ಒಟ್ಟು 9 ಕಡೆಗಳಲ್ಲಿ , 8 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲ್ಲಿರುವೇನೋ ಮಾರುತಿ ಸುವ್ರತಿ ಎಲ್ಲಿರುವನೇನೋ ಮಾರುತಿ ಪ. ಎಲ್ಲಾ ಕಡೆಯಲ್ಲಿ ವ್ಯಾಪ್ತಿ ಯುಳ್ಳವ ಭಾರತೀಪತಿ ಅ.ಪ. ನಿತ್ಯ ರಾಮಪದೈಕಾಸಕ್ತಿ- ಚಿತ್ತನು ಸದಾ ಜಾಗರ್ತಿ ಧೂರ್ತರಿಪುದಲ್ಲಣ ಜೀ- ವೋತ್ತಮ ವಿಚಿತ್ರಗತಿ 1 ಪ್ರಾಣಸಮಾನ ಸಂಪ್ರೀತಿ ಜ್ಞಾನಪೂರ್ವಕ ಸದ್ಭಕ್ತಿ- ವಾನ ವಾನರೇಂದ್ರ ಸುಪ- ರ್ವಾಣಕುಲಚಕ್ರವರ್ತಿ 2 ಲಕ್ಷುಮಿನಾರಾಯಣನ ಪಕ್ಟ್ರೆಕಧೃತಿ ಸುಮತಿ ಅಕ್ಷೀಣ ತ್ರಾಣದ ನಿರ- ಪೇಕ್ಷ ಲಕ್ಷಣಮೂರುತಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಎಲ್ಲಿರುವೇನೋ ಮಾರುತಿ ಸುವ್ರತಿ ಎಲ್ಲಿರುವನೇನೋ ಮಾರುತಿ ಪ. ಎಲ್ಲಾ ಕಡೆಯಲ್ಲಿ ವ್ಯಾಪ್ತಿ ಯುಳ್ಳವ ಭಾರತೀಪತಿ ಅ.ಪ. ನಿತ್ಯ ರಾಮಪದೈಕಾಸಕ್ತಿ- ಚಿತ್ತನು ಸದಾ ಜಾಗರ್ತಿ ಧೂರ್ತರಿಪುದಲ್ಲಣ ಜೀ- ವೋತ್ತಮ ವಿಚಿತ್ರಗತಿ 1 ಪ್ರಾಣಸಮಾನ ಸಂಪ್ರೀತಿ ಜ್ಞಾನಪೂರ್ವಕ ಸದ್ಭಕ್ತಿ- ವಾನ ವಾನರೇಂದ್ರ ಸುಪ- ರ್ವಾಣಕುಲಚಕ್ರವರ್ತಿ 2 ಲಕ್ಷುಮಿನಾರಾಯಣನ ಪಕ್ಟ್ರೆಕಧೃತಿ ಸುಮತಿ ಅಕ್ಷೀಣ ತ್ರಾಣದ ನಿರ- ಪೇಕ್ಷ ಲಕ್ಷಣಮೂರುತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮಾತಿನೊಳು ಕಡುಜಾಣ ನೀತಿಯೆಂಬುದ ಕಾಣ ಪ್ರೀತಿಯಿಲ್ಲದ ಪ್ರಾಣನಾಥನಮ್ಮ ಕಪಿಜನಗಳೊಡನಾಡಿ ಚಪಲಚಿತ್ತನುಮಾದ ಕೃಪೆಯಿಲ್ಲವೆಳ್ಳನಿತು ಕೃಪಣನಕಟ ಸ್ತ್ರೀಹತ್ಯ ನರಹತ್ಯ ಬ್ರಹ್ಮಹತ್ಯವಗೈದ ಸಾಹಸಿಯೆದೇನೆಂಬೆ ಘನನಿತಂಬೆ ಪಕ್ಷಪಾತಿಗಳೊಳಗೆ ಈಕ್ಷಿಸಲ್ ಧರೆಯೊಳಗೆ ದಕ್ಷನೀತಗೆ ಸರಿಯೆ ಪೇಳೆ ಸಖಿಯೆ ಶರವೊಂದು ನುಡಿಯೊಂದರಿಂದ ನಲಿವ ತಿರುಕ ಹಾರುವರೊಡನೆ ಚರಿಸುತಿರುವ ಪರಮಸಾತ್ವಿಕ ಮೂರ್ತಿಯೆಂದು ನುಡಿವ ವರಶೇಷಗಿರಿವಾಸ ನೆಂದುಮೆರೆವ
--------------
ನಂಜನಗೂಡು ತಿರುಮಲಾಂಬಾ
