ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೂ ಬಂಧವಿಲ್ಲ ಆತ್ಮಗೆ ಬಂಧವ ಕಲ್ಪನೆ ಮಿಥ್ಯವಿದೆಲ್ಲ ಮಂದರ ನುಡಿಯಿದು ಈ ಸಂಸಾರ ಪ ನಿತ್ಯಮುಕ್ತನೇ ತಾನಾದವಗೆ ಮಿಥ್ಯವ ಕಲ್ಪನೆ ಬರುವದೆಂತೋ ತಥ್ಯವಿಲ್ಲದ ಮಾತಿನ ಮಾಲೆ ಮತ್ತೆ ಬಂಜೆಯಾ ಮಗನೆಂಬುವವೋಲ್ 1 ಆತ್ಮನೆ ತಾನೆಂಬನುಭವ ಪಡೆಯದೆ ಮತ್ತೆ ಶಬ್ದ ಮಾತ್ರವನರಿತವಗೆ ಸುತ್ತಿಕೊಳ್ಳುವುದು ಸಂಶಯ ವಿದುವೆ ಅನುಭವದೊಳಗೇನಿಲ್ಲ ವಿಕಲ್ಪ 2 ಭಾನುವಿಗುಂಟೇ ಉದಯಾಸ್ತಗಳು ಮಾನವಕಲ್ಪನೆಗಳು ತಾನೆಲ್ಲ ತಾನೇ ತಾನಾದವಗಿನ್ನು ಹೀನಭವದ ಭಾಧೆಯುತಾನುಂಟೇ 3 ಅನುಭವರೂಪನು ತಾನಾದಾಗ ಅನುಭವ ಬರುವದು ಈ ನುಡಿ ಕೇಳೈ ಮನವಾಣಿಗೆ ಮೀರಿದ ಸ್ವಾತ್ಮನುನೀ ಚಿನುಮಯ ಶಂಕರತಾನಾದವಗೇ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಧೂಪಾರತಿಯ ಮಾಡುವ ಬನ್ನಿ ಸರ್ವರೂಪ ರಹಿತ ತನ್ಮಾತ್ರನಿಗೆಕೆಟ್ಟ ವಾಸನೆಗಳು ಎಷ್ಟಿಹವೆಲ್ಲ ಪ ಅಷ್ಟನು ಕುಟ್ಟಿ ಪುಡಿಯನು ಮಾಡಿದಶಿಷ್ಟ ದಶಾಂಗಮ ಘಮ ಘಮ ಬೀರಲುಸುಟ್ಟು ಎತ್ತುವ ಧೂಪಾರತಿಯ 1 ವಾಸನತ್ರಯವೆಂಬ ಗುಗ್ಗುಳ ಸಾಂಬ್ರಾಣಿದ್ವೇಷ ಭ್ರಾಂತಿಗಳ ಪರಿಪರಿಯಾದವಾಸನೆ ಎತ್ತೆತ್ತ ಮಕಮಕ ಎಸೆಯಲುಸೂಸಿ ಎತ್ತುವ ಸುಧೂಪಾರತಿಯ 2 ತುಂಬಿ ತುಂಬಿಗುರು ಚಿದಾನಂದ ತಾನಾದಾತ್ಮಗೆತ್ತುವೆಪರಮಮಂಗಳ ಸುಧೂಪಾರತಿಯ 3
--------------
ಚಿದಾನಂದ ಅವಧೂತರು
ವಾಸವನಾಮಕ ದಾಸರ ನೆರೆನಂಬೂ | ಜ್ಞಾನ ಭಕುತಿ ತುಂಬೂಕಾಸುಗಳಿಸಿ ಕೋಟಿಶ್ವರ ನೆನಿಸಿದನಾ | ಸರ್ವವು ಚಲ್ಲಿದನಾ ಅ.ಪ. ಆಶೆಯೆಂದೆನಿಸುವ | ಪೈಶಾಚವ ಕಳೆಯೇ | ದ್ವಿಜಸೋಗಿನಲ್ಹರಿಯೇಕೂಸಿಗೆ ಬ್ರಹ್ಮಚಾರಿ | ಆಶ್ರಮಕೇ ಬೇಡೇ | ಮತ್ತೆ ಕೊಂಡಾಡೇಭೂಸುರ ಬಹುಪರಿ | ಕ್ಲೇಶನಟಿಸಿ ಪೇಳೇ | ಮತ್ತು ಅವನಕೇಳೇಲೇಸುಕಾಸು ಕೊಡ | ದಾಶ್ಮ ಹೃದಯ ವಿವರಾ | ತೆರಳಿದ ದ್ವಿಜವರ 1 ಅತ್ತಿತ್ತಲು ತಿರುಗುತ | ಮತ್ತೆ ಮನೆಗೆ ಬಂದಾ ತಾನಲ್ಲೆ ನಿಂದಹಿತ್ತಲ ಬಾಗಿಲೊಳ್ | ನಿಂತ ಸತಿಯನಾಸಾ ನೋಡಿದ ತಾ ಶ್ರೀಶಾಚಿತ್ತವ ಪ್ರೇರಿಸಿ | ಮತ್ತೆ ಬೇಡಿತಂದಾ | ಮೂಗುತಿ ಬಲು ಛಂದಾವಿತ್ತತಾರೆನುತವ | ನ್ಹತ್ತಿರಿತ್ತು ಪೋದಾ | ಮತ್ತೆ ಬರಧೋದಾ 2 ಸತಿ ಗರ | ಬಟ್ಟಲ ಕುದಿಪೋಗೇ | ಮೂಗುತಿ ಬಿತ್ತಾಗೇ 3 ಸುಂಡಿಪೋಗೆ ತನ | ದಿಂಡು ವ್ಯಸನಕಾಗೀ | ತನಪಾಪಕೆ ಮರುಗೀಕಂಡು ಈಸೋಜಿಗ | ಕೊಂಡಾಡಿದ ಸತಿಯ | ಆದನು ಹೊಸಪರಿಯ ಭಂಡತನದ ಭಂಡಿ | ಭಂಡಿ ದ್ರವ್ಯವೆಲ್ಲ | ದಾನ ಮಾಡ್ದನಲ್ಲಿ ಗಂಡುಗಲಿಯು ಆಗಿ | ಪುಂಡರಿಕಾಕ್ಷಪದಾ | ಬಂಡುಣಿ ತಾನಾದಾ 4 ಪಾದ ಸಿರಿ ಪಾದ ಭಜಿಸೇ | ಇಂದ್ರ ದಾಸನೆನಿಸೇ ಸಂಗ ರಹಿತರಿಗೆ | ಮಂಗಳ ಸಂದೇಶ | ಇತ್ತು ತಾನುಪದೇಶಾ ಅಂಗಜ ಪಿತ ಗುರು | ಗೋವಿಂದ ವಿಠ್ಠಲನಾ ಚರಿತೆಗಳ್ ಬಿತ್ತಿದನಾ 5
--------------
ಗುರುಗೋವಿಂದವಿಠಲರು
ಲಿಂಗವಾದವ ಲಿಂಗನಹನೆಲಿಂಗವಾಗಿ ತಾನಿರೆ ಅಂಗವೆನಿಸಬಲ್ಲನೆಲಿಂಗ ಬೋಧಮತಂಗ ಅಮೃತಗಂಗಮುಕ್ತಿಗೆಅನಂಗದೀಪ್ತಿಯ ತರಂಗರಂಗಲಿಂಗ ಲಿಂಗ ನಿಜ ಸಂಯೋಗಿರಲಿಕೆಲಿಂಗ ಸಹಜ ಅಖಂಡವೇ ತಾನಾದಪಮುತ್ತು ನೀರಿನರಲಿಕೆ ಮುತ್ತು ನೀರಹುದೇಮತ್ತೇ ಆಪರಿ ಆತ್ಮ ಲಿಂಗನಹನೇಮುತ್ತು ಸರ್ವಾಂಗಕ್ಕಿತ್ತು ಕಳೆಯದೊತ್ತೊತ್ತುಭ್ರಾಂತಿ ಹಾರಿತ್ತು ಸುಖವು ಬಂದಿತ್ತು ಇತ್ತುಸುತ್ತಮುತ್ತ ಬರಿ ಬೋಧವೆ ತುಂಬಿವೆಚಿತ್ತ ಸತ್ತು ಚಿನ್ಮಾತ್ರವೆ ತಾನಾದಾ1ಫಲವದು ಫಕ್ವವಾಗೆ ಪಕ್ವವು ಕಾಯಹುದೇತಿಳಿಯೆ ಆಪರಿ ಆತ್ಮ ಲಿಂಗನಹನೇಫಲವು ಫಲವು ಪ್ರಣವದ ಒಲವುಶುಕ್ರರೂ ಹಲವು ತೇಜದ ಬಲವು ಆನಂದ ನಿಲುವು ನಿಲುವುಕಳೆಯೊಳಗೆ ತಾ ಥಳಥಳಿಸುತ ಬಲುಪ್ರಭಾವವಾಗಿಹ ಪರಮನೆ ತಾನಾದ2ದೇವವೃಕ್ಷಾದುದು ಈಗ ಸನಿಯಹುದೇಜೀವಿ ಆಪರಿಆತ್ಮ ಲಿಂಗನಹನೇದೇವ ಭಕ್ತ ಸಂಜೀವ ಜÕಪ್ತಿಯಭಾವಎಲ್ಲ ತುಂಬಿರುವಆವಾಗಈವಈವಜೀವ ಹೋಗಿ ಚಿದಾನಂದನೆ ತಾನಾಗಿಆವಾವ ಕಾಲದಿ ಬ್ರಹ್ಮವೆ ತಾನಾದ3
--------------
ಚಿದಾನಂದ ಅವಧೂತರು