ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ಷೀರವಾರಿಧಿಜಾತೆ ಚಾರುಸುಂದರಗಾತ್ರೆ ಪ ವೋರು ವರಮಣಿ ಪೀಠಕೆ ಬಾರೆಯ ಹಸೆಗೇ ಕರೆ 1 ಇಂದಿರಾದೇವಿ ಬಾ ಇಂದುಸೋದರಿ ಬಾ ಕುಂದಣದ ಹಸೆಗೇ ಮಂದಹಾಸವ ತೋರಿ ಬಂದೆಮ್ಮ ಮನೆಯೊಳು ಎಂದೆಂದಗು ಬಿಡದಾನಂದವತೋರೆಂದು 2 ರೂಢಿಗೊಡೆಯ ಗರುಢಾರೂಢನೆಂದೆಸಿದ ಪೊಡಮಟ್ಟು ಬೇಡುವ ದೃಢ ಭಕ್ತರ ಕೈ ಬಿಡದಾದರಿಸುತ್ತ ಬಾರೆಂದು ಹಸೆಗೆ 3 ಸುರವರಪೂಜಿತ ಚರಣಸರೋಜವ ನಿರುತ ಸೇವಿಪ ವರವ ಕರುಣೆಸೆಂದೆನುತಾನು ಕರಮುಗಿದೆರೆವೆನು ವರಶೇಷಗಿರಿವಾಸನರಸಿನೀಂ ನಲವಿಂದ ಬಾರೆಂದು4
--------------
ನಂಜನಗೂಡು ತಿರುಮಲಾಂಬಾ
ನಿನ್ನ ನಾಮವೆ ಘನವಆಗಿದೆ ನೆನೆವರಕಾವ ಕರುಣಿಯೆಂದು ಪ ಪಾದ ಯುಗವನಾ ಕಾಣಬಲ್ಲನೆ ಕೇಳಿ ಗರುಢಾ ರೂಢ ನಾಗಿ ಬಂದು ಗಜವ ಕಾಯ್ದವನೆಂದು 1 ಸಂಗದಿಂದಲಿ ಯಿರುತಿರಲು ಬಂದು ಯಮನ ದೂತರೆಳೆಯೆ ಭಯದಿ ತನ್ನ ನಂದನ ಕರೆದರೊಂದು ನಾಮವೆ ಕಾದುದೆಂದು 2 ದುರುಳ ಕಶ್ಯಪುಸುತನ ಭಾಧಿಸೆ ಮೊರೆಯಿಡಲದನುಕೇಳಿ ಭರದಿ ಕಂಬದಿ ಬಂದು ನರಹರಿಯಾಗಿ ನಿಂದು ಕರದೊಳವನ ಕೊಂದು ತರಳನ ಕಾಯ್ದೆಯೆಂದು 3 ಅಂಬುಧಿಶಯನ ನಿನ್ನ ರುಕ್ಮಾಂಗದ ಮೃತ್ಯವೆಂಬುದೆಲ್ಲವಗೆದ್ದು ಕುಂಭಿನಿಯೊಳು ಪೆಸರೊಡೆದರೆಂಬುದ ಕೇಳಿ 4 ಓಲಗದೊಳು ಶಾಲೆಯ ಸುಲಿಯೆ ದ್ರುಪದ ಭೀಮನಕೋಣೆ ಲಕ್ಷ್ಮೀ ಲೋಲ ಸೀರೆಯ ಸೆರಗ ಬೆಳೆಸಿದ ನಾಮವೆಂದು 5
--------------
ಕವಿ ಪರಮದೇವದಾಸರು