ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾವೂರ ಅಗ್ರಹಾರದ ಕಟ್ಟೆ ಮುಖ್ಯಪ್ರಾಣ) ಕರವ ಪಿಡಿಯೋ ಜಾಣ ಘಟ್ಯಾಗಿರಲಿ ಕರುಣಾ ದುಷ್ಟ ಭಾವನೆಯನ್ನು ದೂರವೋಡಿಸಿ ಮನೋ- ಭೀಷ್ಟವ ದಯಮಾಡು ದುರಿತಾಬ್ಧಿ ಕಾರಣ ಪ. ಕೋಳಾಲ ಜನರಮೇಲ್ಕರುಣಾ ಕಟಾಕ್ಷಧಿ ಕೋಳಾಲ ಕರಯುಗದಿ ಪಿಡಿದು ಬಂದು ನೀಲ ಮೇಘನ ತೆರದಿ ಶೋಭಿಸುತಾಗ್ರ- ಮಾಲೆಯ ಶಿಖರದಲಿ ರಾಜಿಸುವ ಕೃಷ್ಣನ ಲೀಲೆಗಳಿಗನುಕೂಲನಾಗಿ ಸುಲೋಲ ನೇತ್ರಾವತಿ ಸರಿದ್ವರ ಕ- ಪಿಲದೊಳು ಪುಟ್ಟಾಲಯದೊಳನುಗಾಲ ನಿಂತ ಕೃಪಾಲವಾಲಾ 1 ಪ್ರಾಚೀನ ಯುಗದಿ ಮಾರೀಚ ವೈರಿಯ ಸೇರಿ ನೀಚ ರಕ್ಕಸರ ಗೆದ್ದೆ ದ್ವಾಪರದಲ್ಲಿ ಕೀಚಕ ಕುಲವ ಗೆದ್ದೆ ಕ್ಷಮೆಯೊಳು ತಿದ್ದೆ ಸೂಚಿಸಿದ ದೇವೋತ್ತಮರ ಬಲು ಸೂಚನೆಯ ಕೈಗೊಂಡು ಕಲಿಮಲ ಮೋಚನೆಯಗೊಳಿಸಿಲ್ಲಿ ನಿಂದು ನಿ- ರೋಚನಾತ್ಮಜ ವರದನೊಲಿಸುವ 2 ಕಾಯ ವಾಕ್ಕøತಾನಂತಾ ಪರಧಾಮ- ನೇನೊಂದನೆಣಿಸದಿರು ಕೃಪಾಪಾತ್ರ ನಾನೆಂದು ನೆನೆಸುತಿರು ಅಭಿಮಾನ ತೋರು ಪಾದ ಪಂಕಜ ಮಾನಿ ಕರುಣಿಸಹೀಂದ್ರ ಗಿರಿವರ ಶ್ರೀನಿವಾಸನ ಮುಖ್ಯಮಂತ್ರಿಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋ ಪಾಲಾ ಶೃತಬಾಲಾ | ಮುನಿಕುಲಾನತಬಲ ಪ ಶ್ರೀಪದುಮಾಯುತ ನಯನಾ | ವನಮಾಲ ಕೃಪಾಲವಾಲ ಅ.ಪ [ಶ್ರೀ]ಪಾದಾಂಬುಜಾತ ಪ್ರೀತಲೋಲ [ಗೋಪೀಜನ] ವಿಮಲಚರಿತಾ ಶ್ರೀಯುತ ಅ.ಪ ದೇವಾನತ ದೇವೇಶಾ ಮುರಳೀರವ ಲೋಲಾ | ಗೋವರ್ಧನೋದ್ಧಾರ ಲೀಲಾ | ಶ್ರೀವರ ವನಮಾಲಾ | ಪಾವನ ಪದಜಲಜಾಯುತ ಲೋಚನ | ಶ್ರೀ ಗೋವಿಂದ ಮಾಂಗಿರೀಶ ಭಾವುಕಜನ ಚೈತನ್ಯ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರೇಶ ಜಗದೀಶ ಸುರನರ ಪೋಷಾ ಪ ಶ್ರೀರಂಗಾಧೀಶಾ ಪರಮೇಶ ಅ.ಪ ಗಿರೀಶವಂದಿತ ಕಮಲಾಸನನುತ ಪರಾತ್ಪರಾ ರವಿಶತನಯನ ಧರಾಧರಾರ್ಚಿತ ಮೌನಿಸೇವಿತ ಶೌರೀ ರಮಾವಿನಮಿತ ರಾಮಾ 1 ಗಾನಲೋಲ ಕೃಪಾಲವಾಲ ಸುಶೀಲ ಸದಮಲ ಸಕಲಕಲಾ ಸುವಿಶಾಲ ಮಾನಸ ನಂದ ಗೋಕುಲಬಾಲ ಶ್ರೀವನಮಾಲಾ ಕೋಮಲ 2 ದೀನಪಾಲ ಕುಚೇಲವರದ | ಸುಶೀಲ ವಿಮಲಾ ಸಕಲಬಲ ಸುರಜಾಲಪಾಲ ಖರಕಾಲ ಘನತರಲೀಲ ಮಾಂಗಿರಿರಂಗವಿಠಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್