ಒಟ್ಟು 22 ಕಡೆಗಳಲ್ಲಿ , 14 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

2. ನಂಜನಗೂಡು ದೇವತಾಮಯನಾಗಿ ಸಕಲ ಪ್ರಾಣಿಗಳ ನಾ- ನಾ ವಿಧದ ಪೂಜೆಗಳ ಕೈಗೊಂಬದೇವ ಪ ಕಪಟಮಾತಾರೂಪವಳವಡಿಸಿ ಕೊಲಲೆಂದು ಚಪಲಗತಿಯಿಂ ಬಂದ ಪೂತನಿಯನು ಉಪಮೆಯಿಂದಸುವರೆಸಿ ಘನಕುಚಂಗಳನೂಡೆ ಅಪರಿಮಿತವಾದ ನಂಜುಂಡ ಮಹದೇವ 1 ಕಡಹದ ಮರದ ಕೊನೆಯನಡರಿ ಕಾಳಿಂದಿಯ ಮಡುವಿನಲಿ ಧುಮುಕಿ ಪಣಿಪೆಡೆಯ ತುಳಿದು ಮೃಡ ಮುಖ್ಯಸುರರುಘೇಯೆನೆ ಕೋಪಶಿಖಿಯಿಂದ ಮಡುವಿಲುರುತರದ ನಂಜುಂಡ ಮಹದೇವ 2 ರುದ್ರಾಂತರಾತ್ಮ ವೈಕುಂಠಸಂಕರ್ಷಣ ಸ- ಮುದ್ರ ಮಥನದ ಕಡೆಯಲುದಿಸಿ ಜಗವ ರೌದ್ರವತಾರದಿಂದುರಿಯುರುಪುತಿರೆ ಕಂತು ಸದೃಢಮನದಿ ನಂಜುಂಡ ಮಹದೇವ 3
--------------
ಬೇಲೂರು ವೈಕುಂಠದಾಸರು
ಎಷ್ಟೆಂದು ಪೇಳುವೆನು ನಮ್ಮುಡುಪಿಯ ಕೃಷ್ಣನÀ ಮಹಿಮೆಯನು ಅಷ್ಟೋತ್ತರ ಶತಯೀರೆಂಟು ಸಾವಿರ ಶ್ರೇಷ್ಠ ಮಹಿಷಿಯರ ಸೇವೆ ಕೈಗೊಂಬುದ ಪ. ದ್ವಾರಕೆಯೊಳಗೆ ನೆಲೆ ತೋರುತಲಿದ್ದು ಸ್ವಾರಿ ಹೊರಟ ಮೇಲೆ ಕಾರುಣ್ಯನಿಧಿ ಕಡಲೊಳು ಬಂದು ಕಮಲಾಸ- ನಾರೂಹನಾಗುವ ನರಯತಿಯನು ಕಂಡು ಘೋರತರ ಸಂಸಾರಕೂಪವ ಸೇರಿ ಬಳಲುವ ಸಕಲಸುಜನೋ- ದ್ಧಾರ ಮಾಡುವೆನೆಂದು ಮೂರ್ತಿಯ ತೋರುತಿಲ್ಲಿಹ ತ್ರಿಭುವನೇಶನ 1 ಪಾಪಿಷ್ಠ ಕಲಿಯಾಳುತ್ತಿರುವ ಕಾಲದಲಿ ಸ್ತ್ರೀ ರೂಪದಿಂದಲಿ ಪೂಜೆಯ ಕೊಳಲು ಸುಜ- ನಾಪವಾದದ ಭೀತಿಯ ತಾನೆನಸಿ ಮನದಲಿ ಕಾಪುರುಷನನು ಕಣ್ಣ ಕಟ್ಟಿ ಮಹಾಪರಾಧಿಗಳೊಳಗೆ ಸೇರಿಸಿ ಭೂಪತಿಗಳಲ್ಲಿರುವ ಯತಿವರ ರೂಪರೊಡನಾಡುವ ಪರಾತ್ಮನ 2 ಪಾಂಡುಕುಮಾರರು ಪರಿಯಾರು ಕ್ರಮದಿಂದ ಹೆಂಡತಿಯಾಳ್ದರೆಂದು ದೂಷಿಸುವರ ಕಂಡು ತಾ ಮನಕೆ ತಂದು ಕಾರುಣ್ಯ ಸಿಂಧು ಕುಂಡಲೀಂದ್ರ ಗಿರೀಂದ್ರ ನಿಜಪದ ಪುಂಡರೀಕ ಛಾಯಗಳ ಮತಿ- ವತ್ಸರ ದ್ವಯ ಖಂಡನೆ ಕೈಕೊಂಡು ಮೆರಪನ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸುರಾಸುರಾರ್ಚಿತ ಸರೋಜಲೋಚನ ಸರಾಗದಿಂದೆನ್ನನೀಕ್ಷಿಸೈ ಪರಾಪರೇಶನೆ ಪರಾತ್ಪರನೆ ನೀ ಪರಾಕುಮಾಡದೆ ಪಾಲಿಸೈ ಪ ವಿರಾಜಮಾನ ಸುವಿರಾಜವಾಹನ ವಿರಾಟ್ಪುರುಷ ವಿಶ್ವಂಧರ ಕರಾರವಿಂದದಿ ಕರಾದಿಗಳ ಪಿಡಿ ಧರಾತಿಮರ್ದನ ಧುರಂಧರ 1 ಧರಾಧರಣಿಪಟು ಧರಾಧರಾಧಿಪ ಧುರಾವಹನ ದುರ್ಧರ್ಷಣ ಧರಾಮರರ ಬಹುಪರಾಭವವ ಬಲು ಸರಾಗದಲಿ ನಿರ್ವಾಪಣ 2 ಜರಾಮರಣಗಳ ನಿರಾಕರಿಸಿ ವಸುಂಧರಾಭರಣ ಗುಣಭೂಷಣ ಸುರಾರಿಮರ್ದನ ಶರಾಸನಾಂಚಿತ ಕರಾನಿಹಿತ ಮಣಿಕಂಕಣ 3 ಶಿರೀಷ ಕುಸುಮದ ಸರಿಸುಕೋಮಲಶರೀರ ನಿನ್ನದು ಈ ಪರಿ ಸಿರಿಯುದರದೊಳೇ ಸಿರಿಯಧರಿಸಿದ ಪರಿಯದೆಂತುಟೋ ಕೇಳ್ ಹರಿ 4 ಪಯೋಧಿತನಯಾ ವಯೋಸುರೂಪನೆ ದಯಾನಿಧೇ ಧರ್ಮಾತ್ಮನೆ ದಯಾರಸದಿ ಹೃತ್ಪಯೋಜಮಧ್ಯದಿ ನಿಯಾಮಿಸುವ ನಿರ್ಮಾಯನೆ 5 ವರೇಣ್ಯ ಸಜ್ಜನ ಶರಣ್ಯ ಪುಲಿಗಿರಿಯರಣ್ಯ ಮಧ್ಯವಿರಾಜಿತ ಹಿರಣ್ಮಯಾಂಬರ ಹಿರಣ್ಯಕಾಂತಕ ಹಿರಣ್ಯಗರ್ಭಸುಪೂಜಿತ 6 ವ್ಯಾಘ್ರನೆಂಬುವತ್ಯುಗ್ರ ದೈತ್ಯನಂ ನಿಗ್ರಹಗೈದ ಮಹಾತ್ಮನೆ ಶೀಘ್ರದಿ ಭಕ್ತಾನುಗ್ರಹಮಾಳ್ಪ ಸುರಾಗ್ರಗಣ್ಯ ಪುಣ್ಯಾತ್ಮನೆ 7 ಸುರರು ನರರು ನಿನ್ನರಿಮೆಯನರಿಯದೆ ನಿರುತವು ಸನ್ನುತಿಗೈವರೆ ಪರಮಪುರುಷ ಸುಖಕರ ನೀನೆನ್ನುತ ಪರಿಪರಿ ನಿನ್ನನೆ ಪೊಗಳ್ವರೆ 8 ಮೂಜಗ ಮಾಡುವ ಪೂಜೆಯಿಂದ ನೀನೀ ಜಗದಲಿ ಒಲಿದಿರ್ಪೆಯ ಮೂಜಗ ಪೂಜಿಪ ವ್ಯಾಜದಿಂದ ನಿಜಪೂಜೆಯ ನೀ ಕೈಗೊಂಬೆಯ 9 ನಿಜಪದದೊಳು ನೀನಜಭವ ಮುಖಸುರವ್ರಜಗೋಚರನಾಗಿಲ್ಲವೈ ಸುಜನರ ಪೊರೆಯವ ನಿಜಮತಿಯಿಂದಲಿ ತ್ರಿಜಗಕ್ಕೆ ಗೋಚರನಾಗಿಹೈ10 ನಿತ್ಯತೃಪ್ತ ನೀನತ್ಯುತ್ತಮ ನಿಜಭೃತ್ಯನಮತ್ರ್ಯನು ಮೋದದಿ ನಿತ್ಯದಿ ನಿನ್ನತ್ಯುತ್ತಮ ಪದದೊಳು ಭಕ್ತಿಯ ಪಾಲಿಸು ನೇಮದಿ 11 ಧರಣಿಯೊಳುರುತರ ಮೆರೆಯುವ ಫಣಿಭೂ ಧರದೊಳು ನಿರುತವು ಭಕ್ತರ ಸಿರಿವಲ್ಲಭ ವರದ ವಿಠಲ ಕರುಣಾಕರ 12
--------------
ವೆಂಕಟವರದಾರ್ಯರು
* ಎಂಥಾದ್ದೊ ಶ್ರೀ ತಿರುಪತಿ | ಎಂಥಾದ್ದೊ ಪ. ಎಂಥಾದ್ದೊ ತಿರುಪತಿ ಕ್ಷೇತ್ರ | ಸ ತ್ಪಾಂಥರಿಗಿಲ್ಲಿ ಸುಗಾತ್ರ | ಆಹ ಕಂತುಪಿತನು ಇಲ್ಲಿ ನಿಂತು ಭಕ್ತರಿಗೆಲ್ಲ ಸಂತಸಪಡಿಸುವನಂತಾದ್ರಿನಿಲಯ ನಿನ್ನೆಂದಾದ್ದೊ ಅ.ಪ. ನಾಗಾದ್ರಿಗಿರಿಯ ಮೆಟ್ಟುಗಳು | ಅ ಯೊಗ್ಯರಿಗಿದು ದುರ್ಲಭಗಳು | ಅಲ್ಲಿ ಭಾಗವತರ ಸಮ್ಮೇಳಗಳು | ಶಿರ ಬಾಗಿ ವಂದಿಪರು ಜನರುಗಳು | ಆಹ ಪೋಗುತ ಗಾಳಿಗೋಪುರವ ಕಂಡೆರಗಿ ಮುಂ ದ್ಯಾಗುತ ಸಜ್ಜನ ನೀಗುವರು ದುಃಖ1 ಹರಿಮಂದಿರ ಮಹಾದ್ವಾರ | ಬಹು ಜ ನರು ಕೂಡಿಹರು ವಿಸ್ತಾರ | ಬೀದಿ ನಡೆದು ಪದ್ರಕ್ಷಿಣಾಕಾರ | ಭೂ ವರಹನ ಸ್ವಾಮಿ ಕಾಸಾರ | ಆಹ ಹರುಷದಿಂದಶ್ವತ್ಥ ತರುವ ಕಂಡೆರಗಿ ಹರಿ ದರುಶನಕಾಗಿ ಹಾರೈಸುವ ಜನತತಿ 2 ಸ್ವಾಮಿಪುಷ್ಕರಣಿಯ ಸ್ನಾನ | ಮನ ಕಾನಂದಪ್ರದ ಸುಜ್ಞಾನ | ಭಾನು