ಸಿರಿ ಪ ನಲ್ಲನವರ ಸಂಗದಿ ಕೂಡು ಅ.ಪ ಉಪದೇಶ ಮಾಳ್ಪುದಕೆ ಹೋಗಬೇಡ ನೀ ಚಪಲಚಿತ್ತನು ತಿಳಿದಿರು ಮೂಢ- ತೋರ್ಪದಿರು ಕೋಣ 1 ಹಿಂದೆ ಹೋದರು ಬಹಳ ಮಂದಿ | ಸ್ಥಿರ- ವೆಂದು ತಿಳಿದು ನೀದುಃಖ ಹೊಂದಿ ಮುಂದಾಗುವುದುಕ್ಕೆಲ್ಲಾ ಕಂದರ್ಪ ಕಾರಣನಲ್ಲಾ 2 ಎಲ್ಲಾ ಜನರನು ಸುಲಿವರು ಮುನ್ನು ಕ್ಷುಲ್ಲಕರಿಗೆ ತತ್ವವ ಪೇಳೆ ಸುಳ್ಳೆಂದು ನಿಂದಿಸುವರು 3 ಪ್ರಶ್ನೆಗೆ ತಕ್ಕ ಉತ್ತರವಾಡು | ಸೂರ್ಯ- ರಶ್ಮಿಯೊಳಗಿರುವ ಲವಣಿಯ ನೋಡು ನಿ_ ನ್ನಸ್ವರೂಪವದರಂತೆ | ಯಾತಕೆ ಇನ್ನು ಅಗಾಧ ಭ್ರಾಂತಿ 4 ಅನಂತ ಪ್ರಾಣಿಗಳೊಳಗೆ ನಿವಾಸ | ನಮ್ಮ ವನಜಾಕ್ಷ ಗುರುರಾಮವಿಠಲೇಶ ಅನಿಮಿತ್ತ ಬಂಧುವನು ಬಿಡಿಬಿಡಿರೋ ದುರಾಶಾ5
--------------
ಗುರುರಾಮವಿಠಲ
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು
ಹೇಮಾಂಬರ ಕದಂಬ ವೆಂಕಟರಾಯಾ ಅ.ಪಎಷ್ಟೆಂದುಸುರೆ ಕೋಟಲೆಗಳಇಷ್ಟ ಮೂರುತಿಯೆ ಅಟ್ಟಿ ಬರುತ 'ಷಹುಟ್ಟು ಹೊಂದುಗಳೆಂಬ ಕಷ್ಟವ ಬಿಡಿಸೊ 'ಶಿಷ್ಟ ವೆಂಕಟರಾಯಾ1ದಂದುಗದಿಂದಾ ಎನ್ನಯಮನ ಕಂದಿಕುಂದುತಿದೆ ಇಂದು ನೀ ಬೆದರದಿರೆಂದಭಯವನಿತ್ತು ಬಂಧವ ಕಳೆಯೆನ್ನತಂದೆ ವೆಂಕಟರಾಯಾ 2ಕಡು ಮನೋವ್ಯಥೆಯಾ 'ಭಾಡಿಸುನುಡಿಯಾಲಿಸಯ್ಯಾ ಬಿಡದೆ ನೀ ಎನ್ನ ಕೈಪಿಡಿದು ಸಂಸøತಿಯೆಂಬ ಕಡಲ ದಾಂಟಿಸೊ ಎನ್ನೊಡೆಯ ವೆಂಕಟರಾಯಾ 3ಗತಿ ನೀನೆಯೆಂದು ಸಾರಿದೆ ನಿನ್ನನತಿ ದೀನ ಬಂಧು ಪತಿತ ಪಾವನ ನೆಂದತಿಶಯದಿಂ ಶೃತಿ ನುತಿಸುತಲಿದೆ ತಿರುಪತಿಯ ವೆಂಕಟರಾಯ 4ಅಪರಾಧ ಶತವಾ ಮಾಡಿದೆ ನಾನುಕೃಪೆುಂದ ಕ್ಷ'ುಸೈ ಜಪತಪವರಿಯದಚಪಲ ಚಿತ್ತನು ನಾನು 'ಮಲಪರಾನಂದನಿಪುಣ ವೆಂಕಟರಾಯಾ 5'ಪ್ರವತ್ಸಲನೆ ಯನಗೆ ನೀನುಸುಪ್ರೀತನಾಗೈ ತಪ್ಪುಗಳೆಲ್ಲವನೊಪ್ಪುಗೊಳ್ಳುತ ಸಲಹಪ್ಪ ನಿಚ್ಚಲು ತಿಮ್ಮಪ್ಪ ವೆಂಕಟರಾಯಾ 6ದುರಿತ ಭಂಜನನೆ ಮಹಾಪುಣ್ಯಚರಿತ ರಾಜಿತನೆ ನೆರೆ ನಂಬಿದರ ಪತಿಕರಿಸುವ ಬಿರುದುಳ್ಳ ಪರಮಾತ್ಮ ಮೂಡಲಗಿರಿಯ ವೆಂಕಟರಾಯಾ 7ವಾರಿಜನಾಭ ಮಹೋನ್ನತವಾರಣಾಧಾರಾ ಗಾರುಗೊಳಿಸುವ ಸಂಸಾರ ದುಃಖವನಿದನಾರಿಗುಸುರುವೆ ಕೊನೇರಿ ವೆಂಕಟರಾಯಾ 8ಮಂಗಳಾತ್ಮಕನೆ ಸೀತಾಕಾಂತಮಂಗಳ ಮ'ಮ ಮಂಗಳಗಿರಿ ನರಸಿಂಗರಾಘವ ರಘುಪುಂಗವ ಅಲಮೇಲುಮಂಗ ವೆಂಕಟರಾಯಾ9
--------------
ತಿಮ್ಮಪ್ಪದಾಸರು
139-4ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಗುರುಗಳು ಏಕಾಂತದಲ್ಲಿ ಇತ್ತ ಉಪದೇಶಮರೆಯದೇ ಅನುಸರಿಸಿ ಭೀಮರತಿಯನ್ನುಸೇರಿ ವಿಹಿತದಿ ಸಂಕಲ್ಪಾದಿಗಳ ಮಾಡಿನೀರಲ್ಲಿ ಇಳಿದರು ಶ್ರೀನಿವಾಸಾಚಾರ್ಯ 1ಸರ್ವ ಜಗತ್ಪಾಲ ಶ್ರೀ ಪಾಂಡುರಂಗವಿಠ್ಠಲನುಪ್ರವಾಹ ಸುಳಿಯಿಂದ ಬಡುಗಾತ್ರ ಭಕ್ತನ್ನಕಾಯ್ವುದಕೆ ಗಂಡಾ ಶಿಲಾ ನಿರ್ಮಿಸಿದ ಅಲ್ಲಿದೇವಗುರುಸ್ಮರಣೆಯಿಂ ಇಳಿದರಾಚಾರ್ಯ2ನರಸಿಂಹ ವಿಠ್ಠಲದಾಸರು ತಂದೆಯಗುರುಗಳು ಗೋಪಾಲ ವಿಠ್ಠಲ ದಾಸರಪರಮಗುರುಗಳುವಿಜಯವಿಠ್ಠಲ ದಾಸರಪುರಂದರದಾಸರಾಜರ ಸ್ಮರಿಸಿದರು3ತೀರ್ಥಾಭಿಮಾನಿಗಳ ಭಾರತೀಪತಿಯಪದುಮೆ ಪದ್ಮೇಶ ಫಂಡರಿ ನಾಥ ಹರಿಯಮೋದಚಿನ್ಮಯ ಜಗನ್ನಾಥನ ಸ್ಮರಿಸುತ್ತಉದಕಪ್ರವಾಹದೊಳು ತನುವ ಅದ್ದಿದರು4ಸೀನಪ್ಪ ಶ್ರೀನಿವಾಸ ಶ್ರೀನಿವಾಸಪ್ಪ ಈಶ್ರೀನಿವಾಸಾಚಾರ್ಯ ಒಂದು ಸಲ ಮುಳುಗೇಳೆತನುಗತ ಒಳ ಹೊರಗಿನಕಲುಷಕಳೆದವುಪುನಃ ಮುಳಗೇಳಲು ಸುಪವಿತ್ರರಾದರು 5ಪುನಃ ಮುಳುಗಿ ಎದ್ದು ಅ ಘ್ರ್ಯವ ಅರ್ಪಿಸಲುಇನನ ಮಂಡಲದಿ ವರವಾಯು ಅಧಿಷ್ಠಾನದಲಿಶ್ರೀ ನಾರಾಯಣ ಸರ್ವಜನ ಹಿತಕರನಆನಂದ ಚಿನ್ಮಾತ್ರ ವಪುಷನ್ನ ಸ್ಮರಿಸಿದರು 6ಋಕ್ಸಾಮ ವೇದಗಳಿಂದ ವಾಣೀವಾಯುಸುಖಪೂರ್ಣ ನಾರಾಯಣನ ಸ್ತುತಿಸುವರುಆಕಳಂಕ ಉನ್ನಾಮಸಾಮನಾಮ ಹೀಂಕಾರಶ್ರೀಕೃತಿಪತಿ ಪ್ರದ್ಯುಮ್ನಾದಿ ಸ್ವರೂಪ 7ಸಪ್ತಕಾಲದಿ ಸಪ್ತಸಾಮ ಪ್ರತಿಪಾದ್ಯನುಸಪ್ತಸ್ವರೂಪನು ಆದಿತ್ಯಾಂತಸ್ತಪ್ರದ್ಯುಮ್ನವಾಸುದೇವವರಾಹನಾರಾಯಣಅನಿರುದ್ಧ ನರಸಿಂಹ ಸಂಕರುಷಣ 8ಪರಮಗುರುವಿಜಯದಾಸಾರ್ಯರ ಪ್ರೇರಣೆಯಿಂದಗುರುಗಳು ಗೋಪಾಲದಾಸಾರ್ಯರುಅರುಪಿದಅನುಸಂಧಾನಕ್ರಮದಿಂದಲೇಗುರುತಮ ಸಮೀರನಲಿ ಹರಿಯ ಸ್ಮರಿಸಿದರು 9ಸೂರ್ಯನೊಳಿಪ್ಪಸಮೀರಅಧಿಷ್ಠಾನಸ್ಥಸೂರಿಜನ ಪ್ರಾಪ್ಯ ಋಕ್ ಸಾಮಾದಿಸ್ತುತ್ಯಸೂರ್ಯತೇಜಃ ಪುಂಜ ಸ್ಫೂರ್ತಿದ ಜಗತ್ಕರ್ತ ಶ್ರೀಶ್ರೀನಾರಾಯಣಗಘ್ರ್ಯ ಅರ್ಪಿಸಲು ಒಲಿದ 10ಝಗಝಗಿಪ ತೇಜಸ್ಸು ಶಿರೋಪಕಂಡರುಮೂಗಿನಿಂದೊಂದಡಿ ಶಿರದ ಮೇಲೆಜಗನ್ನಾಥವಿಠ್ಠಲ ಎಂದು ಪ್ರಜ್ವಲಿಸಿತುಹೇಗೆ ವರ್ಣಿಸುವೆ ಆ ಅದ್ಭುತ ದೃಶ್ಯ 11ಸರ್ವ ಜಗದ್ರಕ್ಷಕ ವಿಠ್ಠಲನು ತತ್ಕಾಲಪ್ರವಾಹವ ತಡೆಯಲು ನಿರ್ಮಿಸಿದ ಶಿಲೆಯುಪ್ರಜ್ವಲಿಪ ಈ ದಿವ್ಯ ಹರಿನಾಮ ಅಂಕಿತಕ್ಕೆಐವತ್ತು ಅಂಗುಲ ಹಿಂದೆ ನಿಂತಿತ್ತು 12ಕ್ಷಣಮಾತ್ರದೊಳಗೆ ಈತಟಿತ್ಕೋಟಿನಿಭಜ್ಯೋತಿಫಣೆಮುಂದೆ ನಿಂತಿತು ಆಗ ಆಚಾರ್ಯಚೆನ್ನಾಗಿ ನೋಡಿದರುಹರಿಇಚ್ಛಾಶಕ್ತಿಯಿಂಶ್ರೀನಿವಾಸವಿಜಯಗೋಪಾಲ ವಿಠ್ಠಲನ13ಶ್ರೀ ಶ್ರೀನಿವಾಸನೇವಿಜಯವಿಠ್ಠಲನಾಗಿಶ್ರೀ ಶ್ರೀನಿವಾಸ ಗೋಪಾಲ ವಿಠ್ಠಲನಾಗಿಶ್ರೀ ಶ್ರೀನಿವಾಸ ಶ್ರೀ ಜಗನ್ನಾಥ ವಿಠ್ಠಲನಾಗಿಶಿರಿ ಜಗನ್ನಾಥ ದಾಸಾರ್ಯರು ನೋಡಿದರು 14ಶ್ರೀ ಶ್ರೀನಿವಾಸನೆ ಪ್ರಸನ್ನನು ಆಗಿತೋರಿಹನು ಜಗನ್ನಾಥ ವಿಠಲನೆನಿಸಿತಿರುಪತಿ ಶ್ರೀನಿಧಿಯೇ ಪಂಡರಿ ವಿಠ್ಠಲನುಸೂತ್ರನೋಡಿ ನಸ್ಥಾನ ತೋಪಿ15ಶ್ರೀ ರುಕ್ಮಿಣೀಪತಿ ಪರಂಜ್ಯೋತಿ ಪರಂಬ್ರಹ್ಮಉರುಅಖಿಳಸಚ್ಛಕ್ತ ಜಗನ್ನಾಥ ವಿಠ್ಠಲಶಿರಿ ಜಗನ್ನಾಥದಾಸರ ಹೃದಯ ¥ದ್ಮದೊಳುಸೇರಿದನು ಜ್ವಲಿಸುತಿಹ ಸರ್ವೋತ್ತಮ ಅಲ್ಲಿ 16ಎಂಟುಅಕ್ಷರಮೂಲಮಂತ್ರದಿ ನಾರಾಯಣನವಿಠ್ಠಲ ಹಯಗ್ರೀವ ವೆಂಕಟೇಶಾದಿಷಡಕ್ಷರಿ ವಿಷ್ಣು ರಾಮ ಕೃಷ್ಣಾದಿಗಳಕ್ರೋಡನರಸಿಂಹಾದಿಗಳನು ಜಪಿಸಿದರು17ಗುರುಪರಮಗುರುಪೇಳ್ದ ರೀತಿಯಲಿ ಜಪಚರಿಸಿಶ್ರೀ ರುಕ್ಮಿಣಿ ವಿಠ್ಠಲ ಮಂದಿರಕೆ ಪೋಗಿಪುರಂದರಾರ್ಯರ ನಮಿಸಿಗುರುಪರಮಗುರುಗಳಸ್ಮರಿಸಿ ಒಳಪೊಕ್ಕರು ವಿಠ್ಠಲನ್ನ ನೋಡೆ 18ಶ್ರೀ ಮಧ್ವರಮಣ ನಿನ್ನ ಅದ್ವಿತೀಯ ಮಹಿಮೆಈ ಮಹೋತ್ತಮಕೃತಿಪುರಂದರದಾಸರದುಅಮಲ ಭಕ್ತಿಯಲ್ಲಿದನ್ನ ಅರ್ಥ ಅರಿತು ಪಠಿಸಿಶ್ರೀಮಂದಿರದೊಳು ಪ್ರವೇಶ ಮಾಡಿದರು 19ತ್ರಿಜಗದೀಶನಪಾದಪದ್ಮಗಳ ನೋಡುತ್ತನಿಜಭಕ್ತಿ ಭಾವದಲಿ ಸಾಷ್ಟಾಂಗ ನಮಿಸಿಅಜಭವೇಂದ್ರಾದಿ ಸುರವಂದ್ಯನ್ನ ಕೇಶಾದಿರಾಜೀವಪಾದಾಂತ ದರುಶನ ಮಾಡಿದರು20ಜ್ವಲಿಸುವ ಕಿರೀಟ ಸುಳಿಗುರುಗಳು ಫಣಿಯ ತಿಲಕಬಿಲ್ಲುವೋಲ್ ಸುಂದರ ಭ್ರೂ ಮುಖಕಮಲಜಲಜೇಕ್ಷಣ ಮುಗುಳುನಗೆಯು ತಟಿದಂದಿಪೊಳೆವ ಕುಂಡಲಕರ್ಣ ಕಂಬುಗ್ರೀವ 21ವನಮಾಲೆ ಎಳೆ ತುಳಸಿದಳ ಹಾರ ಕೊರಳಲ್ಲಿಘನಬಾಹು ವಿಸ್ತಾರವಕ್ಷ ಶ್ರೀವತ್ಸಸ್ವರ್ಣಮಣಿ ಗ್ರೈವೇಯಕೌಸ್ತುಭರತ್ನವುಕಣ್ಣಾರ ಕಾಣಲಾನಂದ ಸೌಂದರ್ಯ 22ಮೂರುಗೆರೆ ಉದರದಲಿವನರುಹನಾಭಿಯುಕರಗಳು ಕಟಿಯಲ್ಲಿ ಶಂಖಾರವಿಂದಪುರುಟಮಣಿ ಗಣಸೂತ್ರ ಪೀತಾಂಬರ ಉಡಿಸ್ಫುರದ್ರತ್ನ ನೂಪುರ ಸಮಪಾದದ್ವಯವು 23ತಟಿತ್ಕೋಟಿನಿಭ ತನ್ ಕಾಂತಿಯಲಿ ಜ್ವಲಿಸುವಸಾಟಿಯಿಲ್ಲದ ಸುಂದರಾಂಗ ಶ್ರೀರಮಣವಿಠ್ಠಲ ಕೃಪಾನಿಧಿ ಶರಣಜನ ಪಾಲನ್ನಹಾಡಿ ಸ್ತುತಿಸಿದರು ಜಗನ್ನಾಥ ದಾಸಾರ್ಯ 24ಫಣಿಪಶಾಯಿಯ ಅನಂತ ಪದ್ಮನಾಭನು ತನ್ನಆನಂದಲೀಲೆಯಲಿ ಜಗವ ಪಡೆಯುವನುಆನಂದಲೀಲೆಯಲಿ ಅವತಾರ ರೂಪಗಳತಾನೇ ಪ್ರಕಟಿಸಿ ಸಜ್ಜನರ ಪಾಲಿಸುವ 25ದೇಶಗುಣಕಾಲ ಅಪರಿಚ್ಛಿನ್ನನು ಅನಂತನುಶ್ರೀಶಸರ್ವೇಶ ಚಿನ್ಮಯನುಅನಘಐಶ್ವರ್ಯ ಪೂರ್ಣಜಗದೇಕ ಪಾಲಕನುಅಸಮ ಸರ್ವೋತ್ತಮನು ಸುಖಮಯನು ಸುಖದ 26ಮೀನಕೂರ್ಮಸ್ತ್ರೀ ಅಜಿತ ಧನ್ವಂತರಿಕ್ರೋಢಶ್ರೀನಾರಸಿಂಹ ವಟುಭೃಗು ರಾಮರಾಮಕೃಷ್ಣ ಜಿನಸುತ ಕಲ್ಕಿ ಠಲಕ ವೆಂಕಟರಮಣಆನಂದಚಿತ್ತನು ಅನಂತ ಅವತಾರ 27ದಾಸೋಹಂ ತವ ದಾಸೋಹಂ ಎಂದುದಾಸವರ್ಯರು ಬಿನ್ನೈಸಿ ಸ್ತುತಿಸಿದರುನಸುನಗುತ ವಾತ್ಸಲ್ಯದಿಂದ ವಿಠ್ಠಲನುವಿಶೇಷಾಪರೋಕ್ಷ ಅನುಗ್ರಹಿಸಿದನುದಯದಿ 28ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದದಿಕ್ಕು ವಿದಿಕ್ಕುಗಳ ರಂಜಿಸುವರೂಪದಿಂದ ಪಾಲ್ಗಡಲಲಿ ಆವಿರ್ಭವಿಸಿದ ಶ್ರೀಇಂದಿರೆಯೆ ರುಕ್ಮಿಣಿ ಸೌಂದರ್ಯಪೂರ್ಣೆ 29ಮಾಯಾಜಯಾಕೃತಿಶಾಂತಿ ಸೀತಾಲಕ್ಷ್ಮಿತೋಯ ಜಾಲಯ ಚಿತ್ಪ್ರಕೃತಿ ಭೂದುರ್ಗಾತೋಜಯಾಕ್ಷಿವೇದವತಿದಕ್ಷಿಣಾ ಶ್ರೀಜಯಂತಿ ಸತ್ಯಾರುಕ್ಮಿಣಿ ಸುಂಧುಕನ್ಯಾ 30ಸರ್ವ ಜಗಜ್ಜನನಿಯು ಸರ್ವ ವಿಧದಲಿ ಹರಿಯಸೇವಿಸುತಿಹಳು ಸದಾ ನಿತ್ಯಾವಿಯೋಗಿನಿದೇವದೇವೋತ್ತಮ ರಾಜರಾಜೇಶ್ವರನು ವಿಠ್ಠಲನುದೇವಿ ಶ್ರೀ ರಾಜರಾಜೇಶ್ವರಿಯು ರುಕ್ಮಿಣಿಯು 31ಜ್ವಲಿಸುವ ಮುತ್ತು ನವರತ್ನದಿ ಕಿರೀಟಒಳ್ಳೆ ಪರಿಮಳ ಹೂವು ಮುಡಿದಂತ ತುರುವುಫಾಲದಲಿ ಶ್ರೇಷ್ಠತಮ ಕಸ್ತೂರಿ ತಿಲಕವುಪೊಳೆವ ಪೂರ್ಣೇಂದು ನಿಭ ಮೂಗುಬೊಟ್ಟು 32ಅಂಬುಜಾಕ್ಷಿ ದಿವ್ಯ ಮುತ್ತಿನ ತೋಡುಗಳುಗಂಭೀರ ಸೌಭಾಗ್ಯದ ಕೃಪಾನೋಟಕಂಬುಕಂಠದಿ ಮಂಗಳಸೂತ್ರಕರಯುಗದಿಅಂಬುಜವರಕೊಡುವಅಭಯಹಸ್ತಗಳು33ಕಂಧರದಲಿ ಪರಿಮಳಕಮಲಮಾಲಾಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟೆವಸ್ತ್ರವು ಸ್ವರ್ಣಸರ್ವಾಭರಣ ಭೂಷಣವುಪಾದಉಂಗುರ ಪೆಂಡೆ ಕಂಡು ನಮಿಸಿದರು34ಜಗನ್ನಾಥ ವಿಠ್ಠಲನೂ ಜಗನ್ಮಾತೆ ರುಕ್ಮಿಣಿಯೂಜಗನ್ನಾಥದಾಸರಿಗೆ ಔತಣ ಮಾಡಿದ್ದುಜಗತ್ತಲ್ಲಿ ಭಕ್ತಜನರೆಲ್ಲ ಪೇಳ್ತಿಹರುಜಗದೀಶ ಪಂಢರೀ ವಿಠ್ಠಲನ ಮಹಿಮೆ 35ಕೇಶವ ನಾರಾಯಣಮಾಧವಗೋವಿಂದಶ್ರೀಶ ವಿಷ್ಣು ಮಧುಸೂದನ ತ್ರಿವಿಕ್ರಮಈಶ ವಾಮನ ಶ್ರೀಧರ ಹೃಷಿಕೇಶರಮೆಯರಸಪದ್ಮನಾಭದಾಮೋದರ36ಸಂಕರುಷಣ ವಾಸುದೆವ ಪ್ರದ್ಯುಮ್ನ ನಮೋಅಕಳಂಕ ಅನಿರುದ್ಧ ಪುರುಷೋತ್ತಮನಿಷ್ಕಳಅಧೋಕ್ಷಜನರಸಿಂಹಅಚ್ಯುತಶ್ರೀಕರ ಜನಾರ್ದನ ಉಪೇಂದ್ರ ಹರಿಕೃಷ್ಣ 37ರಮಾಪತಿ ರಮಾಯುತನು ಶ್ರೀಹರಿಯ ರೂಪಗಳಬ್ರಹ್ಮವಾಯು ವಾಣೀಭಾರತಿ ಉಮೇಶಉಮಾ ತತ್ವದೇವದಿಕ್ಪಾಲಕರು ಗಂಗಾಕರ್ಮಮಾನಿ ಪುಷ್ಕರಾದಿಗಳೊಳ್ ತಿಳಿದರು 38ಭೋಜನ ಪದಾರ್ಥದಲು ತದ್ಗತ ಶಬ್ದಂಗಳಲುಭೋಜ್ಯಗಳ ಬಡುಸುವರಲ್ಲೂ ಕ್ಷೇತ್ರದಲ್ಲೂಭೋಜಭಿಮಾನಿಗತ ಖಂಡಾಖಂಡಗನುಭಜನೀಯ ಸ್ಥೂಲಭುಕ್ ಅವ್ಯಯನ ಕಂಡರು 39ಕರುಣಾಬ್ಧಿ ಶ್ರೀ ಹರಿಯ ಔದಾರ್ಯ ಏನೆಂಬೆಶ್ರೀ ಶ್ರೀನಿವಾಸನು ಅಂದು ತಿರುಪತಿಯಲ್ಲಿಶಿರಿ ವಿಜಯಾರ್ಯರ ರೂಪದಿ ಪ್ರೇರಿಸಿಧಾರೆಯೆರಿಸಿದ ಆಯಸ್ ಗುರುಗಳ ಕೈಯಿಂದ 40ಶ್ರೀ ಶ್ರೀನಿವಾಸನ ಮಹಾದ್ವಾರಕೆದುರಾಗಿಹಾರೆ ಕಲ್ಲುಮಂಟಪ ಆಗ್ನೇಯ ದಿಕ್ಕುಎರಡನೆಯದೋ ಮೂರನೆಯದೋ ಅಂಕಣದ ಖೋಲಿಹರಿದಾಸರು ಇದ್ದ ಮುಖಾಮಿ ಬಿಡಾರ 41ಎಳೆಕೆಂಪು ರೋಜ ಊದಾವರ್ಣದಿ ಅಂಚುಬಿಳಿರೇಷ್ಮೆ ವಸ್ತ್ರವ ಮೇಲ್ ಹೊದ್ದುಕೊಂಡುಮಲಗಿ ಚಲಿಸದೆ ನಿತ್ರಾಣನಾಗಿದ್ದವಗೆಒಲಿದು ಆಯುರ್ದಾನ ಮಾಡಿಸಿದ ಕರುಣಿ 42ಗುರುಗಳು ಗೋಪಾಲದಾಸರ ರೂಪದಿಂದ ಬಂದುಶಿರಿವರನು ತಾನೇನೆ ಅನ್ನಪ್ರಸಾದಕರದಲ್ಲಿ ಇತ್ತನು ಅವನೇವೆಇಂದುಶಿರಿಸಹ ಅಮೃತಾನ್ನ ಔತಣವನ್ನಿತ್ತ 43ಶಿರಿಯ ವಾತ್ಸಲ್ಯ ದಯೆ ಏನೆಂದು ಪೇಳಲಿಚಾರುದೇಷ್ಣಾಹ್ವಯ ತನ್ನಸುತ ಈಗವರಗೋಪಾಲದಾಸರುಅವರಶಿಷ್ಯರಿವರೆಂದು ಪ್ರೀತಿಯಲಿ ಔತಣ ಮಾಡಿಹಳು 44ಈ ರೀತಿ ಹರಿಶಿರಿ ಇತ್ತ ಔತಣ ಮತ್ತುಹರಿಯ ಕೈಯಿಂದ ಹರಿಗರ್ಪಿತ ಮಾಲಾದಿಹರಿಪ್ರಸಾದವ ಕೊಂಡು ಫಂಡರಿಪುರದಿಂದಹೊರಡಲಾದರು ಜಗನ್ನಾಥದಾಸಾರ್ಯ 45ನರಸಿಂಹಾದಾಸಾರ್ಯರಾದ ತನ್ನ ತಂದೆಗೆಗುರುಗಳುಪುರಂದರದಾಸಾರ್ಯರೆಂದುಪರಮಗುರುವಿಜಯದಾಸಾರ್ಯರ ಗುರುಯೆಂದುಚರಣವಂದಿಸಿ ಹೊರಡೆ ಅಪ್ಪಣೆ ಕೊಂಡರು46ಪರಮಗುರು ವಿಜಯದಾಸಾರ್ಯರ ಸ್ಥಳಕೆಸ್ಮರಣೆ ಪೂರ್ವಕ ಮನಸಾ ಪೋಗಿ ಸನ್ನಮಿಸಿಗುರುಗಳಚರಣಆಕಾಂಕ್ಷಿಗಳು ತ್ವರಿತದಿಹೊರಟರು ಶ್ರೀ ಜಗನ್ನಾಥನ್ನ ಸ್ಮರಿಸುತ್ತ 47ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 48- ಇತಿ ಪಂಚಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ಕೃಷ್ಣಾಮೃತಸಾರ27ಬಾರೋ ಎನ್ನ ಮನಕೆ ಗೋಪಾಲಕೃಷ್ಣಬಾರೋ ಎನ್ನ ಮನಕ್ಕೆ ಪಬಾರೋ ಎನ್ನ ಮನಕೆ ಭಾಮೆ ರುಕ್ಮಿಣೀ ಸಹಸರಸೀರುಹಾಸನ ಶಿವಾದ್ಯಮರ ವಂದ್ಯ ಅ.