ಒಟ್ಟು 24 ಕಡೆಗಳಲ್ಲಿ , 10 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಶ್ರೀಹರಿ-ಲಕ್ಷ್ಮಿಯರು ಉದ್ಧವಾ ಬೇಗ ಬಾ |ಬಾ| ಶ್ರದ್ಧೆಯಿಂದಿರ್ಪರೆ| ಗೋಪಿಯರೆನ್ನೊಳು ಪ ಕಾಳಿಯ ಫಣದಲ್ಲಿ ಮೋದದಿಂ ಕುಣಿಯಲು ಸಾಲು ಸಾಲಾಗಿಯೇ ತವಕದಿಂ ನಿಂತರು 1 ಬೆಣ್ಣೆಯ ಕದ್ದರೂ ಸಣ್ಣ ಮಾತಾಡರು ಕಣ್ಣು ಕೆಂಪಾಗಿ ತಾವೆಂದಿಗೂ ನುಡಿಯರು 2 ಸುಂದರಾಂಗಿಯಾ ಸೀರೆಯ ಸೆಳೆದರೂ ನಂದನೊಳೆನ್ನಯ ಸುದ್ದಿಯ ಪೇಳರು 3 ತರುವ ನಾನೇರ್ದರೂ ಸೀರೆಯ ಕದ್ದರೂ ಕರಗಳ ಜೋಡಿಸಿ ಬೇಡುತ್ತ ನಿಂತರು 4 ಪತಿಗಳ ಶಿಕ್ಷೆಯನ್ನೀಕ್ಷಿಸದೆ ಎನ್ನೊಳು ರತಿಸುಖಾಂಬುಧಿಯಲ್ಲಿ ತೇಲಿಕೊಂಡಿರ್ದರು 5 ಭಜಿಸಿ ರಾಜೇಶನ ಹಯಮುಖ ದೇವನ ತ್ಯಜಿಸಿ ಶೋಕಂಗಳ ಸುಖಿಗಳಾಗಿರ್ಪರೆ 6
--------------
ವಿಶ್ವೇಂದ್ರತೀರ್ಥ
ಇಂದು ನಿನ್ನ ಪಾದಕಮಲವಾ | ಪೊಂದಿದೆ ದೇವಾ ಪ ಪುರಂದರಾನುಜ | ಸಿಂಧೂರ ವರಪೋಷಕ ಸುರ ವಿನುತ ಇಂದಿರೇಶಾ ಅ.ಪ ಪಿತನೆ ನಿನ್ನ ಒಮ್ಮೆ ನೆನೆಯದೆ | ಮತಿಹೀನನಾಗಿ ಸ್ಮøತಿ ಪುರಾಣ ಕಥೆಯ ಕೇಳದೆ | ವಿತತ ಮಹಿಮ ಪತಿತ ನಾನಾದೆ ಅತಿವೇಗದಿ ಎನ್ನನು ನೀ ಹಿತದಿ ಪಾಲಿಸು ಕ್ಷಿತಿಜೇಶನೆ 1 ವಿಧಿಸುರೇಂದ್ರವಂದ್ಯ ನಗಧರ ಬಿಡದೆ ಸಲಹೊ ಮದನವಿತ ನೀನಧಮ ದೈತ್ಯರ ಮದವಳಿದು ಮುದದಿ ಒದಗಿದ ಸುಧೆಯನು ಸುರರಿಗೆ ನೀ ದಯದಿಕ್ಕಿದ ಪದುಮನಯನಾ 2 ಸಿಂಧುಶಯನ ಶಾಮಸುಂದರ ವಂದಿಸುವೆ ಕಂದುಗೊರಳ ಸಖ ಶ್ರೀಮನೋಹರ ಕಂದನೆಂದೀಮಂದಭಾಗ್ಯನ ತಂದೆಯ ಮರೆಯದೆ ನೀ ಚಂದದೀ ಪೊರೆ ದಶಕಂಧರಾರಿ 3
--------------
ಶಾಮಸುಂದರ ವಿಠಲ
ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ- ಸನ್ನ ಕುಮಾರ ದೇವ ಪ ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ 1 ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ 2 ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ 3
--------------
ಬೆಳ್ಳೆ ದಾಸಪ್ಪಯ್ಯ
ಕಾರ್ತಿಕೇಯನ ಮಾಡೋ ನೀ ಧ್ಯಾನ ಪ ನೀರಜ ನಯನನ ತಾರಕ ಮಂತ್ರನ ಮಾಡೋ ನೀ ಧ್ಯಾನ 1 ನಿಗಮಗಳಿಗೆಟಕದ | ಜಗದೇಕ ದೇವನ ಅಗಣಿತಮಹಿಮನ | ಮಾಡೋ ನೀ ಧ್ಯಾನ 2 ನಿತ್ಯಾನಂದನ | ಭೃತ್ಯರ ಪೊರೆವನ ಸತ್ಯ ಸ್ವರೂಪನ | ಮಾಡೋ ನೀ ಧ್ಯಾನ 3 ದುಷ್ಟ ಖಳರ ಎದೆ | ಮೆಟ್ಟಿ ಶಿಕ್ಷಿಸುವನ ಕುಷ್ಠ ವಿನಾಶನ | ಮಾಡೋ ನೀ ಧ್ಯಾನ 4 ದಾಸರ ಕಾವ ಪಾವಂ | ಜೇಶನ ಸ್ಕಂದನ ಭೂಸುರ ಪ್ರೀಯನ | ಮಾಡೋ ನೀ ಧ್ಯಾನ 5
--------------
ಬೆಳ್ಳೆ ದಾಸಪ್ಪಯ್ಯ
ಕೇಳಿರೋ ಕೇಳಿರೋ ಆಲಿಸಿ ಜನರು | ಕಲಿಯುಗದೊಳಗ ಒಡಿಯ ನಾಟವನು ಪ ಫುಲ್ಲನಾಭನ ಭಕ್ತಿ ಎಳ್ಳೆನಿತಿಲ್ಲಾ | ಹುಲ್ಲು ಕಲ್ಲು ದೈವಕ ಎರಗಿ ನಡೆವರು | ಬೆಲ್ಲವು ಕಹಿಯಾಗಿ ಸಿಹಿ ಬೇವಾಯಿತು | ಅಲ್ಲ-ಹುದೆಂಬುದು ಬಲ್ಲವರಾರು 1 ಸಾಧು ಸಂಗಕ ಕಾಲು ಏಳುವು ನೋಡಿ | ಸಾಧಿಸಿ ದುರ್ಜನರಾ ನೆರಿಯ ಸೇರುವರು | ಮಾಧವ ನಾಮ ಉಣ್ಣಲು ಮುಖರೋಗ | ಭೂದೇವಿ ನಿಸ್ಸಾರವಾದಳು ನೋಡಿ2 ನೀಚರಿಗುದ್ಯೋಗ ಊಚರಿಗಿಲ್ಲ | ಆಚಾರ ಸದ್ಗುಣ ಆಡವಿ ಸೇರಿದವು | ಯೋಚಿಸಿ ಒಬ್ಬರಿ ಗೊಬ್ಬರು ಕೇಡಾ | ಭೂಚಕ್ರದೊಳು ಎಲ್ಲಾ ತೀರಿ ತಿಂಬುರೈಯಾ3 ಇಲಿಯು ಹೆಗ್ಗಣ ಹೆಚ್ಚಿ ತೋಳ ಬಡಿದು | ದಾಳಿಯಿಟ್ಟವು ಲಂಕಾ ಯೋಧ್ಯದ ನಡುವೆ | ಇಳಿಯೊಳು ಹತ್ತೆಂಟು ಕಾಲ-ವೀಪರಿಯಾ | ತಲಿ ತಲಿಗಿನ್ನು ನಾಯಕರಾಗಿ ಇರಲು 4 ಮ್ಯಾಲೊಬ್ಬ ನಿಂದಲಿ ಸುಖದಲಿ-ರಲಿಕ್ಕೆ | ಕುಲ ಅನ್ಯ ಇಲ್ಲದ ರಾಜೇಶನಾ | ಕಾಲಿಲಿ ಸರ್ವ ಸಂಕರ ವಾಗುತಿರಲು | ಹೊಳೆವನು ಗುರುಮಹಿಪತಿ ಸುತ ಸ್ವಾಮಿ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗಿರಿರಾಜ ಸುಕುಮಾರಿ ಶಕ್ತಿ ವಿರಕ್ತಿ ಪ ದೊರೆಯುವಂತೆನಗವ್ವ ತವಪಾದ ಭಕ್ತಿ ಅ.ಪ ಕಂಬುಕಂಠಿನಿ ಗುಹ ಜನನಿ ದುರ್ಗಾಂಬಾ 1 ನಾಸಿಕ ಚಂಪ ಪೋಲ್ವ ಶರ್ವಾಣೀ2 ಪಾವಂಜೇಶನ ದಾಸಜನರ ರಕ್ಷಕಿಯೇ 3
--------------
ಬೆಳ್ಳೆ ದಾಸಪ್ಪಯ್ಯ
