ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನವರದ ವಿಠಲ | ಇವನ ನೀಸಲಹೋ ಪ ಭವದೊಳಗೆ ಸಂತಪ್ತ | ತವಪಾದ ಶರಣನ ಅ.ಪ. ರಾಶಿಪುಣ್ಯವು ಫಲಿಸೆ | ದಾಸದೀಕ್ಷೆಗೆ ಒಲಿದುಆಶಿಸಲು ತೈಜಸನು | ಭಾಸುರಾಂಕಿತಕೇಸೂಸಿ ತನ್ನನುಗ್ರಹದ | ಭಾಷೆ ಅಸ್ತ್ವೆಂದೆನುತಲೇಸಾಗಿ ಪೇಳಲುಪ | ದೇಶಿಸಿಹೆ ಹರಿಯೇ 1 ಕರ್ಮ | ಸಂಚಿತಾದಿಗಳು 2 ತತ್ವರೊಲಿಮೆಯ ಕೊಡಿಸು | ತತ್ವಾರ್ಥಸ್ಪುರಿಸಿವಗೆಮೃತ್ಯುವೆನೆ ಗೆಲುವಂಥ | ಪಥವನ್ನೆ ತೋರಿಕರ್ತತಾನಲ್ಲೆಂಬ | ಉತ್ಕøಷ್ಟ ಮತಿಯಿತ್ತುಎತ್ತು ಭವದಿಂ ಹರಿಯೇ | ಉತ್ತಮೋತ್ತಮನೆ 3 ಸರ್ವತ್ರ ಸರ್ವದಾ | ಶರ್ವನೊಡೆಯನೆದೇವಸರ್ವಮಂಗಳ ನಿನ್ನ | ನಾಮಸುಧೆಯನ್ನುದರ್ವಿಜೀವಿಗೆ ಉಣಿಸಿ | ಭವಕಡಲ ಪ್ಲವನೆನಿಸೊಸರ್ವಾಂತರಾತ್ಮಕನೆ | ಉದ್ದರಿಸೊ ಇವನಾ 4 ಜೀವ ಅಸ್ವಾತಂತ್ರ | ದೇವ ನಿಜಸ್ವಾತಂತ್ರಜೀವ ಜಡರುಗಳೆಲ್ಲ | ದೇವರಾಧಿನಾಈ ವಿಧದ ಸುಜ್ಞಾನ | ಆವಾಗಲೂ ಕೊಟ್ಟುದೇವಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ ಬೋಧ ಭೋಗಲಂಪಟ ಭವ ರೋಗಿಗೆ ದೊರಕೀತೆ ಪ ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ 1 ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ ಕೀಳುತನದಿ ಜ್ಞಾನವಲ್ಲಗಳೆಯುವಗೆ ಮೇಲು ತಾನೆಂದು ತಿಳಿದೋಡಾಡುವವನಿಗೆ ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ 2 ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ ನಾನಾದೆ ದೇವನು ಗುರು ನೀನೇ ಯೋಗ್ಯ ಹೀನರ ಕೊಂಡೇನು ನಾನೊಂದು ಪಾರಾದೆ ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಭೂವರಾಹ ವಿಠಲನೆ | ಸೇವಕನ ಪೊರೆಯೊ ಪ ಕಾವಕರುಣಿಗಳರಸ | ಭಾವಜಾನಯ್ಯ ಅ.ಪ. ಏಸೆಸೊ ಜನ್ಮಗಳ | ಸೂಸಿದನುಭವದಿಂದಲೇಸಾದ ಮಧ್ವಮತ | ಪೋಷಿಸುತ್ತಿಹನೊವಾಸವಾದ್ಯಮರನುತ | ಶೇಷಾದ್ರಿವಾಸಹರಿಪೋಷಿಸೊ ಬಿಡದಿವನ | ಆಶೆಪೂರಯಿಸಿ 1 ತಾರತಮ್ಯಜ್ಞಾನ | ಮೂರೆರಡು ಭೇಧಗಳವಾರವಾರಕೆ ತಿಳಿಸಿ | ಕಾರಣಾತ್ಮಕನೆಸಾರತಮ ನೀನೆಂಬ | ಚಾರುಮತಿಯನೆ ಕೊಟ್ಟುನೀರಜಾಸನ ವಂದ್ಯ | ಪಾರುಗೈಭವವ 2 ಅಧ್ಯಾತ್ಮ ಅಧಿಭೂತ | ಆದಿಭೌತಿಕತಾಪಭೋದಿಸುತ ಸಾಧನದ | ಹಾದಿಯಲ್ಲಿರಿಸೋಮಧ್ವಾಂತರಾತ್ಮಕನ | ಪಾದರತಿಯಲಿ ಶ್ರದ್ಧೆಉದ್ಧರಿಸು ಇವನಲ್ಲಿ | ಹದ್ದುವಾಹನನೇ 3 ಕಂಸಾರಿ ಪೊರೆಯೊಹಂಸ ವಾಹನನಾದಿ | ತೃಣಾಂತ ಚವರನಹಂಸರೂಪಿಹರಿಯ | ಆಧೀನ ತಿಳಿಸೋ 4 ಸರ್ವತ್ರ ವಾಪ್ತನಿಹ | ಸರ್ವ ದೋಷ ವಿದೂರಸರ್ವಂತಾರಾತ್ಮಕನೆ | ಸರ್ವೋತ್ತಮಸರ್ವಧಾತನ ಸ್ಮøತಿಯ | ದರ್ವಿ ಜೀವಿಗೆಯಿತ್ತುಪೊರೆಯೊ ಸುಂದರ ಗುರು | ಗೋವಿಂದ ವಿಠಲ5
--------------
ಗುರುಗೋವಿಂದವಿಠಲರು
ಯಾವಪರಾಧ ಮಾಡಿದೆನೋ ರಂಗ ಈ ವಸುಧೆಯೊಳಿನ್ನು ಬಳಲುವೆನೋ ರಂಗ ಪ ಯಾವ ಪಕ್ಷಿಗೆ ಬಲೆ ಬೀಸಿದೆನೋ ರಂಗ ಯಾವ ಜೀವಿಗೆ ಗಾಳ ಹಾಕಿದೆನೋ ರಂಗ ಅ.ಪ ಯಾವ ಎಳಗೂಸನು ಬಾವಿಗೆ ತಳ್ಳಿದೆ ಯಾವ ತಪಸಿಗೆ ಭಂಗವಗೈದೆ ಯಾವ ದಂಪತಿಗಳ ಬೇರೆಗೈದೆನೊ ರಂಗ ಜೀವನು ನಾನೇನ ವಂಚನೆಗೈದೆನೊ 1 ಅಪರಾಧಂಗಳು ವಿಪರೀತವಾದರೂ ವಿಪುಲ ಕೃಪಾಕರ ನೀನಹುದಯ್ಯ ಅಪಕೃತಿಗೈದರೂ ಉಪಕೃತಿಗೈವೆ ನೀ ಕುಪಿತನಾಗದೆ ಕಾಯೋ ಮಾಂಗಿರಿರಂಗ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಹಾಯವಿಲ್ಲ ಪಾಪಿಜೀವಿಗೆ ಜಗದಿ ಪ ಶಶಿಧರ ಶಿವನ್ವರವು ದಶಶತಭುಜಬಲವು ಪಶುಪತಿ ಕದವ ಕುಶಲದಿಂ ಕಾಯುವ ಅಸಮಬಲವಿರಲವನು ಕುಸುಮಾಕ್ಷಗ್ವೈರೈನಿಸಿ ಅಸುವ ಕಳೆದುಕೊಂಡ 1 ಆರಿಂದ ಮರಣವು ಬಾರದಂತ್ಹಿರಣ್ಯ ಕೋರಿಕೊಂಡ್ಹರನಿಂದ ಮೀರಿ ಮೆರೆಯುತಲಿ ಮೂರುಲೋಕಗಳನ್ನು ಘೋರಿಸಲತಿಶಯ ಮಾರಜನಕ ಮುನಿದು ಸೇರಿಸಿದೆಮಪುರ 2 ಹರನು ಭಸ್ಮಗೆ ಬಲಪರಿಪೂರ್ಣವಾಗಿ ತ ನ್ನುರಿಹಸ್ತ ವರವನ್ನು ಕರುಣಿಸಿಯಿರಲು ದುರುಳಂಗೆ ಘನತರ ಹರನ ಕರುಣವಿರಲು ನರಹರಿ ತಡೆಯದೆ ಉರುವಿದ್ಯರಲವದಿ 3 ನೂರುಯೋಜನ ಮಹ ವಾರಿಧಿಯೊಳು ಮನೆ ಆರು ಕೋಟ್ಯಾಯುಷ್ಯ ಶೂರತಮ್ಮನ ಬಲವು ಮೀರಿದವರ ಬಲ ಮೇರಿಲ್ಲದೈಶ್ವರ್ಯ ಸಾರಸಾಕ್ಷನು ಮುನಿಯೆ ಹಾರಿತು ನಿಮಿಷದಿ 4 ಪರಿ ಬಲವಿರ್ದು ಸಾಫಲ್ಯಹೊಂದದೆ ಲೋಪಾಯಿತು ಸರ್ವರಾಪಾರ ಬಲವು ವ್ಯಾಪಿಸಿ ತ್ರೈಜಗ ಕಾಪಾಡ್ವ ಶ್ರೀರಾಮನಪ ರೂಪಪಾದಕೃಪೆ ನೋಂಪಿ ಸಂಪಾದಿಸದೆ 5
--------------
ರಾಮದಾಸರು