ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉ) ಗುರುನಮನ ಶ್ರೀ ರಾಘವೇಂದ್ರರು ಕೋಪವೇತಕೆ ಬಂದಿತೆನ್ನೊಳು ರಾಯರೇಗುರುರಾಯರೇ ಪ ಕರುವು ತಾಯನು ನೋಡಬರಲೊಡೆಕರೆದುಕೊಳ್ಳದೆ ದೂಡಬಹುದೆಭರದಿ ದರುಶನಕೆಂದು ಧಾವಿಸೆಬರಲು ಬರಗೊಡದಂತೆ ಮಾಡಿದೆ 1 ದ್ರೋಹ ಮಾಡಿದೆನೇನು ನಿಮ್ಮೊಳುದ್ರೋಹ ಮಾಡಿದುದನ್ನು ತಿಳಿಯೆನುದ್ರೋಹಿಯಾದಡೆ ಕ್ಷಮಿಸದೆನ್ನನು ಸ್ನೇಹದಿಂದೆನ್ನೆತ್ತಿಕೊಳ್ಳದೆ 2 ಹಣದೊಳಾಕೆಯನಿಟ್ಟೆನೆಂದೊಡೆಹಣವು ಸಂಸಾರಿಗಗೆ ಬೇಡವೆಸೆಣಸಿ ಗದುಗಿನ ವೀರನಾರಾಯಣಭಕುತರ ಸಲಹದೆ 3
--------------
ವೀರನಾರಾಯಣ
(ಊ) ಗುರುನಮನ ಮುಳುಗಿ ಮೀಯೊ ಮನುಜ ಪ ದುರಿತ ಹರಿಸಿ ಸುಸ್ಥಿರ ಪದ (ಕರುಣಿಸುವಂಥ) ಅ.ಪ ಸ್ವಾರ್ಥವಾಗದಣ್ಣ || ಮುಕ್ತಿಸಂಪದಗಳ ಅರ್ತಿಯೊಳ್ ಪಡೆಯಲು 1 ಮೂರ್ಜಗಪತಿ ದಯವಿಡನಣ್ಣ || ಅರ್ಜುನ ಸಖನ ಪದಾಬ್ಜವ ಸೇರಲು 2 ಅಕ್ಷಯ ಸುಖವ ತನ್ನಿಚ್ಛೆಯೊಳ್ ಪಡೆದು ಮು-| ಮುಕ್ಷುವಾಗಿ ನಿಜ ಮೋಕ್ಷವ ಪಡೆಯಲು 3 ಸನ್ನಿಧಿ ಭಾಗ್ಯವನುಣ್ಣುತಿರುವರೆ 4 ಆದಿಮಧ್ಯಾಂತವಿಲ್ಲದ ಪದವಿಯೊಳ್ ಸ-| ದಾನಂದನಾಗಿ ವಿನೋದದೊಳಿರುವರೆ 5
--------------
ಸದಾನಂದರು
(ಎ) ಗುರುನಮನ ಶಿರಿವರನೆ ಕರುಣಾಂಬುನಿಧಿಯಮಲ ಚರಣಕಮಲವ ಬೇಡುತಿಪ್ಪರ ಪಾದಪಿಡಿವೆನು ನಾನು ಪ ಶಿರಿಲಕುಮಿ ಸರಸಿಜಭವ ಸರಸ್ವತಿ ಗುರುಪವಮಾನ ಭಾರತಿ ಮುಖ್ಯರ ವರ ಪಾದಂಗಳಿಗೆ ನಮಿಸುವೆ ಹರಿಯ ತೋರ್ಪದಕೆ 1 ಪನ್ನಗಾಶನ ಪನ್ನಗೇಂದ್ರರ ಪನ್ನಗ ವಿಭೂಷಣ ಸತಿಸುತರ ಸನ್ನುತಾಂಘ್ರಿಗಳ ಬಿಡದ್ವಿಡಿಪಿ ರಘುರನ್ನರರಪದಕೆ 2 ಗುರು ಶ್ರೀಪಾದರಾಯ ವ್ಯಾಸರ ಪುರಂದರ ವಿಜಯಾದಿ ಗುರುಗಳಿಗೊಂದಿಪೆನು ನರಸಿಂಹವಿಠಲನಂತುಪಾದ್ಯನು ದಾರಿತೋರ್ಪುದಕೆ 3
--------------
ನರಸಿಂಹವಿಠಲರು
ಇ. ಗುರುನಮನ ವಿಷ್ಣುತೀರ್ಥರೆ ಪಾಲಿಸೀ ನಿರಂತರ ಮಧ್ಯಗೇಹರ ಸುತನೆನಿಸಿರ್ದ ಗುರುವರ ಪ ಮಧ್ವಶಾಸ್ತ್ರವು ಜೀರ್ಣವಾಗುವ ಸಮಯದಿ ಬದ್ಧಾದರದಿ ಬಂದುದ್ಧರಿಸುವ ಗುರುವರ 1 ಜಾನಕೀಪತಿಯೊಳು ಲಕ್ಷುಮಣನಂತೆ 2 ವಾಲ್ಮೀಕಿಗಳ ಶಿಷ್ಯಕುಶಲವರಂತೆಯೇ ಚೆಲ್ವ ವ್ಯಾಸರು ಅನಿರುದ್ಧರು ನಿಮಗೆ 3 ಪಾಜಕ ಕ್ಷೇತ್ರದೊಳ್ಸನ್ಯಾಸಾಶ್ರಮಿಯಾಗಿ ರಾಜೇಶ ಹಯಮುಖ ಕೃಷ್ಣನರ್ಚಿಸಿದ 4
--------------
ವಿಶ್ವೇಂದ್ರತೀರ್ಥ