ಒಟ್ಟು 17 ಕಡೆಗಳಲ್ಲಿ , 10 ದಾಸರು , 16 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ | ಕಾಯ ಆನಂದ ನಿಧಿಯ ಪ ತಾಯಿಯಂದದಿ ನಮ್ಮ ಕಾಯುವ ಧಣಿಯಾ ನ್ಯಾಯ ಸದ್ಗುಣ ಪೂರ್ಣ ಮಾಯಿ ಜಗ ಹರಿಯಾ 1 ಮಾಯಾ ರಮಣನ ನಾಮ ಗಾಯನ ಪರನ ದಾಯಾದಿ ಕುಲವೈರಿ ಶ್ರೇಯ ಬಲಯುತನಾ2 ನರರೂಪ ಧರಿಸಿ ವಾನರÀ ಭಕ್ತವರನಾ ನರಶೌರಿ ಪ್ರೀಯ ದೀನರ ಕಾಯುತಿಹರಾ 3 ಜನರನ ಪೊರೆವನೆಂದೆನುತ ಭೂಮಿಯಲಿ ಜನಿಸಿದ ತನ್ನವನ್ನ ವನುತಿ ಸಹಿತದಲಿ 4 ದುರಿತ ವರೆಕೆ ತಾಮುರುತನಾಗಿಪ್ಪ ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ 5 ಭಕ್ತರ ಬಯಕೆ ಪೂರೈಪಾ ಸುರತರುವೇ ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6 ಭುವನದಿಂ ದಾಟಿಸೆ ನೌಕವಾಗಿಹಿನಾ ನವ ಭಕುತಿಯನೀವ ಕುವಿಕುಲ ವರನಾ 7 ಇವನೇ ಗತಿಯೆನೆ ಜ್ಞಾನ ತವಕದಿ ಕೊಡುವಾ 8 ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ ವಂದಿಪ ಜನರಿಗೆ ಸತತ ಶ್ರೀ ರಾಮ 9 ಶ್ರೀನಿವಾಸ ಪುತ್ರ ಪರಮ ಪವಿತ್ರಾ ಜ್ಞಾನಿ ಜನರ ಮಿತ್ರ ವಿಹಿತ ಚರಿತ್ರಾ 10 ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11 ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ 12 ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ 13 ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ ಭವ ತ್ರಾತಾ 14 ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ 15 ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ ಸರಸಿಜ ಪೋಲ್ವ ಮೃದುತರ ಪಾದಯುಗಳಾ 16 ವಲಿದ ಭಕ್ತರಿಗಿಷ್ಟ ಸಲಿಸುವ ಪಾದ17 ಸಕಲ ರೋಗವ ಕಳೆವ ಅಕಳಂಕ ಪಾದ ಪಾದ 18 ಹರಿಯಂತೆ ಹರನೊಲ್ ಸಾಸಿರ ನಯನನಂತೆ ಶಿರಿಯಂತೆ ತೋರ್ಪ ಭಾಸ್ಕರ ನರನಂತೆ 19 ಸುಳಿರೋಮಗಳುಳ್ಳ ಚಲುವ ಜಾನುಗಳಾ ಎಳೆಬಾಳೆ ತೆರ ಊರು ಹೊಳೆವ ಸುಚೈಲ 20 ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ ನಟ ಶೇವಸಿವಲಿ ತಾನು ಪುಟಿಯು ಉದರಾ 21 ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ 22 ಹುತವಾಹನನಂತೆ ಭಾರತೀಕಾಂತನಂತೆ ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ23 ಹಸುವಿನಂದದಲಿ ಪಾಗಸನೊಳಿಹನ ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ 24 ಭೂಧರತನಂತೆ ವಸುಧರನಂತೆ ಭೂಧರನಂತೆ ಸೋದರನಂತೆ 25 ಚರ್ಚಿತ ಸುಂದರ ರೂಪ ಕಂಬು ಲೋಕ ಕಂಧರಾಯುತನ 26 ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ ವರ ರೇಖೆಯುತ ಶಿರಕರದಾ ವೈಭವನಾ 27 ಮಂಗಳದಾಯಕ ಅಂಗೈಯಿಯುಗಳಾ ಭಂಗಾರ ದುಂಗಾರ ಇಟ್ಟಿಪ ಬೆರಳು 28 ಕೆಂದುಟಿ ಮೊದನಾಗಿ ಇಂದಿಪ್ಪ ವದನಾ ಪೊಂದಿದ ದಂತಗಳಿಂದ ಸ್ವಾರಚನಾ29 ಹಸನಾದ ದೊಕರದಂತೆಸೆವ ಗಲ್ಲಗಳಾ ಬಿಸಜದಂತೆ ರಾಜಿಸುವ ನೇತ್ರಗಳಾ 30 ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31 ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ 32 ಹರಿಪಾದ ಜಲವನ್ನು ಧರಿಸಿದ ಶಿರವಾ ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ33
