ಒಟ್ಟು 10 ಕಡೆಗಳಲ್ಲಿ , 6 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಸೋದು _ ಉತ್ತಮ ಸಂಗ - ಬಯಸೋದು ಪ ಬಯಸೂವುದುತ್ತಮ ಸಂಗ | ಭವಭಯ ಪರಿಹರಿಸೂವ ಸಂಗ | ಆಹಭಯ ದೂರಾಭಯಪ್ರದ | ದಯ ಪೂರ್ಣ ಹರಿಯ ಹೃ-ದಯ ವ್ಯಾಪ್ತವಾದಂಥ | ವಿಯದೊಳು ಕಾಂಬಂಧ ಅ.ಪ. ವಿಭವ | ಹೇತು ಇವರೆಂದು ಖ್ಯಾತಿಲಿ ಇರುವ | ಬೊಮ್ಮದಿವಿಜೇಡ್ಯ ವೈಕುಂಠನವ | ಮೃಗ್ಯನವರಿಂದನಾಗುತಲಿರುವ | ಆಹಅವನ ಪದ ಕಮಲದಿ | ಧೃವ ಚಿತ್ತ ಉಳ್ಳವರವರಿಗೆಂಬರು ವೈ | ಷ್ಣವಾಸ್ಯರೆಂದೆನುತಲಿ 1 ತಾಪ ಶಮನ | ಸೇವಿಪರ ಹೃದಯಾಂತಃಕರಣ | ಆಹದಿರುತ ತೋರಿಕೊಳ್ಳೆ | ತಾರೇಶನಂದದಿಪರಿತಾಪವಿನ್ನುಂಟಿ | ಮರಳಿ ಅಂಥವನಿಗೆ 2 ಶುದ್ಧಾಂತಃಕರಣರ ಭಕ್ತಿ | ಪಾಶಬದ್ದನಾಗಿಹ ಹರಿಮೂರ್ತಿ | ಇಂಥಶುದ್ಧರ ವಸ ಹರಿಕೀರ್ತಿ | ಇಂದದಗ್ದ ಪಾಪದ ಮೂಟೆ ಭರ್ತಿ | ಆಹಊಧ್ರ್ವ ಪುಂಡ್ರವು ಶಂಖ | ಮುದ್ರಾದಿ ಚಿನ್ಹಿತಶಬ್ದರಿವರು ಪ್ರ | ಸಿದ್ಧ ಭಾಗ್ವತರೆಂದು 3 ಕಾಮ ಕಾರ್ಮಾಅವಿದ್ಯದಿಂದ | ದೇಹಭೂಮಿಯೊಳುತ್ಪನ್ನದಿಂದ | ಜಾತಿಬ್ರಾಹ್ಮಣಾಹಂಭಾವದಿಂದ | ಶೂನ್ಯಶ್ರೀಮನೋಹರ ಜೀವರಿಂದ | ಆಹಸಾಮಸನ್ನುತ ಭಿನ್ನ | ನೇಮ ತಿಳಿದು ತಾರ-ತಮ್ಯವ ತಿಳಿದವ | ಪ್ರೇಮ ಭಕ್ತನವನು 4 ನೋವು ಸಂತೋಷಗಳೆಂಬ | ದ್ವಯಭಾವಗಳ್ಸಮತೇಲಿ ಉಂಬ | ಜ್ಞಾನಿದೇವ ದೇವಗೆ ಪ್ರಿಯನೆಂಬ | ಬುದ್ಧಿಲೋಪಿ ಅವರ ಭಜಿಸೆ ತುಂಬ | ಆಹಗೋವ ಪಾಲಕ ಗುರು | ಗೋವಿಂದ ವಿಠ್ಠಲಕಾವನು ಬೆಂಬಿಡದೆ | ಈ ವಿಧ ಭಕುತರ 5
--------------
ಗುರುಗೋವಿಂದವಿಠಲರು
ಈ. ಯತಿವರ್ಯ ನಮನ ಮಧ್ವರಾಯರಿಗೆ ನಮೋ ನಮೋ ಗುರು ಮಧ್ವಸಂತತಿಗೆನಮೋ ನಮೋ ಪ ಸಂತತ ಶುಭವಾದೆನುತ ದಾಸಜನರಿಗೇಕ ಚಿತ್ತದಿಂದವಂದಿಸಿ ಬೇಡುವೆ ಅ.ಪ. ಕುಸುಮನಾಭರ ಸಮ ನಾಲ್ವರುಯೆಂದೆನಿಪಹಸನಾದ ಗುರುಗಳ ಸ್ಮರಿಸುತಾನ್ಯಾಯಸುಧಾಕಾರರಿಗೆ ನಮೋ ನಮೋ 1 ರಘುಕುಲನಂದನ ಸುಬ್ರಮಣ್ಯತೀರ್ಥ ಕರದಿ ಪಾಲಿತಗೆಬಿಡದೆ ಬೋಧಿಸಿದ ತಲೆಗೆ ನಮೋ ನಮೋ 2 ರಘೋತ್ತುಮಾಖ್ಯರ ಕಾರುಣ್ಯಪರೆಂದೆನಿಪರಿಗೆಸೂರಿತಾರೇಶ ಜಾತ ವಿಜೇಂದ್ರತನಯನೆನಿಪಶ್ರೀ ಸುಧೀಂದ್ರ ಪೋಷಿತ ಸದ್ಗುರು ರಾಘವೇಂದ್ರತಾತಗೆನಮೋ ನಮೋ 3 ಗುರುಪುರಂದರ ದಾಸರ ಸುಜಾತರ್ಗೆ ನಮೋ ವೈಕುಂಠದಾಸರಿಗೆ ನಮೋ ನಮೋ ಚನ್ನ ಚಿಕ್ಕಬದರಿನಿಲಯನ್ನ ಕಂಡರ್ಗೆ ಕರುಣಾಪಾತ್ರರುಯೆನಿಪವರದಗುರುಗೋಪಾಲ ಸು ಜಗನ್ನಾಥರಾಯರಿಗೆನಮೋ ನಮೋ 4 ತತ್ವಮಸಿ ವ್ಯಾಸ ಶ್ರೀಧರ ಶ್ರೀಗುರು ಶ್ರೀಪತಿ ಪ್ರಾಣೇಶಗುರು ವಿಜಯ ರಾಮಚಂದ್ರದಾಸರಿಗೆ ನಮೋ ನಮೋಬಾದರಾಯಣಗುರು ವೆಂಕಟ ಶ್ರೀನಿವಾಸ ಜಯಜಯೇಶತಂದೆವರದಗೋಪಾಲವಿಠಲನ ದಾಸರಿಗೆ ನಮೋ ನಮೋ5
--------------
ತಂದೆವರದಗೋಪಾಲವಿಠಲರು
ದಧಿವಾಮನ ವಿಠಲ ಉದ್ಧರಿಸೊ ಇವನ ಪ ಅಧಿ ಭೂತ ಅಧ್ಯಾತ್ಮ ಅಧಿದೈವಗತ ದೇವವಿಧಿ ಜನಕ ವಿಶ್ವಾತ್ಮ ಮಧು ಮಥನ ಹರಿಯೆ ಅ.ಪ. ವಿದ್ಯಾಯುಗಳನಿತ್ತು ಮಧ್ವಮತ ದೀಕ್ಷೆಯಲಿಶ್ರದ್ಧೆ ಬುದ್ಧಿಯ ನೀಯೊ ಮಧ್ವಾಂತರಾತ್ಮಾ |ಕೃದ್ಧಖಳರ್ಹಾವಳಿಯ ಒದ್ದು ಪೋಷಿಸುತಿಪನಶುದ್ಧಗೈವುದು ಮನವ ಸಿದ್ಧಜನ ವಂದ್ಯಾ 1 ತಾರತಮ್ಯ ಜ್ಞಾನ ಮೂರೆರಡು ಭೇದಗಳವಾರ ವಾರಕೆ ತಿಳಿಸಿ ಪೊರೆಯಬೇಕೋ |ಸಾರತಮ ನಿನ್ಹೊರತು ಆರು ಕಾಯುವರಯ್ಯಪೋರಗಿಹ ದುರಿತಾಳಿ ಪಾರುಮಾಡೈದೇವ 2 ಕಾರಣಿಕ ಕರುಣಾಬ್ಧಿ ತಾರೇಶ ಶ್ರೀ ಹರಿಯೆನೀರ ಜಾಸನವಂದ್ಯ ನೀರಜಾಕ್ಷಾ |ತಾರಕನು ಕುಭವ ಕೂಪಾರ ದಾಟಿಸಲುಧೀರ ಗುರು ಗೋವಿಂದ ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಧ್ಯಾನ ಮಾಳ್ಪುದು ಮನಸಾ | ಹೃದಯಾರವಿಂದದಿಸಾನು ಕೂಲಿಪ ಅರಸ | ವಿಸ್ತರಿಸಿ ಗುಣಗಳಮೌನಿಯಾಗುತ ಸಹಸ | ಚಿಂತಿಸೆಲೊ ಅನಿಶಾ ಪ ಸಾನು ರಾಗದಿ ರೂಪಗುಣಗಳ | ಮಾನಮೇಯ ಜ್ಞಾನ ಸಹಿತದಿಏನು ಫಲದನು ರಾಗವಿಲ್ಲದೆ | ಶ್ರೀನಿವಾಸನ ಭಕುತಿಯಿಂದಲಿ ಅ.ಪ. ನತ ನಾ | ಸಾಗ್ರದಲಿ ದೃಷ್ಟಿಯನೆ ಇಡುತ 1 ಮಾನವ ಪ್ರಾಣ ನಿಯಮನ ವಾರ್ತಿ | ತಿಳಿಯುತ ಮನದಲಿಪ್ರಾಣ ರೇಚಕ ನೀತಿ | ಪೂರಕವು ಕುಂಭಕಜಾಣ ತನದಲಿ ಪೂರ್ತಿ | ಗೈದೋಂಕಾರ ಕೀರ್ತಿ ||ಪ್ರಾಣ ನಿರುತದಿ ಮಾಳ್ಪ ಅನು ಸಂಧಾನ ತಿಳಿದಾ ಚರಿಸೆ ವಿಹಿತದಿಪ್ರಾಣ ಸಂಯವ ಭಕ್ತಿ ಪೂರ್ವ ವಿ | ಧಾನ ಮಾಡಲು ವೇಗ ವಲಿದನು|2| ಹತ್ತು ಸಲ ಪ್ರತಿಸವನ | ಪ್ರಾಣನ್ನ ಸಂಯವ ಕರ್ತೃ ಹೀಗೆ ತ್ರಿಸದನ ಮಾಸಕ್ಕೆ ಮುಂಚೆಯೆಭರ್ತೃವಾಗಿಹ ಪ್ರಾಣ | ವಶನ ಹನು ಅವಗೆಂದುಉಕ್ತವಿದು ಸನ್ಮಾನ | ತಿಳಿದಾ ಚರಿಸು ಧ್ಯಾನ ||ಪೊತ್ತು ಕದಳಿಯ ಮೊಗ್ಗಿನಾಕೃತಿ | ಮತ್ತೆ ನಡು ಸತ್ಕರ್ಣಿಕವು ಇಹಹೃತ್ಸ ಅಷ್ಟದಳಾಖ್ಯ ಕಮಲವ | ಎತ್ತುವುದು - ಉದಯಾರ್ಕ ಮಂತ್ರದಿ |3| ಚಿಂತೆ ಕರ್ಣಕೆಯಲ್ಲಿ | ಮಾರ್ತಾಂಡ ಮಂಡಲಅಂತೆ ಅದರುಪರೀಲಿ | ತಾರೇಶ ಮಂಡಲಚಿಂತೆ ತದ್ದುಪರೀಲಿ | ಮಂಡಲ ವಿಭಾವಸುಅಂತೆ ತನ್ನಡುವೀಲಿ | ಹರಿಪದಾಜ್ಜಾಳಿ ||ಯಂತೆ ಚಿತ್ತ ಸ್ಥೈರ್ಯದಿಂದಲಿ | ಚಿಂತಿಸುತ ಗುಣರೂಪ ಕ್ರಿಯೆಗಳಕ್ರಾಂತನಾಗುವ ಹರಿಯ ಚರಣದಿ | ಶಾಂತ ಸತ್ಸಮಾಧಿಯನು ಪಡೆ 4 ಕಂಬು ಕುಂಡಲ ಮಕರ | ಶೋಭಿ ಕರ್ಣಾಪಾರ ||ಮಾರಪಿತ ಶಿರಿವತ್ಸ ಲಾಂಛನ | ಶ್ರೀ ರಮಾಪತೆ ಶ್ಯಾಮಸುಂದರಕಾರಣಿಕ ಕನಕಾಂಬರಾಧರ | ಹಾರ ಸುಮನ ವಿಶಾಲ ವಕ್ಷನ 5 ಕಂಬು ಕಟಿ ಸೂತ್ರಾಂಗದೈರ್ಯುತ | ವಸ್ತು ಸರ್ವಾಧಾರ ಹೃದ್ಯನ 6 ಧ್ಯಾನ ಬಹು ದುರ್ಭಾವ್ಯ | ಶ್ರೀಹರಿ ವಿಭೂತಿಯುಮನಕೆ ದುರ್ವಿಜ್ಞೇಯ | ಪೆಸರಿಹುದು ಕಾರಣಅನಘನಂಗವು ದೇಹ | ಒಂದೊಂದು ಸ್ಥಿರ ಪಡೆಪುನಹ ಸರ್ವಾವಯದ ಸ್ಥಿರ ತೆರದಿ ಧೇಯ ||ಎಣಿಸು ಪ್ರತ್ಯಾಹರಣ ಕಾರ್ಯವ | ವಿನಹವಿದು ಮನಸ್ಥೈರ್ಯವಾಗದುಅನಿಲದಯ ಸಂಪಾದಿಸುತ್ತಲಿ | ಗುಣಿಸು ನೈರಂತರ್ಯವೀತೆರ 7 ಶಿಷ್ಟನಾಗುತಲಿನ್ನು | ಅನ್ಯತ್ರ ಮನವನುಸುಷ್ಠು ಸೆಳೆಯುತಲಿನ್ನು | ಹರಿಪಾದ ವನಜದಿಘಟ್ಟ ಇಡುತಲಿ ಮುನ್ನ | ಸುಸ್ಥಿರದ ಚಿತ್ತದಿ ||ಪ್ರೇಷ್ಟ ತಮ ಅವನೆನ್ನು | ಸರ್ವಕಧಿಕೆನುನಷ್ಟವಾಗುತ ಭ್ರಾಮಕ ತ್ರಯ | ಶ್ರೇಷ್ಠ ಧ್ಯಾನಾಸಕ್ತನಾಗಲು ದೃಷ್ಟಿಸುತಲಿ ತತ್ವಪತಿಗಳ | ಇಷ್ಟ ಮೂರ್ತಿಯ ಕಾಂಬೆ ಕೊನೆಗೆ8 ಯೋಗವಿಹುದು ಸಮಾಧಿ | ಅಭ್ಯಾಸ ಸಾಧ್ಯ ನಿಯೋಗಿಸಿದನ ನಿರುತದಿ | ಸುಸ್ಥಿರದಿ ಚಿತ್ತವಯೋಗಿಸ್ಹರಿ ಚರಣದಿ | ಏನೊಂದು ಬೇಡದೆವೇಗ ಹರಿ ರೂಪದಿ | ನೋಡವನ ದಯದಿ ||ಆಗಮೈಕ ಸುವೇದ್ಯ ಭಕ್ತಿಯ | ಯೋಗ ಕೊಲಿಯುತ ಸಾಧಕಂಗೆಯೋಗಿ ಗುರು ಗೋವಿಂದ ವಿಠ್ಠಲ | ವೇಗತನ ದರ್ಶನವ ಪಾಲಿಪ 9
--------------
ಗುರುಗೋವಿಂದವಿಠಲರು
ಭಾರತೀದೇವಿಯ ಸ್ತೋತ್ರ ಮಾರುತನ್ನ ಜಾಯೆ - ಮೊರೆಯ ಹೊಕ್ಕೆನು ಕಾಯೆ ಪ ಮಾರಾಂತಕ ಶಂಬರಾರಿ ಭಿದುರಧರತಾರೇಶ ಶರವಿನುತೇ ಅಮ್ಮಯ್ಯ ಅ.ಪ. ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆಸುಮನಸೇಶನ ಪದಕಮಲ ಪೂಜಿಪುದಕೆವಿಮಲಮತಿಯನೀಯೇ ಅಮ್ಮಯ್ಯ 1 ಶೃತಿದೇವಿಯಲ್ಲಿ ಸುತೆಯಾಗಿ ಜನಿಸಿದೆಸತತ ಎನ್ನಯ ದುರ್ಮತಿ ಖಂಡಿಸಿ ಸು-ಮತಿವಂತನ ಮಾಡೇ ಅಮ್ಮಯ್ಯ 2 ಎರಡೇಳು ಭುವನ ಜಠರದೊಳಗಿಂಬಿಟ್ಟಪರಿಪೂರ್ಣ ಕಾಮ ಶ್ರೀ ಮೋಹನ ವಿಠ್ಠಲನಚರಣ ಭಕುತಿಯನೀಯೇ ಅಮ್ಮಯ್ಯ 3
--------------
ಮೋಹನದಾಸರು
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ವಿಜಯದಾಸರ ಭಜನೆ ಮಾಡಿರೊ |ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ಪ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ 1 ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ2 ಪಾದ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ 3
