ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ತಿರುವಂಗೂರು ಭೇರಿ ನಿಸ್ಸಾಳ ತಮ್ಮಟೆಗಳೆ ಗಿಡಿಮಡಿಯ ಭೋರೆಂಬ ವಾದ್ಯರವದಿ ಪ ಪರಾಕು ವಾರಿಸುವ ಪಾಠಕರ ಮೇಳದಿಂ ರಾಮನೂ ಅ.ಪ ಮುತ್ತು ನವರತ್ನ ಕೆತ್ತಿಸಿ ಬಿಗಿದಚಲ್ಲಣದ ಇತ್ತರದ ಸಮಕಟ್ಟಿನಾ ಝಲ್ಲಿಯಾ ಸುತ್ತ ಮುಖದಲಿ ಮಿನುಗುವರಳೆಲೆಯ ಢಾಳದಿಂ ದೊತ್ತಿಸಿದ ಕಡಿವಾಣದಾ ಮುಖಾರಂಬದಾ ಕತ್ತಿ ಸಿಂಗಾಡಿ ಕೆಡೆಯ ಬತ್ತಳಿಕೆ ಬಿಗಿ ದೊತ್ತಿ ಕುಣಿಕುಣಿದು ಬರುವಾ ತೇಜಿಯಾ ಅರ್ತಿಯಿಂ ರಾಮರಾವುತನೇರಿ ದೈತ್ಯವಿಪಿನಕ್ಕೆ ಪೊರಮಟ್ಟೈದಿದಾ ರಾಮನೂ 1 ಸುರರು ಫೌಜಾಗಿ ತೋರಲು ಸೋಮಸೂರಿಯರು ವರಛತ್ರವನುವಾಗಿ ಪಿಡಿದು ನಿಲಲೂ ಸರಸಿಜೋದ್ಭವನು ಸಾರಥಿಯಾಗಿ ನಡೆಸುತಿರೆ ವರರಥವ ಸಿಂಗರಸಿ ಹರಿ ಸ್ಮರಿಸಿ ತನ್ನಾ ವರವಾಹನವನೇರಿ ಚರಿಸುತುತ್ಸಾಹದಿಂ ತ್ವರದಿಂದ ನಡೆಯುತಿರಲೂ ಖರದೂಷಣ ತ್ರಿಶಿರ ಮಾರೀಚ ಮೃಗಕುಲವ ತರಿದು ಬೇಟೆಯನಾಡಿದಾ ರಾಮನೂ 2 ದಶಶಿರ ಕುಂಭಕರ್ಣ ಮೊದಲಾಗಿದ್ದ ಖ ಳರ ಖಂಡಿಸಿ ಕದನದಲ್ಲಿ ಗೆಲಿದೂ ಮರೆಹೊಕ್ಕ ವೀರವೈಷ್ಣವ ವಿಭೀಷಣನೆಂಬ ಶರಣನನು ಪರಿಪಾಲಿಸಿ ಜಗದೊಳೂ ಪರಿವುತಿಹ ಕಾವೇರಿ ಉತ್ತರದ ಭಾಗದಲಿ ಮೆರೆವ ತಿರುವಂಗೂರಿನಲೀ ಸುಖದಲೀ ಸ್ಮರರೂಪ ವೈಕುಂಠರಾಮ ಬೇಟೆಯನಾಡಿ ಪರಮ ಹರುಷದಿ ಬಂದು ನಿಂದ ಸಂಭ್ರಮದಿ 3
--------------
ಬೇಲೂರು ವೈಕುಂಠದಾಸರು
