ಒಟ್ಟು 20 ಕಡೆಗಳಲ್ಲಿ , 11 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪ್ರಮೇಯ ಪ್ರಕರಣ) ಸುವ್ವಿ ಸುವ್ವಿ ಉರಗಾದ್ರಿವಾಸ ಶ್ರೀ ವೆಂಕಟೇಶ ಸುವ್ವಿ ಶ್ರೀ ಸಚ್ಚಿದಾನಂದಾತ್ಮಕಾನೆ ಸುವ್ವಿ ಪ ಮೂಲನಾರಾಯಣ ಮೂಲಪ್ರಕೃತಿಯನ್ನು ಮೂರುಭಾಗಗೈಸಿ ಸೃಷ್ಟಿಮಾಡಿದನೆ ಸುವ್ವಿ ಸೃಷ್ಟಿಯೊಳು ಗುಣವ್ಯಷ್ಟಿಸಮಷ್ಟಿಯಿಂದ ಸೃಷ್ಟಿಸಿದ ಜಗಸಂಸೃಷ್ಟನೆನಿಸಿದಸುವ್ವಿ 1 ಸತ್ವರಜತಮ ಸಂಯುಕ್ತದಿಂದ ಕರ್ಮ ಮುಕ್ತಿ ಪರ್ಯಂತ ಜನ್ಮಕರ್ಮಂಗಳು ಸುವ್ವಿ ಕರ್ಮಂಗಳು ಸವೆದು ಉತ್ಕ್ರಾಂತ ಮಾರ್ಗ ಪಿಡಿದು ತಮ್ಮ ಸ್ವರೂಪ ಕರ್ಮನೆಸಗುವರೋ ಸುವ್ವಿ 2 ಮಹದಹಂಕಾರದಿಂದ ವೈಕಾರಿಕದಿಂದ ವ್ಯಸ್ತ- ರಾದರು ತತ್ವದೇವತೆಗಳು ಸುವ್ವಿ ದೇವತೆಗಳಾದರು ಮೇಲೆ ರಾಜಸಾಹಂಕಾರದಿಂದ ಇಂದ್ರಿಯಾದಿಗಳೆಲ್ಲ ಸೃಷ್ಟಿಯಾದವು ಸುವ್ವಿ 3 ಭೂತಪಂಚಕವು ತನ್ಮಾತ್ರಪಂಚಕಗಳು ತಾಮ- ಸಾಹಂಕಾರಗಳುದಿಸಿದವೆನ್ನು ಸುವ್ವಿ ಉದಿಸಿದಹಂಕಾರತ್ರಯದೊಳು ಬಂದು ಸರ್ವಸೃಷ್ಟಿ ಅದುಭುತವಾದುದು ಅನಿರುದ್ಧನಿಂದ ಸುವ್ವಿ 4 ಎಲ್ಲಜೀವರು ಮುನ್ನಾಸೃಷ್ಟಿಗೆ ಬಾರದಿರೆ ಇನ್ನು ಸುಪ್ತಾವಸ್ಥೆಯಲ್ಲಿ ಸುಮ್ಮನಿರ್ಪರೋ ಸುವ್ವಿ ಸೃಷ್ಟಿಗೆ ತಂದ ಗುಣವೈಷಮ್ಯದಿಂದಲೀ ಸುವ್ವಿ 5 ಭೇದಪಂಚಕವು ನಿತ್ಯತಾರತÀಮ್ಯ ಸತ್ಯ ವಿಧಿ ಮೊದಲು ತೃಣಾಂತ ಜೀವರು ತ್ರಿವಿಧವು ಸುವ್ವಿ ನಿತ್ಯ ತ್ರಿವಿಧಕಾರ್ಯ ಅರಿತು ತ್ರಿವಿಧಸಾಧನದಂತೆ ತ್ರಿವಿಧಗತಿಯು ಸುವ್ವಿ 6 ಜೀವರು ಅನಾದಿಯು ಸಾವು ನೋವುಗಳಿಲ್ಲ ಆ- ವಾವಸ್ಥೆಗಳೆಲ್ಲ ಸ್ಥೂಲ ದೇಹಕೆ ಸುವ್ವಿ ಸ್ಥೂಲದೇಹವ ಧರಿಸಿ ಪೂರ್ವಕರ್ಮದಂತೆ ಸಾಧನದಿಂ- ದಲೆ ಕರ್ಮಕ್ಷಯವಹುದು ಸುವ್ವಿ 7 ವೃದ್ದಿಹ್ರಾಸಗಳಿಲ್ಲ ಶುದ್ದ ಜೀವಸ್ವರೂಪ ವಿಧಿಮೊದಲು ತೃಣಾಂತ ಪರಿಮಿತಿ ಒಂದೆ ಸುವ್ವಿ ಪರಿಮಿತಿ ಒಂದೇ ರೀತಿ ಗುಣಕ್ರಿಯ ವಿವಿಧರೀತಿ ಅ- ದರಂತೆ ಜಡ ಪ್ರಕೃತಿ ಕಾರ್ಯವು ಪರಿಪರಿ ಇಹುದು ಸುವ್ವಿ 8 ಸರ್ವತ್ರ ಹರಿವ್ಯಾಪ್ತನಿರ್ಲಿಪ್ತನು ಸುವ್ವಿ ನಿರ್ಲಿಪ್ತನು ಅನಂತಾನಂತಗುಣಗಣಪೂರ್ಣ ಅವ್ಯಯ ಅಪ್ರಮೇಯ ಅಚ್ಯುತಾನಂತ ಸುವ್ವಿ9 ಅನಂತಾನಂತರೂಪಾನಂತ ಚೇತನ ಜಡದಿ ಅಂತರಾತ್ಮ ತಾ ನಿರಂತರ ನಿಂತಿಹ ಸುವ್ವಿ ನಿಂತು ತದಾಕಾರದಿ ತದ್ಭಿನ್ನ ತನ್ನಾಮದಲಿ ಕಂತುಪಿತನು ತಾ ನಿಂತಿಹನೆನ್ನು ಸುವ್ವಿ 10 ಇಂಥಾಜೀವರಿಗೆ ಲಿಂಗದೇಹ ಅನಾದಿಯಲ್ಲಿದ್ದು ಜ್ಯೋತಿರ್ಮಯವಾಗಿ ಪ್ರಕಾಶಿಸುವುದು ಸುವ್ವಿ ಪ್ರಕಾಶದ ಜೀವಕ್ಕೆ ಗಜ್ಜಗಬೀಜದಂತೆ ತ್ರಿಗುಣಾ ವರ್ಕವು ಲಿಂಗಕ್ಕಾವರ್ಕವು ಸುವ್ವಿ 11 ಗುಣಬದ್ಧನಾದುದರಿಂದ ಗುಣಕಾರ್ಯ ಫಲಗಳಿಂದೆ ಶೀ ತೋಷ್ಣಸುಖದುಃಖಾನುಭವವಾಗುವುದೆನ್ನು ಸುವ್ವಿ ಅನುಭವದಭಿಮಾನ ಸಾಧನದಂತೆ ಜೀವಾ ಜೀವ ಜನುಮಜನುಮಾಂತರದ ವಾಸನವಿಹುದು ಸುವ್ವಿ 12 ಸತ್ವಜೀವರ ಲಿಂಗಕ್ಕೆ ಸತ್ವಾವರಣವೇ ಪ್ರಥಮ ದ್ವಿತೀಯಾವರಣವೆ ರಜ ತೃತೀಯ ತಮವೆನ್ನು ಸುವ್ವಿ ತಮೋ ಆವರಣವೆ ಪ್ರಥಮ ರಜ ಸತ್ವವು ತದುಪರಿ ತ್ರಿವಿಧಾವರ್ಕವು ತಮೋಜೀವರಿಗಿಹುದು ಸುವ್ವಿ 13 ರಜೋ ಜೀವರಿಗೆ ರಜವು ಪ್ರಥಮಾವರಣದಿ ಇಹುದು ತಮಸತ್ವಾವರಣಾನಂತರವಿಹುದು ಸುವ್ವಿ ತಮರಜಸತ್ವಾವರಣತ್ರಯಗಳು ಲಿಂಗಕ್ಕೆ ನಿತ್ಯ ಇರಲು ತ್ರಿವಿಧಬದ್ದರಾಗಿ ಸುತ್ತುತಿಪ್ಪರು ಸುವ್ವಿ 14 ಸತ್ವಾವರ್ಕದಿ ವಿಶ್ವರಜತಮ ತ್ವೆಜಸ ಪ್ರಾಜ್ಞ ನಿತ್ಯದಿ ಜೀವನವಸ್ಥಾ ತೋರಿಸುವರು ಸುವ್ವಿ ತೋರಿಸುವರು ಜೀವರ ಜಾಗ್ರಸ್ವಪ್ನಾ ವಸ್ಥೆಯೊಳು ಶ್ರೀಭೂದುರ್ಗಾ ಲಿಂಗಕಭಿಮಾನಿಗಳುಸುವ್ವಿ 15 ಸತಿಸಹಿತರಾಗಿ ಬ್ರಹ್ಮವಾಯು ಬಿಡದೆ ನಿತ್ಯ ಭಕ್ತಿಯಿಂದ ಹರಿಯಾರಾಧಿಸುವರೋ ಸುವ್ವಿ ನಿತ್ಯಭಕ್ತಿಯಿಂದ ಸ್ತುತಿಯ ಮಾಡಿ ಜಗ- ಕತೃವಿನಾಜ್ಞೆಯಿಂ ತೃಪ್ತರಾಗೋರೋ ಸುವ್ವಿ 16 ಜ್ಞಾನ ಕರ್ಮೇಂದ್ರಿಯ ಭೂತಪಂಚಕಗಳು ಮನಸು ಎಂದು ಇನಿತು ಕೂಡಿ ಷೋಡಶಕಳೆಗಳು ಲಿಂಗಕ್ಕೆ ಸುವ್ವಿ ಷೋಡಶಕಳೆಗಳಿಂದ ಕೂಡಿ ಲಿಂಗವು ಇಹದು ಕಳೆಗಳಲ್ಲಿನ ಭಗವದ್ರೂಪವ ತಿಳಿಯೋ ಸುವ್ವಿ 17 ಮನಸಿಗೆ ಶ್ರವಣಕೆ ಶ್ರೀ ಕೇಶವನಾರಾಯಣ ತ್ವ- ಮಾಧವ ಗೋವಿಂದನೆ ಸುವ್ವಿ ಜಿಹ್ವೆ ಘ್ರಾಣದಿ ವಿಷ್ಣುಮಧುಸೂದನ ತ್ರಿವಿಕ್ರಮನೆನ್ನು ಸುವ್ವಿ 18 ಹಸ್ತ ಪಾದಕ್ಕೆಲ್ಲ ವಾಮನ ಶ್ರೀಧರ ಗುಹ್ಯಕ್ಕೆ ಹೃಷೀಕೇಶ ಮೂರುತಿ ಇಹರೋ ಸುವ್ವಿ ಮೂರುತಿ ಇಹರೋ ಮತ್ತೆ ಗುದದೊಳು ಪದ್ಮನಾಭ ಮುದದಿಂದ ಜ್ಞಾನ ಕರ್ಮೇಂದ್ರಿಯದಲ್ಲಿ ಸುವ್ವಿ 19 ಶಬ್ದದೊಳು ದಾಮೋದರ ಸ್ಪರ್ಶದಿ ಸಂಕರ್ಷಣನು ವಾಸುದೇವ ಮೂರುತಿ ಇಹರೋ ಸುವ್ವಿ ರೂಪಸುಗಂಧಗಳಲಿ ಈರೂಪಗಳಹವೋ ಸುವ್ವಿ 20 ಷೋಡಶ ಕಳೆಗಳಲ್ಲಿ ಅಭಿಮಾನಿಗಳಂತರದಲ್ಲಿ ನೀ ಬಿಡದೆ ನೆನೆಸು ಈ ಭಗವದ್ರೂಪಗಳಲ್ಲಿ ಸುವ್ವಿ ಭಗವದ್ರೂಪಗಳಲಿ ಧೃಡಭಕುತಿಯಿಂದಲಿ ಎಡೆಬಿಡದೆ ನಡೆನುಡಿಗಳಲ್ಲಿ ಸುವ್ವಿ 21 ಆಚ್ಛಾದಿಕವು ಜೀವರಿಗೆ ಎರಡುಂಟು ನಿತ್ಯದಲ್ಲಿ ಜೀವನ ಮರೆಯಮಾಡಿದ ಜೀವಾಚ್ಛಾದಿಕ ಸುವ್ವಿ ಜೀವಾಚ್ಛಾದಿಕ ಇದೆ ಹರಿಚ್ಛಾಬಂದಕಾಲದಿ ಬಿಚ್ಚಿ ಹೋಗುವುದು ನಿಶ್ಚಯ ಕೇಳೋ ಸುವ್ವಿ 22 ಪರಮಾಚ್ಛಾದಿಕವೆಂಬುದು ನಿರುತವು ತಪ್ಪಿದ್ದಲ್ಲ ಹರಿಇಚ್ಛಾ ಇಂಥಾದ್ದೆ ಇಂಥಾದ್ದೆನ್ನು ಸುವ್ವಿ ಇಂತಿದ್ದರು ಹರಿಯು ಒಮ್ಮೆ ಇಚ್ಛೆಮಾಡಿದರೆ ಒಮ್ಮೆ ಒಮ್ಮೆ ತೋರಿದರೆ ಒಮ್ಮೆ ತೋರದಿಹನೋ ಸುವ್ವಿ 23 ಲಿಂಗದೇಹಕ್ಕೆ ತಮ ಮೋಹ ಮಹಮೋಹ ತಾಮಿಶ್ರ ಅಂಧತಾಮಿಶ್ರವೆನ್ನು ಸುವ್ವಿ ತಾಮಿಶ್ರದಿ ಪಂಚ ನರಕಂಗಳಲ್ಲಿರ್ಪ ಕೃದ್ಧೋಲ್ಕಾದಿ ಪಂಚಭಗವದ್ರೂಪವಿಹುದೋ ಸುವ್ವಿ 24 ದೈತ್ಯರಿಗವಕಾಶ ಲಿಂಗದೊಳೆಂದಿಗಿಲ್ಲ ದೈತ್ಯಾರಿಜನಾರ್ದನ ಹರಿ ಅಲ್ಲೆ ಇಹನು ಸುವ್ವಿ ದೈತ್ಯಾರಿ ಜನಾರ್ದನನು ಲಿಂಗವ ರಕ್ಷಿಸುತ್ತ ನಿತ್ಯನಿರ್ಲಿಪ್ತನಾಗಿ ನಿಂತಿಹನೋ ಸುವ್ವಿ 25 ವಿಧಿಮೊದಲು ತೃಣಾದಿ ಜೀವರ ಲಿಂಗದಲಿ ದಗ್ಧಪಟದ ತೆರದಿ ವಿಧಿಗೆ ಲಿಂಗವು ಸುವ್ವಿ ವಿಧಿಗಿಹ ಲಿಂಗದ ಕಾರ್ಯ ಹರಿಯ ಪ್ರೀತ್ಯರ್ಥವು ಲಿಂಗಗುಣದ ಕಾರ್ಯವೆಂದಿಗಿಲ್ಲವೋ ಸುವ್ವಿ 26 ಲಿಂಗದೇಹಕೆ ಮುಂದೆ ಅನಿರುದ್ಧದೇಹವು ಅಂಗಿಯ ತೊಟ್ಟಂತೆ ಸಂಗಮಾದುದು ಸುವ್ವಿ ಅದರಿಂದ ಅನಿರುದ್ಧದೇಹ ಇಹುದು ಸಪ್ತಾವರಣ ಆವರಣಗಳಲ್ಲಿ ವಿವರಣೆ ತಿಳಿಯೋ ಸುವ್ವಿ 27 ಅನಿರುದ್ಧ ಪ್ರದ್ಯುಮ್ನ ಆವರಣಗಳೆರಡು ವಾಸುದೇವ ನಾರಾಯಣ ಸುವ್ವಿ ಸರ್ವತತ್ತ ್ವ ವ್ಯಕ್ತವಾದವು ನೀ ಮತ್ತೆ ತಿಳಿಯೋದು ಸುವ್ವಿ 28 ಮಹತ್ತತ್ವ ತಿಳಿ ಶ್ರೀ ವಾಸುದೇವಾವರಣದಿ ನಾರಾಯಣಾವರಣದಿ ಅವ್ಯಕ್ತ ತತ್ವವು ಸುವ್ವಿ ಅವ್ಯಕ್ತ ತತ್ವಾದಿಚತುರ್ವಿಂಶತಿ ತತ್ವದಲಿ ಕೇಶವಾದಿ ಚತುರ್ವಿಂಶತಿ ರೂಪವಿಹುದು ಸುವ್ವಿ 29 ತತ್ವಂಗಳಲಿ ತತ್ತದಭಿಮಾನಿಗಳಂತರದಿ ನಿತ್ಯ ಹರಿಯು ತನ್ನ ಸತಿಯರಿಂದಲಿ ಸುವ್ವಿ ಸತಿಯರಿಂದಲಿ ಕೂಡಿ ಕೃತ್ಯವ ನಡೆಸಿ ಅಭಿ ವ್ಯಕ್ತಮಾಡಿಸುತ್ತಿರುವನು ಹರಿ ಸತ್ಯವೆನುಸುವ್ವಿ 30 ಹೃದಯದೊಳಿರುತಿರ್ಪ ಅನಿರುದ್ಧದೇಹದೊಳು ಮುದದಿಂದ ದೈತ್ಯದಾನವಾದಿಗಳಿರುವರು ಸುವ್ವಿ ದೈತ್ಯರೆಲ್ಲರು ಪಾಪಕಾರ್ಯಗಳ ಮಾಳ್ಪರು ಪುಣ್ಯಕಾರ್ಯಗಳೆಲ್ಲ ಸುರರಿಂದಾಹುದು ಸುವ್ವಿ 31 ಲಿಂಗದೇಹದ ಸಂಗಡ ಭಂಗವಿರುವುದು ಸುವ್ವಿ ಭಂಗವಾಗಲು ವಿಷಯ ಸಂಗರಹಿತನಾಗು ರಂಗ ಅಂತರದಿ ತಿಳಿಯಗೊಡುವನು ಸುವ್ವಿ 32 ಜೀವಪ್ರಕಾಶವು ಲಿಂಗಾನಿರುದ್ಧದೊಳು ಷೋಡಶಕಳೆಗಳಿಂದ ವ್ಯಾಪಿಸಿಹುದು ಸುವ್ವಿ ವ್ಯಾಪಿಸಿಹುದು ಮುಂದೆ ಸ್ಥೂಲದೇಹವು ಒಂದು ಸ್ಥೂಲಜಡದೇಹದ ಕಾರ್ಯ ಅಭಿವ್ಯಕ್ತವಾಹುದು ಸುವ್ವಿ 33 ಸ್ಥೂಲ ದೇಹದೊಳು ಸುಷುಮ್ನಾಧಾರ ಹಿಡಿದು ಸಪ್ತಕಮಲಗಳಲ್ಲುಂಟು ತಿಳಿಯೋ ಸುವ್ವಿ ಸಪ್ತಕಮಲದಿ ಮೊದಲು ಮೂಲಾಧಾರದಿ ನಾಲ್ಕು ಕಮಲ ಹವಳವರ್ಣವಿದೆ ಭೂಲೋಕವೆನ್ನು ಸುವ್ವಿ 34 ಕಮಲ ನಾಭಿಯಲ್ಲಿ ವಾಯುಮಂಡಲವಿದೆ ಭುವರ್ಲೋಕವು ಸುವ್ವಿ ಭುವರ್ಲೋಕ ಇಲ್ಲಿ ವಾಯುಬೀಜಾಕ್ಷರದಲ್ಲಿ ನಿತ್ಯ ಸುವ್ವಿ 35 ಹೃದಯಕಮಲದಿ ಎಂಟುದಳ ಉಂಟು ರವಿಭಾ ಸತ್ರಿಕೋಣ ಅಗ್ನಿಮಂಡಲವಿಹುದಿಲ್ಲಿ ಸುವ್ವಿ ಇಹುದು ಸುವರ್ಲೋಕ ಇಲ್ಲಿ ಅಗ್ನಿ ಬೀಜಾಕ್ಷರ ನಿತ್ಯ ಸುವ್ವಿ 36 ಹೃದಯಕಮಲದ ಮಧ್ಯ ಕರ್ಣಿಕಮಧ್ಯದಲ್ಲಿ ಮೂಲೇಶನಿಪ್ಪ ಸ್ಥೂಲಾಂಗುಷ್ಟ ಮೂರುತಿ ಸುವ್ವಿ ಮೂರುತಿ ಮೂಲೇಶನ ಪಾದಮೂಲದಲ್ಲಿಪ್ಪ ಅನಿರುದ್ಧ ದೇಹವೇ ಸುವ್ವಿ 37 ನಿತ್ಯ ಇಪ್ಪತ್ತೊಂದು ಸಾವಿರದಾರುನೂರು ಸುವ್ವಿ ಆರುನೂರು ಜಪ ಮೂರು ಮೂರು ವಿಧಜೀವರೊಳು ಮೂರು ವಿಧ ನಡೆಸಿ ಮೂರ್ಗತಿ ನೀಡುವ ಸುವ್ವಿ 38 ಅಷ್ಟದಳಗಳ ಮೇಲೆ ಅಷ್ಟಭುಜನಾರಾಯಣ ನಿಷ್ಟೆಯಿಂದಲಿ ಚರಿಸಿ ಜೀವರಿಷ್ಟವ ತೋರುವ ಸುವ್ವಿ ಜೀವರಿಷ್ಟದೊಳು ಪೂರ್ವದಳದಲಿ ಪುಣ್ಯ ನಿದ್ರಾಲಸ್ಯವು ಶ್ರೀ ಆಗ್ನೇಯ ದಳದಲಿ ಸುವ್ವಿ 39 ಆಗÉ್ನೀಯದಳದ ಮುಂದೆ ಯಮದಿಕ್ಕಿನಲ್ಲಿ ಕ್ರೂರ ಬುದ್ಧಿಯು ಜೀವಗಾಗುವುದೆನ್ನು ಸುವ್ವಿ ನಿರುತ ದಳದಲ್ಲಿ ಸಂಚರಿಸುವ ಸುವ್ವಿ 40 ವಾಯುವ್ಯದಲ್ಲಿ ಗಮನಾಗಮನವು ಸುವ್ವಿ ಗಮನಾಗಮನದಿಮೇಲೆ ರತಿಬುದ್ಧಿಯ ಉತ್ತರದಲಿ ದಾನಬುದ್ಧಿಯು ಈಶಾನ್ಯದಲಿ ಸುವ್ವಿ41 ಬರಲು ಸ್ವಪ್ನಾವಸ್ಥೆಯು ಸುವ್ವಿ ಸ್ವಪ್ನಾನಂತರದಿ ಕರ್ಣಿಕೆಯಲ್ಲಿ ಜಾಗ್ರತಿಯು ಮಧ್ಯದೊಳು ಸುಷುಪ್ತಾವಸ್ಥೆಯು ಸುವ್ವಿ 42 ಉರದಲ್ಲಿ ಮುತ್ತಿನವರ್ಣ ಎರಡಾರುದಳಕಮಲದಿ ವಿರುಪಾಕ್ಷನಭಿಮಾನಿ ನರಸಿಂಹನ ಪೂಜಿಪ ಸುವ್ವಿ ನರಸಿಂಹನ ಪೂಜಿಪ ಈ ಲೋಕ ಮಹರ್ಲೋಕ ದ್ವಾದಶದಳದಿ ಕಲಾಭಿಮಾನಿಗಳಿಹರು ಸುವ್ವಿ43 ಕಂಠದಲಿ ಎರಡೆಂಟರಷ್ಟದಳಕಮಲ ಕಮಲ ರಕ್ತವರ್ಣ ಜನಲೋಕವು ಸುವ್ವಿ ಜನಲೋಕದಲಿ ಶೇಷ ಸಂಕರ್ಷಣ ಮೂರ್ತಿಯನು ನಿತ್ಯ ಸ್ತುತಿಸುತ ತಾ ಭೃತ್ಯನಾಗಿಹನೊ ಸುವ್ವಿ 44 ಭ್ರೂಮಧ್ಯ ದ್ವಿದಳಕಮಲ ಉಂಟೊಂದಿಲ್ಲಿ ತಾ ಮಧುಪುಷ್ಪದಂತೆ ಪೊಳೆಯುತ್ತಿಹುದು ಸುವ್ವಿ ತಪೋಲೋಕವೆನ್ನು ಸುವ್ವಿ 45 ಶಿರದೊಳು ಸಾವಿರದಳಕಮಲವು ವಜ್ರದ ಕಲಾ ವರುಣ ಮಂಡಲವಿದೆ ಸತ್ಯಲೋಕವೆ ಸುವ್ವಿ ಉತ್ತಮೋತ್ತಮ ಶ್ರೀರಂಗನ ಪೂಜಿಸುವನು ಸುವ್ವಿ 46 ಅಷ್ಟಾಕ್ಷರU
--------------
ಉರಗಾದ್ರಿವಾಸವಿಠಲದಾಸರು
ಎಂಥಾದಯವಂತನೋ ಸಂತಾರನಾಥನೋ ಪ ಕಂತೂ ಜನಕಾನ ಪ್ರಿಯ್ಯಾನೋ ಆ - ನಂತಾ ನಂತಾ ಮಹಿಮನೋ ಅ.ಪ ರಮ್ಯಾ ಗುಣಾ ಪೂರ್ಣನೋ - ಆ - ಗಮ್ಯಾ ಸಚ್ಚರಿತಾನೋ ನಮ್ಯಾನತರಾ ಪೊರೆವಾನೋ - ಈತ ನಮ್ಯಲ್ಲಾರ ಸಲಹೋನೋ 1 ಪ್ರಾಣಾವೇಶಾಯುತನೋ - ಜಗ - ತ್ರಾಣಾ ತಾನಾಗಿಹನೋ ಕ್ಷ್ಯೋಣೀಯೋಳ್ವಿಖÁ್ಯತಾನೋ - ಎನ್ನ ಪ್ರಾಣಾUಳಿಗೆ ನಾಥನೋ 2 ಕರುಣಾಶಾಲಿ ಎನಿಪಾನೋ - ತನ್ನ ಚರಣಾ ಸೇವಾ ನೀಡುವನೋ ಶರಣಾಬ್ಜ - ತರಣೀ ಸÀಮನೋ - ಅಂತಃ ಕರಣಾದಲ್ಲಿರುವಾನೋ 3 ಜನನೀ ಜನಕಾರೆನಿಪನೋ - ಸಕಲ ಜನರೀಗೆ ಸಮ್ಮತನೋ ಜನುಮಾ ಜನುಮದಲೀತನೋ - ನಿಶ್ಚಯ ಎನಗೆ ತಾತನೋ 4 ಭೂತಾಳದೊಳು ವಿಖ್ಯಾತನೋ ನಿಜ - ದಾತಾ ಜನರಿಗೆ ಪ್ರೀತನೋ ನೀತಾ ಗುರು ಜಗನ್ನಾಥಾ ವಿಠಲ - ಪ್ರೀತಿಯ ತಾಪೊಂದಿಹನೋ 5
--------------
ಗುರುಜಗನ್ನಾಥದಾಸರು
ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ ಬಂಧಕ್ಕೆ ಈ ಕರ್ಮವೇ ಕಾರಣಾಗಿ ಬಂದಿತು ಜನುಮಾ ಅನಿವಾರ್ಯವಾಗಿ ಈ ಬಂಧವ ನೀಗಿ ಚಿರಶಾಂತಿಗಾಗಿ ಈ ಯೋಗ ಬೆರಸಿ ಇದೆ ಕರ್ಮವೆಸಗಿ ಅರ್ವಿನಿ ಫಲವಾ ಪರಮಾತ್ಮಭಾವಾ ತಳೆಯುವದೆ ಈ ಕರ್ಮಯೋಗಾ ಕಳೆವುದು 1 ವಿಷಯಾಭಿಲಾಷಾ ನೀಗಿಸಿ ಆಶಾ ಹರಿಸುವದಿದುವೇ ನಿಷ್ಕಾಮ ಕರ್ಮ ಮನಸಿನ ಮಲಿನಾ ಕಳೆದೆಲ್ಲ ಹಸನಾ ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ ಉದಿಸುವುದು ವೈರಾಗ್ಯಭಾಗ್ಯ ಕಳೆವುದು 2 ವಿಷಧಾತುಗಳ ತಂದು ಪುಟಹಾಕಿಕೊಂಡು ಹೆಸರಾದ ಸಿದ್ಧೌಷಧಿ ಮಾಡಿಕೊಂಡು ಉಪಯೋಗ ಕಂಡು ಜಡದೇಹಗಳ ಬೇನೆ ನೀಗಿಪತೆರದಿ ಈ ಕರ್ಮವಿಷವಾ ಪುಟಹಾಕುತಿಹುದೀ ನಿಷ್ಕಾಮತನದೀ ಈ ಸೂಕ್ಷ್ಮದೇಹಾ ರೋಗ ಕಳೆವಾ ಘನವಾದ ಪರಮೋಪಾಯಾ ಇದೇ ಪೇಳ್ದೆ ಗುರುಶಂಕರಾರ್ಯ3
--------------
ಶಂಕರಭಟ್ಟ ಅಗ್ನಿಹೋತ್ರಿ
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ ... ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ ಧ್ರುವ ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ... ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ... ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ... ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ 1 ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ... ಹರಿಯುತಿಹುದು ನೋಡಿ ಙÁ್ಞನ ಗಂಗೆಯು ಸೂಸಿ | ಙÁ್ಞ... ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ... ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ 2 ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ... ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ... ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ... ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ3 ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ... ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ... ಘನ ಸುಖ ಪಡೆದುನುಮಾನ ಈಡ್ಯಾಡಿ | ಈ... ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ 4 ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ... ಪುಣ್ಯಗೈತೆನ್ನ ಜೀವ ಅನುಭವದಿಂದ | ಅ... ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ... ಧನ್ಯವಾದ ಮಹಿಪತಿ ಗುರು ಕೃಪೆಯಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾರಿ ದೋರೆನಗ ಮುಕುಂದಾ ಪ ದಾರಿ ತೋರೆನಗೆ ಶ್ರೀ ಹರಿ ನಿನ್ನ ಭಕುತಿಯಾ| ಸಾರಿದೆ ನಿನ್ನವನಾನು ಮುಕುಂದಾ ಅ.ಪ ಜನುಮಾನುಜನುಮದಲಿ|ನಾಮವಾ| ನೆನೆಯದ ತಪ್ಪಿನಲಿ|| ಜ್ಞಾನದೃಷ್ಟಿಯಲಂಧನಾದೆನು ಹರಿ ನಿಮ್ಮ| ಕಾಣದ ಕಂಗಳನಾ ಮುಕುಂದಾ1 ಭ್ರಾಂತತನವ ಬಿಡಿಸಿ|ವಿವೇಕ| ಶಾಂತಿಯ ನೆಲೆಗೊಳಿಸಿ| ಅಂತರಂಗದ ನಿಜ ಸುಖವ ಸೂರ್ಯಾಡುವ| ಸಂತರೊಳಗ ಕೂಡಿಸೋ ಮುಕುಂದಾ2 ಅರಹುನಯನ ದೆರಿಸಿ|ನಿಜರೂಪ| ಗುರುತದ ನೆಲೆ ತೋರಿಸೀ| ಗುರುವರ ಮಹಿಪತಿ ನಂದನ ಪ್ರಭು ನಂದನ ಪ್ರಭು ನಿಮ್ಮ| ಸ್ಮರಣೆ ಪಡೆಯ ನಡಿಸೋ ಮುಕುಂದಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಧನ್ಯ ಧನ್ಯವಾಯಿತು ಜನುಮಾ | ಆವಪುಣ್ಯವೋ ಅರಿಯೇ ನಮ್ಮಾ ಪ ನಾನಾ ಜನ್ಮದ ಬಲಿಯನೆ ಗೆದ್ದು ಸಲೆ | ಮಾನುಷ ದೇಹದಲಿಂದು | ಮಾನುಭಾವರ ವಂಶದಿ ಬಂದು | ಅವರ | ಸಾನಿಧ್ಯ ಸೇವೆಯ ಪಡೆದು 1 ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ | ಮೆರೆವುದು ಗುರುತೀರ್ಥವೆನಿಸಿ | ಗುರು ವಿಶ್ವೇಶ್ವರ ನೆನೆವಾಸೀ | ಕಂಡು | ಪೂರಿತಾಯಿತು ಮನದಾಸಿ 2 ಭವ | ಕರ್ಮ | ಪಾದ ಧರ್ಮಾ | ನಿಜ | ನಂದನ ಗಾನಂದೋಬ್ರಹ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಕಾಂತಕ ವರದೇವನೆ ಕರುಣಾಕರ ಗೋವಿಂದಾ ಪ ಮರೆವೆಯೇತಕೋ ಲೋಲ ಬಾರೋ ಬಾರೋ ಗಾನಲೋಲ ಅ.ಪ ಪರಿಪರಿಯಾ ಜನುಮಾಂತರ ಸರಣಿಯೊಳಾನು ಜನಿಸಿ ಸೊರಗಿ ಸೊರಗಿ ಮರುಗಿ ತಿರುಗಿದೆ 1 ನೆಲೆಸಲಿಕೆ ಸ್ಥಳವು ಇಲ್ಲವೋ [ಕಲಿ]ಕಾಲಪಾಶ ಬದ್ಧನಾದೆನೊ 2 ಜನುಮಕೋಟಿಯೊಳಾದು ಪೋಪುದು ನಾಮ ಸ್ಮರಣೆಯೊಂದಿರಲೋ 3 ರಾಮದಾಸವಿನುತ ಕೇಶವಾ [ಉದ್ಧರಿಸೋ] ಆವ ಸುಖವು ಬೇಡವೆನಗೆ ಜೀವ ಪೋಗುವಂದು ನಿನ್ನ ಸೇವೆಗೈವ ವರವು ಸಾಕೆಲೈ ಮಾವಿನಕೆರೆಯರಸ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪಂಚಮಿಯ ದಿನ ವಿಭವ ನಮ್ಮ ಶ್ರೀನಿವಾಸನ ಮಹಾತ್ಮವ ಮಾನಿನಿ ರನ್ನೆ ನೀ ಪೇಳೆ ಭಕ್ತಾ- ಧೀನದ ಚರಣದ ಲೀಲೆ ಭಾನು ಉದಯದಲಿ ವೀಣಾದಿ ಸು- ಗಾನ ವಾದ್ಯ ನಾನಾವಿಧ ರಭಸದಿ1 ಎತ್ತಲು ನೋಡಿದಡತ್ತ ಜನ- ಮೊತ್ತವಿಲಾಸವಿದೆತ್ತ ಚಿತ್ತದಿ ನಲಿನಲಿದಾಡಿ ತೋಷ- ವೆತ್ತಿರುವನು ಒಟ್ಟುಗೂಡಿ ಸುತ್ತುಮುತ್ತು ಒತ್ತೊತ್ತಿಲಿಹರು ವಿ- ಪ್ರೋತ್ತಮ ಶ್ರೀಹರಿಭಕ್ತರ ಮಯವಿದು2 ಚಾಮರ ಛತ್ರ ಸಿಗುರಿಯು ಜನ- ಸ್ತೋಮ ಪತಾಕೆ ತೋರಣವು ಹೇಮದ ಕಂಚುಕಿ ಈಟಿ ಗುಣ- ಧಾಮನ ಬಿರುದುಗಳ್ ಕೋಟಿ ಆ ಮಹಾಭೇರಿ ಪಟಹ ನಿಸ್ಸಾಳಕ ಸಾಮಗಾನ ಸಾಮ್ರಾಜ್ಯವೋಲಿಹುದು3 ಬಾಲರು ವೃದ್ಧ ಯೌವನರು\ಜನ- ಜಾಲವೆಲ್ಲರು ಕೂಡಿಹರು ಲೋಲ ಸ್ರೀಮುಂದ್ರಾಂಕಿತದಿ ಬಹು ವಿ- ಶಾಲ ದ್ವಾದಶನಾಮ ಮುದದಿ ಆಲಯದೊಳಗಿಹ ಬಾಲಕಿಯರು ಸಹ ಸಾಲಂಕೃತ ಸಮ್ಮೇಳದಿ ನಲಿವರು4 ಒಂದು ಭಾಗದಿ ವೇದಘೋಷ ಮ- ತ್ತೊಂದು ಭಾಗದಿ ಜನಘೋಷ ಇಂದಿನ ದಿನದತಿಚೋದ್ಯ ಏ- ನೆಂದು ವರ್ಣಿಸುವದಸಾಧ್ಯ ಚಂದಿರಮುಖಿ ಯಾರೆಂದೆನಗುಸುರೆಲೆ ಮಂದರಧರ ಗೋವಿಂದನ ಮಹಿಮೆಯ5 ಊರ್ವಶಿ : ಕೇಳಿದ್ಯಾ ನಳಿನಾಕ್ಷಿ ಶ್ರೀಹರಿಲೀಲೆ ಪೇಳಲೇನದಾ ಮೂರ್ಲೋಕದೊಳಗೀ ವಿ- ಶಾಲವ ನಾ ಕಾಣೆಪ. ಸೋಜಿಗ ಸೌಭಾಗ್ಯ ಸಂಪದಕಿದು ಬೀಜ ಕಾಣೆಲೆ ರಾಜೀವನಾಭನ ಪೂಜಾವಿನೋದದಿ ರಾಜವದನೆ ವನಭೋಜನದಿಂದಿನ1 ನೇತ್ರದ ಕಲ್ಮಷವಡಗುವದು ಪವಿತ್ರವಾಗಿಹ ಗೋತ್ರಕುಮಾರಿ ಪ್ರೀತ್ಯರ್ಥದಿ ಕೊಟ್ಟಿಹ ರಾತ್ರಿ ಪೂಜೆ ಗೈವ ಮಾತ್ರದಿ ಪೊರಟರು2 ನೂತನವೆಂದು ನೀ ಪೇಳುವಿ ಚಂದಿರ ಮುಖಿ ಜನಸಂದಣಿಗಳು ಮಹಾ ಮಂದಿ ಓಲೈಸುವರಿಂದು ಮುಕುಂದನ3 ಬಾರೆ ನಾರೀಮಣಿ ವೈಯ್ಯಾರೆ ನೀರೆ ಬಾರೆಪ. ನಿನ್ನಿಂದಾಯಿತ್ತು ಪುಣ್ಯ ಸಂಪಾದನೆ ಕಣ್ಣಾರೆ ಕಾಣುವ ಯೋಗಭೋಗ1 ಎನಗತಿ ಮನವು ನಿನಗತಿ ಛಲವು ಜನುಮಾಂತರ ಪುಣ್ಯವೈಸೆ ನೀ2 ರಂಭೆ : ಏನಮ್ಮ ಬಾರಿತ್ತಲು ನೋಡೀತನ್ಯಾರಮ್ಮಾ ಭಾನುಕೋಟಿ ಪ್ರಕಾಶದಿಂದ ಮೆರೆವನಮ್ಮಾಪ. ಅನವರತದಿಂದ ಬರುವ ಪುರುಷನಲ್ಲ ಮೀನಕೇತನ ಶತರೂಪ ಕಾಣೆ1 ನೂತನ ಪುರುಷನಿವನ್ಯಾರೆಂದರಿಯೆನಮ್ಮಾ ಶಾತಕುಂಭದ ಮಂಟಪವೇರಿ ಬರುವನಮ್ಮಾ2 ಸುರುಚಿರಫಣಿಪ ಪೆಡೆ ಶಿರದೊಳಿರುವದಮ್ಮಾ ತರತರ ರತ್ನವರದ ಬಾಯೊಳಿರುವದಮ್ಮಾ3 ಕೊರಳೊಳು ಕೌಸ್ತುಭವ ಧರಿಸಿಕೊಂಡಿಹನಮ್ಮಾ ಪರಮ ಪುರುಷನಂತೆ ತೋರುವನು ಅಮ್ಮಾ4 ಬಾಲಾರ್ಕನಂತೆ ಮುಖ ಪ್ರಜ್ವಲಿಪುದು ನೀಲಮಾಣಿಕ್ಯ ಕಾಂತಿಯ ಸೋಲಿಪುದು5 ತೋರಲರಿಯೆ ಕಾಲಿಗೆರಗುವೆನು ಪೇಳಬೇಕು ಸಖಿಯೆ6 ಕರದೊಳು ಶಂಖಚಕ್ರವ ಧರಿಸಿಕೊಂಡಿಹನಮ್ಮಾ ಬೆರಳೊಳು ವಜ್ರದುಂಗುರವನಿಟ್ಟವನಮ್ಮಾ7 ವರರತ್ನಖಚಿತದಾಭರಣದಿಂದ ಮೆರೆವ ಚರಣ ಸರೋಜದೊಳು ರೇಖೆಯಿಂ ಶೋಭಿಸುವ 8 ವಲ್ಲಭೆಯರ ಸಹಿತುಲ್ಲಾಸದಿ ಬರುವ ಖುಲ್ಲರ ಮಾನಸಕೆ ಝಲ್ಲೆನಿಸಿ ಮೆರೆವ9 ಬಲ್ಲಿದ ಪುರುಷನಿವನೆಲ್ಲಿಂದ ಬಂದ ಎಲ್ಲವ ಪೇಳೆಲೆಗೆ ನಲ್ಲೆ ಸದಾನಂದ10 ಊರ್ವಶಿ : ನೋಡು ನಿತ್ಯಾನಂದಕರನ ಮೂಡಗಿರಿಯಿಂದೋಡಿ ಬಂದನ ನೋಡೆಪ. ಛಪ್ಪನ್ನೈವತ್ತಾರು ದೇಶ ಸರ್ಪಶೈಲ ರಾಜವಾಸ ಚಪ್ಪರ ಶ್ರೀ ಶ್ರೀನಿವಾಸ1 ತಿರುಗುತ್ತಿಪ್ಪಾ ತಿರುಮಲೇಶ ಶರಣ ರಾಮನ ಭಕ್ತಿಪಾಶ ದುರುಳಿನಲಿ ನಿಂದಿರ್ಪಶ್ರೀಶ ತರಿಸುವನು ಕಾಣಿಕೆ ವಿಲಾಸ2 ಪಟ್ಟದರಸನಾದ ದೇವ ಸೃಷ್ಟಿಯಾಳುವಜಾನುಭಾವ ದೃಷ್ಟಿಗೋಚರವಾಗಿ ಕಾಯ್ವ ಇಷ್ಟವೆಲ್ಲವ ಸಲಿಸಿ ಕೊಡುವ 3 ಊರ್ವಶಿ : ಬಂದ ಗೋವಿಂದ ಸಾನಂದದಿ ಭಕ್ತರ ವೃಂದ ನೆರಹಿ ವನಕೆ ಅಂದಣವೇರಿ ಮುಕುಂದನೊಲವಿನಲಿ ಕುಂದಣ ಮಂಟಪವೇರಿ ಮತ್ತೊಬ್ಬನು ಸಂದರುಶನವಂ ನೀಡುತ ಯಿಬ್ಬರು ಒಂದಾಗುತ್ತಾನಂದವ ಬೀರುತ್ತ 1 ಅಕ್ಕ ನೀ ನೋಡು ಬಹುಮಾನದಿ ಸಿಕ್ಕಿದಿ ಬಿರುದು ಪೊತ್ತಾ ಉಕ್ಕುವದತಿ ತೋಷ ಸ್ತುತಿಪಾಠಕ ಜನಗಳ ಮಿಕ್ಕಿ ನೊಡುವ ನೋಟಕೆ ಮನಸಿನೊಳು ಝಕ್ಕೆನ್ನುವ ಕ್ಷಿತಿಗಕ್ಕಜ ತೋರುತ್ತಾ 2 ಪವಿತ್ರ ನಿಶಾನಿಧಾರಣಾ ಪವಿತ್ರಗೈಯುವ ಕಾರಣ ಮಿತ್ರಮಂಡಳವನು ಮೀರಿ ಪೊಳೆವುತಿಹ ರತ್ನಖಚಿತ ಮಂಟಪದಲಿ ಮಂಡಿಸಿ ಧಾತ್ರಿಯೊಳಗೆ ಅನ್ಯತ್ರವಿಲ್ಲೆಂಬುವ ಕೀರ್ತಿಯ ಧರಿಸಿ ಜಗತ್ರಯಪಾವನ 3 ನಿಸ್ಸಾಳ ಪಟಹ ಭೂರಿ ಜನ ಜಾಲ ಕೂಡಿರುವ ಮೇಳವಿಸುತ್ತನುಕೂಲಿಸಿ ಬಹು ಬಿರು ದಾಳಿಗೆ ಸಂಭ್ರಮದೇಳಿಗೆಯಿಂದಲಿ ಕೋಲು ಪಿಡಿದು ಓಹೋಯೆಂಬಂಥ ವಿ- ಶಾಲ ಭಕ್ತರ ಮೇಲು ಸಂತೋಷದಿ 4 ದೇಶದೇಶದ ಜನರು ನಾನಾ ವಿಧ &ಟಿ
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸು ಶ್ರೀನಿವಾಸ ಪಾಲಿಸೋ ಪ ಪಾಲಿಸೋ ಯದುಕುಲ ಬಾಲಾ ಗಾನ- ಲೋಲನೆ ಯಾಕಿಂಥ ಜ್ವಾಲಾ ಜನ್ಮ ಬಲ್ಲೇನಾ ಸಂಸಾರಶೂಲಾ ನಿನ್ನ ಚಾಲನದಿಂದಾದವೆಲ್ಲಾ ಪದ್ಯ ಮಾಲೆಹಾಕುವೆ ಸಿರಿಲೋಲಾ ಆಹಾ ಬಾಲನ ಪಡೆದು ಪಾಲಿಸಲಾರೆನೆಂದರೆ ಸೀಲನೇ ಜನನಿ ಪದ್ಮಾಯಗಳಿಗೆ ಪೇಳ್ವೆ 1 ನಾನು ಮಾಡುವುದೆಂಬುದಿಲ್ಲಾ ಯೆನಗಾವ ಸ್ವಾತಂತ್ರ್ಯವು ಇಲ್ಲಾ ಇರೆ ಅನುಗಾಲ ಕಷ್ಟವು ಸಲ್ಲಾ ಎನಗೆ ಜನುಮಾದಿ ಭಯವು ಬಿಟ್ಟಿಲ್ಲ ನೀನು ತನುಸ್ಥಾನ ಬಿಟ್ಹೋದ ಮ್ಯಾಲೆ ಎನ್ನ ಸ್ವಾತಂತ್ರ್ಯವು ಇಲ್ಲವಾಯಿತಲ್ಲ ಆಹಾ ಅನುದಿನ ಹಸಿವೆ ತೃಷೆಗಳಿಂದ ಬಳಲೋ ದಾ- ಸನು ನಿನ್ನವನಿಗೆ ಸ್ವಾಧೀನವೆಲ್ಲಿಹುದೈಯ್ಯಾ 2 ನಿತ್ಯ ಸಂಸಾರಿಯಾದೆನಗೆ ಮತ್ತೆ ಮೃತ್ಯು ಬೆನ್ಹತ್ತಿರುವವಗೆ ಮಾಡೋ ಕರ್ಮ ಬದ್ಧ ಎನಗೆ ನೀ- ಚತ್ವದಿದುಪಜೀವಿಸುವವಗೆ ನಾನು ನಿತ್ಯನೆಂಬುವ ದುರಾತ್ಮನಿಗೆ ಆಹಾ ಮುಕ್ತಿಗೊಡೆಯ ಪುರುಷೋತ್ತಮ ನಿನ್ನ ದಾ- ಸತ್ವನಿತ್ತು ಸುಶಕ್ತನಮಾಡು ನೀ 3 ನಿನ್ನ ಆಧೀನವೊ ಎಲ್ಲಾ ನಾನು ನಿನ್ನ ದಾಸನು ಶಿರಿನಲ್ಲಾ ಅನು- ದಿನ ಮಾಡುವ ಕಾರ್ಯವೆಲ್ಲ ನೀನು ಚಲನೆದಂದದಿ ಮಾಡ್ವೆನಲ್ಲಾ ಯೆಂನೊ- ಳಾವ ತಪ್ಪಿತವೇನೋ ಇಲ್ಲಾ ನಿನ್ನ ಸಂಕಲ್ಪದಂತಾಗೋದೆಲ್ಲಾ ಆಹಾ ತನುವ ಕೊಟ್ಟವ ನೀನೆ ತನು ಕೊಂಡೊಯ್ವನೂ ನೀನೆ ಹನುಮೇಶವಿಠಲಾ ನಿನ್ನವನಾದ ಮ್ಯಾಲೆನ್ನಾ4
--------------
ಹನುಮೇಶವಿಠಲ
ಪ್ರಾಣರಾಯನೆ ನಿನಗೆಣೆಯುಂಟೆ ಪಾಲಿಪ ಕ ರುಣಾಶಾಲಿಗಳನ್ನು ಪಣೆಗಣ್ಣ ಮೊದಲಾದಮರ ಗಣದೊಳು ಇನ್ನು ನಾ ಕಾಣೆ ಮುನ್ನ ಪ ಗುಣನಿಧಿಯೆ ಎಣಿಯಿಲ್ಲ ನಿನ್ನಯ ಅಣು ಮಹಘನರೂಪ ಕ್ರಿಯಗಳು ಕ್ಷಣಬಿಡದೆ ನೀನಖಿಳಜೀವರ ತ್ರಿ- ಗುಣ ಕಾರ್ಯವ ಗೈವೆ ಮುಖ್ಯ ಅ.ಪ ಕರ್ಮ ಜೀವರೊಳು ನೀನೆಸಗಿ ತೋರ್ಪುದೆ ಧರ್ಮ ನಾನರಿಯೆ ಪ್ರತಿ ಕರ್ಮ ಎನ್ನನುಭವಕೆ ತಂದಿಡುವುದೇ ನಿನ್ನ ಧರ್ಮ ನಾ ಕಾಣೆ ಮರ್ಮ ಜನುಮ ಕೋಟಿಗಳಿಂದಲಿ ಅನುಸರಿಸಿ ಬಂದಿಹ ಎನ್ನ ಕರ್ಮವ ಅನಿಲದೇವ ನಿನ್ನಿಂದ ಅಲ್ಲದೆ ಎನಿತು ಇತರನಿಮಿಷರು ಮಾಳ್ವರು ಜ್ಞಾನದಾಯಕ ನೀನೆ ಎನ್ನಯ ಮನದಲಿಹ ಜಂಜಡವ ಕಳೆದು ಹೀನಕರ್ತನು ತಾನು ಅಲ್ಲದೆ ನೀನೆ ಸರ್ವರ ಕರ್ತನೆಂಬುವ ಜ್ಞಾನಿ ಧ್ಯಾನ ಸ್ಮರಣೆಯನು ಸಾನುರಾಗದಿ ಇತ್ತು ನಿನ್ನ ಮತಾನುಗರಲ್ಲನವರತ ಇಡು ಅನೇಕ ಜನುಮಜನುಮಾಂತರದೊಳು 1 ಶ್ವಾಸನಾಮಕ ನೀನು ಜಗದೀಶ ನೀ ಜೀ- ವೇಶ ಸರ್ವಶಕ್ತಾನು ನೀ ತಾಸಿಗೊಂಭೈನೂರು ಶ್ವಾಸಗಳನ್ನು ಈ ಶರೀರದಿ ಜೀವರಿಂ ದೆಸಗುವೆಯೊ ನೀನು ಉಸುರಲೇನಿನ್ನು ವಾಸುದೇವಗೆ ಪ್ರೀತನಾಗಿ ಅ- ಶೇಷತತ್ತ್ವಕ್ಕೀಶನಾಗಿಹೆ ವಾಸವಾದಿಗಳೆಲ್ಲರೊಳು ಇನ್ನು ಈಸುಭಾಗ್ಯವು ಕಾಣಲಿಲ್ಲ ಏಸುಕಾಲಕು ನೀನೇ ಗತಿಯೆಂದು ಈಶ ಶೇಷ ಖಗೇಶ ಪ್ರಮುಖರು ದಾಸರಾಗಿಹಗರಯ್ಯ ಬಿಡದೆ ದೇಶಕಾಲಗಳಲ್ಲಿ ನಿನ್ನೊಳು ಸೂಸುವಾ ಅತಿಭಕುತಿಯಿಂದಲಿ ಈಶ ತಪದಲಿ ನಿನ್ನ ಮೆಚ್ಚಿಸೆ ಶೇಷಪದವಿಯ ಕೊಟ್ಟು ಶ್ರೀಶ- ನ ಶಯನಸೇವೆ ಸಂಪದವನಿತ್ತೆ 2 ಭಕುತ ಜನರ ಬಂಧೂ ಶ್ರೀಹರಿಗೆ ನೀ ಪ್ರಥ- ಮಾಂಗನಹುದೆಂದೂ ಈ ಸಕಲ ಜಗದಾ ಚೇಷ್ಟಪ್ರದನೆಂತೆಂದೂ ನೀನೆ ಭಗವತ್ಕಾರ್ಯಸಾಧಕನೆಂದೂ ಸಾರುತಿದೆ ಶ್ರುತಿ ಇಂದೂ ಲೋಕಮಾತೆಗೆ ನಮಿಸಿ ದಶಶಿರ ನಂದನನ ಸಂಹರಿಸಿ ಮಹದಾನಂದ ನೀ ವನವ ಭಂಗಿಸಿ ರಘುನಂದನಗೆ ಮುದದಿಂದ ವಂದಿಸಿ ನೊಂದ ದೃ- ಪದನಂದನೇಯಳಾ- ನಂದಪಡಿಸಲು ಕೊಂದೆ ಕೌರವ ವೃಂದವೆಲ್ಲವ ಸವರಿ ನಂದನಂದನಿಗಾನಂದ ಪಡಿಸಿದೆ ಇಂದಿರೇಶ ಶ್ರೀ ವೇಂಕಟೇಶನೆ ಎಂದಿಗೂ ಪರದೈವವೆಂದು ಬಂದು ಬೋಧೆಯನಿತ್ತ ಆ- ನಂದತೀರ್ಥ ನೀ ಸಮರ್ಥಾ3
--------------
ಉರಗಾದ್ರಿವಾಸವಿಠಲದಾಸರು
ಬನ್ನಿರಿ ಬನ್ನಿರಿ ಪುರಜನರೆಲ್ಲರು ಕೃಷ್ಣನ ದರುಶನಕೆ ಪೋಗುವ ಪ ಕೃಷ್ಣನು ಜನಿಸಿದ ಈ ದಿನ ಇಷ್ಟವ ಪ್ರಾರ್ಥಿಸಲು ಪೋಗುವಅ.ಪ ದುಂದುಭಿ ನಾದವು ಕೇಳುತಿದೆ ಬಲು ಮಂದಿಯ ತಂಡವು ಹೋಗುತಿದೆ ಕಂದನ ರೂಪದಿ ಬಂದಿಹ ಆನಕ ದುಂದುಭಿ ಕುವರನ ಸಂಭ್ರಮ ನೋಡಲು 1 ಪೇಳಿರಿ ನಿಮ್ಮಯ ಕೊರತೆಗಳೆÀಲ್ಲವ ಕೇಳಿರಿ ವರಗಳ ಧೈರ್ಯದಲಿ ಬಾಲನು ಸುಲಭದಿ ಒಲಿಯುವ ಒಳ್ಳೆಯ ಕಾಲವಿದೆಲ್ಲರಿಗೆ ಬೇಗನೆ 2 ಜನುಮ ಜನುಮಗಳ ಪುಣ್ಯದ ರಾಶಿಯು ಜನುಮಾಷ್ಟಮಿ ದಿನದಿ ಲೋಕಕೆ ಜನುಮಾದ್ಯಷ್ಟಕದಾತನ ದರುಶನ ಮನಕೆ ಪ್ರಸನ್ನತೆ ಕೊಡುವುದು ಪೋಗುವ 3
--------------
ವಿದ್ಯಾಪ್ರಸನ್ನತೀರ್ಥರು
ಭಯಕೃದ್ಭಯನಾಶನ ಮಾಯಾರಮಣ ಭವಭಯಹರಣ ಪ ಜೀಯ ಕಾಯುವುದಯ್ಯ ಪರಿಹರಿಸಯ್ಯ ತಾಪ- ತ್ರಯ ದಯೆತೋರಯ್ಯ ಎನ್ನೊಡೆಯಾ ಅ.ಪ ನಾನರಿಯೆ ನಿನ್ನಯ ಗುಣಗಣಾದಿಗಳ ಅನುದಿನದಿನಾ ಅನುಭವಿಸಿ ಭವಚಕ್ರದಾಟಗಳ ಜನುಮ ಜನುಮಾಂತರದಿ ಬಂದ ವಾಸನಾದಿಗಳ ದೀನವತ್ಸಲ ದೂರ ನೋಡುವೆಯ ನೀನರಿಯ ಎನ್ನನು ಉಳುಹುವ ಪರಿಯ ಎನಗ್ಯಾರಿಹರೊ ನಿನ್ಹೊರತು ಪೂರೆವರಯ್ಯ ವನಜಸಂಭವನಯ್ಯ ಜೀಯ 1 ಕರಿ ಮಕರಿ ಪಿಡಿಯಲು ಬಂದ ಪರಿಯೇನು ನಿಖಿಳಖಳಕುಲವೈರಿ ಶ್ರೀಹರಿ ಸಿರಿಗೆ ಹೇಳದ್ದೇನು ಭಕುತನಾರ್ತಧ್ವನಿಯ ಕೇಳಿ ಬಂದೆಯಾ ಏನು ನಾನು ಆಸಾಧನವನರಿಯೇನು ಘನ್ನಮಹಿಮ ನಿನ್ನಯ ಕೀರ್ತಿಯನು ಕೇಳಿ ಬಂದೆನು ಇನ್ನೇನು ನಿನಗೆ ಏನು ತೋರಿದಂತೆ ಮಾಡಿನ್ನು ಎನ್ನೊಡೆಯ ನೀನೆಂದಡಿಗೆ ಬಿದ್ದಿಹೆನೊ ಇನ್ನು 2 ಈಸಲಾರೆನು ಸಾರಿ ಈ ಭವಸಾಗರದೊಳಗೆ ಶ್ರೀಶ ನಿನಗತಿಶಯವೆ ಕರುಣವಿಲಾಸ ತೋರೆನಗೆ ದಾಸದಾಸದಾಸರದಾಸ್ಯ ಕೊಡಿಸೆನಗೆ ಶ್ರೀಶ ಎನ್ನಯ ಮನದ ಕ್ಲೇಶವನೂ ನಾಶವಗೈಸು-ನಿರಾಶ್ರಯನಾಗಿಹೆನು ಏಸುಬಲ್ಲೆನು ಕಾಸಿನವನು ಬೇಸರಿಸದಿರು ಇನ್ನೂ-ಮುನ್ನೂ 3 ತಾಪತ್ರಯಗಳಿಂದನುದಿನದಿ ನಾ ನೊಂದೆ ಶ್ರೀಪತಿಯೆ ಹೃತ್ತಾಪಕಳೆದು ಪೊರೆಯಬೇಕೆಂದೆ ಗೋಪನಿನ್ನಯ ಶ್ರೀಪಾದದೊಳು ಮನವ ನೀಡೆಂದೆ ಕುಪಿತವೇ ನಿನ್ನವನು ನಾನೆಂದೆ ಭೂಪ ಆಪತ್ತೋದ್ಧಾರಕನೆಂದೆ ಪಾಪಿಮಾನವಜನುಮದಲಿ ಬಂದೆ ಕಾಪಾಡುವುದು ಎಂದೇ-ತಂದೇ 4 ಭೂಸ್ಥಳದಿ ನಿಂತ ಶ್ರೀ ವೇಂಕಟೇಶ ಹರೇ ತ್ರಿಸ್ಥಳದೊಳು ಈ ಸ್ಥಳವೆ ವೈಕುಂಠ ದೊರೆಯೆ ವಿಸ್ತರದಿ ಮಹಿಮೆಯ ಪಾಡಿ ಪೊಗಳಲು ನಾವು ಶಕ್ತರೆ ಸ್ವಸ್ಥಚಿತ್ತವಿಲ್ಲ ಶ್ರೀಹರೇ ಈ ಸ್ಥಿತಿಯಲ್ಲಿ ಎನ್ನ ನೋಡುವರೆ ದುಸ್ಥಿತಿಯಬಡವನಕೈಯ ಬಿಡುವರೆ-ಶೌರೆ5
--------------
ಉರಗಾದ್ರಿವಾಸವಿಠಲದಾಸರು
ಯಾತರ | ಜನುಮಾ | ಶಿರಿನಾಥನ ವಲುಮೆಗೆ ದೂರಾದ ನರನಾ ಪ ಉಂಡುಂಡು ವರಗುತ ಕಂಡಲ್ಲಿ ತಿರುಗುತ | ಭಂಡ ಮಾತುಗಳಾಡಿ ದಿನನೂಕುತಾ | ಮಂಡಲೇಶನ ಭಕ್ತಿ ಮಂಡಿಸಿ ಮನದೊಳು | ಖಂಡ ವಿಷಯದಾಶೆ ಗಂಡಲುವವನಾ 1 ಸ್ನಾನ ಸಂಧ್ಯಾನಿಲ್ಲಾ ಧ್ಯಾನ ಮೌನಗಳಿಲ್ಲಾ | ಭವ ಕಾನನವನು ಸೇರಿ | ಶ್ವಾನ ಸೂಕರನಂತೆ ಬಾಳುತಲಿಹನಾ 2 ಹಿಂದಿನ ಪುಣ್ಯದೀ ಬಂದದೀ ನರದೇಹ | ಮುಂದ್ಯಾವ ಗತಿಯೆಂಬ ಬೆಜ್ಜರದೀ | ತಂದೆ ಮಹಿಪತಿ ನಂದನ ಪ್ರಭು ಗೋ | ವಿಂದ ಮುಕ್ಕುಂದೆಂಬ ನಾಮವ ನೆನಿಯದೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ತವಾಯಿತು ಜನುಮಾ | ಹರಿಭಕ್ತಿ | ಅರ್ಥಿಯ ನೆಲೆಗೊಳ್ಳದೇ ಪ ನೊಣ ಮಧು ಬಿಂದುದಲೀ ಕುಳಿತಂತೆ | ವಣ ವಿಷಯದ ಸುಖಕ | ಹೆಣಗುತ ನಿಶಿದಿನದೀ | ತಾಪತ್ರಯ | ಕುಣಿಯೊಳು ಹೊರಳುತಲೀ 1 ಅವನಿಲಿ ಸಂಸಾರದೀ ಸಂಟರ್ಘಾಳಿ | ರವದಿಯಾ ತೆರೆ ಶಿಲುಕೀ | ವಿಧಿ ಬರ | ಹ್ಯಾವ ತಿಳಿಯದೆ ಮರುಗೀ 2 ಭೋಗಿನಾ ತ್ಯಾಗಿಯಾಗಿ ಆಯುಷ್ಯ | ನೀಗಿ ಯಚ್ಚರವಿಲ್ಲದೇ | ಶ್ರೀ ಗುರುಮಹಿಪತಿ ಸುತಪ್ರಭು | ಭಾಗವತರ ಕೂಡದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು