ಒಟ್ಟು 46 ಕಡೆಗಳಲ್ಲಿ , 21 ದಾಸರು , 46 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಕಿತ-ಗಿರಿಧರಸುತ ಗುರುಮಹೀಪತಿರಾಯಾ | ಕೊಡು ಎನಗೆ ಸುಮತಿಯಾ ಪ ಭಕ್ತರ ಸುರಧೇನು | ಐಗಳಿ ವೃತ್ತಿಯನು | ಮನಕೆ ತಾರದೆ ಘನ ವ್ಯಾಪರವನು | ಮಾಡುತ ಭಾಗ್ಯವನು | ಮಾಡಲು ತಿಮ್ಮವ್ವನು 1 ಭಾಸ್ಕರ ಮುನಿ ಬಂದು | ಧಾರುಣಿ ಜನರುದ್ಧರಿಸಲಲ್ಲೆ ನಿಂದು | ಇರಲು ದಯಾಸಿಂಧು | ನಾರಿಶಿರೋಮಣಿ ದರುಶನಕ್ಕೆ ತಂದು | ನೀನೆ ಗತಿಯೆಂದು | ಆರು ತಿಂಗಳಾರಾಧಿಸೆ ಸಲಹೆಂದು | ದೀನಜನ ಬಂಧು | 2 ಸತಿಪತಿಗಳ ಚಿತ್ತಾ | ಆಗುದು ಎನೆ ವನಿತಾ | ನಮಿಸಲು ಗುರುತಾತ | ಆತರಿದನು ತವ ಮುಖವನು ಈಕ್ಷಿಸುತಾ ಪಕ್ವಾಫಲವೆನುತಾ 3 ಮಂದಹಾಸದಿಂ ನುಡಿದನು ನಿಜಗುಟ್ಟು | ವ್ಯಾಪಾರವ ಬಿಟ್ಟು | ಚಂದದಿ ಯಾಚಕ ವೃತ್ತಿಲಿ ಮನನಟ್ಟು | ಎನೆ ಸಮ್ಮತ ಬಟ್ಟು | ಮಂದಿ ಕುದುರಿಗೆಲ್ಲರಿಗಪ್ಪಣೆ ಕೊಟ್ಟು | ನಿಲ್ಲದ್ಹರುಷ ತೊಟ್ಟು | ಉಪದೇಶವ ಕೊಟ್ಟು 4 ಯೋಗಧಾರಣದ ಕೀಲವ ದೋರಿಸಲು | ದೂದಿಯವೋಲ್ | ನಾನಾ ಬಯಕೆಗಳು | ತ್ಯಾಗವ ಮಾಡುವ ಅನ್ನ ಉದಕಗಳು | ಕ್ಲಪ್ತಕೆ ನಿಲ್ಲಿಸಲು | ಮುಗಿದವು ಹಸ್ತಗಳು 5 ಭ್ರೂಮಧ್ಯದ್ವಿದಳದಾ | ದ್ವಾರವ ತ್ಯಜಿಸುತ್ತಾ | ತ್ರಿಕುಟ ಶ್ರೀಹಟ ಗೋಲ್ಹಟ ಗೋಪುರದಾ | ನೋಡುತ ಸಂಭ್ರಮದಾ | ಪಂಕಜದೊಳಗಿದ್ದ 6 ನಿತ್ಯ ಪ್ರಭೆಯು ಅನುದಿನಾ | ಕಾಣುತ ಸಂಪೂರ್ಣಾ | ತಿಳಕೊಂಡ್ಯೋ ಪ್ರವೀಣಾ | ದಿಂದಲೇ ಭಯಹರಣಾ 7 ಅಂತಹದು ಬೇಗ | ನೋಡೆಂದನು ಅನಘಾ | ನಿನ್ನಲ್ಲೇ ಈಗಾ | ದುಷ್ಕøತ ತರುನಾಗಾ 8 ಆಗುದು ನಿರ್ಧಾರಾ | ನಿನ್ನುದರದಿ ಕುವರಾ | ಸಂಶಯ ಬಿಡು ಅದರಾ | ಭಕ್ತರ ಸಹಕಾರಾ 9 ಮುನಿವರನಾಜ್ಞೆದಿ ಸ್ವಸ್ಥಾನಕೆ ಬರುತಾ | ಕೆಲ ದಿವಸಲ್ಲಿರುತಾ | ಸತ್ಪುರುಷರೆನಿಸುತಾ | ಇರಲು ದಯವಂತಾ | ವೇಧಿಯು ಬಂತೆನುತಾ 10 ಅಂತರಂಗದಲಿ ತಿಳಿಯತಲಾಗ್ರಾಮ | ತ್ಯಜಿಸಿದೆ ನಿಸ್ಸೀಮಾ | ಧಾಮಾ ಮಾಡಿದೆ ನಿಷ್ಕಾಮಾ | ಬಟ್ಟರು ಬಹುಪ್ರೇಮಾ | ಗುರುಸಾರ್ವಭೌಮಾ 11 ಅಲ್ಲಿ ಮೂರು ಸಂವತ್ಸರ ಇರಲಾಗಿ | ಶರಣ್ಹಾಳಿಯು ಬಾಗಿ | ಇಲ್ಲಿ ನೀವು ದಯಮಾಡುವದೊಳಿತಾಗಿ | ಸರಿ ಬಾರದಾಗಿ | ಬಂದ್ಯೋ ಮಹಾತ್ಯಾಗಿ | ಬರಲು ವರಯೋಗಿ12 ಕರೆದೊಯ್ದರು ಸ್ತುತಿಸಿ | ಕರಣಿಕ ತನ್ನಯ ಸ್ಥಳದಲಿ ಗೃಹ ರಚಿಸಿ | ಕೊಡಲಂಗೀಕರಿಸಿ | ಹರುಷದಿ ವರಭಾಸ್ಕರ ಮುನಿಕರ ಸರಿಸಿ | ರುಹಜಾತನೆನಿಸಿ | ಇರುತಿರೆ ತೋರಿತು ಸಂತತಿ ಉದ್ಭವಿಸಿ | ಗುರುವಾಕ್ಯಫಲಿಸಿ 13 ಆರಿಂದಾಗದು ನೈರಾಶ್ಯಾಚಾರಾ | ನಡೆಸಿದೆ ಗಂಭೀರಾ | ಧಾರುಣಿ ಜನರಿಂದಧಿಕೃತ ಸಂಸಾರ | ಜಲ ಪದ್ಮಪ್ರಕಾರಾ | ಅನುದಿನ ವೈರಾಗ್ಯದಾಗರಾ | ಸಂಪತ್ತು ಅಪಾರಾ | ತಿಳಿದ್ಯೋ ಸುಕುಮಾರಾ 14 ಕೊಟ್ಟರ್ಹಿಡಿಯಲಿಲ್ಲ ಓರ್ವರ ಧನವು | ಪೂರ್ವದ ಸಂಗ್ರಹವು | ಸತಿಸುತ ಪರಿವಾರವು | ಭಕ್ತರ ಸಮುದಾಯವು | ಮೃಷ್ಟಾನ್ನ ಭೋಜನವು 15 ತುಕ್ಕವ್ವಳು ನಿಮ್ಮತ್ತಿಗೆ ಭಾವಿಕಳು | ಪ್ರೀತಿಯ ಶೇವಕಳು | ಫಕ್ಕನೆ ವಿನಯದಿ ಮೃದು ಮಾತಾಡಿದಳು | ಸತ್ಪುರುಷರಿಳೆಯೊಳು | ಅಕ್ಕರದಲಿ ದೋರುವರು ಶಿದ್ಧಿಗಳು ನೀವೇನಿಲ್ಲೆನಲು | ಆದೀತೆಂದೆನಲು16 ಸೊಸಿಯೊಳು | ತುಕ್ಕವ್ವ ತಿಳಿಸಲು | ಕೈಯ್ಯನೆಳೆಯಲು | ನೋಡುತ ಬೆರಗಾದಳು 17 ಲೋಕವನುದ್ಧರಿಸಲು ನೀನವತರಿಸಿ | ಜಡದೇಹವ ಧರಿಸಿ | ಕೊಟ್ಯೋ ಗುಣರಾಶಿ | ಕೊಂಡ್ಯೋ ಸುಖವಾಸಿ | ಬಹು ನರಕದ ವಾಸಿ 18 ಜಗದೊಳಗಿಹ ಶಿದ್ಧರ ಮುಕುಟದ ಮಣಿಯೇ | ಸಾಧಕರೊಳಗೆಣೆಯೆ | ದುರಿತಾಂಧ ದ್ಯುಮಣಿಯೆ | ಕುಹಕರಿಗೇನ್ಹೊಣೆಯೆ | ವರಸತ್ವದ ಗುಣಿಯೆ 19 ಕಾಲ ತಪ್ಪಿಸುವದೇನೈ ನಿಮಗರಿದೆ | ಮನದೊಳು ನೀನರಿದೆ | ತಾಳಿದ ದೇಹವ ಸಾಕೆನುತಲಿ ಜರಿದೆ | ಚಿದ್ರೂಪವ ಬೆರೆದೆ | ಬಹು ಭಕ್ತರ ಪೊರೆದೆ | ತಡಮಾಡಗೊಡದೆ20
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಇ) ಆತ್ಮನೀವೇದನೆಯ ಕೃತಿಗಳು ಆಕಾರವಿಲ್ಲದ ಅನಾದಿಯೊಳು ಪಂತ ಸಾಕಾರನಾಗಿಹನು ಶ್ರೀ ಲಕ್ಷ್ಮೀಕಾಂತ ಪ ಕುಸುಮಶರನೆ ಪೂವು ಅದರೊಳಗಿಲ್ಲ ಎಸೆಯೆ ಕೋದಂಡ ಕಬ್ಬೈಸೆ ಧನುವಲ್ಲ ಹೊಸ ಬಗೆಯಾಗಿ ನಾಂಟದ ಸರಳಲ್ಲ ವಿಷಮ ವಿಗ್ರಹಕಿನ್ನು ಕೇಳ್ ಪ್ರಾಣವಿಲ್ಲ 1 ಮುಂದುವರೆವರೆ ಮೋಹರದೊಳು ತನ್ನ ಚಂದದಿಂದೊಪ್ಪುವಂಗವ ಕಾಣೆ ಮುನ್ನ ಕುಂದದಕೇದಗೆಯೆಸಳಿವೆ ನೋಡು ತನ್ನ ಸಂಧಿಸಿತೇನೊ ಚಿದ್ರೂಪ ಗುಣರನ್ನ 2 ಸರಿಯಲ್ಲದವರೊಳು ಸಮರವ ಮಾಡಿ ಧುರದೊಳು ಮಿಗೆ ನೊಂದೆನಯ್ಯ ಮೈ ಬಾಡಿ ಪರಿಹರಿಸೆಲವೊ ಸುರಸತಿಯರ ಮಧ್ಯೆಕೂಡಿ ಸುರಪುರಪತಿ ದುರಿತವಿರದೊಂದುಗೂಡಿ3
--------------
ಕವಿ ಲಕ್ಷ್ಮೀಶ
4. ವೆಂಕಟವರದಾರ್ಯರ ಹಿಂದಿಮಿಶ್ರಿತ ಕೃತಿ ಶ್ರೀನಿವಾಸ ಪದ ಧ್ಯಾನಕರೋರೆ ಸಾನುರಾಗಯುತ ಮಾನಸ ಮೇರೆ ಪ ಮದಪರಿಪೂರಿತ ಹೃದಯ ಸುನೋರೆ ಸದಯ ಹೃದಯ ಪರಿಪದಮಿಳನಾರೆ 1 ಕಾಮಕ್ರೋಧ ಉಪರಾಮ ಕರೋರೆ ರಾಮಾನಾಮ ಜಪಕಾಮು ಕರೋರೆ 2 ದೇಹಗೇಹಧನ ಮೋಹನಲೇರೆ ಶ್ರೀಹರಿಚರಣ ಕಾಂಹಿ ಚಲೇರೆ 3 ಪುತ್ರ ಮಿತ್ರ ಬಹು ಶತ್ರು ಕು ಮಾರೆ ವೃತ್ರ ವೈರೀಸುತ ಮಿತ್ರನಗಾರೆ 4 ಭಂಗ ಜನ ಸಂಗ ನ ಕರೋರೆ ಮಂಗಳಾಂಗ ನರಸಿಂಹ ಭಜೋರೆ 5 ಸೂಕ್ಷ್ಮಬುದ್ಧಿ ನಿರಪೇಕ್ಷ ಭಲಾರೆ ಮೋಕ್ಷದಾತ ಕಮಲಾಕ್ಷಕು ಲಾರೆ 6 ದಾಸ ಲೋಕ ಸಹವಾಸ ಕರೋರೆ ವಾಸುದೇವ ನಿಜದಾಸಕು ಹೋರೆ 7 ಶ್ರೀಪುಲಿಗಿರಿವರ ಭೂಪ ಮುರಾರೆ ಶ್ರೀಪತಿಘನ ಚಿದ್ರೂಪಕ ಹೋರೆ8 ಪರಮಪುರುಷ ನರಹರಿ ಕರುಣೀರೆ ವರದವಿಠಲ ಕರಿವರ ಧಣೀರೆ 9
--------------
ವೆಂಕಟವರದಾರ್ಯರು
ಅವಧೂತಾ ನೀ ಅವಗುಣಗಳ ನಿರ್ಧೂತಾ ದೇವನಹುದೋ ಶ್ರೀನಾಥಾ ಧ್ರುವ ಭಾವಿಸಿ ನೋಡಲು ಭಾವಕತೀತ ಭವಹರ ಗುರು ಸಾಕ್ಷಾತ ಪಾವನಗೈಸುವದಯ ಪ್ರಖ್ಯಾತ ದೇವಾದಿಗಳೊಂದಿತ 1 ಝಗಝಗಿಸುವ ಜಗಜ್ಯೋತಿ ಸ್ವರೂಪ ಅಗಣಿಗತುಣೋಪಮೋಪ ತ್ರಿಗುಣರಹಿತ ಚಿದ್ಛನ ಚಿದ್ರೂಪ ಯೋಗಿಜನರ ಪಾಲಿಪ 2 ಇಹಪರದಾತ ಮಹಿಪತಿ ಗುರುನಾಥ ಬಾಹ್ಯಾಂತ್ರ ಸದೋದಿತ ಮಹಾಮಹಿನು ನೀ ಆನಂದಭರಿತ ಸಹಕಾರ ನೀ ಸತತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದಿರೆ ಮನೋಹರ ಭಕ್ತಲಲಾಮ ಸಿಂಧುಸದನ ತ್ರಿಜಗದೋದ್ದಾಮ ಪ ಮಂದರಮಂದಿರ ಮೇಘ ಶ್ಯಾಮ ಕುಸುಮ ಅ.ಪ ಅಮಿತ ಲೀಲ ಸಗುಣನಿರ್ಗುಣ ಮಹಿಮಜಾಲ ಸುಜನ ಪಾಲ ಕಾಲ 1 ಪರತರಪಾವನ ಕರುಣಾಂತರಂಗ ಮಾಧವ ಪರಿಭವ ಭಂಗ ಸಿರಿ ನರಸಿಂಗ ಮರಣರಹಿತ ಪ್ರಭುವರ ನೀಲಾಂಗ2 ಗೋಕುಲಪತಿ ಗೋಪಾಲಶೀಲ ವ್ಯಾಕುಲಪರಿಹರ ವೇಣುಲೋಲ ಕಾಕುದನುಜ ಸಂಹಾರ ವಿಶಾಲ ಲೋಕಪಾವನೆ ವರ ದೇವಕಿ ಬಾಲ 3 ಯೋಗಿ ವಂದಿತ ವನಜ ಸಂಭವಾದಿ ಸುರಮುನಿವಿನುತ ಚಿನುಮಯ ಚಿದ್ರೂಪ ಚಿತ್ಕಳಾಭರಿತ ಜನಕತನುಜೆಪತಿ ವಿಮಲಚರಿತ 4 ಗೋಕುಲನಾಯಕ ಶ್ರೀಕೃಷ್ಣನಮೋ ವೈಕುಂಠನಾಯಕ ಶ್ರೀ ವಿಷ್ಣು ನಮೋ ಲೋಕನಾಯಕ ಶ್ರೀನಿವಾಸ ನಮೋ ಭಕುತಿದಾಯಕ ಶ್ರೀರಾಮ ನಮೋ5
