ಒಟ್ಟು 20 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

*ಸುದಿನ ದುರ್ದಿನಮೆಂಬುದವರವರ ಸಂಪ್ರಾಪ್ತಿ ಸುದಿನಮದು ಜನಿಸಿದೊಡೆ ದುರ್ದಿನಮದಳಿಯಲ್ಕೆ ವಿಧಿಲೀಲೆ ಜನನಮರಣಂಗಳೈ ರಕ್ತಾಕ್ಷಿ ಮಧುಮಾಸ ಸಿತಪಕ್ಷದ ಸದಮಲಾನ್ವಿತಮಪ್ಪ ತಾರಗೆಪುನರ್ವಸೂ ವಿಧುವಾರ ಪೂರ್ವಾಹ್ನಮಾಸೂರಿ ನಾಮಮೆದಿ ಮಾಂಗಿರಿಯ ರಂಗಪದಮಂ 1 ಬಂಧುಜನÀಮಿತ್ರರ್ಗೆ ದುರ್ದಾಂತ ದುರ್ದಿನಂ ಸಂದಮಾಂಗಿರಿರಂಗಪದನಳಿನಮಂ ಸೇರ್ದ ಸಿಂಧುಪುತ್ರಂ ಬಳಗದಾಸೂರಿಯಾತ್ಮಮದು ಚಿರಶಾಂತಿಯಂಪಡೆಯಲೈ ಚೆಂದವಹ ಕಮಲಮದು ಕಮನೀಯ ಕಾಂತಿಯಿಂ ದಂದವಡೆದಿರ್ಪುದೇ ನಿಡುಗಾಲಮದು ಬಳಿಕ ಕುಂದದಿರದೇಂ ನಿಜದೆಯಾದರ್ಶಜೀವನಂ ಶ್ರೀರಕ್ಷೆಯಲ್ತೆ ನಮಗೆ 2 ವರಮಹಾಲೆಕ್ಕಿಗರ ಶಾಖೆಯೊಳ್ ಪರಿಣತಿಯ ಕರಣಿಕಂ ತಾನಾಗಿ ವಿಶ್ರಾಮ ಜೀವನದೆ ಸರಸಕಾವ್ಯಾದಿ ಪದರಚನೆಯಿಂ ಗಮಕಿಗಳ ತಣಿಸಿಯಾನಂದಮುಣಿಸಿ ಸಿರಿಲೋಲ ಸುವಿಲಾಸ ಗೋಕರ್ಣಮಹಿಮೆಯಂ ಭರತಮಾರುತಿಭಕ್ತಿಯಾಳ್ವಾರುವೈಭವಂ ಸರಿಸದಲಿ ಕಾವ್ಯಪಂಚಕ ರಚಿಸಿ ಪಂಚತ್ವವೈದಿದರ್ ಧನ್ಯರಲ್ತೆ 3 ಕಿವಿಚುರುಕು ನಿಡುಮೂಗು ದೃಷ್ಟಿಪಾಟವಹೊಳಪು ಸವಿನೆನಪಿನಂಗಳಂ ಬೇವುಬೆಲ್ಲದಪದರು ರವಿಯೆಡೆಗೆ ನಿಟ್ಟಯಿಸಿ ಧೀರ್ಘಾಯುವೆಂದೆನಿಸಿ, ಶರದಶಕಗಳ ಕಳೆದನು ಇವಗೆ ಮಣಿವುದೆ ಬೆಲ್ಲ ಹರಿಚಿಂತನೆಯಬಲ್ಲ ದಿವರಾತ್ರಿ ಸಂತೃಪ್ತಿ ಮಾಳ್ಪಕಾರ್ಯಂಗಳಲಿ ತವಕದಿಂ ಸುತ್ತುವರೆದಿರ್ಪರೈ ಹಿರಿತನದ ನಮ್ರತೆಗೆ ಬೆರಗಾಗುತ 4 ಸುತರತ್ನರೀರ್ವರಂ ಸುತೆಯರಂ ಸೊಸೆಯರಂ ಹಿತಮಪ್ಪಮೊಮ್ಮಂದಿರಂ ನೆಂಟರಿಷ್ಟರಂ ಮಿತವಚನದಿಂ ನಲಿಸಿ ಮನದಳಲಿಗೆಡೆಮಾಡಿ ವೈಕುಂಠಮಂ ಸೇರಿದೈ ಶತಪತ್ರಲೋಚನದ ಪರಿಚರ್ಯೆಯಂ ಗೈದು ಶತವರುಷಮಂ ತುಂಬುಜೀವನವ ತಾಳ್ದೆ ಸ ತ್ಪಥವಿಡಿದು ನಿನಗಾತ್ಮಶಾಂತಿಯುಂಟಾಗಲೈ ತವಕುಲಂ ವರ್ಧಿಸಿರಲೈ5
--------------
ಪರಿಶಿಷ್ಟಂ
ಅರಿ ಬೇಗನೇ ಪರಮಾತ್ಮ ನೀನೈ ಪರತತ್ವನಾ ತ್ವರಿತದಲಿ ತಿಳಿಯೊ ಪ ಮೂರು ತಾಣಗಳ ಮೀರಿ ಗೋಚರಿಪ ತೋರುತಿಹ ಈ ದೇಹಾದಿಗಳಿಗೆ ಬೇರೆಯಾಗಿಪುದೆ ಪರಮಪದವು ಧೀರ ನೀನರಿಯೊ ಅದೆ ನಾನು ಎಂದು 1 ಕೋಶಪಂಚಕವ ಲೇಸಾಗಿ ಕಳೆದು ವಾಸನೆಯ ಪಾಶವನೆ ಹರಿದೊಗೆದು ಕ್ಲೇಶ ಪಡುವದನು ತ್ಯಜಿಸಿ ಮುದದಿ ನಾಶರಹಿತಾದ ಪದವು ತಾನೆಂದು 2 ಜನನಮರಣಗಳಿಗಾಚೆಗಿರುವಂಥ ಮನವಾಣಿಗಳಿಗೆ ನಿಲುಕದಿರುವಂಥ ಘನಪದವು ಇದುವೆ ಪರಮಾತ್ಮನೈ ಅನುನಯದಿ ಪೇಳ್ವ ಗುರುಶಂಕರಾರ್ಯ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಕರುಣಿಸು ಕರುಣಿಸು ಕರುಣಿ ಶ್ರೀ ರಂಗಯ್ಯಾ ಹರಣ ಪೋದರು ನಿಮ್ಮ ಸ್ಮರಣೆ ಮರೆಯದಂತೆ ಪ ಮರವೆ ಮಾಯದಿ ಸಿಲುಕಿ ಮರುಳ ಮಾನವರಿಗೆ ಶಿರವ ಬಾಗದಂತೆ 1 ಘನದು:ಖಮಯವಾದ ಜನನಮರಣವೆಂಬ ಕುಣಿಯೊಳಗೆ ಸಿಕ್ಕಿ ಜನಿಸಿಬಾರದಂತೆ 2 ದುರಿತ ದಾರಿದ್ರ್ಯದಿಂದ ಪರಿಪಕ್ವನೆನಿಸೆನ್ನ ವರದ ಶ್ರೀರಾಮ ನಿಮ್ಮ ಚರಣ ಸೇವೆಯ ಘನತೆ 3
--------------
ರಾಮದಾಸರು
ಜಗದಾದಿ ನಮಿತ ಆಗಮಾತೀತ ಖಗವರಗಮಿತ ಭಾಗವತಪ್ರೀತ ಸುಚರಿತ ಪ ಭವ ಬಾಧ್ಹರಣ ಜನನಮರಣ ಭಯನಿವಾರಣ ದಯಸುಸದನ ಭುವಿಜಾರಮಣ ಭಕ್ತೋದ್ಧಾರಣ ವಿಮಲಜ್ಞಾನ ಕರುಣಿಸು 1 ಅಮಿತಲೀಲ ಕುಜನಕಾಲ ರಮೆಯಲೋಲ ಶರಣುಶೀಲ ಕೌಸ್ತುಭಮಾಲ ಸುಮನಪಾಲ ಎನ್ನ ಭ್ರಮಜಾಲ ಛೇದಿಸು 2 ಭೃತ್ಯಲಲಾಮ ಶಕ್ತರಕಾಮ ಪೂರ್ತಿನಿಸ್ಸೀಮ ಕರ್ತುಶ್ರೀಭೌಮ ನಿತ್ಯನಿರಾಮ ಜಗದೋದ್ದಾಮ ಮುಕ್ತಿಪದ ಸೋಮ ಶ್ರೀರಾಮ 3
--------------
ರಾಮದಾಸರು
ಜನನೀ ತ್ರಿಜಗತಿ ಜನಾರ್ದನೀ ಜನನೀ ಜಯತು ಶ್ರೀಪದ್ಮಾವತೀ ಪ. ಗುಣಗಣಾರ್ಣವೆ ವಿಶ್ವಪೂಜಿತ ಜನನಮರಣವಿದೂರೆ ಪದ್ಮಾಸನೆ ಘನಗಗನಭೂಪಾಲನಂದಿನಿ ಅ.ಪ. ಶ್ರೀನಿವಾಸನ ರಾಣಿ ಸರ್ವಾರ್ಥ ನಿ- ದಾನಾಂಬುಜಪಾಣಿ ಭಾನುಕೋಟಿಸಮಾನ ತೇಜೆ ಸ- ದಾನುರಾಗಪ್ರದಾನೆ ವಿಬುಧ- ಶ್ರೇಣಿನುತೆ ಮಹದಾದಿಮಾಯಾ- ಮಾನಿ ಮಾಧವಮನವಿಲಾಸಿನಿ 1 ಸುಂದರಿ ಸುಮನೋಹರಿ ಸುಜ್ಞಾನಾ- ನಂದೆ ಸಿಂಧುಕುವರಿ ಚಂದ್ರವದನೆ ಚರಾಚರಾತ್ಮಕಿ ವಂದನೀಯೆ ಪರೇಶಪರಮಾ- ನಂದರೂಪೆ ಸನತ್ಸುಜಾತ ಸ- ನಂದನಾದಿಮುನೀಂದ್ರವಂದಿತೆ 2 ಅಂಬೆ ಶ್ರೀಹರಿಪ್ರೀತೆ ಶಂಭುಸಂಭಾವಿತೆ ತ್ರಿಲೋಕಾ- ರಂಭಸೂತ್ರೆ ಪವಿತ್ರೆ ವಿಶ್ವಕು- ಟುಂಬೆ ಕಮಲಯನೇತ್ರೆ ಸಾಧ್ವೀಕ- ದಂಬಮಸ್ತಕಮಣಿಪ್ರಭಾಶಿನಿ 3 ಪದ್ಮ ಸರೋವಾಸಿನೀ ಪಾವನಹೃ ತ್ಪದ್ಮನಿತ್ಯಭಾಸಿನಿ ಪದ್ಮನವಕ್ರೀಡಾವಿಲಾಸಿನಿ ಮ- ಹನ್ಮನೋಧ್ಯಾನಾಧಿರೂಢೆ ಸು- ಪದ್ಮಹಸ್ತೆ ನಮಸ್ತೆ ಪಾವನೆ ಪದ್ಮನಾಭನರಮಣಿ ಕರುಣಿ 4 ವರಲಕ್ಷ್ಮೀವಾರಾಯಣಿ ಕಲ್ಯಾಣಿ ಶ್ರೀ- ಕರೆ ಕಾಳಾಹಿವೇಣಿ ಧರೆಯೊಳುತ್ತಮ ಕಾರ್ಕಳದಿ ಸು- ಸ್ಥಿರನಿವಸವ ಗೈದೆ ಕರುಣಾ- ಶರಧಿ ಭಕ್ತರ ಪ್ರಾರ್ಥನೆಯ ಸ್ವೀ- ಕರಿಸಿ ಪೊರೆವಿಷ್ಟಾರ್ಥದಾಯಿನಿ5
--------------
ತುಪಾಕಿ ವೆಂಕಟರಮಣಾಚಾರ್ಯ
ಜೀವಾ ತಿಳಿ ತಿಳಿ ನಿಜದರಿವಾ ಪ ಶಾಂತಮಯಾ ಆನಂದನಿಕಾಯ ಮನಸಿನ ಮೂಲದಾ ಘನಪದವಾ ಅ.ಪ. ಕಲ್ಪನಾಜಾಲದಾ ನಾಶದ ಸ್ಥಿತಿಯೇ ಪರಮಸೌಖ್ಯದಾ ನಿಧಿಯನು ನೀನೇ ಮನದಲಿ ಯೋಚಿಸಿ ತಿಳಿನಿನ್ನಾ 1 ಜನನಮರಣದಾ ಸಂಕಲೆ ಹರಿಯೋ ಘನವಿವೇಕದಾ ಬಲದಲಿ ತಿಳಿಯೋ ಸನ್ನುತ ಶಂಕರಗುರುಬೋಧಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಜೈ ಜೈ ವೆಂಕಟರಾಯ ಸಲಹು ಗಡ ಪ ಶುಭ ಕಾಯ ಐಹಿಕ ಮಹಮಾಯವ ಬಿಡಿಸಯ್ಯಅ.ಪ ಪಂಕಜಾಕ್ಷ ಹರಿ ಸಂಕರುಷಣ ಭವ ಸಂಕಟ ಪರಿಹಾರ ಶುಭಕರ ಶಂಖಶಕ್ರಧರ ಮಂಕುದನುಜಹರ ಕಿಂಕರಘದೂರ ಶಂಖಸುರನ ಬಲು ಬಿಂಕಮುರಿದ ಬಲದಂಕ ಅದಟವೀರ ಶೂರ ಅಂಕುರಿಸೆನ್ನೊಳಾತಂಕತಾರದೆ ಪೊರೆ ಲಂಕಾ ವಿಜಯಕಾರ 1 ದಾತ ಮೂರುಜಗನಾಥ ಪರಮ ಅ ದ್ಭೂತ ಮಹಿಮೆಗಾರ ಚದುರ ಪ್ರೀತ ಭಕುತ ಭವಭೀತರಹಿತ ಮಾಯಾ ಪೂತನಿ ಸಂಹಾರ ನೀತಿಕೋವಿದ ವಿಧಿತಾತ ಅಸಮ ವಿ ಖ್ಯಾತ ಕರುಣನಿಕರ ಸುಂದರ ಘಾತಿಸಿ ಕಂಸನ ಮಾತಪಿತರ ಕಾಯ್ದ ಪಾತಕ ನಿವಾರ 2 ಬಾಲನಂತರಿಯದೆ ಆಲಯಗಳ ಪೊಕ್ಕು ಪಾಲು ಮೊಸರು ಕದಿದ ಸವಿದ ಬಾಲೆರುಡುವ ದುಕೂಲ ಕದಿದು ತಾ ಮೇಲು ಮರವನೇರ್ದ ಕಾಲಿಂದಿ ಧುಮಕಿದ ಕಾಳಿಯಮೆಟ್ಟಿದ ಕಾಳರಕ್ಕಸರೊದೆದ ಸದೆದ ಲೀಲಾ ಜಾಲ ನಂದ ಬಾಲನಾಗಿ ಬಲು ಬಾಲಲೀಲೆಗೈದ 3 ಪರಮ ಪರಾತ್ಪರ ಪರಮಪುರುಷ ಸಿರಿ ಪರಮ ಪಂಚಪ್ರಾಣ ದುರಿತ ಹರಣಜನನಮರಣ್ಹರಸುರವಿನಮಿತ ಧರಣಿಗಧಿಕ ತ್ರಾಣ ಕರಿಧ್ರುವರಿರ್ವರನು ಭರದಿ ನೀಡಿ ನಿಂತು ಪೊರೆದ ಪಾಂಚಾಲೀಮಾನ ಜಾಣ ಶರಣಜನರ ಮೈನೆರಳು ನಿಗಮಾತೀತ ನಿರಂಜನ 4 ಸೋಮವದನ ಸತ್ಯಭಾಮಾರಮಣ ಸುಖ ಧಾಮ ಸುಜನಹೃದಯನಿಲಯ ಕಾಮಜನಕ ಪುಣ್ಯನಾಮ ರಕ್ಕಸಕುಲ ಭೀಮ ಪಾಲಿಸಭಯ ಶಾಮವರ್ಣ ಮಮಸ್ವಾಮಿ ಭಜಿಪೆ ಶ್ರೀ ರಾಮಪಿಡಿಯೋಕಯ್ಯ ಸದಯ ಕಾಮಿತ ವರ ಸುಪ್ರೇಮದಿ ಇತ್ತೆನ್ನ ಪ್ರೇಮದುದ್ಧರಿಸಯ್ಯ 5
