ಈ ವೇಳೆಯಲಿ ಸಲಹದಿರುವರೆಯನ್ನ
ಶ್ರಿ ವತ್ಸಲಾಂಛನ ಶ್ರಿತಕಲ್ಪತರು ಹರಿ ಪ
ರತಿ ರಮಣಜನಕ ಭಾರತೀರಮಣ ಸನ್ನುತನೆ
ದಿತಿ ತನಯ ಸಂಹಾರಾಚ್ಯುತ ಮುಕುಂದ
ಪತಿತಪಾವನ ಭವದುರಿತ ಪಾಶ ಪರಿಹರಿಸೆ-
ನ್ನುತ ನಿನ್ನ ಸ್ತುತಿಸೆ ಸದ್ಗತಿ ತೋರಿ ಗೋವಿಂದ 1
ಅಕಲಂಕ ಚರಿತ ತಾರಕರೂಪ ಸರ್ವೇಶ
ಸಕಲಲೋಕ ಶರಣ್ಯ ಪ್ರಕಟ ಮಹಿಮಾ
ವಿಕಸಿತಾಂಬುಜ ನೇತ್ರ ಪ್ರಕಟದಾನವ ಜೈತ್ರ2
ಮೊರೆ ಹೊಕ್ಕವರನು ಕಾಯ್ವ ಬಿರುದು ನಿನ್ನದು ಕೃಪಾ
ಕರ ಗರಡಗಮನ ಕರಿವರದ ಶೌರಿ
ಧರಣಿಧರ `ವರಹೆನ್ನೆ ಪುರನಿಲಯ’ ಶ್ರೀಮ
ನೃಹರಿ ಪರಮ ಪುರುಷ ಶಿರಿಯರಸ ಹರುಷದಲಿ 3