ಒಟ್ಟು 12 ಕಡೆಗಳಲ್ಲಿ , 8 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(3) ಶ್ರೀಕೃಷ್ಣ ಶ್ರೀಪಾರ್ಥಸಾರಥಿ ನಿರುಪಮಗುಣ ನಿತ್ಯಕಲ್ಯಾಣ ಪ ಆಪದದೂರ ಮುನಿಜನಮಂದಾರ ದಾನವಭಯಂಕರ ಅ.ಪ ಮಂಗಳಕರಮೂರ್ತಿ ಸುಗುಣಾಭರಣ ಕವಿಜನವರ್ಣನ ಶೃಂಗಾರಸಾಗರ ಗೋವರ್ಧನೋದ್ಧಾರ ಆನತಹಿತಂಕರ 1 ಸಾಧುಹೃದಯವಾಸಓಶ್ರೀನಿವಾಸತವದಾಸಾನುದಾಸ ಶ್ರೀ ಸನ್ನುತ 2 ಜಾಜೀಶ ಕೇಶವ ಜಯಜಯವಿಭವ ಶ್ರೀ ಭೂನೀಳಾಧವ 3
--------------
ಶಾಮಶರ್ಮರು
(ಧ್ರುವನು ಜನಿಸಿದಾಗಿನ ಜೋಗುಳ ಹಾಡು) ಮುತ್ತಿನ ಸರಪಣಿ ಹಸ್ತದಿ ಪಿಡಿದು ಮತ್ತೈದೆಯರೆಲ್ಲ ಸುತ್ತಲೂ ನೆರೆದು ಪುತ್ರರತ್ನವ ತಂದು ತೊಟ್ಟಿಲೊಳಿಟ್ಟು ಮತ್ತಕಾಶಿನಿಯರು ತೂಗಿದರೊಟ್ಟು ಜೋ ಜೋ 1 ಮಾರನ ಹೋಲ್ವ ಶೃಂಗಾರನೆ ಜೋ ಜೋ ಧಾರುಣಿಪತಿ ಸುಕುಮಾರನೆ ಜೋಜೋ ಸಾರಸನೇತ್ರಪವಿತ್ರನೆ ಜೋ ಜೋ ಚಾರುಮೋಹನ ಶುಭಗಾತ್ರನೆ ಜೋಜೋ ಜೋಜೋ 2 ಜೋ ಜೋ ಮಕ್ಕಳ ಕಂಠಾಭರಣ ಜೋ ಜೋ ಸುರತರುಪಲ್ಲವಚರಣ ಜೋ ಜೋ ಸಜ್ಜನ ಹೃದಯಾನಂದ ಜೋ ಜೋ ಉತ್ತಾನಪಾದನ ಕಂದ ಜೋ ಜೋ3 ತೃವಿ ತೃವಿ ಲಕ್ಷ್ಮೀನಾರಾಯಣ ಶರಣ ತೃವಿ ತೃವಿ ಪರಿಪೂರ್ಣ ಸದ್ಗುಣಾಭರಣ ತೃವಿ ತೃವಿ ಸುಸ್ಮಿತವದನವಿಲಾಸ ತೃವಿ ತೃವಿ ಚಂದಿರಕಿರಣ ಪ್ರಕಾಶ ಜೋ ಜೋ 4
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಿಸು ಕಾರುಣ್ಯನಿಧಿಯೇ ನಿನ್ನ ಚರಣವ ನಂಬಿದೆ ಶ್ರೀಪತಿಯೇ ಪ. ಕರುಣಿಸು ವರಗುಣಾಭರಣಸೇವಕ ಭಯ ಹರಣನೆ ಸುವಂದ್ಯಚರಣನೆ ರಘುವರ ಅ.ಪ. ಸುರರು ನಿನ್ನ ಚರಣವೇಗತಿಯೆಂದಿಹರು ಸರಸಿಜೊದ್ಬವೆ ನಿನ್ನ ಉರದಲ್ಲಿ ನೆಲೆಸಿರೆ ಪರಮಮಂಗಳಮೂರ್ತಿ ಪೊರೆಯೆನ್ನ ಕೈಪಿಡಿದೆತ್ತಿ 1 ಅಂಗಜಜನಕನೆ ನಿನ್ನ ಪಾದಂಗಳ ನಂಬಿರುವೆನ್ನಾ ಕಂಗಳಿಗಾನಂದ ಪೊಂಗುವಂದದಿ ಶ್ರೀ ರಂಗನೆ ದಯಾಪಾಂಗನೆ ಮೈದೋರು 2 ವರಶೇಷಗಿರಿವಾಸ ನಿನ್ನ ನಿಜ ಶರಣರ ದಾಸ್ಯದೊಳಿರಿಸೆನ್ನ ಕರವೆತ್ತಿ ಮುಗಿವೆನು ಭರಿಸೆನ್ನ ದೊರೆ ನೀನು ದುರಿತ ಕೋಟಿಗಳನ್ನು ಪರಿಹರಿಸೆಂಬೆನು 3
--------------
ನಂಜನಗೂಡು ತಿರುಮಲಾಂಬಾ
ನಲಿದೈತಾರೆಂಬೆ ಹೇ ಜಗದಂಬೆ ನಾಂ ಬೇಡಿಕೊಂಬೆ ಪ. ಒಲಿದೈತರೆ ನೀ ನಲವೇರುತ ನಾ ನಲಿದಾರಾಧಿಪೆ ಎನ್ನೊಲಿದಂಬೇ ಅ.ಪ. ಸಿಂಧುನಂದನೆ ಅರವಿಂದನಯನೆ ಇಂದುಸೋದರಿ ಸಿಂಧುರಗಮನೆ ಸುಗುಣಾಭರಣೆ ವಂದಿಪೆ ಶರದಿಂದುವದನೆ ಸುರ ವಂದಿತಚರಣೆ 1 ಅಂದಿಗೆ ಕಾಲುಂಗುರ ಘಲಿರೆನೆ ಇಂದಿರೆ ತವಪದದ್ವಂದ್ವವ ತೋರಿ ವಂದಿಸುವೆನ್ನೀಮಂದಿರ ಮಧ್ಯದಿ ಎಂದೆಂದಿಗು ನೆಲೆಸಿರು ನಂದಿನೀ ಜನನೀ 2 ಕ್ಷೀರಾಂಬುಧಿ ತನಯೆ ಸೌಭಾಗ್ಯದ ನಿಧಿಯೆ ಕ್ಷೀರಾಬ್ಧಿಶಯನನ ಜಾಯೆ ಸಾರಸನಿಲಯೆ ವಂದಿಪೆ ತಾಯೆ ಬಾರೆಂದು ಕೈಪಿಡಿದೆಮ್ಮನು ಕಾಯಿ 3 ಸರಸಿಜಾಸನೆ ಸ್ಮರಮುಖ ಜನನಿಯೆ ಸುರನರಪೂಜಿತೆ ನಾರದ ಗೇಯೆ ಸಾರಗುಣಭರಿತೆ ಸರಸಿಜಪಾಣಿಯೆ ಶ್ರೀರಮಣೀ ಪರಿಪಾಲಿಸು ಜನನಿ 4 ಸೆರಗೊಡ್ಡಿ ಬೇಡುವೆ ಶ್ರೀನಾರೀ ನಿನ್ನೆಡೆ ಸಾರೀ ಪರತರ ಸುಖ ಸಂಪದವನು ಕೋರೀ ಪೊರೆ ಮೈದೋರಿ 5 ಪರಿಪರಿ ವಿಧದಾ ಸಿರಿಸಂಪತ್ತಿಯೋಳ್ ಗುರುದೈವಂಗಳ ಸೇವಾವೃತ್ತಿಯೋಳಿರೆ ಕರುಣಿಸು ದೃಢತರ ಭಕ್ತಿಯನೆಮಗೀಗಳ್ ವರಶೇಷಗಿರೀಶನ ಮಡದಿಯೆ ಮುದದೋಳ್ 6
