ಒಟ್ಟು 24 ಕಡೆಗಳಲ್ಲಿ , 17 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸತ್ಯಬೋಧರು ನೋಡಿ ಧನ್ಯನಾದೆ ಸತ್ಯಬೋಧರಾಯಾ ಬೇಡಿದೊರುವ [ಬೇಡಿದ ವರವ] ನೀಡುವ ಪರಮದಯಾಕರನಾ ಪ ರಘುರಾಮನ ಸೇವೆಯನ್ನು ಮಾಡ್ದ ಮಹಿಮನಾ ಪೊಗಳಿ ಪಾಡುವರಿಗೆ ಮುಕ್ತಿ ಪಥವ ತೋರ್ವನಾ 1 ವಿಷವ ಮೆದ್ದು ಹರಿಕೃಪೆಯಿಂ ಜೀರ್ಣಿಸಿದವನಾ ಆಶೀರ್ವದಿಸಿ ಖಂಡೆರಾಯನುದ್ಧರಿಸಿದವನಾ 2 ವರಭೂಸುರರಾಡಿದ ನಿಂದೆಯನು ನುಡಿಯನಾ ತ್ವರದಿ ಕೇಳಿ ತೋರಿದನು ಇವನು ಸೂರ್ಯನಾ 3 ಕೊಡು ಭಕುತಿಯನು ನಿನ್ನೊಳು ಗುರುಸತ್ಯಬೋಧನೆ ಬಿಡಿಸೊ ನಿನ್ನ ಅಡಿಗೆ ಕಟ್ಟಿಕೊಳೈ ಕೊರಳನೆ 4 ಹರಿವಾಯುಗಳಲಿ ಕೊಡು ನೀ ನಿಜ ಭಕುತಿಯನೆ ವರದ ಶ್ರೀ ಹನುಮೇಶವಿಠಲನಡಿ ಸೇವಕನೇ 5
--------------
ಹನುಮೇಶವಿಠಲ
(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ಜಯತೀರ್ಥರು) ಜಯತೀರ್ಥರೇ ನಮ್ಮ ಸುಮತೋದ್ಧಾರಕರು ಮಳಖೇಡ ನಿಲಯರು ಪ ಪೂರ್ಣಪ್ರಜ್ಞರಲಿ ಪಶುರೂಪ ತಾಳಿ ಭಾಷ್ಯಗಳ ಪೇಳಿ ಜೀರ್ಣಮಲಿನ ಮೂಢಮತಗಳಿಗೆ ದಾಳಿ ಈ ಗ್ರಂಥಗಳ್ಹೇಳಿ ಪೂರ್ಣಬೋಧ ಗುರುಮತವಾರ್ವವ ಪೇಳಿ ಸುಜ್ಞರಾದರು ಮುದ ತಾಳಿ 1 ಇದೇ ದೇಶಪಾಂಡೆರೊಳುದ್ಭವಿಸೆ ನರಜನ್ಮ ವಹಿಸಿ ಪದಪಿನಿಂದ ಗೃಹಸ್ಥಾಶ್ರಮವನುಸರಿಸಿ ಸಂಸಾರದಿ ಬೆರಸಿ ಕುದರಿ ಏರಿ ಪೊಳೆ ನೀರಿಗೆ ಬಾಯಿ ಸರಿಸಿ ಬಹು ನೀರಡಿಸಿ ಸದಮಲಕ್ಷೋಭ್ಯರು ಪಶುವೆಂದುಚ್ಚರಿಸಿ ಪೂರ್ವ ಜನ್ಮ ಸ್ಮರಿಸಿ 2 ಕ್ಷಿಪ್ರದಿ ಯತ್ಯಾಶ್ರಮವೆ ತಾಳಿದರು ಟೀಕವ ಕೈಗೊಂಡರು ಸುಪ್ರಸಿದ್ಧ ಹರಿಮತವನುದ್ಧರಿಸಿದರು ವ್ರತಗಳ ಪೇಳಿದರು ವಿಪ್ರವರ್ಗಕೆ ಹರಿಮಾರ್ಗವ ತೋರಿದರು ಹರಿಮತ ತತ್ವಜ್ಞರು ಸುಪ್ರಸಿದ್ಧ ನರಸಿಂಹವಿಠಲತರು ಶತಪತ್ರ ಶೇಷಾಲಂಕೃತರು 3
--------------
ನರಸಿಂಹವಿಠಲರು
ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಇ. ಗುರುನಮನ ವಿಷ್ಣುತೀರ್ಥರೆ ಪಾಲಿಸೀ ನಿರಂತರ ಮಧ್ಯಗೇಹರ ಸುತನೆನಿಸಿರ್ದ ಗುರುವರ ಪ ಮಧ್ವಶಾಸ್ತ್ರವು ಜೀರ್ಣವಾಗುವ ಸಮಯದಿ ಬದ್ಧಾದರದಿ ಬಂದುದ್ಧರಿಸುವ ಗುರುವರ 1 ಜಾನಕೀಪತಿಯೊಳು ಲಕ್ಷುಮಣನಂತೆ 2 ವಾಲ್ಮೀಕಿಗಳ ಶಿಷ್ಯಕುಶಲವರಂತೆಯೇ ಚೆಲ್ವ ವ್ಯಾಸರು ಅನಿರುದ್ಧರು ನಿಮಗೆ 3 ಪಾಜಕ ಕ್ಷೇತ್ರದೊಳ್ಸನ್ಯಾಸಾಶ್ರಮಿಯಾಗಿ ರಾಜೇಶ ಹಯಮುಖ ಕೃಷ್ಣನರ್ಚಿಸಿದ 4
--------------
ವಿಶ್ವೇಂದ್ರತೀರ್ಥ
ಇಂದರೆ ರಮಣಾ ಇಟ್ಟಾಂಗಿರಬೇಕು ಪ ಒಮ್ಮಿಗೆ ಕದಶನ ಶಾಖಾ ಆಹಾರವ ನೀಡುವನು ಒಮ್ಮಿಗೆ ಷೆಡ್ರಸದ್ದನ್ನವ ಸಾರುಣಿಸುವನು 1 ಒಮ್ಮಿಗೆ ಜೀರ್ಣ ಕಂಥಾಧಾರಿಯೆನಿಸುವನು| ಒಮ್ಮಿಗೆ ದಿವ್ಯಾಂಬರಗಳ ನುಡಿಸಿ ನೋಡುವನು 2 ಒಮ್ಮಿಗೆ ಧರಿಯಲಿ ತೋಳತಲೆದಿಂಬದಲಿಡುವಾ| ಒಮ್ಮಿಗೆ ಪರ್ಯಾಂಕಾಸನ ಸಂಪದ ಕೊಡುವಾ 3 ಒಮ್ಮಿಗೆ ಕವಡಿ ಲಾಭಕ ಕೃತ-ಕೃತ್ಯೆಯೆನಿಸುವನು ತಂದೆ ಮಹಿಪತಿ-ಕಂದಗ ಸಾರಿದ ನಿಜ ಖೂನಾ 4 ತಂದೆ ಮಹೀಪತಿ-ಕಂದಗ ಸಾರಿದ ನಿಜ ಖೂನಾ| ದ್ವಂದ್ವ ಗೆಲಿದು ಸ್ವಾನಂದದಲಿರುವವನೇ ಜಾಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ
ಗುರು ಚರಣವನು ಸಂಸ್ಮರಿಸಿರೋ ಪಗುರು ಲಕ್ಷ್ಮಿ ವರಜಾತ | ಗುರು ಲಕ್ಷ್ಮಿಪ್ರಿಯ ತೀರ್ಥ ಚರಣ ಸರಸಿಜ ಭಜಿಸೆ | ಕರಣದಂತರ ಬಾಹ್ಯ ಪರಿಶುದ್ಧಿಯನೆ ಗೈದು | ಜ್ಞಾನ ಭಕ್ತಿಯನಿತ್ತು ಹರಿ ಪೊರೆವ ಸಂತತದಲಿ ಅ.ಪ. ಪೂರ್ವಾಶ್ರಮಾ ನಾಮ | ಭೂವಿಬುಧ ಕೃಷ್ಣಾಖ್ಯ ದೇವರಾಯನ ದುರ್ಗ | ದಾವ ನರಸೀಪುರದಿಆವಾಸಿಸುತ್ತಿರಲು | ಓರ್ವ ಸಖನಿವರ ಜ್ಞಾನಾನುಸಂಧಾನದಾ |ಭಾವ ತಿಳಿಯುತ ಮನದ | ಯಾವ ದೊಂದಭಿಲಾಷೆನೀವು ಸಲಿಸುವುದೆನ್ನೆ | ಆವುದೆನುತಲಿ ಕೇಳೆಯಾವ ಪನಸದ ಫಲವ | ಆಸ್ವಾದು ಮಧು ಒಡನೆಓವಿ ಕರಡಿಯು ಕಲಸಿದ 1 ಅದರ ಪ್ರಾಪುತಿಗಾಗಿ | ಬದಿವನನೊಂದಿನವುಬೆದರದಲೆ ಪೊಗುತಿರಲು | ಎದುರೊಂದು ಶಿಲೆ ಮೇಲೆವದಗಿ ಕಲಸಿದ ಕಂಡು | ಅದರೊಡನೆ ಮರನೇರೆ ಬಂದಿತದು