--------------
ಅಸ್ಕಿಹಾಳ ಗೋವಿಂದ
ಕಂಡೆ ಕಂಡೆ ಕೃಷ್ಣನ ಕಂಡೆ ಕಂಡೆ ಪ ಕಮಲ ಪುಂಡರೀಕ ಭವಾದಿ ಪೂಜ್ಯನ ದಂಡ ಪಾಶಾನ್ವಿತನ ಕೋಟಿ ಮಾರ್ತಾಂಡಸಮ ಸಂಕಾಶದೇವನ ಅ ಅರುಣ ಪಂಕಜದಿರವ ಸೋಲಿಪ ಚರಣತಳಿನಖ ಬೆರಳ ಪಂಕ್ತಿಯು ಪರಡು ಬಣ್ಣದ ಪಿರಡಿಜಂಘೆಯು ಉರದಿ ಜಾನುಗಳೆರಡು ದರ್ಪಣ ತೆರದಿ ಶೋಭಿಸೆ ಕರಿಕರೋರುಗಳು ತರು ನಿತಂಬದಿ ಮೆರೆವ ಪೀತಾಂ ಬರದ ನಿರಿ ಸಡಗರದಿ ದೈತ್ಯರ ಮರುಳುಗೊಳಿಸಿದ ಪರಮ ಪುರುಷನ 1 ನಳಿನನಿಭ ಪೊಕ್ಕಳು ತನೂದರ ವಳಿಗಳತ್ರಯ ಚೆಲುವ ವಕ್ಷ ಸ್ಥ್ಥಳದಿ ಪದ್ಮಾಲಲನ ಕಾಂಚನ ಗಳದ ರೋಮದ ಕಲಿತ ಭುಜಯುಗ ಕುಲಿಶ ಪಲ್ದುಟಿಗಳು ಪ್ರವಾಳ ವರ್ತುಳ ಕ ಪೋಲ ಪರಿಮಳ ಚಂಪಕದಳದ ನಾಸಿಕ ಜಲಜಲೋಚನ ವಿಲಸಿತ ಭ್ರೂ ತಿಲಕ ಫಣಿಯನು 2 ಮಕರ ಕುಂ ಡಲವು ಮೂಗುತಿ ಎಳೆನಗೆಯ ಮೊಗ ಹುಲಿಯುಗುರು ಥಳಥಳಿಪ ಕೌಸ್ತುಭ ಬಲವು ಪದಕಾವಳಿ ಸರಿಗೆ ಶ್ರೀ ತುಲಸಿ ವನಮಾಲ ಸಗ್ವಲಯ ರುಳಿ ಬಿಂ ದಲಿ ರಸಾದ್ಯೆಳದಳ ಯುಗಳ ಕರ ತಳನಾಗೋ ಮಕ್ಕಳೊಡನೆ ಗೋ ಕುಲದಿ ಚರಿಸಿದೆ ಲಲಿತಾಂಗನೆ 3 ನೇಣು ಕಡಗೋಲು ಪಾಣಿಪೃಥಗಳ ಶ್ರೇಣಿಯಲಿ ಒಡ್ಯಾಣ ನೂಪುರ ಪ್ರಾಣಮುಖ್ಯರು ಕಾಣದತಿ ಕ ಲ್ಯಾಣಗುಣಗಣ ಶ್ರೇಣಿವಂತನ ಮಾಣದನುದಿನ ಸಾನುರಾಗದಿ ಧೇನಿಸುವರ ಮನೋನುಕೂಲನ ಬಾಣಗುರುವಿನ ಕಾಣೆನೆನಿಸಿದ ಜಾಣ ಪರಮ ಪುರಾಣ ಪುರುಷನ 4 ಭೂತಕೃತ್ಯದ್ಭೂತಿದಾಯಕ ವೀತ ಶೋಕ ವಿಧಾತಮರ ಪುರು ಹೂತ ಮುಖವಧ್ಯಾತ ಖರಮುರ ಸೂತಗತಸಂಕೇತ ತ್ರಿಗುಣಾ ತೀತ ನಂದನೀಕೇತನದಿ ನವ ನೀತ ಸವಿದ ಪುರಾತನ ಜಗ ನ್ನಾಥ ವಿಠಲನ 5
--------------
ಜಗನ್ನಾಥದಾಸರು
ಕಂಡೆ ಫಂಡರಿರಾಯನ ಸಿರಿಮನ ಪ್ರಿಯನಾ ಪ ಚಂಡವಿಕ್ರಮ ಕರದಂಡ ಮುನಿಪನೊಲಿ ದಂಡಜಾಧಿಪ ಪ್ರಕಾಂಡ ಸುಪೀಠನ ಅ.ಪ. ಮಣಿಮಯ ಮಕುಟ ಮಧುಪನವಿರಪ್ಯರೇ ಪಣೆಯೊಳಿಟ್ಟ ಕಸ್ತೂರಿ ತಿ¯ಕಾ ವನÀರುಹ ಉಪಮ ಲೋಚನಯುಗ ಚಂಪಕ ಸುನಾಸ ವಕುಂಡಲವ ವಿಕಾಸವ ಕದಪಿನ ವಿಲಾಸವ ಮೊಗದ ಮಂದಹಾಸವ 1 ಕುಂದ ಕೋರಕ ದಶನಾವಳಿಯ ಬಿಂಬಾ ಅಧರ ಕಳೆಯ ಕಂಧರ ತ್ರಿವಳಿ ಪುರಂದರ ಇಭಕರ ಪೋಲುವ ಭುಜಯುಗ ವಿಶಾಲವಾ ಕರತಳರಸಾಲವ ನಖರ ಮಲ್ಲಿಕಾಸವ 2 ಅತಿವಿಸ್ತøತ ವಕ್ಷಸ್ಥಳವಾ ಸಿರಿ ಸತಿ ಸದನಾರ್ಕನಂದದಿ ಪೊಳೆವಾ ಕೌಸ್ತುಭ ದೀಧಿತಿ ವಿಲಸಿತ ವೈಜಯಂತಿಯ ಉದರ ರೋಮ ಪಂಕ್ತಿಯಾ ಕುಕ್ಷಿತ್ರಿವಳಿ ಕಾಂತಿಯಾ ನಾಭಿವಲ್ಮೀಕ ದಂತಿಹ 3 ಮುಂಬಿಸಿಲಿನಂತೆ ಕನಕ ಚೈಲಾ ಸುನಿ ತಂಬದಿ ಪೊಳೆವ ಗೋಲಿಯ ಚೀಲಾ ಕುಂಬು ಕೋಕನದ ವಿಡಂಬ ಮೇಖಲ ಕದಂಬವ ಊರು ಕದಳೀ ಜಾನುಗಳಿಂದು ಬಿಂಬನಾ ಆಚರಿಪ ವಿಡಂಬನಾ 4 ಮಾತಂಗಕರವ ಜಂಘೆಗಳ ಗುಲ್ಫ ಜಾತಿಮಣಿಕಾಂಗುಲಿ ಸಂಘಗಳ ಜ್ಯೋತಿ ಬೆಳಗೆ ಜಗನ್ನಾಥ ವಿಠಲ ನಂಘ್ರಿ ಪುಷ್ಕರಾ ಉದಿತ ಶತ ಭಾಸ್ಕರಾ ಗಭಸ್ತಿ ತಿರಸ್ಕರ ಸುಜನರಿಗೆ ಶ್ರೇಯಸ್ಕರ 5
--------------
ಜಗನ್ನಾಥದಾಸರು
ತಾ ಕಾಯುತಿದ್ದ ಕೃಷ್ಣನು ಗೋಪಾಲರನೂಗೋಕುಲದಲ್ಲಿ ಗೂಢನೂ ಪುೀಕುಂಭಿನಿಯೊಳಗಿರುತಿಹ ದುಷ್ಟರನೂಕುವ ಬಿಲದಲಿ ಅನುಪಮ ಧೀರಾ ಅ.ಪಅಸಿತ ಪಕ್ಷವು ಬಂದುದೂ ಮಾಸಗಳೊಳುಎಸೆವೇಕಾದಶಿಯೆಂಬುದು ಬರಲು ಅಂದುಬಸವಾಸುರಾನಾ ಬಡಿದು ತಾನಂದು ವ್ರಜದಿ ವಸುಧೇಶ ನಿದ್ದನೊಲಿದು ಅಸುರನು ಅಳಿಯಲು ಆ ವ್ರಜವುಳಿಯಲು ಹಸುಗಳು ಹೆಚ್ಚಲು ಹರಿ ತಾನಲಿಯಲು ವಸಗೆವ್ರಜದೊಳಗೆ ಬಹುಮಸಗೆ ಹೆಸರಾಗೆ 1ದ್ವಾದಶೀ ದಿವಸಾದಲ್ಲಿ ಉದಯಕಾಲವಾದುದು ''ತದಲ್ಲಿ ಶ್ರೀಕೃಷ್ಣನಿಗೆಬೋಧವಾಗಲು ಬೇಗದಲಿ ಬಾಲರು ಸಹಾ ಮಾಧವಾ ಮುದದಿಂದಲಿಕಾದಿರೆ ಗೋವ್ಗಳ ಕಾನನಮಧ್ಯದಿಕಾದಲು ಬಂದಾ ಕೇಶಿಯನುದಯದಿಕಾದಿ ಅಸುವಸಿಗಿದಿ ವೊದ'ದೀ ಈ 'ಧದಿ 2ವೃಂದಾಖ್ಯವಾದವನಾದಿ ಗೋಪಾಲಕರಾ ವೃಂದದಾ ವರಸ್ತೋಮವಾಮದಿ ನಿಂದಿದ್ದನಾಗಾಕಂದರ್ಪಕೋಟಿತೇಜದಿ ಕುಂಭಿನಿಯನ್ನು ಹೊಂದಿಸಿದನು ಹರುಷದಿ ಮಂದರಧಾರನು ಮಂಜುಳ ಮ'ಮನು ನಿಂದಿಹ ನೀರನು ನಿಜಗುಣಧಾಮನು ಅಂದು ಅಜಬಂಧು ತಾನೆಂದೂ ಅಲ್ಲಿನಿಂದು3ಘನ ನೀಲಾಳಕದ ವೃಂದ 'ುಶ್ರಿತವಾದಾಮಣಿಮಯ ಮಕುಟದಿಂದಾ ಮೂಡುವ ಕಾಂತಿಪಣೆಯಲ್ಲಿ ಮೊಳೆಯುವಂದಾ ಕಸ್ತುರಿತಿಲಕ ಗಣನೆಗೆ ಬರುವ ಛಂದಾ ಗುಣಿಸುವರಾರಿದ ಗುಣನಿಧಿಯೊಪ್ಪಿದ ಪ್ರಣತಪ್ರೇಮದ ಪದ ಮುಖ ಪದ್ಮದಗುಣನೂ ಗುರುತರನೂ 'ನಯವನೂ 'ವರಿಪನೂ 4ಸಿಂಗಾರಿಯ ಸೋಲಿಸುವಾ ಸುಭ್ರುವದಿಂದಾಮಂಗಳವಾದ ಮುಖದ ಮನ್ನಿಸುತಿಹಕಂಗಳ ಕೋಡಿವರಿವಾ ಕಟಾಕ್ಷವನ್ನೂ ಸಂಗಿಸಿದ ಸುಸ್ಮಿತವಾ ತೊಂಗುತ ತೋರಲು ತನ್ನಾಸಿಕವೂರಂಗಿಸಿ ರಾಜಿಸೆ ರದನಚ್ಛದವೂಹೊಂಗೆ ುೀರಂಗೆ ನೋಳ್ಪಂಗೆ ಭವ'ಂಗೆ 5ಕುಂಡಲಗಳ ಕಾಂತಿಯೂ ಕರ್ನಾಗಳಲ್ಲಿಮಂಡಿತವಾಗಿ ಮತ್ತೆಯೂ ಮುಕುರದಂಥಾಗಂಡ ಸ್ಥಳಗಳಲ್ಲಿಯೂ ಗೋಚರಿಸುತ ದಿಂಡಾಗಿ ತೋರೆ ದೀಪ್ತಿಯೂ ಪುಂಡರೀಕಾಕ್ಷನು ಪೊಳೆಯುತಲಿದ್ದನು'ಂಡುತ ಖಳರನು ಹೆದರುವ ಜನರನುಕಂಡೂ ಕರಕೊಂಡೂ ಕೈಕೊಂಡೂ ಹುರಿಗೊಂಡೂ6ವೇಣುವ 'ವರಿಸಲು 'ೀರನಾ ಮುದ್ದೂತಾನೊಂದು ತೇಜ ತೋರಾಲು ಅಂಗುಲೀಗಳುಅನುಕೂಲಗಳಾಗಾಲು ಉಂಗುರಗಳೊಳು ಮಾಣಿಕ್ಯಗಳು ಮೂಡಲುಭಾನುವ 'ುೀರಲು ಬಾಹುಗಳೊಪ್ಪಲುಗಾನಗಳಾಗಲು ಗೋವ್ಗಳು ಕೇಳಲುತಾನು ತೋರಿದನು ಜಾಣುವನು ಜಗಧರನೂ 7ಭೋಗಿಯ ಭೋಗದ ಹಾಗೆ ಬಾಹುಗಳಿರೆತೂಗಿ ಜಾನುಗಳ ತಾಗೆ ಕೇಯೂರಗಳರಾಗ ರಂಜಿತಗಳಾಗೆ ಕಂಕಣವಲಯ ಯೋಗದಿಂದಿರೆ 'ೀಗೆಆಗಿನ ಕಾಲದಲಮರಿದ ಶೃಂಗದುೀಗುರು ಕೃಷ್ಣನ ಇಷ್ಟ ಕೊಳಲಿನಯೋಗೀ ಇಹಭಾಗೀ ಗತರಾಗೀ ಗುರಿಯಾಗೀ8ಕಂಬುಕಂಧರದಿಂದಲೂ ಅಲ್ಲಿರುತಿಹತೊಂಬೆ ತಾರಹಾರಗಳು ಲಕ್ಷ್ಮಿಯು ತಾನುಇಂಬೀನುರದಲಿರಲು ಕೌಸ್ತುಭಕಾಂತಿ ತುಂಬಿ ನಾಭಿಯ ತಾಕಲುಅಂಬುಜ ಸಂಭವನಾಲಯ'ರಲುಜೃಂಭಿಸಿ ಮಾಲೆಯು ಜೋಲಿಡುತಿರಲೂನಂಬೀ ಬಹುತುಂಬೀ ುಹವೆಂಬೀ ಜಗದಿಂಬೀ 9ಕಟಿತಟದತಿಶಯವು ಕಾಂಚಿಯಧಾಮಾಸ್ಪುಟವಾಗಿ ಸ್ವರ್ಣವಸ್ತ್ರವು ಊರುಗಳಲ್ಲಿಗೆಘಟಿಸಿರೆ ಗೂಢವಾದವೂ ಜಾನುಗಳಿಂದ ಪಟು ಜಂಘೆ ಪುದುಗಿಹವೂಕಟಕಗಳಿಂದಲು ಕಡುಚೆಲುವೆನ್ನಲುಅಟಸುತಲಡಿಗಳು ಅತಿಮೃದುವೆನ್ನಲುದಿಟನೂ ನರನಟನೂ ಭವತಟನೂ ಪಟುತರನೂ 10ಕಮಲ ಸೋಕಲು ಕಂದುವ ಲಕ್ಷ್ಮೀಯಕರಕಮಲಕೆ ಕಾಂತಿಯನೀವ ಯೋಗಿಯ ಹೃದಯಕಮಲದಿ ಕುಳಿತಿರುವ ುೀ ದಿವ್ಯಪಾದ ಕಮಲವಕಾಣಿಸುವಾಕಮಲೆಯ ಕಾಂತನ ಕಮಲಜ ಜನಕನ ಕಮಲವ ಕಾವನ ಕಾಂತಿಯ 'ುೀರ್ವನಕ್ರಮವೂ ಕಾಮದವೂ ಶ್ರಮ ಶಮವೂ ಶೋಭನವೂ 11ಬಲಿಯ ಬಳಿಗೆ ಬಂಜವು ಭಾಗ್ಯವನಿತ್ತುಸಲ'ದ ಸೌಮ್ಯಗಳಿವು ಬ್ರಹ್ಮನು ಬಂದುತೊಳೆಯಲು ಬಂದು ತೋರುತಿದ್ದವು ಆ ಪಾದಗಳೆ ಇಳೆಯೊಳಗಿರುತಿಹವೂಕಲಿಮಲಹರಗಳು ಕಲಿಗಳ ಕಾವವುತಾಳಿದವು ನಾಗನ ತದ್ವಶವಾಗಲುಸಿಲುಕೀ ಸಿರಿತುಳುಕೀ ಅಘಕಲಕೀ ಅವು ನಿಲುಕೀ 12ಅಂಕುಶವರ'ಂದವು ಧ್ವಜವಜ್ರವಂಕೀತವಾಗಿಯಾಢ್ಯಾವು ಲಕ್ಷ್ಮಿಯ ಕುಚಕುಂಕುಮವನ್ನು ಕದ್ದವು ಭೂ'ುಗೆ ಪಾದ ಪಂಕಜಗಳು ಬಂದಾವುಕಿಂಕರರಭಿಮತ ಕಂಕೆಯನಟ್ಟುತಮಂಕುಗಳೆನಿಸುತ ಮಲೆವರ ಮುರಿಯುತಶಂಕೆ ಸಲೆ ಕೊಂಕೆ ಹೊರೆುಂಕೆ ಸಿರಿಸೋಂಕೆ13ಈ ರೀತಿಯಲಿ ಈಶನು ಇರುತಲಿರೆನಾರದ ಬಂದು ನಿಂದನು ಕಾಣುತ ಕೃಷ್ಣಕಾರುಣ್ಯ ನಿಧಿ ಕೇಳ್ದನು ಕ್ಷೇಮಗಳನು ತೋರುತ ರೂಪವ ತಾನುವಾರಿಜನೇತ್ರನು ವರದವರೇಣ್ಯನು'ುೀರದೆ ಮುನಿಯನು ಮಾತನು ನುಡಿದನುಸಿರೀ ಅನುಸಾರೀ ಬಗೆದೋರೀ ಮುರವೈರೀ 14ಅರಿತನು ಆತನನುವ ಆ ಕಂಸಗಾಗಅರು' ತೋರಿಸಿದರ್ಥವ ಅದು ತನ್ನ ಕಾರ್ಯನೆರವೇರುವತಿಶಯವ ತಾನಾಗಿ ಮುನ್ನ ಪಿರಿದಾಗಿ ಪ್ರೇರಿಸಿರುವಕರುಣಾವನಧಿಯು ಕಾರ್ಯವ ತೋರಿಯುಮುರಹರಮೂರ್ತಿಯು ಮುಂದಿರುವಲ್ಲಿಯುಅರಿತೂ ಅಲ್ಲಿಕುಳಿತೂ ಬರೆಹೊತ್ತೂ ುದಿರಿತ್ತು 15ಕಾಣುತ ಮುನಿಕೃಷ್ಣನ ಮಾನಸದಲ್ಲಿಧ್ಯಾನಿಸಿದನು ದೇವನ ತಾ ಬಂದುದನ್ನುತಾನು ತೋರಿಸಲು ತತ್ತ್ರಾಣ ಬಂದಾಗ ನ'ುಸಿ ಪ್ರಾಣೇಶಗತಿಪ್ರ'ೀಣಾಕೃಷ್ಣಾ ಕಂಸಗೆ ಹೊದ್ದುವ ರೀತಿಗೆಶ್ರೀನಿಧಿಯಾದಗೆ ಸೂಚಿಸಿ ಸ್ವಾ'ುಗೆತಾನು ಅಜಸೂನು ಅರು'ದನು ಅರಿತದನೂ 16ಮಾನುಷಮೂರ್ತಿಯಾಗಿಯೆ ಭೂ'ುಗೆ ಬಂದುಆನತರನು ಆಳಿಯೆ ಅರ್ಥವ ಸಲಿಸಿಧೇನುವಾಗಿಹೆ ಧೊರೆಯೆ ಯೆನ್ನುತ 'ೀಗೆ ಆನತನಾಗುತಲಿಯೆಮಾನಸಪುತ್ರನು ಮಾತನು ನುಡಿದನುಶ್ರೀನಿಧಿ ತಿರುಪತಿ ವೆಂಕಟರಮಣನುತಾನೂ ತಾಳಿದನೂ ಮಾನಸನೂ ಮಾಡ್ದುದನೂ 17
--------------
ತಿಮ್ಮಪ್ಪದಾಸರು
ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ ತಿರುಪತಿ ವೇಂಕÀಟರಮಣ ಪ ಸ್ವಾಮಿ ಪುಷ್ಕರಿಣಿಯ ತಟದಿ ವಾಸ ಮಾಡಿಕೊಂಡಿರುವೆಯೊ ನೀನು | ಭೂಮಿಯೊಳಗೆಲ್ಲ ಸಾಧು ಸಜ್ಜನರು ನೇಮದಿಂದಲಿ ನಿನ್ನ ಸೇವಿಪರು 1 ಮಂಜುಗುಣಿಯ ಪುರದೊಳಗೆ ಬಂದು ಕಂಜಾಕ್ಷ ವರ ಚಕ್ರ ಶಂಖ ಮತ್ತೆ ಶರಚಾಪಗಳನ್ನೆತ್ತಿ ಮೆರೆದೀ 2 ಜಗಕೆಲ್ಲ ಶೇಷಾದ್ರಿಯಂಥ ಕ್ಷೇತ್ರವಿಲ್ಲೆಂದು ತೋರಿಸುತಿರುವಿ | ಖಗವರನನ್ನೇರಿ ತಿರುಗಿ ಬಂದು ತಿರುಪತಿ ಕ್ಷೇತ್ರದೊಳಿರುವಿ 3 ಪಾದ ಮುಟ್ಟದೆ ಜಾನುಗಳಿಂದ | ಬಂದು ಸಾಲಿಗ್ರಾಮದ ಮಾಲೆಯನ್ನು ಪಾದಕರ್ಪಿಸಿ ಸ್ತುತಿಸಿದರು ನಿನ್ನ 4 ಬಂದು ರಾಜೇಶ ಹಯಮುಖ ನಿನಗೆ | ಮಾಲೆ ಹಾಕುತ ಮುಂದೆ ನಿಂದಳು ಶಂಕೆಯಿಲ್ಲದೆ ನಮಿಸಿದಳು ಮುದದಿ 5
--------------
ವಿಶ್ವೇಂದ್ರತೀರ್ಥ
ಬೋಧ ಸದ್ಗುರು ಜಿತಮದನ ಪ ಬಾದರಾಯಣ ವೈದೇಹಿ ಚರಣಾಬ್ಜಾ ರಾಧಕ ನಮಿಪೆ ಸನ್ಮೋದವಿತ್ತು ಕಾಯೊ ಅ.ಪ. ಶ್ರೀ ಮಧ್ವ ಮತವಾರಿಧಿ ಸೋಮ | ದ್ವಿ ಜ ಸನ್ನುತ ಗುಣಧಾಮಾ ಕಾಮಿತಜನ ಕಲ್ಪಭೂಜ ವಿಬುಧ ಸು ಪ್ರೇಮ ಸಂಯಮಿಕುಲೋದ್ಧಾಮ ದಯಾಂಬುಧೇ ಗೋಮಿನೀವಲ್ಲಭನ ಪದಯುಗ ತಾಮರರಸಗಳನನುದಿನದಿ ಬಿಡ ದೇ ಮನಾಬ್ಜದಿ ಭಜಿಸುತಿಪ್ಪಮ ಹಾ ಮಹಿಮ ತುತಿಸಿಬಲ್ಲನೆ 1 ದೀನಜನರ ಬಂಧು ನಿನ್ನಾ | ಪಾದ ಕಾನೆರಗುವೆ ಸುಪ್ರಸನ್ನಾ ದಾನ ಮಾನಗಳಿಂದ ಜ್ಞಾನಿಜನರಿಗೆ ಮ ಹಾನಂದ ಬಡಿಸುತ ಸಾನುರಾಗದಿ ನಿತ್ಯಾ ಶ್ರೀ ನಿಕೇತನ ಪರಮ ಕಾರು ಣ್ಯ ನಿವಾಸ ಸ್ಥಾನನೆನಿಪ ಮ ಹಾನು ಭಾವ ಭಗವತ್ಪದಾಂಭೋ ಜಾನುಗರೊಳೆನ್ನೆಣಿಸಿ ಪಾಲಿಸು 2 ಸತ್ಯಪ್ರಿಯರ ಕರಕಮಲ | ಜಾತ ನಿತ್ಯ ನಿರ್ಜಿತ ಘೋರ ಶಮಲಾ ಚಿತ್ತಜಪಿತ ಜಗನ್ನಾಥ ವಿಠಲನ ಚಿತ್ತಾನುವರ್ತಿಗಳಾಗಿ ಸಂಚರಿಸುತಾ ಅತ್ಯಧಿಕ ಸಂತೋಷದಲಿ ಪ್ರತ್ಯರ್ಥಿಗಳಿಗುತ್ತರಿಸಿ ಮಿಗೆ ಪುರು ಷೋತ್ತಮನೆ ಪರನೆಂದು ಡಂಗುರ ವೆತ್ತಿ ಹೊಯ್ಸಿ ಕೃತಾರ್ಥನೆನಿಸಿದ 3
--------------
ಜಗನ್ನಾಥದಾಸರು
