ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಹಿಷಿ ಅಶ್ವತ್ಥನಾರಾಯಣ ದೇವರು) ತಪ್ಪಾ ಕ್ಷಮಿಸು ಕಲ್ಪತರುರೂಪ ತವಪಾದ- ಕೊಪ್ಪಿಸಿದೆನು ಯೆನ್ನನು ಅಪ್ಪಳಿಸಖಿಳಾಂತರಾಯವತಿದಯದಿ ತಿ- ಮ್ಮಪ್ಪರಾಜನೆ ನೀನೆಂದರಿತು ಬಂದಿರುವೆನು ಪ. ಮಂಗಲ ಮಹಿಮೆ ಮಾತಂಗ ವರದ ಶುಭ ತುಂಗಾತೀರದಿ ನಿಂದು ತಾರಕನೆಂದು ಭವ ಭಯ ಭಂಗದ ಮಹಿಮನೆಂದರಿತು ಬಂದಿಹೆನಿಂದು ಅಂಗದಾದಿ ದೇವೇಂದ್ರ ಸಂಸ್ತುತ ತುಂಗಬಲ ಹನುಮತ್ಪ್ರತಿಷ್ಠಿತ ಅಂಗುಟಾಗ್ರದೊಳಖಿಳಪಾವನ ಗಂಗೆಯನು ಪಡದಾದಿ ಪುರುಷ 1 ಪಾವಕ ದಿಋಖ(?) ದೇವ ಸತ್ಸುಖಗಣ ಭಾವನ ಭಜಕೇಷ್ಟಸಿದ್ಧಿದನೇ ಮಾವನ ಮಗನೊಳಗುಸುರಿದ ನುಡಿಯನು ಕಾವೆನಿಂದಿರುವಿಲ್ಲಿ ಕರುಣಾವಾರಿಧಿ ಕೃಷ್ಣಾ ಈ ವಸುಂಧರೆಯಲ್ಲಿ ಘಟಿಸುವ ನೋವುಗಳ ಸಂಬಂಧಗೊಳಿಸದೆ ಶ್ರೀವನಿತೆಯೊಡಗೂಡಿ ನಿನ್ನ ಕ- ರಾವಲಂಬನವಿತ್ತು ಕರುಣಿಸು 2 ತ್ರಿವಿಧ ತಾಪಗಳು ಭರಿಸಲಾರದೆ ವಂದು ನೆವನದಿಂದಲಿ ಬಂದು ನುಡಿದೆನಿಂದು ಪವಮಾನವಂದಿತ ಪತಿತ ಪಾವನನೆ ನೀ- ವಹಿಸಿ ರಕ್ಷಿಪುದೆಂದು ಒರೆವೆನು ಗುಣಸಿಂಧು ವಿರಿಂಚಿ ರಮಾ ವರಪ್ರದ ಭಾರ ನಿನ್ನಲಿರಿಸಿದವನನು ತವಕದಲಿ ಕಾಪಾಡು ವೆಂಕಟ ಮಹಿಷಿ ಕ್ಷೇತ್ರ ಪಾಲನ3
--------------
ತುಪಾಕಿ ವೆಂಕಟರಮಣಾಚಾರ್ಯ
ಉದಯಲೆದ್ದು ಶ್ರೀ ಗುರುವೆನ್ನಿರೊ ಉದಧಿನಿವಾಸ ಸದ್ಗುರುವೆನ್ನಿರೊ ಧ್ರುವ ಕರುಣಕರನೆನ್ನಿ ಗುರುಮುರಹರನ್ನೆನಿ ಕರಿವರ ಹರಿ ಸರ್ವೋತ್ತಮನೆನ್ನಿ 1 ಸುರಮುನಿವರನೆನ್ನಿ ಗುರುಗಿರಿಧರನೆನ್ನಿ ನರಕೀಟಕನ ಪಾಲಿಪನೆನ್ನಿರೊ 2 ಶರಣರಕ್ಷಕನೆನ್ನಿ ವರದಾಯಕನೆನ್ನಿ ತ್ರ್ಯೆಲೋಕ್ಯನಾಥ ತಾರಕನೆನ್ನಿರೊ 3 ವಿಹಂಗವಾಹನನೆನ್ನಿ ತ್ರಿ ಕಂಚಧರ(?)ನೆನ್ನಿ ಪಾಸಾಲ(?) ಸಾಹಿತ್ಯದೇವನೆನ್ನಿ 4 ಭಕ್ತವತ್ಸಲನೆನ್ನಿ ಮುಕ್ತಿದಾಯಕನೆನ್ನಿ ಮಹಿಪತಿ ಗುರು ಭವನಾಶನೆನ್ನಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏಳು ಏಳೆನುತ ಭಾನು ಬರುತಿಹ |ಹೇಳುವರ್ಯಾರಿಲ್ಲ ನಿಮಗೆ ಜ್ಞಾನವ ಪ ಇರುಳೆಲ್ಲ ನೀವಿನ್ನು ವಿಷಯಕೆ ಮರುಳಾಗಿ |ಹರಟಿಯೊಳಗೆ ಸೊರಗುತಿಹರೀ ||ತರಳಾಕ್ಷಿಯರ ಅಂಗಸಂಗಕೆ ಬೆಂಡಾಗಿ |ಬರದ ಆಯುಷ್ಯ ಬರಿದೇ ಕಳೆವಿರೀ 1 ಮಾಡಲಿಲ್ಲವು ಧ್ಯಾನ ಯೋಗ ಜಪ ತಪ |ನೀಡಲಿಲ್ಲವು ದಾನ ಧರ್ಮವ ||ನೋಡಲಿಲ್ಲವು ಸಾಧುಸಂತರ ನಡತೆಯ |ಕೇಡ ಬಂದಿತು ಮುಂದೆ ನೋಡಲು 2 ತಂದೆ ಭವತಾರಕನೆ ಹಿಂದಾದುದಾಗಲಿ |ಮುಂದಾರ ನೀವಿನ್ನು ಒಂದು ನಿಮಿಷವು |ಗೊಂದಲ ಬಿಟ್ಟು ಅರಿತು ಕೊಂಡು | ಹೊಂದಿರಿ ಪೂರ್ಣ ಆನಂದವನೆಂದು 3
--------------
ಭಾವತರಕರು
ಪಾಹಿಮಾಂ ಕಾರ್ತಿಕೇಯಾ | ಪಾರ್ವತಿಯ ಕುವರಾ ಪಾಹಿಮಾಂ ಕಾರ್ತಿಕೇಯಾ ಪ ಪಾಹಿ ಕರುಣಿಯೆ ಸುಬ್ರಹ್ಮಣ್ಯ ಅ ಸುಗುಣಾಭರಿತ ಶರಜಾ ಸಚ್ಚಿದಾನಂದ ಅಗಜೆಯ ಪ್ರಿಯ ತನುಜ ನಿಗಮ- ನಿತ್ಯ ಜಗೆದೊಡೆಯ ಪರಿಶುದ್ಧ ಪಾವನ ಮೃಗಧರನ ಸುತ ಸುಬ್ರಹ್ಮಣ್ಯ | ಪಾಹಿ | 1 ಬಾಲಾರ್ಕ ಕೋಟಿ ತೇಜ ನಿತ್ಯಾನಂದ ನೀಲಗ್ರೀವನ ಸುಧ್ವಜ ಖೂಳ ತಾರಕನೆಂಬ ಕಾಲ ಸುರಾಳಿಯಂಬುಧಿ ಚಂದ್ರ ವರಮುನಿ ಜಾಲವಂದಿತ ಸುಬ್ರಹ್ಮಣ್ಯ 2 ಭೂಸುರ ಪ್ರಿಯ ಸುಬ್ರಹ್ಮಣ್ಯ 3
--------------
ಬೆಳ್ಳೆ ದಾಸಪ್ಪಯ್ಯ
ಮನದಧಿಪ ಮಹದೇವ ಮೊರೆಯೆ ಕೇಳೊ ಪ ತಿಮಿರ ಸ್ಥಿತಿಯಲ್ಲಿ ಎದೆ ಒಡೆದು ನಿಂದಿಹೆನು ಅ.ಪ. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು ಘನ ಯಾತನೆಯ ಪಡಿಸಿ ಮೂರ್ಛೆಗೊಳಿಸಿ ಕ್ಷಣ ಬಿಡದೆ ದಣಿಸುವುವು ಮೊರೆ ಇಡಲು ಮುಖವಿಲ್ಲ ಪ್ರಣಿತ ಪಾಲಕರಲ್ಲಿ ಸರಿ ಇಲ್ಲ ನಿನಗೆಂದು 1 ಪವಮಾನ ಪದಕಮಲ ಮಧು ಮತ್ತ ಮಹಭೃಂಗ ಹರಿದಾಸ ಶಿರೋರತ್ನ ಅಭಯದಾಯಿ ಶಿವತಮನೆ ನಿನ್ನಂಘ್ರಿ ರಜಲಕ್ಷ್ಮಿಯನ್ನು ಶಿರ ನಿತ್ಯ ಮಾಡೆನ್ನ ಕೃತಕೃತ್ಯ 2 ಗೌರೀಶ ಗುಣನಿಧಿಯೆ ಗುಪ್ತ ಮಂಗಳ ಮಹಿಮ ಶೌರಿ ಜಯೇಶವಿಠಲ ಧ್ಯಾನಲೋಲ ತಾರಕನೆ ಭವಸಿಂಧು ದಾಟಿಸುವ ಅಂಬಿಗನೆ ಕಾರುಣ್ಯಗರೆದೆನ್ನ ಹರಿಪಾದ ದಡಕೊಯ್ಯೊ 3
--------------
ಜಯೇಶವಿಠಲ
ಮುಚುಕುಂದ ವರದ ವಿಠಲ | ಕಾಪಾಡೊ ಇವಳಾ ಪ ಖಚರಾರಿವಹ ಸವ್ಯ | ಸಾಚಿಸಖ ದೇವ ಅ.ಪ. ಕೃತಿ ರಮಣದೇವಾ |ಮತಿಮತಾಂ ವರರಂಘ್ರಿ | ಹಿತ ಸೇವೆ ಕೈಕೊಂಡುಅತಿಶಯದ ಸಾಧನದಿ | ಸಂಪನ್ನಳೆನಿಸೊ 1 ಗುರುವೆ ತಾರಕನೆಂಬ | ವರಮತಿಯ ಕರುಣಿಸುತಹರಿಗುರು ಸೇವೆಯಲಿ | ಪರಮ ಸದ್ಯಕ್ತೀಕರುಣಿಸಿ ಪೊರೆಯುವುದು | ಸರ್ವಾಂತರಾತ್ಮಕನೆಸರ್ವಸುರ ಸಂಸೇವ್ಯ | ಮರುತಂತರಾತ್ಮ 2 ಹರಿಯೆ ಸರ್ವೊತ್ತಮನು | ಶಿರಿವಾಯು ಮೊದಲಾದಸುರರೆಲ್ಲ ಹರಿಯ ಕಿಂ | ಕರರೆಂಬ ಮತಿಯಾಕರುಣಿಸುತ ಸಾಧನವ | ಪರಿಪೂರ್ತಿ ಗೈಸೊಹರಿಸುರಮುನಿಯ ಸಂಸೇವ್ಯ | ಕಾರುಣ್ಯ ಮೂರ್ತೇ 3 ಕರಿವರದ ಜಾಮಿಳನ | ವರದನೆಂದೆನುತ ಶ್ರುತಿಓರಲುತಿವೆ ಹೇ ಸ್ವಾಮಿ | ಗರುಡ ಧ್ವಜಾತ್ಮಾದುರಿತ ದುಷ್ಕತ ಕಳೆದು | ಪರಿಪರಿಯ ಸೌಖ್ಯಗಳಕರುಣಿಸಿ ಪೊರೆಯುವುದು | ಸುರಸಾರ್ವಭೌಮ 4 ಭವ | ನೋವ ಕಳೆಯಲ್ಕೇನೀವೊಲಿದು ಇವಳೀಗೆ | ಪಾವನ ಸ್ಮøತಿಯಿತ್ತುಕಾವುದೆನೆ ಬೇಡ್ವೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀಹರಿಯ ಸ್ತುತಿ ಕಡಲಶಾಯಿ ಪ ರುಧಿರ ಮೂಲ ಸಾಸ್ಥಿಯ ಕಾಯಾ ಒಳ್ಳೆ ಮೃದು ನರ ಜಾಲಗಳ ಸುತ್ತಿಹ ಮೈಯಾ ಅದರೊಳು ನಿನ್ನಾದಿ ಕಾರ್ಯಾ ಮತ್ತೆ ಸದಮಲ ಪ್ರಾಣೇಶ ನಿನಗೆ ತಾ ಸಹಾಯ 1 ಸಂತತ ಹರಿಯ ಕೊಂಡಾಡಿ ಮಧ್ವ ಪಂಥವ ಪಿಡಿದು ದುವ್ರ್ಯಸನವನೀಡಾಡಿ ಕಂತುಪಿತನ ನಾಮಾ ಪಾಡಿ ಎನ್ನ ಚಿಂತೆ ತಾರಕನೆಂದು ನಂಬಿದೆ ಕೂಡಿ 2 ನರದೇಹ ಕೊಡುವವನು ನೀನು ನಿನ್ನ ಮರೆದಧಮದ ಶಾಸನ ಕರ್ತಾ ನಾನು ನರಸಿಂಹವಿಠಲನು ನೀನು ನಿನ್ನ ಕರುಣೆ ತಪ್ಪಿದ ಮೇಲೆ ಜೀವನವೇನು 3
--------------
ನರಸಿಂಹವಿಠಲರು
ಸಂಚಿತ ಪ್ರಾರಬ್ಧ ಕ್ರಿಯಮಾಣಾ | ಪ್ರಪಂಚದಿ ಈಡ್ಯಾಡೋ ಪ ಸ್ಥೂಲಕೆ ಭೋಗಕೆ ಸಾಕ್ಷಿಯು ಸೂಕ್ಷ್ಮವು | ಕಾರಣದಲಿ ಸಾಕ್ಷೀ || ಭೋಗಾಪೇಕ್ಷೆಯು ಸೂಕ್ಷ್ಮವು ನೀನಿತುದುಹ ಕಾರಣ ಲಕ್ಷೀ 1 ಸ್ಪರ್ಶದಿ ಶಬ್ದವು ಶಬ್ದಾಸ್ಪರ್ಶವಿದು | ರೂಪವು ತೋರಿತು ರೂಪವು ರಸದಲಿ || ಗಂಧದಿ ಕಾಣಿಸಿತೊ 2 ಕರ್ಮದಿ ರೂಪವು ರೂಪದಿ ಕರ್ಮವು | ಕರ್ಮರೂಪಕ್ಕೇ ||ವ್ಯಾಪಕ ಭವತಾರಕನೆಂದರಿಯದೆ ಕಲಾಪವ್ಯಾಕೀ ಮನಕೆ 3
--------------
ಭಾವತರಕರು
ಸತತ ಚಿಂತಾಮಣಿಯೆ | ಸುರರೊಳಗೆ ನಿನಗೆಣಿಯೆಸಂತರನ ಪೊರೆವಂಥ ಮುನಿಯೆ | ಸುಖ ಜ್ಞಾನ ಖಣಿಯೇ ಪ ಭವ ಭುವನ ನಿಧಿ ತಾರಕನೆ 1 ಭಾರತಿ ಮನೆ | ಕುಂಬಾರನ ವುಳಹಿದನೆಭಾರತದೊಳು ನೀನೆ | ಭೂಭಾರ ನಿಳುಹಿದವನೆ2 ಶಂಖ ಚಕ್ರಾಧರನೆ ನಿ- | ಶ್ಶಂಕ ಮಹಾಮಹಿಮನೆಶಂಕರ ಸುರಪಾಲಕನೆ | ಶಂಕ ಚಕ್ರವಿತ್ತವನೆ 3 ಘಟಿಕಾಚಲ ವಾಸ | ಉತ್ಕøಷ್ಟ ನರಹರಿಯ ದಾಸಭಟ ಜನರಿಗೆ ಬಲು ಲೇಸಾ ಅ- | ಜಟವಾಗಿ ಕೊಡುವ ಸಂನ್ಯಾಸಾ 4 ಸಿರಿ ನಿತ್ಯ ಸ್ಮರಿಸುವ ಗುರು ಶಿರೋರತ್ನಾ 5
--------------
ಮೋಹನದಾಸರು