ಆ) ಶ್ರೀಕೃಷ್ಣ ಲೀಲೆ 25 ಇಂದಿನಿರುಳಿನ ಕನಸಿನಲ್ಲಿ ಬಂದುಮುಂದೆ ನಿಂದುದ ಕಂಡೆನೆ ಗೋವಳನ ಪ ಅಣಿಮುತ್ತಿನ ಪೆಂಡೆಯದ ಕಾಲಂದುಗೆ ಗೆಜ್ಜೆಜಾಣನಂಗಜನ ಪಿತನ ಕೈಯ ವೇಣುಮಾಣಿಕ್ಯದ ಕಂಕಣ ಹೊನ್ನುಡಿ ಘಂಟೆವಾಣಿಯ ರಚನೆ ಎಲ್ಲಿಯು ಈ ಗೋವಳನಾ1 ಮೊಲ್ಲೆ ಮಲ್ಲಿಗೆ ಚೊಲ್ಲೆಯದ ಚಲ್ಲಣದ ಶಿರ-ದಲ್ಲಿ ಗುಂಜಿಯ ದಂಡೆಯ ಚೆಲ್ವ ಕಂಗಳಗೋಪಿಯರ ಮೇಲೆ ಕಡೆಗಣ್ಣಚೆಲ್ಲುತೊಯ್ಯನೆ ನಡೆದ ಗೋವಳನ 2 ತಿತ್ತಿ ಮೌರಿ ಕೊಂಬು ಸುತ್ತಿದ ಕತ್ತ ತಾವಿಲಿತುತ್ತುರೂ ತೂರು ತೂರೆನುತಚಿತ್ತವ ಮರುಳು ಮಾಡಿದನೆ ಪೊಂಗೊಳಲೂದಿಮೊತ್ತದ ಗೋಪಿಯರನೆಲ್ಲ ಗೋವಳನ 3 ಎಸಳು ಕಂಗಳ ಢಾಳ ಶಶಿ ನೊಸಲ ತಿಲಕಎಸೆವ ಬಿಂಬಾಧರದಪೊಸ ಮುತ್ತಿನೋಲೆ ಮೂಗುತಿ ಹೊನ್ನುಡಿ ಘಂಟೆಎಸೆವ ನೂಪುರ ಹಾಹೆಯ ಗೋವಳನ 4 ಉಂಗುಟದಲಿ ಗಂಗೆಯಂಗಾಲಲವುಂಕೆತುಂಗವಕ್ಷದ ಲಕ್ಷುಮೀಮಂಗಳ ಮಹಿಮ ಭುಜಂಗಶಯನ ಸಿರಿರಂಗವಿಠ್ಠಲ ನೆರೆದ ಗೋವÀಳನ 5
--------------
ಶ್ರೀಪಾದರಾಜರು
ಗಣೇಶ ಪ್ರಾರ್ಥನೆ ನಮ್ಮಮ್ಮ ಶಾರದೆ ಉಮಾ ಮಹೇಶ್ವರಿನಿಮ್ಮೊಳಗಿಹನ್ಯಾರಮ್ಮ ಪ ಕಮ್ಮಗೋಲನ ವೈರಿಸುತನಾದ ಸೊಂಡಿಲಹೆಮ್ಮೈಯ್ಯ ಗಣನಾಥನೆ ಅಮ್ಮಯ್ಯ ಅ ಮೋರೆ ಕಪ್ಪಿನ ಭಾವ ಮೊರದಗಲ ಕಿವಿಯುಳ್ಳಕೋರೆ ದಾಡೆಯವನ್ಯಾರಮ್ಮಮೂರು ಕಣ್ಣನ ಸುತ ಮುರಿದಿಟ್ಟ ಚಂದ್ರನಧೀರ ತಾ ಗಣನಾಥನೆ ಅಮ್ಮಯ್ಯ 1 ಉಟ್ಟ ದಟ್ಟಿಯು ಮತ್ತೆ ಬಿಗಿದುಟ್ಟ ಚಲ್ಲಣದದಿಟ್ಟ ತಾನಿವನ್ಯಾರಮ್ಮಪಟ್ಟದ ರಾಣಿ ಪಾರ್ವತಿಯ ಕುಮಾರಹೊಟ್ಟೆಯ ಗಣನಾಥನೆ ಅಮ್ಮಯ್ಯ2 ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲಭಾಷಿಗನಿವನ್ಯಾರಮ್ಮಲೇಸಾಗಿ ಸುಜನರ ಸಲಹುವ ನೆಲೆಯಾದಿಕೇಶವನ ದಾಸ ಕಾಣೆ ಅಮ್ಮಯ್ಯ 3
--------------
ಕನಕದಾಸ