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1 ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2 ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಮಿಸುತ ಹೊರಳುವೆನು | ಕಾರ್ತಿಕೇಯ ನಮಿಸುತ ಹೊರಳುವೆನು ಪ ನಮಿಸುತ ಹೊರಳುವೆ | ರಮೆಪತಿ ಸಖ ಗುಹನಮಿಸುತಅ ಪರಿಪರಿ ತಾಪದ | ಸೆರೆಯೊಳ್ ಸಿಲುಕಿ ಬಲು ತರ ಕಷ್ಟಪಡುತಿಹೆನು ಕುಮಾರ ನಮಿಸುತ 1 ದುರಿತ ರಾಶಿಯಗೈದು ನರಳು ಬಲಿಹೆನು | ಕಾವುದು ನೀನು ನಮಿಸುತ 2 ಈಶನ ಪುತ್ರ ಸ | ರ್ವೇಶ ಸದ್ಗುಣ ಪಾವಂ | ಜೇಶನೆ ಸ್ತುತಿಸುವೆನು | ದಾಸನು ನಾನು ನಮಿಸುತ 3
--------------
ಬೆಳ್ಳೆ ದಾಸಪ್ಪಯ್ಯ
ನಮಿಸುವೆನೋ ಪಾದಕೆ ಕಾರ್ತಿಕೇಯಾ | ನಮಿಸುವೆ ಪ ನಮಿಸುವೆ ಪಾದಕೆ ಸುಮನಸ ವಂದ್ಯನೆ ಅ.ಪ ಚಾರು ಚಂಪಕನಾಸ ನೀರಜನೇತ್ರಾ | ತಾರಕಾಸುರನ ಸಂಹಾರಿ ಕುಮಾರಾ 1 ಮುಮುಕ್ಷು ಪ್ರಿಯಾ ಗುಹ 2 ದಾಸರಿಗನುದಿನ ತೋಷವಿತ್ತು ಅಘ- ನಾಶ ಷಟ್ಶಿರ ಪಾವಂಜೇಶನೆ ಕಾಯೆಂದು 3
--------------
ಬೆಳ್ಳೆ ದಾಸಪ್ಪಯ್ಯ
ನಿನ್ನನೇನು ಮರೆಹೊಕ್ಕೆನು ಪ ನಿನ್ನನೇ ನಾ ಬೇಡ್ವೆನುಅ.ಪ ದುರಿತ ಶರಧಿ ನಿತ್ಯಾನಂದನೆ 1 ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ 2 ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ 3 ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ 4 ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ 5
--------------
ಬೆಳ್ಳೆ ದಾಸಪ್ಪಯ್ಯ
ಬಾ ಶಿವಪುತ್ರನೆ ಶ್ರೀಶನ ಮಿತ್ರನೆ ಪ ಬಾ ಸುರವಂದ್ಯನೆ ವಾಸುಕಿಗೊಲಿದನೆ | ಬಾ | ಅ ಕುಂದರದಾನನ ಸುಂದರ ಕಾಯನೆ ಬಾ 1 ನೀರಜ ನೇತ್ರನೆ ಮಾರಸ್ವರೂಪನೆ ಬಾ 2 ವಲ್ಲಿಯ ರಮಣನೆ ಖುಲ್ಲರ ದಮನನೆ ಬಲ್ಲಿದರೊಡೆಯನೆ | ಮಲ್ಲ ಸಾಹಸನೆ | ಬಾ | 3 ಶಿಷ್ಟರ ರಕ್ಷನೆ ದುಷ್ಟರ ಶಿಕ್ಷನೆ | ಕುಷ್ಠ ವಿನಾಶನೆ ಇಷ್ಟವ ಕೊಡುವನೆ | ಬಾ | 4 ದೋಷ ವಿನಾಶನೆ ನಾಶ ರಹಿತನೆ ದಾಸರ ರಕ್ಷ ಪಾವಂ | ಜೇಶನೆ ಸ್ಕಂದನೆ | ಬಾ | 5
--------------
ಬೆಳ್ಳೆ ದಾಸಪ್ಪಯ್ಯ
ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ ಸುತನ ಮುಂದಿಟ್ಟು 151 ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152 ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ ಮಾಡುವೆನು 153 ಅಮರಲೋಕಕ್ಕೆ ವಶವಹರು ಭಾಧೆಗೆ ಗುರಿಯಾಗಿ 154 ವ್ಯರ್ಥವಾಯಿತು ಎನ್ನ ಬದುಕು ಮಾಡಿಕೊಂಬೆನೆಂದ 155 ಕಥೆಯ ಕೇಳರಿಯಾ ಕುಂದನೊದ್ದವರಾರು ಜಗದಿ 156 ಮೀರಿದರಾರೊ ಕಲ್ಪನೆಯ 157 ಸರ್ವಾಂಗದಿಂದ ಸುಂದರಿಯು ಸತಿ ಲಾಂಛನೆಯ ತಾಳಿದನು 158 ಸೆರೆತಂದ ತಾರಾದೇವಿಯನು ಪಾಡೇನು ಭೂಪಾಲ 159 ಕುಮಾರತಿಯ ಮಂದಿರಕೆ ಅರುಹಿದರಾರು ನಿನ್ನೊಡನೆ 160 ನಿಲ್ಲಿಸಿದ ಪ್ರಧಾನಿ ನಡೆತಂದ ಸೆಜ್ಜೆವಾಹರಿಗೆ 161 ಮಲಿನವನುಟ್ಟ ಮಾನಿನಿಯ ಸೆಳೆವಿಡಿದೆತ್ತಿದ ರಾಯ 162 ಮಾಜುವದೇಕೆ ಎನ್ನೊಡನೆ ಬ್ರಾಹ್ಮರು ಮೆಚ್ಚುವಂತೆ 163 ಸುರರೊ ನರರೊ ಕಿನ್ನರರೊ ಗಿರಿಜೇಶನಾಣೆ ಹೇಳೆಂದ 164 ವಿಶ್ವಲೋಚನನಂಘ್ರಿಯಾಣೆ 165 ಸರಿಯ ನಾರಿಯರು ಉರಿವ ಪಾವಕನ 166 ಬ್ರಾಹ್ಮರಿಗ್ಯೊಗ್ಯವಹುದೆ ಬರುವುದು ನಿಮ್ಮ ಕುಲಕೆ 167 ಪಾತಕಿಯೆಂದು ತಿಳಿದು ಬರುವುದೆ ಉಚಿತವು 168 ಮುನಿದು ಅರಣ್ಯಕ್ಹೋಗುವರೆ ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169 ಪಾತಕ ಬರಿದೆ ನಿಂದ್ಯವನು (ಅ) ಬಂದೊದಗಿದ ಮೇಲೆ 170 ತೂಪಿರಿದು ಮಂತರಿಸಿ ಘೋರ ಕಾನನಕೆ 171 ಗುರಿಮಾಡಿ ನಾರಿ ಕಂಬನಿದುಂಬಿದಳು 172 ವಶವಲ್ಲದಂಥ ಮೂಗುತಿಯ ಬಿಸುಸುಯ್ವದೇತಕೆ ತಾಯೆ 173 ಕುಮಾರಿಯ ಮೇಲೆ ಸ್ನೇಹದಲಿ ವಿಧಿಯೆಂದ್ಹೊರಳಿದಳು 174 ಅಳುವುದೇತಕೆ ತಾಯೆ ನೀನು ಕಲ್ಮಾಡು ನಿನ್ನ ದೇಹವನು 175 ಹೇಳಿದನೇಕಾಂತದಲಿ ಉದಯಕೆ ಬನ್ನಿರೆಂದ 176 ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ ಬನ್ನಿರಿ ಶೀಘ್ರದಿಂದ 177 ಮಾಡಿರಿಮನಕೆ ಬಂದುದನು ನಾನಿಡುವೆ ರಾಯನ ಮುಂದೆ 178 ಮೇಲೆ ಪನ್ನಂಗ ಕವಿದವು ಶೀಘ್ರದಿ ಪೊತ್ತು ನಡೆದರು 179 ಬಸವಳಿದಳು ಶ್ರೀ ಹರಿಯ ಸ್ತುತಿಸುತಿರ್ದಳೆ ತನ್ನ ಮನದಿ 180 ಕಾಲನ ವಶಕೆÉ ಒಪ್ಪಿಸದೆ ಪಾದಾರವಿಂದೊಳಿರಿಸು 181 ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ ಬಾಲೆಯ ತಂದಿಳುಹಿದರು 182 ಬಾ ಬಳಲಿದೆಯೆನುತ ರಂಭೆಯನುಪಚರಿಸಿದರು 183 ತೊಪ್ಪಲ ಮೇಲ್ಹರಹಿದರು ಕತ್ತಿಗೆ ಮಯ್ಯನಿಕ್ಕಿದಳು 184 ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ ಸ್ತುತಿಯ ಮಾಡಿದಳು 185 ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು ನಿದ್ರೆ ಕವಿದವು 186 ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ ದೂತರ ಮನವ 187 ಯೋಚಿಸಿ ತಮ್ಮ ಮನದಿ ಪಾತಕ ಎತ್ತಿದಾಯುಧವನಿಳುಹಿದರು 188 ಒಬ್ಬರೊಬ್ಬರು ಮಾತನಾಡಿ ಉರ್ವೀಶಗೊಯ್ದು ಒಪ್ಪಿಸುವ 189 ವಾರಿಜಗಂಧಿಯ ಬಿಟ್ಟು ರಾಯಗೆ ಗುರುತ ತೋರಿದರು 190 ತಪ್ಪದೆ ರಾಯನೋಲಗಕೆ ಚಿತ್ತೈಸು ಜೀಯವಧಾನ 191 ತಂದೆವು ಮುದ್ರೆಯುಂಗುರವ ಮನದಲಿ ಮರುಗಿದನು 192 ಅಂಜೂರ ಕೊಯ್ದು ಕೊಟ್ಟಂತೆ ಬೆಂದೊಡಲನೆಂತು ಪೊರೆಯಲಿ 193 ಕೆಂಡದೊಳಾಜ್ಯ ಬಿದ್ದಂತೆ ಬೆಂದರು ಶೋಕಾಗ್ನಿಯಿಂದ 194 ಮೇಲೆ ಸ್ನೇಹದಲಿ ತಲೆಯೆತ್ತಿದವಬ್ಜ ಬಂಧುಗಳು 195 ಹಸಿದ ಹೆಬ್ಬುಲಿಗೆ 196 ಬೆದರುವಳು ವ್ಯಾಘ್ರದಟ್ಟುಳಿಗೆ ಮರಳಿ ಧೈರ್ಯವನೆ ಮಾಡುವಳು 197 ಮಾಯಪಾಶಕೆ ಗುರಿಮಾಡಿ ಮುಕ್ತಿ ಸಾಧನವು 198
--------------
ಹೆಳವನಕಟ್ಟೆ ಗಿರಿಯಮ್ಮ
ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ ಕುಜನರೊಳಾಡದಲೆ ನಿಜ ಭಕುತಿಯಿಂದ ಭುಜಬಲವುಳ್ಳ ಪರಜರಟ್ಟುವ ದಿ ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ ಕರಯುಗಳ ಮುಗಿದು ಶಿರವಾನಿಲ್ಲದೆ ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ ಪರಿಹರವೊ ಬಂದರಘಳಿಗೆಯಲಿ ದುರುಳರಿಗಾಯ್ತು ಮರಿಯದೆ ಚೆನ್ನಾಗಿ1 ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ಜ್ಞಾನಾಂ ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು ಸುರರು ಮೆಚ್ಚುತಲಿರೆ ಮುರರಿಪು ಚತುರ್ದಶ ಧರಣಿಗೆ ಪರನೆಂದು ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ ಕೊಡುವ ಯತಿಶಿರೋಮಣಿ ಕರ್ನಾ 2 ಪಾದಾಂಬುಜಾತ ಕೃಷ್ಣಾ ತನು ಭವಸರಿತ ನಿವಾಸಾ ದಿವಿಜೇಶನಾಯುಧ ಕವಚದಿಂದಲಿ ತನ್ನವರನ ಪೊರೆದೆತ್ತಿ ನವವಿಧ ಬಗೆ ತೋರಿ ತವಕದಿ ಕೋಲುಪುರ ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ ಶ್ರವಣ ಮನನ ಧ್ಯಾನವನು ಬಲ್ಲವರಾ3
--------------
ವಿಜಯದಾಸ
ಮಣಿಹಾರಮಂ ತೊರೆದು ದನುಜೇಶನಾಕರುಳ - ನಣಿಯ ರದಿ ಧರಿಸಿರ್ಪನÀನಘನಿವಗೆ ವರರತ್ನಹಾರಮಂ ಹರಿಸದಿಂದಳವಡಿಪೆ ನರಹರಿಯ ಕಂಧರಂ ಮೆರೆಯಲರರೆ ಜಪಸರವನಾಂತೆಸೆವ ಸುಪವಿತ್ರಗಿಂದಿಡುವೆ ವಿಪುಲ ಮುಕ್ತಾಸರವನುಪಮೆಮೀರೆ ಕಮನೀಯಗಾತ್ರಂಗೆ ರಮಣೀಯ ಶ್ಯಾಮಲಗೆ ಕಮಲಮಾಲೆಯನಲಂಕರಿಪೆನಿಂದು ಧುರಧೀರನಂ ವೀರ ಶೌರ್ಯನಿಧಿಯ ಸುರಾಳಿ ಸಮ್ಮೋದಕರನ ಶರಣಾಗತರಕ್ಷನ ನಮಿತಬಲನ ವರಶೇಷಗಿರೀಶನಂ ನಮಿಪೆನಿನ್ನು
--------------
ನಂಜನಗೂಡು ತಿರುಮಲಾಂಬಾ
ಲಂಬೋದರನ ಸಹೋದರನೆ ಪ ಶಂಭುಜಕರುಣಾಸಾಗರನೆ ಅ.ಪ ಶೂರಪದ್ಮನ ಎದೆ ಸೀಳಿದನೆ ಮಾರನ ಪೋಲುವ ಸುಂದರನೆ ಧೀರ ಹಿರಣ್ಯಕನಾರಾಧನೆಗೆ ಮೆಚ್ಚಿ ಸೂರೆಯ ಮುಕ್ತಿಯನಿತ್ತವನೆ 1 ವರವಜ್ರ ಶಕ್ತ್ಯಾಯುಧ ಧರನೆ ಸುರಮುನಿ ನಮಿತ ಸರ್ವೇಶ್ವರನೆ ಸುರುಚಿರ ರತ್ನಾಭರಣ ವಿಭೂಷಣನೆ ಶರಣ ರಕ್ಷ ಕುಮಾರಕನೆ2 ದಾಸ ಜನರ ಮನತೋಷಕನೆ ವಾಸುದೇವನ ಸಖ ಷಟ್ಶಿರನೆ ದೋಷವಿನಾಶನೆ ನಾಶರಹಿತ ಪಾವಂಜೇಶನೆ ಕಾರ್ತಿಕೇಯನೆ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