ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾಧರ ಸ್ಮರತ್ರಿಪುರಹರ ದೇವಪ ಅಂಗಜಹರ ಭಸಿತಾಂಗ ಮಹಾಲಿಂಗ ತುಂಗಮಹಿಮ ಮೃಗಾಂಶಮೌಳಿ ಶಿವ ಅ.ಪ ಭೂತೇಶ ಸದ್ಯೋಜಾತ ಪ್ರದ್ಯುಮ್ನಸುತೆಯಸುತ ಮತಿಯ ಪ್ರದಾತ ಸದಮಲಮೂರುತಿ ಹೃದಯಸದನದೊಳು ವಿಧಿಪಿತನಂಘ್ರಿಯ ಸ್ಮರಣೆಯ ಕರುಣಿಸು 1 ಪ್ರಮಥಶ್ರೇಷ್ಠರ ಸಂಸೇವಿತ ಸುಮನಸರ ಪ್ರೀತ ಹೈಮವತಿಯ ಪ್ರೀತಾ ರಮಾರಮಣಗೆ ಅತಿಭಕುತಾ ನೀ ಮನೋಭಿಮಾನಿಯೆ ಖ್ಯಾತಾ ತಾಮಸರೊಳು ತಮಸಾಧನ ಮಾಡಿಸಿ ನೀ ಮೋಹಿಪ ದೇವ ಶೂಲಿ ಕಪಾಲಿ 2 ಶುಕದೂರ್ವಾಸಸ್ವರೂಪ ಜೈಗೀಷರೂಪ ವೈಕಾರಿಕಾದಿ ತ್ರೈರೂಪ ಲೋಕನಾಥÀ ಶ್ರೀವೆಂಕಟೇಶನ ಹೃತ್ಕಮಲದಿ ನಲಿಸುವ ಫಾಲನೇತ್ರ ಶಿವ 3
--------------
ಉರಗಾದ್ರಿವಾಸವಿಠಲದಾಸರು
ಮನವೇ ಎಂದಿಗೆ ಇದು ಕೊನೆಯ ಕಾಣುವುದೊ ಪ ತನಗೆ ತಾನೆ ಚಿಂತೆಗೈಯ್ಯುತ ಜನರ ನೋಡಿ ಹಿಗ್ಗುತ ಅ.ಪ ಬಂಗಿತಿಂದ ಮಂಗನಂದದಿ ಭಂಗಕೆ ಒಳಗಾಗುವಿ 1 ಎಷ್ಟುದಿನಗಳಾದರೂ ಪುಟ್ಟುವುದಿಲ್ಲ ವಿರಕ್ತಿ ಭ್ರಷ್ಟನಾಗಿ ಕೆಟ್ಟು ಪೋಗುವೆ ಶ್ರೇಷ್ಠ ನೀನೆಂದು ಕೊಂಬುವೆ2 ಪ್ರೇಮದಿಂದಾ ಜಪಮಾಡದೆ ತಾಮಸರೊಳು ಸೇರಿದೆ 3
--------------
ಗುರುರಾಮವಿಠಲ