ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ 1 ಭವ ಅದು ಸ್ನಾನ ಕ್ಷೀರಸಾಗರ ಸ್ನಾನ ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ ಭಾಗವತರೊಲುಮೆ ನಿಜ ಭಾಗೀರಥೀಸ್ನಾನ 2 ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ ಪರಮಜ್ಞಾನ ನಿಜ ಸುರಗಂಗಾಸ್ನಾನ ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ ಹರಿದಾಸರೊಡನಾಟ ಸರಸ್ವತೀ ಸ್ನಾನ 3 ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ ಸಾಧುಸಜ್ಜನಸೇವೆ ಗೋದಾವರೀಸ್ನಾನ 4 ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ ಕಾಮತೊಳೆವುದೆ ನಿಜ ಭೀಮಾನದೀಸ್ನಾನ ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ 5
--------------
ರಾಮದಾಸರು
ಭಾಗವತ ದಶಮಸ್ಕಂದ ಕಥೆ ಜಯ ಜಯ ರಾಮಾನುಜ ಪಾಹಿ ಜಯ ಜಯ ಶ್ರೀಕೃಷ್ಣಪಾಹಿ ಜಯ ಪಾಂಡವ ಮಿತ್ರ ಪಾಹಿ ಜಯ ಜಯ ಜಯತು ಪ ಭವ ಪ್ರಮುಖ ಸುರರಿ- ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ 1 ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು 2 ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು 3 ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ ತರಿವೆ ನೀಚರನೆಂದಾಕಾಶವಾಣಿಯಾಯಿತು 4 ಕನ್ನಿಕೆಯರು ಭುವಿಯೊಳವತರಿಸುವದೆನ್ನುತ 5 ಮೃಡ ಸಡಗರದಲಿ ತಮ್ಮ ನಿಳಯಗಳನು ಸಾರ್ದರು 6 ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ ಧಾರುಣಿಯ ಪಾಲಿಸುತೆ ಧರ್ಮದಿಂದಲಿ 7 ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ ಭಾವ ಮೈದ ಕಂಸ ರಥಕೆ ಸಾರಥಿಯಾದನು8 ನಭವುನುಡಿಯೆ ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ9 ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ 10 ಕೊಡಲು ಕಂಸ ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು 11 ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ 12 ಸೆರೆಯೊಳಿಡಿಸಿ ಘನವಿಭವದಿ ಭುವಿಯನಾಳುತಿರ್ದ ಕಂಸನು 13 ಸುರ ಋಷಿ ರಹಸ್ಯದಲಿ ಬಂದು ಪೇಳಿದ 14 ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು ತರಿದನಾರುಮಂದಿ ಸುತರ ತವಕದಲಿ 15 ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು 16 ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು 17 ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ 18 ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ 19 ಸುರರು ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು 20 ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ 21 ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು 22 ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ ಶೌರಿ ನೋಡಿದ 23 ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ ಗೋವುಗಳನು ಹತ್ತುಸಾವಿರ ಧಾರೆಯೆರೆದನು 24 ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ 25 ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ ಬಾಲನನ್ನು ನೋಡಿ ಮನದಿ ಭಯವ ಪಟ್ಟಳು 26 ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ ಶೌರಿ ನಡೆದನು 27 ಗೋಕುಲವನೈದಿ ಕಮಲನಾಭನಂ ಯಶೋದೆಯ ಬಳಿಯಲಿಟ್ಟನು 28 ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು ಜೋಕೆಯಿಂದ ಮೊದಲಿನಂತೆ ತೋರುತಿರ್ದನು 29 ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ ಝಳಪಿಸುತ್ತ ಖಡ್ಗವನ್ನು ಜವದಿ ಬಂದನು 30 ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ 31 ನಭದಿನಿಂತು ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? 32 ವೈರಿ ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು 33 ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ 34 ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ ಬರಲಿ ಹರಿಯು ಕೊಲುವೆವವನ ಭಯಬಿಡೆಂದರು 35 ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು ಪೂತನೆಯೆಂಬ ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು 36 ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು 37 ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು 38 ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ ಧೀರ ನಿನ್ನ ಮಗನೆನ್ನುತ ಗೋಪ ನುಡಿದನು39 ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ ಹಾಲಾಹಲವನೀಂಟಯಸುವನೆಳದು ಕೊಂದನು40 ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು 41 ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ 42 ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು43 ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು 44 ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ 45 ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು46 ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು 47 ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು 48 ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು 49 ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ ನಯದಿಂದ ಅರಿಯದವನಂತಿರುವ ತಾಯಿಗೆ 50 ಗೋಪಿ ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ 51 ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು 52 ವನಜನಾಭ ಕೃಷ್ಣನನ್ನು ದೂರುತಿರುವರು 53 ಸೂನು ನಮ್ಮ ಮನೆಗೆ ಬಂದು ಆನಂದದಿ ಯಾರು ಆಡದಾಟ ಆಡುವ 54 ಬಾಯಿಗೊರಸಲತ್ತೆ ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ 55 ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು ಕೋಲಿನಿಂದ ತಿವಿದು ವಡೆದು ಪಾಲ ಸವಿದನು56 ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು 57 ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ- ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ58 ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ 59 ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು ತಿನ್ನತಿರಲು ನಗುತ ನಗುತ ತಿರುಗುತಿರುವನು 60 ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು 61 ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ 62 ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ ವಾರಿಗೆಯವರಿಂದ ಕೂಡಿ ಕುಣಿಯುತಿರುವನು 63 ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ- ಚಿತ್ತರುಲಿಯಲಾಡುತೆಸೆದ ಮೋದದಿ64 ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು 65 ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು 66 ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು ಸ್ವಜನರನ್ನು ಪಾಲಿಸಿದನು ವೃಜಿನದೂರನು 67 ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ 68 ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ ಹರಿಯುತಾನು ತತ್ವದ್ರೂಪವಾಗಿ ಮೆರೆದನು 69 ನಾನಾಲಂಕಾರದಿ ಗೋವುಗಳ
--------------
ಗುರುರಾಮವಿಠಲ