--------------
ನಂಜನಗೂಡು ತಿರುಮಲಾಂಬಾ
ಪಡಿ ಇನಿಯನ ವಶದಿ ಮನಸಿಜನಯ್ಯನ ದಯದಿಂದ ಬಾಲೆ ಪ ಮನೆಗೆಲಸಗಳನು ದಿನಗೈಯುತ ಬಲು ವಿನಯ ಸೌಶೀಲ್ಯದಿ ವನಿತೆಯರೊಳು ನೀ 1 ಪತಿಯನು ಪರದೇವತೆಯೆಂಬುವ ಮಹಾ ಮತಿಯಲಿ ಸೇವಿಸಿ ಸುತರನು ಪಡೆದು ನೀ 2 ಗುರುಜನರಿಗೆ ಸದಾಶಿರಬಾಗುತ ಬಹು ಸರಸದಿ ಸದ್ಗುಣಾಭರಣಗಳಿಂದ ನೀ 3 ರತಿಪತಿ ಪಿತನಿಗೆ ಪ್ರತಿಮೆಗಳೆನ್ನುತ ಅತಿಥಿಗಳನು ಸಂತತ ಸತ್ಕರಿಸುತ 4 ಗಿರಿಜೆಯ ಪೂಜೆಯನು ನಿರುತದಿಗೈಯುತ ಸಿರಿಕಾರ್ಪರ ನರಹರಿಯನು ಸ್ಮರಿಸುತ 5
--------------
ಕಾರ್ಪರ ನರಹರಿದಾಸರು
ಮಾಮವ ಮೃಗರಿಪು ಗಿರಿರಮಣ ಮಹಿತಗುಣಾಭರಣ ಪ ಕಾಮಕಲುಷಭವಭೀಮ ಜಲಧಿಗತ ತಾಮಸಾತ್ಮಕಂ ದುರಿತಮಹಿ ಅ.ಪ. ನೀಲಜಲದ ಮದಹೇಳನ ಸುಭಗಶರೀರ ಕುಂದಕುಟ್ಮಲ ಸಮಾನ ಶುಭರದನ 1 ವತ್ಸಲಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸಾಮಗಾರತ ಸತತಶುಭ ಚರಿತ 2 ಸಂತತಾರ್ತಾದರಚಕ್ರ ವಿಬುಧಗೇಯ ಪಾರಿಜಾತ ದುರಿತಾರಿ ವರದನುತ 3
--------------
ವೆಂಕಟವರದಾರ್ಯರು
ಮಾಮವ ಮೃಗರಿಪು ಗಿರಿರಮಣ-ಮಹಿತ ಗುಣಾಭರಣಪ ಕಾಮ ಕಲುಷಭವ ಭೀಮಜಲಧಿಗತ ತಾಮಸಾತ್ಮಕಂ ದುರಿತಚರಿತ ಮಹಿ ಮಾಮ ಅ.ಪ. ನಿಟಿಲನಯನ ಮಕುಟ ಲಸಿತ ವದನ ನೀರಾ-ಪೂರಾ ನೀಲ ಜಲದ ಮದಹೇಳನ ಸುಭಗಶರೀರ ಕುಂದ ಕುಟ್ಮಲ ಸಮಾನ ಶುಭರದನ 1 ವದನ ವಿಜಿತ ಶರದಮೃತಕಿರಣ ಸುಕುಮಾರಾಕಾರಾ ವತ್ಸಲ ಸಿತ ಶುಭಲಕ್ಷಣ ಲಕ್ಷ್ಮೀಧಾರಾ ಸದಯ ಹೃದಯ ಪರಿತೋಷಿತ ನತಜನ ಸಾಮಗಾನರತ ಶುಭ ಚರಿತ||ಮಾಮವ|| 2 ಕಮಲ ಸಂತತಾರ್ತಾದರ ಚಕ್ರ ವಿಬುಧಗೇಯ ಪ್ರಕಟ ಮಹಿಮ ಮಾಂಡವ್ಯ ಮನೋರಥ ಪಾರಿಜಾತ ದುರಿತಾರಿ ವರದನುತ ||ಮಾಮವ|| 3
--------------
ಸರಗೂರು ವೆಂಕಟವರದಾರ್ಯರು
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ-ಶ್ರೀ ಭೂವಿಲಾಸ-ಶ್ರೀತಜನಪೋಷ -ಪಾಹಿಸುವೇಷ ಪ ಅಚ್ಯುತಮಾನ ಮದಚ್ಯುತವಿ ಪಚ್ಚಿನ್ಮನೋರಥ ನಿಚ್ವಿತ ಪಾಹಿ 1 ದುರಂತವಿಕ್ರಮ ದನುಜಾಂತಕ ಪಾಹಿ 2 ಗೋವಿಂದ ನತಸುಮ ನೋವೃಂದ ದಳಿತ ತಮೋವೃಂದ ಪೋಷಿತ ಗೋಬೃಂದ ಪಾಹಿ 3 ಕೊಶಮಾಂಪಾಹಿ 4 ಸುರವಾರಮಾಂಪಾಹಿ 5 ಸದನ ಗೋವಿಂದಮಾಂಪಾಹಿ6 ವಿಷ್ಣೋಸುಜನವರ್ಧಿಷ್ಣೋಸಂತೋಷಿತಜಿಷ್ಣು ಸುರಜೀಷ್ಣೋಮಾಂಪಾಹಿ 7 ನುತ ಬುಧಜನಪಾಹಿ 8 ಆಕ್ರಮನುಪಿತ ನಿಜಕ್ರಮ ಜಿತವಿಶ್ವಶಕ್ರಸಹಜ ತ್ರಿವಿಕ್ರಮ ಪಾಹಿ 9 ಸುರಕಾಮನ ಮುನಿಜನಪ್ರೇಮಮಾಂಪಾಹಿ 10 ಕೌಸ್ತುಭಕಂದರ ಪಾಹಿ 11 ಗೋಚರರಾಕೆಂದು ಪಾಹಿ 12 ಪದಪದ್ಮಮಾಂಪಾಹಿಂ 13 ಜಿತಕಾಮಮಾಂಪಾಹಿ 14 ದೊಷರಹಿತಗುಣ ಭೂಷಣ ನತಜನಪೋಷ- ಸಂತೋಷಿತ ಶೇಷಮಾಂಪಾಹಿ 15 ವಾಸುಕಿ ಶಯನ ವಿಕಾಶ ಕಮಲನಯ- ನಾಸುರದಮನ ಶರಾಸನ ಪಾಹಿ 16 ಪರಿತುಷ್ಟಮಾಂಪಾಹಿ 17 ವಿಹರಣ ಸಕಲ ಗುಣಾಭರಣಮಾಂಪಾಹಿ 18
--------------
ಸರಗೂರು ವೆಂಕಟವರದಾರ್ಯರು
