ಮನವೇ ಚಿಂತಿಸು ಹರಿ ಮುರಾರಿಯ ಪ
ಮಾಯಾ ಮನುಜಾಕಾರವ ತಾಳ್ದ
ಸನಕಾದಿ ಸನ್ಮುನಿವಿನುತಪದ ವನಜಾತಯುಗಳನನು ಅ.ಪ
ಪುರುಹೂತರಿಗೆ ತಾತನ ರತಿದೇವಿ
ಸರಸಿಜಾಸನನಿಗೆ ಕರುಣಿಸಿವೇದವÀ
ತರಳಗಭಯವನಿತ್ತು
ತರಿದು ನೃಪರನು ದುರುಳರಾವಣ
ಹರಣ ನೀಲಾಂಬರ ಯದುವರ ತುರಗವಾಹನ 1
ಸುಗುಣ ಗಣಾರ್ಣವನ ಸಜ್ಜನರಿಗೆ
ಸುಗತಿಯಪಾಲಿಪನ ಸುರಪಾಲನ
ನಿಗಮಚೋರನಕೊಂದು
ಮೃಗನರವ ರೂಪವ ತಾಳಿ
ಜಗವನಳೆದನ ಭೃಗುಜ ಶಾಖಾ
ಮೃಗವ ವಧಿಸಿ ಹಲನೇಗಿಲನು ಪಿಡಿ
ನಿಗಮನುತ ಕಲಿಯುಗದ ವೈರಿಯ 2
ಒಲಿದು ಪೂಜೆಯ ಕೊಂಬನ ಕುಂಭಜಶಾಪ
ಕಲುಷವ ಕಳೆದವನ ವ್ಯಾಘ್ರಾಚಲದಲಿ ನಿಂತು ಭಕ್ತರ
ಸಲಹುವ ಕಾರುಣ್ಯನಿಲಯ ಸಜ್ಜನಮನೋ
ನಿಲಯ ಶ್ರೀನಿವಾಸನ
ಜಲಜನೇತ್ರನ ಜಲಜಗಾತ್ರನ
ವಿಲಸಿತಾಂಬುಜ ಮಾಲ ಭಕ್ತರಿ
ಗೊಲಿವ ಶ್ರೀ ವರದಾರ್ಯವಿಠಲನ 3