ಒಟ್ಟು 13 ಕಡೆಗಳಲ್ಲಿ , 10 ದಾಸರು , 13 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನುಭವ ಬಾರಾಮಾಸ ) ಏನೆಂದು ಹೇಳಲಿ ಶಾಂತಳೇ ಬುದ್ಧಿವಂತಳೇ | ವರ್ತ ಣೂಕದೆನ್ನ ಮಾತಾ | ಶ್ರೀನಾಥ ನಂಘ್ರಿಯ ನೋಡದೇ ಒಮ್ಮೆ ಮಾನವ ಜನು ಮದಿ ಬಂದೆನು ಹೊಂದಿ ನಿಂದೆನು | ಮೆರೆದೆನು ಸ್ವಹಿತಾ | ನಾನಾ ಹಂಬಲ ದೊಳು ಶಿಲುಕಿದ ಬಲು ಬಳಲಿದ | ದೊರಯದು ಪರಮಾರ್ಥ | ಶ್ಲೋಕ 1 ಭರತ ಖಂಡದಿ ಬಂದ ನೃದೇಹವಾ | ಮರೆದು ಮಾಡಲಿಬಾರದು ಹೇಯವಾ | ತ್ವರಿತ ನಂಬುದು ಶ್ರೀ ಹರಿ ಪಾದವಾ | ಗುರು ಮಹಿಪತಿ ಸಾರಿದ ಬೋಧವಾ | ಪದ ಮುಕುತಿ ಸಾಧನ ಮಾರ್ಗಶೀರ್ಷ ಮಾಸಾ ವಿಶೇಷಾ | ಧರಿಯೊಳು ಇದರಿಂದಾ | ಯುಕುತೊಲು ಹೋಗಿ ನಿರಂತರಾ ಸಾಧು ಸಂತರಾ | ಅವರ ಚರಣಾರವಿಂದಾ | ಭಕುತಿಲಿ ಮುಟ್ಟಿವಂದಿಸಲಿಲ್ಲಾ ಹೊಂದಿಸಲಿಲ್ಲಾ | ಅಖಿಳ ದೊಳಾರಿಗೆ ಬಾಗದೇ ದಿನನೀಗದೇ | ಮೋಟ ಮರ ನಿಲುಲುಂದಾ | ಶ್ಲೋಕ 2 ಮೆರೆವ ಅವಯವದೊಳು ಉತ್ತು ಮಂಗದಿ ನಿಂದು | ಹೊರಿಯ ಲುದರ ಕಾಗೀ ಬಾಗುವೀ ನೀಚಗಿಂದು | ಹರಿ ಶರಣರ ಕಂಡು ವಾಕ್ಯ ನಮನವೇನು | ಗುರು ಮಹಿಪತಿ ಸ್ವಾಮಿ ವಲಿಯನೆಂದಿಗೆ ತಾನು | ಪದ ಮಾಸ ಶೂನ್ಯವೇ ನೋಡು ಶ್ರವಣವೇ | ಮಾಡಿ ಸ್ಥಿರ ಮನುಚಿತಾ | ಸವಿ ಸವಿಯಲಿ ನಿತ್ಯ ನೂತನಾ ತೋರದನುಮಾನಾ | ಶ್ರೀ ಗೋವಿಂದ ಚರಿತಾ | ಹವಣದಿ ಸಂತರ ಮುಖದಿಂದಾ ಅನುಸರಣಿಂದಾ | ಕೇಳಲಿಲ್ಲನರತಾ | ಅವನಿಲಿ ದುಷ್ಟಪ ಕೀರ್ತಿಯಾ ಅನ್ಯ ವಾರ್ತರಿಯಾ | ಆಲಿಸಿದೇ ಸುಖ ಬಡುತಾ | ಶ್ಲೋಕ 3 ಕುಂಡಲ ವಿಟ್ಟಿಹಾ | ಹರಿ ಕಥಾಮೃತ ಕೇಳುದು ಬಿಟ್ಟಿಹಾ | ಗಿರಿಯ ಗುಹ್ಯವೋ ಕರ್ಣವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ನೋಟ ಉನ್ಮನಿ ನದಿ ಮಾಘವೇ ಮಹಾಯೋಗವೇ | ಲಯ ಲಕ್ಷಿಯ ಲಿಂದು | ನೀಟದಿ ಹರಿಯಾವತಾರದಾ ಮೂರ್ತಿ ಧ್ಯಾನಕ ತಂದು | ಧಾಟಿಲಿ ಸಮ ದೃಷ್ಟಿ ಬಲಿಯದೇ ಅಲ್ಲ ಚಲಿಸದೇ | ನಾನಾ ಬಯಕೆಯ ವಿಡಿದು ತ್ರೋಟಕ ದೈವ ನೋಡಿದ ಮತ ಕೂಡಿದ | ನೀಚ ವೃತ್ತಿಗೆ ಬಿದ್ದು | ಶ್ಲೋಕ 4 ಅಂಗನೆಯರ ಶೃಂಗಾರ ನೋಡುವಾ | ರಂಗನಾಕೃತಿ ನೋಡಲಿ ಬಾಡುವಾ | ಕಂಗಳೋಸಿ ಖಿಗಿಲಿಗಳೋ ಮಂದನಾ | ಇಂಗಿತ್ಹೇಳಿದ ಮಹಿಪತಿ ನಂದನಾ | ಪದ ಪುಣ್ಯ ಫಲಗುಣ ಮಾಸವೇ ವಬಿಗಿಯೇರ ಸನವೇ | ಸನ್ನುತ ಶ್ರೀಹರಿ ನಾಮವಾ ವಿಡಿದು ಪ್ರೇಮನಾ | ಪದ ಪದ್ಯಲೀಗ | ಚೆನ್ನಾಗಿ ಕೀರ್ತನೆ ಮಾಡದೇ ಗತಿಬೇಡದೇ | ಪಾತಕಕೆ ಗುರಿಯಾಗೆ | ಅನ್ಯರ ನಿಹಪರ ಸ್ತುತಿಗಳಾ ಹುಸಿನುಡಿಗಳಾ | ಆಡಿಬರಡಾದೆ ನೆಲಿಗೆ | ಶ್ಲೋಕ 5 ಸಿರಿಕಾಂತಾ ನತಶಮಿತ ದುರಿತಧ್ವಾಂತ ಯನುತಾ | ಹರಿನಾಮಾ ಪ್ರೇಮ ವಿಡಿದು ಸ್ಮರಿಸಾದಿಪ್ಪವನುತಾ | ನರಾಧಮಾನೇ ಮಾವನ ಮುಖವೋ ನೃಪಮಾಯ ಮುಖವೋ | ಅರುಹಿದಾ ಬೋಧಾ ಗುರು ಮಹಿಪತಿ ಸ್ವಾಮಿ ಸುಖವೋ ಪದ ದೋಷನಾಶಕ ಪ್ರಣವಧ ಕ್ಷೇತ್ರಾ ಮಾಸವೀ ಚಿತ್ರಾ | ಪವನನಾ ನೆಲೆಗೊಳಿಸಿ | ಮೀಸಲ ರೇಚಕ ಪೂರ್ವಕಾ ಧೃಡ ಕುಂಭಕಾ | ದಿಂದ ಮಂತ್ರವ ಜಪಿಸಿ | ವಸುದೇವನ ಪಾದ ನಿರ್ಮಾಲ್ಯ ಆಘ್ರಾಣಿ ಸಲಿಲ್ಲಾ | ಭೋಗ ದ್ರವ್ಯವ ಬಯಸಿ | ಲೇಸಾದ ಪರಿಮಳವನೇ ತಂದು ವಾಸಿಸುತ ನಿಂದು | ಮೈಯ್ಯ ಮರ್ತೆನು ಚಲಿಸಿ ಶ್ಲೋಕ 6 ಪರಿಮಳಂಗಳ ವಾಸನೆಗ್ಹಿಗ್ಗುಯವಾಸಿರಿ | ತುಳಸಿಯ ತೋರಲು ಸಗ್ಗುವಾ | ಇರುವ ನಾಶಿಕೋತಿತ್ತಿಯೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ತನುವೆಂಬೋ ವೃಕ್ಷ ಕಿವೇ ಶಾಖಾ ಹಸ್ತಾ ಮೌಲಿಕಾ | ದೇವ ಪೂಜದರಿಂದ | ಘನವಾದಾ ತುಳಸಿ ಪುಷ್ಪಗಳನು ತಂದು ಹಲವನು | ಸಹಸ್ರ ನಾಮಗಳಿಂದಾ | ಅನುವಾಗಿ ಹರಿಗೆ ಏರಿಸಲಿಲ್ಲಾ ಅರ್ಪಿಸಲಿಲ್ಲಾ ಮರಹು ಆಲಸ್ಯದಿಂದಾ | ವನಿಯೊಳು ಪಗಡಿ ಪಂಚಿಗಳನು ಆಡಿ ದಿನವನು | ನೂಕಿದನು ಇದರಿಂದಾ | (ತನಗಿಂದ ದೀನದುರ್ಬಲರನು ಕಂಡು ಹೊಡೆವನು | ಹೋಗಾಡಿದ ನಿಜಾನಂದ ) ಶ್ಲೋಕ 7 ಹರಿಯ ಸೇವೆಯ ಮಾಡಲು ಬೀಳುವಾ | ಮೆರೆವ ಕಂಕಣ ಮುದ್ರಿಕೆ ತಾಳುವಾ | ಕರವೋ ಮದನಾ ಕೈಯ್ಯವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ | ಪದ ಸರ್ವ ವಿಷಯವತಿ ಜೇಷ್ಠವೇ ಬಲಿ ದಿಷ್ಟವೇ | ಮೃದು ಕಠಿಣ ವೆನ್ನದೇ | ಹರಿಯಂಗಣದಿ ಲೋಟಾಂಗಣವನು ಹಾಕುತಲಿ ತಾನು | ದೇವ ರೂಳಿಗದಿಂದೇ | ನೆರೆ ಹಡಪಿಗ ಪಾದುಕೆಯ ವಾ ಯಂಬನಾಮವಾ | ತಾಳಿ ಕರಸಿ ಕೊಳ್ಳದೇ | ತರಳೆ ತ್ಯಾಡಿಸುತಲಿ ತನ್ನಾ ಕಳೆ ದನುದಿನಾ | ಇದು ಯಾತರ ಛಂದಾ | ಶ್ಲೋಕ 8 ಪರೋಪಕಾರ ವಂಚನೆ ಮಾಡುವಾ | ಸುರಭಿ ಚಂದನ ಮಿಂಚಿಲೆ ತೀಡುವಾ | ಶರೀರೋ ಬೆಚ್ಚಿನ ಮಾಟವೋ ಮಂದನಾ | ಅರಿತು ಸಾರಿದ ಮಹಿಪತಿ ನಂದನಾ ಪದ ಆಷಾಡ ಗೇಯಲಿ ಹಸಿವೆಯ ಬಲು ತೃಷಿವಿಯು | ಸಕಲನು ಕೂಲದಿಂದಾ | ಲೇಸಾಗಿ ನೈವೇದ್ಯ ವದಗಿಸಿ ಹರಿಗರ್ಪಿಸಿ | ನಿಜ ತೀರ್ಥ ಪ್ರಸಾದಾ | ಭೂಷಣದಲಿ ನಾನು ಕೊಳಲಿಲ್ಲಾÀ ಸುಖ ಬಡಲಿಲ್ಲಾ | ದೋಷದನ್ನವ ಉಂಡು ವಡಲನು ನಾನು ಹೊರೆದನು ಬಯಸುತ ಜಿವ್ಹ ಸ್ವಾದಾ ಶ್ಲೋಕ 9 ವಿದತವಾದ ರಸ್ನಾವ ಉಂಬನು | ಮುದದಿ ತತ್ವದ ವಿದ್ಯವ ತುಂಬನು | ಉದರೋಶಾಲ್ಮಲಿ ಫಲವೋ ಮಂದನಾ | ಇದನು ಸಾರಿದ ಮಹಿಪತಿ ನಂದನಾ | ಪದ ಮನ ವಿಶ್ರಾವಣ ಸುಖ ಬೆರತಿದೇ ನೋಡು ನಿಂದಿದೇ | ಗುರು ಬೋಧಿಸಿದನು | ಮನನ ಮಾಡುತ ನಿಜಧ್ಯಾಸಾ | ಹಚ್ಚಿ ವಿಶೇಷಾ | ಪಡೆದು ಸಾಕ್ಷಾತ್ಕಾರವನು | ಚಿನುಮಯಾನಂದ ನೋಲಾಡದೇ ತಾಂ ಪೀಡಾಡದೇ | ಅಲ್ಲಿ ತೊಳಲಿದ | ಹರಿ ವಲುಮೆ ಇಲ್ಲದೇನು | ಶ್ಲೋಕ 10 ವಿಷಯ ಚಿಂತನೆ ಮಾಡಲು ಸಂಭ್ರಮಾ | ಕುಸುಮ ನಾಭನ ನೆನಿಯೆ ವಿಭ್ರಮಾ | ಕುಶಲ ಮಾನಸೋ ಪಶುವೋ ಮಂದನಾ | ಸ್ವಸುಖ ಸಾರಿದ ಮಹಿಪತಿ ನಂದನಾ ಪದ ಸುಕೃತ ಇದೇವೇ ಭಾದ್ರಪದವೇ | ನಡೆದ್ಹೋಗಿದ ರಿಂದಾ ಒಲಿದ ಪುಣ್ಯ ಕ್ಷೇತ್ರವಾಗಿಹಾ ಸಂತರಾಲಯಾ | ಪುಗುವುದೇ ಯಾತ್ರೆ ಛಂದಾ | ಜಲಜಾಂಬಕನ ಮಹಿಮೆ ಗಳುಂಟು ಅಲ್ಲಿ ಸುಖವುಂಟು | ತೊರೆದನು ಪುರವಿಂದಾ | ಸತಿ ಉದರದ ದಾವತಿಗಾಗಿ ತಿರುತಿರುಗೀ | ಜನುಮ ಶ್ಲೋಕ 11 ಧನದ ಆಶೆಗೆ ನಡೆಡತಾಕುವಾ | ಘನ ಪ್ರದಕ್ಷಿಣೆ ಮಾಡಲು ಬಳುಕುವಾ | ಮನುಜಪಾದವೋ ಪಾದವೋಮಂದನಾ | ಅನುವ ಸಾರಿದ ಪದ ಪ್ರತಿ ಪದಾಶಿವಿಜಯಂಬುದೇ ಗುರು ಭಕ್ತಿಂದೇ | ಶೃತಿ ಯಥಾದೇವೇ ತಥಾಗುರೌ ಎಂದು ನುಡಿವುದು ಅರ್ಥ ತಿಳಿದು | ನಂಬಿ ಭಜಿಸದೆವೆ | ಕ್ಷಿತಿಯೊಳು ನರರೆಂದು ಬಗೆದೆವು ಹಿತ ಮರದೆವು | ಬಾಹ್ಯ ದೃಷ್ಟಿ ಶ್ಲೋಕ 12 ಸಕಲ ವೃತ ತಪ ತಿರ್ಥಾ ಶಾಸ್ತ್ರ ಪೌರಾಣ ಬಲ್ಲಾ | ಅಖಳದಿ ಫಲವೇನು ಶ್ರೀ ಗುರು ಭಕ್ತನಲ್ಲಾ | ನಿಖಿಳಾ ಭರಣಗಳಿದ್ದು ವ್ಯರ್ಥ ಮಾಂಗಲ್ಯವಿಲ್ಲಾ | ಪಿಂತಿನ ತಪ್ಪವ ನೋಡದೇ ತಡ ಮಾಡದೇ | ಸಿರದಲ್ಲಾ ಭಯ ನೀಡಿ | ಅಂತರಂಗದ ಸುಖದೆಚ್ಚರಾ ಕೊಟ್ಟ ಸಾರಥಿ | ನಾಮ ಬಿಡದೆ ಕೊಂಡಾಡಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನೆಂದು ಬಣ್ಣಿಸುವೆನೊ ನಾನು | ಶ್ರೀನಾಥ ಪ್ರಿಯಳಾದ ಶ್ರೀ ತುಳಸಿ ಮಹಿಮೆಯನು ಪ ಅಮೃತ ಕಲಶ ಬರೆಕಂಡು ಅತಿ | ಜಲಜಾಂಬಕನ ಪ್ರೇಮಾಂಜಲ ಉದರಲು | ಇಳಯೊಳದಿರಿಂದುದಿಸಿ ಬೆಳೆದು ನಿಂದಿರೆ ನೋಡಿ | ಒಲಿದು ಕೋಮಲ ಮುಗುಳು ತಳೆದ ಶ್ರೀಹರಿ ತಾನು 1 ಹರಿಯು ಧರಿಸಿದ ಕಂಡು ಸುರರೆಲ್ಲ ವಂದಿಸುತ | ಶಿರದಲಾಂತರು ಪರಮ ಹರುಷದಿಂದ | ಸಿರಿಸರಸ್ವತಿ ಗಿರಜೆ ನಿರುತ ನಿನ್ನಯ ವ್ರತದಿ | ಧರೆಯೊಳಗೆ ತಮ್ಮ ತಮ್ಮ ಅರಸರೊಲಿಸಿದರೆಂದು 2 ದುರಿತ ಕುಲ ಓಡುವವು ತನುವ ನೀ ಡಾಡಿ ಜಲನೀಡಿ ಕೊಂಡಾಡಿ ನಿಂದು | ಕೂಡೆ ಮೃತ್ತಿಕೆ ಫಣಿಗೆ ತೀಡಿದರೆ ಭಕುತಿಯಲಿ | ಬೇಡಿದಿಷ್ಟಾರ್ಥ ಕೈಗೂಡಬಹುದಿಳೆಯೊಳಗೆ 3 ತುಲಸಿ ಭಕುತಿಲ್ಲದವ ಕಲಿವಂಶದನುಜನವ | ತುಲಸಿ ಧರಿಸಿದ ತನುವು ಸಲೆಮುಕ್ತಿ ಮಂಟಪವು | ತುಲಸಿ ಬೆಳೆಹದಿ ಮನೆಯು ಬಲಿದ ಪುಣ್ಯದ ಖಣಿಯು | ತುಲಸಿ ಇಲ್ಲದ ಗೇಹ ಕಲುಷಾಲಯ 4 ಮೂಲದಲಿ ಬ್ರಹ್ಮ ತಾ ನೀಲಕಂಠನು ನಡುವೆ | ಮೇಲುತುದಿಯಲಿ ವಿಷ್ಣು ಲೋಲಾಡುವಾ | ಸಾಲಕೊಂಬೆಗಳಲಿ ವಿಶಾಲದೇವತೆಗಳಿಹರು | ತಾಳಿ ಪ್ರೇಮವನು ಮಹೀಪತಿ ನಂದನಾಜ್ಞೆಯಲಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯ ಇಂದಿರೆ ರಮಣ ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ. ಈಗ ಈ ಜನ್ಮದಲ್ಲಿ ಭವ ದಾಟುವಲ್ಲಿ ಅ.