ಶ್ರೀರಮಣೀಮಣಿ ಬಾರೌ ಶ್ರೀಕರಮಣಿಪೀಠಕೆ ಪ. ಸಾರಸದಳನಯನೆ ಸುಗುಣಾಭರಣೆ ಸಾರಸಭವವಂದಿತಚರಣೆ ಕ್ಷೀರಸಾಗರನಂದನೇ ವರ ಕಾರುಣ್ಯಾಮೃತಪೂರಿತ ವದನೆ 1 ಪವನಾತ್ಮಜಸಂಸೇವಿತಾಂಘ್ರಿಯುಗಳೇ ಪಾಲಿತಾಮರ ಜಾಲೇ ಪಾವನಗುಣಶೀಲೇ ಶಶಾಂಕನಿಭಫಾಲೇ ಪಾಲಿಸುನೀಂ ಪಂಕಜಸುಮಮಾಲೆ 2 ಕೇಶವಹೃದಯನಿವಾಸಿನೀ ಪದ್ಮಾಸಿನೀ ಕ್ಲೇಶ ನಿವಾರಿಣಿ ಭುವನೈಕ ಜನನಿ ಕಾಂಕ್ಷಿತಾರ್ಥ ಪ್ರದಾಯಿನಿ 3
--------------
ನಂಜನಗೂಡು ತಿರುಮಲಾಂಬಾ
ಶ್ರೀಶ್ರೀನಿವಾಸ ಶ್ರೀಭೂವಿಲಾಸ ಶ್ರೀತಜನ ಪೋಷ ಪಾಹಿ ಸುವೇಷ ಪ ಪಚ್ಚಿನ್ಮನೋರಥ ನಿಶ್ಚಿತ ಪಾಹಿ 1 ರಂತ ವಿಕ್ರಮ ದನುಜಾಂತಕ ಪಾಹಿ2 ಮೋವೃಂದ ಪೋಷಿತ ಗೋಬೃಂದ 3 ಗೀಶಸನ್ನುತ ಕೋಶ ಮಾಂ ಪಾಹಿ 4 ಸುರವಾರ ಮಾಂಪಾಹಿ 5 ಮಂದರಧರ ಮುಚುಕುಂದ ವರದ ಆ ಸದನ ಗೋವಿಂದ ಮಾಂಪಾಹಿ 6 ಜಿಷ್ಣು ಸುರುಜಿಷ್ಣೋ ಮಾಂ ಪಾಹಿ 7 ವಿಧ ಬೇಧನ ನುತಬುಧಜನ ಪಾಹಿ 8 ಶಕ್ರಸಹಜ ತ್ರಿವಿಕ್ರಂ ಪಾಹಿ9 ಕಾವನ ಮುನಿಜನರ ಪ್ರೇಮ ಮಾಂಪಾಹಿ10 ಕೌಸ್ತುಭ ಕಂಧರ ಪಾಹಿ 11 ಯಾಕಾಶ ಗೋಚರಾಕೇಂದು ಪಾಹಿ 12 ಪದ್ಮಗೋಚರ ಪದಪದ್ಮಮಾಂಪಾಹಿ 13 ಕಾಮೋದಕ ಜಿತಕಾಮ ಮಾಂಪಾಹಿ 14 ಪೋಷ ಸಂತೋಷಿತ ಶೇಷಮಾಂ ಪಾಹಿ 15 ವಾಸುಕಿಶಯನ ವಿಕಾಶ ಕಮಲನಯ ನಾಸುರಮದನ ಶರಾಸನ ಪಾಹಿ 16 ದುಷ್ಟಮರ್ಧನ ಜಗದಿಷ್ಟುವರ್ಧನ ಸುರ ಕಷ್ಟ ಕೃಂತನ ಪರಿತುಷ್ಟ ಮಾಂ ಪಾಹಿ 17 ವರದವಿಠಲ ವ್ಯಾಘ್ರ ಧರಣೀಧರಾಗ್ರ ವಿ ಹರಣ ಸಕಲ ಗುಣಾಭರಣ ಮಾಂ ಪಾಹಿ 18
--------------
ವೆಂಕಟವರದಾರ್ಯರು
ಎರೆದು ಪೀತಾಂಬರÀವನುಡಿಸಿದಳಾಗವರಗೋಪಿಯು ಬೇಗಪಮುರುಳಿಯನೂದುತ ಪರಿಪರಿ ಗೆಳೆಯರುಪರಮಾತ್ಮನೆ ನಿನ್ನರಸುತಲಿಹರೆಂದು ಅಪಗುರುಳು ಕೂದಲು ಮುಖದಲ್ಲಿ ಹೊಸ ಬೆವರುಥಳಥಳಿಸುತಲಿಹುದುಎಳೆಯ ಶ್ರೀ ತುಳಸಿಯ ವನಮಾಲೆಗಳುಗಳದಲಿ ಶೋಭಿಪುದುಅರಳು ಮಲ್ಲಿಗೆ ಪುಷ್ಪದ ಹಾರಗಳುಮುತ್ತಿನ ಪದಕಗಳುಕೊರಳೊಳು ಮುತ್ತಿನ ಸರಗಳಿಂದೊಪ್ಪುತಮುರುಳಿಯ ನೂದುತ ಸರಸರ ಬಾರೆಂದು 1ಗುರುಳು ಕೂದಲೊಳೊಪ್ಪುವ ಅರಳೆಲೆಯುಸೊಗಸಿನ ನವಿಲ್ಗರಿಯುಬಿಗಿದು ಸುತ್ತಿದ ಸಿರದಲಿ ಕೇಶಗಳುಅತಿ ಶೋಭಿಸುತಿಹವುಚದುರಿದ ಕೇಶದಿ ಕೆಂದೂಳಿಗಳುಮಧುವೈರಿಯ ಕೇಳುವಿಧವಿಧ ರಾಗದಿ ಪಾಡುತ ನಿನ್ನನುಸದನದಿ ಪೂಜಿಸಿ ನೋಡುವೆ ಬಾರೆಂದು 2ನೊಸಲಲ್ಲಿ ಕುಡಿನಾಮವನಿಟ್ಟಿಹಳುನೋಡುತ ಹಿಗ್ಗುವಳುಎಸಳು ಕಣ್ಣಿಗೆ ಕಪ್ಪನೆ ತೀಡುವಳುಬಣ್ಣಿಸಿ ಕರೆಯುವಳುಎಸೆವೊ ಕರ್ಣಕೆ ನೀಲದ ಬಾವುಲಿಯೂರತ್ನದ ಚೌಕಳಿಯುಬಿಸುಜನಾಭ ನಿನ್ನ ಶಶಿಮುಖಿಯರುಗಳುರಸಕಸಿ ಮಾಳ್ಪರು ಹಸನಾಗಿ ಕೂಡೆಂದು 3ಅರಳುಕೆಂದಾವರೆ ಪೋಲುವಚರಣಸ್ಮರಿಸುವರಘಹರಣಸುರರುಕಿನ್ನರರೋಲೈಸುವಚರಣವರಸುಗುಣಾಭರಣಘಲುಘಲುಘಲುರೆಂದೊಪ್ಪುವಚರಣಸಜ್ಜನರಾಭರಣಅಡಿಯಿಡುತಲಿ ಬಾ ಮೃಡಸಖ ನಿನ್ನಯಅಡಿಗೆರಗುವರೈ ತಡೆಯದೆ ಬಾರೆಂದು 4ವರಹಸ್ತದಿ ಬೆಣ್ಣೆಯ ಮುದ್ದೆಯ ಕೊಡುವೆಬಾರೆನ್ನಯ ದೊರೆಯೆಜರದೊಲ್ಲಿಯ ಮುರಳಿಸಹಿತ ನಡುವಿಗೆ ಕಟ್ಟುವೆನುಬಾ ಭಕುತರ ಪೊರೆಯೆಉಗುರಿಂದ ಗಿರಿಯನು ಎತ್ತಿದ ಧಣಿಯೆಸುರಚಿಂತಾಮಣಿಯೆಹಗಲು ಇರಳು ನಿನ್ನಗಲಿರಲಾರೆ ಶ್ರೀ-ಕಮಲನಾಭವಿಠ್ಠಲ ಬೇಗಬಾರೆಂದು 5
--------------
ನಿಡಗುರುಕಿ ಜೀವೂಬಾಯಿ