--------------
ರಾಮದಾಸರು
ನರನಾಗ್ಹುಟ್ಟಿದ್ದೀ ಮರುಳೆ ಅರಿವು ಎಲ್ಲಿಟ್ಟಿದ್ದೀ ಪ ವರವೇದಸ್ಮøತಿಶಾಸ್ತ್ರರಿದುನೋಡದೆ ವರವರ ಒದರುವಿ ಮರೆವಿನೊಳಗೆ ಬಿದ್ದು ಅ.ಪ ಮನಗಳು ಸ್ಥಿರಮಾಡಿ ಬರಿದ್ವಾಕ್ಕೆಣೆಸುವಿ ಸಟ್ಟೆಮಾಡಿ ಮನಕೆ ಬಂದಂತಾಡಿ ನರಕದ ಕುಣಿಗೆ ಬೀಳುವಿ ಖೋಡಿ ಜನನಮರಣವೆಂಬ ಕುಣಿಕೆಯೊಳಗೆ ಸಿಕ್ಕು ಘನತರ ನೋಯ್ವುವ ನೆನೆಸಿಕೊಳ್ಳದೆ 1 ಕುಜನ ಸಂಗೀಡ್ಯಾಡೊ ಸುಮನದಿ ಸುಜನರೊಡಗೂಡೊ ನಿಜಮತಿಯೊಳು ಕೂಡೊ ನಿಶ್ಚಲದಿ ನಿಜವನ್ನು ಹುಡಿಕ್ಯಾಡೊ ಗಜಿಬಿಜಿಯೊಳು ಬಿದ್ದು ಗಿಜಿಗಿಜಿಯಾಗದೆ ತ್ಯಜಿಸೆಲೋ ಸಂಶಯ ನಿಜವು ತಿಳಿಯುತಿದೆ 2 ಪಕ್ಷಪಾತವನ್ನು ನೀಗಿ ಜ್ಞಾನಚಕ್ಷು ತೆರೆದು ಇನ್ನು ಸಾಕ್ಷಿಯಾಗಿ ನೀನು ಮಹದಪರೋಕ್ಷವನ್ನು ಕಾಣು ಶಿಕ್ಷೆ ಪಡೆಯದೆ ಮಹಮೋಕ್ಷ ಪಡೆಯೊ ಜಗ ದ್ರಕ್ಷ ಶ್ರೀರಾಮನ ಸೂಕ್ಷ್ಮದಿ ತಿಳಿದು 3
--------------
ರಾಮದಾಸರು
ನರಿಯುವುದಸದಳವು ಪ ಪರಿಪರಿವಿಧದೊಳು| ರೂಪವ ಧರಿಸುತ್ತ || ಧರಣಿ ಭಾರವನ್ನೆಲ್ಲ| ಪರಿಹಾರ ಮಾಡುವ ಅ.ಪ ಕೂರ್ಮರೂಪವ ತಳೆದೆ || ವರಹನು ನೀನಾದೆ | ನರಹರಿಯಾದೆ ನೀ|| ಮೂರಡಿ ಭೂಮಿಯ | ವಟುವಾಗಿ ಬೇಡಿದೆ 1 ಕಾಕುಸ್ಥ ರಾಮನಾದೆ || ಕಲ್ಕಿರೂಪದಿ ಬಂದು | ಧರೆಂiÀiನುದ್ಧರಿಸಿದೆ 2 ಜಗದಾದಿ ದೇವ ನೀನು | ಏನನ್ನುವೆ | ಜಗದೇಕನಾಯಕನು || ಜಗವನÀುದ್ಧರಿಸುವ | ಜಗನ್ನಿಯಾಮಕ ನೀನು || ಅಗಣಿತ ಮಹಿಮನು 3 ಪ್ರಣವ ಸ್ವರೂಪ ನೀನು || ಅಣುರೇಣು ತೃಣಕಾಷ್ಠ | ಭರಿತನಾಗಿಹ ನೀನು || ಜನನಮರಣವಿರ | ಹಿತನಾದ ದೇವನು 4
--------------
ವೆಂಕಟ್‍ರಾವ್
ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ ಹಲವು ಜೀವರು ನಿನ್ನ ಹೃದಯದೊಳಿರಲು ಕೆಲವುದಿನದಿ ಯೋಗನಿದ್ರೆಯೊಳಿರೆ ಒಲವಿಂದ ಸೃಜಿಸುವೆನೆಂದು ನೇಮಿಸುವೆ1 ಪ್ರಕೃತಿಯ ಮೂಲಕಾರಣವನು ಮಾಡಿ ಸಕಲತತ್ವಗಳ ಸಮ್ಮೋಹದಿ ಕೂಡಿ ವಿಕಳಿಸದಂತೆ ತನ್ಮಾತ್ರೆಯ ಕೂಡಿ ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2 ಮಹತತ್ವದಿಂದಹಂಕಾರವ ಪುಟ್ಟಿಸಿ ಅಹಂಕಾರದಿಂದ ವೈಕಾರಿಕ ಮೊದಲಾದ ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ ಮಹಮಹಿಮೆಯ ಮೆರೆದೆ ಜಗವರಿಯೆ 3 ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ ಸರ್ಪಶಯನನಾಗಿ ನಾಭಿಕಮಲದಿಂದ ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4 ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ ಒಂದು ಮೂರುತಿಯಿಂದ ಸಂಹರನೆ ಮಾಡಿ ಒಂದೊಂದು ಮಹಿಮೆಯು ಅನಂತಾದ್ಭುತವು 5 ಒಂದು ರೋಮಕೂಪದಲಿ ಬ್ರಹ್ಮಾಂಡ ಇಂದಿರೆ ಅನಂತಕೋಟಿ ನಾಮಗಳಲ್ಲಿ ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ- ಸುರರು 6 ಜನನಮರಣ ಭಯದಿಂದ ದೇವತೆಗಳು ಅನುದಿನ ನಿನ್ನ ಪೂಜೆಯ [ಮಾಡೇವೆನಲು] ಪುನರಾವೃತ್ತಿ ರಹಿತವಾದ ಫಲವೆತ್ತಿ ಮನುಜನಂತೆ ತೋರುವುದೇನುಚಿತವೊ 7 ಒಮ್ಮೆಕಾಣಲು ಸಿರಿರಮ್ಮೆ ಚೆಲುವನ ಒಮ್ಮನದಿಂದ ನೋಡೇನೆಂಬ ಭಯದಿಂದ ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8 ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ ಶಶಿನಾಳದೊಳಗಿದ್ದ ದಾರಿಯ ಕಾಣದೆ ದಶಶತವರುಷ ನಿಮ್ಮನು ಧ್ಯಾನಿಸುತಿರೆ ವಸುಧೀಶ ನಿಮ್ಮ ನಿಜವ ತೋರಿದಿರಿ 9 ಆಲೋಚನೆಯಿಂದ ಸರ್ವ ವಿಷಯದಿಂದ ಲೀಲೆಯಿಂದ ಪಾಡಿ ಕಮಲಸಂಭವನ ವೋಳು ಮಾಡದಂತೆ ಒಳಿತಾಗಿ ತಲೆವಾಗೆ ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10 ನಂದ ಯಶೋದೆ ವಸುದೇವ ದೇವಕಿಯರು ಸುಕೃತ ಫಲವಾಯಿತೆಂದು ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11 ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ- ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು ಮಾತೆಯ ಮೊಲೆವಾಲನುಂಡ ಬೇಗದಲಿ 12 ವಾರುಣಿ ಶ- ಚಿ ರತಿ ಮೊದಲಾದ ಸತಿಯರು ನಾರಾಯಣ ಪರದೇವತೆಯೆಂದು ನಾರಿಯರೆಲ್ಲ ಪಾಡಿದರತಿ ಹರುಷದಲಿ 13 ನಾಮಕರಣ ದಿವಸ ಬ್ರಹ್ಮಾದಿ ಸುರರು ಈ ಮಹಾಶಿಶುವ ನೋಡೇವೆಂಬ ಭರದಿಂದ ಆ ಮಹಾಸ್ತೋಮವೆಲ್ಲ ಕೂಡಿಬರ- ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14 ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ ಸಾಸಿರಕೋಟ್ಯನಂತ ನಾಮಗಳುಳ್ಳ ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು ಸೂಸಿದರಕ್ಷತೆ ಸುಮೂಹೂರ್ತದಲಿ 15 ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ ಓರಂತೆ ನಾಲ್ಕುವೇದಗಳ ನೇಣನೆ ಮಾಡಿ ಧೀರಶೇಷನು ಬಂದು ಹಾಸಿಕೆ ಹಾಕಲು ನಾರಿಯರೊಡನೆ ಮಲಗಿದೆಯೊ ಹಯವದನ 16
--------------
ವಾದಿರಾಜ
ಬಿಡಿಸೊ ಕಡು ದಯಾನಿಧಿಯೆ ಕಡುಕಷ್ಟದುರುಲನ್ನು ಗಡನೆ ಎನ್ನಯ್ಯ ಪ ಕಡಿವಲ್ಲದೆನಗಿನ್ನು ಕಡುದು:ಖ ಜಡಮಯ ತೊಡರು ಸಂಸಾರಭಾದೆ ತಡಿಲಾರೆನಭವ 1 ತನುಬಾಧೆ ರಿಣಬಾಧೆ ವನಿತೆ ಮಕ್ಕಳ ಬಾಧೆ ಜನನಮರಣದ ಹೇಯ ಘನಬಾಧೆಯಕಟ 2 ಸೀಮೆಯಿಲ್ಲದೆ ಕಾಡ್ವ ಈ ಮಹಾಭವ ಕಳೆದು ಕ್ಷೇಮದಿಂ ಪೊರೆಯೈ ಶ್ರೀರಾಮ ಪ್ರಭು ತಂದೆ 3
--------------
ರಾಮದಾಸರು
ಬೇಕೆಂದರೆ ಬಾರದು ಒಲ್ಲೆನೆಂದರೆ ಹೋಗದುಏಕಂಜುವಿ, ಶ್ರೀಹರಿ ಕರುಣಿಸದೆ ಒಂದೂ ಆಗದು ಪ ಸುಖವಾದಡೆ ಕಾಣುತ ಮುಖ ಕಮಲವುವಿಕಸಿತವಾಹುದು ಶ್ರೀಹರಿ ಕರುಣದಿದುಃಖವಾದಡೆ ದುಸ್ಥಿತಿಯಲಿರಲು ಅಂ-ಬಕದಲಿ ಜಲ ಪೋಗುವುದೇಕೊ ?ಸುಖದುಃಖ ದಿವ ರಾತ್ರಿಯ ತೆರವದರಿಂದಲಿ ನರರಂ-ಗಕೆ ಬಾಹುದು, ರಕ್ಷಣೆ ಮಾಡುವ ಕಾಶಿಪೀತಾಂಬರಮಕರ ಕುಂಡಲಾಭರಣನ ನೆನೆ ಮನವೆ1 ಸಿರಿ ಬಂದರೆ ಸಿರಿಗಾನಂದವ ಮಾಡುವಿರೇತಕೆ ಮನ ನಿರ್ಮಳ ಧ್ವನಿಯಲಿದರಿದ್ರವು ಬಂದರೆ ಧಾತುಗೆಟ್ಟು ದೇಹಾ-ತುರ ಹೊಂದುವಿರೇತಕೆ ದುಗುಡದಿಸಿರಿ ದಾರಿದ್ರ್ಯವು ಸುರತತಿಗಡರುವತೆರನೆಂದರಿದದರಿಂದಲಿ ಮಾನ-ವರಿಗೆ ಬಾಹುದು, ಪರಿಹರಿಸುವ ಪರಮಾತ್ಮನೆನಿಪಮುರವೈರಿಯ ಬಿಡದಿರು ಎಲೆ ಮನವೆ 2ಬಿ ಜನನವಾದರೆ ಹಾಡಿ ಹರಸಲೇತಕೆಅನುಗತಿಯನು ಹೇಳಿದರಳಲೇಕೆಜನನಮರಣವದೆಲ್ಲರಿಗೆ ಗತಿಬಾಹುದು ಏಕೆಜನನ ಮರಣವನೊಂದು ಹೊರಗೆ ಮಾಡಿ ಪರಜನದೊಳಗಿರಿಸುವ ಸುಜನೇಶ ಮುನೀಶನೆಂ-ದೆನಿಸುವ ಕಾಗಿನೆಲೆಯಾದಿಕೇಶವರಾಯನಅನುಶ್ರುತಿಯನು ಬಿಡದಿರು ಎಲೆ ಮನವೆ 3
--------------
ಕನಕದಾಸ
ಬೋಧದ ಘನಮಳೆಯುಸುರಿದು ಮುಕುತಿಬೆಳೆಯು ಬಂದುದು ಪ ಮಾಯೆಯ ಬಲು ಬಿಸಿಲುತಾಪ ಕಾಯದೊಳಗೆ ಹೆಚ್ಚುತಿರಲು ಹೇಯವೆನಿಸಿ ಜನನಮರಣ ಮುಮುಕ್ಷುತ್ವ ಮೋಡಗವಿದು 1 ಸುವಿಚಾರದ ಮಿಂಚು ಹೊಳೆದು ಶ್ರುತಿಶಿರಗಳ ಗುಡುಗು ಹೊಡೆದು ಶ್ರವಣದ ಸುಳಿಗಾಳಿ ಬೀಸಿ ಭವತಾಪವ ಹರಿಸುತಿರಲು 2 ವೈರಾಗ್ಯದ ರಂಟೆ ಹೊಡೆದು ಶಮೆದಮೆಗಳ ಹರತೆಯಾಗಿ ಪರಮಾರ್ಥದ ಬೀಜ ಬಿದ್ದ ನರಜನ್ಮದ ಹೊಲದ ಮೇಲೆ 3 ದೃಷ್ಟಿಯೊಳಗಿನಾನಂದ ಸೃಷ್ಟಿಯಾಗಿ ತೋರಿ ಚಂದ ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ರಾಮಾಯನ್ನಮ:ರಾಮ ಸದಾ ಓಂ ರಾಮಾಯನ್ನಮ:ರಾಮ ಪ ವೇದಾದಿ ರಾಮ ವೇದಾಂತರಾಮ ವೇದಾಂತ ವೇದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 1 ವೇದಮಯ ರಾಮ ವೇದ ನಿರ್ಮಯ ರಾಮ ವೇದ ವೇದಾತೀತಕಾದಿ ರಾಮ ಮಹ ದಾದಿಗಾದಿರಾಮ ( ಸದಾ) ಓಂ ಮಹ ದಾದಿಗಾದಿ ರಾಮ 2 ನಾದಯುತಾದಿ ರಾಮ ನಾದರಹಿತಾದಿ ರಾಮ ನಾದಾತೀತಾದ್ಯನಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 3 ಆದಿಗಾದಿರಾಮ ಅ ನಾದಿಗಾದಿರಾಮ ಆದಿ ಅನಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 4 ಸತ್ಪಥದಾದಿರಾಮ ¸ À ಚ್ಚಿತ್ತದಾದಿರಾಮ ಉತ್ಪತ್ತಿ ಸ್ಥಿತಿಲಯಕಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 5 ಸ್ವರ್ಗ ಭೋಗಾದಿ ರಾಮ ಧೀರ್ಘಕ್ಕೆ ದೀರ್ಘಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 6 ಜಪತಪದಾದಿ ರಾಮ ಗುಪಿತ ಗುಪ್ತಾದಿ ರಾಮ ಅಪರೋಕ್ಷ ಪರೋಕ್ಷಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 7 ಮಂತ್ರಮಯಾದಿ ರಾಮ ಮಂತ್ರ ತಂತ್ರಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 8 ಮಾಯಮಯಾದಿ ರಾಮ ಮಾಯ ನಿರ್ಮಯ ರಾಮ ಮಾಯ ಮಾಯಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 9 ಕಾಲಕಾಲದಿ ರಾಮ ಕಾಲಮೂಲಾದಿ ರಾಮ ಕಾಲಕಾಲನಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 10 ದಶರಥರಾಮ ದಶರಥಗಾದಿ ರಾಮ ದಶವಿಧೌತಾರದಾದಿಗಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 11 ದಿವ್ಯಮಹಿಮಾದಿ ರಾಮ ಭವ್ಯಚರಿತಾದಿ ರಾಮ ದಿವ್ಯ ದೇವರ ದೇವರಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 12 ಬ್ರಹ್ಮನೆಯಾದಿ ರಾಮ ನಿರ್ಮಲಾತ್ಮಾದಿ ರಾಮ ಬ್ರಹ್ಮ ಬ್ರಹ್ಮಾದಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 13 ಸತ್ಯ ಸತ್ಯಾದಿ ರಾಮ ನಿತ್ಯ ನಿತ್ಯಾದಿ ರಾಮ ತತ್ವ ಪಂಚದಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 14 ಭುವಿತ್ರಯದಾದಿ ರಾಮ ಭವಭವದಾದಿ ರಾಮ ದಿವನಿಶಿಗಳಿಗಾದಿ ಆದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 15 ಬೋಧಾದಿಮಯ ರಾಮ ಬೋಧಾದಿಗಾದಿ ರಾಮ ಸ ಸಾಧನ ಸಿದ್ಧಿಯಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 16 ನಿರ್ನಾಮ ರಾಮ ನಿರ್ಗುಣ ನಿರಂಜನಾದಿಗಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 17 ಭಕ್ತಭಿರಾಮ ಮುಕ್ತೀಶ ರಾಮ ನಿತ್ಯ ನಿರ್ಮಲ ಜಗದಾದಿರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 18 ಚಿನುಮಯ ರಾಮ ಚಿದ್ರೂಪ ರಾಮ ಜನನಮರಣ ಹರಣಾದಿ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 19 ರಮಾಧವ ರಾಮ ಕ್ಷಮೆಯುತ ರಾಮ ಸುಮನಸ ಭಕ್ತಾಧೀನ ರಾಮ ಮಹ ದಾದಿಗಾದಿ ರಾಮ ಸದಾ ಓಂ ಮಹ ದಾದಿಗಾದಿ ರಾಮ 20 ಜಯ ಜಯ ರಾಮ ಜಯ ಶ್ರೀರಾಮ ಜಯವೆಂದು ನೂರೆಂಟು ಪೊಗಳಲೀ ನಾಮ ದಯದೀಯ್ವಮುಕ್ತಿ ರಾಮ ಸದಾ ಓಂ ಮಹ ದಾದಿಗಾದಿ ರಾಮ21
--------------
ರಾಮದಾಸರು
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು