ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ. ವಾದಿರಾಜಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ 1 ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ 2 ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ3 ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ 4 ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ 5 ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ 6 ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ 7 ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- - - - - - - - - - - - - - - - - - - -8 ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ 9
--------------
ವಾದಿರಾಜ
ನೇಮದಿಂದ ಹರಿಯಭಜಿಸಿ ಪ್ರೀತಿಯಿಂದಲಿ ಕಾಮಿತಾರ್ಥ ಫಲಗಳೀವ ಕರುಣದಿಂದಲಿ ಪ ಜಲದಿ ಬಂಧಿಸಿ ಲಲನೆ ತಂದ ಜಾನಕೀಪತಿ ಜಲಧಿಶಯನನಾದ ನಮ್ಮ ವಿಷ್ಣು ಮೂರುತಿ ನಳಿನನಾಭನಾದ ರಕ್ಷಕನಾದ ಶ್ರೀಪತಿ ಒಲಿದು ಮನದಿ ಸ್ಮರಿಸುವರಿಗರಂದೆ ಸದ್ಗತಿ 1 ಇಂದಿರೇಶ ವಿಬುಧ ವಂದ್ಯ ವಿಶ್ವಕುಟುಂಬಿ ಮಂದರಾದ್ರಿ ಗಿರಿಯ ಪೊತ್ತ ಮಹಿಮನೇನೆಂಬೆ ಕುಂದು ಇಲ್ಲದ ಹೃದಯದಲ್ಲಿ ಕೃಷ್ಣನ ನೇನೆಂಬೆ ಕೈವಲ್ಯ ಕೈಕೊಂಬಿ 2 ಅಖಿಲ ಲೋಗಳನೆ ಆಳುವ ಅಧಿಕ ಸಂಪನ್ನಾ ಮುಕುತಿದಾಯಕ -----ಮೋಕ್ಷದಾತನಾ ನಿಖರವಾಗಿ `ಹೆನ್ನ ವಿಠ್ಠಲ' ನೆಂದು ತಿಳದಿನ್ನುಭಕುತಿಯಿಂದ ಹಾಡಿ ಪಾಡುವ ಭಕ್ತರಾಧೀನಾ 3
--------------
ಹೆನ್ನೆರಂಗದಾಸರು