ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಎ) ಹರಿದಾಸವರ್ಗ ಏನು ಸುಖವೊ ಎಂಥಾ ಸುಖವೊ ಹರಿಯಧ್ಯಾನ ಮಾಡುವರ ಸಂಗ ಪ ತಂಬೂರಿ ಮೀಟುತ ದ್ವಯಅಂಬಕದಿ ಬಾಷ್ಪ ಬಿಂದುತುಂಬಿ ಆನಂದದಿಂದಸಂಭ್ರಮವಾಗಿಹರ ಸಂಗ 1 ಗೆಜ್ಜೆಯ ಕಾಲಲ್ಲಿ ಕಟ್ಟಿಲಜ್ಜೆಬಿಟ್ಟು ಹರಿಯ ನಾಮಗರ್ಜನೆ ಮಾಡುತ್ತ ಅಘ-ವರ್ಜಿತರಾಗಿಪ್ಪರ ಸಂಗ 2 ಪುಷ್ಪದಿ ಸುಗಂಧ ಹ್ಯಾಗೆಇಪ್ಪುದೊ ತದ್ವತು ಜಗ-ದಪ್ಪ ಬ್ರಹ್ಮಾದಿಗಳೊಳಗಿಪ್ಪನೆನ್ನುವರ ಸಂಗ 3 ತುಚ್ಛ ವಿಷಯವ ತೊರೆದುನಿಶ್ಚಲ ಭಕುತಿಯಿಂದಅಚ್ಯುತಾನಂತನ ಪಾದಮೆಚ್ಚಿಸಿದವರ ಸಂಗ4 ದರ್ವಿಯಂತೆ ಜೀವವನ್ನುಸರ್ವತ್ರ ತಿಳಿದು ಶೇಷಪರ್ವತವಾಸನ ಕಂಡುಉರ್ವಿಯೋಳಿಹರ ಸಂಗ 5 ನಡೆವುದು ನುಡಿವುದುಕೊಡುವುದು ಕೊಂಬುವುದುಒಡೆಯನ ಪ್ರೇರಣೆಯೆಂದುನುಡಿದು ಹಿಗ್ಗುವರ ಸಂಗ 6 ಸಿರಿ ಕೃಷ್ಣ-ಗಿಷ್ಟರಾಗಿಪ್ಪರ ಸಂಗ7
--------------
ವ್ಯಾಸರಾಯರು
ಗಂಡ ಎನಗೆ ಹಾದರ ಮಾಡೆಂದು ಹೇಳಿದನು | ಭೂಮಂಡಲದೊಳಗೆಂಥ ಪುಣ್ಯ ಪುರುಷನವ್ವಾ ಪ ಹತ್ತು ಮಂದಿಯೊಳಗೆ ನಾನು | ಗುತ್ತಿಗಿಲಿದ್ದೆನೇ | ಮತ್ತೆ ಎನ್ನ ಕರೆದು ಒಯ್ದು | ಬ್ಯಾರೆ ಇಟ್ಟನೇ | ಅತ್ತ ಇತ್ತ ನೋಡ ಬೇಡ | ಇನ್ನು ಎಂದನೇ | ಕತ್ತಲೆಯ ತೆಗೆದು ಸುತ್ತ | ಬೆಳಕ ತಂದನೇ1 ಆರು ಮನಿಯ ಮೇಲಕಿನ್ನು | ಏರು ಎಂದನೇ | ಆರು ಮಂದಿ ನಾದಿನೇರ ಮೂಗ ಕೊಯ್ದನೇ | ಮೂರು ಕೋಣೆಯೊಳಗೊಬ್ಬನ | ತೋರಿ ಕೊಟ್ಟನೇ | ಆರ ಅಂಜಿಕೇನವನೊಳು | ಸೇರು ಎಂದನೇ 2 ಇಂದು ಬಂದನೇ | ಒಂದು ಮಾತಿನಿಂದ ಜೀವವನ್ನು ಕೊಂದನೇ | ಹಿಂದೆ ಹತ್ತಿ ಬಾರದಂತೆ ಮುಂದೆ ನಿಂತನೇ | ಕುಂದು ಕೊರತೆಯೆಲ್ಲ ತೆಗೆದು | ಆನಂದವಿಟ್ಟನೇ 3
--------------
ಭಾವತರಕರು