ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಂಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಯೋಗಿ ಎಂಬ ಆನೆ ಬಂದಿತಯ್ಯಆನೆ ಬಂದಿತು ಪ್ರಪಂಚ ಪೇಟೆಯತಾನೆ ಕೀಳುತ ತಳಪಟ ಮಾಡುತ ಪ ಪಾಷಗಳೆಂದೆಂಬ ಸರಪಳಿ ಹರಿದುಈಷಣಗಳು ಎಂಬ ಸಂಕೋಲೆ ಮುರಿದುದ್ವೇಷವೆನಿಪ ಗಾಡಿಕಾರರನರೆದುಕ್ಲೇಷವೆನಿಪ ಕಾವಲವರ ಜಡಿದು 1 ದಶವಾಯುಗಳೆಂಬ ದನಗಳನೋಡಿಸಿವ್ಯಸನ ಕುದುರೆಗಳ ಸೀಳಿ ಸೀಳಿಕ್ಕಿಹಸಿವು ತೃಷೆಗಳನು ಕಾಲೊಳಿಕ್ಕಿಕಸೆಕಸೆ ಅಂಗಡಿಗಳನು ತೂರಿಕ್ಕಿ2 ಬಹುಮತಗಳು ಎಂಬ ಮನೆಯನೆ ಕೆಡಹಿಇಹಪರ ವಾಸನೆ ಕೊಟ್ಟಿಗೆ ಕೊಡಹಿಮಹಾ ಅಭಿಮಾನದ ನಾಯಿಗಳ ಮುಡುಹಿಬಹು ಕಲ್ಪನೆಯ ಕುರಿ ಕೋಳಿಗಳ ಉಡುಹಿ3 ಬೋಧ ಲಹರಿಯಲಿ ತೂಗುತಜ್ಞಾನ ಸೊಕ್ಕಿನಲಿ ಕೆಕ್ಕರಿಸಿ ನೋಡುತ ತಾನೆ ತಾನಾಗಿ ತನ್ನ ಮರೆಯುತ 4 ಬೆಳಗುವ ಸುಷುಮ್ನ ಬಾಜಾರವಿಡಿದುಗೆಲುವಿನಲಿ ಭ್ರೂಮಧ್ಯ ಜಾಡಿನಲಿನೆಡೆದುತಿಳಿಗೊಳ ಸಹಸ್ರಾರದ ನೀರ ಕುಡಿದುಬಲು ಚಿದಾನಂದವೆಂಬ ಆನೆಯು ನಡೆದು 5
--------------
ಚಿದಾನಂದ ಅವಧೂತರು
ವಿತ್ತ ವನಿತಾದಿ ವಿಷಯವೆಂಬಕನಸಿನ ಸಿರಿಯ ನೆಚ್ಚಿ ತೊನೆದುಕೊಂಬರಲ್ಲದೆ 1ಪೊಲೆಯ ಬೊಂಬೆಯೊಳು ತುಂಬಿದ ಕೀವುಮಲಮೂತ್ರಸಂದೋಹ ತೊಗಲು ರೋಮಎಲು ಮಜ್ಜೆ ಮಾಂಸದವ್ಯೂಹ ಎಷ್ಟು ತೊಳೆದರೂಹೊಲಸು ನಾರುವ ಚೋಹ ಮತ್ತಿದಕೊಂದುಕುಲಗೋತ್ರ ನಾಮರೂಪು ಚಲುವ ಚೆನ್ನಿಗನಿವ ಸಲೆ ಜಾಣನೆಂದು ಮೂಢರುಗಳಹಿಕೊಂಬರಲ್ಲದೆ 2ಮಡದಿಯಾದರಿಲ್ಲ ಮಕ್ಕಳು ಮಕ್ಕಳಾದರೆಒಡಮೆಲ್ಲವದು ಬರಲು ಸತಿಸುತರುಮಡಿದು ಹೋಗುವ ದುಃಖಂಗಳು ಗಳಿಸಿದರ್ಥಕೆಡುವಾ ಸಂಕ್ಲೇಶಂಗಳು ತನಗೆ ಮುಂಚಿಅಡಸಿ ಬರುವದೊ ಮೃತಿ ಜಡರು ಈ ಬದುಕನೆಚ್ಚಿಸಡಗರ ಬಡುತ ಹಿಗ್ಗಿ ಕೊಡಹಿಕೊಂಬರಲ್ಲದೆ 3ಬಾಲಕನಾಗ್ಯೊಂದು ಕ್ಷಣವು ಪ್ರಾಯದಿ ಕಾಮಲೋಲುಪನಾಗ್ಯೊಂದು ಕ್ಷಣವು ಧನಾಢ್ಯನೆಂಬಮೂಳ ಹೆಮ್ಮೆ ಒಂದು ಕ್ಷಣವು ದಾರಿದ್ರ್ಯ ಮುಪ್ಪುಜೋಲುವ ತನುವೊಂದು ಕ್ಷಣವು ನಾನಾವೇಷದಾಳಿದ ನಟನಂತಾಡಿ ಕಾಲನ ಬಾುಗೈದುವಬಾಳುವೆಗೆ ಖೂಳಜನರು ವೋಲಾಡಿಕೊಂಬರಲ್ಲದೆ 4ನೆರೆ ಭೋಗಕೆ ರೋಗಭಯ ಸುತ ಸಂಬಂಧಿನೆರವಿಗೆ ವಿಯೋಗ ಭಯ ದ್ರವ್ಯಕ್ಕೆ ಭೂಪರ ಭಯವು ಚೋರ ಭಯ ಕಾಯಕೆ ಭಯಂಕರನಾದ ಕೃತಾಂತ ಭಯ ತಾಪತ್ರಯವೀಪರಿಯನೇಕ ಚಿಂತೆಯಲ್ಲಿ ಕೊರಗುತುರಿವ ಮನೆಯೊಳಗಿರುವೆ ಸುಖದಲೆಂಬರು ಮೂಕೊರೆಯಮೊಂಡರಲ್ಲದೆ * 5
--------------
ಗೋಪಾಲಾರ್ಯರು
ಚಂಡಳಹುದೋ ನೀನುಕದನಪ್ರಚಂಡಳಹುದೋ ನೀನುದಿಂಡೆಯರನ್ನು ಖಂಡಿಸಿ ತುಂಡಿಪಚಂಡವಿಕ್ರಮಮಾರ್ತಾಂಡಮಂಡಿತ ದೇವಿಪಭುಗು ಭುಗು ಭುಗಿಲೆಂದು ಮಧು ಕೈಟಭೆಂಬುವರುನೆಗೆ ನೆಗೆ ನೆಗೆಯುತ ರಣಕೆ ಬರಲು ಪೋಗಿಜಿಗಿ ಜಿಗಿ ಜಿಗಿದವರ ನೀನು ಯುದ್ಧವ ಮಾಡಿನೆಗೆದುರೆ ಖಡ್ಗವನು ಝಡಿದು ಧಗ ಧಗಧಗಿಸುವ ಚಕ್ರವನು ಇಡಲು ಶಿರವುಜಿಗಿಯೆ ಚರ್ಮವ ಸೀಳಿ ಮಾಡಿದೆ ಭೂಮಿಯ ನೀನು1ಛಟ ಛಟಾಕೃತಿಯಿಂದ ಮಹಿಷಾಸುರನ ಬಲನಟ ನಟ ನಟಿಸುತ ಪಟು ಭಟರಿದಿರಾಂತುಘಟಿಸಿ ರಣಕೆ ಬರಲು ಫಲ್ಗಳ ಕಟಕಟನೆ ಕಡಿದು ನಿಲ್ಲಲು ಅಸುರ ಬಲಸೆಟೆದು ಹಿಂದಾಗುತಲಿರಲು ಸುರಕಟಕನಿಮ್ಮನ್ನು ಹೊಗಳಿ ಕೊಂಡಾಡಲು2ಘುಡು ಘುಡು ಘುಡಿಸುತ್ತ ಮಹಿಷಾಸುರನು ಬರೆದಢ ದಢನೆ ಪೋಗಿ ಹೊಡೆದು ನಿನ್ನಯಪಾದದಡಿಯೊಳವನ ಕೆಡಹಿ ಚದುರ ಬೀಳೆ-ಕಡಿದು ಕಂಡವ ಕೊಡಹಿ ನಿಲ್ಲಲು ಸುರರೊಡೆಯ ನೆಲ್ಲರ ನೆರಹಿನಿಲ್ಲಲು ನೀನುಬಿಡದೆ ಅಭಯವಿತ್ತು ಹರುಷದಿ ವಾರಾಹಿ3ಶುಂಭನಿಶುಂಭರೆಂಬ ರಾಕ್ಷಸರುಪಟಳಅಂಬುಜಾಂಡಕೆ ರಂಭಾಟವದು ಹೆಚ್ಚೆಜಂಭಾರಿದಿವಿಜರೆಲ್ಲ ನಿಲ್ಲದೆ ದೂರಬೆಂಬಿಡದ್ಹೇಳಲೆಲ್ಲ ಕೇಳಿಯೆ ಉ-ಗ್ರಾಂಬಕಳಾಗಿ ನಿಲ್ಲೆ ಅಸುರ ಕಾದಂಬ ನಿನ್ನನುಕಂಡು ಬೆದರಿ ವೋಡಿದರೆಲ್ಲ4ಆರು ನೀನೆಂದು ಶುಂಭನ ದೂತ ವಿಚಾರಿಸೆ ಕೇಳಿಯೆ ಎಮ್ಮರಸನಿಗೆನಾರಿ ನೀ ಸತಿಯಳಾಗು ಜಾಗತ್ಯಕ್ಕೆವೀರ ಶುಂಭನ ಸೊಬಗು ಬಣ್ಣಿಸುವೊಡೆಮೂರು ಲೋಕಕೆ ಹೊರಗು ಬಾ ಎನೆ ನೀನುಚೋರಗುತ್ತರ ವಿತ್ತೆ ಹೇಳ್ವೆನೇನದ ಬೆರಗು5ಕೇಳು ಶುಂಭನ ದೂತ ಖೇಳ ಮೇಳದಿ ನಾನುಕೀಳು ಸಪ್ತದಿಯಾಡ್ದೆ ಈರೇಳು ಲೋಕದಲಿತೋಳು ಸತ್ವವು ಬಲಿದು ಸಮರದಲಿಸೋಲಿಸೆನ್ನನು ಪಿಡಿದು ಒಯ್ಯಲು ಅವರಾಳು ಆಗಿಯೆ ನಡೆದು ಬಹೆನು ಪೋಗಿಖೂಳರ ಕರೆದು ತಾ ರಣಕೆಂದು ನುಡಿದು6ಅಂಬವಚನವಶುಂಭಕೇಳಿಸುಗ್ರೀವನೆಂಬ ನಿಶಾಚರ ಶುಂಭನಲ್ಲಿಗೆ ಪೋಗಿಶಾಂಭವಿಯಾಡಿದುದ ಶಬ್ದವ ಕೇಳ-ಲಂಬುದಿಯ ನೀಂಟುವುದ ವಡಬಾನಳ-ನೆಂಬವೋಲ್ ಕೋಪವ ತಾಳ್ದು ಬರಲು ಸರ್ವಸಂಭ್ರಮದಲಿ ನೋಡಿ ಎದ್ದು ನೀ ನಿಂದುದನು7ಸರಸರನೆ ಶುಂಭಾಸುರನ ಬಲ ಬರೆ ಕಂಡುಗರಗರನೆ ಹಲ್ಲ ಕೊರೆದು ಅವನ ದಂಡಸರಕುಗೊಳ್ಳದೆ ಛೇದಿಸಿ ಸುಭಟವೀರರಿರವನೆಲ್ಲಾ ಶೋಧಿಸಿಶುಂಭನಿಶುಂಭರಶೋಣಿತಕಾರಿಸಿ ಸುರರಿಗಿತ್ತೆಸ್ಥಿರವಪ್ಪ ಸೌಭಾಗ್ಯದವರ ನೀ ಪಾಲಿಸಿದೆ8ದುಷ್ಟ ಜನರೆಲ್ಲ ಸುಟ್ಟು ಭಸ್ಮಮಾಡಿಶಿಷ್ಟ ಜನರ ಪ್ರಾಣಗುಟ್ಟು ನೀನೆಂತೆಂಬರನಟ್ಟಿ ದಟ್ಟಿಸಿದೆ ಪರಾಂಬ ಭಕ್ತರ ಅ-ಭೀಷ್ಟ ಪಾಲಿಪ ಜಗದಾಂಬ ದುರ್ಜನರಘ-ರಟ್ಟಳಹುದೇ ತ್ರಿಪುರಾಂಬ ರಕ್ಷಿಸು ಎನ್ನಶಿಷ್ಟ ಚಿದಾನಂದಅವಧೂತಬಗಳಾಂಬ9
--------------
ಚಿದಾನಂದ ಅವಧೂತರು
ವಾರಿಜನಾಭನ ಕರುಣವೆ ಸ್ಥಿರ ಸಂಸಾರ್ಯೆರವು ಕೇಳಾತ್ಮಜಾರುತದಾಯು ದೂರದ ಮುಕುತಿಯದಾರಿಯ ಪಾಥೇಯ್ಯೆಲ್ಲಾತ್ಮ ಪ.ಧರ್ಮದ ಸರಕಿಲ್ಲದವನೆಂದು ಬೇಗ್ಯಮಧರ್ಮ ಭಟರು ಬಂದರಲ್ಲೊಚರ್ಮದ ಮನೆ ಬಿಡಿಸಿದರು ಮುಟ್ಟಲು ನೋವಕರ್ಮಯಾತನೆ ಕೊಟ್ಟರಲ್ಲೊಹಮ್ರ್ಯನಿಕೇತನ ವೃತ್ತಿಕ್ಷೇತ್ರವನು ಅಧರ್ಮಿಗಳಗಲಿಪರಲ್ಲೊಮರ್ಮವರಿತು ತ್ರಾಟಿಸುವಾಗ ಶ್ರೀವಿಶ್ವಕರ್ಮನ ಪೂಜೆ ಹೋಯಿತೆಲ್ಲೊ 1ಹೆಡಗೈಯಕಟ್ಟಿಪರಿಘದೊಳು ಬಡಿವಾಗಮಡದಿ ಮಕ್ಕಳ ಸಹಾಯವೆಲ್ಲೊಒಡೆಯ ದಮ್ಮಯ್ಯ ನಮ್ಮಯ್ಯನೆಂದರೆಕಾಲಹಿಡಿದರೆ ಕೊಡಹಿದರಲ್ಲೊಸುಡುವ ಮಳಲು ಹುಡಿ ಕಲ್ಮುಳ್ಳೊಳೆಳೆವಾಗಹಿಡದೇಜಿ ಕೊಂಬುಕಾಳೆಲ್ಲೊಪೊಡವಿಲಿ ಬಂದಾಗ ಹರಿಸೇವೆ ಮಾಡದೆಕಡುಹುಂಟಾದರೆ ತೋರದೆಲ್ಲೊ 2ಕೀವು ರುಧಿರವಿಟ್ಟ ಕುಂಡದಿ ಮುಣುಗುವಾಗ್ಹ್ಯಾವಿನ ಮಾತೇನಾಯಿತಣ್ಣಸಾವುತೀನವ್ವಪ್ಪಾ ಮೊರೆಯ ಕೇಳೆಂದರೆಆವಾಗಬಾಧೆ ಕಾಣಣ್ಣಆವೈವಸ್ವತದಂಡ ಕೊಟ್ಟು ಬೊಗಳೆಂಬಾಗಚಾರ್ವಾಕತನವೆಲ್ಲಣ್ಣಆ ವಾಸುದೇವನ ಭಟಸಂಗ ನಿನಗೀಗ ವೈರ ಆಗೆಲ್ಲಿದಣ್ಣ 3ನಾಲಿಗೊಣಗಿ ನೀರು ಕೂಳೆಂದು ಅಳುವಾಗಹಾಲ ಶಾಲ್ಯೋದನವೆಲ್ಲೊಮ್ಯಾಲೆ ಮ್ಯಾಲ್ವೈತರಣಿ ಸ್ನಾನವ ಮಾಡುವಕಾಲಕೆ ಅಭ್ಯಂಗನವೆಲ್ಲೊಕಾಲನ ದೂತರ್ಗೆ ಕೊಟ್ಟುಳಿವೆನೆಂದರೆಹೂಳಿದ ಧನ ದೂರಾಯಿತಲ್ಲೊಕಾಲಕಾಲಕೆ ದ್ವಿಜಪಂಕ್ತಿಭೋಜನಸುಖವ್ಯಾಳೆ ತಪ್ಪಿತನ್ನವೆಲ್ಲೊ 4ಕಷ್ಟಿಸಿ ಬಳಲುವೆ ಹಾಹಾಯೆಂದಳಲುವೆಇಷ್ಟನೆಂಟರು ಹೋದರೆತ್ತಮುಷ್ಟಿಕುಠಾರಪ್ರಹಾರನೋಡುನಿನ್ನವರಿಷ್ಟತನವು ನಿಂತಿತೆತ್ತಶಿಷ್ಟರ ನೋಡದೆ ಸತ್ಕಾರ ಮಾಡದೆನಿಷ್ಠುರ ನುಡಿದೆ ಪ್ರಮತ್ತಕೃಷ್ಣ ನಮೊ ಎಂದು ಕಡೆಗಾಣಲರಿಯೆ ಎಳ್ಳಷ್ಟು ಪುಣ್ಯವ ಕಾಣೆನೆತ್ತ 5ಕಂಗೆಟ್ಟು ತಕ್ರನ್ನೆ ಕಾಸಿ ಸೀಸ್ಯೆರೆವಾಗಅಂಗಣದ ಪಶು ಬಹುದೂರಕೆಂಗೆಂಡಗಂಭವಪ್ಪಿಸುವರು ನಿನ್ನ ಪರಾಂಗನೆಭೋಗಿಚದುರಅಂಗ ಶೃಂಗಾರದ ಕೊನಬುಗಾರ ನಿನಗ್ಹಿಂಗುವದೆ ಯಮದ್ವಾರಮಂಗಳ ಮಹಿಮ ಮುಕುಂದ ಮುರಾರಿ ಶ್ರೀರಂಗನ ಭಕುತಿವಿದೂರ 6ಸುಟ್ಟರೆ ಹಿಡಿಬೂದಿ ಕೆಟ್ಟರೆ ಕ್ರಿಮಿಕಾಯಇಟ್ಟರಿರದು ವಾಯುವಿರದೆಹುಟ್ಟಿ ಸುಜನ್ಮದಿ ಜಾಣರಾಗದೆಬುಧರಟ್ಟುವರೆ ದಿವಸ ಬರಿದೆಇಟ್ಟಣಿಸಿದ ಭವಗತ ಸುಖದು:ಖವುಂಡುಟ್ಟು ರಾಮನ ಮನವಿರದೆಕಟ್ಟಕಡೆಲಿ ನರಕವನುಂಬೋದುಚಿತಲ್ಲದಿಟ್ಟನಾಗು ಮಾಯೆಯಜರಿದು7ನಿತ್ಯನೈಮಿತ್ಯಕಾಮ್ಯಾದಿ ಸತ್ಕರ್ಮವಮತ್ತೆ ತಿಳಿದು ನಡೆ ಆತ್ಮಹತ್ಯವಸತ್ಯ ಅನ್ಯವಧೂಜನಸಖ್ಯಪರವಿತ್ತದಂಜಿಕೆ ಇರಲ್ಯಾತ್ಮಕರ್ತಮೂರವತಾರಿ ಪೂರ್ಣ ಬೋಧಾಚಾರ್ಯರಭೃತ್ಯನಾಗಿ ಬಾಳೊ ಆತ್ಮಎತ್ತೆತ್ತ ನೋಡಲು ಬೆನ್ನಬಿಡದೆಕಾವಪ್ರತ್ಯಕ್ಷನಾಗಿ ಪರಮಾತ್ಮ 8ಮಂಗಳಾತ್ಮರಿಗೆಅಹರ್ನಿಶಿಶ್ರೀವರಅಂಗಜಜನಕನೆಚ್ಚರಿಕೆಸಂಗಡಿಸಿದ ವಿಷಯಂಗಳಿದ್ದರೇನುತಂಗಳ ಅನ್ನದೋಕರಿಕೆಹಿಂಗದೆ ವರಸಂಗ ಮಾಡಿದರೊಯಿವರುಮಂಗಳಾತ್ಮಕನಿದ್ದ ಪುರಕೆಬಂಗಾರ ಮನೆಯ ಪ್ರಸನ್ವೆಂಕಟೇಶನಡಿಂಗರರಿಗೆ ನರ್ಕಸರ್ಕೆ 9
--------------
ಪ್ರಸನ್ನವೆಂಕಟದಾಸರು