ಒಟ್ಟು 73 ಕಡೆಗಳಲ್ಲಿ , 8 ದಾಸರು , 71 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದಾ ನೋಡೇ - ವಿಠಲಾ ಮನೆಗೇಬಂದಾ ನೋಡೇ - ವಿಠಲಾ ಪ ನಂದನ ಕಂದನ ಯಶೋದೆಯಾನಂದ ಅರವಿಂದ ನಯನ ಗೋವಿಂದ ಮುಕುಂದನು ಅ.ಪ. ಇಂದು ಮೌಳಿಯ ಪೋಷಾ ||ತಂದೆ ಸೇವಕ ಭಕ್ತ | ನಿಂದಿರೆ ಪೇಳಲುಅಂದ ಇಟಗಿ ಮೇಲೆ | ನಿಂದ ಆನಂದದಿ 1 ತೊಂಡ ಜನರ ದೋಷ | ಆಹ |ಪಾಂಡವ ಪ್ರಿಯ ಪದ | ಬಂಡುಣಿಯೆನಿಸಿಹಪುಂಡಲೀಕನಿಗೊಲಿಯೆ | ಗೊಂಡು ಮಾನುಷ ವೇಷ 2 ಪುಂಡರೀಕಾಕ್ಷ ಶ್ರೀಶ 3 ಕಾಯ ಅಂಡ ತೊಂಡ ಪ್ರಹ್ಲಾದ ವರದದಂಡ ಕಮಂಡಲಜಿನ | ಭಂಡ ಕ್ಷತ್ರಿಯರ್ಹನನ 4 ಕಾನನ | ಕೌರವರಸು ನೀಗಿ || ಆಹಶೌಂಡನು ತ್ರಿಪುರರ | ಹೆಂಡರ ವಂಚಿಸ್ಯುದ್ದಂಡ ಹಯವನೇರಿ | ರುಂಡ ಮ್ಲೇಂಛರ ತರಿದೆ 5 ಮಕರ ಕುಂಡಲಧಾರೀ | ಶೋಭಿತ | ಪ್ರಖರ ಕಿರೀಟ ಮೌಳೀ ||ವಿಖನಸಾಂಡಾಧಿಪ | ವಿಕಸಿತ ಕೌಸ್ತುಭಪ್ರಕಟ ಕೊರಳ ಮಾಲೆ | ನಿಕಟ ಶ್ರೀವತ್ಸಕೆ 6 ಕೊರಳೊಳು ವೈಜಯಂತೀ | ರೂಪದಿ | ಶಿರಿಯೇ ಶೋಭಿತ ಕಾಂತೀ ||ಧರಸಿಹ ತುಳಸಿಯ | ಪರಿಪರಿ ವನಮಾಲೆಬೆರಳೊಳು ಉಂಗುರ | ವರ ರತ್ನ ಖಚಿತವು 7 ಗೆಜ್ಜೆ ಸರಪಳಿ ಸುಂದರ | ಸೊಂಟವು | ಗೆಜ್ಜೆ ಕಾಲಲಿ ನೂಪುರ ||ಕಜ್ಜಲ ಕಂಗಳು ಗೆಜ್ಜೆ ನಾದದಿ ಒಪ್ಪಬೊಜ್ಜೇಲಿ ಬ್ರಹ್ಮಾಂಡ | ಸಜ್ಜಗೊಳಿಸಿ ಇಹ 8 ನಕ್ರ ಹರಗೆ ಕಟಿತಟವಕ್ರ ಮನದವರ | ಸೊಕ್ಕನು ಮುರಿಯುತಅಕ್ಕರ ಭಜಿಪರ | ಸಿಕ್ಕನು ಬಿಡಿಸುವ 9 ಮಾಸ ಮಾರ್ಗಶೀರ್ಷವು | ನವಮಿ ತಿಥಿ | ಅಸಿತ ತಾರೆಯು ಚಿತ್ತವು ||ವಾಸರ ಭಾರ್ಗವ | ನಿಶಿಯೋಳ್ನಗುತ ಪ್ರ-ವೇಶಿಶಿದನು ಗೃಹ | ವಾಸವಾನುಜ ಶ್ರೀಶ 10 ಭಾವುಕರ ಪರಿಪಾಲ | ಬಂಡಿಯ | ಬೋವನಿದ್ದ ಸುಶೀಲ || ಆಹಾದೇವಾದಿ ದೇವನು | ಮಾವಿನೋದಿಯು ಗುರುಗೋವಿಂದ ವಿಠಲನು | ತೀವ್ರ ಫಲಪ್ರದ 11
--------------
ಗುರುಗೋವಿಂದವಿಠಲರು
