ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರುಮುನಿದರು ಮುನಿಯಲಿ ಎನ್ನಪಾರು ಮಾಡುವಹರಿನಿನ್ನ ದಯವಿರಲಿಪವಾರಿಜಾಕ್ಷನೆ ನಿನ್ನ ಕರುಣವೆಂಬಾಲಯಸೇರಿ ಕೊಂಡವರಿಗೆ ಆರಂಜಿಕಿನ್ನೇನು ಅ.ಪಬಿರುಗಾಳಿ ಭರದಿಂದ ಬೀಸೆ ಮಹಗಿರಿಯು ನಡುಗಿ ಅದರಿಂದಾಗ್ವುದೆಘಾಸಿನರಿಗಂಜಿ ಹುಲಿ ಸ್ಥಳ ತ್ಯಜಿಸಿಮರೆಯಾಗೋಡುವದೇನರಹರಿ ತವಪಾದ ಸ್ಮರಿಪ ದಾಸರುನರಗುರಿಗಳಿಗ್ಹೆದರುವರೇನು 1ದಿನಕರನಿಗೆ ಕುಂದ್ಹೊರಿಸಿ ಇಂಥಬಿನುಗರು ಜರೆದರೆ ಆಗುವನೆ ಮಸಿವನಜಾಕ್ಷನೊಳು ಮನ ನಿಲಿಸಿದಿನ ದಿನ ಘನವಾಗಿ ನೆನೆವ ಭಕ್ತರಮನ ಮಣಿಯುವುದೇನಯ್ಯಬಿನುಗರ ಕೃತಿಗಿನ್ನು 2ಬರುವುದೆಲ್ಲವು ಬಂದು ಬಿಡಲಿ ಎನ್ನಸರುವರು ಪರಿಪರಿ ಜರಿದುನೋಡಲಿಸಿರಿವರ ನಿನ್ನ ದಯವಿರಲಿಮರಿಯಾದ್ಹಾಳಾಗಲಿ ಸ್ಥಿರಸುಖ ಪ್ರಾಪ್ತಿಸಲಿವರದ ಶ್ರೀರಾಮ ನಿನ್ನಸ್ಮರಣೆಯೊಂದೆನಗಿರಲಿ 3
--------------
ರಾಮದಾಸರು
ಹೇ ಮನವೆ ಈ ದೇಹ ಗಾಳಿದೀಪ ಪ.ನಳ ಪುರೂರವ ಹರಿಶ್ಚಂದ್ರ ಪುಣ್ಯಶ್ಲೋಕರುಇಳೆಯೊಳು ಒಯ್ಯಲಿಲ್ಲ ದಾರೂ 1ಹಂಬಲಗಡಲೊಳು ಮುಳುಗಲಿನ್ನಾವ ಸುಖಅಂಬುಜಾಕ್ಷಗೆ ಸಲ್ಲಲೀ ಲೆಕ್ಕ 2ಧರ್ಮವ ಹಳಿದು ಸತ್ಕರ್ಮವ ಜರೆದರೆನಮ್ಮ ಪ್ರಸನ್ನವೆಂಕಟ ದೂರ 3
--------------
ಪ್ರಸನ್ನವೆಂಕಟದಾಸರು