ತಾನುದಿಸುವನು ಮುಂದಿನ | ಸುಖ ಕೇನೆಂಬೆ ಹರಿಯ ದರ್ಶನ | ಆಹ ನೀನೆ ಗತಿಯೆಂದು ನಂಬಿದವರ ಪೊರೆವ ಭಾನುಪ್ರಕಾಶ ಹಣ ಕಾಣೀಕೆ ಕೈಕೊಂಬ 3 ಗರುಡ ಸ್ಥಂಭವನೆ ಕಾಣುತ್ತ | ಬಾಗಿ ಕರಮುಗಿದು ಒಳದ್ವಾರ ಪೊಗುತ | ವಿಮಾನ ಗಿರಿ ಶ್ರೀನಿವಾಸಗೆರಗುತ್ತ | ಬಂದು ವರ ತೊಟ್ಟಿ ತೀರ್ಥ ಕೊಳ್ಳುತ್ತ | ಆಹಾ ತರತರದ ಕಾಣಿಕೆ ಕೊಪ್ಪರಿಗೆಗೆ ಸುರಿಯುತ್ತ ನಿರುತ ನೀ ಸಲಹೆಂದು ಮೊರೆಯಿಡೆ ಭಕ್ತರು 4 ಗರುಡನ ಎದುರೊಳು ನಿಂದು | ಸ್ವಾಮಿ ಗರುವ ರಹಿತ ತಾ ಬಂದು | ಬಂದ ವರಭಕ್ತರನೆ ಕಾಯ್ವ ಬಿರುದು | ಇಂಥ ಹರಿಗೆ ಅಮೃತೋದಕವೆರೆದು | ಆಹಾ ಜರಿಯ ಪೀತಾಂಬರ ಉಡಿಸಿ ಸರ್ವಾಭರಣ ಹರಿಗೆ ಶೃಂಗರಿಸಿಪ್ಪ ಪರಿಯ ವರ್ಣಿಸಲಳವೆ 5 ಶಿರದಲಿ ಪೊಳೆವ ಕಿರೀಟ | ಕ ಸ್ತೂರಿ ತಿಲಕವು ಸುಲಲಾಟ | ಸುರ ನರರ ಪಾಲಿಪ ವಾರೆ ನೋಟ | ಕರ್ಣದಿ ಕುಂಡಲ ಮಾಟ | ಆಹ ವರ ಸಂಪಿಗೆಯ ಪೋಲ್ವ ನಾಸಿಕದ ಕದಪುಗಳ್ ಮೆರೆಯೆ ಕನ್ನಡಿಯಂತೆ ಮುಗುಳು ನಗೆಯ ಚೆಲ್ವ 6 ಸಿರಿವತ್ಸ ಕೌಸ್ತುಭಹಾರ | ಕಂಠ ಕರಶಂಖ ಚಕ್ರವಪಾರ | ಸುರ ನರರಿಗಭಯ ತೋರ್ಪಧೀರ | ಕರ ದ್ವರವ ಕೊಡುವಂಥ ಉದಾರ | ಆಹ ತರತರದ ಪುಷ್ಪಗಳ್ ನವರತ್ನ ತುಳಸಿಯ ಮೆರೆವೊ ಹಾರಗಳನು ಧರಿಸಿರ್ಪ ಗಂಭೀರ 7 ವಕ್ಷಸ್ಥಳದಲ್ಲಿ ಲಕುಮಿ | ಹರಿ ಅವನಿ | ಜಗ ರಕ್ಷಿಪ ಮಮಕುಲಸ್ವಾಮಿ | ಸರ್ವ ಸಾಕ್ಷಿಯಾಗಿದ್ದು ತಾ ಪ್ರೇಮಿ | ಆಹ ಪಕ್ಷಿವಾಹನ ಸುರಾಧ್ಯಕ್ಷ ಖಳ ಶಿಕ್ಷ ಪಕ್ಷವಹಿಸಿ ಸುರರ ರಕ್ಷಿಪ ಸರ್ವದ 8 ನಡುವಿನ ನಾಭಿ ವಡ್ಯಾಣ | ಮೇಲೆ ಕುಂದಣ | ನೆರೆ ಪಿಡಿದುಟ್ಟ ಪೀತಾಂಬ್ರವರ್ಣ | ಕಾ ಲ್ಕಡಗ ರುಳಿಯು ಗೆಜ್ಜೆ ಪೂರ್ಣ | ಆಹ ಮಡದಿಯರುಭಯದಿ ಪರಿಶೋಭಿಸುತಿರೆ ಪಾದ ದೃಢಭಕ್ತರನೆ ಪೊರೆವ 9 ನೋಟಕತಿ ಚಲುವ ಗಂಭೀರ | ಭಕ್ತ ಕೂಟದಿ ಮೆರೆಯುತಪಾರ | ಉತ್ಸ ಸಾರ | ಭೋಕ್ತ ಸಾಟಿರಹಿತ ಬರುವ ಧೀರ | ಆಹ ಕೋಟಿದೇವತೆಗಳ ನೋಟದಿಂ ಪೊರೆಯುವ ದಾಟಿಸುವ ಭವನಾಟಕಧರದೇವ 10 ಮಚ್ಛಾದ್ಯನೇಕ ಅವತಾರ | ಬಹು ಇಚ್ಛೆಯಿಂದಲಿ ಭಜಿಸುವರ | ಕಾಯ್ವ ಮೆಚ್ಚುತ ಮನದಲಿ ನಾರ | ಸಿಂಹ ಸ್ವೇಚ್ಛೆÉ್ಛಯಿಂ ಮೆರೆವ ಜಗತ್ಸಾರ | ಆಹ ತುಚ್ಛಕರು ವಸನ ಬಿಚ್ಚಿ ಸೆಳೆಯುತಿರೆ ಇಚ್ಛೆಯರಿತು ಲಲನೆ ರಕ್ಷಿಸೆನಲು ಪೊರೆದ 11 ಎಲ್ಲೆಲ್ಲಿ ನೋಡಲು ಭಕ್ತ | ಜನ ರಲ್ಲಲ್ಲಿ ನೆರೆಯುತ ಮುಕ್ತಾ | ಧೀಶ ನಲ್ಲದಿನ್ನಿಲ್ಲೆಂದು ಸ್ತುತಿಸುತ್ತ | ಶ್ರೀಶ ಇಲ್ಲೆ ಬಾರೆಂದು ಕರೆಯುತ್ತ | ಆಹ ಸೊಲ್ಲು ಲಾಲಿಸೊ ಎನಲು ಬಲ್ಲಿದ ಭಕ್ತರ ಸೊಲ್ಲಿಗೆ ಒಲಿಯುವ 12 ಬುತ್ತಿ ಪೊಂಗಲು ಮಾರುವರು | ಜನ ರರ್ಥಿಯಿಂದದನು ಕೊಂಬುವರು | ಗೀತ ನೃತ್ಯ ವಾದ್ಯಗಳಿಂ ಕುಣಿಯುವರು | ಅನ್ನ ಅರ್ಥಿಯಿಂ ದಾನ ಮಾಡುವರು | ಆಹ ಎತ್ತ ನೋಡಲು ಮನಕತ್ಯಂತ ಆನಂದ ನಿತ್ಯ ಉತ್ಸವಗಳು ಸತ್ಯಾತ್ಮ ಕೈಗೊಂಬ 13 ಇಂತು ಮೆರೆವೊ ಕ್ಷೇತ್ರ ಘನವು | ನೋಡಿ ನಿಂತು ವರ್ಣಿಸಲಸದಲವು | ಜಗ ದಂತರಾತ್ಮಕನ ವೈಭವವು | ಗುರು ಅಂತರ್ಯಾಮಿ ಶ್ರೀನಿಧಿಯು | ಆಹ ಇಂತು ಬ್ರಹ್ಮೋತ್ಸವ ನಿಂತು ರಥದಿ ಬರುವ ಕಂತುಪಿತ ಶ್ರೀ ಭೂಮಿಕಾಂತೇರ ಒಡಗೂಡಿ14 ಶ್ರೀಪತಿ ಜಲದೊಳಾಡೀದ | ಕೂರ್ಮ ರೂಪದಿಂ ಗಿರಿಯನೆತ್ತಿದ | ಬಹು ಪಾಪಿ ಕನಕಾಕ್ಷನ ಕೊಂದ | ನೃಹರಿ ರೂಪ ವಾಮನ ಭೃಗುಜನಾದ | ಆಹ ಚಾಪಖಂಡನ ಕೃಷ್ಣಚರಿಸಿ ಬತ್ತಲೆ ಕಲ್ಕಿ ಗೋಪಾಲಕೃಷ್ಣವಿಠ್ಠಲನ ಮಹಾಕ್ಷೇತ್ರ15
--------------
ಅಂಬಾಬಾಯಿ
(40ನೇ ವರ್ಷದ ವರ್ಧಂತಿ) ಕ್ಷಿಪ್ರ ಪ್ರಸಾದಕರ ದೊರೆಯೆ ಅಜಭವಾ- ದ್ಯ ಪ್ರಮೇಯಾ ಸಂತಸುಗುಣಾಬ್ಧಿ ಹರಿಯೆ ಪ. ಇಳೆಯೊಳಗೆ ನಾ ಬಂದು ಕಳೆದೆ ನಾಲ್ವತ್ವರುಷ ಉಳಿದ ಪರಿಮಿತಿಯರಿಯೆ ಗಳಿತವಾಯಿತು ದೇಹ ಬಳಲಿದೆನು ಬಯಲಾಸೆ ಬಲೆಯೊಳಿಂದಿನವರೆಗು ನಳಿನನಾಭನೆ ನಿನ್ನ ನಂಬಿದೆನು ಮನವರಿತು ಮುಳುಗಲಾರೆನು ಮೋಹ ಕಡಲ ಮಾಧವನೆ ತಿಳಿಯದೆ ನಿನಗೆ ಪೊನ್ನೊಡಲ ಮುಂದಿಂತು ದುರಿತ ಸಿಡಿಲ 1 ದೇವಾಧಿದೇವ ತವ ಸೇವಾನುಕರನ ಹೊ- ನ್ನಾವರದೊಳಿರಿಸಲಿನ್ಯಾವನರಸಲಿ ಕೃಷ್ಣ ಭಾವ ಶುದ್ಧಿಯನರಿತು ಭಜನೆ ಮಾಡುವದೆಂತು ಸಾವಕಾಶವಿದ್ಯಾಕೆ ಸಾಹಿತ್ಯಗಳು ಜೋಕೆ ನಿತ್ಯ ಕೈಗೊಂಬ ಕೀರ್ತಿ ಸಂ- ಭಾವನಾ ಸುಖವ ನಾನುಂಬಾ ತರವ ಸಂ- ಭಾವಿಸು ದಯಾಂಬೋಧಿ ದೀನಾವಲಂಬ 2 ರಕ್ಕಸಾಂತಕ ನೀನೆ ದಿಕ್ಕೆಂದು ನಿನ್ನಿದಿರು ಬಿಕ್ಕಿ ಬಿರಿದಳಲುವೆನು ಸೊಕ್ಕಿ ಕಾಡುವ ದೊಡ್ಡ ಜಕ್ಕಣಿಯ ಕಾಲಿಂದ ತಿಕ್ಕಿ ತೀರಿಸು ನಿನಗ- ಶಕ್ಯವಾವುದು ಸ್ವರ್ಣಪಕ್ಷ್ಯೇಂದ್ರಗಮನಕರ ಚಕ್ರಭೂಷಣ ವೆಂಕಟೇಶದಾಸ ಜನ ಕಕ್ಕರದಿ ತೋರು ಸಂತೋಷ ಭಕ್ತಿಫಲ ದಕ್ಕುವಂದದಿ ಮಾಡು ದುರಿತಾಬ್ಧಿಶೋಷ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯೆ ಕಾಯೆ ಕಾಯೆ ಶ್ರೀ ಮಾರುತಿ ಜಾಯೆ ಪ. ಸುರಸತಿಯರುಗಳಿಂ ಪರಿಪರ ಓಲಗ ಹರುಷದಿ ಕೈಗೊಂಬ ಮರುತನ ಮಡದಿಯೆ 1 ಇಂದಿರೆ ಪತಿಯನು ತಂದು ತೋರಿಸೆ ಹೃನ್- ಮಂದಿರದಲಿ ಬೇಗ ಸಿಂಧುರಗಮನೆ 2 ಕಾಲ ಕಾಲಕೆ ಮತಿ ಪಾಲಿಸು ಶ್ರೀಗೋ ಪಾಲಕೃಷ್ಣವಿ ಠ್ಠಲನ ಸೊಸೆಯೆ ನೀ 3
--------------
ಅಂಬಾಬಾಯಿ
ಜಯಮಂಗಳಂ ವೈಕುಂಠನಿಲಯಗೆ ಪ. ಆಮನಸಿಜನಯ್ಯಗೆ ಭುಜಗಭೂಷಣ ಪ್ರಿಯಗೆ ತ್ರಿಜಗತ್ಪತಿ ಪುರುಷೋತ್ತಮಗೆ ಭಜಕರಕ್ಷಕ ಶ್ರೀ ವಿಜಯಸಾರಥಿಗೆ ದ್ವಿಜರಾಜಗಮನ ಅಜಾಮಿಳವರದಗೆ 1 ಆಪನ್ನಿವಾರಣ ಅಪ್ರಮೇಯನಿಗೆ ತಾಪತ್ರಯಹರ ಶ್ರೀಪತಿಗೆ ತಾಪಸವಂದಿತ ಕೋಪವಿರಹಿತ ಗೋಪಾಲಕನಂದನ ಯದುಪತಿಗೇ 2 ಸನಕಾದಿಮುನಿಗಳಿಂದನವರತವು ಪೂಜೆಯನು ಕೈಗೊಂಬ ವನಜಾಕ್ಷಗೆ ಘನಶೇಷಗಿರಿವಾಸ ಚಿನ್ಮಯರೂಪ ಶ್ರೀ ವನಜನಾಭವೇಂಕಟಗೆ ಮಂಗಳಂ ಶ್ರೀ ಲಕ್ಷ್ಮೀಕಾಂತಗೆ3
--------------
ನಂಜನಗೂಡು ತಿರುಮಲಾಂಬಾ
ದಾಸರಿಗುಂಟೆ ಭಯಶೋಕ ಪ ವಾಸುದೇವನ ಸದಾ ಸ್ಮರಿಸುವ ಹರಿ ದಾಸರಿಗುಂಟೆ ಭಯಶೋಕ ಅ.ಪ. ಕಾಮಧೇನು ವರ ಕಲ್ಪವೃಕ್ಷ ಚಿಂ ತಾಮಣಿ ಕೈ ಸೇರಿದಕಿಂತ ನಾಮತ್ರಯದಿಂದಪ್ಪುದು ಸುಖವು ಸು ಧಾಮನೆ ಸಾಕ್ಷಿದಕೆಂಬ ಹರಿ 1 ರಾಮಚಂದ್ರ ಶಬರಿ ತಿಂದೆಂಜಲ ಜಾಮಿಳ ಮಾಡ್ದ ಕುಕರ್ಮಗಳ ಧೂಮಕೇತು ತಾ ಭುಂಜಿಸುವಂದದಿ ಮೇಧ್ಯಾಮೇಧ್ಯ ಕೈಗೊಂಬನೆಂಬ ಹರಿ 2 ನೇಮ ಮಂತ್ರ ಜಪ ದೇವತಾರ್ಚನ ಸ ಕಾಮುಕವಾಗಲು ತ್ಯಜಿಸುತಲಿ ಧೀಮಂತರಾಗತಿಪ್ರಿಯವಾಗಲು ಬಹು ತಾಮಸ ಕರ್ಮವ ಮಾಳ್ಪುವೆಂಬ ಹರಿ 3 ಏನು ಮಾಡಿದಪರಾಧವ ಕ್ಷಮಿಸುವ ಏನು ಕೊಟ್ಟುದನು ಕೈಗೊಂಬ ಏನು ಬೇಡಿದಿಷ್ಟಾರ್ಥವ ಕೊಡುವ ದ ಯಾನಿಧಿ ಅನುಪಮನೆಂಬ ಹರಿ 4 ಪ್ರಹ್ಲಾದವರದ ಪ್ರಕಟನಾಗದಲೆ ಎಲ್ಲರೊಳಿಪ್ಪನು ಪ್ರತಿದಿನದಿ ಬಲ್ಲಿದವರಿಗೆ ಬಲ್ಲದ ಜಗನ್ನಾಥ ವಿಠ್ಠಲ ವಿಶ್ವವ್ಯಾಪಕನೆಂಬ ಹರಿ 5
--------------
ಜಗನ್ನಾಥದಾಸರು
ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ ಬಾವಿಯನು ತೋಡುತಲಿ ಬಲು ಬಳಲಿದೆ ಪ ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ ಅರಸುತನದಲಿ ಆಳುತಿರುವ ಸ್ಥಾನವನು ನಾ ಮರೆತು ಕಡು ಹೇಡಿಯಂದದಿ ನಡೆದೆನೊ ದುರಿತರಾಶಿಗಳನ್ನು ತರಿವ ಮಂತ್ರಗಳರಿತು ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1 ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು ಕಾದ ಮರುಭೂಮಿ ರಾಜ್ಯವ ಬಯಸಿದೆ ಆದರದಿ ಕರೆದು ಬಡಿಸುವರ ಭೋಜನ ತೊರೆದು ಮೂದಲಿಸುವರನು ಬೇಡಿದೆನನ್ನವ 2 ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ ಕೈಗೊಂಬೆ ಕರಡಿಯಾಗುವುದು ಕ್ಷಣದಿ ರಾಗಗಳ ಕಳೆದು ಮನವಚನ ಕಾಯಗಳನ್ನು ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ನಾನಾಗಿ ನನಗಾಗಿ ನಮಿಸುವೆನು ಬಾಗಿ ನೀನಾಗಿ ಕೃಪೆಮಾಡೋ ದೀನಾನುರಾಗಿ ಪ ನಾನಿನ್ನ ಕೈಗೊಂಬೆ ನೀನೆಗತಿಯೆಂಬೆ ನೀನನ್ನ ಕರೆತಂದೆ ಶ್ರೀನಾಥ ನಾ ಬಂದೆ ಅ.ಪ ತರಳನ ಕರೆತಂದೆ ತರುಣಿಕೂಗಿ [ದರಿಕೆಬಿಡಿಸಿ ಮಾನಿನಿಯ ರಕ್ಷಿಸಿದೆ] ಹರಿಯೊಂದು ಜಲದಲಿ ನರಳಿದಕರೆಗೆ ಕರುಣದೊಳೋಡಿ ಬಂದು ಪೊರೆದೆ ನೀತಂದೆ 1 ಜ್ಞಾನಿಯು ನಾನಲ್ಲ ಮಾನಿಯುಮಲ್ಲ ಧ್ಯಾನದ ರೀತಿಯ ನಾನರಿತಿಲ್ಲ ನಾನಾ ಶಾಸ್ತ್ರಂಗಳ ಕಲಿತವನಲ್ಲ ನೀನೆ ಶರಣೆಂಬೆ ಮಾಂಗಿರಿಯ ರಂಗಯ್ಯ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಿನ್ನವ ನಾನಲ್ಲವೇ ರಂಗಯ್ಯ ನನ್ನವ ನೀನಲ್ಲವೇ ಪ ನಿನ್ನವ ನಾನಲ್ಲವೆಂದರೆ ಬಿಡಲೊಲ್ಲೆ ಎನ್ನ ಕೈಬಿಡಲೊಲ್ಲೆ ಎಂಬುದ ನಾ ಬಲ್ಲೇ ಅ.ಪ ಧನವನು ಕೊಡಬೇಕೇ ರಂಗಯ್ಯ ಮನೆಮಠಗಳು ಬೇಕೇ ಕನಕಲಕ್ಷ್ಮಿ ವೈಕುಂಠವಿರಲ್ಕೆ ಧನ ಮನೆ ಮಠಗಳ ಯೋಚನೆಯೇಕೆ 1 ಜನಕನು ನೀನಲ್ಲವೇ ರಂಗಯ್ಯ ತನಯನು ನಾನಲ್ಲವೇ ತನುಮನಧನಗಳು ನಿನಗೇ ಸಲ್ಲವೇ ಎನಗಿರ್ಪುದು ನಿನ್ನ ಭಜನೆಯೊಂದಲ್ಲವೇ 2 ನನ್ನದೇನಿಹುದಯ್ಯ ರಂಗಯ್ಯ ನಿನ್ನದೇ ನಿಜವಯ್ಯ ನಿನ್ನ ಕೈಗೊಂಬೆ ನಾನಾಗಿಹೆನಯ್ಯಾ ಎನ್ನವ ನೀ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೋಡಿದೆನು ಯಾದವ ಕೃಷ್ಣನ | ಪಾಡಿದೆನೊ ಮನದಣಿಯ ವರಗಳ | ಬೇಡಿದಾಕ್ಷಣ ಕೊಡುವ ಜಗತ್ರಯ | ವಾಡಿಸುವ ವಾಗೀಶ ಜನಕನ ಪ ಮೇದಿನಿ ಪ್ರ | ಹ್ಲಾದ ಸುರಪನ ಕಾದ ವಂಶವ | ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ | ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ | ಬಾದರಾಯಣ ದತ್ತ ವೈಕುಂಠ | ಬೋಧ ಮೂರುತಿ ಕಪಿಲ ನಾನಾ ವಿ | ನೋದ ರೂಪದ ಆದಿ ದೈವವ 1 ಜನನಿಗಾಟವ ತೋರಿ ಕಡಗೋ | ಲನು ನೇಣರು ಕರದಲಿ ಪಿಡಿದು | ರು ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು | ಗೋಪಿ ಚಂ | ದನದೊಳಡಗಿ ಅಲ್ಲಿಂದ ಆನಂದ | ಮುನಿಗೊಲಿದು ಬಲು ವೇಗ ಪಡುವಣ | ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ 2 ಸುತ್ತ ಯೋಜನ ಕ್ಷೇತ್ರವಿದರೊಳು | ಉತ್ತಮ ವಿಮಾನ ವೇದ ಪ | ರ್ವತಗಳು ಅಲ್ಲೆಲ್ಲಿ ಸರೋವರ | ಕತ್ತಲಿಗಭಿಮಾನಿನಿ ದುರ್ಗಾ | ದುರಿತ ಪರಿಹರ | ಸೋತ್ತಮರಿಗಿದು ಸಿದ್ಧ ಸರ್ವದ | ತತ್ತಳಿಪ ಪರತತ್ವ ಹರಿಯ3 ತಂತ್ರ ಸಾರೋಕ್ತದಲಿ ಪೂಜೆ ನಿ | ರಂತರದಿ ಕೈಗೊಂಬ ಬಲು ಗುಣ | ವಂತ ನೀತನ ಹೊಳವು ಪೊಗಳಿದ | ರಂತ ಗಾಣವು ಶ್ರುತಿ ಪುರಾಣಗ | ಳೆಂತು ಪೇಳಲಿ ಮೆರೆವ ವೈಭವ | ಸಂತರಿಗೆ ಅತಿ ಪ್ರಿಯನಾಗಿಪ್ಪ | ನಿತ್ಯ ಸ್ವಾತಂತ್ರ ಪುರುಷನ 4 ಮಕರ ತಿಂಗಳು ಮೊದಲು ಪಕ್ಷದ | ಲಕುಮಿರಮಣನ ದಿವಸದಲ್ಲೀಗ | ಭಕುತಿಯಿಂದಲಿ ಬಂದು ವಂದಿಸಿ | ಅಕುಟಿಲರ ವೊಡಗೊಡಿ | ನಿಂದು ಗೋ | ಳಕವ ಚಿಂತಿಸಿ ಸ್ನಾನ ಒಂದೆ | ಸುಖ ತೀರ್ಥ ಸರೋವರದಲಿ ಮಾಡೆ | ಮುಕುತರೊಳು ಪೊಂದಿಸುವ ದಾತನ 5 ಶುಕ್ರವಾರದ ಪೂಜೆ ನೋಡಲು | ವಕ್ರಗತಿಗಳು ಮುಟ್ಟಲಂಜೊವು | ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು | ಶುಕ್ರ ದೇವಸ್ಥಾನದೊಳು ಕಾ | ಲಕ್ರಮಣ ಮಾಡೆ | ಗೋತ್ರದೊಡನೆ ಪೂ ರ್ಣ ಕ್ರೀಡೆÀಯಾಡಿಸುತ ಸಲಹುವ | ಚಕ್ರಧರ ಅಕ್ರೂರ ವರದನ 6 ಕಣಿಸಿ ಉಡಿಸುವ ಕುಣಿಸಿ ನೋಡುವ | ಕನಸಿನೊಳಗಾವಾಗ ತನ್ನನು | ಮನಸಿನಲಿ ಕ್ಷಣ ಬಿಡದೆ ಗುಣಗಳ | ಎಣಿಸಿ ಮೈ ಮರೆದಡಿಗಡಿಗೆ ಈ | ತನುವೆ ನಿನ್ನಾಧೀನವೆಂದಾ | ಜನರಿಗಪವಾದ ಬರಲೀಸನು | ದನುಜದಲ್ಲಣ ವಿಜಯವಿಠ್ಠಲನ್ನ 7
--------------
ವಿಜಯದಾಸ
ಬಲ್ಲೆ ಬಲ್ಲೆನು ನಿನ್ನ ಬಾಳ ಪ್ರತಾಪವಎಲ್ಲಾ ಲೋಕ ಲೋಕದಿ ಪ ಭಂಗ ಪಡಿಸಿದೆ ನಿನಗೆಣೆ-ಯಿಲ್ಲ ಶನೈಶ್ಚರನೆ ಅ ಹರಿಹರ ಬ್ರಹ್ಮಾದಿಗಳ ಭಂಗಪಡಿಸಿದೆ ಕರುಣವಿಲ್ಲವೆ ನಿನಗೆ ಹರಿಶ್ಚಂದ್ರ ನಳಚಕ್ರವರ್ತಿ ಷೋಡಶ ಮಹಾರಾಯ ಪಾಂಡ್ಯರ ದಣಿಸಿ ತೋರಿಸಿದೆ ಮನೆ ಮನೆ ವಾರ್ತೆಗಳೆಲ್ಲವ ತಿರಿದುಂಡು ಮರುಳುಗೊಂಡು ಪರರ ಪೀಡಿಸಿ ಭ್ರಮೆಪಟ್ಟು ಲಜ್ಜೆಗೆಟ್ಟು ತಿರುಗುವಂದದಿ ಮಾಡಿದೆ 1 ಕಟ್ಟಿದ ಪಶು ಕರೆಯದು ತಾನಾಡಿದ ಮಾತು ಕಟ್ಟದು ಸಭೆಯೊಳಗೆ ಮೆಟ್ಟಿದ ನೆಲ ಮುನಿವುದು ಹೊನ್ನ ಹಿಡಿದರೆ ಬಕ್ಕಟ್ಟೆ ಬಯಲಹುದು ಉಟ್ಟದ್ದು ಹಾವಾಗಿ ಹರಿವುದು ಸಾಲಿ-ಗರಟ್ಟುಳಿ ಘನವಹುದು ಮುಟ್ಟ ಹೇಸುವರು ಕುರುಹ ನಾರಿಯರು ನೆಂಟರಿಷ್ಟರೆ ಕಾಣರು 2 ಸತಿ ಬದ್ಧದ್ವೇಷದಿ ಬೈವಳು ಇದ್ದ ಮನುಜರ ಪಾಡೇನು ನೀ ಬಂದು ಹೊದ್ದಿದ ಮಾತ್ರದಲಿ ನಿದ್ದೆ ಹಸಿವು ಬಳಲಿಕೆ ದಟ್ಟ-ದಾರಿದ್ರ್ಯವು ಕೈಗೊಂಬುದು 3 ಒಳ್ಳೆದಾಗಿದ್ದ ಸಂಗಾತಿಯ ಸ್ನೇಹವೆಲ್ಲವನು ಬಿಡಿಸಿ ಅಲ್ಲಲ್ಲಿ ಕೊಡುವ ದಾನಿಗಳ ಮನದಿ ಪೊಕ್ಕು ಇಲ್ಲಿಲ್ಲ ಹೋಗೆನಿಸಿ ಇಲ್ಲದ ಅಪವಾದ ಭಾಳ ಕಂಟಕ-ರೋಗದಲ್ಲಿ ನೋಯಿಸಿ ಒಲ್ಲೆನೀ ಜನ್ಮವೆಂದೆನಿಸಿ ಸಾಧಿಸಿ ಕಡೆಯಲ್ಲಿ ಗುಣ ತೋರಿಸಿ4 ದೇಶದೇಶದ ರಾಯರ್ಗಳನೆಲ್ಲರನು ಪರದೇಶಿಗಳನು ಮಾಡಿದೆ ವಾಸವನೆ ಬಿಡಿಸಿ ತಿರುಗಿಸಿ ಗಾಸಿ-ಯಿಂದಲೆ ನೋಯಿಸಿ ಶೇಷಶಯನ ಸರ್ವೇಶ ದೇವೇಶನೆ ಲೇಸು ಪಾಲಿಸೊ ಎನಗೆ ದೇಶದಂತರ್ಯಾಮಿ ನೆಲೆಯಾದಿಕೇಶವತೋಷದಿ ಸಲಹೊ ಎನ್ನ 5
--------------
ಕನಕದಾಸ
ಮಂಗಳಂ ಶ್ರೀ ಲಕ್ಷ್ಮೀದೇವಿಗೆ ಜಯ ಮಂಗಳಂ ಪಕ್ಷಿವಾಹನರಾಣಿಗೆ ಪ. ಮಂಗಳಂ ಮಂತ್ರಮೂರುತಿಗೆ ಶುಭ ಮಂಗಳಂ ಪರತಂತ್ರರೂಪಿಣಿಗೆ ಅ.ಪ. ಭಾರ್ಗವಿಗೆ ಭಾಗ್ಯದಾಯಿನಿಗೆ ಭಾಗವತರ ಪೂಜೆ ಕೈಗೊಂಬಳಿಗೆ ನಾಗವೇಣಿಗೆ ವರನಾಗಪೂಜಿತೆಗೆ ವರ ಭೋಗಿಭೂಷಣಸುತೆ ಯೋಗೇಶ್ವರಿಗೆ 1 ಸೀತೆಗೆ ಮಂಗಳಗೀತೆಗೆ ಭುವಿ ಜಾತೆಗೆ ಮಂಗಳಂ ಪವನಜಸೇವಿತೆಗೆ ಮಾತೆಗೆ ಸದ್ಗುಣ ಪೂತೆಗೆ ವರಪ್ರ ದಾತೆಗೆ ನಿತ್ಯನಿರ್ಮಲೆಗೆ 2 ವರಶೇಷಗಿರಿವರನ ಉರದಲ್ಲಿ ನೆಲೆಗೊಂಡು ಶರಣಾಗತರಂ ಪರಿಭಾವಿಸಿ ಪರತರ ಸುಖಸೌಭಾಗ್ಯವ ಕರುಣಿಸಿ ಪೊರೆವ ಕಾರುಣ್ಯಮೂರುತಿಗೆ 3
--------------
ನಂಜನಗೂಡು ತಿರುಮಲಾಂಬಾ
ಯೋಗಿ ವಲ್ಲಭನ ಅನುರಾಗವನು ಪಡೆದವಗೆ ಲಾಗವೆಲ್ಲವು ದೊಡ್ಡ ಯೋಗವಾಗುವುದು ಪ ಹೋಗಿ ಗಂಗೆಯ ತೀರದಲಿ ಬಾವಿ ತೋಡಿದರೂ ಬೇಗ ಸಿಗುವುದು ದಿವÀ್ಯ ಬಲಮುರಿಯ ಶಂಖವು ಅ.ಪ ಮಾಧವನ ಪರಮ ಕರುಣವ ಪಡೆದ ಮನುಜನಿಗೆ ಹೋದ ಕಡೆಗಳಲಿ ದೊರೆಕುವುದಾದರೆ ಮೂದಲಿಸುವರ ಮನವು ಕಾದ ಬೆಣ್ಣೆಯು ಕರಗಿ ಹೋದ ತೆರದಲಿ ಕ್ಷಣದಿ ಸಾಧುವಾಗುವುದು 1 ವೇದಾಂತ ರಾಜ್ಯದಲಿ ಜ್ಞಾನಭಕುತಿಗಳಿಂದ ಮೋದ ಪಡಿಸುವನು ಕಾದ ಮರುಭೂಮಿಯಲಿ ಸಕಲ ಸಂಪತ್ತುಗಳ ಸಾಧಿಸುವ ಬೇಧಿಸುವ ವಿಘ್ನರಾಶಿಗಳನ್ನು 2 ಕುರುಡ ನೋಡುವನೆಲ್ಲ ಕಿವುಡ ಕೇಳುವನೆಲ್ಲ ಗುರುವರ ಪ್ರಸನ್ನ ನೀ ಮರುಕ ತೋರಿದರೆ ಕರಡಿ ಕೈ ಗೊಂಬೆಯಾಗುವುದು ಕೈಗೊಂಬೆಯು ತ್ವರಿತದಲಿ ಕಲ್ಪತರುವಾಗಿ ಕೊಡುವುದು ಫಲವ 3
--------------
ವಿದ್ಯಾಪ್ರಸನ್ನತೀರ್ಥರು