ಅಂಕಿತನಾಮ ಪದಗಳು ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ. ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1 ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2 ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3 ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4 ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5
--------------
ಗುರುಗೋವಿಂದವಿಠಲರು
ಈ. ಯತಿವರ್ಯ ನಮನ ಮಧ್ವರಾಯರಿಗೆ ನಮೋ ನಮೋ ಗುರು ಮಧ್ವಸಂತತಿಗೆನಮೋ ನಮೋ ಪ ಸಂತತ ಶುಭವಾದೆನುತ ದಾಸಜನರಿಗೇಕ ಚಿತ್ತದಿಂದವಂದಿಸಿ ಬೇಡುವೆ ಅ.ಪ. ಕುಸುಮನಾಭರ ಸಮ ನಾಲ್ವರುಯೆಂದೆನಿಪಹಸನಾದ ಗುರುಗಳ ಸ್ಮರಿಸುತಾನ್ಯಾಯಸುಧಾಕಾರರಿಗೆ ನಮೋ ನಮೋ 1 ರಘುಕುಲನಂದನ ಸುಬ್ರಮಣ್ಯತೀರ್ಥ ಕರದಿ ಪಾಲಿತಗೆಬಿಡದೆ ಬೋಧಿಸಿದ ತಲೆಗೆ ನಮೋ ನಮೋ 2 ರಘೋತ್ತುಮಾಖ್ಯರ ಕಾರುಣ್ಯಪರೆಂದೆನಿಪರಿಗೆಸೂರಿತಾರೇಶ ಜಾತ ವಿಜೇಂದ್ರತನಯನೆನಿಪಶ್ರೀ ಸುಧೀಂದ್ರ ಪೋಷಿತ ಸದ್ಗುರು ರಾಘವೇಂದ್ರತಾತಗೆನಮೋ ನಮೋ 3 ಗುರುಪುರಂದರ ದಾಸರ ಸುಜಾತರ್ಗೆ ನಮೋ ವೈಕುಂಠದಾಸರಿಗೆ ನಮೋ ನಮೋ ಚನ್ನ ಚಿಕ್ಕಬದರಿನಿಲಯನ್ನ ಕಂಡರ್ಗೆ ಕರುಣಾಪಾತ್ರರುಯೆನಿಪವರದಗುರುಗೋಪಾಲ ಸು ಜಗನ್ನಾಥರಾಯರಿಗೆನಮೋ ನಮೋ 4 ತತ್ವಮಸಿ ವ್ಯಾಸ ಶ್ರೀಧರ ಶ್ರೀಗುರು ಶ್ರೀಪತಿ ಪ್ರಾಣೇಶಗುರು ವಿಜಯ ರಾಮಚಂದ್ರದಾಸರಿಗೆ ನಮೋ ನಮೋಬಾದರಾಯಣಗುರು ವೆಂಕಟ ಶ್ರೀನಿವಾಸ ಜಯಜಯೇಶತಂದೆವರದಗೋಪಾಲವಿಠಲನ ದಾಸರಿಗೆ ನಮೋ ನಮೋ5
--------------
ತಂದೆವರದಗೋಪಾಲವಿಠಲರು
ಕಾಗಿಣಿ ತೀರದ ಯೋಗಿವರ್ಯ ಗುರುವೇ | ನಿನ್ನಲಿ ಮೊರೆಯಿಡುವೆ ಪ ಭೋಗಿಶಯನ ಗುಣ ಯೋಗದಿಂದ ಭಜಿಪಾ | ಹರಿ ಪದಾಬ್ಜ ಮಧುಪಾ ಅ.ಪ. ಸಿಂಗರವೆನಿಸಿದ ಮಂಗಳವೇಡಿಯಲಿ |ನೀನುದಿಸುತಲಲ್ಲೀಸಿಂಗರಿಸಿಹ ಬಲು ರಂಗ ಕುದುರೆ ನೇರಿ | ರಾವುತರೊಡಸೇರೀ ||ಕಂಗೆಡುತಲಿ ಬಲು ತುಂಗೆ ಕಾಗಿಣೀಯಾ | ಸಾರುತ ತನಹಯಾ ಹಿಂಗದೆ ನದಿಯಲಿ ಮಂಗಳ ಹಯವೇರಿ | ನೀರ್ಗುಡಿದ ಬಾಯಾರಿ 1 ಆಚೆ ತಟದಿ ಅಕ್ಷೋಭ್ಯಮುನಿಪ ನೋಡಿ | ಸ್ವಪ್ನದರ್ಥ ಮಾಡೀಸೂಚಿಸಿದನು ತವ ಶಿಷ್ಯನ ಕೈಯಲ್ಲೀ | ಬಂದ ಸಾದಿ ಅಲ್ಲೀ ||ಯಾಚಿಸಿದನು ಮುನಿ ಪದಕೇ ಬಾಗೀ | ತುರ್ಯಾಶ್ರಮಕಾಗೀಖೇಚರ ವಹನಾಜ್ಞೆಯೆಂದು ತ್ವರ್ಯಾ | ಮಾಡ್ದ ಸಾದಿ ಯತಿಯಾ 2 ತಂದೆ ಬಹು ಕೋಪದಿಂದ ಬಂದೂ | ಯತಿಯ ನಿಂದಿಸ್ಯಂದೂತಂದು ಮಗನ ಏಕಾಂತ ಗೃಹಕೆ ಆಗ | ಸತಿಯನು ಕೂಡಿಸಿ ವೇಗ ||ಅಂದು ಕಂಡು ಸರ್ಪಾಕೃತಿ ಪತಿಯಾ | ಚೀರಿದಳ್ ಬಲ್ಪರಿಯಾತಂದೆ ಕೊಂಡು ಮಗನರ್ಪಿಸಿದನುಯತಿಗೇ | ಕ್ಷಮೆ ಬೇಡಿದನಾಗೇ 3 ತ್ರ್ಯಕ್ಷನಂಶ ಅಕ್ಷೋಭ್ಯ ಮುನಿಪ ಆಗ | ಸನ್ಯಾಸ ವೇಗಭಿಕ್ಷುಕ ಮಧ್ವರ ಗ್ರಂಥ ಪೊತ್ತ ವೃಷಭ | ಎನುತೀತನ ಪ್ರಭಾ ||ಲಕ್ಷಿಸಿವರ ಕರೆದನೂ ನಾಮಾನ್ವರ್ಥ | ಯತಿಯನೆ ಜಯತೀರ್ಥಕುಕ್ಷಿಲಿ ಮೆರೆವರಗೋಳ ಗುಹೆಯು ಅಲ್ಲೀ | ರಚಿಸಿದ ಟೀಕೆಗಳಲ್ಲೀ4 ಮಧ್ವಭಾಷ್ಯಕೇ ರಚಿತ ಟೀಕಾ ಗ್ರಂಥಾ | ನೋಡಿದ ಮುನಿ ಮತ್ತವಿದ್ಯಾರಣ್ಯರ ಗೆದ್ದ ಆರ್ಯ ಧೀರಾ | ಅಕ್ಷೋಭ್ಯರ ಕುವರ ||ಅದ್ವೈತಾದಿಗಳೇಕವಿಂಶ ಪಂಥ | ಗೆಲ್ಲುತ ಸುಧೆ ಗ್ರಂಥಅದ್ವಿತೀಯ ಗುರುಗೋವಿಂದ ವಿಠ್ಠಲಗೇ | ಅರ್ಪಿಸಿದನು ಆಗೇ 5
--------------
ಗುರುಗೋವಿಂದವಿಠಲರು
ಕಾಯೊ ಕಾಯೋ | ಗುರುವರ್ಯ | ಕಾಯೊ ಕಾಯೋ ಪ ಕಾಯೊ ಕಾಯೊ ಗುರುವರ್ಯ ಪರಮ ಪ್ರಿಯಜೀಯ ನಿನ್ನಯ ಪಾದಕೆರಗುವೆನಯ್ಯಾ ಅ.ಪ. ಒಂದರಿತವನಲ್ಲ | ಕಂದನು ಎಣಿಸದೆಬಂದು ಸಲಹೊ | ತಂದೆ ಮುದ್ದು ಮೋಹನ್ನ 1 ಹಿಂದಿನ ಸುಕೃತದಿ | ಬಂದು ಜನಿಸಿದೆನಂದ ಮುನಿಯ ಮತ | ಸಿಂಧುವಿನಲ್ಲಿ 2 ಇಂದಾದರು ತವ | ದ್ವಂದ್ವಪದವ ಮನಮಂದಿರದಲಿ ತೋರಿ | ದಂದುಗ ಬಿಡಿಸೋ 3 ಎಂದಾಗುದೊ ತಂದೆ | ಇಂದಿರೇಶ ಪದದ್ವಂದ್ವ ಸಂದರ್ಶನ | ಸಂಧಿಸೊ ಬೇಗನೆ 4 ತಂದೆ ನಿನ್ನಲಿ ಗುರುಗೋ | ವಿಂದ ವಿಠಲನಅಂದ ಮೂರುತಿಯನು | ಛಂದದಿ ತೋರೊ5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕೊಡುಮತಿ ದಿವ್ಯಮತಿ ಭಾರತೀ ಪ ಪಾದ | ಬಿಡದೆ ಭಜಿಪ ಮತಿಅ.ಪ. ಅಜ್ಞಾನ ತಮದೊಳು | ಪ್ರಜ್ಞೆ ರಹಿತನಾದೆಸುಜ್ಞಾನ ಕರುಣಿಸೀ | ತಜ್ಞನೆನಿಸೆ ತಾಯೇ 1 ಮಂದ ಜನರ ಸೇರಿಕುಂದು ನೋಡದೆ ಕಾಯೇ | ಗಂಧವಾಹನ ಜಾಯೇ 2 ಕೋವಿದರೊಡನಾಡೀ | ಕಾವ ಕರುಣಿ ಗುರುಗೋವಿಂದ ವಿಠಲನ | ಭಾವದಿ ನೋಡುವ 3
--------------
ಗುರುಗೋವಿಂದವಿಠಲರು
ಗಜಮುಖ ಗಣನಾಥಾ | ಬೇಡುವೆಸುಜನರ ಪೊರೆ ಎಂದೂ ಪ ಅಜನಯ್ಯನು ಶ್ರೀರಾಮನು ನಿನ್ನನುಪೂಜಿಸಿ ಪ್ರಥಮದಿ ಜಗಕೆ ತೋರಿದನುಅ.ಪ. ದಶಮುಖ ರಾವಣನು ನಿನ್ನಹಸನಾಗಿ ಪೂಜಿಸದೇ |ವಶನಾದ ಮರಣಕೆ ರಣರಂಗದೊಳುಬಿಸಜ ಸಂಭವವರ ಬಹುವಾಗಿದ್ದರೂ 1 ಯಮಸುತ ಮೊದಲಾಗಿ ನಿನ್ನನಮಿಸಲು ಅಧ್ವರದೀ |ಅಮಮ ಪಾಪಾತ್ಮಕರ ಮಿತರಸವರುತಸ್ವಾಮಿ ಎನಿಸಿದನು ಅಪಾರ ರಾಜ್ಯಕೆ 2 ಗುರುಗೋವಿಂದ ವಿಠಲನಾ | ಕರುಣಭರಣವಮಿತ ಪಡೆದಾ |ವರದಾಯಕ ವಿಘ್ನವ ಕಳೆಯುತಅರವಿದೂರ ಪದರಜವನೆ ಕಾಣಿಸೋ 3
--------------
ಗುರುಗೋವಿಂದವಿಠಲರು
ಗುರವೆ ಪೊರೆಯೊ ಯನ್ನ | ಆವಗುಣಮರೆದು ರಾಘವೇಂದ್ರಾ ಪ ನೆರೆನಂಬಿದರ ಸುರತರುವೇ ಹೇಪುರಟ ಕಶಿಪುಜ ಗರುಡವಹನ ಪ್ರೀಯ ಅ.ಪ. ಸುಜನ ವತ್ಸಲ | ಗೆಲುವ ಕಾಣೆನೊ ಕರ್ಮನಿರ್ವಹದಿಜಲಜನಾಭನ ಚರಣ ಪುಷ್ಕರ | ಸುಲಭ ಷಟ್ಟದ ಸೆನಿಸೊ ಗುರುವರ 1 ಯತಿಕುಲ ಸಾರ್ವಭೌಮ | ನಿಮ್ಮಯ ನಾಮಾಮೃತವನುಣಿಸಲು ನಿಸ್ಸೀಮಾ ||ಪತಿತ ಪಾವನ ಹರಿಯ | ಸತತದಿ ನುತಿಸುವಮತಿಯಿತ್ತು ಪಾಲಿಸೊ | ಶತಕ್ರತು ಪಿತ ಪಿತನೆ ||ರತಿಪತಿಯ ಪತನೆನಿಸಿದಾತನ | ನತಿಸಿ ನುತಿಸುತ ಕರೆಯುತಲಿ ಗತಿ ಪ್ರದಾಯಕ ಹರಿಯ ವ್ಯಾಪ್ತಿಯ | ಪಿತಗೆ ತೋರಿದ ಅತುಳ ಮಹಿಮಾ 2 ಮಂತ್ರ ನಿಕೇತನನೆ ಯತಿಕುಲರನ್ನ ಮಂತ್ರಾರ್ಥ ರಚಿಸಿದನೇ ||ಗ್ರಂಥೀಯ ಹರಿಸೂವ | ತಂತ್ರವ ತೋರೋ ಅತಂತ್ರವಾಗಿದೆಯನ್ನ | ಮಂತ್ರ ಸಾಧನವೂ || ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ | ತಂತ್ರ ಗುರುಗೋವಿಂದ ವಿಠಲನ ಅಂತರಂಗದಿ ತೋರಿ ಸಲಹೋ | ಕ್ರಾಂತನಾಗುವೆ ನಿಮ್ಮ ಪದಕೇ3
--------------
ಗುರುಗೋವಿಂದವಿಠಲರು
ಗುರುರಾಯರ ನಂಬಿರೋ | ರಾಘವೇಂದ್ರಗುರುರಾಯರ ನಂಬಿರೋ ಪ ದುರಿತ ದುಷ್ಕ್ರತ ಹರಿಸಿಪುರುಷಾರ್ಥ ಪರಮವ ಕರಗತ ಕೈಗೊಳ್ಳಿ ಅ.ಪ. ಪರಿಮಳೇತ್ಯಾದಿ ಸಂದ್ಗ್ರಂಥ | ವಿರಚಿಸಿವರಮೋಕ್ಷ ಪ್ರದವೆನಿಸುವಂಥ |ಎರಡೆರಡ್ಹತ್ತು ಮತ್ತೆ | ಎರಡೈದು ಗ್ರಂಥವಧರಣಿ ಸುರರಿಗಿತ್ತು | ಕರುಣವ ತೋರಿದ 1 ರಾಮಕೃಷ್ಣ ನರಹರೀ | ವೇದವ್ಯಾಸಮಾಮನೋಹರ ವೃಂದಾವನದಿವಾಮಾಂಗ ಎನಿಸೀಹ | ಶ್ರೀಮಹಿಳೆಸಹಿತಾಗಿಕಾಮಿತಾರ್ಥದ ಹರಿ | ನೇಮದಿ ನೆಲಸೀಹ 2 ಕೂಸೆರಡರ ವಯದೀ | ಮಂತ್ರಾಲಯದೇಶಕೆ ಪೋಗಿ ಮುದದೀ |ಲೇಸು ಸೇವೆಯ ಗೈಯ್ಯೆ | ಕಾಸರೋಗವನೀಗಿಮೇಶ ಗುರುಗೋವಿಂದ | ದಾಸನ್ನಾಗಿಸಿದ 3
--------------
ಗುರುಗೋವಿಂದವಿಠಲರು
ಗುರುಸಂತತಿಗೆ ನಮೊ ನಮೊ ಶ್ರೀ ಹರಿಶರಣರಿಗೆ ನಮೋ ನಮೋ ಪ ಧರಣೀಸುರರಿಗೆ ನಮೋ ನಮೋ ಅ.ಪ ವಿಜಯರಾಮದಾಸಗುರುವೆ ನಮೋ ನಮ ಭಜಕಜನರಸುರತರುವೆ ನಮೋ ವೃಜಿನ ಕಳೆವ ಭಾಗ್ಯನಿಧಿದಾಸ ನಮೋ ವಂದೇ ಸುಪ್ರೇಮದಾಸ ನಮೋ 1 ತಿರುಮಲಾಖ್ಯದಾಸರಿಗೆ ನಮೋ ನಮ ಗುರುಗೋಪಾಲರಾಯರಿಗೆ ನಮೋ ವರ ಭಾಗಣ ವಿಜಯರಾಯರಿಗೆ ನಮೋ ಪುರಂದರಾಖ್ಯ ಸುರಮುನಿಗೆ ನಮೋ 2 ವ್ಯಾಸಾಭಿಧಮೌನೀಶನಮೋ | ಹರಿ ದಾಸಶ್ರೀಪಾದರಾಯರಿಗೆ ನಮೋ ಭೂಸುರ ಪ್ರಿಯಹನುಮತೇ ನಮೋ ಸೀತೇಶ ಶ್ರೀಗುರುರಾಮ ವಿಠಲ ನಮೋ 3
--------------
ಗುರುರಾಮವಿಠಲ
ಚಿಂತಿಸೋ - ಶ್ರಿಹರಿಯ ನೀ ಚಿಂತಿಸೋ ಪ ಚಿಂತಿಸೊ ನೀ ವೈಶ್ವಾನರನ | ಹೃದಯದಂತರ ದೊಳಗಿರುವನ | ಆಹಸಂತತ ಜೀವರು ಭುಂಜಿಪಗಳನೆಲ್ಲಮಂಥಿಸಿ ಜಠರದಿ ಹಂಚಿಪ ಹರಿಯನುಅ.ಪ. ಅನಿರುದ್ಧ 1 ಕುಕ್ಷಿಯೊಳಗೆ ಸುರಮುಖನು | ಅವದಕ್ಷಿಣಾಭಿಧ ಪಾವಕನು | ಅಲ್ಲಿದಕ್ಷನು ವ್ಯಾನ ಮಾರುತನು | ಅಗ್ನಿದಕ್ಷಿಣ ವ್ಯಾನ ಚಂದ್ರಮನು | ಆಹಭಕ್ಷಭೋಜ್ಯಂಗಳ | ಕೊಡಲು ಈ ಪರಿಯಿಂದಪಕ್ಷಿವಾಹನ ವ್ಯಾನ | ಪ್ರದ್ಯುಮ್ನ ಪೊರೆವನು 2 ಪರಿ | ಅನ್ನವನರ್ಪಿಸೆಮುದದೊಳಪಾನಾತ್ಮ | ಸಂಕಷ್ರ್ಣ ಪಾಲಿಪ 3 ಪರಿ ಯಜಿಪರ 4 ಪರಿ ಇತ್ತುದನು 5 ಸರ್ವ ಸದ್ಗುಣ ಪೂರ್ಣ ವೈಶ್ವಾ | ನಾಶವಿರಹಿತ ನರನೆಂದು ಮೆರೆವಾ | ವೈಶ್ವಾನರನೆಂದು ತಾನು ಕರೆಸುವಾ | ಸರ್ವವರನೆನಿಸಿ ಅಗ್ನಿ ಎನಿಸುವಾ | ಆಹವರ ಪಂಚ ಪ್ರಾಣಾಖ್ಯ ಯಜ್ಞಾಭಿಧನು ವಾಯುಸುರ ಮೊಗಸ್ಥಿತ ಹರಿಯನ್ಯಜಿಪ ನೀ ಪರಿಯೆಂದು 6 ಮರುತ ಪಂಚಾತ್ಮಕ ಅನಿಲಾ | ಜೀವವರರಿಗಾಗಿ ಇತ್ತ ಸಕಲಾ | ಭೋಜ್ಯಹರಿಯ ಪಂಚರೂಪ ಅನಿಲಾ | ಕೊಂಡುಪರಿಪಾಲಿಪನೆಂಬ ಸೊಲ್ಲಾ | ಆಹಪರಿಪರಿ ಚಿಂತಿಸೆ ವೈಶ್ವಾನರ | ಗುರುಗೋವಿಂದ ವಿಠ್ಠಲ ಸಲಹದೆ ಬಿಡನೆಂದು 7
--------------
ಗುರುಗೋವಿಂದವಿಠಲರು
ಜ್ಞಾನಪ್ರದ ನರಸಿಂಹ ವಿಠಲ ನೀ ಸಲಹೊ ಪ ಧೇನು ವತ್ಸದ ಧ್ವನಿಗೆ ತಾನೇವೆ ಬರುವಂತೆ ಅ.ಪ. ಕರ್ಮ ಪೂರ್ವಾರ್ಜಿತವ ನಿರ್ಮಲವ ಗೊಳಿಸುತ್ತಭರ್ಮ ಗರ್ಭನ ಜನಕ ಪೇರ್ಮೆಯಲಿ ಇವನಧರ್ಮ ಮಾರ್ಗದಿ ನಡೆಸು ಸುಜ್ಞಾನ ಮತಿಯಿತ್ತುಕರ್ಮನಾಮಕ ಹರಿಯೆ ಶರಣಜನ ಧೊರೆಯೆ 1 ಹರಿಯು ಸರ್ವೋತ್ತಮನು ಶಿರಿಯು ಆತನರಾಣಿಗುರು ವಾಯು ಸುರರೆಲ್ಲ ಹರಿಭೃತ್ಯರೆಂಬವರಮತಿಯನಿತ್ತವಗೆ ಸಂಸ್ಕøತಿಯ ಕ್ಲೇಶಗಳಪರಿಹರಿಸಿ ಪಾಲಿಪುದು ಪರಮ ಕರುಣಿಕಾ 2 ಪತಿ ಇರುವೆ ಮೂಕ ಪುರುಷರ ನೀನು ವಾಕ್ಪತಿಯ ಮಾಳ್ಪೆನಾಕೇಳ್ಪುದರಿದೇನೊ ಪಂಚ ಮುಖ ಭವವಂದ್ಯತೋಕನಿವ ಶರಣಗಿಹ ವ್ಯಾಕುಲವ ಕಳೆಯೋ 3 ಮಗುವಿನೊಚನವ ಕೇಳಿ ಜಿಗಿವೆ ಕಂಬದಲಿಂದನಗೆ ಮೊಗನೆ ತರಳೆಯಾ ಹಗರಣವ ಕಳೆದೇಖಗವರಧ್ವಜ ನಿನ್ನ ಬಗೆಬಗೆಯ ಲೀಲೆಗಳಮಿಗಿಲಾಗಿ ತೋರಿವಗೆ ನಗಧರನೆ ಹರಿಯೇ 4 ನಿತ್ಯತವ ಸ್ಮøತಿಯಿತ್ತು ಭೃತ್ಯನತಿ ಕಷ್ಟಗಳಕಿತ್ತೊಗೆದು ಮಧ್ವಮತ ತತ್ವ ತಿಳಿಸುತ್ತಾಗುಪ್ತ ಮಹಿಮನೆ ಗುರುಗೋವಿಂದ ವಿಠ್ಠಲನೆಭಕ್ತನುದ್ಧರಿಸೆಂದು ಪ್ರಾರ್ಥಿಸುವೆ ನಿನ್ನಾ 5
--------------
ಗುರುಗೋವಿಂದವಿಠಲರು
ತಂದೆ ಮುದ್ದು ಮೋಹನಾ | ನಿನ್ | ಅಂದ ಪಾದವ ಭಜಿಸುವೆ ಪ ನಂದ ಕಂದನ ತಂದು ತೋರಿಸಿ | ಬಂಧನವ ಪರಿಹರಿಸು ನೀ ಅ.ಪ. ವತ್ಸರ | ತರಳನಾಗಿರುವಾಗಲೇ 1 ಹರಿಯ ವ್ಯಾಪ್ತಿಯ ಕಂಡು ನೀ | ಗಿರಿ ಗುಹೇಯಲಿ ಚರಿಸುತಾತೊರೆದು ಮಮತೆಯ ಚರಿಸಿದೇ | ಕರೆಕರೆಯ ಸಂಸಾರದೀ 2 ತಪವನಾಚರಿಸುತ್ತಲೀ | ವಿಪಿನವಸಿ ಸಂಚರಿಸುತಾವಿಪವರಸ ಪೆಗಲೇರಿದವನ್ನ | ಅಪರೋಕ್ಷದಿ ಕಾಣುತಾ 3 ನಡುನಡುವೆ ಮನೆಗೈದುತಾ | ಮಡದಿಯನೆ ತಕ್ಕೈಸುತಾ ಎಡ ಬಲದ ಒಡನಾಡಿ ಜನ ಕಡು | ಮೋಹಬಡುವಂತಾಡುತಾ 4 ಇಭಗಿರೀ ರಥೋತ್ಸವಕ್ಕೇ | ಪ್ರಭು ಮುದ್ದು ಮೋಹನ ದಾಸರುವಿಭವದಿಂದಲಿ ಬಂದು ನಿಮಗೆ | ಶುಭದ ಅಂಕಿತವಿತ್ತರು 5 ಶಾಂತ ಚಿತ್ತದಿ ಜಪಿಸುತಾ | ಮಂತ್ರ ಸಿದ್ಧಿಯ ಪಡೆಯುತಾ ಭ್ರಾಂತ ಜನರನು ಭಕ್ತಿ ಪಂಥದಿ | ನಿಂತು ನಲಿವಂತೆ ಮಾಡುತಾ6 ಸಾಹಸ್ರಾರಂಕಿತವನಿತ್ತೂ | ಮಾಹಿತಾಂಘ್ರಿಯ ಭಜಿಸಿದಾ ಸಾಹಸಿಗ ಶೇಷಾಂಶ ಭಕ್ತರ | ಮೋಹ ಕಳೆದುದ್ಧರಿಸಿದಾ 7 ನಕ್ರಹರಗತಿ ಪ್ರೀತನಾ | ವಿಕ್ರಮದಿ ಸಂಸ್ಥಾಪಿಸೀಚಕ್ರಿಪುರಿಗಾ ರಾಮನವಮಿಲಿ | ವಿಕ್ರಮದಿ ನೀ ಹೊರಡುತಾ 8 ಅಹಿ ಭವ ವಂದ್ಯನಾ | ಗುರುಗೋವಿಂದ ವಿಠಲನನಿರುತ ಭಜಿಸುವ ಜ್ಞಾನವಾ | ಕರುಣಿಸೀ ಸಲಹೆನ್ನನು 9
--------------
ಗುರುಗೋವಿಂದವಿಠಲರು
ದಾಮೋದರ ವಿಠಲನೆ | ಸಲಹ ಬೇಕಿವಳಾ ಪ ಸನ್ನುತ ಹರಿಯೆ | ಸ್ವಾಮಿ ಪಾಲಿಪುದೊ ಅ.ಪ. ತರಳೆ ದ್ರೌಪತಿ ವರದ | ಕರಿಯು ಮೊರೆಯಿಡೆ ಕಾಯ್ದವರ ಅಹಲ್ಯೆಯ ಪೊರೆದ | ತರಳ ಧ್ರುವ ವರದಕರುಣದಿಂದಲಿ ಮನದ | ಪರಿಪರಿಯ ಸತ್ಕಾಮಗರೆದು ಪಾಲಿಪುದಿವಳ | ಶಿರಿ ರಾಮಚಂದ್ರಾ 1 ಪತಿ ಸೇವೆ ಪರಳೆನಿಸು | ಗತಿಗೋತ್ರ ನೀನೆನಿಸುಸತತ ನಿನ್ನಯ ನಾಮ | ಸ್ಮøತಿಗೊದಗಿಸೊತತುವೇಶರೊಲಿಮೆಯಲಿ | ಸತತ ಗೈಯ್ಯುವ ಕಾರ್ಯವಿತತವಾಗಲಿ ನಿನ್ನ | ಹಿತಸೇವೆ ಎಂದೂ 2 ಕಾಲ ಕಾಲಕೆ ನಿನ್ನಓಲಯಿಪ ಭಾಗ್ಯದಲಿ | ಕೀಲಿಪುದು ಮನವಾ 3 ಮೂರೆರಡು ಭೇದಗಳ | ತಾರತಮ್ಯವನರುಹಿತೋರೊ ತವರೂಪ ಹೃ | ದ್ವಾರಿಜದನಡುವೇಕಾರುಣಿಕ ನೀನೆಂದು | ಸಾರುತಿವೆ ವೇದಗಳುಮಾರಾರಿ ಸಖ ನಿನ್ನ | ಕಾರುಣ್ಯ ತೋರೋ 4 ಪಾವಮಾನಿಯ ಪ್ರೀಯ | ಭಾವದಲಿ ಪ್ರಾರ್ಥಿಸಲುಪೂವನಿತ್ತಭಯವನು | ಓದಿ ಪಾಲಿಸಿಹೇಕೇವಲಾ ನಂದಮಯ | ಗೋವಿದಾಂಪತಿಯೆ ಗುರುಗೋವಿಂದ ವಿಠ್ಠಲನೆ | ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ದಾಸರಾಯರ ಪಾಡಿರೋ | ರಂಗನೊಲಿದ ಶ್ರೀ |ದಾಸರಾಯರ ಪಾಡಿರೋ ಪ ದಾಸರಾಯರ ಪಾಡಿ | ದೋಷಗಳೀಡಾಡಿಶಾಶ್ವತ ಲೋಕಗ | ಳಾಶಿಪ ಜನರೆಲ್ಲಾ ಅ.ಪ. ಮಾನವಿ ಕ್ಷೇತ್ರಸ್ಥಿತನೂ | ಘನಕರ್ಣೀಕ ನರಸಪ್ಪನೆಂಬ ದ್ವಿಜನೂ |ಜ್ಞಾನಿ ತಿಮ್ಮಣ್ಣನ ಸತಿಸಹಿತ ಸೇವಿಸೆಮಾನ್ಯ ಸಹ್ಲಾದ ತಾ ಸುತನಾಗಿ ಜನಿಸಿದ 1 ಶಾಲಿವಾಹನ ಶಕವೂ | ಮತ್ತೇಗಾಳಿಗಣಯುತ ಹತ್ತಾರ್ನೂರು |ಕೀಲಕವತ್ಸರ ಶುಕ್ಲ ಶ್ರಾವಣದಲ್ಲಿಶೀಲ ವೆರಡೆನೆ ದಿನ ಜನಿಸಿಹರನ್ನಾ 2 ಈತನು ಹರಿಭಕ್ತನೊ | ಪ್ರಹ್ಲಾದಗೆಪ್ರೀತಿಯ ಸೋದರನೋಧಾತ ಜನಕ ಹರಿ ಮಾತಿನಿಂದಲಿ ಇವಖ್ಯಾತನಾಗಿ ಶ್ರೀನಿವಾಸನೆಂದೆನಿಸಿದ 3 ಆದ ಸಕಾಲದಿ ದ್ವಿಜನು | ಸದ್‍ಬೋಧಿತ ವರದೇಂದ್ರರಿಂ |ಭೇದ ಮತದೊಳದ್ವಿತೀಯ ನೆಂದೆನಿಸುತ್ತವಾದಿ ನಿಗ್ರಹದೊಳತ್ಯಾದರವನೆ ಪೊತ್ತ4 ಒದಗಲುದ್ಧುøತ ಕಾಲವೂ | ಪ್ರಾಪ್ತಸಾಧು ವಿಜಯ ದಾಸರು | ಮುದದಿ ನರ್ತವಗೈದು ಕೀರ್ತನೆ ಪಾಡಲುಹದಗೆಟ್ಟನಿವನೆಂದು ಬಿರುನುಡಿ ನುಡಿದಂಥಾ5 ಒದಗಲುದರ ರೋಗವೂ | ಮುಂದೆಹದನ ಕಾಣದೆ ತಪಿಸಾಲು |ಮೋದ ತೀರ್ಥರ ರೂಪ ಆದರದಲಿ ಭಜಿಸಿಸಾಧು ಸೋತ್ತಮ ದ್ರೋಹ ಕಳವ ಮಾರ್ಗವ ತಿಳಿದ6 ವಿಜಯ ದಾಸರ ಪಾದವಾ | ತಮ್ಮಯನಿಜ ಶಿರದೊಳು ಪೊತ್ತು ಮೆರೆವಾ |ನಿಜ ಶಿಷ್ಯ ಗೋಪಾಲದಾಸರಲ್ಲಿಗೆ ಬಂದುಭಜಿಸೆ ಅವರ ಆಯು ನಾಲ್ವತ್ತು ಪಡೆದಂಥ 7 ಮಂತ್ರಿತ ಭಕ್ಕರಿಯಾ | ಭುಜಿಸೆ ದೇಹಯಂತ್ರ ಸಾಧನ ಕೊದಗಲೂ |ಮಂತ್ರೋಪದೇಶವ ಗೊಳ್ಳುತ ಮುದದಿಂದೆಯಂತ್ರೋದ್ಧಾರಕ ಪ್ರಿಯ ರಂಗನ ಒಲಿಸಿದ 8 ಇಂದು ಭಾಗದಿ ಸ್ನಾನವೂ | ಮಾಡುತಲಿರೆಸ್ಕಂಧಾ ರೋಹಿತ ಶಿಲೆಯಸ್ಥ |ಇಂದಿರಾ ರಮಣ ಶ್ರೀ ಜಗನ್ನಾಥ ವಿಠಲನಸುಂದರಾಂಕಿತವನ್ನು ಧರಿಸಿದ ಶಿರದಲ್ಲಿ 9 ಪಾಂಡುರಂಗನ ಕಾಣುತ | ತನ್ನಯದಿಂಡುಗೆಡಹಿದ ಆಕ್ಷಣಾ |ಅಂಡಜಾಧಿಪನುದ್ದುಂಡ ದೇವರ ದೇವಪುಂಡರೀಕಾಕ್ಷನ ಪಾದಕೆ ಶರಣೆಂದ 10 ಸ್ವಾದಿ ಕ್ಷೇತ್ರಕ್ಕ ಪೋಗೀ | ಪೂಜ್ಯರಾದವಾದಿರಾಜರ ಪೂಜಿಸೀ |ಸಾಧು ವರ್ಯರ ಆಜ್ಞಾಧಾರಕರಿವರಾಗಿಬುಧರಿಗೆ ಹರಿಕಥಾ ಸುಧೆಯ ಸಾರವನಿತ್ತ 11 ಪದ ಸುಳಾದಿಗಳಿಂದಲಿ | ಹರಿಯ ಪಾದಸದ್ವನಜವ ಸ್ತುತಿಸುತಲೀ |ಹೃದಯ ಸದ್ಮದಿ ತದ್ಧಿಮಿ ಧಿಮಿ ಧಿಮಿಕೆಂದುವಿಧಿಪಿತ ಹರಿಯನ್ನ ಕುಣಿಸಿ ಮೋದಿಸಿದಂಥ 12 ಸುವತ್ಸರವು ಶುಕ್ಲದೀ | ಸಿತಭಾದ್ರನವಮಿ ತಾರೆಯು ಮೂಲದೀ |ರವಿಯ ವಾರವು ಸಂದ ಶುಭದಿನದಲಿ ಗುರುಗೋವಿಂದ ವಿಠಲನ ಸೇರಿ ತಾಮೆರೆದಂಥ 13
--------------
ಗುರುಗೋವಿಂದವಿಠಲರು