--------------
ರಾಮದಾಸರು
ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈ ಮಹಿಮೆಗೆ ಏನೆನಬಹುದು ಧ್ರುವ ರೂಪವಿಲ್ಲದೆ ರೂಪಾಗಿ ರೂಪಕ ಅರೂಪನಾದ ಅಪಾ ಮೂರು ಲೋಕಕ ಚಿದ್ರೂಪನಾದ ಮೂರ್ತಿಗೆ 1 ಸರ್ವರೊಳು ಸಾಕ್ಷವಾಗಿ ನಿರ್ವಿಕಲ್ಪ ನಿರ್ಗುಣಿ ತಾ ನಿರ್ವಿಕಾರನಾದ ನಿರ್ಭರ ನಿರ್ವಿಶೇಷಗೆ 2 ಭಾವಕ ಸ್ವಭಾವನಾದ ಪವಿತ್ರಪಾವನನೀತ ಭವನಾಶಗೈಸಿದ ಮಹಿಪತಿ ಗುರುಮೂರ್ತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಪಕಾರವೇನಾ ಹೇಳಲಿ | ಮಾಯಾದೇವಿಯಾ || ಅಪರ ಮಾತನ ರೂಪಕೆ ಮರೆಯಾಗಿ | ಅನುದಿನ ಜನರಿಗೆ | ಅಪರಾಧ ದಾರಿಗೆ ದೂರವಿಟ್ಟಳು ಪ ಸೂರಿಯ ನಾರಾಯಣೆಂಬರು | ಶರಣೆಂದು ಬಾಗರು ತಲೆಯನು ಒಬ್ಬರು || ಪರಿ | ಧರೆಯೊಳುದಾಸೀನ ಮಾಡುವರೈಯಾ1 ಅಗ್ನಿದೇವರ ಮುಖವೆಂದು | ಸುಜ್ಞಾನಿಗಳಿದು ಹೇಳುತಲಿಹಲು || ಅಜ್ಞಾನಿಗಳು ಅಲ್ಲೆ ಕಾಲವ ಕಾಸುತ | ವಜ್ಞೆಯ ಮಾಡುವ ಉಗುಳುತಿಹರು2 ಎಂದೆಂದು ನಿಲುಕದ ಚಿದ್ರೂಪ ಘನವಾದ | ತಂದೆ ಮಹೀಪತಿ ನಂದನ ಪ್ರಾಣನ || ಛಂದದಿ ಭಕ್ತಿಯ ಮಾರ್ಗದಿ ನಡೆಸುತ | ಇಂದೆನ್ನ ಹರಿಮೆಚ್ಚು ಮಾಡಿದಳೈಯ್ಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ- ಸನ್ನ ಕುಮಾರ ದೇವ ಪ ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ 1 ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ 2 ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ 3
--------------
