾ ಕರಿರಾಜ ಕೂಗುತ ಕರೆಯಲೊದಗಿದನಾತಾ ತನ್ನ ಸ್ಮರಿಸಿದವರನು ಮರೆಯದಲೆ ಪೊರೆವಾತಾ ಅನಾಥಾನಾಥ ಧರೆಯೊಳಗೆ ಶ್ರೀಹರಿಯ ಮೂರ್ತಿಯ ಸರಿಯುಯಿಲ್ಲವು ಮರೆಯದಲೆ ಆ ಸಿರಿಯ ರಮಣನ ಕರೆಯ ಕಳಿಸುತ ಹಿರಿಯ ಮಗಳನು ಹರಿಗೆ ಅರ್ಪಿಸು1 ಬಡವನಲ್ಲವು ಆತಾ ಬಹುಬಡವ ಭಕ್ತರ ದೃಢವ ನೋಡುವನಾತಾ ತಾ ಬಿಡದೆ ಕರವನು ಪಿಡಿವ ಸ್ನೇಹ ಸಮೇತಾ ಬೇಡಿದ್ದು ತ್ವರದಲಿ ಕೊಡುವನವ ಬಹು ದಾತಾ ಲಕ್ಷ್ಮಿಯಸತ್ತಾ ದೃಢವಿರಲಿ ಮನ ಪೊಡವಿರಲಿ ಉಂಬುಡುವ ಮಗಳನು ತಡವು ಮಾಡದೆ2 ಕೊಡುವದುಚಿತವು ಒಡವೆಗಳು ಬಹಳಿಡುವುತಲೆ ಸುಖಪಡುವಳಾಕೆಯು ಎಂಥವನು ಅವ ತಾನು ಎಂಬಂಥ ಮನಸಿನ ಭ್ರಾಂತಿ ಬಿಡು ಎಲೋ ನೀನು ಅತ್ಯಂತವಾಗಿಹ ಶಾಂತ ಮೂರುತಿ ತಾನು ಎಂತೆಂಥವರಿಗವ ನಂತ ತಿಳಿಯದು ಇನ್ನು ಮತ್ಹೇಳಲೇನು ಇಂಥ ಶ್ರೀಮದನಂತಾದ್ರೀಶನು ಕಾಂತಿಯಿಂದಿರುವಂಥ ಮಗಳಿಗೆ ನಿಶ್ಚಿಂತೆಯಿಂದಿರು 3 ಪದ ಮುನಿಯ ಮಾತನು ಕೇಳಿ ಮನಸಿನೊಳು ಹಿಗ್ಗುತಲೆ ಮನದ ಚಿಂತೆಯ ಬಿಟ್ಟು ಮನಸಿಜಪಿತನು ಎನ್ನ ಮನಿ ಅಳಿಯನಾದ ಎನ್ನ ಜನುಮ ಸಾರ್ಥಕವಾಯಿ ತೆನುತ ತಿಳಿದನು ತಾನು ಘನ ಹಿಮಾಚಲನು ಅನುದಿನವು ತನ್ನಲ್ಲಿ ಅನು ಕೂಲವಾಗುತಲೆ ತನಗೆ ಹಿತಮಾಡುತಿಹ ಜನರೊಳಗೆ ಮ- ತ್ತಾಪ್ತ ಜನರನ್ನು ಕೇಳದಲೆ ಅನುಮಾನ ಬಿಟ್ಟು ಹೀಗೆನುತ ಮಾತಾಡಿದನು ಮುನಿಯ ಮುಂದೆ ಪದ ಕೊಡುವೆನು ಆ ವಿಷ್ಣುವಿಗೆ ಮಗಳನ್ನು ಕೊಡುವೆನು ಕೊಡುವೆನು ಸಂತೋಷ ಬಡುವೆನಾತನ ಪಾದಾ ಹಿಡಿವೆನು ಚಿಂತೆಯ ಬಿಡುವೆನು ಮಗಳನ್ನು ಪ ನಾರದ ನಿನಮಾತು ಇನ್ನು ಸರಿ ಬಾರದು ಆರಿಗೆ ಮುನ್ನ ನೀರದ ವರ್ಣನ ತೋರಿದ ಬುದ್ಧಿ ವಿ ಶಾರದ ನಿನ್ನ ಮಾತು ಮೀರದೆ ಮಗಳನ್ನು ಕೊ....1 ನಿನ್ನ ಮಹಿಮೆ ಬಲ್ಲೆ ನಾಲ್ಕುಲೋಕ ಮಾನ್ಯರಿಗತಿಮಾನ್ಯ ನೀನು ನಿನ್ನ ಚಿತ್ತಕೆ ಬಂದರಿನ್ನೇಕೆ ತಡಬಹು ಚೆನ್ನಾತ ಆತಗೆ ಮನ್ನಿಸಿ ಮಗಳನ್ನು ಕೊ....... 2 ಭಾಷೆಯು ಅದು ಸುಳ್ಳಲ್ಲ ಲೇಸಾಗಿ ನಾನಿನ್ನ ಭಾಷೆಗೆ ಮೆಚ್ಚಿ ಉಲ್ಲಾಸದಿ `ಅನಂತಾದ್ರೀಶಗೆ ' ಮಗಳನ್ನು ಕೊಡುವೆನು3 ಪದ ಬ್ರಹ್ಮಪುತ್ರ ಕೇಳಿ ಸಂಭ್ರಮ ಬಡವುತ ನಮ್ಮ ಕಾರ್ಯ ಆಯಿತೆಂದು ಸುಮ್ಮನಿರುವುತ 1 ಒಮ್ಮಿಂದೊಮ್ಮೆಲೆದ್ದು ಮತ್ತೊಮ್ಮೆ ಹೇಳುತ ರಮಿಸದಲೆ ನಡೆದ ತನ್ನ ಜಿವ್ಹೆ ತೋರುತ 2 ಹೋಳು ತಂಬೂರಿ ತಂತಿಗಳನು ಮೀಟುತ ಚೆಲುವ ಮುನಿಯ ನಡೆದ ಬಾಗಿಲವ ದಾಟುತ 3 ಚೆಂದವಾಗಾನಂದ ಭಾರದಿಂದ ಮಣಿವುತ ಮುದೆ ಪಾರ್ವತಿಯ ಬಳಿಗೆ ಬಂದು ಕುಣಿಯುತ 4 ಮುನ್ನ ನುಡಿದ ಮದುವೆಯ ಸುದ್ದಿಯನು ನಗವುತ ಚೆನ್ನಿಗ`ನಂತಾದ್ರೀಶ'ನನ್ನು ಸ್ಮರಿಸುತ 5 ಪದ ಕೇಳಮ್ಮ ಹೊಸಸುದ್ದಿ ಪಾರ್ವತಿ ನಿನಗೆ ಹೇಳಬಂದೆನು ಎನಗಿದು ಪ್ರೀತಿಪ ಪಂಕಜನಾಭ ಬರುವನಂತೆ ನಿನ್ನ ಕಂಕಣಕಯ್ಯ ಪಿಡಿವನಂತೆ ಪಂಕಜಮುಖಿಯೆ ನಿಶ್ಚಯವಂತೆ ನಿ ಶ್ಯಂಕೆಯಿಂದಿರು ಯಾತಕೆ ಚಿಂತೆ 1 ನಕ್ಕು ಆಡುವನಲ್ಲವು ನಾನು ಎ ನ್ನಕ್ಕಯ್ಯ ನಿನಗೆ ಹಿತ ಪೇಳುವೆನು ಮಿಕ್ಕ ಮಾತುಗಳಿಂದ ಫಲವೇನು ನಿನ್ನ ತಕ್ಕ ಪುರುಷ ಅವ ತಿಳಿ ನೀನು 2 ಶ್ರೀಮದನಾಂತಾದ್ರಿವಾಸಗೆ ನಿನ್ನ ನೇಮಿಸಿದ ಹಿಮವಂತನು ಈಗ ಕೋಮಲಾಂಗಿಯೇ ಎನ್ನ ಮನಸಿಗೆ ಬಂತು ಈ ಮಾತು ಸತ್ಯವಾಗಲಿ ಬೇಗ 3 ಪದ ಪರಿ ಸುದ್ದಿಯುಂಟೆಂದು ಪೇಳುತಲೆ ಟಣ್‍ಟಣನೆ ಜಿಗಿವುತು ತ್ಕಂಠzಲ್ಲಿ ಅಲ್ಲಿಂದ ಹೊರಟು ಮುನಿಬಂದು ವೈ ಕುಂಠದಲಿ ತಾ ನುಡಿದ ಉಂಟಾದ ಸುದ್ದಿ ವೈಕುಂಠಪತಿಗೆ ಎಂಟೆಂಟು ಕಳೆಯಿಂದ ಉಂಟಾದ ಪಾರ್ವತಿಯ ಗಂಟು ಹಾಕಿದೆಯೆನಲು ತಂಟಕನೋ ನೀ ಕಲಹಗಂಟಕನೋ ಸರಿಯಿನ್ನು ಭಂಟನಹುದೆಂದು ವೈಕುಂಠಪತಿನಕ್ಕ 1 ನಾರದನ ಮಾತು ಸರಿಬಾರದೆ ಪಾರ್ವತಿಯು ತೀರದಂಥಾ ದು:ಖವಾರಿಧಿಯಲಿ ಮುಳುಗಿ ಸಾರಿದಳು ತನ್ನೊಳಗೆ ಘೋರಾದ ಚಿಂತೆ ಬಂತಾರಿದನು ಬಿಡಿಸುವರು ತೋರದೆನಗೆ ತೋರದಿರಬೇಕು ನಾ ದೂರದಲಿ ಇಲ್ಲೆ ಇರಬಾರದೆಂತೆಂದು ಸುಖ ತೋರದಲೆ ತನ್ನ ಮಾತು ಮೀರದಲೆ ಇರುವ ಸುವಿ ಶಾರದಳು ಸಖಿಯೊಡನೆ ಘೋರಾದರಣ್ಯವನು ಸೇರಿದಳು ತಾನು ಮುಂದೆ ಮತ್ತಾಕೆಯ ಮುಂದೆ ಮಾತಾಡದಲೆ ನೊಂದು ತನ್ನೊಳಗೆ ತಾ ತಂದು ಆ ವನದಲ್ಲಿ ಮುಂದೇನು ಮಾಡಲೆಂತೆಂದು ತಿಳಿಯದೆ ಮರುಗಿ ಮಂದಗಮನೆಯು ಚಿಂತೆಯಿಂದ ಮಲಗಿದಳು ಮುಂದೆ ಆ ಸಖಿ ನೋಡಿ ಸಂದೇಹ ಬಡುತ ತ್ವರ ದಿಂದ ಬದಿಯಲಿ ತಾನು ಬಂದು ಹಾ ಇದುಯೇನು ಇಂದು ಮುಖಿ ಹೀಗೆಯೆಂದೆಂದು ಮಲಗುವಳಲ್ಲ ಇಂದೇನು ಬಂತು ಇಂತೆಂದು ಚಿಂತಿಸುತ ಹೀಗೆಂದಳಾಗ 2 ಪದ ಇಲ್ಲೇಕೆ ಮಲಗಿದೆ ಹೇಳಮ್ಮ ನೀ ಇಲ್ಲೇಕೆ ಎಲ್ಲಾನು ಬಿಟ್ಟು ವನದಲ್ಲಿಯೆ ಪಾರ್ವತಿ ಮಂದಿರ ಪ ಬಿಟ್ಟು ಇಲ್ಲಿ ಮಲಗುವರೆ ನಿನಗೆ ಬಂದಿಹದೇನು ಹೇಳದಿರುವರೆ ನಿನ್ನ ತಂದೆ ತಾಯಿಗಳೆಷ್ಟು ಮರಗುವರೆ ಇಂದು ಮುಖಿಯಳೆ ಯಾರೇನಂದರೇನೆ ಗೆಳತಿ ನಿನಗೆ 1 ನಿನ್ನ ಪ್ರಾಣದ ಸಖಿನಾನಲ್ಲೆ ನಿನ ಗಿನ್ನಾರಿರುವರು ಹಿತವರು ಇಲ್ಲೆ ನಾ ನಿನ್ನ ಕಾರ್ಯವ ಮಾಡುವಳಲ್ಲೆ ಚಿನ್ನದಂಥವಳೆ ನೀ ಘನ್ನಾರಣ್ಯಕೆ ಬಂದು 2 ನಿದ್ರೆ ಬಂದಿಹುದೇನೆ ನಿನಗಿಂದು ಅಥವಾ ಬುದ್ಧಿ ಹೋಯಿತೆ ಮತ್ತೆ ನಿನ್ನದು ಇಂದು ತಿಳಿಯದು ಬುದ್ಧಿವಂತಿಯೆ ಅನಂತಾದ್ರೀಶನಾಣೆ ನಿನಗೆ 3 ಪದ ಇಂದು ಮುಖಿ ಪಾರ್ವ ತಿಯು ಹಿತದಿಂದ ಆಡಿದ ಮಾತು ಒಂದೊಂದು ಸ್ಮರಿಸುತಲೆ ಛಂದಾಗಿ ಮನಸಿಗೆ ತಂದು ನೋಡಿದಳು ಇಂದು ಯೆನ್ನ ಭಾಗ್ಯಕ್ಕೆ ತಂದೆ ತಾಯಿಗಳಿಲ್ಲ ಬಂಧು ಬಾಂಧವರಿನ್ನು ಮುಂದೆಲ್ಲಿ ಬರುವವರು ಸಂದೇಹವೇಕೆ ಸಖಿ ಯಿಂದಧಿಕ ಮತ್ತಿಲ್ಲ ವೆಂದು ದು:ಖವ ಸಖಿಯ ಮುಂದ ಹೇಳಿದಳು 1 ಪದ ಏನು ಹೇಳಲಿಸಖಿ ಇನ್ನೇನು ಹೇಳಲಿ ನಾನು ಖೂನದಿ ತಂದೆಯು