ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪತಿತಪಾವನ ಕರಿವದನ ನಾರಾಯಣ ಮತಿಗೆಮಂಗಳವೀಯೋ ಮುನಿಜನಾಭರಣ ಪ ಇತರವ್ಯಾಕುಲಗಳ ಮಥನವು ಮನದೆ ಬಹಳ ವ್ಯಥೆಯ ತೋರುತ್ತಲಿದೆ ಗತಿಯಾವುದೊ ಹರಿಯೆ ಸತತ ನಿನ್ನ ಗುಣಕಥನ ಮಾಡುವ ಅತಿಶಯ ಮಾರ್ಗದಿ ಕ್ಷತಿಯೊಳು ಪೊರೆಯ್ಯೆ 1 ಧ್ರುವ ಪ್ರಹ್ಲಾದ ನರ ದ್ರೌಪದಿ ಅಂಬರೀಷ ಇವರ ಕಷ್ಟಗಳಿಂದ ಪಾರುಗಾಣಿಸಿದೆ ಅವನೀಭಾರವನಿಳುಹುವ ದೊರೆಯೇ ಕುವಲಯನೇತ್ರ ಕುಮಾರನ ಕೈಪಿಡಿ2 ಶ್ರೀರಮಣೀವರ ಸಾರಗುಣಾಕರ ಸಿರಿ ಜಾಜೀಶ್ವರ ಕೋರುತಿರುವೆಮಗೆ ತೋರಿಸು ತವಪದ ನಾರದ ಮುನಿನುತ ಸಾರುತೆ ನಮಿಪೆ 3
--------------
ಶಾಮಶರ್ಮರು
ಶ್ರೀ ವ್ಯಾಸರಾಜ ನರ್ತನ ಗೋಪಾಲಕೃಷ್ಣ ಸ್ತೋತ್ರ26ರಾಜಗರು ಶ್ರೀವ್ಯಾಸರಾಜರ ಭಾಗ್ಯಕ್ಕೆಈ ಜಗದಿ ಎಣೆಯುಂಟೆ ಅರಸಿನೋಡೆ ||ರಾಜೀವೇಕ್ಷಣ ಜ್ಞಾನಾನಂದ ಬಲಪೂರ್ಣ |ರಾಜ ಗೋಪಾಲ ಶ್ರೀ ಕೃಷ್ಣನು ಕುಣಿದ ಪಏನು ಯತ್ನಿಸಿದರೂ ತೆರೆಯಲಿಕ್ಕಾಗದ |ಸ್ವರ್ಣಮಂಜೂಷದೊಳು ಮೂರ್ತಿಗಳ್ ||ಮುನಿವರ ವ್ಯಾಸರು ಸ್ಪರ್ಶಿಸೆ ತೆರೆಯಿತು |ಕೃಷ್ಣಜ್ವಲಿಸಿದ ಭೈಷ್ಮೀ ಸತ್ಯಾ ಸಮೇತ 1ಭಕ್ತ ವಾತ್ಸಲ್ಯದಿ ಸರಿಮಿಗಿಲು ಇಲ್ಲವು |ಭಕ್ತವತ್ಸಲ ಶ್ರೀಯಃ ಪತಿಗೆ ಎಲ್ಲೂ ||ಭಕ್ತಾಗ್ರೇಸರುತರಳಪ್ರಹ್ಲಾದನಿಗೆ |ಎದುರಾರು ಉಳ್ಳರೈಧರೆಯ ಮ್ಯಾಲೆ 2ಬಾಲಕಸ್ತುತಿಸಿದ್ದು ನರಹರಿ ಹರುಷದಿ |ಕೇಳಿದನು ಆನಂದದಿ ತಾನರ್ತಿಸಲು |ಅಲ್ಲ ಸಮಯ ಆಗ ಎಂದು ಈಗ ಪ್ರಹ್ಲಾದ |ಇಳೆಯಲಿ ಮುನಿವ್ಯಾಸ ಎಂದು ತಾ ನಲಿದ 3ಸುಳಿಯುವ ಯುವ ಕರ್ಮದಿಂ ಕೌರವರೊಡೆ ಇದ್ದ |ಬಾಲ್ಹಿಕರಾಯನು ಭಕ್ತಿ ಕುಂದದ ಮನದಿ ||ಮಾಲೋಲನ ಲೀಲಾ ಮೆಚ್ಚಿತಾ ಭೀಮನ್ನ ತಾ ಒಲಿಸಿಕೊಂಡುಬಾಲಯತಿವ್ಯಾಸನಾಗಿ ಬಂದಿಹನೆಂದು ಹರಿಕುಣಿದ 4ಸೂರಿಜನ ಪ್ರಾಪ್ಯಗಘೃಣಿ ಆದಿತ್ಯಸೂರ್ಯನು |ವಿರಾಜಸುವ ಸೂರ್ಯ ದೇವಾಂಶ ಬ್ರಹ್ಮಣ್ಯ ||ತೀರ್ಥರಕರಅರವಿಂದೋತ್ಪನ್ನ ಈ |ಸೂರಿವರ್ಯ ವ್ಯಾಸರಾಯರು ಎಂದು ನರ್ತಿಸಿದ 5ಶಿಂಶುಮಾರನ ಪುಚ್ಛಾಶ್ರಿತ ಸ್ಥಿರ ಸ್ಥಾನದಿಂ |ಅಂಶದಲಿ ಜನಿಸಿ ಶ್ರೀಮಧ್ವಸಚ್ಛಾಸ್ತ್ರ ||ಅಸಮ ಕೋವಿದರೆನಿಪ ಶ್ರೀಪಾದ ರಾಜರÀಲಿ |ವ್ಯಾಸಂಗ ಮಾಳ್ಪ ಸಂಧೀ ಎಂದು ಹರಿಕುಣಿದ 6ಸಾರಾತ್ಮ ಸುಖಮಯಶ್ರುತಿವೇದ್ಯ ಮಹದಾದಿ |ಚರಾಚರ ಜಗತ್ಕರ್ತಪರಮಪೂರುಷನು ||ಮೂರಡಿ ಬೇಡಿದ ಮುರಳೀಧರ ಶ್ರೀಮನ್ನ್ನಾರಾಯಣ ಸರ್ವವಂದÀ್ಯನೇ ಸ್ವಾಮಿ 7ಈ ರೀತಿ ಹೊಗಳುವ ಸರಿಗಮ ಪದನಿ |ಸ್ವರಗಳಿಂ ಕೃಷ್ಣನ್ನ ಶ್ರೀ ವ್ಯಾಸರಾಜ ||ಪರಮಭಾಗವತಮಹಾತ್ಮರು ಕೀರ್ತಿಸೆ |ಶ್ರೀ ಕೃಷ್ಣ ಧಿಕ್ತೈ ಎಂದೆÉನುತ ಕುಣಿದ 8ಈ ಪದ್ಯಗತಿಯಲ್ಲಿ ಧಿಕ್ತೈ ಧ್ವನಿಸೂಚಿಸುತೆ |ಶಿಪಿವಿಷ್ಟ ವಿಶ್ವರೂಪ ಮುರಳೀಪಾಣಿಯನ್ನ |ಶುಭತಮಗುಣಕಥನ ಶ್ರವಣದಿಂ ಲಭ್ಯವು |ಶ್ರೀಭಾಗವತಾಷ್ಟಮ ದಶಮ ಏಕಾದಶದಿ 9ಅಖಿಲೇಷ್ಟದಾತಾ ಇಂದಿರೇಶ ಚಾರ್ವಾಂಗನು |ರುಕ್ಮಿಣಿ ಸತ್ಯಾಯುಕ್ಅಭಯವರದ ||ಶಂಖಾರಿಹಸ್ತಹಿರಣ್ಮಣಿ ನಿಭ ಕೃಷ್ಣ |ಜಗದೇಕ ವಂದ್ಯನು ಮುದದಿ ತಾಕುಣಿದ 10ಸರಸಿಜಾಸನ ಪಿತ ಪ್ರಸನ್ನ ಶ್ರೀನಿವಾಸ |ನರಸಿಂಹ ಪರಂಬ್ರಹ್ಮ ನಮೋವರಾಹ||ನಾರಾಯಣವಾಸುದೇವಸಂಕರುಷಣ |ಪರಂಜ್ಯೋತಿ ಪ್ರದ್ಯುಮ್ನ ಅನಿರುದ್ಧಪಾಹಿ11
--------------
ಪ್ರಸನ್ನ ಶ್ರೀನಿವಾಸದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಹರಿನಾಮದರಗಿಣಿಯು ಹಾರುತಿದೆ ಜಗದಿ|ಪರಮಭಾಗವತರು ಬಲೆಯ ಬೀಸುವರು ಪಕೋಪವೆಂಬ ಮಾರ್ಜಾಲವು ಕಂಡರೆ ನುಂಗುವುದು |ತಾಪವೆಂಬ ಹುಲಿಯು ಕೊಂಡೊಯ್ವುದದನು ||ಕಾಪಾಡಿರದನು ಹೃದಯದೊಳಗಿಂಬಿಟ್ಟು |ಅಪತ್ತಿಗೊದಗುವುದು ಈ ಮುದ್ದು ಗಿಣಿಯು 1ದಾರಿಯ ನಡೆವಾಗ ಚೋರರ ಭಯವಿಲ್ಲ |ಮಾರಿಬಂದರದನು ಹೊಡೆದು ನೂಕುವುದು ||ಕ್ರೂರ ಯಮಭಟರನು ಮೂಗು ರೆಕ್ಕೆಯಲಿ ಬಡಿದು |ದಾರಿ ತೋರುವುದು ಮುರಾರಿಯ ಪಟ್ಟಣಕೆ 2ಎಷ್ಟೆಂದು ವರ್ಣಿಸಲಿ ಈ ಮುದ್ದು ಅರಗಿಣಿಯು |ಹೊಟ್ಟೆಯೊಳೀರೇಳು ಜಗವನಿಂಬಿಟ್ಟ ||ಸೃಷ್ಟೀಶ ಪುರಂದರವಿಠಲನ ನೆನೆ ನೆನೆದು |ಮುಟ್ಟಿ ಭಜಿಸುವುದು ಈ ಮುದ್ದು ಗಿಣಿಯು 3ಹರಿಯೆ................................................ ಪಹರಿನಿನ್ನ ಕೃಪೆಯೆನಗೆ ಚಂದ್ರ - ತಾರಾಬಲವು |ಹರಿನಿನ್ನ ಕರುಣವೇ ರವಿಯ ಬಲವು ||ಹರಿನಿನ್ನೊಲುಮೆಯೆನಗೆ ಗುರುಬಲವು ಭೃಗುಬಲವು |ಹರಿನಿನ್ನ ಮೋಹವೇ ಶನಿಯ ಬಲವು 1ಮಂಗಳಾತ್ಮಕ ನಿನ್ನ ಅಂಗದರುಶನವೆನಗೆ |ಮಂಗಳನ ಬಲವು ಎನ್ನಂಗಕೀಗ ||ರಂಗಯ್ಯ ನಿನ್ನ ಚರಣಾರವಿಂದವ ನೋಡೆ |ಹಿಂಗಿ ಪೋಪುದು ಅಘವು ಸೌಮ್ಯಬಲವು 2ಆದಿಪುರುಷನೆ ನಿನ್ನ ಅರಿಪುದೇ ಕೇತುಬಲ |ಅದಿಮೂಲನೆ ನಿನ್ನಗುಣಕಥನವ ||ಆದರಿಸಿ ಕೊಂಡಾಡುವುದೆ ಎನಗೆ ರಾಹುಬಲ |ಆದಿಮೂರುತಿ ಬ್ರಹ್ಮಪುರಂದರವಿಠಲ 3
--------------
ಪುರಂದರದಾಸರು