ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆಯಬಾರದು ನಮ್ಮ ಮುರವೈರಿಯ ಕರುಣಾಕರ ಸಿರಿವರನಾದ ದೊರೆಯ ಪ. ಪರಿಕಿಸುವನು ನಾನಾ ತರದಿಂದಲಿ ಜರಿವನು ಮತ್ತೆ ನೇವರಿಸುವನು ಸುರ ನರೋರಗ ಪಕ್ಷಿಯಿರೆ ತರು ಮೊದಲಾಗಿ ಪೊರೆವ ಮೆರೆವ ಕರೆದಲ್ಲಿ ಬರುವ 1 ಬಡತನದಲಿ ಭಾಗ್ಯಕಾಲದಲಿ ಕಡು ಕಷ್ಟದಲಿ ಸೌಖ್ಯ ವೇಳೆಯಲಿ ಅಡವಿಯಲಾದರು ಅರಮನೆಯಲ್ಯಾದ- ರೊಡೆಯ ಸಲಹನೆ ಮೀರನು ಭಿಡೆಯ 2 ಸರ್ವ ಸ್ವತಂತ್ರ ಶ್ರೀ ರಮಣೀಶ ನಿರ್ವಹಿಸುವನು ನಂಬುವರಾಶಾ ಭರ್ವಸವಿಡು ಶೇಷ ಪರ್ವತೇಶ್ವರನಲಿ ನೀರ್ವಾಣೇಶ ಸರ್ವರೊಳಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸುವೆ ಹರಿಯನು ದುರಿತವ ಕಳಿವನು ಪ ಮರಿಯಾನು ಭಕುತರ ಜರಿವನು ದುರುಳರ ಪೊರೆವನು ಸುಜನರ ಭರದಿಂದ ಶಿರಿವರ 1 ಕರಿರಾಜಾನೀತನ ಕರಿಯಲು ಆ ಕ್ಷಣ ತ್ವರಿತಾದಿ ಈ ಜಾಣ ಪೊರೆದನು ಬಲು ಘನಾ 2 ಕರುಣಾಳು ಈತನು ಸುರರೊಳು ಮರಿಯಾನು ನಮ್ಮನು ಶ್ರೀವತ್ಸಾಂಕಿತನು 3
--------------
ಸಿರಿವತ್ಸಾಂಕಿತರು