ಹರಿಗೆಯೆನ್ನನು ನೇಮಿಸಿದಾ ಪ ಮೃತ್ಯುಂಜಯ ಮೃಡನೆ ಎನ್ನ ಚಿತ್ತಕೊಪ್ಪುವ ಪತಿಯು ಸತ್ಯದಿ ಆಗಲಿಯೆಂದು ಚಿತ್ತದಿ ಬಯಸುತಲೆ ನಿತ್ಯದಿ ಬಹುದಿನ ಬಿಡದಲೆ ಅರ್ಥಿಲೆ ಮಾಡಿರುವಂಥ ಪಾರ್ಥೇಶ್ವರನಾ ಪೂಜೆಯು ವ್ಯರ್ಥಾಯಿತಲ್ಲೆ 1 ನಾರದ ಮುನಿಯಿ ಮಾತು ಸಾರಿದ ನನ್ನಲಿ ಬರಿದು ಬಾರದೆನ್ನ ಮನಸಿಗೆ ಅದು ತಾರದೆ ನಾ ಬಂದೆ ಮೀರಿದ ಕೆಲಸವು ತೀರಲಾರದು ಅದು ಎಂದು ಸೇರಿದೆ ವನವನು ನಾಕಾಲೂರದೆ ಮನೆಯಲ್ಲೆ2 ಹೃದ್ರೋಗದಿ ಬಳಲುವಳಿಗೆ ನಿದ್ರೆಯೆಂಬುವದೆಲ್ಲೆ ಭದ್ರಾಂಗಿಯು ಸತಿ ನಾನು ಉದ್ರೇಕದಿ ಮೈಮರೆತು, ಹಿಮಾದ್ರಿಯು ಎನ್ನನು ಕೈಲಾ ಸಾದ್ರೀಶನ ಬಿಟ್ಟು ಅನಂತಾದ್ರೀಶಗೆ ಕೊಡುವ3 ಪದ ಪರಿ ಮಾತುನು ಕೇಳಿ ಆ ಪ್ರಾಣದ ಸಖಿ ತಾನು ಪರಿ ಮಾತಾಡಿದಳು ಆ ಪಾರ್ವತಿಯ ಮುಂದೆ ಏ ಪಾರ್ವತಿಯೇ ಬಿಡುಸಂತಾಪವ ನಿನಗೊಂದು ಹೇಳುವೆ ಆ ಪಿತಗರಿಯದೆ ನಡೆ ನೀ ತಾಪಸವನದಲ್ಲೆ 1 ಈ ರೀತಿಯ ನುಡಿ ಕೇಳಿ ಹಾರೈಸುತ ಸಖಿಕೂಡಿ ಪಾರ್ವತಿ ತಾ ನಡೆದಳು ಘೋರಾರಣ್ಯದಲಿ ಇರ್ವಳು ಆಳುPದೆÀಲಿಂಗಾಕಾರವು ಪೂಜಿಸುತಲ್ಲೆ ಚಾರ್ವಾಂಗಿಯು ತಾ ನಿದ್ರಾಹಾರವು ಇಲ್ಲದಲೆ2 ದೀನೋದ್ಧಾರಕ ಶಿವನು ತಾನೆ ಅಲ್ಲಿಗೆ ಬಂದು ಏನು ಬೇಡುವೆ ಪಾರ್ವತಿ ನೀನು ಬೇಡೆಂದ ಏನು ಧೇನಿಸುವೇ ಬಿಡು ಮಾನಿನಿಯೆ ಭಕ್ತಾ ಧೀ ನಾನಂತಾದ್ರೀಶನ ಆಣೆ ನಿನಗುಂಟು 3 ಪದ ಹರನ ಮಾತನು ಕೇಳಿ ಹರಿಣಾಕ್ಷಿ ಪಾರ್ವತಿಯು ತ್ವರದಿಂದ ಎದ್ದು ಪರಮ ನಾಚಿಕೆಯಿಂದ
--------------
ಅನಂತಾದ್ರೀಶ - ಕಥನಕಾವ್ಯಗಳು
ಅನ್ಯ ದೇವರ ನಾನರಿಯೆ ಸಿರಿಹರಿಯೆ ಪ ಎನ್ನ ಬಿನ್ನಪ ಕೇಳಯ್ಯ ದೊರೆಯೆ ಅ.ಪ ಹರಬೊಮ್ಮಾದಿಗಳಿಂದ ವರಪಡೆದ ರಾವಣ ಸರುವ ಲೋಕಂಗಳನೆಲ್ಲ ಗೆಲಿದು ಬಂದು ಸಿರಿರಮಣನೆ ನಿನ್ನೊಳು ದ್ವೇಷವನೆ ಮಾಡಿ ತರು ಮೃಗಗಳಿಂದಪರಾಜಿತನಾದನಯ್ಯಾ 1 ದೃಷ್ಟಾಂತಗಳನ್ನೆಷ್ಟು ತೋರಲಿ ನಾನು ದುಷ್ಟ ಜನರೆಲ್ಲ ಪಟ್ಟ ಬವಣೆಗಳಿಗೆ ಶ್ರಿಷ್ಟಿಗೊಡೆಯನೆ ನಾ ಮನಮುಟ್ಟಿ ನುತಿಸುವೆ ಶಿಷ್ಟ ಜನರ ಸಂಗದೊಳಿಟ್ಟೆನ್ನ ಸಲಹಯ್ಯಾ 2 ಮೂರು ಕರಣಗಳಿಂದ ನಾ ನಿನ್ನ ನಂಬಿಹೆನು ಮಾರುತೀಶನೆ ನಿನ್ನ ಚರಣವ ತೋರಿ ಗಾರು ಮಾಡದೆ ನೀ ಸಲಹಬೇಕೆಂಬೆನು ಕಾರುಣ್ಯದಿಂದಲಿ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ಅಶ್ವಧಾಟೀ ಕೃಷ್ಣನೆ ಎಮ್ಮನು ಪ ಕಾಯ ನಂಬಿದೆ ನಿನ್ನನುಅ.ಪ ಸಾರ ಮಾರ್ಗದ ದಾರಿ ಕಾಣದೆ ಸಾರಿ ಬೇಡುವೆ ನಿನ್ನನು ನೀರಜಾಕ್ಷನೆ ಘೋರಭವದಿ ಪಾರುಗಾಣಿಸೊ ಎಮ್ಮನು 1 ದುಷ್ಟನಾಶಕ ಶಿಷ್ಟಪಾಲಕ ಶ್ರೇಷ್ಠಮೂರುತಿದೇವನೆ ಕಷ್ಟಓಡಿಸಿ ಇಷ್ಟಪಾಲಿಸೊ ಅಷ್ಟಕರ್ತನೆ ಬೇಗನೆ 2 ವೇದಗೋಚರ ಯಾದವೇಂದ್ರ ಸುಧಾಮ ರಕ್ಷಕ ಕೃಷ್ಣನೆ ನಂದಗೋಪ ಸುಕಂದ ನಾಮಕ ರಾಧೆವಂದಿತ ಚರಣನೆ 3 ಗೋಪಿ ಮೋಹಕ ಪಾಪಮೋಚಕ ತಾಪಸ ಪ್ರಿಯರೂಪನೆ ಕೋಪಮಾಡದೆ ಪಾಪಿ ಎನಗೆ ರೂಪ ತೋರಿಸೊ ಬೇಗನೆ 4 ದೋಷದೂರ ವಿನಾಶವರ್ಜಿತ ಕೇಶಿ ಸೂದನ ಶೂರನೆ ಕ್ಲೇಶ ಓಡಿಸಿ ದಾಸನೆನಿಸೊ ಬಿಂಬನೆ 5 ವೇಣುನಾದ ವಿನೋದ ಸುಂದರ ಜಾಣೆ ರುಕ್ಮಿಣಿ ಅರಸನೆ ಸಾನುರಾಗದಿ ಜ್ಞಾನದಂಬಕ ದಾನ ಮಾಡೊ ದಾನಿಯೆ6 ಶ್ಯಾಮಸುಂದರ ಮಾಮನೋಹರ ಭೀಮ ವಿಕ್ರಮ ಭೂತಿಯೆ ಸಾಮಸನ್ನುತ ರಾಮಚಂದಿರ ಕಾಮಜನಕನೆ ಕಲ್ಕಿಯೆ 7 ಸಿಂಧು ಶಯನನೇ ಬಂಧಮೋಚಕ ಮಂದರಾದ್ರಿಧಾರನೇ ಬಿಂಧುಮಾಧವ ಮಂದಹಾಸದ ಸುಂದರಾಂಗ ರೂಪನೆ8 ಲಕ್ಷ್ಮಣಾಗ್ರಜ ಪಕ್ಷಿವಾಹನ ಅಕ್ಷರೇಡ್ಯ ಸುಲಕ್ಷಣ ಮೋಕ್ಷದಾಯಕ ಲಕ್ಷ್ಮಿರಮಣನೆ ರಕ್ಷಿಸಯ್ಯ ಸರ್ವದಾ 9 ವಾರಿಜನೇತ್ರ ವಾರಿಜನಾಭ ವಾರಿಜಾಸನ ವಂದ್ಯನೆ ಸೂರಿ ಶೇಖರ ಮೇರೆಗಾಣದ ಮಹಿಮನೆ 10 ಸರ್ವವ್ಯಾಪ್ತನೆ ಸರ್ವವಂದ್ಯನೆ ಸರ್ವವಾಚ್ಯದ ಈಶನೆ 11 ಪೂರ್ಣಗುಣನೆ ಪೂರ್ಣಶಕ್ತನೆ ಪೂರ್ಣಭೋಧರ ಪ್ರಿಯನೆ ಪೂರ್ಣರೂಪನೆ ಪೂರ್ಣಪೂರ್ಣನೆ ಪೂರ್ಣ ತಂತ್ರ ಸ್ವತಂತ್ರನೆ12 ಬಾಲ ಲೀಲ ಕಲಾವಿಭೂಷಿತ ಲೀಲ ಮಾನುಷ ವಿಗ್ರಹ ಲೋಲ ಸುಂದರ ಜಾಲ ಮೋಹಕ ಕಾಲನಾಮಕ ಪುರುಷ 13 ಕಾಳಿಮರ್ಧನ ಕಾಳಿವರದ ಕಾಳಿಯನುಜ ಕೇವಲ ಮೌಳಿಯಿಂದಲಿ ಕಾಲಿಗೆರಗುವೆ ಪಾಲಿಸಯ್ಯ ಈಗಲೇ 14 ಭಂಜನ ನಿಕಟ ಸರ್ವರ ಕುಟಿಲ ವರ್ಜಿತ ಶ್ರೇಷ್ಟನೆ ನಕ್ರತರಿದ ಚಕ್ರಪಾಣಿಯೆ ಫಕ್ಕನೊಲಿಯೊ ಶುಕ್ರನೇ 15 ವಿಪ್ರಸತಿಯರ ಕ್ಷಿಪ್ರದಿಂದಲಿ ತಪ್ಪದೆ ಪೊರೆದಾತನೆ ತಪ್ಪುನೋಡದೆ ಒಪ್ಪಿಕೊಂಡು ಅಪ್ಪ ಒಲಿಯೊ ವೆಂಕಟ 16 ಪಾಂಡವ ಪ್ರಿಯ ಪುಂಡಮರ್ದನ ಅಂಡಜಾಧಿಪ ಅಂಡಗ ಭಂಡನೆನಿಸದೆ ತೊಂಡನೆನಿಸೊ ಪಾಂಡುರಂಗ ವಿಠ್ಠಲಾ 17 ಸೋಮಶೇಖರ ಭಾಮೆ ಪೂಜಿತ ಕಾಮಿತ ಪ್ರದಸಾಮನೆ ತಾಮಸಾರಿಯ ನೇಮದಿಂದಲಿ ನಾಮನುಡಿಸೊ ಶೀಲನೆ 18 ಸೋಮಕಾಂತಕ ಭಾಮ ರೂಪದಿ ಸೋಮಹಂಚಿದ ಜಾಣನೆ ವಾಮದೇವಗೆ ಭ್ರಮೆಯ ಮಾಡಿದ ಶ್ರೀಮನೋಹರವಾಮನ 19 ಇಂದ್ರಗೊಲಿದ ವೀಂದ್ರವಾಹನ ನಂದಗೋಕುಲ ಚಂದ್ರನೆ ಬಂಧನಪ್ರದ ಬಂಧು ಸರ್ವರ ತಂದೆ ಕಾಯೋ ಬೇಗನೆ 20 ವಿಜಯಸಾರಥಿ ವೃಜಿಜನಾರ್ದನ ಅಜಭವಾದಿ ಪೂಜಿತ ತ್ರಿಜಗವಂದಿತ ಭುಜಗಶಯನನೆ ಅಜಿತ ಶಾಶ್ವತ ವಿಷ್ಣುವೆ 21 ಕಳತ್ರ ಅನೀಕನೆ ವಾಕು ಲಾಲಿಸು ನೂಕುಭವವನು ಏಕರೀತಿಲಿಮೆರೆವನೆ 22 ಜೀವ ಪ್ರೇರಕ ಜೀವಭಾಸರ ಜೀವರಾಶ್ರಯ ಭಿನ್ನನೇ ದೇವದೇವನೆ ಕಾವುದೆಮ್ಮನು ಕೋವಿದಪ್ರಿಯ ಕಪಿಲನೆ 23 ಅನ್ನನಾಮಕ ಅನ್ನದಾಯಕ ಅನ್ನುಉಂಬುವ ಅತಿಥಿಯೆ ಮಾನ್ಯಮಾನದ ಜ್ಞಾನಿಗಮ್ಯನೆ ಬೆನ್ನುಬಿದ್ದೆ ಅನಂತನೆ 24 ಸಾರ ಉಣ್ಣುವ ಗಾರು ಉಣ್ಣದ ಮಾರುತೀಶನೆ ಸ್ವರತನೆ ಧೀರ ಜಯಮುನಿ ವಾಯು ಅಂತರ ಮೆರೆವ ಸಿರಿಪತಿ ಕೃಷ್ಣವಿಠಲನೆ ಬಿಂಬನೆ 25
--------------
ಕೃಷ್ಣವಿಠಲದಾಸರು
ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಪ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ 1 ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ2 ಕರಿಯ ತೆರದಿ ದುಷ್ಟ ಸಂಕರನು | ತಿರುಗಲವನ ಮುರಿದು ಮತ್ತೆ || ಮರುತಮತದ ಬಿರುದನೆತ್ತಿ - |ಪರನೆ ವಿಜಯವಿಠ್ಠಲನೆಂದಾ 3
--------------
ವಿಜಯದಾಸ
ಎಂತೋಪೂಜಿಪುದಂತರ್ಯಾಮಿಯಾ-ನಂತಾದಿರಹಿತನ ಚಿಂತಾದೂರನ ಚಿನುಮಯ ರೂಪನಾ ದೆಂತೋಧ್ಯಾನಿಪೆ ನಾ ಪ ಈಶ-ವೀಶ-ವಾಹನಗೀಸಚರಾಚರ ಮಿಸಲಿಗೊಳಗಲ್ಲಾ ವಾಸುಕಿ ಭೋಗನಿವಾಸಿಗೆ ತರವಲ್ಲಾ 1 ಚರಣದಿ ಗಂಗೆಯ ಧರಿಸುವಾತನ ಚರಣವ ತೊಳೆಯುವರೇ ತರಣಿಗೆ ತೇಜದ ಭರಣಿಗೆ ದೀಪದ ಸರಣಿಯ ತೋರುವರೆ 2 ವಿಗ್ರಹರಹಿತನಿಗಘ್ರ್ಯದ ಪೂಜೆಯು ದುರ್ಘಟ ಕಾರ್ಯವಲೆ ಭರ್ಗಾದ್ಯಮರರ ವರ್ಗವು ತಮ್ಮ ನಿಸರ್ಗದಿ ಕಾಣದಲೆ 3 ಕಲಶಾಂಬುಧಿಯೊಳು ನೆಲಸಿಹಮೂರ್ತಿಗೆ-ಸಲಿಲ ಸ್ಪರ್ಶನವೆ ಜಲರುಹನೇತ್ರಗೆ ಜಲರುಹಗಾತ್ರಗೆ ಜಲದಲ್ಲಿ ಮಜ್ಜನವೆ 4 ಸ್ವರ್ಣಾಂಬರಗಳ ಬಣ್ಣಿಸುಡುವಗೆ ಬಣ್ಣದವಸ್ತ್ರಗಳೆ ಉನ್ನತ ಕೌಸ್ತುಭರನ್ನದ ತೊಡವಿಗೆ ಬಿನ್ನಣದೊಡವೆಗಳೆ 5 ಬಿಸಜನಾಭನಿಗೆ ಕುಸುಮಾಸ್ತ್ರನ ಮಾನಸದಿಂಪಡೆದವಗೆ ಮಿಸುಪ ತುಲಸಿಯಿಂದೆಸವಗೆ ಪೂಗಳ ವಿಸರ ಮನೋಹರವೇ 6 ಗಂಧವಾಹನ ಸುವಿಂದಲಿಸೃಜಿಸಿದ ಗಂಧವತೀಶನಿಗೆ ಗಂಧಧೂಪಗಳು ಬಂಧುರಂಗಳೆ ಗಂಧರ್ವಾನತನಿಗೆ 7 ವೇದ ಗೋಚರಿಸು ವೇದಾತ್ಮಕನು ವೇದೋದ್ಧಾರಕನು ವೇದಲೇಶದಿಂ ಮೋದಿಸುವನೋ ಸಮ್ಮೋದ ಪರಾತ್ಮಕನೆ 8 ಪೊಕ್ಕರೆ ಜಲಮಂ ಕುತ್ತಿಗೆ ನೆರೆಯದವಸ್ತು ಪರಾತ್ಪರನಾ ನಿತ್ಯತೃಪ್ತನಂ ಚಿತ್ರಾನ್ನಗಳಿಂ ತೃಪ್ತಿಪುದೆಂತುಜನಾ 9 ಮಂತ್ರ ಮೂರುತಿಗೆ ಮಂತ್ರಜ್ಞನಿಗೆ ಸ್ವತಂತ್ರವಿಹಾರನಿಗೆ ಮಂತ್ರ ಯಂತ್ರಗಳ ತಂತ್ರವದೆಂತೊ ಮಂತ್ರಾಧಾರನಿಗೆ 10 ಅಂತರ್ಬಹಿಯೊಳಗಂತರವಿಲ್ಲದ ನಂತ ಗುಣಾತ್ಮಕನಾ ಎಂತು ಪ್ರದಕ್ಷಿಣೆಯಾಂತು ನಮಿಪೆ ಜಗದಂತ ಶರೀರಕನಾ 11 ಸರ್ವಾಧಾರನ ಸರ್ವ ಶರೀರನ ಸರ್ವವ್ಯಾಪಕನಾ ಸರ್ವನ ನಮಿಸುವಗರ್ವವೆಂತುಟೊ ಶಕ್ರನಮಸ್ಕøತನಾ 12 ಧರೆಯೊಳು ಪುಲಗಿರಿವರದ ವಿಠಲನ ಚರಣವ ಭಜಿಸುವರ ನಿರುತದಿ ಪೂಜಿಪ ಹರುಷವು ಸಾಲದೆ ಹರಿದಾಸೋತ್ತಮರಾ 13
--------------
ಸರಗೂರು ವೆಂಕಟವರದಾರ್ಯರು
ಏನೊ ಜೀವ ನನ್ನ ನುಡಿವ ನಾಲಗೆಯು ನಿನ್ನದೇನೊ ಕಾಣೆ ನಿನ್ನಾ ಬಣ್ಣವನೆನ್ನಾಣೆ ಕೇಳು ಪೇಳುವೆನೂ ಪಭೂತಂಗಳು ಪುಸಿಯೇನೊ ಮಾತೆ ಮಾಯೆಯಲ್ಲವೇನೊಏತಕೀಗರ್ವವು ನೀನು ಜಾತನಾದ ಬಗೆಯೇನೊಕೈತವವ ಬಿಡುುನ್ನೂ ಹೇತು ಹೀನೋಕ್ತಿಗಳೇನುನೀತಿಯಾಗಿ ಪೇಳು ನಾನು ತಾತಪ್ಯಮಾನನಪ್ಪೆನೂ 1ಬಿಸಿಲು ದೊರೆದೇರನೆ ನಾನು ಮಸಿಯಮಾತ ನುಡಿವೆ ನೀನುನಶಿದು ಪೋಪೆನಹುದು ನಾನು ಹಸದೊಳಿಪ್ಪುದುಂಟೆ ನೀನುಸಸಿನೆ ತಿಳಿದುಸುರಿನ್ನು ಕುಸಿಯ ಹಾಕದಿರೆನಿನ್ನೂನುಸುಳುದಾರಿ ಮನವನ್ನು ಹೊಸದು ಕೊಂಡಾಡಿದರೇನು 2ನೋಡುವ ಕಣ್ಣು ನಿನ್ನದೇನೊ ಆಡುವಾಟನಿನ್ನದೇನೊಓಡುವ ಕಾಲು ನಿನ್ನದೇನೊ ನೀಡುವ ಕೈ ನಿನ್ನದೇನೊಬೀಡ ಬಿಡುವರೆ ನೀನು ಗೂಡಾಗಿುದ್ದೆ ನಾನುಕೂಡಲಿಂದ್ರಿಯ ಕರಣ ತಾನು ಕಾಡುಪಾಲಾಗುವೆನೀನು 3ಎದ್ದು ನಡೆದಾಡುವೆ ನಾನು ನಿದ್ರೆಗೈವೆ ಮಲಗಿ ನಾನುಹೊದ್ದುಕೊಂಬೆ ಹೊದಿಕೆಗಳನು ಗದ್ದುಗೆಗಧಿಕಾರಿ ನಾನುಸಿದ್ದಿಯೆನ್ನಿಂದಲೆ ತಾನು ನಿರ್ಧರಿಪುದಿದ ನೀನುಬುದ್ದಿಹೀನನಾಗದಿರಿನ್ನು ಬದ್ಧವಾಡು ಕೇಳ್ವೆ ನಾನು 4ತಿರುಪತೀಶನಂಘ್ರಿ ನಾನು ಬರಿಯ ಪ್ರತಿಬಿಂಬ ನೀನುಗುರುವಾಸುದೇವಾರ್ಯರನ್ನು ಎರಗಿ ಸಂಪಾದಿಸಿದೆ ನಾನುಕರೆದು ಬಿಗಿದಪ್ಪಿದರೆನ್ನುವನು ಒರೆಯೆ ಕಿವಿಯೊಳ್ಮಂತ್ರವನ್ನುಭರದಲೆನ್ನ ಜಿಹ್ವೆ ಜಪಿಸಿ ಅಂತೆನೆಂಬೆ ನಿನ್ನ ನೀನು 5ಕಂ||ಒರಟುತ್ತರದಿಂದ ದೇಹವು ಬರಿ ಜಗಳವ ತೆಗೆಯೆ ಜೀವನರಿತಿದರಂದವ ನೆರೆಮೂರ್ಖರ ದಾರಿಯೊಳಗೆಬರುತರುಪುವ ಜಾಣನೆಂದು ನೀತಿಯ ನುಡಿದಂ
--------------
ತಿಮ್ಮಪ್ಪದಾಸರು
ಕಂಡೆ ನನ್ನನು ಕಾಯ್ವನೆಂಬುದ ಕಂಡೆ ಪಾವನನಾದುದಪುಂಡರೀಕದಳಾಯತಾಕ್ಷನೆ ಗಂಡುಮಾಡುವ ಗೂಢವ ಕಂಡೆಕಂಡೆ ಪ.ಮಲಿನವೆಂಬುದು ಮನಕೆ ತೋರಲು ಮಲಿನ ಹೇತುವು ಮೂಡಲುಮಲಿನಕಳುಕುತಲಿದ್ದ ಸಮಯಕೆ ಬಲುಹಿನರಿಕೆಯ ಬೀರಲುಮಲಿನವೇ ಹುಸಿಯೆಂಬ ನಿಶ್ಚಯ ಬಲಿದು ಬಲು ಹುರಿಯಾಗಲುಕಲಕಿ ಸಂಶಯ ಕಡೆಗೆ ಜಾರಲು ನಿಲುಕಿ ನೀನಿದಿರಾಗಲು 1ಶುದ್ಧವೆಂಬುದಶುದ್ಧವೆಂಬುದು ಬುದ್ಧಿಕಲ್ಪಿತಮಾತ್ರವುಇದ್ದು ಸುತ್ತಲು ಈಶನಂತಿರೆ ಹೊದ್ದುವನ್ಯವದಾವದುಶುದ್ಧ ಶ್ರೀಹರಿ ಪೂರ್ಣ ಮಿಕ್ಕಿನ ಬದ್ಧನೆಂಬುದೆ ಭ್ರಾಂತಿಯುಅದ್ವಯಾನಂದಾಬ್ಧಿ ಯೆಂಬೀ ನಿರ್ಧರವ ನೆರೆ ತೋರಲು 2ಅಳುಕದಿರು ನಾ ವಿಶ್ವವಾಗಿಯೆ ಹೊಳೆದು ತೋರಿದೆನೊಬ್ಬನೇಬಳಸಬೇಡತಿಭೀತಿಯೆಂಬುದ ತಿಳಿದು ನೋಡೆಂದರುಹಿದೆಹುಳುಕು ತಾನದು ಹೊಂದದೆಂದಿಗು ಸುಳಿದು ಶುದ್ಧನ ಮಾಡಿದೆಒಳಗೆ ನೀನಿಹೆ ನಲಿದು ತಿರುಪತಿ ನಿಳಯ ವೆಂಕಟನಾಥನೆ 3ಕಂ||ಇಂತೀ ಭಾವನೆಗೈಯುವುದೆಂತೊದಗಿದುದೆನಲು ಸದ್ಗುರುವ ಕರುಣವು ತಾಬಂತೆನಗೆ ತಿರುಪತೀಶನೆಸಂತೋಷದಿ ವಾಸುದೇವ ಯತಿಯಾರ್ಗೀಯಲ್‍ಓಂ ದಯಾನಿಧಯೇ ನಮಃ
--------------
ತಿಮ್ಮಪ್ಪದಾಸರು
ಕರುಣಿಸೋ ಶಾಸ್ತ್ರಾರ್ಥ ಮದ್ಗುರು ಶ್ರೀ ವಿಷ್ಣುತೀರ್ಥಾ ಪ ಭವರೋಗ ಭೇಷಜನೆ ಬಹುಬಾಧೆ ಬಡುವೆನೊ ಭಾರತೀಶನ ಮುಖ್ಯ ಪ್ರೀತಿಪಾತ್ರಾ 1 ಶ್ರೀನಾಥ ನಿನ್ನಂಥ ದಾತರನು ನಾಕಾಣೆ ಅವನಿಯೊಳಗೆಲ್ಲ ಅರಸಿ ನೋಡಲು 2 ಪರಮ ಭಾಗವತರಿಗೆ ಮುಖ್ಯ ಹಿತಕರ್ತ ನೀನೆ ಧ್ವರಿಯೇ ಧರಿಯ ರಮಣ ತಂದೆವರದಗೋಪಾಲವಿಠಲನ ಮರಿಯೇ 3
--------------
ತಂದೆವರದಗೋಪಾಲವಿಠಲರು
ಕಾಯಬೇಕೋ ಶಂಕರೇಶ್ವರ ನೀನೆನ್ನನೂ ದೇವಾ ಪ ಮಾಯಧಾರಿಪ್ರೀಯನಹುದೋ ಕಾಯಜಾಂತಕನೇ ಆಯತಾರ್ಥವನ್ನು ತೋರೋ ಪಾರ್ವತೀಶನೆ ದೇವನೆ 1 ಇಂತುದಿನವು ಗಳಿಸಿಯಿರುವ ಅಂತು ದು:ಖಕ್ಕೆ ಪಂತವ್ಯಾಕೊ ಪಾಲಿಸೆನ್ನೊಳಂತರಂಗಮಂ ಶಂಭೂ 2 ದಾಸ ತುಲಸಿರಾಮ ನಿನ್ನ ದಾಸನಾದೆನೂ ದೋಷ ರಹಿತನ ಮಾಡೆನ್ನ ಮೋಸಹೋದೆನೂ-ಗುರುವೇ 3
--------------
ಚನ್ನಪಟ್ಟಣದ ಅಹೋಬಲದಾಸರು
ಗುರು ನಾರಪ್ಪಯ್ಯನ ಚರಣಕಮಲಯುಗ್ಮ ಮಾನವ ಪ ನಿರುತ ಸ್ಮರಿಸುವ ಶರಣು ಜನರಘ- ತರಿದಭೀಷ್ಠೆಯ ಗರಿಯಲೋಸುಗ ಧರಣಿ ವಲಯದಿ ಮೆರೆವ ವೆಂಕಟ ಗಿರಿಯ ರಮಣನ ಕರೆದು ತಂದಿಹ ಅ.ಪ ಧರೆಸುರರೊಳು ಜನಿಸಿರಲು ಭ್ರಾತ್ರರುನಾನಾ ಪರಿಬಾಧಿಸಲು ಸಹಿಸಿ ಚರಣ ಯಾತ್ರೆಯಲಿಂದ ಗಿರಿಯಕಾಣುತ ಮಲಗಿರಲು ಸ್ವಪ್ನದಿಸೂಚಿಸಿ ಧರಣಿ ದೇವನೆ ನಿನಗೆ ದರುಶನ ಕೊಡಲು ನಾ ಬರುವೆನೆಂದಾಜ್ಞಾಪಿಸಿ ಭಕ್ತನನುಸರಿಸಿ ತುರುಸ್ವರೂಪವ ಧರಿಸಿ ಬರುತಿರೆ ಕುರಿಕಿಹಳ್ಳಿಯ ಗ್ರಾಮದಿಂದಲಿ ತರುವರಾಶ್ವತ್ಥದಲಿ ಸಲೆ ಪಾಲ್ಗರಿದ ದೇವನ ಕರೆದು ತಂದಿಹ 1 ನಾರಾಯಣಾರ್ಯರು ಕಾರ್ಪರಾರಣ್ಯದಿ ಆರಾಧಿಸುತಲಿರುತ ಆರಾರು ಭಕುತರು ಗೋಧನ ಧಾನ್ಯದಿ ಸಾರಾವಸ್ತುಗಳೀಯುತ್ತ ಗೋರಕ್ಷಣವ ಮಾಡಿರೆನುತ ತಮ್ಮಯ ಬಂಧು ಬಾಲಕರಿಗೆ ಪೇಳುತ್ತ ಭಯ ಬ್ಯಾಡಿರೆನುತ ಚಾರು ಶಿಲೆಯೊಳಗೊಂದು ದಿನ ಅಂಗಾರದಲಿ ಶ್ರೀ ಭಾರತೀಶನ ಮೂರುತಿಯ ಬರೆದೀತ ಭಯ ಪರಿ- ಹಾರಕನು ನಿಮಗೆಂದು ಪೇಳಿದ 2 ಧರಣಿ ಪಾಲಕನಿಂದ ನಿರ್ಮಿತಮಾದ ಬಂ- ಧುರ ನಿಲಯದಿ ರಾಜಿತ ತರುಮೂಲದೊಳಗವ- ತರಿಸಿ ಷೋಡಶ ಸಂಖ್ಯ ಕರಗಳಿಂದಲಿ ಶೋಭಿತ ವರ ಕೃಷ್ಣಾ ಜಲದೊಳಗಿರುವ ಪ್ರತಿಮೆಯ ತಂದು ತರು ಬಳಿಯಲಿ ಸ್ಥಾಪಿತ ಶ್ರೀಭೂಸಮೇತ ಮೂರ್ತಿ ನಿರುತ ಪೂಜೆಯಕೊಳುತ ಧರೆಯೊಳು ಶರಣು ಜನರನು ಪೊರೆವ ಕಾರ್ಪರ ನಿಲಯ'ಸಿರಿನರ ಹರಿ'ಯನೊಲಿಸಿದ3
--------------
ಕಾರ್ಪರ ನರಹರಿದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನು ಪ್ರೇಮದಿಂ ರಕ್ಷಿಸಮ್ಮ ಪ ಜೀಮೂತಶ್ಯಾಮಳೆ ಕೋಮಲಶುಭಗಾತ್ರೆ ಕಾಮಿತ ಫಲದಾಯಕಿ ಕಲ್ಯಾಣಿ ಅ.ಪ. ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರ ಸನ್ನಳಾಗಿ ನೃಪನ ರನ್ನದ ಸಿಂಹಾಸನವೇರಿಸಿ ಎನ ಗುನ್ನತೋನ್ನತವಾದಾನಂದವನಿತ್ತೆ 1 ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂ ದಾನಂದವನೈದಿ ನಾಯಕಮಣಿಯಂದದಿಂ ನರನಾಥರ್ಗೆ ನಾಥನಾಗಿ ನಲಿಯುತ್ತಲಿರಲಿ ಸದಾ2 ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದು ಕರುಣಾರಸವೆರಸಿ ಪೊರೆವೆ ನಾರಾಯಣದಾಸನ ಬಿನ್ನಪವ ತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ಚಾಮುಂಡೇಶ್ವರಿ ಚಾಮೇಂದ್ರನೃಪನನ್ನುಪ್ರೇಮದಿಂ ರಕ್ಷಿಸಮ್ಮ ಪಜೀಮೂತಶ್ಯಾಮಳೆ ಕೋಮಲಶುಭಗಾತ್ರೆಕಾ'ುತ ಫಲದಾಯಕಿ ಕಲ್ಯಾಣಿ ಅ.ಪ.ನಿನ್ನ ಸನ್ನಿಧಿಗೆ ನಾ ಬಂದು ಪ್ರಾರ್ಥಿಸೆ ಪ್ರಸನ್ನಳಾಗಿ ನೃಪನರನ್ನದ ಸಿಂಹಾಸನವೇರಿಸಿ ಎನಗುನ್ನತೋನ್ನತವಾದಾನಂದವನಿತ್ತೆ 1ಆಯುರಾರೋಗ್ಯ ರಾಜೈಶ್ವರ್ಯ ಪುತ್ರರಿಂದಾನಂದವನೈದಿನಾಯಕಮಣಿಯಂದದಿಂ ನರನಾಥರ್ಗೆನಾಥನಾಗಿ ನಲಿಯುತ್ತಲಿರಲಿ ಸದಾ 2ಗಿರಿಯೊಳುತ್ತಮ ಮಹಾಬಲಗಿರಿಯೊಳು ನಿಂದುಕರುಣಾರಸವೆರಸಿಪೊರೆವೆ ನಾರಾಯಣದಾಸನ ಬಿನ್ನಪವತಿರುಪತೀಶನ ಸೋದರಿ ಶುಭವರ್ಧಿನಿ 3
--------------
ನಾರಾಯಣದಾಸರು
ದೇವದೇವನಾ ಭಜಿಸು ಜಾನಕಿ ಪ್ರೇಮನಾ ಬಿಡದೆ ಇನ್ನು ಪ ಇಂದಿರೇಶನಾ ಸಕಲ ವಿಶ್ವನಾಥನಾ ಸುಂದರ ರೂಪನ ಸುಗುಣ ಸುಜನವಂದ್ಯನಾ ಸಿಂಧು ಶಯನನಾ ಚೆಲುವ ಶ್ರೀನಿವಾಸನಾ ಮಂದರಾದ್ರಿಯನೆ ಪೊತ್ತ ಮಹಿಮಾನಂದನ 1 ವಾರಿಜನಾಬನಾ ಘನ ವಾಸುಕಿಶಯನನಾ ನೀರಜ ನಯನನಾ ಕೃಷ್ಣಾ ನಿಗಮಗೋಚರನಾ ನವನೀತ ಚೋರನಾ ಪಾರಮಾರ್ಥಿಕ ಜ್ಞಾನದಲ್ಲಿ ಪ್ರಬಲವಾಗಿ ಮನವು ನಿಲ್ಲಿಸಿ2 ಪನ್ನಗ ಭೂಷಣನಾದ ಪಾರ್ವತೀಶನಾ ಮನ್ನಿಸಿ ಪೊರೆದನ ಮಹಾಮಹಿಮೆಯುಳ್ಳನಾ ಚಿನ್ಮಯ ರೂಪನಾ ಪರಮ ಚಿದ್ವಿಲಾಸನಾ ಹೆನ್ನ ತೀರನಿಲಯ ಸುಪ್ರಸನ್ನ 'ಹೆನ್ನ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ನಡತೆಯನೆಣಿಸಿದರೆ ಗುಣವೇನು ತೃಣಕುಕಡೆಯಾಗುವಲ್ಲಿ ಸಂದೇಹವಿಲ್ಲ ಪನೀನು ಹಿಂದೆಗೆಯೆ ಕಣ್ಣು ಕಾಣದೆಂಬೆಯಲ್ಲೋ ುೀಗಕಾಣು ಕಿಮಿಂದ ರೂಪ ಜಾಣೆಯ ಮಗನೆ 1ಕೇಳು ಮೂಗಿನಿಂದಾ ನುಡಿಯ ತಾಳು ಗಂಧವ ಬಾುಂದಾಹೇಳು ಮಾತ ಕಣ್ಣಿನಿಂದಾ ಕೂಳುಗೊಂಬೆ 2ನಡೆಯೊ ಕೈುಂದ ಕಾಲಿಂ ಪಿಡಿಯೊಗುದದಲುಣ್ಣೋ ಪಡೆಯೊ ನೀನುಪಸ್ಥೆಯ ಬಿಟ್ಟಾನಂದವಾ 3ವಾಕಿನಿಂ ವಿಸರ್ಗವನ್ನು ಸೋಕಿಸೊ ಸ್ಪರ್ಶವ ನೀನುತಾಕದೊಲ್ ತ್ವಗಿಂದ್ರಿಯವ ಕಾಕಿ ಮನವೆ 4ಜೀವನು ಕುರುಡನೇನೊ ಪ್ರಾಣಗಳ್ [ಕೊ]ರಡುಗಳೇನೊಯಾವಗವು ನೀನೊರ್ವ ಬಾಳುವೆಯೇನೊ 5ಕಾದಿ ಮನೆಗೆ ಕೇಡು ತಾ ದರಿದ್ರತೆಗೆ ಬೀಡುಸಾಧುವಾಗಿ ನಮ್ಮೊಳಾಡು ಕೆಡಬೇಡ ನೋಡು 6ಹತ್ತು ದಾರಿಯೊಳಾಡುವೆ ಗೊತ್ತಿಗೆ ನೀನಿಲ್ಲದಿರೊಮತ್ತನಾಹೆ ಕೆಣಕಲು ಸತ್ತವನಂತೆ 7ನಿನ್ನ ಹತ್ತಿರೆ ದೈವವು ಬನ್ನ ಬಡಿಸಲೆಮ್ಮನುಕಣ್ಣುಗಾಣದೆ ಸೇರಿಸಿತು ಕಾಲಗತಿುಂದಾ 8ತಿರುಪತೀಶನೊಲವನು ಸರಸದಿಂ ಸಾಧಿಪ ನೀನುತೊರೆಯಲೆಮ್ಮ ತಿಳಿದುದು ಜಾಣುಮೆ ತಾನು 9ಕಂ||ಕರಣಗಳಾಡಿದ ಮಾತನು ಹರುಷದಿ ಕೇಳುತ್ತ ಜೀವ ತನು ಸಹ ಮನಮಂ ಪರಿಪರಿ ವಿಧದಲಿ ಬೋಧಿಪ ಪರಿುಂ ದೂಸಿದನಾಗ ನಾಚುವ ತೆರದಿಂ
--------------
ತಿಮ್ಮಪ್ಪದಾಸರು