ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವೇ ಸುರತರುವೇ ಹರಿಭಕ್ತಾಗ್ರೇಸರ ವಿಜಯರಾಯ ಪ ಪುರಂದರದಾಸರ ಕರುಣಕೆ ಪಾತ್ರನೆ ಮರುತ ಮತಾಬ್ಧಿಗೆ ಚಂದ್ರ ವಿಜಯರಾಯ ಅ.ಪ ವಿಷ್ಣು ಬ್ರಹ್ಮ ಶಿವರನುಪರೀಕ್ಷಿಸುತು ತ್ಕøಷ್ಟ ಹರಿಯೆನುತ ಶಿಷ್ಟರಿಗರುಹಿದ 1 ಜನುಮ ಜನುಮದಿಂದನುಸರಿಸುತಿಹ ಘನದುರಿತವ ದರುಶನ ಮಾತ್ರ ಕಳೆವ2 ಗುರುರಾಮ ವಿಠಲನ ಚರಣವ ತೋರಿಸು 3
--------------
ಗುರುರಾಮವಿಠಲ
ಶ್ರೀ ಸತ್ಯಪರಾಯಣ ಸ್ವಾಮಿಗಳ ಸ್ತುತಿ ಕಂಗಳು ದಣಿಯ ನೋಡೆಲೆ ಮನವೆ |ಮಂಗಳಾಂಗ ಸತ್ಯಪರಾಯಣ ಗುರುಗಳ ಪ ಹಿಂದಿನ ಜನುಮದಿಂದ | ಬಂದ ಪಾಪಂಗಳ ||ಇಂದು ತಮ್ಮ ದರುಶನ | ದಿಂದ ಕಳದಾ 1 ನಂದತೀರ್ಥ ಶಾಸ್ತ್ರ | ಸಿಂಧುವಿಗೆ ಪೂರ್ಣ ಚಂದ್ರಾ |ನಂದದಲೊಪ್ಪುವ ಗುಣ | ಸಾಂದ್ರರ ಪದಂಗಳ 2 ವರಸೀತಾರಾಮ ಪದ | ಸರಸಿಜಕೆ ಮಧುಪಾ ||ಗುರುಪ್ರಾಣೇಶ ವಿಠಲಾ ನಿರಸಿಹ ಹೃದಯದಿ 3
--------------
ಗುರುಪ್ರಾಣೇಶವಿಠಲರು