ಮರಿಗಳೊಡನೆ |ಅದಕು ಇವರಿಂಗಾಯ್ತು | ಕದನವೂ ಕೆಲಕಾಲ ಒದಗೆ ಜಯ ವಿಬುಧರಿಗೆ | ಹದುಳದಲಿ ಗೃಹಸೇರಿಮುದದಿಂದ ಶ್ರೀಹರಿಯ | ಪದ ಸ್ಮರಣೆಯಲ್ಲವರು ದಿನಗಳನೆ ಕಳೆಯುತಿಹರು 2 ಯತಿ ಲಕ್ಷ್ಮಿ ವರರಿಂದ | ಯತಿಗಳಾಶ್ರಮ ಪೊಂದಿಹಿತದಿಂದಲಾ ಬೂದಿ | ನೆತ್ಯಾಖ್ಯ ಗ್ರಾಮದಲಿಸ್ಥಿತರಾಗಿ ಶಿಷ್ಯರಿಗೆ | ಹಿತದ ಉಪದೇಶವ ಪ್ರೀತಿಯಲಿ ಮಾಡುತಿರಲು |ಯತಿಗಳಾಶ್ರಮದಲ್ಲಿ | ಮತಿ ವಂತ ವಿಪ್ರೋರ್ವಕ್ಷಿತಿಯೊಳಾ ನಾಕನಿಭ | ಮಂತ್ರ ಮಂದಿರ ಸೇವೆ ಅತಿಹಿತದಲೆಸಗುತಿರೆ | ಯತಿಗಳಾಶೀರ್ವದಿಸೆ ಪಥವಾಯ್ತು ಪ್ರಿಯರಲ್ಲಿಗೇ 3 ಪತಿ ಸೇವೆ | ಯುಕುತನಾಗಿರಲ್ವೊರೆದು ನಾಲ್ವತ್ತು ದಿನ ಮಿತಿಯಲಿ |ಕಕುಲಾತಿ ತೊರೆದು ನಿಜ | ಭಕುತಿಯಿಂ ಗೈವುತಿರೆಲಕುಮಿ ಪ್ರಿಯರಾಚಾರ | ಉಕುತಿಯಲಿ ದುರ್ಭಾವಪ್ರಕಟವಾಗಲು ಮನದಿ | ಬಂಕಪುರ ಮಾರ್ಗವನೆ ತೆರಳಲನುವಾದನೂ 4 ಮತ್ತೆ ನರಹರಿ ತಾನು | ವ್ಯಕ್ತಯಿಂತೈಜಸನುಒತ್ತಿಪೇಳಲು ಬುಧನು | ಮತ್ತೆ ಗುರುಪದಕೆರಗಿಬಿತ್ತರಿಸೆ ತನ್ನಸ್ವಪ್ನ | ವಾರ್ತೆಗಳ ವಿಶ್ವಮಿತ್ರನ ಭಾವವನೆ ತೋರುತ |ಇತ್ತಲಿಂದೆರಡೊರ್ಷ | ಕಿತ್ತಪೆವು ಆಶ್ರಮವಆರ್ಥಿಯಿಂದಿರುತಿರ್ದು | ಹಸ್ತಿವರದನ ಸೇವೆಉತ್ಸಹದಲೆಸಗುವುದೆ | ನುತ್ತಲಾಶೀರ್ವದಿಸಿ ಚಿಂತಿಸುತ್ತಿರೆ ಹರಿಯನು 5 ಗ್ರಾಮದೊಳಗುಳ್ಳ ಖಲ | ಸ್ತೋಮ ಬಂದಡರುತ್ತಭೂಮಿ ಗೋಸುಗ ಕಲಹ | ಸೀಮೆ ಮೀರುತ ಗೈಯ್ಯೆಅ ಮಹಾಯತಿವರ್ಯ | ಭೂಮಿ ಕೃಷ್ಣಾಂಕಿತವುಕಾಮನೆಯ ಬಿಡಿರೆನುತಲಿ | ನೇಮದಲಿ ಘರ್ಜಿಸಲು |ಆ ಮಹಾ ದುಷ್ಟಜನ ಈ ಮರದ ಸಂಪದವ ಕಾಮಿಸುತ ಮನದಲ್ಲಿನೇಮದಿಂ ಪತ್ರೋರ್ವ | ಪಾಮರನ ಒಡನವರು ಯಾಮ ಸಂಜೆಲಿ ಕಳುಹಲು 6 ಪರಿವಾರ ಜನಕೆಲ್ಲ | ಇರುವ ನೆಲೆ ಬಿತ್ತರಿಸಿಸರಿಯುತಲಿ ಸುಕ್ಷೇಮ | ನೆರೆಯ ಸಾರುವುದೆನುತಒರೆಯಲೂ ಕೆಲವರು | ಮರೆಮಾಡಿ ತೃಣ ಬಣವಿ ನೆರೆ ಬಿಡದೆ ಸಾರುತಿರಲು |ವರನಿಶೀ ಸಮಯದಲಿ | ದುರುಳರೆಲ್ಲರು ಮಠಕೆಬರಬರುತ ಕವಣೆಕಲ್ | ನೆರೆಬೀರ್ವ ಜನಗಳೂಉರಿವ ತೃಣ ಬಣವಿಯಂ | ದುರೆ ಜ್ವಾಲೆ ಪರಿಕ್ರಮಣ ಭಯ ಭ್ರಾಂತಿಯಿಂದಿರುತಿರೆ 7 ಸಿರಿ ಹರಿಯ ನಮಿಸುತಿರಲು 8 ಪರಿ | ಚರರಿಘರಸುತ್ತ ಬಲುಪರಿಯ ಹರಿ ಮಹಿಮೆಗಳ | ಒರೆಯುತಾನಂದಾಶ್ರೂ ಸುರಿಸುತವ ಶೇಷನಿಶಿ | ಹರಿಕರುಣ ಸ್ಮರಣೆಯಲಿ ಸರಿಸಿದರು ಶಿಷ್ಯರೊಡನೇ 9 ಗರ ಮಿಶ್ರ | ಯತಿಗೆ ಬಡಿಸೇ ಜೀರ್ಣಿಸುತ ಪಾಪಿ ವಿಪ್ರರ್ಗೆ | ಗತಿಸಿದವು ಅಕ್ಷಿಗಳು ಮೃತ್ಯಂತಲಂದರಾಗಿ 10 ಗರ ಮಿಶ್ರ | ಸತ್ಯವಾದುದ ಕಂಡು ಪ್ರೋಕ್ಷಿಸಲು ಶಂಖದುದಕ |ವ್ಯಕ್ತವಾಯಿತು ಇವರ | ಉತ್ತುಂಗ ಮಹಿಮೆಗಳುಹಸ್ತಿವರದನು ಭೋಜ್ಯ | ವಸ್ತುಗಳ ಸ್ವೀಕರಿಸಿದತ್ತ ಮಾಡಲು ಪುನಃ | ಮತ್ತೆ ಜೀರ್ಣಿಸಿಕೊಂಡು ಹರಿಯನ್ನೆ ಚಿಂತಿಸುತಲಿ 11 ನೆಲೆಸಿರಲ್ಲಬ್ಬುರೊಳು | ಗಳ ಗ್ರಾಹಕರು ಮತ್ತೆಮಿಳಿತರಾಗುತ ರಾತ್ರಿ | ಛಲವ ಸಾಧಿಸೆ ನಿಶಿತಅಲಗು ಕತ್ತಿಯ ಪಿಡಿದು | ನೆಲಕೆ ಯತಿ ಶಿರವನ್ನು ಇಳಹುವ ಮತಿ ಮಾಡಲೂ |ಒಲವಿನಿಂ ಯತಿಯಕುಲ | ತಿಲಕ ವೃಂದಾವನವ ಬಳಸಿ ನಮಿಸಲು ಸಂಜೆ | ಯಲಿ ಪೇಳ್ದ ಬ್ರಹ್ಮಣ್ಯಒಳ ಪೊಗುತಲಾರಾಮ | ನೆಲೆಸೇರಿ ಮಠಸಾರಿ ಎಂದೆನುತ ಎಚ್ಚರಿಸಿದರ್12 ಮತ್ಸರಿಗಳಿನ್ನೊಮ್ಮೆ | ಕುತ್ಸಿತದ ಬುದ್ಧಿ ಮಹಉತ್ಸವದ ಸಮಯದಲಿ | ಹೆಚ್ಚು ಜನ ಸಂಧಿಸಿರೆನೆಚ್ಚಿದ್ದ ಪಾಚಕರು | ಉಚ್ಚಳಿಸಿ ಕೆಲಸಾರೆ ಕೆಚ್ಚಿದೆಯನೇ ತೋರುತ |ಮುಚ್ಚಿಮಠದ್ವಾರಗಳ | ಹೆಚ್ಚುತಲಿ ಪಲ್ಯಗಳ ಮತ್ಸಕೇತನ ಪಿತನು | ಮೆಚ್ಚುವಂದದಿ ಪಾಕಪೆಚ್ಚಿಸುತಲಿ ಹರಿಯ | ಅರ್ಚನೆಯ ಕೈಕೊಂಡು ಮೆಚ್ಚಸಿದರು ಸುಜನರ 13 ಜ್ವರತಾಪದಿಂದೊಮ್ಮೆ | ನೆರೆ ಬಳಲು ವಂತಿರ್ಪಗುರುವರರ ಕಂಡೋರ್ವ | ವರ ಶಿಷ್ಯ ಪ್ರಶ್ನಿಸಲುನೆರೆ ಬದುಕ ಬೇಕೆಂಬ | ಶರಿರವನೆ ತೊರೆವೆ ನೆಂಬೆರಡುಕ್ತಿ ಸಲ್ಲದಿದಕೊ |ನರರಾಡಿ ಕೊಳದಂತೆ | ವರ ಭಿಷಜ ತಾಕೊಟ್ಟವರಗುಳಿಗೆ ನುಂಗುವೆವು | ಹರಿ ಪೂಜೆ ವಿರುದ್ಧಜ್ವರ ಕುಂಟಿ ಧನ್ವಣತ್ರಿ | ವರಮಂತ್ರ ಕೈ ಸೇರಿ ಪರಿಪರಿ ಮೆರೆಯುತಿರಲು 14 ಯತಿವರರ ಮಹಿಮೆಗಳ | ತುತಿಸಲೆನ್ನಳವಲ್ಲಯುಕ್ತಿಯಲಿ ಅಪವಾದ | ಹೊತ್ತು ಕೊಳದಲೆ ಅವರು ಜಿತ ಇಂದ್ರಿಯತ್ವವನು | ಮತಿಮತಾಂ ಸುಜನಕ್ಕೆ ಪ್ರತಿರಹಿತದಿಂ ತೋರುತ |ಹಿತದಿಂದ ಲಾರಾಮ | ಸೇತು ಯಾತ್ರೆಯ ಗೈದುಕ್ಷಿತಿ ಚರಿಸಿ ಬರಬರುತ | ಹಿತಶಿಷ್ಯ ವ್ಯಾಜದಿಂಸತ್ಯ ಧೀರ್ರನು ಚರರ | ಕೃತ ಬಹಿಷ್ಕರ ಗೆಲ್ದು ಶಾಂತತೆಯನೇ ತೋರ್ದರು 15 ವರಲಕ್ಷ್ಮಿ ಪ್ರಿಯ ತೀರ್ಥ | ಕರಗಳಿಂದರ್ಚಿತವುಪರಿಸರಾರ್ಚಿತ ಯೋಗ | ನರಹರಿಯು ವ್ಯಾಸಮುನಿವರದ ಗೋಪತಿ ಕೃಷ್ಣ | ಸಿರಿವ್ಯಾಸಯತಿ ರಚಿತ ಎರಡೇಳು ರಜತ ಪ್ರತಿಮೆ |ಗುರುವರ ಬ್ರಹ್ಮಣ್ಯ | ವರದ ವಿಠ್ಠಲದೇವಸರ್ವಜ್ಞರರ್ಚಿಸಿದ | ವರ ಶರಣ್ಯ ವಿಠಲನುನಿರುತ ಪೂಜಿತವಾಗಿ | ಶರಿರ ಭೌತಿಕ ಬಿಡುವ ವರ ಸಮಯ ತಾನುಸುರಿರೆ16 ಸಂತೈಸಿ ಇತ್ತರಾಶಿಷವ 17 ನೀಲ ಕಾಲ | ವರುಷವನು ಪೈಂಗಳವು | ಎರಡೊಂದನೇ ಮಾಸವರಶುಕ್ಲ ಹರಿದಿನದಿ | ಸರಿತು ವರ ಕಣ್ವತಟಪರಮ ಸುಕ್ಷೇತ್ರದಲಿ | ವರಯೋಗ ಮಾರ್ಗದಲಿ ದೇಹ ಹರಿಗರ್ಪಿಸಿದರು 18 ಜಯ ಜಯತು ಶುಭಕಾಯ | ಜಯಜಯತು ತಪಶೀಲಜಯ ಶಮೋದಮವಂತ | ಜಯ ಶಾಪನುಗ್ರಹನೆಜಯಲಕ್ಷ್ಮಿ ವರಜಾತ ಜಯಲಕ್ಷ್ಮಿ ಪ್ರಿಯ ತೀರ್ಥ ಜಯ ಜಯತು ವಿಶ್ವಮಿತ್ರ |ಪ್ರಿಯ ಗುರುಗಳಾಂತರ್ಯ | ಜಯ ದೇವ ನೋಳ್ಪರಮಪ್ರಿಯನಾದ ತಂದೆ ಮುದ್ದು | ಮೋಹನ್ನ ವಿಠಲಾತ್ಮಜಯ ಗುರೂ ಗೋವಿಂದ | ವಿಠ್ಠಲನ ಭಜಿಸಿದರೆ ನಯಸುವನು ಪರಮಗತಿಗೆ 19
--------------
ಗುರುಗೋವಿಂದವಿಠಲರು
ಜೋ ಜೋ ಸುಖಸಾರ ಪ ಜೋ ಜೋ ಜೋಜೋ ದೋಷ ವಿದೂರ ಅ.ಪ ಸುಮ್ಮನೆ ಸಾಗೆಲೊ ಮುಂದೆ ನಮ್ಮ ಮಗುವು ತಾ ಮಲಗಿಹನಿಂದು ನಿಮ್ಮ ಮಂದಿಗೆ ಈ ಶಿಶುವು ಬೊಮ್ಮನು ಫಣಿಯಲಿ ಬರೆದಿಹನೇನೊ 1 ನಿದ್ರೆಯ ಸುದ್ದಿಯ ಕಾಣದ ನಾನು ನಿದ್ರೆಯ ಮಾಡುವ ಸಡಗರವೇನು ಮುದ್ದು ಮಾತುಗಳಲಿ ಫಲವೇನು ನಿದ್ರೆ ನಾ ಮಾಡಲು ಎದ್ದಿರುವರ್ಯಾರು2 ನಿದ್ರೆ ಮಾಡುವುದೆಂತು ಬೇಕಾದ ಜೋಗುಳ ಪಾಡುವೇನೊ ಏಕಮನದಿ ನೀ ಪ್ರಾಜ್ಞನ ಕೂಡೊ ದಧಿ ಕ್ಷೀರಗಳು ನಾಕು ನಿಮಿಷದಲಿ ಜೀರ್ಣವಾಗುವುವೊ 3 ಕಣ್ಣನು ಮುಚ್ಚಿದೆ ಪ್ರಾಜ್ಞ ನಾನು ಚನ್ನಾಗಿ ತಬ್ಬಿದೆ ನೋಡಮ್ಮ ಎನ್ನಯ ಕುಕ್ಷಿಯು ಬರಿದಾಯ್ತು ಇನ್ನು ಪ್ರಸನ್ನಳಾಗುಣಬಡಿಸಮ್ಮ 4
--------------
ವಿದ್ಯಾಪ್ರಸನ್ನತೀರ್ಥರು
ದೇವಿ ನೀ ಗಿರಿಜಾತೆಯು ನಿನ್ನಯ ಕಾಂತ ರಜತಾಖ್ಯಗಿರಿನಾಥನು ನೀನು ಭವಾನಿಯು ನಿನ್ನ ಕಾಂತನು ಭವದೇವನಾಗಿರುವ ಪ ನಿನ್ನ ಯೌವನಭಂಗದ ಭೀತಿಯ ಕಂಡು ವಿಘ್ನೇಶನನು ಪುಟ್ಟಿಸಿ ಪ್ರಣಾತ್ಮಗಳನೊಬ್ಬ ತನುಜಗೆ ಕಲ್ಪಿಸಿ ಕೃತಕೃತ್ಯನಾದ ನಿನ್ನರಸ ಕಾಣಮ್ಮ 1 ನಿನ್ನ ಕಾಂತನು ಪಾರ್ಥನಿಗೆ ಬಾಣವನೀಯಲು ನೀನು ಅಂಜಲಿಕಾಸ್ತ್ರವನು ಪ್ರೇಮದಿ ನಿನ್ನ ಕಾಂಚನ ಚಿತ್ತವರಿತು ಕೊಡಲು ನಿನ್ನೊಳ್ ಪಾರ್ಥಸೂತನ ದಯವೆಷ್ಟೆಂಬೆ 2 ರಾಜೇಶ ಹಯಮುಖನÀ ದಯದಿಂದ ನಿನ್ನ ಪತಿ ವಿಷವ ಜೀರ್ಣಿಸಿಕೊಂಡನು ರಜತಾದ್ರಿಯೊಳಗಿರುವ ಶಿತಿಕಂಠ ಶಂಕರನ ಮಹಿಮೆಯದ್ಭುತವಲ್ಲವೇ ಪೇಳು ಗಿರಿಜೆ 3
--------------
ವಿಶ್ವೇಂದ್ರತೀರ್ಥ
ನಮೋ ನಮೋ ಶ್ರೀ ರಾಘವೇಂದ್ರ | ಸದ್ಗುಣ ಸಾಂದ್ರ ಕಮಲ ನಾಭನ ದಾಸ ಕಮಲಾಪ್ತ ಭಾಸಾ ಪ ಶೇಷ ಜನರಿಗಳಿಗಿಷ್ಟ ಸಲ್ಲಿಸುವ ವಿಶಿಷ್ಟಾ ಭಾಸುರ ಚರಿತನೆ ಭಜಿಸುವೆನು ಅನವರತ 1 ಭೂರಿ ಬಲತರತರ್ಕ ವಾದಿಶೈಲ ಕುಲಶ ವರಹಸುತೆ ವಾಸಾ ಅಘ ಜೀರ್ಣ ಮಾಡು ಗುರುವರ ಪೂರ್ಣ ಭೂರಿ ಪ್ರಖ್ಯಾತ 2 ನತಜನಾಶ್ರಯ ಪ್ರೀಯ ನೆರೆ ನಂಬಿದೆನೋ ಮಾಯ ಕದಳಿ ಗಜೇಂದ್ರ ವಿಬುಧಾಬ್ದಿ ಚಂದ್ರ ಕ್ರತು ಭುಕು ಜಗನ್ನಾಥ ವಿಠಲನ ನಿಜದೂತ ತುತಿಸಲಾಪೆನೆ ನಿನ್ನ ಯತಿಶಿರೋರನ್ನ 3
--------------
ಜಗನ್ನಾಥದಾಸರು
ನಿಖಿಳ ಜನರು ಬಂದು ಮನ್ನಿಸುವರೊ ಮಹರಾಯ ಪ ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ ನಿನ್ನದೆ ಸಕಲ ಸಂಪತ್ತು ಅ.ಪ ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು ತಬ್ಬಿಬ್ಬುಗೊಂಡನೊ ಹಿಂದೆ ನಿಬ್ಬರದಿಂದಲಿ ಸರ್ವರ ಕೂಡುಂಬೊ ಹಬ್ಬವನುಣಿಸುವಿ ಹರಿಯೆ 1 ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ ಗಂಜಿ ಕಾಣದೆ ಬಳಲಿದೆನೋ ವ್ಯಂಜನ ಮೊದಲಾದ ನಾನಾ ರಸಂಗಳು ಭುಂಜಿಸುವುದು ಮತ್ತೇನೊ2 ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ ಊರ್ಣ ವಿಚಿತ್ರ ಸುವಸನ ವರ್ಣವರ್ಣದಿಂದ ಬಾಹೋದದೇನೊ ಸಂ ಪೂರ್ಣಗುಣಾರ್ಣವ ದೇವ 3 ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ ಚಾಚಿದೆ ನೊಸಲ ಹಸ್ತಗಳ ಯೋಚಿಸಿ ನೋಡಲು ಸೋಜಿಗವಾಗಿದೆ ವಾಚಕ್ಕೆ ನಿಲುಕದು ಹರಿಯೆ 4 ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ ಮೆದ್ದೆನೆಂದರೆ ಈಯಗಾಣೆ ಸತ್ಪಾತ್ರ ಕೂಡುಂಬೊ ಪದ್ಧತಿ ನೋಡೊ ಪುಣ್ಯಾತ್ಮ 5 ಮನೆ ಮನೆ ತಿರಿದರು ಕಾಸು ಪುಟ್ಟದೆ ಸು ಮ್ಮನೆ ಚಾಲ್ವರಿದು ಬಳಲಿದೆನೊ ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ ತಾನೆ ಪ್ರಾಪ್ತಿ ನೋಡೊ ಜೀಯಾ 6 ವೈದಿಕ ಪದವಿಯನೀವಗೆ ಲೌಕಿಕ ಐದಿಸುವುದು ಬಹು ಖ್ಯಾತೆ ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ ಪಾದಸಾಕ್ಷಿಯನುಭವವೊ 7
--------------
ವಿಜಯದಾಸ
ಬಿಡೋ ಇನ್ನು ಬಿಡೋ ಇನ್ನು ಪ ಕಡೆಗಾದರೂ ನಿನ್ನ ಹುಡುಗು ಬುದ್ಧಿಯನು ಅ.ಪ. ಜೀರ್ಣವಾಯಿತು ದೇಹವು ನಿನಗೆ ಜೀರ್ಣವಾಗಲಿಲ್ಲ ನೇಹವು ಕೊನೆಗೆ 1 ವಾಹನ ಮೃಷ್ಟಾನ್ನಗ ಳಾ ಮಹನೀಯನೊಲಿಸವೊ ಮೂಢ 2 ಸ್ನಾನ ದಾನ ಅಧ್ಯಯನಾದಿಗಳಿಗೆ ಶ್ರೀನಿವಾಸ ತಾನೊಲಿಯನೊ ಬರಿದೆ 3 ತಾಳ ಮೇಳ ಸಂಗೀತಾದಿಗಳನು ಕೇಳನು ಪ್ರೇಮದ ಭಾವವಿಲ್ಲದೊಡೆ 4 ಚಿತ್ತ ಮಲಿನವಿದ್ದು ಸತ್ಕಾರವಗೈಯ್ಯೆ ಆಪ್ತ ಕಾಮ ತಾ ತೃಪ್ತಿಯ ಪೊಂದನು 5 ಶ್ರೀಧರ ತಾ ದಯದಿಂದೊಲಿದಲ್ಲದೆ ಸಾಧನ ಮಾತ್ರಕ್ಕೆ ಒಲಿಯಲು ಸಾಧ್ಯವೆ 6 ನಳಿನನಯನನಾಜ್ಞೆಯ ನೀ ಪಾಲಿಸೆ ಒಲಿವನು ನಿಜವಿದು ನಲಿಯುತ ನಿನಗೆ 7 ಮೃಡವಂದಿತ ಶ್ರೀ ಕರಿಗಿರೀಶನೊಳ್ ದೃಢ ಭಕ್ತಿಯನಿಡು ಬಿಡದೆ ಪೊರೆವನೊ 8
--------------
ವರಾವಾಣಿರಾಮರಾಯದಾಸರು
ಭವ ಭಯದಾ ಕೊಳೆ ತೊಳೆÉದಾನಂದವೀವ ಸಾರಂಸಂಸಾರ ಸಾರಂ ಪ. ಸುಳಿದು ಯಮಭಟರೆಳೆಯುವ ಕಾಲದಿ ಪರಿ ಸಾರ ಮನುಜರು ಅ.ಪ. ಅಳಿದವರಾರು ಝಳಝಳ ಮನದಿಂ ಕಳೆಗೊಟ್ಟಿಹ ಪುರುಷನಾರುಂ ಸಲೆ ನಾರದರಲ್ಲದೆ ಯಿದನಂ ಸೆಳೆದುರೆ ಭಕ್ತಿಯೊಳ್ ಹರಿಯಂ ಅಳವಲ್ಲದಾನಂದದಿಂ ಹರಿ ಸುಳಿವ ಪೊಳೆವ ಮನದೊಳಗಿಹನೆನುತಂ ಸಾರಿ ಹರಿದನಂ ಸಾರಂ ಸಂಸಾರಂ 1 ಅರ್ಣವದೊಳು ಭವಾರ್ಣ ನಿರ್ಮಾಣನ ಕರ್ನದೊಳಾಲಿಸಿ ಧ್ವನಿಮಾಡಿ ನಿರ್ಣಯದಲಿ ಸ್ವರ್ಣರೂಪನ ಜೀರ್ಣಿಪ ವೀಣಾನಾದದೀ ಸಾರಂ ಕರ್ಣಾನಂದದಿ ಹಾಡಿದನಾರುಂ ವರ್ಣಾಶ್ರಮ ಧರ್ಮ ಮರ್ಮವರಿತು ಚರ್ಮಸುಖವಳಿದು ಪೂರ್ಣಜ್ಞಾನದ ಪುರಂದರದಾಸರಲ್ಲಿದೆ ಈ ಸಾರಂ ಸಂಸಾರಂ 2 ತರಲಾನಂದದಿಂ ಸರಿಗಮ ಪದನಿಸ ಸನಿದಪ ಮಗರಿಸ ಶೋಡಷಕ್ಷರದಿಂ ತರಲಾ ಸಂಗೀತಕೆ ಸರಳಾಗಿಹ ಹರಿ ನಾಮಾಮೃತವಂ ಧರಿಶಿದ ಪುರಂದರರಂ ಶರಣ ಭರಣ ಕರುಣ ಪಡೆವುದು ನಿರುತ ಹರಿ ಶರಣರೆನುತ ಅರುಹಿದ ಸಂಗೀತವೀ ಸಾರಂ ಸಂಸಾರಂ 3 ಈ ತೆರ ಭಜಿಸಿದಗ್ಯಾತರ ಭಯ ಪಾತಕಹರ ಜಗದೀಶ ಮಾನಸ ದಾತುರದೊಳು ಹರಿ ದಾತನೆಂದರಿತು ನೀತಾಚಾರದಿ ಯಾವಾತ ಸ್ತುತಿಸಲು ಜ್ಯೋತಿ ಪ್ರಕಾಶದಿ ತನುಜಾತನಾಗಿ ಬಹ ಪ್ರೀತಿಗೊಡುತ ಖ್ಯಾತ ಭಕ್ತ ಪಾರಿಜಾತನೆಂದು ತಿಳಿದಾತಗೆ ಇದು ಸಾರಂ ಸಂಸಾರಂ 4 ಭಗವಂತನ ಧ್ಯಾನಿಪನ ಪುಡುಕುತ ಮಿಗೆ ಸಂಚರಿಸುತಲಿಹರೀಗಲು ಭಾಗವತರಿದು ಸತ್ಯಂ ಜಗಕೆ ಜಗದೀಶ ಶ್ರೀ ಶ್ರೀನಿವಾಸನೆಂದು ಮಿಗೆ ಜಗದಾನಂದ ಪುಳಕಿತ ತನುವಿನ ಜೀವರ ಸೊಗವಿಲಿ ನಾಲ್ಮೊಗನೈಯ್ಯನು ಸಿಗುವ ಪರಿಯಗೊಡುತಗಣಿತ ಮಹಿಮರು ಕರುಣಿಸಿದೀ ಸಾರಂ ಸಂಸಾರಂ 5
--------------
ಸರಸ್ವತಿ ಬಾಯಿ
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು