ಒಟ್ಟು 47 ಕಡೆಗಳಲ್ಲಿ , 19 ದಾಸರು , 35 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಗಣಪತಿಗೆ ವಂದಿಸಿ ಕೆಳದಿಯ ಪುರದಭೋಗಮಂದಿರ ರಾಮೇಶ್ವರನ ರಂಭೋಗಮಂದಿರ ರಾಮೇಶ್ವರನ ಸನ್ನುತಿಸುತರಾಗದಿ ಪಾಡಿ ಪೊಗಳುವೆ ರಂ1 ವಾಣಿ ಪುಸ್ತಕ ವೀಣಾಪಾಣಿ ಪನ್ನಗನಿಭವೇಣಿ ಕಲ್ಯಾಣಿ ಶುಕ ರಂ-ವಾಣಿ ಶುಕವಾಣಿ ಬೊಮ್ಮನರಾಣಿ ಸನ್ಮತಿಯ ಕರುಣಿಸು ರಂ 2 ಧೃವ ಅಟ್ಠ ರೂಪಕ ಏಕತಾಳವು ಝಂಪೆತ್ರಿವಡೆ ತಾಳಗಳೊಡಂಬಡಲು ರಂ-ತ್ರಿವಡೆ ತಾಳಗಳೊಡಂಬಡೆ ಹೊಸ ಹರೆಯದಯುವತಿಯರೊಲಿದು ಹಾಡಿದರು ರಂ 3 ಗಂಗಾಧರ ಜಯ ಗೌರೀಪ್ರಿಯ ಜಯಅಂಗಜಹರ ಜಯವೆನುತ ರಂ-ಜಯವೆನುತಲಂಗನೆಯರುಪೊಂಗೋಲ ಪೊಯಿದು ಪಾಡಿದರು ರಂ 4 ಕಪ್ಪುಗೊರಳ ಜಯ ಸರ್ಪಭೂಷಣ ಜಯಮುಪ್ಪುರವನು ಜಯಿಸಿದವನೆ ರಂ-ಜಯಿಸಿದನೆ ಜಯವೆಂದುಒಪ್ಪದೆ ಪಾಡುತಾಡಿದರೆ ರಂ5 ದಿಮಿದಿಮಿ ದಿಮಿಕೀಟ ತಕಕಿಟನ ಕಕಿಟಕ್ರಮದಿ ನರ್ತಿಸುತಬಲೆಯರು ರಂ-ಅಬಲೆಯರು ಚಿನ್ನದ ಕೋಲಪ್ರಮುದದೊಳಾಡುತೊಪ್ಪಿದರು ರಂ6 ಅಚ್ಚ ಮುತ್ತಿನ ನಿಚ್ಚಳ ಸುಲಿಪಲ್ಲಒಚ್ಚೇರೆಗಣ್ಣು ಬಾಲೆಯರು ರಂ-ಬಾಲೆಯರು ಸಂಭ್ರಮದಿ ಮೈಮೆಚ್ಚುತ ಕೋಲನಾಡಿದರು ರಂ 7 ಭೃಂಗ ಕುಂತಳದ ಮತಂಗಜ ಗಮನದರಂಗುದುಟಿಯ ರಮಣೆಯರು ರಂರಮಣಿಯರು ಸೊಬಗನಾಂತುಹೆಂಗಳು ಪಾಡುತೊಪ್ಪಿದರು ರಂ8 ಜಲಜಗಂಧದ ನಳಿತೋಳ್ಗಳ ರಿಂಕಿದನೆಲೆಮೊಲೆಗಳ ತುಂಬಿಗುರುಳ ರಂಕರುಳ ಪದ್ಮಿನಿಯರುಚಳಕದಿ ಪಾಡುತಾಡಿದರು ರಂ9 ಪೊಂಬೊಗರಿಯ ತೆರದಿ ತುಂಬಿದ ಕುಚಗಳಬಿಂಬಾಧರದ ಕಂಬುಗಳದ ರಂಬಿಂಬಾಧರದ ಕಂಬುಗಳದ ಪದ್ಮಿನಿಯರುಸಂಭ್ರಮದಿಂದ ಪಾಡಿದರು10 ತೆಳುವಸುರಿನ ಕೊಬ್ಬಿದ ಕುಚಯುಗಳದಕಲಹಂಸಗತಿಯ ಮೋಹನದ ರಂಮೋಹನದ ಚಿತ್ತಿನಿಯರುಒಲಪಿನಂ ಪಾಡುತಾಡಿದರು ರಂ11 ಚಿನ್ನದ ಲತೆಯಂತೆ ಚೆನ್ನಾಗಿ ಬಳುಕುವಸನ್ನುತಾಂಗದ ಶಂಖರವದ ರಂರವದ ಶಂಖಿನಿಯರುಚೆನ್ನಾಗಿ ಪಾಡುತಾಡಿದರು ರಂ 12 ಅಪಳ್ಗಣ್ಣ ಮಂದಗತಿಯ ಮದಗಂಧದಶರೀರದ ಕೊಬ್ಬಿದ ಕೊರಳ ರಂಕೊರಳಿನ ಹಸ್ತಿನಿ(ಯರು)ತರುಣಿಯರೊಲಿದು ಪಾಡಿದರು ರಂ 13 ಸಿರಿಮೊಗದೊಳು ಬೆಮರೊಗೆಯೆ ಮೇಲುದುಜಾರೆ ಕರದ ಕಂಕಣ ಝಣರೆನಲು ರಂಕರದ ಕಂಕಣ ಝಣಝಣಝಣಝಣರೆನೆತರಳೆಯರ್ಪಾಡುತಾಡಿದರು ರಂ14 ದುಂಡುಮುತ್ತಿನ ಹಾರವಲುಗಲು ವಜ್ರದಕುಂಡಲಗಳು ನರ್ತಿಸಲು ರಂನರ್ತಿಸಲಂಗನೆಯರತಂಡ ಸಂಭ್ರಮದೊಳಾಡಿದರು ರಂ 15 ಕರುಣಸಾಗರ ಜಯ ಕರಿಚರ್ಮಾಂಬರ ಜಯವರದ ರಾಮೇಶ ಜಯವೆಂದು ರಂ-ವರದ ರಾಮೇಶ್ವರ ಪಾರ್ವತಿ ಜಯವೆಂದುಹರುಷದಿ ಕೋಲನಾಡಿದರು 16
--------------
ಕೆಳದಿ ವೆಂಕಣ್ಣ ಕವಿ
--------------------- ನೆನೆಮನದಲಿ ಹರಿನಾಮವು ಸತತಾ ದಿ-----ನ ಅನಿಮಿಷ ಅನಿಮಷ ರೊಡೆಯನಾ ಪ ನವನೀತ ಚೋರನ ಎಂದೆಂದೂ ಮರೆಯದೆ----ರಮಣನಾ 1 ಭೂತನಾಥಪ್ರಿಯ ಪೂತನಿಯ ಸಂಹಾರ ಖ್ಯಾತಿ ನೀತಿಯುಳ್ಳನಾಥ ನೀತೋರುತಲಿ 2 ಹೇಮ ಭೂಷಿತಾಂಗನರಂಗನ ಜನಕನ ಸುತೆಯಾದ ಜಾನಕೀರಮಣನ 3 ನಯ ಭಯದಲಿ ವಿಜಯ ಜಯವೆಂದು ರಾಮದೇವರ ನಿರಂತರಾ 4 ಥಂಢ ಥಂಡದಲವ ತಾರಗಳೆತ್ತಿ ಬ್ರ ಹ್ಮಾಂಡ ಅಂಡದೊ-----ಟ್ಟ ಹರಿ 'ಹೆನ್ನವಿಠ್ಠಲನಾ ' 5
--------------
ಹೆನ್ನೆರಂಗದಾಸರು
ಇದಿರುಗೊಂಡಳು ಇಂದಿರಾದೇವಿ | ಮದನ ಮೋಹನ ದಿವ್ಯ ಮೂರುತಿಯಾ || ಸದಮಲಾನಂದ ಕೀರುತಿಯಾ ಪ ನವ ಸ್ವರ್ಣ ಹರಿವಾಣದಿ ಕಂಚ ಕಲಶನಿಕ್ಕಿ | ಹವಳದಾರತಿ ರನ್ನ ಜ್ಯೋತಿಯಲಿ || ತವಕದಿಂದಲಿ ಎತ್ತಿ ಮುತ್ತಿನಾಕ್ಷತೆ ಇಟ್ಟು | ನವರತ್ನ ನಿವಾಳೆಯ ಕೊಡುತಾ1 ಮತ್ಸ್ಯ ಕ್ರೋಢ ನರಸಿಂಹ | ಜಯ ಮುನಿವಟು ಭಾರ್ಗವ ರೂಪನೆ || ಜಯ ರಾಮ ಶ್ರೀ ಕೃಷ್ಣ ಜಯ ಬೌದ್ಧ್ಯ ಕಲ್ಕಿಯೆ | ಜಯವೆಂದು ಬೆಳಗಿ ಪಾದಕೆ ನಮಿಸಿ ||2 ಕರೆದೊಯ್ದು ತೂಗು ಮಂಚದಿ ಕುಳ್ಳರಿಸಿ | ಕರ್ಪೂರದ ವೀಳ್ಯ ಕೊಟ್ಟು ಹರುಷದಲಿ || ಗುರು ಮಹೀಪತಿ ಸುತ ಪ್ರಭುವಿನ ಸವಿ ಸವಿ | ಕರುಣ ಮಾತುಗಳಾಡಿಸುತಾ ಹರಿಯಾ ||3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಉರುಟಣೆ ಪದ ಜಯ ಜಯ ರಾಮ ಜಯಜಯ ಜಯ ನಮ್ಮ ಜಾನಕೀ ರಮಣಗೇ ಪ ಇಂದಿರಾದೇವಿ ರಮಣಿ ಶರಣ್ಯಮಂದರ ಗಿರಿಧರ ಶರಣ್ಯಕಂದನ ನುಡಿ ಕೇಳಿ ಕಂಬದಿಂದಲಿ ಬಂದಸಿಂಧು ಶಯನ ಸಲಹುವಾದೆನ್ನ 1 ಗುರು ವಿಜಯದಾಸರ ಚರಣಾಸರಸಿರುಹವ ಮನದೊಳಾಗಿರಿಸಿಹರಿ ಸರ್ವೋತ್ತಮ ಮಂಗಳ ಚರಿತೆಯವಿರಚಿಸುವೆನು ಸುಜನರು ಕೇಳಿ 2 ಮುತ್ತೈದೆರೆಲ್ಲಾ ಬೇಗಾದಿ ಬಂದುಅರ್ತಿಯಿಂದಲಿ ಶೃಂಗಾರವಾಗಿಚಿತ್ತಜನಯ್ಯನ ಉರುಟಣೆ ಎನುತಾಲಿಮತ್ತ ಗಮನೇರು ಬಂದರಾಗಾ 3 ಸರಸ್ವತಿ ಭಾರತಿ ಮೊದಲಾದಸರಸಿಜ ಮುಖಿಯರೆಲ್ಲಾರು ನೆರೆದುಸರಸ ಉರುಟಣಿಯ ಮೊಡಬೇಕೆನುತಾಲಿಕರೆಸಿದರಾಗ ಮುತ್ತೈದೆರಾಗ 4 ಹೇಮಮಯದ ಮಂಟಪದೊಳಗೆಪ್ರೇಮದಿಂದಲಿ ಹಾಸಿಕೆ ಹಾಕಿಸೋಮವದನನ ಗುಣವ ಕೊಂಡಾಡುತಕಾಮಿನಿಯರು ಕರೆದಾರು ಹಸೆಗೇ 5 ಕೌಸಲ್ಯಾದೇವಿ ತನಯಾನೆ ಕೇಳುಹರ್ಷದಾಯಕ ರಕ್ಷಕನೇಳುಹಂಸವಾಹನನಯ್ಯನೆ ಹಸೆಗೆ ಏಳೇಳೆಂದುಹಂಸಗಮನೆಯರು ಕರೆದರು ಹಸೆಗೆ 6 ನಿಗಮವ ತಂದಾ ಮಚ್ಚ್ಯಾನೇಳುನಗವ ಬೆನ್ನಿಲಿ ಪೊತ್ತ ಕೂರ್ಮನೇಳುಜಗವನುದ್ಧರಿಸಿದ ವರಹ ಮೂರುತಿ ಏಳುಮೃಗ ನರ ರೂಪ ಹರಿಗೇಳೆಂದಾರು 7 ಸುರನದಿಯ ಪಡೆದ ವಾಮನನೇಳುಪರಶುರಾಮ ಮೂರುತಿ ಏಳುಶರಧಿಯ ದಾಟಿ ಸೀತೆಯ ತಂದಶಿರಿ ರಾಮಕೃಷ್ಣ ಹಸೆಗೇಳೆಂದರು 8 ವ್ರತವನಳಿದ ಬೌದ್ಧನೇಳುಅತಿಬಲ ರಾಹುತನೇಳುಪೃಥಿವಿಗೊಡೆಯ ರಾಮನೇಳೆಂದುಅತಿ ಚಮತ್ಕಾರದಿ ಕರೆದರಾಗ 9 ಇಂತು ಬಗೆಯಾಲಿ ತುತಿಸಿ ಕರೆಯೇಕಂತುಜನಕನು ಹರುಷದಾಲೆದ್ದುಕಾಂತೆ ಕೈ ಪಿಡಿದು ನಡೆ ತರಲಾಗಲುನಿಂತಾರು ನಾರಿಯರೆಲ್ಲರಾಗ 10 ಎತ್ತಿಕೊಂಬುವದು ರಾಘವ ನಿಮ್ಮಪತ್ನಿಯ ನಡೆಸಲಾಗದು ಕೇಳಿನೀ ಪೃಥ್ವೀಶನಾದರೆ ನಮಗೇನೆನುತಾಲಿಸುತ್ತು ಕಟ್ಟಿದರು ವಾಮಾಕ್ಷಿಯರು 11 ಮಂಗಳಾಂಗಿಯನು ಎತ್ತಿಕೊಂಡು ರಾಮಹಿಂಗಾದೆ ದ್ವಾರದಲ್ಲಿಗೆ ಬರಲುಮಂಗಳದೇವಿಯ ಹೆಸರು ಹೇಳೆನುತಾಲಿಅಂಗನೆಯರು ಅಡ್ಡಗಟ್ಟಿದರಾಗಾ 12 ನಾಳೆ ಹೇಳುವೆನು ಇವಳ ಹೆಸರುತಾಳಲಾರೆನು ಭಾರವು ಎನಲುಶ್ರೀ ಲಕ್ಷ್ಮೀದೇವಿಯ ಹೆಸರು ಹೇಳಿದೆ ಬಿಡೆವೆಂದುಬಾಲೆಯರೆಲ್ಲಾರು ಇಟ್ಟರು ಕದವಾ 13 ಪುತ್ಥಳಿ ಗೊಂಬೆ ಹೆಸರು ಹೇಳೆನೆ ರಘು-ನಾಥಾನು ಎಂದಾಳು ಜಾನಕೀ 14 ಅಂಗಜನಯ್ಯಾ ಸತಿಯು ಸೀತೆಯ ಸಹಿತರಂಗು ಮಾಣಿಕದ ಹಾಸಿಕೆಯ ಮೇಲೆಶೃಂಗಾರದಿಂದಾಲಿ ಬಂದು ಕುಳ್ಳಿರಲಾಗಸುರರೆಲ್ಲಾ ಹಿಗ್ಗಿ ಕರೆದರು ಪೂ ಮಳೆಯಾ 15 ಸಾಸಿರ ನಾಮದ ಒಡೆಯ ಬಂದಾಶೇಷಶಯನಾ ಮೂರುತಿ ಬಂದಾಭಾಸುರಾಂಗನೆ ಸೀತೆ ಆಳಿದಾ ರವಿಕುಲಾ-ಧೀಶ ಬಂದಾನು ಎಂದಾರು ಕೇಳೆ 16 ವಾನರಾಧೀಶನೊಡೆಯಾ ಬಂದಾದಾನವಾಂತಕ ರಾಘವ ಬಂದಾ ಶ್ರೀ-ಜಾನಕೀದೇವಿ ಪ್ರಾಣದೊಲ್ಲಭ ಜಗ-ತ್ರಾಣ ಬಂದಾನು ಎಂದಾರು ಕೇಳೆ 17 ಸತ್ಯ ಸಂಕಲ್ಪ ಶ್ರೀ ಹರಿಯು ಬಂದಾಭೃತ್ಯ ಪಾಲಕ ದೊರೆಯು ಬಂದಾಮಿತ್ರೆ ಜಾನಕಿದೇವಿ ಪ್ರಾಣದೊಲ್ಲಭ ಸ-ರ್ವೋತ್ತಮ ಬಂದನೆಂದಾರು ಕೇಳೇ 18 ಸುಗ್ರೀವನ ಪರಿಪಾಲಕ ಬಂದಾ ಕ-ರಿಗ್ರಾಹ ಸಂಹಾರಿಕ ಬಂದಾವ್ಯಾಘ್ರ ಚರ್ಮಾಂಬರ ಸಖ ಸುಂದರವಿಗ್ರಹ ಬಂದಾ ಎಂದಾರು ಕೇಳೇ 19 ಇಂದ್ರನ್ನ ಪರಿಪಾಲಕ ಬಂದಾಚಂದ್ರನ್ನ ಪ್ರಭೆಯಾ ಸೋಲಿಪ ಬಂದಾಇಂದುವದನೆ ಸೀತೆ ಪ್ರಾಣದೊಲ್ಲಭ ರಾಮ-ಚಂದ್ರ ಬಂದನೆಂದಾರು ಕೇಳೇ 20 ಚಂದನ ಗಂಧೆಯರು ಎಲ್ಲಾರು ಕೂಡಿಗಂಧ ಕುಂಕುಮ ಅರಿಷಿಣ ಕಲಿಸಿಇಂದುವದನೆ ಸೀತೆಯ ಕೈ ಒಳಗಿಟ್ಟು ಶ್ರೀರಾಮ-ಚಂದ್ರಗೆ ಹಚ್ಚಿಸಿರೆಂದರಾಗ 21 ವಾರಿಜೋದ್ಭವ ಮೊದಲಾದವರುತಾರತಮ್ಯದಿಂದಾಲಿ ಕುಳಿತುವಾರಿಜಾಮುಖಿ ಸೀತೆ ನುಡಿಯೆಂದೆನುತಾಲಿಸಾರಿದರಾಗ ಸಂದಣಿಯರೆಲ್ಲಾ 22 ವಾಕು ಕೇಳಬೇಕೆಂದುಜಲಜ ಸಂಭವನು ನುಡಿದಾನು ನಗುತಾ 23 ಕಂಜವದನೆ ಜಾನಕೀದೇವಿಅಂಜಲಾಗ ನಿಮ್ಮ ಪುರುಷಾರಿಗೆಕುಂಜರ ವರದಾ ದಾಕ್ಷಿಣ್ಯ ಬ್ಯಾಡೆಂದುಅಂಜಾದೆ ನುಡಿದಾರು ನಸುನಗುತಾ 24 