ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವ ಮುಗಿದು ಗುರುವಿನ ನೀ ಅರಿಯೊ ಸುಹಿತಾರ್ಥಿಯ ನೆರೆಯೊ ದೀರ್ಘದಂಡಹಾಕಿ ತರಣೋಪಾಯ ಮೂರ್ತಿಯ ಬೆರಿಯೋ ಕುರುವ್ಹ ತಿಳಿವ ಪರಮಭಕ್ತಿ ಮನೆಮೂರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 1 ಕರೆವ ಮಳೆಯು ಕರುಣಿಸಿನ್ನು ಪರಮದಯ ವೃತ್ತಿಯ ಶರಣ್ಹೋಕ್ಕಾಶ್ರೈಸೊ ನೀನು ತ್ವರಿತ ಶ್ರೀಪತಿಯ ಮರಿಯದೆ ಕೊಂಡಾಡಬೇಕು ಧರೆಯೊಳಿದೆ ಕೀರ್ತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 2 ಯರಕವಾಗಿ ಸರಕನಿನ್ನು ನೀನು ಕರಕೊ ದೃಢಭಕ್ತಿಯಾ ಅರಕಕೋಟಿ ತೇಜನಂಘ್ರಿ ಹರಿಕಿಸೊ ನೀ ಪೂರ್ತಿಯಾ ಗರಕನೆವೆ ಅರಿಕೆಮಾಡಿಕೊಂಡು ಸುಸಂಗತಿಯ ತರಕೈಸಿಕೊಳ್ಳು ಶ್ರೀಪಾದ ಪೂರ್ಣಗುರುಮೂರ್ತಿಯ 3 ಏರು ಅರು ಚಕ್ರ ನೋಡಿ ತಾರಿಸುವ ಸ್ಥಿತಿಯ ಅರವೆ ಅರವೆ ಆಗಿ ದೋರುತದೆ ಸುಜಾಗ್ರತಿಯ ಎರಗಿ ಹರುಷದಿಂದ ಪಡೆಯೊ ಪರಮ ವಿಶ್ರಾಂತಿಯ ಸ್ಮರಿಸೊಮನವೆ ಚರಣಕಮಲ ಪೂರ್ಣ ಗುರುಮೂರ್ತಿಯ 4 ಸುರರ ವಂದ್ಯ ಪರಮಭೇದ್ಯ ಅರಿಯಾ ಪರಗತಿಯ ಸಾರತಿಹ ಶ್ರುತಿವಾಕ್ಯ ಕೇಳೊ ಇಟ್ಟು ಪ್ರೀತಿಯ ತ್ಯರನೆ ತಿಳುಹಿಸಿಕೊಟ್ಟ ಗುರುವಿಗೆ ನಿತ್ಯಪ್ರತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 5 ಗುರುಮೂತ್ರ್ಯಾಭೇದ್ಯವೆಂಬ ಗುರುತಕೇಳೋ ಅರ್ಥಿಯ ಕುರಹು ದೋರಿಕೊಟ್ಟ ಗುರುವಿಗೆ ನೀ ಮಾಡೊ ಸ್ತುತಿಯ ಮರೆದುಬಿಡೊ ತರಳತನದ ಹರುವಾ ನಿನ್ನಭ್ರಾಂತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ6 ತರತರದಿ ಸಾಂದ್ರವಾಗಿ ದೋರುತಿಹ ದೀಪ್ತಿಯ ಪ್ರಾರ್ಥಿಸಬೇಕೊಂದೆ ಸರ್ವಕಾಲ ವಸ್ತುಗತಿಯ ಪರಿಪರಿಸುಖ ದೋರುವ ಕರುಣಾನಂದ ಯತಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 7 ಸರ್ವಸುಖದೋರ್ವದೊಂದೆ ಸರ್ವಫÀಲ ಶ್ರುತಿಯ ಸರ್ವದಾವೆಂಬುವದು ನವರತ್ನಮಾಲೆ ಸ್ತುತಿಯ ಪೂರ್ವಕರ್ಮ ಹರಿಸುವ ಸದ್ಗುರು ಸಾಮಥ್ರ್ಯಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 8 ಶರಣಜನರಾಭರಣವಿದೆ ಅರಿಯಬೇಕೀವಾರ್ತೆಯ ತರಳ ಮಹಿಪತಿ ನೀ ಮಾಡೊ ಇರುಳ ಹಗಲ ಆರ್ಥಿಯ ಕರವ ಪಿಡಿದು ಪಾರಗೆಲಿಸುವ ನಿನ್ನ ಸಾರ್ಥಿಯ ಸ್ಮರಿಸೊ ಮನವೆ ಚರಣಕಮಲ ಪೂರ್ಣಗುರುಮೂರ್ತಿಯ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕುವ್ಯಾಸಮುನಿರಾಯರ ಸಂನ್ಯಾಸದಿರವ ಪ ಆಸೆಯಿಂದ ತಮ್ಮುದರ ಪೋಷಣೆಗಾಗಿ ಛಪ್ಪನ್ನದÉೀಶವ ತಿರುಗಿ ಸಂಚಾರ ಮಾಡುತಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನಮೋಸಮಾಡಿ ಕಳೆವ ಸನ್ಯಾಸಿಗಳ ಸರಿಯೆ1 ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂಸುರರೊಂದು ಲಕ್ಷ ಕುಟುಂಬಗಳಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾಯರ ಗುಣಗಣ ಗಾಂಭೀರ್ಯಾದಿಗಳ2 ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮಯುಗಳವನರ್ಚಿಸಿ ಭಕುತಿಯಿಂದರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರರಂಗವಿಠಲನನ್ನು ಬಿಡೆಬಿಡೆನು ಎಂಬ3
--------------
ಶ್ರೀಪಾದರಾಜರು