ಭೃಂಗ ಭಕ್ತ ಕಾಮಿತಾರ್ಥದ ಮಂಗಳಾಂಗ ತಾಮಸಬಲ ನಿಗ್ರಹಣ ಪತಂಗ ಭ ವಾಮಯಹರ ಭಾರತಿ ಮುಖ ಸಂಗ ಪ. ಮಾನ ಸೇವರಾತಿ ಭೂಪ ಭಾನುಸರಣ ಸುಪ್ರತಾಪ ದೈತ್ಯ ಕ್ಷೋಣಿ ಸಂದರ್ಶಿತ ಕೋಪ ಜಾನಕಿವರನ ನಿಜಾನುಗನೆನಿಪ ಮ- ಹಾನುಭಾವ ಪವಮಾನ ದಯಾಪರ 1 ಇಂದು ಕುಲದಿ ತಾ ಜನಿಸಿ ನಿಜ ಬಂಧುಗಳನು ಸತ್ಕರಿಸಿ ಇಂದಿರೆಯರಸನ ಒಲಿಸಿ ಜರಾ- ಸಂಧ ಮುಖರನು ಸಂಹರಿಸಿ ಒಂದೇ ಕ್ಷಣದಿ ಸೌಗಂಧಿಕ ಕುಸುಮವ ತಂದು ಮಡದಿಗಾನಂದ ತೋರಿದ 2 ಕಲಿಯುಗದೊಳು ತಾ ಬಂದು ಮಾಯಿ ಬಲಿ ಭುಜರನು ಗೆಲವಂದು ಜಲಜನಾಭವ ಕರೆತಂದು ರೌಪ್ಯ ನಿಲಯದಿ ಸ್ಥಾಪಿಸಿ ನಿಂದು ಚೆಲುವ ಶೇಷಗಿರಿ ಪತಿಗತಿಯೆಂದು ನೆಲೆಯ ತೋರಿದ ಪುರುಕರುಣಾಸಿಂಧು 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾರಜನಕ ಮುರಾರಿ ಕಾಣಮ್ಮ ಪ ಅರುಣ ಚರಣ ಕಳದಿರವು ಅಂಕುಶಧ್ವಜ ಅರವಿಂದ ರೇಖಾಂಕ ಪುರುಷನಾರಮ್ಮ ಉರಗಶಯನ ಕರಸರೋಜ ಮಧ್ಯದೊಳಿಟ್ಟು ಸುರರಿಂದರ್ಚನೆಗೊಂಬ ಹರಿಯು ಕಾಣಮ್ಮ 1 ಪೊಳೆವ ಉದಯ ಶಶಿ ಬೆಳಗು ಸೋಲಿಪ ನಾಖಾ ವಳಿಯಿಂದ ಒಪ್ಪುವ ಚಲುವನಾರಮ್ಮಾ ಕುಲಿಶ ಪಾಣಿಗೆ ಒಲಿದಿಳೆಯೊಳು ಬಂದು ಖಂ ಜಲಧಿ ಕಾಣಮ್ಮ 2 ಅಂದುಗೆ ಗೆಜ್ಜೆ ಕಡಗ ಪೊನ್ನೂಪುರ ತೊಡಂದ ಬರುತಿಹ ಪ್ರೌಢನಾರಮ್ಮ ದೃಢ ಭಕ್ತರೆಡೆಯಲಿ ಬಿಡದೆ ನಲಿಯುತಲಿಪ್ಪ ಮೃಡಸುರಪಾದ್ಯರ ಪತಿಯು ಕಾಣಮ್ಮ 3 ಕರಿಗಲ್ಲಿನಂತೆ ಸುಂದರ ಜಂಘೆ ಜಾನುಗ ಳೆರಡು ತರಣಿಯಂತೆ ಇವನಾರಮ್ಮಾ ಪರಮೇಷ್ಠಿ ಪ್ರಳಯದಿ ಸಿರಿಯಿಂದ ನುತಿಗೊಂಬ ಪರಮ ಪುರುಷ ನರಹರಿಯು ಕಾಣಮ್ಮ 4 ಇಭವರಕರದಂತೆ ಉಭಯ ಊರು ಕಟಿ ಪ್ರಭ ವಸನವನುಟ್ಟ ಸುಭಗನಾರಮ್ಮಾ ರಭಸದಿಂದಲಿ ಕಂಭ ಬಿಗಿದು ಪ್ರಹ್ಲಾದಗೆ ಅಭಯವಿತ್ತ ಸುರಪ್ರಭುವು ಕಾಣಮ್ಮ 5 ವಲಿವಿೂಕ ಬಿಲದಂತೆ ಸುಳಿನಾಭಿ ಜಠರತ್ರಿ ವಳಿಗಳಿಂದಲಿ ಬಲು ಪೊಳೆವನಾರಮ್ಮಾ ನಳಿನೋದ್ಭವನ ಪುತ್ರಾಖಿಳ ಲೋಕ ತಾಳಿದಾ ಹಾಲಾಹಲಕಂಠನ ಗೆಳೆಯ ಕಾಣಮ್ಮಾ 6 ಕೌಸ್ತುಭ ವೈಜಯಂತೀ ಸರ ಸಿರಿಯಿಂದಲೊಪ್ಪೋ ನಿರಯನಾರಮ್ಮ ವರಭೃಗುಮುನಿಪನ ಸ್ಪರುಶವನು ತಾಳ್ದ ಕರುಣ ಸಾಗರ ಸಿರಿಧರನು ಕಾಣಮ್ಮ 7 ಅರಿ ಶಂಖ ಸತತ ಪಿಡಿದಿಹ ಚತುರನಾರಮ್ಮ ದಿತಿಜರ ಸದೆದು ದೇವತೆಗಳ ಸಲಹಿದ ಚತುರಾಸ್ಯ ಕೃತಿದೇವಿ ಪತಿಯು ಕಾಣಮ್ಮ 8 ಧರದಿಂದೊಪ್ಪುತಲಿಹ ಪಿರಿಯ ನಾರಮ್ಮಾ ಸಿರಿಯೊಡನೆ ಕ್ಷೀರಶರಧಿ ಯೊಳೊರಗಿಪ್ಪ ವಜ್ರ ಪಂಜರವನು ಕಾಣಮ್ಮ 9 ಸುರಕಪೋಲ ನಾಸ ಸರಸಿಜನಯನ ಪು ಕುಂಡಲಿ ಯುಗಧರನು ಆರಮ್ಮಾ ಶರಧಿ ಮಥನದಲ್ಲಿ ತರುಣಿಯಾಗಿ ಅಸು ರರ ಮೋಹಿಸಿದ ಅಜರನು ಕಾಣಮ್ಮ10 ಬಾಲಶಶಿಯಂತೆ ಫಾಲಕಸ್ತೂರಿನಾಮ ಮೌಳಿ ಸುಳಿಕೇಶ ಬಾಲನಾರಮ್ಮಾ ಮೂಲೇಶನಾದ ಜಗನ್ನಾಥ ವಿಠ್ಠಲ ಮೂರ್ಲೋಕಾಧಿಪ ಶ್ರೀ ಗೋಪಾಲ ಕಾಣಮ್ಮ11
--------------
ಜಗನ್ನಾಥದಾಸರು
ಶ್ರೀಕಾಮಕೋಟಿ ಲಾವಣ್ಯಮೋಹನ ರೂಪಿನ ಶ್ರೀಕಾಂತ ಮಂಗಳ ಮೂರುತಿ ವರದೇವಾ ಪ ಶ್ರೀಮಣಿಮೌಳಿ ಮಸ್ತಕದ ಕಸ್ತುರಿಯ ಲ ಲಾಮವೆಸೆವ ವರ ಫಣಿಯಾ ಭ್ರೂಮಧ್ಯದೊಳೆಳೆವರೆಯಂತೊಪ್ಪುವ ನಾಮದ ಪಿರಿನೊಸಲಾ1 ತಾಮರಸಾಯತನೇತ್ರದಾನತಸು ಕ್ಷೇಮಾಂಕುರದ ನೋಟದ ಚಾಮೀಕರ ಕುಟ್ಮಲ ನಾಸಿಕದಭಿ ರಾಮ ಸುಮೌಕ್ತಿಕದಾ2 ಮಾ ಮನೋಹರ ಚುಬುಕಾಗ್ರದ ನವಪಲ್ಲ ವಾ ಮಿಳಿತಾಧರದ ಸೋಮವದನದೆಳನಗೆಯೂ ಪೊಳೆವಟ್ಟ ಕೌಮುದಿಯಾ ಸೊಗಸಿನಾ 3 ರಾಮಣೀಯಕವದನ ಮಕರಕುಂಡಲದ ಸು ರಾಮಯದ ಕದಪಿನ ಕಾಮನೀಯ ಕಂಬುಕಂಠದ ಸಿರಿತುಳ ಸೀ ಮಂದಾರಮಾಲೆಯ 4 ಜೀಮೂತ ಸವಿಯನೆ ರಂಜಿಪ ಸು ಶ್ಯಾಮಲ ರುಚಿರಾಂಗದ ಕಮಲ ಕಂಬು ನಿ ಸ್ಸೀಮ ಚಕ್ರಾಯುಧಂಗಳಾ 5 ಶ್ರೀಮೆರೆವುರದ ಶ್ರೀವತ್ಸಕೌಸ್ತುಭ ದಿ ವ್ಯಾಮೋದ ಗಂಧ ಲೇಪದ ಸೌಮಾನಜಂ ತಾಳ್ದುಪವೀತದ ಮಣಿ ಸ್ತೋಮಾಭರಣಂಗಳಾ 6 ಸಾಮಾಜಿಕರ ಸನ್ನಿಭ ರಂಜನದು ದ್ದಾಮ ಸುಬಾಹುಗಳಾ ನೇಮಿತಾಂಗದ ತೋಳಬಂದಿ ಕಂಕಣಮುಂ ಗೈಮುರಾರಿ ಮುದ್ರೆಯಾ 7 ಐಮೊಗದಹಿಯ ತೆರದ ಕರಕಮಲದ ಸೈಮಿರುಪಂಗುಲಿಗಳಾ ರೋಮಾವಳಿಯ ಪೊಳೆವ ಪೊಡೆವಲರ ಪಿ ತಾಮಹಮುದಿತ ನಾಭಿಯಾ 8 ಹೇಮಾಂಬರದಸಿಮಧ್ಯದ ಕಾಂಚೀ ಧಾಮದ ಕಟಿತಟದ ಪ್ರೇಮಿತ ಊರುಗಳ ಸಜಾನುಗಳ ಮುದದಿಂ ತಾಳ್ದ ವಾಮಜಂಫೆಯ ತೊಡರಿನ ಪೊಂಗೆಜ್ಜೆಗಳ9 ಭೂಮಿ ಪಾವನ ಗಂಗೆಯುದಿಸಿದುಂಗುಟದ ಯ ಶೋ ಮಹಿಮೆಯ ಚೆಲ್ವಿನಾ ಪ್ರೇಮದೊಳಾನತರಂ ಸಲಹುವ ಸುರಪುರ ಮ - ಹಾಮಾತೆ ಲಕ್ಷ್ಮೀಪತಿ ಪಾದಪದ್ಮದ 10
--------------
ಕವಿ ಲಕ್ಷ್ಮೀಶ
ಹನುಮ - ಭೀಮ - ಮಧ್ವರು ಅಮಮ ಎನಿತÀದ್ಭುತಮಹಿಮೆ ಪೊಗಳನು ಪಮ ದೇವ ಜೀವೋತ್ತಮ ಸುರಸಾರ್ವಭೌಮ ಹನುಮ ಪ ಭೀಮ ರಿಪುಕುಲಧೂಮ ಯತಿಕುಲಸೋಮ ಶ್ರೀಮದಾನಂದ ಮುನಿಮಹಿಮಾಅ.ಪ ಜೀಯ ಈ ಪಯೋಜಾಂಡದೊಳಿನ್ನೆಣೆಯಿಲ್ಲ ಬಲದೊಳು ಶೌರ್ಯ ಕಾಯನೋಡಲು ಆಖಣಾಶ್ಮಸಮನು ನಿನ್ನೊಳು ಹರಿಯರೂಪಗಳೆನಿತು ಇಹುದಯ್ಯ ನಿನ್ನಲ್ಲಿಹುದು ಇನ್ನೆಷ್ಟಯ್ಯ ಶ್ರೀಯರಸ ಶ್ರೀ ಶಿಂಶುಮಾರನು ನಿನ್ನ ಮುಖಕಮಲದಲ್ಲಿಹನೂ ವಾಯುಮೂರುತಿ ನಿನ್ನ ನಾಸಾಗ್ರದೊಳು ಶೋಭಿಪ ಮತ್ಸ್ಯಮೂರುತಿಯು ಜೀಯ ನಿನ್ನಯ ನಾಸಪೃಷ್ಠದಿ ಕೂರ್ಮ ಮೂರುತಿಯು ಅಲ್ಲಿ ನೆಲೆಸಿಹನು ನಯನದ್ವಯದಿ ಕಪಿಲವಿಷ್ಣು ಶ್ರವಣದ್ವಯಗಳೊಳು ಕೃಷ್ಣರಾಮರು ನಾರಾಯಣ ಇಹನು 1 ಬಾಹುದ್ವಯಗಳೋಳ್ಕಲ್ಕಿ ಬುದ್ಧರೂಪಿರೆ ಬಾಹುಬಲವಿನ್ನೆಷ್ಟಯ್ಯ ಅಹುದು ಪವನಹಸ್ತದೊಳ್ ಪಾವನ್ನ ಶ್ರೀ ಬಾದಾರಾಯಣ ಕಂಗೊಳಿಪನಯ್ಯ ಶ್ರೀ ಹರಿಯು ನೆಲೆಸಿಹನು ಪಾದ ಮಧ್ಯಸ್ಥಾನದಲಿ ಸಲೆ ಬೆಳಗುತಿಹನು ಮಹಮಹಿಮ ನಿನ್ನಯ ಪಾದಪೃಷ್ಠದಿ ಹೃಷೀಕೇಶ ಹರಿಯು ನಿಂತಿಹನು ಇಹರಯ್ಯ ದಕ್ಷಿಣ ವಾಮಜಾನುಗಳಲಿ ಯಜ್ಞ ಶ್ರೀಧರರಿಹರು ಕಟಿ ಪ್ರದೇಶದಿ ದಿಟ್ಟರಾಗಿಹರು 2 ದಕ್ಷಿಣದಲ್ಲಿಹ ವನಮಾಲೆಯಲ್ಲಿಹರು ಗುಣನಿಧಿಯೆ ತದುಪರಿ ಸೂರ್ಯವರುಣಅಶ್ವಿನಿಗಳೆಲ್ಲ ನಿನ್ನಯ ವನಮಾಲೆಯಲಿಹರು ಎಣಿಸೆ ದಕ್ಷಪ್ರಜಾಪತಿಯು ನಿನ್ನ ವಾಮ ವನಮಾಲದೊಳಲ್ಲಿ ಇರುತಿಹನು ಮಣಿದು ಸೇವಿಪ ಜಯಂತ ಮನುಯಮ ತದನಂತರ ವನಮಾಲೆಯಲ್ಲಿಹರು ಜಾಣ ಬೃಹಸ್ಪತಿ ದಕ್ಷಿಣ ವನಮಾಲದೊಳು ಆಶ್ರಯಿಸಿ ತಾವಿಹರು ಪ್ರಾಣ ಅಪಾನ ವ್ಯಾನೋದಾನ ಸಮಾನ ವನಮಾಲದಲ್ಲಿಹರು 3 ಪದುಮನಾಭನು ಸಲೆ ಬೆಳಗುತಿಹನು ವಾಮದಕ್ಷಿಣ ಕುಕ್ಷಿಯೊಳಿಹರು ಹರಿಮೂರುತಿ ನಿನ್ನಾಂತರದಿಂದ ನಿಂತಿಹನು ಪಾದಪಾಶ್ರ್ವಗಳಲ್ಲಿ ಋಷಭ ಗೋವಿಂದ ಮೂರುತಿ ಅಲ್ಲೆ ಇರುತಿಹರು ಮುದದಿ ನಿನ್ನಯ ವಕ್ಷದೊಳು ಶ್ರೀ ವರಹಮೂರುತಿ ಅಲ್ಲೆ ನೆಲೆಸಿಹನು ಎದುರಿಲ್ಲ ನಿನಗೆ ಕಪೋಲದೊಳು ಶ್ರೀ ವಾಸುದೇವನು ಇಹನು ವಿಧಿವಾಯುಗಳು ನಿನ್ನಯ ವಾಮಭುಜದೊಳು ಮುದದಿ ನಲಿಯುತಿಹರು ವಿಧಿ ವಾಯುಸತಿಯರು ದಕ್ಷಿಣಭುಜದೊಳು ನುತಿಸುತಿಹರು 4 ಪವನಶಕ್ತಿ ಹನ್ನೆರಡೆಲ್ಲ-ನಿನ್ನಯ ಹೃದಯದಾಭರಣ ಪವನಿಸಿರ್ಪುದು ಕ್ರಮದಿ-ಶಕ್ತಿ ಪ್ರತಿಷ್ಠೆ ಸಂವಿತ್ ಸ್ಪೂರ್ತಿ ಭವಹಾರಿ ನಿನಗೆ ಕಲಾವಿದ್ಯಾಮತಿ ನಿಯತಿ ಮಾಯಾ ಕಾಲಪುರುಷ ಈ ಪರಿಯು ಜೀವೇಶ ನಿನ್ನಯ ಮಹಿಮ ಗುಣಗಳ ಪೊಗಳಲಳವೇ ಹರಮುಖಾದ್ಯರಿಗೆ ಜೀವರೆಸಗುವ ಕಾರ್ಯಗಳು ಲವಲೇಶ ನಿನ್ನ ಬಿಟ್ಟು ನಡೆಯದೊ ಪವಮಾನಮೂರುತಿ ಹರಿಯ ಕರುಣಾಕಟಾಕ್ಷ ನಿನ್ನೊಳು ಇಟ್ಟುಇರುವುದು ಇನ್ನೆಷ್ಟೊ ದೇವ ನಿನ್ನಯ ಖ್ಯಾತಿ ಎಷ್ಟೋ ಬಲದಿ ಶೇಷಶೈಲವ ತಂದೆ ಕಾವುದಯ್ಯ ಶ್ರೀ ವೇಂಕಟೇಶನ ಪ್ರೇಮದ ದೂತ 5
--------------
ಉರಗಾದ್ರಿವಾಸವಿಠಲದಾಸರು
ಕಂಡೆನಾ..............ಸಾಸಿರನಾಮದಶೇಷಮಹಿಮ ವೆಂಕಟೇಶನ ಮೂರುತಿಯ ಪ.ಶೇಷಗಿರಿಗೆ ಕೈವಲ್ಯವೆನಿಪ ಸ್ವಾಮಿಪುಷ್ಕರಿಣಿಯವಾಸನಕಂಡೆನಾಅ.ಪ.ವಿಕಸಿತಸರಸಿಜ ಸಮಪದಯುಗಳನಅಖಿಳಜಗದೆರೆಯನನಖಶ್ರೇಣಿಗಳೊಳು ತರತರದಿ ಮೆರೆವಸುಖಮಣಿಗಳ ಕಂಡೆನಾ 1ಗುಲ್ಛಕೆ ನೂಪುರ ಭೂಷಿತ ವರಫಣಿತಲ್ಪನ ಮೂರುತಿಯಒಪ್ಪುವ ದ್ವಿಜದಂತಿಹ ಜಘನ ಕಂದರ್ಪನಯ್ಯನ ಕಂಡೆನಾ 2ಹೊಂಗನ್ನಡಿಗಳ ಹಳಿದೊಪ್ಪುವ ಜಾನುಂಗಳ ಚೆನ್ನಿಗನಬಂಗಾರ ಬಾಳೆಯ ಕಂಬದಂತೆಸೆವ ಬೆಡಂಗಿನ ತೊಡೆಯವನ ಕಂಡೆನಾ 3ಕಟ್ಟಿಹ ಕಟಹವನಿಟ್ಟ ಝಗ ಝಗಿಸುವ ಪೊಂಬಟ್ಟೆಯನುಟ್ಟವನಇಟ್ಟ ಕಿಂಕಿಣಿದಾಮ ಮಧ್ಯತ್ರಿವಳಿ ನಾಭಿಸೃಷ್ಟಿಯುದರದವನ ಕಂಡೆನಾ 4ಉರದಿ ಮೆರೆವ ಸಿರಿವತ್ಸಲಾಂಛನಕೇಯೂರ ಕೌಸ್ತುಭಧರನಸಿರಿತುಲಸಿ ಪದಕಹಾರ ಕಂಬುಕಂದರತಿರುವೆಂಗಳಯ್ಯನ ಕಂಡೆನಾ5ಅರಿಮಥÀನವ ಮಾಳ್ಪರಿ ಶ್ರುತಿಮಯವಾದವರಶಂಖೋಧೃತನವರಾಭಯ ನೀಡುವವರಗದೆಪದುಮದಪರಮಾಂಗನ ಕಂಡೆ ನಾ 6ಅಂಬುಜಮೊಗದೊಳು ಕಾಂತಿಯ ಬೀರುವಲಂಬಿತ ಕುಂಡಲನಪೊಂಬಣ್ಣದ ಸಂಪಿಗೆ ಸಂಪಿಗೆನಾಸಿಕಲುಳಿ ನಾಸಾಪುಟದವನ ಕಂಡೆನಾ 7ಮರಿಕೂರುಮನಂದದಿ ಕದಪುಗಳು ಅಮರುತ ಬಿಂಬಾಧರನಪೆರೆನೊಸಲಿನ ಭ್ರೂಲತೆ ಕಿರುನಗೆ ಕಸ್ತೂರಿ ತಿಲಕಾಂಕಿತನ ಕಂಡೆನಾ 8ಕೋಟಿಇನತೇಜದಮಕುಟವರಕರುಣನೋಟದ ಜಗಪಾಲನಹಾಟಕಗಿರಿಯ ಪ್ರಸನ್ನವೆಂಕಟ ಜಗನ್ನಾಟಕ ಸೂತ್ರಧಾರನ ಕಂಡೆನಾ 9
--------------
ಪ್ರಸನ್ನವೆಂಕಟದಾಸರು
ಗುರುವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |ಚರಣಕಮಲಷಟ್ಪದ ಪಾಲಿಸು ಕಾಷಾಯವಸನಭೂಷಾ ಪದುರ್ಮತಭುಜಗಕುಘರ್ಮ ವಿನಾಯಕಕರ್ಮಬದ್ಧವ್ರತಾ |ಶರ್ಮತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||ಭರ್ಮ ಸಮಾಂಗ ಅಧರ್ಮ ಶಿಕ್ಷಕರಿಚರ್ಮಾಂಬರ ಪ್ರೀತ |ಕಿರ್ಮೀರಾರಿ ಸುಶರ್ಮ ತೀರ್ಥಸಖಕರ್ಮಂದಿಪ ನಾಥ 1ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |ಕಾಮಿತ ಫಲದಧರಾಮರವಂದಿತ ಸ್ವಾಮಿ ನಮಿಪ ಭಕ್ತ ||ಶ್ರೀಮಂದಾರಅನಾಮಯ ಸದ್ಗುಣಧಾಮನೆ ಸುವಿರಕ್ತಾ |ಪಾಮರದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ 2ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||ಸಾನುರಾಗದಲಿ ಪೋಣಿಸುಸನ್ಮತಿಮೌನಿ ಕುಲಾಧೀಶ |ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ 3
--------------
ಪ್ರಾಣೇಶದಾಸರು
ಬಾಲನ ನೋಡಿರೆನಿವಾಳಿಸಿಆಡಿರೆಕಾಲಅಂದುಗೆಕೈ ಕುಣಿಸದೆ ಸವಿಮಾತಾಲಿಪನ ನಮ್ಮಪ್ಪನ ಪ.ಬಾಲಕರನ್ನನ ಉಂಗುರುಗುರುಳಿನ ಸುಳಿಯೊಭೃಂಗಾವಳಿಯೊ ಶ್ರೀಲೋಲನ ವಿಸ್ತರ ಬಾಳವು ಕಳೆಗೇಡಿಯೊಪೊಂಗನ್ನಡಿಯೊಪಾಲ್ಗಡಲ ಪ್ರಭುವಿನೀ ಬಟ್ಟಗಲ್ಲಗಳೊಮರಿಯಾವಿಗಳೊಶೂಲಿಯ ಮುತ್ತಿದ ತಿದ್ದಿದ ಹುಬ್ಬಿನ ಹೊಳವೊನಿಂಬ ಸುದಳವೊ 1ಯದುಕುಲ ತಿಲಕನ ಢಾಳಿಪ ಕಂಗಳ ಠಾವೊತಾವರೆ ಹೂವೊಮದನನಯ್ಯನ ಮೀಟಿದ ಮೂಗಿನ ಕೊನೆಯೊಸಂಪಿಗೆ ನನೆಯೊಸದಮಲ ಲೀಲನ ಸೊಬಗಿನ ನಾಸಾಪುಟವೊಮುತ್ತಿನ ಬಟುವೊವಿಧುವಂಶೇಂದ್ರನ ವೃತ್ತ ಮನೋಹರ ವದನೊಮೋಹದ ಸದನೊ 2ಸುರರುಪಕಾರಿಯ ಎಳೆದುಟಿಯ ಕೆಂಬೊಳವೊಬಿಂಬದ ಫಲವೊಗರುಡಾರೂಢನ ಮೊಳೆವಲ್ಲುಗಳ ಬಿಳುಪೊಕುಂದಕುಟ್ಮಳವೊಕರುಣಾಂಬುಧಿಯ ಕಿವಿ ಶುಕ್ತಿಯೊ ಗದ್ದೊಮುದ್ದಿನ ಮುದ್ದೊಶರಣರ ಪ್ರಿಯನ ತ್ರಿರೇಖೆಯ ಕಂದರವೊ ಸುಂದರದರವೊ 3ದೇವಕಿತನಯನ ಪುಷ್ಟಯುಗಳದೋರ್ದಂಡೊಕಲಭದ ಶುಂಡೊದೇವವರೇಣ್ಯನ ಕರತಳದಂಗುಲಿ ಸರಳೊಕೆಮ್ಮಾಂದಳಿಲೊಭಾವಿಕ ಜನಜೀವನ ಪೀನೋನ್ನತ ಉರವೊವಜ್ರದ ಭರವೊಸೇವಕಪಕ್ಷನ ಉದರದವಲ್ಲಿತ್ರಿವಳಿಯೊ ಅಮರರಹೊಳಿಯೊ 4ಅಜನಯ್ಯನ ಅಚ್ಯುತನ ನಾಭಿಯ ಸುಳಿಯೊಅಮೃತದೊಕ್ಕುಳಿಯೊತ್ರಿಜಗದ ಗರ್ಭ ವಿನೋದಿಗಳರಸನ ಮಣಿಯೊಪಚ್ಚದ ಮಣಿಯೊಸುಜನರ ಮಾನಿಯ ಬಟ್ಟದೊಡೆಯ ಸಂರಂಭೋಎಳೆವಾಳೆಯ ಕಂಭೋಗಜವರದನ ಗೋವಿಂದನ ಜಾನುಗಳ ಪೊಗರ್ವೊಹರಿಮಣಿಯ ಪೊಗರ್ವೊ 5ತ್ರಿಗುಣಾತೀತನಂತನ ಜಂಘಗಳಿಳಿಕ್ಯೊ ಶರಬತ್ತಳಿಕ್ಯೊನಿಗಮಾಗಮ್ಯನ ಚರಣಯುಗಂಗಳ ನಿಜವೊಅರುಣಾಂಬುಜವೊಮೃಗನರರೂಪನ ಅನುಪಮ ನಖಗಣ ಮಣಿಯೊಬಾಲಖಮಣಿಯೊಸುಗಮನ ಪದತಳದಂಕುಶ ಧ್ವಜಾಂಬುರೇಖೆÉ್ಯೂೀವಿದ್ಯುರ್ಲೇಖೆÉ್ಯೂ 6ಆಭರಣಗಳಿಗೆ ಆಭರಣವೆ ಎಳೆಗರುವೆ ಕಲ್ಪತರುವೆಸೌಭಾಗ್ಯದ ಶುಭಖಣಿಯೆ ನಂದಾಗ್ರಣಿಯೆ ಚಿಂತಾಮಣಿಯೆ ನಿನ್ನ ಬಿಗಿದಪ್ಪುವ ಭಾಗ್ಯವಿನ್ನೆಂತೊಉಮ್ಮುಕೊಡು ನಮ್ಮಮ್ಮಶ್ರೀಭೃತ ಪ್ರಸನ್ವೆಂಕಟ ಕೃಷ್ಣ ತಮ್ಮ ಬಾ ಪರಬೊಮ್ಮ 7
--------------
ಪ್ರಸನ್ನವೆಂಕಟದಾಸರು
ರಾಜರ ನೋಡಿರೈ ಇನತತಿತೇಜರ ಪಾಡಿರೈ ಪಪೂಜಕÀರಾ ಸುರಸನ್ನುತರ ಅ.ಪವರಪಾಷ್ರ್ಣಿದ್ವಯ ಪರದಲಿ ಶೋಭಿಪಜಾನುಗಳೋ ಶಶಿಬಿಂಬಗಳೋ 1ಕಟಿತಟವೋಕೇಸರಿನಡುವೋತುಂಬಿದ ಕರುಣನ ಗುಂಭಸುನಾಭೀ -ತಾವರೆಯೋ ಗಂಗಾಸುಳಿಯೋ 2ಸುಂದರಕುಕ್ಷಿಸುಚಂದನ ಚರ್ಚಿತದಂಡಗಳೋಕರಿಶುಂಡಗಳೋ3ಯತಿಕುಲವರ್ಯನ ಸ್ಮಿತಯುತವಕ್ತ್ರಕ್ಷಿತಿಸುರ ವಂದ್ಯನ ಅತಿ ಸುಂದರ -ನಯನಗಳೋ ನೈದಲಿಯುಗಳೋ 4ಘಣೆಯೋ ಅಕ್ಷತಮಣಿಯೋ 5ಮಂದಿರವೆನಿಸುವ ವೃಂದಾವನಶುಭವೃಂದಾರಕಘನವೃಂದದಿ ರಾಜಿಪದಾತಾಜಗದೊಳು ಖ್ಯಾತಾನೀತಾ ಭಾವಿ ವಿಧಾತಾ 6ಶಿಷ್ಟರ ಸುಮನೋಭೀಷ್ಟದ ಗುರುಜಗ -ನ್ನಾಥವಿಠಲ ದೂತಾ 7
--------------
ಗುರುಜಗನ್ನಾಥದಾಸರು
ವಂದಿಸಿದರೆ ವಂದ್ಯರು ಪೂಜಿತರು ಮುಕುಂದಗೋವಿಂದ ಶ್ರೀಹರಿಯನ್ನುಎಂದೆಂದು ಕುಂದದಾನಂದವೈದಿಸುವಇಂದಿರೆಯರಸ ಭವಬಂಧಮೋಚಕನ ಪ.ಹತ್ತಶ್ವಮೇಧಾವಭೃಥಸ್ನಾನ ಮಾಡಲುಮತ್ರ್ಯರ್ಗೆ ಪುನರ್ಜನ್ಮಗಳಿಲ್ಲವೊಸತ್ಯಭಾಮಾಧವನಿಗೆ ನಿಷ್ಕಾಮದಿ ನಮಿಸಿಮತ್ತೊಮ್ಮೆ ನಮಿಸೆ ಮುಕ್ತಿಗೆ ಸಾಧನ 1ಕೋಟಿಸಹಸ್ರ ತೀರ್ಥಗಳಲಿ ಮಿಂದುಕೋಟಿಸಹಸ್ರ ವ್ರತಗಳಾಚರಿಸೆಕೋಟಿ ಭಾಂತಕಗೆ ನಮಿಸಿದ ಫಲಕೆ ಸರಿ ಪಾಸಟಿಷೋಡಶಕಳೆಯೊಳೊಂದಲ್ಲ2ಹೇಳೆನೆ ಇಂದಾದರು ನಮಿಸಿ ಶ್ರೀಲೋಲಶಾಙ್ರ್ಗಪಾಣಿಯನಸಾಲು ಜನ್ಮದಘವ ಹಾಳುಮಾಡಿ ಮುಕ್ತಿಓಲಗಕೆ ಕರೆವ ವೈಷ್ಣವ ಜನರ 3ಉರಶಿರದೃಷ್ಟಿಲಿ ಮನವಾಚದಲಿಚರಣಕರಗಳಲಿ ಜಾನುಗಳಲಿಧರೆಯಲಿ ಅಷ್ಟಾಂಗಪ್ರಣಾಮ ಮಾಳ್ಪರ್ಗೆಹರಿದು ಹೋಗೆ ಪಾಪವರ ಮುಕ್ತಿಈವ4ಸರುವಾಂಗವ ಧರೆಗೊಂದಿಸಿ ಭಕುತಿಲಿಹೊರಳಾಡಿ ಭೂಮಿಲಿ ಪರವಶದಿಹರಿಗೆ ನಮಿಸಲು ಮೈಗೊರೆದ ಧೂಳಿಯ ಕಣಾಪರಿಮಿತ ಸಹಸ್ರಾಬ್ದ ಪರಮಾಣ ಪದವಕ್ಕು 5ಸಿರಿಅಜಭವೇಂದ್ರಸುರರುಮಹಾಮುನಿನಿಕರನೃಪಮನುಜೋತ್ತಮರೆಲ್ಲಪರಮಭಕುತಿಲಿ ನಮಿಸೆ ಹರಿವಶನಾಗುವಹರಿಜನಕೆ ಮುಕ್ತಿಪಥಕಿದೆ ಪಾಥೇಯ 6ಅರ್ಚಿತ ಕೃಷ್ಣನ ನೋಡುತಾನಂದಾಶ್ರುಹುಚ್ಚನಂತೆ ನಮಿಸಿ ನಗುತ ಸುರಿಸಿಅಚ್ಯುತಾನಂತ ಸದ್ಗುಣನಿಧಿ ಭಕ್ತಪ್ರಿಯನಿಚ್ಚಪ್ರಸನ್ವೆಂಕಟನೆಂದುಚ್ಚರಿಸಿ7
--------------
ಪ್ರಸನ್ನವೆಂಕಟದಾಸರು