ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಳುತಲೆದ್ದು ಮನವೆ ನೀ ವಲೀ ನಿಜಖೂನ ಕುಲಕೋಟಿ ಉದ್ಧರಿಸುವ ನೆಲೆನಿಭ ಸ್ಥಾನ ಬೆಳಗಾಗಲಿಕ್ಕೇರಿತು ನೀ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 1 ಒಳಮುಖನಾಗರಿಯೋ ನೀ ಸುಲಲಿತ ಜ್ಞಾನ ಅಲೇಶ ಮಾಡದೆ ನೀ ಬ್ಯಾಗ ಬಲಿ ನಿಜಧ್ಯಾನ ಥಳಥಳಗುಡುತಲ್ಯದ ಒಳಿತಾಗಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 2 ತೊಳಿಬೇಕೆಲೊ ಮನದ ಹೀನ ಮಲಿನಗುಣ ಕರ್ಮ ತಮಂಧತನ ಕಳೆಕಾಂತಿಯುಳ್ಳ ಕರುಣಾರ್ಣವ ಸ್ವಾಮಿ ಪೂರ್ಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 3 ಸಲೆ ಮೊರೆಹೊಕ್ಕು ನೀ ಸದಾಬಲಿ ಭಕ್ತಿ ಪೂರ್ಣ ಅನುದಿನ ಸದ್ವಸ್ತು ಶರಣ ಸಕಳ ಸುರವುತಲ್ಯದೆ ಬಲ್ಲ ಸ್ವಾಮಿ ಕರುಣ ತಿಳಕೊಂಡು ಮಾಡು ಗುರುಮೂರ್ತಿಗೆ ಸುನಮನ 4 ಇಳೆಯೊಳಿದೆ ಸಕಲಪುಣ್ಯಶಿರೋನಿಧಾನ ಘಳಿಸುವದೊಂದೆ ಸುಫಳಿತ ಸುದಿವ್ಯ ಘನ ತಿಳಿಯೊ ಸುಮನವೆ ಮಹಿಪತಿಸ್ವಾಮಿ ಪೂರ್ಣ ಒಲುವಾಂಗೆ ಮಾಡು ಗುರುಮೂರ್ತಿಗೆ ಸುನಮನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರುರಾಯಾ | ಶರಣಾಶ್ರಯಾ | ಪರಮಾ ನಂದೋದಯಾ | ಗರಿಯೋ ನಿಮ್ಮದಯಾ | ಚರಣಕ ನಂಬಿಹೆನಯ್ಯಾ | ತರಳನು ನಾನತಿ ಜೀಯಾ | ಅರಿಯೆನು ಅನ್ಯೋಪಾಯಾ | ಪಾವನ ಕಾಯಾ 1 ಅಘಹಾರಿ | ಭಕುತಿಯ ದೋರಿ | ಸುಗಮವ ತೋರಿ | ನಿಗಮಾರ್ಥ ಸಾರಿ | ಉಗಮದ ಬೋಧವ ಬೀರಿ | ಪರಿ | ಬಗೆವದು ದೀನೋದ್ಧಾರಿ | ಭಕುತರ ನಿಜ ಸಹಕಾರಿ2 ನಿನ್ನವನಾ | ಮುನ್ನಗಾಯ್ದನಾ | ಎನ್ನೊಳಿಹನ್ಯೂನಾ | ಇನ್ನಾರಿಸುದೇನಾ | ಬೆನ್ನವ ಬಿದ್ದಿಹದೀನಾ | ಬನ್ನ ಬಡಿಸದನುದಿನಾ | ಚನ್ನಾಗಿ ಕಾಣಿಸಿ ಖೂನಾ | ಮನ್ನಿಸು ಹಿಡಿದಭಿಮಾನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಗನ್ನಾಯಕ ಗುರುಪಾಹಿಮಾಂ | ಅಘನಾಶಕ ವರದಾಯಕಾ | ಪ ವರಮಾನವಿ ಪುರ ಮಂದಿರ ಕರುಣ ಭರಣ ಶಾಂತ ಮೂರುತಿ1 ನಿರುತ ನಿನ್ನಯ ಚರಣನಂಬಿದೆ ದುರಿತ ತರಿದು ತೋರೋ ಸತ್ವಥ 2 ಭೂಮಿಜಾವರ ಶಾಮಸುಂದರ ನಾಮಗರಿಯೋ ಪ್ರೇಮಸಾಗ 3
--------------
ಶಾಮಸುಂದರ ವಿಠಲ
ಶ್ರೀ ರಾಘವೇಂದ್ರರಾಯ- ಎನ್ನ-ಭವxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಭಾರನಿನ್ನದೊ ಜೀಯ್ಯಾದೂರನೋಡದಲೀಗ ಕೈಯಾ - ಪಿಡಿದು ನೀಸಾರೆಗರಿಯೋ ಸೂರಿಧ್ಯೇಯಾ 1ನಿನ್ಹೊರತು ಗತಿಯಾರೊ ಎನಗೆ - ಈಗಬಿನ್ನಪವ ಮಾಳ್ಪೆ ನಾ ನಿನಗೆ - ಭವದಿಬನ್ನಬಡುವವನ ನೋಡಿ ಹೀಗೆ 2ಈಸುವತ್ಸರವ್ಯರ್ಥ ಕಳದೆ- ನಾನಿನ್ನಈಶ ನೀನೆಂಬುದನು ಮರೆದೆ - ಬಹುಕ್ಲೇಶಬಟ್ಟೀಪರಿಯಲುಳದೆ 3ಸರಸ ವಿಙ್ಞÕನಭಕುತಿನೇಮಾ - ನೀನಿತ್ತುಪೊರೆಯೊ ನೀ ಭಕ್ತವತ್ಸಲ 4ಎನು ಕರುಣಾನಿಧಿಯೊ ನೀನು - ಜಗದೊಳಗೆಸಾನುರಾಗದಿ ಭಜಿಪೆ ನಾನು - ತವಚರಣಧ್ಯಾನ ಪಾಲಿಪದೀಗ ನೀನು 5ಕೃಷಿಯಾದಿ ಸತಿ-ಸುತರ ಪ್ರೇಮಿ - ಎನಿಸಿತೃಷೆಯಗೊಂಡೆನೊ ಅಂತರಯಾಮಿ 6ನರರ ಯಾಚನೆ ಮಾಡಸಲ್ಲ - ದೇಶವನುಪರಿಪರಿಯ ಭವಣೆ ಸುಳ್ಳಾಗದಲ್ಲ- ಸರ್ವಙÕಸರ್ವ ನೀ ತಿಳಿದಿರುವಿಯಲ್ಲ 7ನೀಚಜನ ಮನೆ ಮನೆಗೆ ಪೋಗಿ - ನಾನುಯಾಚಿಸಿದೆ ನಾಚಿಕೆಯನೀಗಿಯೋಚನಿಲ್ಲದೆ ನಾನು ಕೂಗಿ - ಈಗ!ನೀಚನಾದೆನೊ ಕಾಯೋ ಪರಮಯೋಗಿ 8ಶೇಷಾದ್ರಿನಿಲಯ ವಾಸ - ಪದದೂತವಾಸವಾಗೆಲೊ ಮನದಿ ತೋಷ - ಪೊರೈಸೊದಾಸಜನಪ್ರಿಯ ಯೋಗೀಶಾ 9ದುಷ್ಟ ಜನ ತತಿಯ ಸಂಗ - ಬಿಡಿಸಿಇಷ್ಟು ಪಾಲಿಸ್ಯನ್ನಂತರಂಗ - ದೊಳಗೆತುಷ್ಟನಾಗಿರು ನೀನೆಕರುಣಾಪಾಂಗ10ಪೋತನಾ ನಿನಗಲ್ಲೆ ಜೀಯಾ- ಎನಗೆತಾತನೀನೆಂಬೊ ಮಾತು ಖರಿಯನ್ನಾಥ ವಿಠಲಗೆ ನೀನೆ ಪ್ರಿಯ 11
--------------
ಗುರುಜಗನ್ನಾಥದಾಸರು