ಪ.ಮೋದಚಿನ್ಮಯ ಜಗಚೇಷ್ಟಕ ಬಲರೂಪಯದುಪತೇ ಕೃಷ್ಣ ನೀನು ದೇವಕೀ ಸುತನೆನಿಸಿಮೇದಿನಿಯಲಿ ಅವತಾರ ಮಾಡಿದಅಜಸಾಧು ಸದ್ಭಕ್ತರ ಸದ್ಧರ್ಮ ರಕ್ಷಿಸಲು 1ಪೂತನಿ ಶಕಟತೃಣಾವರ್ತವತ್ಸಬಕಅಘಧೇನು ಕೇಶಿ ಚಾಣೂರ ಮುಷ್ಟಿಕದೈತ್ಯಕುವಲಯಪೀಡಾ ಕಂಸಾದಿ ದುಷ್ಟರನ್ನಸದೆದು ಭೂಬಾರವ ಇಳಿಸಿದಿಶೌರಿ2ಸುಂದರ ವದನದಲ್ಲಿ ಜಗವೆಲ್ಲಾ ತೋರಿಸಿದಿಉದ್ಧರಿಸಿ ಮಣಿಗ್ರೀವ ನಳಕೂಪರನ್ನಮುಖಾದಿಂದ್ರಶ್ಚಾಗ್ನಿ ದಾವಾಗ್ನಿಯನು ನುಂಗಿನಂದನ್ನ ವರ್ಣಾಲಯದಿಂದ ಬಿಡಿಸಿ ತಂದಿ 3ನಾಗಪತ್ನಿಯರಿಗೂ ಕಾಳಿಂಗನಿಗೂ ಒಲಿದುನಗವನ್ನ ಎತ್ತಿ ಗೋ ಗೋಪಾ ಜನರ ಕಾಯ್ದಿಉಕ್ಕುವ ಪ್ರೇಮದಿಂ ಸೇವಿಸಿದ ಗೋಪಿಯರಭಕುತೀಗೆ ಮೆಚ್ಚಿ ಯೋಗ್ಯ ಸಾಧನ ಫಲವಿತ್ತಿ 4ಸುದರ್ಶನಾಭಿದ ವಿದ್ಯಾಧರನ್ನ ಶಾಪದಿಂದಪಾದಸ್ಪರ್ಶವನಿತ್ತು ಮೋಚನೆ ಮಾಡಿಉದ್ಧರಾಕ್ರೂರ ಸ್ತ್ರೀ ವಾಯುಕ ಮಾಲಾಕಾರಮೊದಲಾದವರ್ಗೂವಿಪ್ರಸ್ತ್ರೀಯರಿಗೂ ಒಲಿದಿ5ಬಲಭದ್ರ ಸುಭದ್ರ ಸಹ ಕೃಷ್ಣ ಜಗನ್ನಾಥಮಾಲೋಲ ನಿನ್ನಯ ಬಾಲಲೀಲೆಗಳುಬಲು ಶುಭತಮ ಪಾಲ್‍ಬೆಣ್ಣೆಯ ಪ್ರಿಯ ಈಶಪಾಲಾಬ್ಧಿಶಾಯಿ ಅಚ್ಚುತಾನಂದ ಗೋವಿಂದ 6ಈರಾರುಯೋಜನ ದ್ವಾರಕಾ ದುರ್ಗವುಸುರದ್ರುಮ ಲತೋದ್ಯಾನ ವಿಚಿತ್ರೋಪ ವನಗಳ್ಪುರುಟ ಶೃಂಗೋನ್ನತ ಸ್ಫಟಿಕ ಅಟ್ಟಾಳಗೋಪುರಗಳು ನವರತ್ನ ಸ್ವರ್ಣಗೃಹಗಳ್ 7ಆಶ್ಚರ್ಯ ಕಡಲ್‍ಮಧ್ಯ ದ್ವಾರಕಾ ನಿರ್ಮಿಸಿಅಚ್ಛನ್ನ ಭಕ್ತ ಸೇವಕರೊಡೆ ಇದ್ದಿಮುಚುಕುಂದನಿಗೆ ಒಲಿದು ಕಾಲನ್ನ ಕೊಲ್ಲಿಸಿದಿರಚಿಸಿದಿ ಮದುವೆಯ ಅಣ್ಣ ಬಲರಾಮಗೆ 8ಸಿಂಧುಜಾ ಇಂದಿರಾಜನಕಜಾಸೀತೆಯೇಪ್ರಾದುರ್ಭವಿಸಿಹಳು ರುಕ್ಮಿಣೀ ಭೈಷ್ಮಿಸಿಂಧುಜನಕಾ ತೆರದಿ ಅಲ್ಲದೇ ಭೀಷ್ಮಕಪುತ್ರ ದುಷ್ಟಗೆ ಸೋತು ಚೈದ್ಯನಿಗೆ ಕೊಡಲಿದ್ದ 9ಅನಾದಿನಿತ್ಯನಿನ್ನಸತಿರಮಾ ರುಕ್ಮಿಣಿಜ್ಞಾನ ತೇಜಃ - ಪುಂಜ ಭಕ್ತಿಪ್ರವಾಹ ಓಲೆನಿನಗೆ ಕಳುಹಿಸಿದಳು ದ್ವಿಜವರ ಶ್ರೇಷ್ಠಬ್ರಾಹ್ಮಣ ಅಚ್ಛಿನ್ನ ಭಕ್ತನ ಕೈಯಲ್ಲಿ 10ಉನ್ನಾಮ ಉದ್ದಾಮ ಅಚ್ಚುತ ನೀನಿತ್ಯಆನಂದ ಚಿತ್ತನು ಯದುಪತಿ ಕೃಷ್ಣನೀನೇ ತನ್ನಪತಿಸಿರಿತಾನು ಎಂದುಅನಘಲಕ್ಷ್ಮೀಭೈಷ್ಮಿ ಪತ್ರದಿ ಹೇಳಿಹಳು11ಸುಧಾಕಲಶ ವಿಪ ಕಿತ್ತಿ ತಂದ ತೆರದಿಚೈದ್ಯಮಾಗಧಸಾಲ್ವಾದಿ ಕಡೆಯಿಂದಎತ್ತಿತಂದಿಯೋ ಸ್ವಯಂವರದಿಂದ ಶ್ರೀಭೈಷ್ಮಿಯವಂದಿಸಿ ಶರಣಾದೆ ಕೃಷ್ಣ ರುಕ್ಮಿಣಿಗೆ 12ಜಯ ಕೃಷ್ಣ ನೀ ರುಕ್ಮಿಣೀ ಸಮೇತದಿ ಬಾರೆಜಯಭೇರಿ ತಾಡಿಸಿ ದ್ವಾರಕಾವಾಸಿಗಳುಗಾಯಕರು ನರ್ತಕರು ವಿಪ್ರಮುತ್ತೈದೆಯರುಜಯ ಜಯತು ಎನ್ನುತಾನಂದ ತೋರಿಸಿದರು 13ಯದುಪುರಿಯಲಿ ಮನೆ ಮನೆಯಲಿ ಮಹೋತ್ಸವಮುದದಿ ಅಲಂಕೃತವಾಗಿ ಸ್ತ್ರೀ ಪುರುಷರುಜ್ಯೋತಿ ಉಜ್ವಲ ದೀಪಾವಳಿ ಪೂರ್ಣಕುಂಭಗಳುಛಂದಗೊಂಚಲ ಪುಷ್ಪರತ್ನ ತೋರಣಗಳ್14ಸಂಜಯ ಕುರು ಕೇಕಯಾದಿ ರಾಜರುಗಳುರಾಜಕನ್ಯೆಯರು ಗಜಗಳ್ ಓಡ್ಯಾಟಮೂರ್ಜಗದೊಡೆಯ ನೀ ರುಕ್ಮಿಣಿಯ ಕರೆತಂದಸುಚರಿತ್ರೆ ಪೊಗಳಿದರು ನರನಾರಿರೆಲ್ಲರು 15ಚತುರ್ಮುಖ ವಾಯು ಶಿವ ವೈನತೇಯನುಶೇಷಶತಮುಖಸ್ಮರಅಹಂಕಾರಿಕ ಪ್ರಾಣಮೊದಲಾದಅಮರರುಮುನೀಂದ್ರರು ವೇದಮಂತ್ರ ಘೋಷಿಸೆ ಮದುವೆ ವೈಭವ ಏನೆಂಬೆ 16ಪೂರ್ಣಜ್ಞÕನಾತ್ಮನೆ ಪೂರ್ಣ ಐಶ್ವರ್ಯಾತ್ಮಪೂರ್ಣಪ್ರಭಾನಂದತೇಜಶಕ್ತ್ಯಾತ್ಮಆನಮಿಪೆ ಅಚ್ಚುತಾನಂತ ಗೋವಿಂದಕೃಷ್ಣ ರುಕ್ಮಿಣಿನಾಥ ಜಗದೇಕ ವಂದ್ಯ 17ಆದರದಿಸುರರಾಜವಿಪ್ರರ ವೃಂದಯಾದವರುಗಳು ಶ್ರೀ ರುಕ್ಮಿಣಿಕೃಷ್ಣನಿತ್ಯಸತಿಪತಿ ಮದುವೆ ನೋಡಿ ಹಿಗ್ಗಿದರುಶ್ರೀದ ನೀ ಕೊಡುವಿಯೊ ಸೌಭಾಗ್ಯ ಇದು ಪಠಿಸೆ 18ಯೋಗೇಶ್ವರ ದೇವ ದೇವ ಶ್ರೀಯಃಪತೇಅಗಣಿತಗುಣಪೂರ್ಣಅಪ್ರಮೇಯಾತ್ಮನ್ಶ್ರೀಕೃಷ್ಣ ವಿಷ್ಣೋ ಶ್ರೀರಮಾರುಕ್ಮಿಣಿಬಾಗಿ ಶರಣಾದೆ ನಿಮ್ಮಲ್ಲಿ ಮಾಂಪಾಹಿ 19ರುಕ್ಮಿಣಿ ಪತ್ರಧರ ದ್ವಿಜವರ ಶ್ರೇಷ್ಠರುಧರ್ಮ ಭೀಮಾರ್ಜುನ ಸಹದೇವ ನಕುಲಅಮಲ ಭಕ್ತಾಗ್ರಣಿ ವಿದುರನು ಇಂಥಸುಮಹಾ ಭಕ್ತವಿನುತವಂದ್ಯನೇ ನಮೋ ನಮೋ20ಜಯತು ದೇವಕೀತನಯ ಸತ್ಯಾ ರುಕ್ಮಿಣೀಕಾಂತಜಯತು ಜಗಜ್ಜನಾದಿಕರ್ತ ನಮೋ ನಮೋಜಯತು ವಿಧಿತಾತ ಶ್ರೀ ಪ್ರಸನ್ನ ಶ್ರೀನಿವಾಸಜಯತು ಜಯತು ದಶಪ್ರಮತಿ ಹೃತ್‍ಪದ್ಮಸ್ಥ 21-ಇತಿ ಕೃಷ್ಣಾಮೃತಸಾರ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು