ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿನ ದಿನವೇ ಶುಭದಿನವು | ಇಂದಿರೇಶನ ಕೀರ್ತಿಯ ಕೊಂಡಾಡಿದೆವೆಂದು ಪ ಮುನ್ನ ಮಾಡಿದ ಜನ್ಮಾಂತರದ ದುಷ್ಕ್ರತವೆಂಬ | ಘನ್ನ ಕೆಸರಸೋಸಿ ಹೃದಯ ಶುದ್ದಾಯಿತೆಂದು 1 ತರಣಿ ಉದಯವಾಗಿ | ಪರಿಹಾರಾಯಿತು ಅಜ್ಞಾನವೆಂಬ ಕತ್ತಲೆಯಿಂದು 2 ಕಂದ ನೊಡೆಯ ತನ್ನ ಸ್ಮರಣೆ ಕೊಟ್ಟನೆಂದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೃಷ್ಣಚಿತ್ತ ಕೃಷ್ಣಚಿತ್ತ ಕೃಷ್ಣಚಿತ್ತ ಎನ್ನಿರೊ ಪ. ಕೃಷ್ಣಧ್ಯಾನದಿಂದ ಪರಮ ತುಷ್ಟರಾಗಿ ಸುಖದುಃಖ ಕಷ್ಟ ಕರ್ಮಂಗಳು ಎಲ್ಲ ಅಷ್ಟು ಹರಿಯಾಧೀನವೆಂದು ಅ.ಪ. ಜನನವಾದ ಕಾಲದಿಂದ ಇನಿತು ಪರ್ಯಂಕಾರದಲ್ಲಿ ಅನುಭವಿಸಿದಂಥ ಕರ್ಮ ಗುಣನಿಧಿಯಾಧೀನವೆಂದು1 ಕಷ್ಟದಲ್ಲಿ ಕಳೆದ ಕಾಲ ಅಷ್ಟರಲ್ಲೆ ಪಟ್ಟ ಸುಖ ಕೊಟ್ಟ ಹರಿಯು ಎನಗೆ ಎನುತ ಕೆಟ್ಟ ವಿಷಯ ಮನಕೆ ತರದೆ 2 ಕಾಮ ಕ್ರೊಧ ಲೋಭ ಮೋಹ ಆ ಮಹಾ ಮದ ಮತ್ಸರಗಳು ಕಾಮಿಸಿ ಮನ ಕೆಡಿಸುತಿರಲು ಶ್ರೀ ಮನೋಹರನಾಟವೆಂದು 3 ಪೊಂದಿದಂಥ ಮನುಜರಿಂದ ಕುಂದು ನಿಂದೆ ಒದಗುತಿರಲು ಇಂದಿರೇಶನ ಕರುಣವೆಂದು ಒಂದು ಮನಕೆ ತಾರದಂತೆ 4 ಮಾನ ಅಪಮಾನಗಳು ದೀನನಾಥನಧೀನವೆಂದು ಜ್ಞಾನಿಗಳ ವಾಕ್ಯ ನೆನೆದು ಮಾನಸದ ದುಃಖ ಕಳೆದು 5 ಹೊಟ್ಟೆ ಬಟ್ಟೆಗೊದಗುವಂಥ ಅಷ್ಟು ಕಷ್ಟ ಸುಖಗಳೆಲ್ಲ ವಿಷ್ಣುಮೂರ್ತಿ ಕೊಟ್ಟನೆಂದು ಮುಟ್ಟಿ ಮನದಿ ಹರಿಯ ಪದವ 6 ಹರಿಯ ಧ್ಯಾನ ಮಾಡುವುದು ಹರಿಯ ಧ್ಯಾನ ಅರಿಯುವುದು ಮೂರ್ತಿ ಕಾಣುವುದು ಹರಿಯಧೀನವೆಂದು ತಿಳಿದು 7 ಗುರುಕೃಪೆಯಿಂ ದತ್ತವಾದ ವರ ಸುಜ್ಞಾನವರೆಯ ತಿಳಿದು ಹರುಷ ಕ್ಲೇಶಾ ಮನಕೆ ತರದೆ ಮೂರ್ತಿ ಮನಕೆ ತಂದು 8 ನಿಷ್ಟೆಯಿಂ ಗೋಪಾಲ ಕೃಷ್ಣವಿಠ್ಠಲಾಧೀನ ಜಗವು ಇಟ್ಟ ಹಾಗೆ ಇರುವೆನೆಂದು ಗಟ್ಟಿಮನದಿ ಹರಿಯ ಪೊಂದಿ 9
--------------
ಅಂಬಾಬಾಯಿ
ಮಚ್ಛನೇತ್ರಿಯರಿಗೆ ಉಚಿತವನೆಅಚ್ಯುತಕೊಟ್ಟನೆಂದುಉಚ್ಛವದಿಕೋಲಹೊಯ್ದೇವಕೋಲಪ.ಮುತ್ತು ಮಾಣಿಕದ ವಸ್ತ ಮತ್ತೆ ಕುದುರೆಯ ಸಾಲುಛsÀತ್ರ ಚಾಮರ ರಥಗಳುಕೋಲಛsÀತ್ರ ಚಾಮರ ರಥ ಉಚಿತವಅರ್ಥಿಲೆ ದ್ರೌಪತಿಗೆ ಹರಿಕೊಟ್ಟಕೋಲ1ಸಾರಾವಳಿಯ ಸೀರೆ ಥೋರ ಮುತ್ತಿನ ಸರಹಾರಭಾರಗಳು ಹಿಡಿದೇಜಿಹಾರಭಾರಗಳು ಹಿಡಿದೇಜಿ ಉಚಿತವನಾರಿ ಕುಂತೆಮ್ಮಗೆಹರಿಕೊಟ್ಟಕೋಲ2ದುಂಡು ಮುತ್ತಿನ ವಸ್ತ ತಂಡ ತಂಡದ ಜವಳಿಪಂಡಿತರಿಗೆಲ್ಲ ಉಚಿತವಪಂಡಿತರಿಗೆಲ್ಲ ಉಚಿತವ ಸಭೆಯೊಳುಪುಂಡರಿಕಾಕ್ಷ ಇವು ಕೊಟ್ಟಕೋಲ3ಲೆಕ್ಕ ವಿಲ್ಲದೆ ವಸ್ತ ಅಚ್ಚ ಬೆಳಕಿನ ಸೀರೆಸಂಖ್ಯವಿಲ್ಲದಲೆ ರಥಗಳುಸಂಖ್ಯ ವಿಲ್ಲದಲೆ ರಥಗಳ ಪಾಂಡವರಮಿಕ್ಕ ಮಡದಿಯರಿಗೆ ಇವು ಕೊಟ್ಟಕೋಲ4ಅರ್ಥಿನೋಡಬಂದ ಜನಕೆ ಮುತ್ತು ರತ್ನದ ವಸ್ತಚಿತ್ತಜನೈಯ ಇವುಕೊಟ್ಟಕೋಲಚಿತ್ತಜನೈಯ್ಯ ಇವುಕೊಟ್ಟ ರಮಿ ಅರಸುವಿಸ್ತರಿಸಿ ಹೇಳಲೊಶವಲ್ಲ 5
--------------
ಗಲಗಲಿಅವ್ವನವರು