ಪ. ಮಾನವ ನಾನಾಗಿ ಪುಟ್ಟಿ ಕಾಲ ಕಳೆದು ದೀನನಾಗೀಗ ಇನ್ನು ನೀನೆ ಗತಿಯೋ ಎನಲು ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1 ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು ನೋಯಿಸುತ್ತಿರಲು ಎನ್ನ ಬಾಯಬಿಡುತಲಿ ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2 ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3 ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4 ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ ಆಪಾದಮೌಳಿ ನಿನ್ನ ರೂಪವ ತೋರಿ ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
--------------
ಅಂಬಾಬಾಯಿ
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ತೋರೆನಗೆ ಶ್ರೀ ಕೃಷ್ಣ ತೋಯಜಾಂಬಕ ನಿನ್ನ ಶ್ರೀ ರಮೇಶನೆ ನಾನಾ ಗುಣನಾಮ ಮಾಲೆ ಪ. ವಾರಿಜಾಂಬಕನೆ ಶ್ರೀ ಗುರುಗಳ ರಚಿಸುತಲಿ ಹಾರಹಾಕಿಹರೊ ನಿನಗೆ ಹರಿಯೆ ಅ.ಪ. ಮೋಹನವಿಠ್ಠಲನೆಂಬಾ ಒದ್ದು ತಾಪತ್ರಯವನು ತಿದ್ದಿ ತಿಳಿಸುತಲಿ ಜ್ಞಾನ ಕರ್ಮ ತಿದ್ದಿ ತಿಳಿಸಿದ ಗುರುಗಳು ಇವರು 1 ಇಂದಿರಾಪತಿ ರಂಗನಾಥ ರಘುರಾಮ ಇಂದಿರೇಶ ದಯಾಪೂರ್ಣ ಸೀತಾಪತೇ ವೇದೇಶ ಯಾದವೇಂದ್ರ ಸ್ವಾಮಿ 2 ಇಂದಿರಾರಮಣ ಜಯ ಗೋಪಾಲನೆ ವರದೇಶ ಪ್ರಾಣನಾಥಾ ಪದ್ಮನಾಭ ಶ್ರೀನಾಥ ಜಗದೀಶನೆ ವರದ ಮೋಹನದೇವಾ 3 ಶ್ರೀಕಾಂತ ಪುರುಷೋತ್ತಮ ಪರಮಾನಂದ ಶ್ರೀ ಸುರೇಂದ್ರ ಕರುಣಾಕರ ವೆಂಕಟ ದಯಾಮಯನೆ ಭವತಾರಕ ಹರಿಯೆ 4 ವಸುದೇವ ಪಾರ್ಥಸಾರಥಿಯೆ ಪ್ರಾಣಪ್ರಿಯ ಪರಿಪೂರ್ಣ ಮಧ್ವವಲ್ಲಭಮುಕ್ತಿ ದಾಯಕ ಸತ್ಯೇಶನೆ ಪರಮಪಾವನ ರಮೇಶ ಕರುಣಾನಿಧೆ ಪುಂಡರೀಕಾಕ್ಷ ಸ್ವಾಮಿ 5 ಕಲ್ಯಾಣಗುಣಪೂರ್ಣ ಚಂದ್ರಹಾಸವರದ ಮಾಯಾಪತಿ ಉಪೇಂದ್ರ ಚಕ್ರಪಾಣಿ ಮುಕ್ತೇಶ ಬದರಿನಾಥಾ ಜಯಪ್ರದ ನಿರ್ಜರೇಶ ಜಾನಕೀಪತಿ ವಿಶ್ವನಾಥಾ ಸ್ವಾಮಿ 6 ಭುವನೇಶ ಗಜರಾಜವರದ ಜನಾರ್ಧನ ಮಧ್ವನಾಥ ಆನಂದ ಅರವಿಂದಾಕ್ಷ ಪುಂಡರೀಕವರದ ಶ್ರೀ ಕೃಷ್ಣಸ್ವಾಮಿ 7 ಮಾಧವ ಕಮಲಾನಾಥ ಕಮಲನಾಭ ಸದಮಲಾನಂದ ವೈಕುಂಠವಾಸ ಪದ್ಮೇಶ ಗುರು ಮಧ್ವೇಶ ಇಂದಿರಾಪತಿ ರಮೇಶ ಶ್ರೀಶÀ 8 ನಿಗಮ ಸಿರಿರಮಣ ಕಮಲಾಕಾಂತನೆ ಸರವ ಪೋಣಿಸಿ ಹಾಕುತ ಪರಮ ಪ್ರಿಯ ಶ್ರೀ ಗುರುಗಳು ಉಳಿದ ನಾಮಾ ಪೊರೆಯೋ 9
--------------
ಅಂಬಾಬಾಯಿ
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು ಮಾಯಾ ಪ್ರಪಂಚವನು ಅನುಗಾಲಾ ನಂಬು ನಮ್ಮಂಬುಜಾಂಬಕನ ಪಾದಾಂಬುಜವ ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ ಒಂದು ದಿನಲಿರಲಾಗಲವರರೇತಸು ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು ರ್ಗಂಧದೊಳು ಬಂದು ನಿಂದೂ ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು ಬಿಂದು ಕೆಳಗೆ ಹೊರಳಿದಿರು ಮರುಳೆ 1 ತಾಮಸವ ಕವಿದು ಕಾವಳಗೊಂಡ ಕತ್ತಲೆಯ ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ ಮುಂಜಿಯನು ಕಟ್ಟಿ ಬಂಧುಬಳಗ ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ 2 ಮದ ಮತ್ಸರ ಲೋಭ ಮೋಹ ಕಾಮಾದಿಯಲಿ ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ ತುಂಬಿ ಕಾಲವನು ಕಳೆದು ಮಕ್ಕಳ ಪಡೆದು ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ ಮುದದಿಂದ ನರಕದೊಳು ಬೀಳುವಾ ಹುರುಳೆ 3 ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ ಬದ್ಧವಿಲ್ಲದಲೆ ಕರಗಾತಿಂದು ಬಡತನಾ ಸಿದ್ಧನಾಗಲು ತಿಂದವರು ಹರದೋಡಿ ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ 4 ಬಿಡು ಬಿಡು ಅಕಟ ಸಂಸಾರ ಸಾಗರದ ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ ಹಿಡಿ ಹಿಡಿ ಪರಮ ಭಾಗವತರ ಸಂಗತಿಯ ಸರ್ವಜ್ಞತೀರ್ಥರ ಮತದ ಕರುಣವನು ಪಡೆಯಲು ಅಧಿಕಾರನಾಗಿ ಸಿರಿದೇವಿಯ ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ ತಡಿಯದಲೆ ಸದ್ಗತಿಗೆ ಸೇರುವದು ಮರುಳೆ5
--------------
ವಿಜಯದಾಸ
ನಾರಾಯಣಾದ್ರಿ ಕೃತವಾಸ ಶರಣು ತೋರಯ್ಯ ತವರೂಪ ರವಿಕೋಟಿಭಾಸ ಪ ಆನತಜನಾಪ್ತ ನೀನೆಂಬೋ ನುಡಿಕೇಳಿ ಮಿಗೆ ಸಾನುರಾಗದಲಿ ನಡೆತಂದೆ ನಿನ್ನ ಬಳಿಗೆ ಮಿನಾಂಕಜನಕ ತವಪದಯುಗಾರ್ಚನೆ ಹೀಗೆ ಜ್ಞಾನ ಪೂರ್ವಕದಿಂದಲೆನಗೆ ದಯದಿ ಪಾನೀಯಜಾಂಬಕನೆ ಪೊರೆಯೆಂದೆ ನಿನಗೆ 1 ವಾಸುಕೀ ತಪಕೆ ಸಲೆಮೆಚ್ಚಿ ಗಿರಿಯಲಿ ನಿಂದೆ ಆ ಸಲಿಲದೊಳು ಮಿಂದು ಕರಿವರ ಕರೆಯೆ ಬಂದೆ ಸ್ವಾಮಿ ವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆ ಆ ಸಮರದೊಳಗೊಲಿವನೆಂದೆ ನಿನಗೆ ಪಾಸಟಿ ಯಾರು ನೀರಜಭವನ ತಂದೆ 2 ಸುರರು ನಿನ್ನ ಮಹಿಮಾತಿಶಯ ಬಗೆಯನರಿಯಳು ಲಕುಮಿ ಬದರ ಸನ್ನಿಭಕಾಯ ಮಾನವ ತಿಳಿವನೆನೋ ತಿರುಮಲರಾಯ ಖಗÀರಾಜಗಮನ ಕಮನೀಯ ಪಾಹಿ ಜಗನ್ನಾಥವಿಠಲ ವಿಗತಾಘ ಕವಿಗೇಯ 3
--------------
ಜಗನ್ನಾಥದಾಸರು
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಪ ತೋರಯ್ಯ ನಿನ್ನ ದಯ ತೋಯಜಾಂಬಕನೆ ಅ.ಪ. ದುರುಳರ ತರಿವಂಥ ವರಚಕ್ರಧಾರಿ ಪರಮಾತ್ಮ ಪರಬೊಮ್ಮ ಪರರಿಗುಪಕಾರಿ1 ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ ತರಳ ಪ್ರಹ್ಲಾದನ್ನ ವೈರಿಯ ಮುರದಿ 2 ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ3 ಅನಂತನಾಮನೆ ನಿನ್ನ ಅನಂತ ಸದ್ಗುಣವ ನೆನೆವರಿಗೊಲಿವಂಥ ಪವಮಾನನೀಶಾ 4 ಅಜಭವಾಧಿಪ ನೀನು ವಿಜಯಸಾರಥಿಯೇ ತ್ರಿಜಗವಂದಿತ ಈಶ ವಿಜಯವಿಠ್ಠಲನೇ 5
--------------
ವಿಜಯದಾಸ
ಮಾನವಾತ್ಮರೆ ನಿಮ್ಮ ಮಾನಸ ಪೂಜೆಯಿಂಮಾನವನಿಗೆ ಮೋಕ್ಷ ಸಾಧಿಸೀರಿ ಪ ರತ್ನ ನಿರ್ಮಿತ ಸುಚರಿತ್ರ ಮಂಟಪವನ್ನುಸತ್ಯಭಾಮೆಯ ಪತಿಗಿತ್ತು ಪೂಜಿಸುವೆ1 ಆಸನ ನೀಡುವೆ ಶೇಷಶಯನನೆ ಇಲ್ಲಿವಾಸ ಮಾಡಿ ಎನ್ನ ಸೇವೆ ಸ್ವೀಕರಿಸು2 ಧ್ಯಾನ ಮಾಡುವೆ ನಿನ್ನ ಗಾನ ಮಾಡುವೆ ನಿನ್ನಜ್ಞಾನ ಭೂಷಣ ಶೋಭಿತಾನನಾಂಬುಜ 3 ಧೃತ ವೇಣುಗೋಪಾಲ ಬಾರೋ ಮನಸಿಗೆ ತೋರೊಮೂರುತಿ ನಿನ್ನಯ ಸಮೀರ ಸಂಸ್ತುತನೆ 4 ಅಘ್ರ್ಯ ನೀಡುವೆ ನಾನು ಅನಘ್ರ್ಯ ವಸ್ತುಗಳಿಂದಸ್ವಘ್ರ್ಯಗ್ರಹಣ ಮಾಡೋ ಭರ್ಗ ಸೇವಿತನೆ 5 ಪಾದ್ಯ ನೀಡುವೆ ವೇದ ವೇದ್ಯ ಮಹಿಮನೇ ಮುನ್ನಾವದ್ಯ ಕಳೆದು ಭವದಿಂದ ಉದ್ಧರಿಸೆನ್ನ 6 ಆಚಮನವ ನೀಡುವೆ ಹೇ ಚತುರಾನನೇಶವಾಚಾಮಗೋಚರ ಮೋಚಕ ಹೇತು 7 ಸುದತಿ ಮೋಹನ ತವಮಧುಪರ್ಕವನೀವೆ ಮುದದಿ ಸ್ವೀಕರಿಸು 8 ಮತ್ತೆ ಆಚಮನವನಿತ್ತು ಪೂಜಿಪೆ ಕರವೆತ್ತಿ ಮುಗಿವೆ ಸರ್ವಭಕ್ತ ಪೋಷಕನೆ 9 ಗಂಗೆ ಯಮುನೆ ಗೋದಾ ತುಂಗೆ ಜಲವ ತಂದಿಹೆ ಅ-ನಂಗ ಜನಕ ಮಾಡೋ ಅಭ್ಯಂಗ ಸ್ನಾನ 10 ನಿರಿಗೆಗಳನೆ ಹಾಕಿ ಜರದ ಪೀತಾಂಬರ ಗ-ರುಡವಾಹನ ನೀನು ಧರಿಸು ಮಧ್ಯದಲಿ 11 ಹಾರ ಕಿರೀಟ ಕಾಂಚಿ ನೀರ ನೂಪುರ ಸು-ಕೇಯೂರ ನೂಪುರನೀವೆ ಧಾರುಣಿಪತಿಗೆ 12 ಸ್ವರ್ಣ ರಚಿಸಿದ ಸೂತ್ರವನು ಕೊಡುವೆ ಲಕ್ಷ್ಮೀರನ್ನ ಸೌರಭ ಗಂಧವನು ಸ್ವೀಕರಿಸು 13 ವಾಸುದೇವನೆ ದಿವ್ಯ ನಾಸಿಕೇಂದ್ರಿಯದಿಂದಈಸು ಧೂಪದ ಗಂಧ ವಾಸನೆ ಗ್ರಹಿಸೋ 14 ಮರುಗು ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆಸುಮಗಳ ಪರಿಮಳ ಧರಿಸೋ ಮಧ್ಯದಲಿ 15 ಹತ್ತು ಅಂಗಗಳಿಂದ ಉತ್ತಮ ಸುಧೂಪವಎತ್ತುವೆ ನಿನಗೆ ಸರ್ವೋತ್ತಮ ಹರಿಗೆ16 ಆಕಳ ಘೃತದ ಅನೇಕ ದೀಪಗಳ್ಹಚ್ಚಿಶ್ರೀಕರ ತವ ಮುಖಾವಲೋಕಿಸುತ್ತಿಹೆನು 17 ಏಕಾರತಿ ಗೋಪಿಪ್ರೀತನೆ ಬೆಳಗುವೆನಾಕ ನಾಯಕ ಸುರಲೋಕ ಸೇವಿತನೆ 18 ಆರು ವಿಧದ ಅನ್ನ ಸಾರು ಪಾಯಸ ಭಕ್ಷ್ಯಭೂರಿ ಶಾಕಗಳೀವೆ ನೀರಜಾಂಬಕನೆ 19 ಮಾರಜನಕನೆ ಮುತ್ತಿನಾರತಿ ಬೆಳಗುವೆಶ್ರೀರಾಮನೆ ನಿನ್ನ ಮೋರೆಯ ತೋರೊ20 ಛತ್ರ ಚಾಮರ ವ್ಯಜನ ದರ್ಪಣ ಪರ್ಯಂಕಕರ್ಪುರ ತಾಂಬೂಲವಿತ್ತು ಪೂಜಿಸುವೆ 21 ಹತ್ತಾರು ಉಪಚಾರ ಚಿತ್ರ ಚರಿತನೆ ನಿನಗೆಅರ್ಥಿಯಲಿ ಕೊಡುವೆನು ಮುಕ್ತಿ ನೀಡೆನಗೆ 22 ಇಂದಿರೇಶನೆ ನಿನ್ನ ಮುಂದೆ ತುತಿಪನೆ ನಿಂತುನಂದಬಾಲನೆ ಕೃಪೆಯಿಂದ ನೋಡೆನ್ನ 23
--------------
ಇಂದಿರೇಶರು
ವಾಸುದೇವ ಹರಿ ವಿಠಲಾ | ಪೋಷಿಸುವುದಿವನಾ ಪ ನೀಸಲಹದಿರೆ ಅನ್ಯ | ಆಶ್ರಯಗಳುಂಟೇ ಅ.ಪ. ದಾಸವೃತ್ತಿಯಲಿದ್ದು | ಮೀಸಲಳಿಯದೆ ಇರುವದಾಸದೀಕ್ಷಾಂಕಿತವು | ಲೇಸು ದೊರೆಯದಲೇ |ಘಾಸಿ ಪಡುತಲಿ ಮನದಿ | ಆಶ್ರಯಿಸಿ ಎನ್ನ ಸುಪ್ತೀಶ ಸೂಚ್ಯಪರಿ ಉಪ | ದೇಶವಿತ್ತಿಹೆನೋ 1 ಒಂದೊಮ್ಮೆ ಇವನಮ್ಮ | ಬಂಧುವೆಂದೆಣಿಸಿಹನೊಇಂದಿರಾಪತಿ ಹರಿಯೆ | ಕಂದರ್ಪಜನಕಾತಂದೆತಾಯಿಯು ನೀನೆ | ಕುಂದುನೆಣಿಸದೆ ಇವನಾಛಂದದಲಿ ಸಲಹೊ ಹರಿ | ನಂದ ಮುನಿವಂದ್ಯಾ 2 ತಾರತಮ್ಯಜ್ಞಾನ ಮೂರೆರಡು ಭೇದಗಳವಾರವಾರಕೆ ತಿಳಿಸಿ | ಕಾಪಾಡೊ ಹರಿಯೇ |ಮಾರಪಿತಮುರಮೈರಿ | ವೈರಾಗ್ಯ ಭಾಗ್ಯಕ್ಕೆದಾರಿತೋರುತ ಪೊರೆಯೊ | ವಾರಿಜಾಂಬಕನೇ 3 ಉತ್ತಮಾನುಷ್ಠಾನ | ಇತ್ತು ಈತಗೆ ನೀನುಚಿತ್ತದೊಳು ವ್ಯಾಪ್ತ ಸ | ರ್ವತ್ರ ಸ್ಮøತಿಯಿತ್ತು |ಎತ್ತು ಭವವನಧಿಯಿಂ | ಕೃತ್ತಿವಾಸನ ತಾತಮತ್ತನ್ಯ ಬೇಡೆ ನಿನ | ಚಿತ್ತದೊಲ್ಲಭನೇ 4 ದೇವ ದೈತ್ಯರು ದೇಹ | ಆವಾಶಿವಿಹರೆಂಬಭಾವಗಳ ತಿಳಿಸುತ್ತ | ತೀವ್ರುಪಾಸನವಾ |ದೇವ ಇವಗಿತ್ತು ಸಂ | ಭಾವಿಪುದು ಶ್ರೀಹರಿಯೆಗೋವಿಂದಾಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
(ಒರಳುಕಲ್ಲು ಪೂಜೆಯ ಪದ)ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ || ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ || ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ1ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ || ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ 2ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ || ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ 3ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ || ಸರಸ್ವತಿಭಾರತಿ|ನಿಶ್ಚೈಸಿ ಒರಳೀಗೊದಗೀರೆ 4ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ || ಮದುವೀಗೆವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ 5ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ || ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ6ಇಂದ್ರ ಕಾಮನಸತಿಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ || ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ 7ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ || ಅವನೀಯ ಪಾಲಿಸಿದಪತಿವ್ರತೀ ಒನಕೀ ಕೈಕೊಳ್ಳೇ8ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ || ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ 9ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರನೋಡಿ ಕೊಟ್ಟೀ ಪ್ರಸೂತೀ || ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ 10ಗಂಗಾದೇವಿ ಯಂಥ ಇಂಗಿತಜÕಳೆ ನೀನು |ಹಿಂಗಿಸಿದೆ ವಸುಗಳಪವಾದಾ || ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ 11ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ || ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ 12ಅನ್ಯರನ ಪಾಡಿದರೆಬನ್ನಬಡಿಸುವ ಯಮನು |ವನ್ನಜಾಂಬಕನಾಶುಭನಾಮಾ || ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ13ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ || ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ 14ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ || ಇಟ್ಟು ಸುಸ್ವರಗೈದುಅಚ್ಯುತನ ಪಾಡೋರಿನಿತೆಂದೂ 15ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ16ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ || ರರಿತಿಲ್ಲಅವಿಯೋಗಿಎಂದು ಕರಸುವಳು ಶೃತಿಯೋಳೂ 17ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ || ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ18ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ || ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು 19ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ || ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ 20ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತಜ್ಞಾನವಂತಾರೊ || ಜ್ಞಾನವಂತರೊ ನಿನ್ನಯುಗಳಸೊಸಿಯರೂ ಪರಮಾತ್ಮಾ21ಈ ವಸುಧಿಯೊಳಗೆಲ್ಲಾ ಆವಶುಭಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ || ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ 22ಅಕ್ಲೇಶಾ ಅಸಮಂಧಾ ಶುಕ್ಲಶೋಣಿತದೂರಾ |ಹಕ್ಲಾಸುರಾರೀ ದುರಿತಾರೀ || ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ 23ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ || ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ 24ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ25ಜಯ ಮತ್ಸ್ಯಾ ಕೂರ್ಮಾಕಿಟಿಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ || ಶ್ರೀಬುದ್ಧಕಲ್ಕಿ ಜಯಜಯ ದತ್ತಾತ್ರಯಶುಭಕಾಯಾ 26ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ || ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ 27
--------------
ಪ್ರಾಣೇಶದಾಸರು
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
--------------
ಪ್ರಸನ್ನವೆಂಕಟದಾಸರು