ಬೆಳ್ಳೆ ದಾಸಪ್ಪಯ್ಯ
ಏಳುತಲಿ ಎದ್ದು ಎಚ್ಚರಿಸುತ ನೀ ನೆನೆಯೊ | ಪಾಲಿಸುವ ಮೂಲೋಕ ಪರಮಾತ್ಮನಾ ಪ ಮೂರೊಂದು ಪದರದ ಚೀಲದೊಳು ಥಳಥಳಸಿ ದೋರುತಿಹ ರತ್ನ ಪರಿಚಿದ್ರೂಪನಾ | ಅರಿಗಳ ವಡೆದ ಘನ ತ್ರಿವೇಣಿ ತೀರದಲಿಹ | ಧೀರಯೋಗಿಯ ಕಂಗಳಾನಂದನ 1 ಬೇರು ಮೇಲಾಗಿ ಕೊಂಬುಗಳು ಕೆಳಗಾದ ಸಂ | ಸಾರ ವೃಕ್ಷವ ತ್ರಿಗುಣಮಯದಿಂದಲಿ || ವಾರಿಜಭವಾಂಡ ಪಿಂಡಾಂಡಗಳ ಪರಿಪರಿಯ | ತೋರಿ ತೋರದಲಿಪ್ಪ ನಿರ್ಲಿಪ್ತನಾ2 ನೋಡಿಸುವ ಕೇಳಿಸುವ ವಾಸಿಸುವ ಪರಿಮಳವ | ಆಡಿಸುವ ಕರಚರಣ ನುಡಿನುಡಿಸುವ | ರೂಢಿಯೊಳು ಸೂತ್ರಧಾರಕನಾಗಿ ಅಷ್ಟದಳದ | ಲಾಡುತಿಹ ಮಹೀಪತಿ ಸುತಪ್ರಭು ಭಕುತಿಯಲಿ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕರುಣಿಸೊ ಕರುಣಿಸೊ ಗುರುವೆಂಕಟೇಶ ಕರುಣಿಸೆನ್ನ ನೀ ನೋಡೊ ಪರಮ ಪುರುಷ ಧ್ರುವ ಬಿನ್ನಹವ ಪಾಲಿಸೊ ಚಿನುಮಯ ರೂಪ ಉನ್ನತ ಮಹಿಮ ನೀ ಘನ್ನ ಗುರು ಕೃಪ 1 ಅನಾಥ ಬಂಧು ನೀ ಶರಣ ರಕ್ಷಕ ಅನಂತ ಕೋಟಿ ಬ್ರಹ್ಮಾಂಡ ನಾಯಕ 2 ವಾಸುದೇವ ಚಿದ್ರೂಪ ದೇಶಿಕರದೇವ ಭಾಸಿ ಪಾಲಿಪ 3 ವಂದಿತ ತ್ರೈಲೋಕ್ಯ ವೇದಾಂತ ಮಹಿಮ ಇಂದಿರಾಪತಿ ಘನಗುರುಬ್ರಹ್ಮ 4 ಶ್ರೀನಾಥ ನೀನಲ್ಲದೆ ನನಗಾರು ಇಲ್ಲ ನೀನೆ ಸಕಲಪೂರ್ಣ ಭಕ್ತವತ್ಸಲ 5 ಮತಿಹೀನನವಗುಣ ನೋಡದಿರೆನ್ನ ಕ್ಷಿತಿಯೊಳು ಸದ್ಗೈಸೊ ಪತಿತಪಾವನ 6 ದೀನನಾಥ ನೀ ಬಂದು ಮನದೊಳು ನಿಂದು ಮನ್ನಿಸಿ ದಯಬೀರೊ ಘನಕೃಪಾಸಿಂಧು7 ವಿಶ್ವವ್ಯಾಪಕ ಸಾಧುಹೃದಯನಿವಾಸ ದಾಸ ಮಹಿಪತಿ ಪ್ರಾಣ ಹೊರಿಯೊ ಪ್ರಾಣೇಶ 8
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೃತ್ತಿವಾಸನ ಪ್ರಿಯ ಪುತ್ರನೆ ಗುಹ ಸ- ರ್ವೋತ್ತಮ ಚಿದ್ರೂಪ ಪ ಚಿತ್ತಜ ಪ್ರತಿರೂಪಾ ಪ್ರತಾಪಾಅ.ಪ ದೀನತನದಿ ಕಡುಬೇನೆಯ ಪಡುತಲಿಹೀನಮನುಜನೆನ್ನಾ | ದಾನಿಯಾಗಿಹ ಕರುಣಾನಿಧಿ ಕೈಪಿಡಿ ಧ್ಯಾನಿಪೆ ನಾ ನಿನ್ನ ಪ್ರಸನ್ನ 1 ಸುತ್ತಮುತ್ತಿರುವ ವಿಪತ್ತುಗಳಾ ಭಯ ಮೆತ್ತಿಕೊಂಡಿದೆ ತಾನೇ ಸತ್ವಶಾಲಿಯೇ ನೀ ಕಿತ್ತೊಗೆಯದಿರೆ ಅ- ನ್ಯತ್ರ ಗತಿಯ ಕಾಣೆ ನಿನ್ನಾಣೆ 2 ಪಾಶ ಅಂಕುಶಧರ | ನಾ ಸಹೋದರ ಪಾವಂ- ಜೇಶ ಮಹಾನುಭಾವ | ದಾಸರಿಗೊದಗುವ ತ್ರಾಸವ ಕಳೆ ಸ- ರ್ವೇಶನೆ ಮಹದೇವಾ | ದೇವರ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಗುರುವಿಗೆ ಒಂದು ಶರಣಾರ್ಥಿ ಗುರು ಭಕ್ತರಿಗೊಂದು ಶರಣಾರ್ಥಿ ಪ ಸಾಧನ ನಾಲ್ಕನು ಸಾಧಿಸುತಿರುತಿಹ ಸಾಧಕರಿಗೆ ಒಂದು ಶರಣಾರ್ಥಿವಾದವ ವರ್ಜಿಸಿ ವಸ್ತುವ ಧ್ಯಾನಿಪ ಉತ್ತಮರಿಗೆ ಒಂದು ಶರಣಾರ್ಥಿ1 ಯೋಗಗಳಿಂದಲೆ ಯೋಗ್ಯರಾಗಿಹ ಯೋಗೀಶರಿಗೊಂದು ಶರಣಾರ್ಥಿರಾಗ ಪೋಗಿ ರಂಜಿಸುತಿರುತಿಹ ರಂಜಕರಿಗೆ ಒಂದು ಶರಣಾರ್ಥಿ 2 ದೂಷಣ ಭೂಷಣ ದೂರ ಮಾಡಿಹ ದೃಢವಂತರಿಗೆ ಒಂದು ಶರಣಾರ್ಥಿಆಸೆಗಳೆಂಬ ಅಳಿದು ಇರುತಿಹ ಆನಂದರಿಗೊಂದು ಶರಣಾರ್ಥಿ3 ಪ್ರಪಂಚವೆಲ್ಲವ ಪರಮಾರ್ಥ ಮಾಡಿಹ ಪಂಡಿತರಿಗೆ ಒಂದು ಶರಣಾರ್ಥಿತಾಪವನೀಗಿ ತಮ್ಮನೆ ಮರೆತಿಹ ತಾಪಸರಿಗೆ ಒಂದು ಶರಣಾರ್ಥಿ4 ಜನನ ಮರಣಗಳ ಜಡರನೆ ಕಳೆದಿಹ ಜನಪತಿಗಳಿಗೊಂದು ಶರಣಾರ್ಥಿಚಿನುಮಯಾತ್ಮಕ ಚಿದಾನಂದನ ಬೆರೆದಿಹ ಚಿದ್ರೂಪರಿಗೆ ಒಂದು ಶರಣಾರ್ಥಿ 5
--------------
ಚಿದಾನಂದ ಅವಧೂತರು
ಜಯತು ಜಯತು ಜಯತು ಸತ್ಯ ಸನಾಥ ಜಯತು ನಿಜ ನಿರ್ಭೀತಜಯತು ಸದ್ಗುರುನಾಥ ಜಯತು ಅವಧೂತ ಜಯತು ಜಯತು ಪ ನಿತ್ಯ ನಿರ್ವಿಕಾರ1 ಪಾಲಿಸಗಣಿತ ಮಹಿಮ ಪಾಲಿಸಕ್ಷಯ ರೂಪಪಾಲಿಸೈ ನಿಷ್ಕಾಮ ನಿರ್ವಿಕಲ್ಪಪಾಲಿಸನಂತ ಪರಮಾತ್ಮ ಹರ ನಿರ್ಲೇಪಪಾಲಿಸೈ ಚಿದ್ರೂಪ ಸತ್ಯ ಸಂಕಲ್ಪ 2 ದುರಿತ ದಾವಾಗ್ನಿ ನಿಜ ಬಾಧಶರಣು ಭಕುತರ ವಂದ್ಯ ರಾಜಯೋಗೀಂದ್ರ3 ವಂದಿಪೆ ಚಿದಂಬರ ನಿರಾಮಯ ನಿರಪೇಕ್ಷಾವಂದಿಸುವೆ ಆರೂಢ ಪರಮ ಆಧ್ಯಕ್ಷವಂದಿಸುವೆ ನಿಶ್ಚಲ ಪರಬ್ರಹ್ಮ ಘನರಕ್ಷಾವಂದಿಸುವೆ ಗುಣಾತೀತ ದಕ್ಷ ನಿಜ ಮೋಕ್ಷ 4 ನಿರಂಜನ ನಿರಾಧಾರ ನಿರ್ಲಿಪ್ತಗುರು ಚಿದಾನಂದ ಅವಧೂತ ಪ್ರಖ್ಯಾತ 5
--------------
ಚಿದಾನಂದ ಅವಧೂತರು
ತಿಳಿದು ನೋಡಲೆ ಮನವೆ ತೀವ್ರ ತಾಮಸವೇಕೆ ತಿಳಿದುಕೋನಿನ್ನ ನೀನು ತಿಳಿಯೆ ಮಾಯೆಗಳಿಲ್ಲ ತಿಳಿಯೆ ಶಿವನಾಗುತಿಹೆಬಲುಮರವೆ ಯಾಕೆ ಪಾಪಿ ಮನವೆ ಪ ಶೂನ್ಯ ದುರಿತ ಭಂಗತರ ತರಂಗ ಮೂರ್ತಿಜಂಗಮನೆ ನೆಲೆಸಿಹನು ಜನಿಸಿನೀ ನಿನ್ನೊಳಗೆ ಕಣ್ಗಾಣದಿಪ್ಪೆ ಗುರುವ ಮನವೆ 1 ಮಾಯೆ ಮೋಹಕೆ ಸಿಲುಕಿ ಮಗ್ನನಾಗಿರುತಿಹೆ ಕಾಯವಿದು ನಿನಗೆ ಸ್ಥಿರವೇಆಯಾಸಂಬಡಬಹುದೆ ಅಲ್ಪ ಮತಿಗಳ ಕೂಡಿ ನ್ಯಾಯವೆ ನಿನಗೆರಾಯ ನಾನೆಂಬ ಹೆಮ್ಮೆಯ ತಾಳ್ದು ರತಿ ಬಹಳ ಸ್ತ್ರೀಯರಲಿ ಸೊಗಸಬಹುದೇಮಾಯಕಿಂತಕಟ ನೀ ಶಿಲ್ಕಿ ಒಳಗಾಗುವುದುಮಾಯವೋ ಇದು ಮಹಿಮೆಯೋ ಮನವೇ 2 ಎನ್ನ ಸತಿಸುತ ಬಂಧು ಎನ್ನ ಗೃಹವು ಇದೆಂದು ಬನ್ನಬಡುತಿಹೆ ಯಾತಕೆನಿನ್ನೊಳಗೆ ಇಹ ವಸ್ತು ನೀನೆ ಕಾಣದಲಿರೆ ಮನ್ನಿಸಾ ಗುರುಹಿರಿಯರಉನ್ನತ ಕಟಾಕ್ಷದಲಿ ಒಳಗೆ ದೃಷ್ಟಿಸಿ ಕಂಡು ನಿನ್ನೊಳಗೆ ಪುಳಕನಾಗುಚಿನ್ಮಯ ಚಿದಾನಂದ ಚಿದ್ರೂಪ ತಾನೆಂದುನಿನ್ನ ಸಂಶಯ ಕಳೆಯೋ ಮನವೇ 3
--------------
ಚಿದಾನಂದ ಅವಧೂತರು