ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನುಭವ ಬಾರಾಮಾಸ ) ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ ಮಾನವ ಜನು ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ | ದೊರಯದು ಪರಮಾರ್ಥ | ಶ್ಲೋಕ 1 ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ | ಗುರು ಮಹಿಪತಿ ಸಾರಿದ ಬೋಧವಾ | ಪದ ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ | ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ ಸಾಧು ಸಂತರಾ | ಅವರ ಚರಣಾರವಿಂದಾ | ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ | ಮೋಟ ಮರ ನಿಲುಲುಂದಾ | ಶ್ಲೋಕ 2 ಮೆರೆವ ಅವಯವದೊಳು ಉತ್ತು ಮಂಗದಿ ನಿಂದು | ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು | ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು | ಪದ ಮಾಸ ಶೂನ್ಯವೇ ನೋಡು ಶ್ರವಣವೇ | ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ | ಹವಣದಿ ಸಂತರ ಮುಖದಿಂದಾ ಅನುಸರಣಿಂದಾ | ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ ವಾರ್ತರಿಯಾ | ಆಲಿಸಿದೇ ಸುಖ ಬಡುತಾ | ಶ್ಲೋಕ 3 ಕುಂಡಲ ವಿಟ್ಟಿಹಾ | ಹರಿ ಕಥಾಮೃತ ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ | ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ | ನೀಚ ವೃತ್ತಿಗೆ ಬಿದ್ದು | ಶ್ಲೋಕ 4 ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ | ಇಂಗಿತ್ಹೇಳಿದ ಮಹಿಪತಿ ನಂದನಾ | ಪದ ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ | ಸನ್ನುತ ಶ್ರೀಹರಿ ನಾಮವಾ ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ | ಆಡಿಬರಡಾದೆ ನೆಲಿಗೆ | ಶ್ಲೋಕ 5 ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ | ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ | ನರಾಧಮಾನೇ ಮಾವನ ಮುಖವೋ ನೃಪಮಾಯ ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ ಸ್ವಾಮಿ ಸುಖವೋ ಪದ ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ | ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ | ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು | ಮೈಯ್ಯ ಮರ್ತೆನು ಚಲಿಸಿ ಶ್ಲೋಕ 6 ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ | ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ | ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು | ನೂಕಿದನು ಇದರಿಂದಾ | (ತನಗಿಂದ ದೀನದುರ್ಬಲರನು ಕಂಡು ಹೊಡೆವನು | ಹೋಗಾಡಿದ ನಿಜಾನಂದ ) ಶ್ಲೋಕ 7 ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ | ಶ್ಲೋಕ 8 ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ ಪದ ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು | ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ ನಾನು ಕೊಳಲಿಲ್ಲಾÀ ಸುಖ ಬಡಲಿಲ್ಲಾ | ದೋಷದನ್ನವ ಉಂಡು ವಡಲನು ನಾನು ಹೊರೆದನು ಬಯಸುತ ಜಿವ್ಹ ಸ್ವಾದಾ ಶ್ಲೋಕ 9 ವಿದತವಾದ ರಸ್ನಾವ ಉಂಬನು | ಮುದದಿ ತತ್ವದ ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ ಮಂದನಾ | ಇದನು ಸಾರಿದ ಮಹಿಪತಿ ನಂದನಾ | ಪದ ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ | ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ | ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು | ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ | ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು | ಶ್ಲೋಕ 10 ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ ಪದ ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ | ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ | ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ ಶ್ಲೋಕ 11 ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ ಮಾಡಲು ಬಳುಕುವಾ | ಮನುಜಪಾದವೋ ಪಾದವೋಮಂದನಾ | ಅನುವ ಸಾರಿದ ಪದ ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ | ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ ಶ್ಲೋಕ 12 ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ | ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ | ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ | ಪಿಂತಿನ ತಪ್ಪವ ನೋಡದೇ ತಡ ಮಾಡದೇ | ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ ಸಾರಥಿ | ನಾಮ ಬಿಡದೆ ಕೊಂಡಾಡಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು
ಲಘುವಾವುದೆಂಬುದನು ನಿಜವಾಗಿ ನುಡಿಯುವೆನು ಸುಗುಣವಂತರು ಕೇಳಿ ವಿನಯದಲಿ ಬೇಡುವೆನು ಪ ಲಘುತೃಣವು ತಾನಲ್ಲದಿಟವೆ ಸರಿ ಈ ಮಾತು ಲಘುತೃಣವ ತಾವುಂಡು ಪಾಲ್ಕೊಡವೆ ಗೋವುಗಳು ಅ.ಪ. ನಾರಿಯನು ಸಾಕುವೆಡೆ ಕೈಲಾಗದ ಲಘುವು ಭಾರಿಸಿರಿಯನು ಪತಿಗೆ ತಾರದಾ ಸೊಸೆ ಲಘುವು ನಾರಿಯರ ಕೈಗೊಂಬೆಯಾಗಿರುವ ನರ ಲಘುವು ಸಿರಿವಂತ ನೆಂಟರಲಿ ಬಡವ ಸೇರಲು ಲಘುವು 1 ವಿತ್ತವಿಲ್ಲದ ಪಿತನು ಪುತ್ರನಿಲ್ಲಿರೆ ಲಘುವು ಪುತ್ರವತಿಯರ ನಡುವೆ ಸವತಿ ಬಂಜೆಯು ಲಘುವು ಅತ್ತಿಗೆಗೆ ಬಹು ಲಘುವು ರಿತ್ತ ಮೈದುನ ಮಂದಿ ಭತ್ರ್ಯತಾನತಿ ಲಘುವು ಶ್ರೀಮಂತ ಕನ್ನಿಕೆಗೆ 2 ಮೋದತೀರ್ಥರ ಮತಕೆ ಮಿಕ್ಕುದೆಲ್ಲವು ಲಘುವು ವೇದನುತ “ಶ್ರೀಕೃಷ್ಣವಿಠಲ”ನ ನೆನೆಯದವ ಶುದ್ಧಲಘು ತಮನೈಯ ವೃದ್ಧ ಸಮ್ಮತ ಹೌದು 3
--------------
ಕೃಷ್ಣವಿಠಲದಾಸರು
ವಿಜಯರಾಯರ ಚರಣ ನಿಜವಾಗಿ ನಂಬಲುಅಜನ ಪಿತನು ತಾನೆ ಒಲಿವಾ ಪ ದ್ವಿಜಕೇತನ ಗುಣವ್ರಜವ ಕೊಂಡಾಡುವಾಸುಜನ ಮಂದಾರನೀತ - ಪ್ರಖ್ಯಾತ ಅ.ಪ. ವಿ ಎಂದು ನುಡಿಯಲು ವಿಷಯ ಲಂಪಟ ದೂರಜ ಎಂದು ನುಡಿಯಲು ಜನನ ಹಾನಿಯ ಎಂದು ಕೊಂಡಾಡೆ ಯಮಭಟರು ಓಡುವರುರಾಯ ಎಂದೆನಲು ಹರಿಕಾವಾ - ವರವೀವಾ 1 ಇವರ ಸ್ಮರಣೆಯೆ ಸ್ನಾನ ಇವರ ಸ್ಮರಣೆಯೆ ಧ್ಯಾನಇವರ ಸ್ಮರಣೆಯೆ ಅಮೃತಪಾನಇವರ ಸ್ಮರಣೆಯ ಮಾಡೆ ಯುವತಿಗಕ್ಷಯವಿತ್ತತ್ರಿವಿಕ್ರಮನು ಮುಂದೆ ನಲಿವಾ - ಒಲಿವಾ 2 ವಾರಣಾಸಿಯ ಯಾತ್ರೆ ಮೂರು ಬಾರಿ ಮಾಡಿಮಾರಪಿತನೊಲುಮೆಯನು ಪಡೆದುಮೂರವತಾರದಾ ಮಧ್ವಮುನಿರಾಯರಾಚಾರು ಚರಣವನು ಭಜಿಪಾ - ಮುನಿಪಾ 3 ಪುರಂದರದಾಸರಾ ಪರಮಾನುಗ್ರಹ ಪಾತ್ರಗುರು ವಿಜಯರಾಯನೀತಾಸಿರಿ ವಿಜಯ ವಿಠಲನ್ನ ಶ್ರೀನಿವಾಸಾರ್ಯರುಹರಿಯಾಜ್ಞೆಯಿಂದ ಕೊಟ್ಟರೂ - ದಿಟ್ಟರೂ 4 ದಾನಧರ್ಮದಿ ಮಹಾ ಔದಾರ್ಯಗುಣದ ಶೌರ್ಯಶ್ರೀನಿವಾಸನ ಪ್ರೇಮಕುಮಾರಾಮಾನವೀ ಸೀಮೆ ಚೀಕನಪರಿ ನಿವಾಸ ಮೋ-ಹನ ವಿಠಲನ್ನ ನಿಜದಾಸಾ - ಉಲ್ಲಾಸಾ 5
--------------
ಮೋಹನದಾಸರು
ದಾಟು ಭವಾಟವಿಯನ್ನು ಮನುಜ ನೀದಾಟು ಭವಾಟವಿಯನ್ನುಕೈಟಭಾಂತಕನಾಮಪಾತಕರೊಡಗೂಡಿನೀಟಾಗದಂದದ ಪಾಟಿಯ ಕೇಳಿನ್ನು ಪ.ಹೆಣ್ಣೆಂಬ ಹೆದ್ದೋಳ ತಿರುಗುತಿವೆ ಬಲುಪುಣ್ಯಮಾರ್ಗವ ನಡಿಗುಡವುಬಣ್ಣ ಬಣ್ಣದ ಮೃತ್ಯುಗಳೆಂಬ ಹೆಬ್ಬುಲಿಕಣ್ಣಲಿ ಕಂಡರೆ ಬಿಡವುಸಣ್ಣಮಕ್ಕಳು ನೆಂಟರಿಷ್ಟ ನರಿಗಳರ್ಥಪೆಣ್ಣಿನ ನಾತಕೆ ಓಡ್ಯಾಡುವುವುಹಣ್ಣುಕಾಯಿಗಳೆಲ್ಲ ವಿಷಮಯವಾಗಿಹ ಅರಣ್ಯದ ಖಳರೆಂಬ ಗಿಡವು 1ಆರಿಂದ್ರಿಯ ಕಳ್ಳರೆಂಬ ಕಾಮವೆಂಬಚೋರನಾಯಕನುಪಟಳವುಭೂರಿಕಾಲದ ಧರ್ಮವೆಂಬ ದ್ರವ್ಯವೆಲ್ಲಸೂರ್ಯಾಡಿಸುಲಕೊಂಬ ಹಯವುಮೂರು ಬಗೆಯಿಂದ ಸುಡುತ ಕಂಗೆಡಿಸುವದಾರುಣತರ ದಾವಾನಳವುಚೀರುವ ನಿಂದಕ ಝಲ್ಲಿಕದುಶಾಸ್ತ್ರ ನಿಸ್ಸಾರ ಘೂಕಗಳ ರವವು 2ಅಡ್ಡಡ್ಡ ಬಂದು ಅಜ್ಞಾನ ಕಾಳೋರಗವೆಡ್ಡುಗೊಳಿಸಿ ಕಚ್ಚುತಿವೆದೊಡ್ಡೆಂಟು ಮದವೆಂಬೊ ಮದ್ದಾನೆ ಎದೆಯೆಂಬಗುಡ್ಡದೊಳಗೆ ಸುತ್ತುತಿವೆಹೆಡ್ಡನೆಂದು ಚುನ್ನವಾಡಿ ಮನೋಬುದ್ಧಿಗಡ್ಡದ ಕಪಿ ಕಾಡುತಿವೆ 3ಜನ್ಮಮರಣ ಹಸುತೃಷೆಜರಾವ್ಯಾಧಿಯೆಂಬುಮ್ಮಳಿಕೆಯ ಪೊರೆಯುಂಟುಹಮ್ಮುಮಮತೆ ಎಂಬ ತಲೆಹೊರೆ ಭಾರಾಗಿಒಮ್ಮೆಗಿಳಿಯಲಿಲ್ಲ ಗಂಟುಸ್ವರ್ಮಂದಿರವೆ ಹೆಬ್ಬೆಟ್ಟನಾಯಕನರ್ಕಕಮ್ಮರಿಗಳು ಇಪ್ಪತ್ತೆಂಟುಸನ್ಮಾನ ರಾಗಭೋಗಗಳೆಂಬ ಬಯಲಾಸೆಯ ಮೃಗತೃಷ್ಣೆಯ ನಂಟು 4ಅಲ್ಲಿಗಲ್ಲಿಗೆ ಸುಖದು:ಖನೆಳಲುಬಿಸಲಲ್ಲಿಗಲ್ಲಿಗೆ ಪ್ರಿಯತರುವುಬಲ್ಲಿದರಿಂದಾಹ ಭಯದಂತೆ ಸೂಚಿಪಕಲ್ಲುಕೊಳ್ಳಗಳ ನಿರ್ಝರವುಕೊಲ್ವಾರಿನೃಪದೂತರೆಂಬ ಸೂಕರಮೋಹÀಹಲ್ಲೊಳಗಘಕೂಪದಿರವುಕ್ಷುಲ್ಲಕ ಪಿಸುಣರೆಂಬುವ ಋಕ್ಷಬಿಡಾಲಹೊಲ್ಲನಖಿಗಳ ಸಂಚರವು 5ಈಷಣತ್ರಯಯಂತ್ರ ಏಳು ಪ್ರಾಕಾರದಿದ್ವೇಷಿಗಳಿದ್ದ ದುರ್ಗಗಳುದೂಷಣ ಸ್ತುತಿ ಎಂಬ ಕಾಕಪಿಕೋಕ್ತಿ ಪ್ರದೋಷದ ಮಳೆ ಮಂಜುಗಳುನೈಷಧನುಂಡು ಕೊಬ್ಬಿದ ಇಂದ್ರಿಯಗೋಳಕಮೂಷಕಗಳಿಹ ಬಿಲಗಳುದೋಷ ದುರ್ವಾರ್ತೆ ದುರಿತವೆಂಬ ಕ್ರವ್ಯಾದಘೋಷಣ ಭಯಂಕರಗಳು 6ಈ ರೀತಿಕಾಂತಾರದಾಟುವ ಧೀರಗೆಮಾರುತಿ ಮತ ಪಕ್ಷ ಬೇಕುನಾರಾಯಣನೆ ಸರ್ವೋತ್ತಮನೆಂದೆಂಬತೋರ ಗಧಾಯುಧ ಬೇಕುಘೋರಾದ್ವೈತ ಕಕ್ಷವ ಛೇದಿಸುವ ಸುಕುಠಾರ ತತ್ವಗಳಿರಬೇಕುಸಾರಜÕಜನಪ್ರಭು ಪ್ರಸನ್ವೆಂಕಟಕೃಷ್ಣನಾರಸಿಂಹನಸ್ಮøತಿಬೇಕು7
--------------
ಪ್ರಸನ್ನವೆಂಕಟದಾಸರು