--------------
ಮೋಹನದಾಸರು
ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾತೆ ಸರಸ್ವತಿ ಮಂಜುಳ ಮೂರುತಿಚೇತನಾತ್ಮಕಿಭಾರತಿಪ.ಪ್ರೀತಿಯಿಂದೀವುದು ಪೀತಾಂಬರಧರನಸಾತಿಶಯದ ಭಕುತಿ ಅ.ಪ.ಗುರುಹಿರಿಯರ ಕಂಡು ಬಿರುನುಡಿ ನುಡಿಸದೆಕರುಣಿಸೆನಗೆಸನ್ಮತಿಪರಮಪಾವನ ವೈಷ್ಣವರ ಪಾದಾಂಬುಜ ಮಧು-ಕರದಂತಿರಲಿ ಮದ್ರತಿ 1ಶ್ರೀಶನಮೂರ್ತಿತಾರೇಶನಂದದಿ ಹೃದಯಾ-ಕಾಶದೊಳು ಕಾಣುತಿದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತಗೈಸಮ್ಮ ಹರಿಯ ಸ್ತುತಿ 2ಮನುಜರ ರೂಪದಿ ದನುಜರು ಭೂಮಿಯೊಳ್ಜನಿಸಿದರ್ಜಲಜನೇತ್ರಿಅನಘಲಕ್ಷುಮಿನಾರಾಯಣನ ದಾಸರಿಗೆಲ್ಲಜನನಿಯೆ ನೀನೆಗತಿ3ಭಾರತಿದೇವಿಯ ಸ್ತುತಿ
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಶ್ರೀ ಬೃಹಸ್ಪತಿ ಸ್ತೋತ್ರ87ವಂದಿಪೆ ದೇವ ಗುರೋ ನಿನ್ನ ಪಾದಾಂಬುಜದ್ವಯಕೆಇಂದುಶೇಖರ ಅರವಿಂದಾಸನುತ ಇಂದಿರೇಶಗೆ -- ಪ್ರಿಯ ಹಿತದಿಪಾಲಿಸೊ ಎನ್ನ ಪಬ್ರಹ್ಮಮಾನಸ ಪುತ್ರ ಅಂಗೀರ ಶ್ರದ್ಧಾದಂಪತಿಗೆಬೃಹಸ್ಪತಿ ನೀ ಮಗನಾಗಿ ಜನಿಸಿ ಖ್ಯಾತನಾದಿಯೋತಾರೇಶಬ್ರಹ್ಮಜ್ಞಾನದಲಿ ಬುದ್ಧಿ ಕೌಶಲ್ಯದಿ ಬ್ರಹ್ಮಿಷ್ಠನೆ ನಿನಗೆಣೆಯುಂಟೆ 1ದೇವತಾ ವೃಂದಕ್ಕೆ ತಪೋಧನ ಋಷಿಗಳ ಸಮೂಹಕ್ಕೆಸರ್ವಲೋಕತ್ರಯ ಸಜ್ಜನರಿಗೆಗುರುಶರಣೆಂಬೆ ಕಾಂಚನಸನ್ನಿಭನೇದೇವಮಂತ್ರಿಯೇ ವಿಶಾಲಾಕ್ಷ ಸದಾ ನೀ ಲೋಕಹಿತೇ -- ರತ ಪಾಲಯಮಾಂ 2ಪದುಮಾಸನ ಪಿತನು ಪ್ರಸನ್ನ ಶ್ರೀನಿವಾಸ ಪದುಮೇಗೆಮದುವೆ ಪತ್ರಿಕಾ ಮಹೋತ್ಸವ ಸೇವೆ ಮುದದಿ ಗೈದಿಯೋ ನೀ ಎನ್ನಗೃಹದಿ ಮದುವೆ ಪೂಜೆ ಶ್ರೀಹರಿ ಪ್ರೀತಿಗೆ ನಿರಂತರ ಮಾಡಿಸೋ 3
--------------
ಪ್ರಸನ್ನ ಶ್ರೀನಿವಾಸದಾಸರು