ದೋಷ ವರ್ಜಿತನೇ ಹರಿ ನಿಮ್ಮದೂಷಣೆ ಮಾಡಿದಳೆನ ಬ್ಯಾಡಿಮೋಸದಿಂದಲಿ ಬಲು ದೈತ್ಯರ ಕೊಂದ ಜಗ-ದೀಶ ನಿಮ್ಮ ಮುಖವಾ ತೋರೆಂದಾಳು 25 ದೇವಿ ಹಸ್ತದೊಳು ಅರಿಶಿನವ ಪಿಡಿದುಭಾವಜನಯ್ಯನ ನುಡಿದಾರಾಗದೇವರ ದೇವೋತ್ತಮ ಶಿಖಾಮಣಿದೇವಾ ನಿಮ್ಮಯ ಮುಖವಾ ತೋರೆಂದಾಳು 26 ಭಸ್ಮಾಸುರನ ಕೊಂದಾ ಬಹು ಶೂರನಾರಿಕಂಸನಳಿದಾ ಧೀರ ಅಸುರ ಹಿರಣ್ಯಕನಅಸುವ ಹೀರಿದ ದೊಡ್ಡಅಸುರಾಂತಕ ಮುಖವಾ ತೋರೆಂದಾಳು 27 ವಾಲಿಯ ಸಿಟ್ಟಿನಿಂದಾಲಿ ಕೊಂದುಕಾಲ ಯಮನಾನಸುವ ಯುಕ್ತಿಯಿಂದಾಭಳಿರೆ ಮಧುಕೈಟಭರ ಕೊಂದಾಕಾಲಾಂತಕ ಮುಖವ ತೋರೆಂದಾಳು 28 ಶ್ರೀನಾಥ ದ್ವಾರಕಾಪುರ ಮಾಡಿಆ ನಂದಿ ಗೋಮಂತಾ ಗಿರಿಗೊಲಿದೆವಾನರಾಧೀಶನಾ ಬಲು ಕೊಂಡಾಡುತ್ತದಾನವಾಂತಕಾ ಮುಖವಾ ತೋರೆಂದಾಳು 29 ಅರಿಶಿನವಾನು ಹಚ್ಚಿದಳು ಸೀತೆಅರಸನ ಫಣೆಗೆ ಕುಂಕುಮವಾ ಹಚ್ಚಿಸರಸದಿ ವದನಕ್ಕೆ ಗಂಧವಾ ಹಚ್ಚಲುಸುರರೆಲ್ಲಾ ನಕ್ಕಾರು ಕೈ ಹೊಡೆದು 30 ಪತಿ ಮೊದಲಾಗಿ ಚಪ್ಪಾಳೆನಿಟ್ಟುಹರಸಿದರಾಗ ಜಾನಕಿದೇವಿಶಿರಿಯು ಗೆದ್ದಳು ಅಯೋಧ್ಯದಅರಸು ಸೋತನೆಂದು ನಗುತೆ 31 ಬಾಹುಗಳಿಗೆ ಗಂಧವಾ ಹಚ್ಚಿಸಿಮ್ಯಾಲೆ ಪರಿಮಳಾ ಪೂಸಿದಳುಶ್ರೀ ಹರಿಯ ಚರಣಾವ ಪಾಲಿಸಬೇಕೆನುತಲಿಸರಸಾದಿಂದಾಲಿ ನುಡಿದಾಳು ಜಾನಕೀ 32 ಪಾಷಾಣ ಪೆಣ್ಣಾ ಮಾಡಿದಾ ಚರಣಶೇಷನಾ ಮ್ಯಾಲೆ ಮಲಗಿದ ಚರಣಭಾಸುರಾಂಗಿ ನಿನ್ನ ಲೀಲೆಯಾ ತೋರಿದಾಶೇಷಶಯನ ಚರಣಾ ಪಾಲಿಸೆಂದಾಳು 33 ಆಕಾಶಗಂಗೆಯ ಪಡೆದಾ ಚರಣಾಶಕಟನ ಮುರಿದೊಟ್ಟಿದ ಚರಣಾಭಕುತ ಜನರ ಸೇವೆ ಕೊಂಬ ಚರಣರಕ್ಕಸ ದಲ್ಲಣ ಚರಣಾವ ಪಾಲಿಸೆಂದಾಳು 34 ಅಂಕುಶದೊಜ್ರ ರೇಖೆಯ ಚರಣಾಕುಂಕುಮಾಂಕಿತ ರಾಶಿಯ ಚರಣಾಬಿಂಕದಿಂದ ಕುರುಪತಿಯ ಕೆಡಹಿದ ಬಿರು-ದಾಂಕ ನಿನ್ನಯ ಚರಣಾ ಪಾಲಿಸೆಂದಾಳು 36 ನಸುನಗುತ ಹರಿ ಚರಣ ವೀಕ್ಷಿಸಿಶಶಿಮುಖಿ ಸೀತೆ ಆನಂದದಿಂದಾಮಿಸಣಿಯಂತೊಪ್ಪುವ ಅರಿಶಿನೆಣ್ಣೆಯಾಎಸೆವ ಪಾದಕ್ಕೆ ಹಚ್ಚಿದಳಾಗ 37 ಪಾದ ಪದ್ಮಕ್ಕೆ ಎರಗಿಪಾಲಿಸಬೇಕೆಂದಾಳು ಅಂಗನೆ 38 ಕರಗಳ ಪಿಡಿದೆತ್ತಿದನು ರಾಮಾಹರಸಿದ ಮುತ್ತೈದಾಗೆಂದುಪರಮ ಪತಿವ್ರತೆಯೆನಿಸು ಎನುತಾಲಿಹರಿ ಹರಸೀದಾನು ಹರುಷದಲ್ಲಾಗ 39 ಅಂಡಜವಾಹ ಭಗವಂತನುಹೆಂಡತಿಯ ಮುಖವ ನೋಡೆನುತಲಿಗಂಡು ಮಕ್ಕಳ ಘನವಾಗಿ ಪಡೆಯೆಂದುಪುಂಡರೀಕಾಕ್ಷ ಹರಸಿದನಾಗ 40 ಮಂದಗಮನಿಯ ಕುಳ್ಳಿರಿಸಿಇಂದಿರೇಶ ಮುಂಗುರಳಾ ತಿದ್ದಿಎಂದೆಂದಿಗೆ ಅಗಲದಿರೆಂದು ರಾಮ-ಚಂದ್ರಾನು ಹರಸಿದನಾಗ 41 ಭೂಲೋಕದೊಡೆಯ ರಾಘವರಾಯನಶ್ರೀಲತಾಂಗಿಯ ಕುಳ್ಳಿರಿಸಿದನುಬಾಲಕಿಯರೆಲ್ಲಾರು ಗಲಿಬಿಲಿ ಮಾಡಾದಿರೆಂದುಫಾಲಾಲೋಚಾನು ನುಡಿದನು ನಗುತ 42 ಕಂತುಜನಕ ರಾಘವಾ ನಿಮ್ಮಾಪಂಥ ಸಲ್ಲಾದು ಜಾನಕಿಯೊಡನೆಯಂತ್ರವಾಹಕ ಶ್ರೀರಾಮ ಏಳೇಳೆಂದುಕಾಂತೆಯರೆಲ್ಲರು ನುಡಿದಾರು ನಗುತಾ 43 ಭಾಗೀರಥಿ ಪಾರ್ವತಿದೇವಿಬೇಗದಿ ಅರಿಷಿನ ಕೈಲಿ ಕಲಿಸಿಸಾಗರ ಶಯ್ಯನ ಕೈಯೊಳಗಿಟ್ಟುಬಾಗಿ ಸೀತೆಯ ಮುಖಕೆ ಹಚ್ಚೆಂದಾರು 44 ನಿಂದಲ್ಲಿ ನಿಲ್ಲಾದೆ ಚಂಚಳೆ ಲಕ್ಷ್ಮೀಬಂಧು ಬಳಗವನಗಲಿಸುವ ತರಳೆತಂದೆ ಮಕ್ಕಳೊಳಗೆ ಕದನವ ನಿಡುವಂಥಮಂದಹಾಸೆ ಮುಖವ ತೋರೆಂದಾನು ರಾಮಾ 45 ಅಣ್ಣನ ವಂಚಿಸಿ ಬೇಡಿದವಳೇಮನ್ನೆ ಮನ್ನೆಯರಾ ಕಳಿಸಿದವಳೇಚೆನ್ನಾಗಿ ಮನೆಯೋಳಿದ್ದು ಪೋಗುತಚೆನ್ನಾಯಿತೆ ಮುಖವ ತೋರೆಂದಾನು 46 ಭಾಷೆಯನು ಕೊಟ್ಟು ತಪ್ಪಿಸುವಳೆಕಾಸುವೀಸಾಕೆ ವತ್ತಿ ಬೀಳುವಳೆಹೇಸಿಕಿಲ್ಲದೆ ಕುಲಹೀನನ ಮನೆಯೊಳುವಾಸವಾಗಿರುವಾ ಮುಖವ ತೋರೆಂದಾನು 47 ರಾಮಚಂದ್ರಾನು ಅರಿಶಿನ ಗಂಧವಭೂಮಿಜಳಿಗೆ ಹಚ್ಚಿದನಾಗಾಸಾಮಜಗಮನೆಯ ಹಣೆಗೆ ಕುಂಕುಮ ಹಚ್ಚಿಪ್ರೇಮದಿ ಪರಿಮಳ ಪೂಸಿದಾನು 48 ಕುಸುಮ ದಂಡೆಯ ಮಾಡಿದರುಬಾಸಿಂಗವನು ಕಟ್ಟಿದಾರುಭೂಸುರರೆಲ್ಲರು ಮಂತ್ರಾಕ್ಷತೆ ತಳಿದು ನಿ-ರ್ದೋಷನಾಗೆಂದು ಹರಸಿದರು 49 ಇಂದುಮುಖಿಯರೆಲ್ಲಾರು ಕೂಡಿನಂದದಿ ಜಾನಕಿಗೆ ವೀಳ್ಯವನಿತ್ತುಅಂದಮಾಣಿಕದ ಅಕ್ಷತೆಗಳ ತಳಿದುಮಂದರೋದ್ಧರನ ಹರಿಸಿದರು 50 ದೇವಿಯನ್ನೆತ್ತಿಕೊಂಡು ರಾಮದೇವರ ಮನೆಗೆ ಬಾಹೋದು ಕಂಡುಭಾವುಕರೆಲ್ಲಾ ಹೆಸರು ಪೇಳೆಂದೆನುತದೇವಿ ರಘುನಾಥನೆಂದು ಪೇಳಿದಳಾಗ 51 ಇಂದುಮುಖಿಯರೆಲ್ಲಾರು ಕೂಡಿಇಂದಿರೇಶಾನೆ ಹೆಸರು ಪೇಳೆನಲುಎಂದಾ ಮೇಲೆ ಜಾನಕಿಯೆಂತೆಂದುಮಂದರಧರನು ನುಡಿದನಾಗ 52 ಸತಿಪತಿಯರಿಬ್ಬರು ಕೂಡಿಅತಿಶಯದಲಿ ನಮಸ್ಕರಿಸಿದಾರುಕ್ಷಿತಿಯ ಸುರರಿಗೆ ಲೀಲೆಯ ತೋರಿದ ದೇವಾಪತಿತ ಪಾವನ್ನ ಎನ್ನ ಸಲಹು ಎಂದಾನು 53 ಈ ಕಥೆಯನು ಆದರದಿಂದಾ ಬರೆದು ಹೇ-ಳಿ ಕೇಳುವ ಜನರಾಶ್ರೀಕಾಂತನೊಲಿದು ಕರುಣಿಸುವ ತಾ ಸಿದ್ಧನೇಮದಿಂದಾ ಪಾಡಿರಿ ಜನರು 54 ಕುರುಡಾನು ಈ ಕಥೆಯಾನು ಕೇಳಿದರೆಕರುಣದಿಂದಾಲಿ ಕಂಗಳ ಬರಿಸುವಶರಣವತ್ಸಲ ತನ್ನ ಶರಣರೊಳಿಟ್ಟುಪರಿಪಾಲಿಸುವನು ಶತಸಿದ್ಧ 55 ಸಿರಿ ಒದಗುವದುದಾರ ಇಲ್ಲದ ಬ್ರಹ್ಮಚಾರಿ ತಾ ಕೇಳಲುನಾರಿಯ ಸಹಿತೆ ವಾಸಿಸುವನು 56 ಉದ್ಯೋಗ ಇಲ್ಲದವನು ಕೇಳಿದರೆಸದ್ಯ ಐಶ್ವರ್ಯ ಒದಗುವದು ಸಿದ್ಧಮುದ್ದು ಸುತರಿಲ್ಲದ ಸ್ತ್ರೀಯು ಕೇಳಲುಬುದ್ಧಿವಂತ ಸುತರಾಗುವರು ಸಿದ್ಧ 57 ಮೂರ್ತಿ 58 ಕಮಲ ಧರಿಸಿಪ್ಪಪಾವನ ಮೂರುತಿ ಹೃದಯಾದಲ್ಲಿದೇವಿ ಸಹಿತವಾಗಿ ಕಾವನು ಕರುಣಾದಿನೀವೆಲ್ಲಾರು ತಿಳಿರಿ ಜನರು 59 ಜಾಹ್ನವಿ ಜನಕನುಜಯ ಜಯವೆಂದು ಮಂಗಳವ ಪಾಡೇ 60
--------------
ಮೋಹನದಾಸರು
ಏಳಯ್ಯ ರಾಕ್ಷಸಾಂತಕ ದನುಜಸಂಹಾರ ಪ ಏಳಯ್ಯ ರಾಜೀವನಯನ ನವನೀತಚೋರ ಏಳು ಲಕ್ಷ್ಮೀಮನೋಹರ ಹರಿಯೆ ಅ.ಪ ದಿನಪನುದಯಂಗೆಯ್ಯೆ ದಿಕ್ಪಾಲಕರ್ನೆರೆಯೆ ಕನಕಭೂಷಣದ ಕಾಂತೆಯರು ಆರತಿಪಿಡಿಯೆ ಅನುಪಮಗೆ ಜಯವೆಂದು ಬಂದು ನಿಂದೈದಾರೆ ಇನಕುಲನೆ ನಲಿದುಪ್ಪವಡಿಸು ಶ್ರೀಹರಿಯೇ 1 ಪ್ರಹ್ಲಾದ ನಾರದರು ವಾಸಿಷ್ಠ ವಿಶ್ವಾಮಿತ್ರರು ಮಹಮುನಿಗಳತ್ರಿ ಭಾರದ್ವಾಜ ಜಮದಗ್ನಿ ಗೌತಮರು ಬಹುವಿಧದಿ ಕಶ್ಯಪರು ಹನುಮಂತ ತುಂಬುರರು ಹರುಷದಿ ಪಾಡುತ್ತಲೈದಾರೆ ಇನಕುಲನೆ ನಲಿದು 2 ದೇವಗಂಗೆಯಕೊಂಡು ದೇವರ್ಕಳೈದಿದರು ದೇವತಾವಳಿ ಬಂದು ದೇವ ಜಯವೆನುತಿಹರು ದೇವಪುರದಲಿ ನಿಂದ ದೇವಕಿಯ ವರಕಂದ ದೇವ ಲಕ್ಷ್ಮೀಪತಿಯ ದೇವ ನೀನೇಳೈ ಹರಿಯೇ 3
--------------
ಕವಿ ಲಕ್ಷ್ಮೀಶ
ಕಾಮಿನಿಯರು ನೆರದೊಂದಾಗಿಪ್ರೇಮದಿ ಧವಳಾರವ ಪಾಡಲುಶ್ರೀ ಮಹಾಲಕ್ಷ್ಮಿ ಜಯವೆಂದುಜಯವೆಂದುಶ್ರೀಕೃಷ್ಣರಾಯಗೆಹೇಮದಾರತಿಯ ಬೆಳಗಿರೆ 1 ಸಿಂಧುರಗಮನೆಯರತಿ ಹರುಷದಲಿಚಂದದಿ ನಲಿದಾಡುತ ಪಾಡುತಇಂದಿರಾರಮಣ ಜಯವೆಂದುಜಯವೆಂದುಶ್ರೀ ಮಹಾಲಕ್ಷ್ಮಿಗೆಕುಂದಣದಾರತಿಯ ಬೆಳಗಿರೆ 2 ಕರದ ಕಂಕಣ ಝಣಝಣರೆನಲುಗುರುತು ಚವಲುಗಾಡಲು ಮುತ್ತಿನಕೊರಳಹಾರಗಳು ಹೊಳೆಯಲುಹೊಳೆಯಲುಶ್ರೀಕೃಷ್ಣರಾಯಗೆಕುರುಜಿನಾರತಿಯ ಬೆಳಗಿರಿ3 ಹಾರಪದಕ ಕಂಕಣದವರು ವೈ-ಯ್ಯಾರದ ಹೊಸ ಹರೆಯದಂಗನೆಯರುರಾರಾಜಿಪ ಚಂದ್ರಮುಖಿಯರುಮುಖಿಯರುಶ್ರೀ ಮಹಾಲಕ್ಷ್ಮಿಗೆಕುರುಜಿನಾರತಿಯ ಬೆಳಗಿರೆ 4 ಕಸ್ತೂರಿ ತಿಲಕದ ಸೊಬಗಿಯರು ಸು-ವೃತ್ತಸ್ತನತಟದ ಜವ್ವನೆಯರುಆರ್ತಿಯಿಂ ಪಾಡಿ ಪೊಗಳುತಪೊಗಳುತಶ್ರೀ ಕೃಷ್ಣರಾಯಗೆಮುತ್ತಿನಾರತಿಯ ಬೆಳಗಿರೆ5 ಬೆರಳುಂಗುರ ಥಳ ಥಳಥಳಿಸಿಸಿರಿಮೊಗದೊಳು ಕಿರಿಬೆಮರೊಗೆಯಲುಹರುಷದಿ ಪಾಡಿ ಪೊಗಳುತಪೊಗಳುತಲಿಶ್ರೀ ಮಹಾಲಕ್ಷ್ಮಿಗೇಸರಸಿಜದಾರರತಿಯ ಬೆಳಗಿರೆ 6 ಕನ್ನಡಿಗದಪಿನ ಚದುರೆಯರು ಚೊಕ್ಕಚಿನ್ನದ ಸರಪಣಿಯಿಟ್ಟಂಗನೆಯರುಚೆನ್ನಾಗಿ ಪಾಡಿ ಪೊಗಳುತಪೊಗಳುತಕೆಳದಿಯ ಶ್ರೀ ಕೃಷ್ಣಗೆರನ್ನದಾರತಿಯ ಬೆಳಗಿರೆ 7
--------------
ಕೆಳದಿ ವೆಂಕಣ್ಣ ಕವಿ
ಕುಮಾರ ಗುಹಗೆ ಎಸಗೀ ಪ ವಾಹನನಿಗೆ ಧೀರಗೆ ಜಯವೆಂದು ಆರತಿ ಅ.ಪ ವೇದೋಕ್ತ ಮಂತ್ರದಿಂದ ಶರ್ಕರ ಮೊದ-ಲಾದ ದ್ರವ್ಯದಿಂದ ಸಾಧು ವಂದಿತನಿಗೆ ಭೂದೇವರಭಿಷೇಕ ಸಾದರದಲಿ ಮಾಡಿ ಮೋದದಿ ಜಯವೆಂದು ||ಆರತಿ|| 1 ಕಲಶೋದಕ ಮಂತ್ರಿಸಿ ಭೂಸುರರೆಲ್ಲ ನಲವಿಂದಲಭಿಷೇಕಿಸಿ ತಲೆಗೆ ಗಂಧಾಕ್ಷತೆ ತುಲಸಿ ಪತ್ರವು ವುಷ್ಪಗಳ ಮಾಲೆ ಇರಿಸುತ್ತ ನಲವಿಂದೆ ಜಯವೆಂದು ||ಆರತಿ|| 2 ಓಗರ ಜಂ- ಬೂಫಲ ಭಕ್ಷ್ಯವ ಶ್ರೀಪತಿ ಸಖಗೆ ಸ-ಮಾರ್ಪಿಸಿ ಜಯವೆಂದು ||ಆರತಿ|| 3 ಮೂರು ಪ್ರದಕ್ಷಿಣೆಯ ಭಕ್ತಿಯೊಳ್ ನಮ-ಸ್ಕಾರವ ಪ್ರಾರ್ಥನೆಯ ಮಾರಾರಿಸುತಗೆ ಅ-ಪಾರ ಮಹಿಮನಿಗೆ ಹಾರುವರೆಸೆಗುತೊ-ಯ್ಯಾರದಿ ಜಯವೆಂದು ||ಆರತಿ|| 4 ಮಂಗಳ ಶರಜನಿಗೇ ಗುಹಗೆ ಜಯ ಮಂಗಲ ಸ್ಕಂಧನಿಗೇ ಮಂಗಲ ಪಾವಂಜೆ ವಾಸ ಷಡ್ಶಿರನಿಗೆ ಮಂಗಲದಾಸರ ಕಾವಗೆ ಜಯವೆಂದು ||ಆರತಿ|| 5
--------------
ಬೆಳ್ಳೆ ದಾಸಪ್ಪಯ್ಯ
ಜಯ ದೇವ ಜಯ ದೇವ ಜಯ ಗುರು ಮೈಲಾರಿ ಮನಮೈಲ ಮರ್ದಿಸಿದಯ್ಯ ನೀನೆ ಅಸುರಾರಿ ಧ್ರುವ ಖಡ್ಗವ ಕರದಲಿ ಪಿಡಿದು ಖಂಡಿಸಿದಙÁ್ಞನ ಖಂಡೇರಾಯೆನಿಸಿಕೊಂಡು ಪ್ರಕಟಿಸಿದನುದಿನ ಹಿಂಡದೈವಕೆ ಪ್ರಚಂಡನಹುದೊ ಪರಿಪೂರ್ಣ ಮಂಡಲದೊಳು ನಿಮ್ಮ ಕೊಂಡಾಡುದು ತಾ ಸುರಜನ 1 ಮಲಹರಣ ಮಾಡಲು ಧರಿಸಿ ಅವತಾರ ಮೂಲೋಕ ಪಾವನಮಾಡುವ ಸಹಕಾರ ಸಲಹುವೆ ಭಕ್ತಜನರಿಗೆ ನೀ ಘನ ಮಂದಾರ ಮಲೆತಿಹ ದೈತ್ಯರ ಸಂಹರಿಸುವೆ ನೀ ಅತಿಶೂರ 2 ಪತಿ ಅಹದು ಶ್ರೀಗುರು ಭೂಪತಿ ಬಾಹ್ಯಾಂತ್ರಿ ಬೆಳಗುವೆ ಶ್ರೀಪಾದಕೆ ಆರ್ತಿ ಇಹಪರಕೆ ದಾತನಹುದೊ ಶ್ರೀಪತಿ ಜಯಜಯವೆಂದು ಬೆಳಗುವೆ ದಾಸ ಮಹಿಪತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಬ್ರಹ್ಮಾನಂದ ಜಯ ಜಯವೆಂದು ಬೆಳಗುವೆ ಬೆಳಗಿಲಿ ನಿಮ್ಮಿಂದ ಧ್ರುವ ಅರುವಿಗೆ ನಿಮ್ಮರುವುದೋರಿತು ಘನದರುವು ಅರುವೆ ಅರುವಾಗಿದೋರಿತು ಅರುವೆ ಘನ ಅರುಹು ತಿರುಹುಮುರವ್ಹಿನ ಕುರುವುದೋರಿತು ಘನದರುವು ಕುರುವ್ಹೆ ಕುರುವ್ಹಾಗಿದೋರಿತು ಘನ ಪರಾತ್ಪರವು 1 ಬೆಳಗಿನ ಘನ ಬೆಳಗು ಹೊಳೆವದು ಥಳಥಳವು ಹೇಳೇನಂದರೆ ಬಾರದು ತಿಳವ್ಹಿಗೆ ನಿಜಸುಳಹು ಕಳೆ ಮೊಳೆಗಳ ಉಳಹು ತುಳಕುತ ಘನದೊಲವು ಭಳಭಳ ಭಾಸುವ ನಿಮ್ಮ ಬೆಳಗೆ ನಿರ್ಮಳವು 2 ಅನುಭವದಾರತಿ ಸ್ವಾನುಭವದ ಪ್ರೀತಿ ಅನುದಿನ ಬೆಳಗುವದು ತಾ ಘನಗುರು ನಿಜಪ್ರೀತಿ ತಾನೆತಾನಾಗಿಹ ಙÁ್ಞನಸಾಗರ ಮೂರ್ತಿ ದೀನಮಹಿಪತಿ ಬೆಳಗುವೆ ಮನ ಮಂಗಳಾರ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ವರ ಗುರುಮೂರ್ತಿ ಜಯ ಜಯವೆಂದು ಬೆಳಗುವೆ ಬೆಳಗುವೆ ಮನದಾರ್ತಿ ಧ್ರುವ ಜ್ಯೋತಿಗೆ ಸ್ವಜ್ಯೋತಿ ಘನಪರಂಜ್ಯೋತಿ ನೇತಿ ನೇತಿಯೆಂಬುದು ನೋಡಲು ಘನಶ್ರುತಿ ಶ್ರುತಿಸ್ಮøತಿಗೆ ತಿಳಿಯ ನೀ ಅಪ್ರತಿ ಅತಿಸೂಕ್ಷ್ಮ ನಿನ್ನರಿವುದು ಸದ್ಗುರು ದಯಕೀರ್ತಿ 1 ರಾಜಿಸುತಿಹ ನಿಜ ವಿಶ್ವದ ನೀ ಬೀಜ ರಾಜತೇಜೋನಿಧಿ ಸಹಜೆ ಸಹಜ ಅಜ ಸುರವಂದ್ಯ ಸುಜನರಾತ್ಮದ ನೀಗ್ರೂಜ ರಾಜಮಹಾರಾಜ ಸದ್ಗುರು ಸುಭೋಜ 2 ಮಗುಟ ಸ್ವಾನುಭವಕೆ ನೀಟ ಜ್ಞಾನರಹಿತ ಕೂಟ ಘನ ದಯನೋಟ ಅನುವಾಗಿದೋರಿತು ನೀಟಕೆ ನಿಜನೀಟ ದೀನಮಹಿಪತಿಸ್ವಾಮಿ ನೀನೆ ಘನಪ್ರಗಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1 ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2 ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ಶಂಕರ ಮೂರ್ತಿ ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ ನಾದಬಿಂದು ಕಳಾನಯನ ತ್ರಯವೆರಿಸಿ ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ 1 ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ ತವಕದಿ ಶಮದಮವೆಂಬಾ ಬಾಹುದ್ವಯದಲಿ ಅವಯವದಲಿ ನಿಜಭಕ್ತಿ ಶೇಷಾಭರಣದಲಿ ಶಿವತಾನೆಂದು ಬೆಳಗುವೆ ಸಹಜಾನಂದದಲಿ 2 ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ಸದ್ಗುರುವೆಂದುಜಯವೆಂದು ಬೆಳಗಿದಳು ಬಗಳಾಂಬನಿಂದು ಪ ಬಿಗಿದ ಹೆದೆ ಬೆನ್ನಿಂಗೆ ಧನು ಶರಗಳ ಸೆಕ್ಕಿತಗತಗನೆ ಹೊಳೆಯುತಿಹ ಖಡ್ಗವ ಹೊರಗಿಕ್ಕಿಝಗಝಗನೆ ಆಭರಣ ಹೊಳೆಯಲು ಕಳೆಯುಕ್ಕಿಮಿಗಿಲೆನಿಪ ಆರುತಿಯೊಳ್ ಮುಕ್ತಾಕ್ಷತೆಯನಿಕ್ಕಿ 1 ಹತ್ತು ಕೈಯೊಳು ಹೊತ್ತು ನೆಗೆಹಿದಳು ಚದುರೆರತ್ನಖಚಿತದ ನತ್ತು ಹಣೆಬಟ್ಟು ಬೆದರೆಮತ್ತೆ ಕಿರುಬೆರಳ ಮುತ್ತು ಮುತ್ತುದುರೆಎತ್ತತ್ತಲೂ ಆರತಿಯ ಬಲು ಬೆಳಕು ಚದುರೆ 2 ಎತ್ತಿ ಹಾಡುತ ಒಲಿದು ಬಗಳೆ ಗುರುವಿಂಗೆತಥ್ಥೆಯ್ಯ ತಥ್ಥೆಯ್ಯ ತಥ್ಥೆಯ್ಯ ಕುಣಿದುಎತ್ತಲಾಯಿತೋ ದೇಹ ಪರವಶವದಾಗೆಮತ್ತೆ ಕಂಡಳು ತನ್ನ ಚಿದಾನಂದಾತ್ಮಗೆ 3
--------------
ಚಿದಾನಂದ ಅವಧೂತರು
ಜಯದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ ದೀನೋದ್ದಾರ ಕಾಪಾಪನಾಶನಿ ಹರಿಸುತಲಿ ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ 1 ಕಾಲ ಕೆರಾಘವಸುಖದರುಕ್ಷಣಲೆಂದು ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು ನಲಿದರುಗಿರಿಜಾನಂದಿಸರ್ವದೇವರು ಬಂದು ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು 2 ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ ಮುನ್ನಾಭರಣವ ಆಗಿಹಶಶಿನೇತಾಬಲ್ಲಾ ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು