ಒಟ್ಟು 18 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಜ ಭಜ ಮಾನಸ ಗರುಡತುರಂಗಂ ಅಜ ಸುರಸೇವಿತ ಪಾಂಡುರಂಗಂ ಪ ಗಜರಾಜಾನತ ಮೋಹನರಂಗಂ ವಿಜಯಧ್ವಜ ಶ್ರೀಪಾವನರಂಗಂ ಅ.ಪ ಗಿರಿಧರ ಮುರಹರ ಭೂವರ ರಂಗಂ ನರಕೇಸರಿ ಮುಖರಾಜಿತ ರಂಗಂ ವರಶುದ್ಧಾಚ್ಚುತ ಸುರುಚಿರ ರಂಗಂ ಪರಶಿವ ದಾನವ ವಿನಮಿತ ರಂಗಂ 1 ಸನಕ ಸನಂದನ ಮುನಿನುತ ರಂಗಂ ಹನುಮ ವಿಭೀಷಣ ಸನ್ನುತ ರಂಗಂ ಘನಮಣಿ ಮೌಕ್ತಿಕ ಶೋಭಿತ ರಂಗಂ ಜನಕ ಧರಾವಿವ ಪೂಜಿತ ರಂಗಂ 2 ಮಂಗಳದಾಯಕ ಶುಭಕರ ರಂಗಂ ಸಂಗರ ಧೀರ ಸುಧಾಕರ ರಂಗಂ ಗಂಗಾಜನಕ ಕೃಪಾಂಬುಧಿ ರಂಗಂ ಅಂಗಜ ಜನಕ ಶ್ರೀ ಮಾಂಗಿರಿ ರಂಗಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಿರಿರಾಜ ಗಿರಿರಾಜ ಪ ತರಣಿಶತ ರುಚಿರ ತೇಜ ವೆಂಕಟ ಅ.ಪ. ತ್ರಿಜಗ ವಿ ಕರ ಸಮೀರಾಶನ 1 ಪಿನಾಕಿ ನಿಕರವನಾಳ್ವ ಲೋಕೈಕ ಶರಣ್ಯ 2 ನಂಬಿದ ಭಕುತ ಕುಟುಂಬಿಯೆಂಬದಂಬು ಜಾಂಬಕ ಬಲ್ಲೆ ಕೃಪಾಂಬುಧಿ ಕರುಣಿಸು 3 ಮನಸಿಜಪಿತ ನನ್ನ ಅನುದಿನ ಮಾಡೋ 4 ಸಟೆಯಲ್ಲೀ ನುಡಿ ದಿಟವೆಂಬುದು ಬುಧ ಕಟಕ ಜಗನ್ನಾಥ ವಿಠಲ ವಿಹಂಗಪ 5
--------------
ಜಗನ್ನಾಥದಾಸರು
ಜಯ ಜಯ ಕೃಪಾಂಬುಧಿಯೆ ಜಯ ಸುಗುಣ ಶರನಿಧಿಯೆ ಜಯತು ಸಂಶ್ರುತನಿಧಿಯೆ ವಿಮಳ ಸುಧಿಯೇ ಪ ಜಯ ಸಮಸ್ತೋಪಧಿಯೆ ಜಯ ಸರ್ವಧೀಮತೆಯೇ ಜಯ ಜಯತು ಸಲಹೆನ್ನ ಸೌಭಾಗ್ಯ ನಿಧಿಯೆ ಅ.ಪ ನತ ನಿರ್ಜಿತ ವ್ರಾತೆ ರತಿಪತಿಪಿತ ಪ್ರೀತೆ ರತುನಕರ ಸಂಜಾತೆ ನುತಿಸಲೆನ್ನಳವೆ ನಿನ್ನನು ಲೋಕಮಾತೆ 1 ವಿಗಡವಿಶ್ರುತ ಮಾಯೆ ತ್ರಿಗುಣಾನ್ವಿತ ವಿದಾಯೆ ನಿಗಮ ನಿರುತೋಪಾಯೆ ನಿತ್ಯೆ ನಿರಪಾಯೆ ಜಗನ್ಮೋಹನೆ ಕಾಯೆ ಅಗಣಿತೋಪಮದಾಯೆ ಪೊಗಳಲೆನ್ನಳವೆ ನಿನ್ನನು ಲೋಕಮಾತೆ2 ಪರಮ ಶಕ್ತಿಗುಣಾಢ್ಯೆ ನಿರುತಾಗಮಾವೇದ್ಯೆ ಸ್ಮರನ ಪೆತ್ತತಿ ಚೋದ್ಯೆ ಸೌಖ್ಯ ಪ್ರದಾದ್ಯೆ ಸುರನಗರದಧಿನಾಥ ವರಲಕ್ಷ್ಮೀಕಾಂತನಾ ಅರಸಿ ಸಿರಿಮಾಲಕ್ಷ್ಮಿ ಭವರೋಗ ವೈದ್ಯೇ 3
--------------
ಕವಿ ಲಕ್ಷ್ಮೀಶ
ದೂರ ಕೇಳೊ ದೊರೆಯೆ ಥಟ್ಟನೆ ಬಾರೊ ಭಕ್ತ ಸಿರಿಯೆ ಗತಿ ಹರಿಯೆ ಪ. ಖುಲ್ಲ ವೈರಿಯು ಮೊದಲನೆಯ ಕಳ್ಳ ಸನ್ನಿಧಿಯಲಿ ಬಂಧಿಸಿ 1 ಕ್ರೋಧನನೆಂಬವನಿವನು ಮಾನಸ ಬೋಧವ ಕೆಡಿಸುವನು ಮಾಧವ ಮಧುವತ್ಕರಿದಿ ನಿವಾರಿಸಿ 2 ತುದಿ ನಡು ಮೊದಲಿಲ್ಲ ಲೋಭ ತಡೆಯುವವರ್ಯಾರಿಲ್ಲ ಶ್ರೀಮಡದಿಯ ನಲ್ಲ 3 ಬಾಹ ಬಾಧೆಗಳನು ತಿಳಿಸದೆ ಚೋಹದಿ ಕೆಡಹುವನು ಮಹಿಮೆಯ ಮಾರ್ಗವ ತಿಳಿಸುತ 4 ಅಷ್ಟವೇಷವುಳ್ಳ ಐದನೆ ದುಷ್ಟನು ಬಿಡಲೊಲ್ಲ ಮುರಿದಟ್ಟು ದಯಾಪರ 5 ಮತ್ಸ್ಯಘಾತಿಯಂತೆ ಕುತ್ಸಿತ ಮತ್ಸರನೆಂಬುವನು ಸತ್ಸಂಗಗತಿಗಳನುತ್ತರಿಪನು ಶ್ರೀವತ್ಸ ಬೆನ್ಹನೀ ತಾತ್ಸಾರಗೊಳದಲೆ 6 ಈ ಶತ್ರುಗಳಿರಲು ತತ್ವ ವಿಲಾಸಗಳೆಂತಹವು ಶೇಷಗಿರೀಶ ಕೃಪಾಂಬುಧಿ7
--------------
ತುಪಾಕಿ ವೆಂಕಟರಮಣಾಚಾರ್ಯ
ಪಾಲಿಸೊ ಪರಮ ಪಾವನ್ನ ಕಮ ಲಾಲಯ ನಂಬಿದೆ ನಿನ್ನ ಆಹ ನಖ ತೇಜ ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯಿದೆ ಭಕ್ತ ಪ್ರಿಯ ಸುಖ ಸಂದೋಹ ಮೂರುತಿ ಆಯ ತಾಕ್ಷ ಎಂದೆಂದು ಬಿಡದಿರು ಕೈಯ ಆಹ ವೃಂದಾರ ಕೇಂದ್ರಗೆ ಬಂದ ದುರಿತಂಗಳ ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ 1 ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ಪಾಪ ದೂರ ದಿರದಿರು ಹರಿಸಪ್ತ ದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ದೇವ ಚರಣ ಆಶ್ರೈಸಿದೆ 2 ಶರಣ ಪಾಲಕನೆಂಬೊ ಬಿರುದು ಕೇಳಿ ತ್ವರಿತದಿ ಬಂದೆನೊ ಅರಿದು ಇನ್ನು ಪರಿ ಅಪರಾಧ ಜರಿದು ಪರತರನೆ ನೋಡೆನ್ನ ಕಣ್ತೆರೆದು ಆಹ ಮರಣ ಜನನಂಗಳ ತರಿದು ಬಿಸುಟು ನಿನ್ನ ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ 3 ಸಂಸಾರ ಸಾಗರ ದೊಳಗೆ ಎನ್ನ ಹಿಂಸೆ ಮಾಡುವರೇನೊ ಹೀಂಗೆ ನಾನು ಕಂಸಾರಿ ಅನ್ಯರಿಗೆ ಬಾಗೆ ಮತ್ತೆ ಸಂಶಯವಿಲ್ಲ ಮಾತಿಗೆ ಆಹ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ ಮೂರ್ತಿ ದಿವಸ ದಿವಸದಲ್ಲಿ 4 ಭವ ಶಕ್ರಾದ್ಯಮರ ಕೈಯ ನಿರುತ ತುತಿಸಿಕೊಂಬ ಧೀರ ಶುಭ ಪರಿಪೂರ್ಣ ಗುಣ ಪಾರಾವರ ಭಕ್ತ ವಾರಿನಿಧಿಗೆ ಚಂದಿರ ಆಹ ಸ್ಮರನ ಕಾಂತಿಯ ನಿರಾಕರಿಸುವ ತೇಜನೆ ಎರವು ಮಾಡದೆ ಹೃತ್ಸರಸಿಜದೊಳು ತೋರಿ 5 ಮೊದಲು ಮತ್ಸ್ಯಾವತಾರದಿ ವೇದ ವಿಧಿಗೆ ತಂದಿತ್ತ ವಿನೋದಿ ಶ ರಧಿಯೊಳು ಸುರರಿಗೋಸ್ಕರದಿ ನೀನು ಸುಧೆಯ ಸಾಧಿಸಿ ಉಣಿಸಿದೆ ಆಹ ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು ಮುದದಿ ಹಿರಣ್ಯಕನುದರ ಬಗಿದ ಧೀರ 6 ಬಲಿಯ ಮನೆಗೆ ಪೋಗಿ ದಾನ ಬೇಡಿ ತುಳಿದೆ ಪಾತಾಳಕ್ಕೆ ಅವನ ಪೆತ್ತ ವಳ ಶಿರ ತರಿದ ಪ್ರವೀಣ ನಿನ್ನ ಬಲಕೆಣೆಗಾಣೆ ರಾವಣನ ಆಹ ತಲೆಯನಿಳುಹಿ ಯದುಕುಲದಿ ಜನಿಸಿ ನೀನು ಲಲನೇರ ವ್ರÀ್ರತವಳಿದಾಶ್ವಾರೂಢನೆ 7 ಮಾನಸ ಪೂಜೆಯ ನೀ ದಯದಿ ಇತ್ತು ಶ್ರೀನಾಥ ಕಳೆ ಭವವ್ಯಾಧಿ ಕಾಯೋ ಅನಾಥ ಬಂಧು ಸುಮೋದಿ ಚತುರಾ ನನಪಿತ ಕೃಪಾಂಬುಧಿ ಆಹ ತಾನೊಬ್ಬರನರಿಯೆ ದಾನ ವಿಲೋಲನೆ ಏನು ಮಾಡುವ ಸಾಧನ ನಿನ್ನದೊ ಹರಿ8 ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾವಾಗಬಲ್ಲುದೆ ಹೀಂಗೆ ಚೆನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ಆಹ ಎನ್ನಪರಾಧವ ಇನ್ನು ನೀ ನೋಡದೆ ಮನ್ನಿಸಿ ಕಾಯೋ ಜಗನ್ನಾಥ ವಿಠಲ 9
--------------
ಜಗನ್ನಾಥದಾಸರು
ಯಮದೂತರಿನ್ನೇನು ಮಾಡುವರು ಪೇಳೊರಮೆಯರಸ ರಘುನಾಥ ನಿನ್ನರಿಕೆಯುಳ್ಳವರಿಗೆ ಪ ಮಂಡಲದೊಳಗೊಬ್ಬ ಜಾರಸ್ತ್ರೀಯಳು ತನ್ನಗಂಡನರಿಕೆಯಿಂದ ವ್ಯಭಿಚಾರಗೈಯೆಮಂಡಲ ಪತಿಯು ಶೋಧಿಸಿ ಹಿಡಿದೆಳೆ ತಂದುಭಂಡು ಮಾಡಲು ಬೆದರುವಳೆ ಕೇಳೆಲೊ ಹರಿ1 ಕಳವಿನ ಒಡವೆಯ ಒಡೆಯಗೆ ಪಾಲೀವಕಳಬಂಟ ಕನ್ನವ ಕೊರೆಯುತಿರೆಕಳವು ಮಾಡಿದನೆಂದು ಹಿಡಿದೆಳೆತಂದರೆತಳವಾರನೇನು ಮಾಡುವನು ಕೇಳೆಲೊ ಹರಿ 2 ಮನವಚನದಲಿ ಮಾಡಿದ ಪುಣ್ಯ ಪಾಪಗಳನಿನಗರ್ಪಿಸುವೆ ಕಾಲಕಾಲದಲಿಘನ ಕೃಪಾಂಬುಧಿ ಕಾಗಿನೆಲೆಯಾದಿಕೇಶವಎನಗೆ ಆರೇನು ಮಾಡುವರು ಕೇಳೆಲೊ ಹರಿ 3
--------------
ಕನಕದಾಸ
ರಾಮ ರಾಮ ರಾಮ ಹರೇ ರಘೂ ಪ ರಾಮ ಜಾನಕಿ ಪ್ರೇಮ ಕೃಪಾಂಬುಧಿ ಸ್ವಾಮಿ ಪರಂಧಾಮ ಸಾರುಚಿವರದಾ ಅ.ಪ ಪತಿತಪಾವನದೇವಾ ಸದ್ಭಕ್ತರ ಸತತ ಬಿಡದೆ ಕಾಯುವಾ ಮಹಾನುಭಾವ- ನತಿಶಯದಲಿ ಮನಹಿತದಲಿ ಅನುದಿನ ಸ್ತುತಿಯನು ಮಾಡುವರಿಗೆ ಗತಿ ಕಾಣಿಸುವಂಥ 1 ಅಂಡಜವಾಹನನೆ ಅನೇಕ ಭೂ ಮಂಡಲ ನಾಳುವನೆ ಮಣಿಯ ಮುಕುಟಧರನೆ ಉದ್ದಂಡ ರಕ್ಕಸರಳಿದ ಚಂಡಪರಾಕ್ರಮಿ2 ಪನ್ನಗಾದ್ರಿಯವಾಸಾ ಭಜಕರ ಪೋಷಾ ಶ್ರೀ ಹೆನ್ನವಿಠ್ಠಲ ವೇಶಾ ಪರಮೋಲ್ಹಾಸಾ ಚಿನ್ಮಯ ಮೂರುತಿ ಶ್ರೀ ಗೌರೀವರಪ್ರಿಯ ಮದನ ಜನಕ ಹರೆ 3
--------------
ಹೆನ್ನೆರಂಗದಾಸರು
ರಾಮಾ ರಾಜೀವನಯನ ಜಯ ರಾಮಾ ಪರಾಮಜಲಧರಶ್ಯಾಮ ಸದ್ಗಣಸೋಮ ರಾಮತುಲಸಿದಳಧಾಮ ಶೌರಿಗುರು 1ಹೈಮವತೀನುತನಾಮ ಭಕ್ತ ಜನಪ್ರೇಮ ದೈತ್ಯರಣಭೀಮ ಶೌರಿಗುರು 2ಸರಸಿಜ ಹಲಕುಲಿಶಾಂಕುಶಧ್ವಜಅರಿದರ ಪತಾಕ'ರಚಿತÀ ತಪದ 3ವರ ಕಿರೀಟ ಕೇಯೂರ ಕೌಸ್ತುಭಾಭರಣದುರಿತಚಯಹರಣ ಕೃಪಾಂಬುಧಿ 4ಹಾಟಕಾಂಬರ ಕಿರೀಟಿ ಸೂತ ಖಗಘೊಟಕ ತುಲಸೀತೊಟಾಲಯಸ್ಥಿರ 5ದೇಶಿಕಾಂಗಧರ ತುಲಸಿರಾಮ ಚರ ಣಾಶ್ರಿತ ರಂಗಸ್ವಾ'ುದಾಸಾವನಜಯ 6
--------------
ಮಳಿಗೆ ರಂಗಸ್ವಾಮಿದಾಸರು
ಎಂಥ ಶ್ರೀಮಂತಾನಂತನೆ ಶ್ರೀಕಾಂತೆಯ ಕಾಂತಎಂಥ ಶ್ರೀಮಂತಾನಂತನೆ ಪ.ಬೊಮ್ಮನು ಹೆಮ್ಮಗ ಮೊಮ್ಮ ಮೃಡಮ್ಮರಿಮೊಮ್ಮ ಶಚಿಮನೋರಮ್ಮ ಸ್ಮರಮ್ಮಗಅಮ್ಮರಸಮ್ಮೂಹ ನಿಮ್ಮನುಗಮ್ಯರುನಮ್ಮೊ ನಮ್ಮೊ ಪರಮ್ಮ ಮಹಿಮ್ಮ 1ಪನ್ನಗಾಪನ್ನ ಶಯನ್ನಕ್ಕೆ ಬೆನ್ನೀವಪನ್ನಗಾಶನ್ನ ವಾಹನ್ನ ರತುನ್ನ ಭವನ್ನ ಸುಖೋನ್ನತರನ್ನಾಗರ ನಿಜನಿನ್ನಿದಿರಿನ್ನಾರೆನ್ನೊಡೆಯನ್ನೆ 2ಬಲ್ಲ ಕೈವಲ್ಯಜÕರೊಲ್ಲಭ ಸುಲ್ಲಭಬಲ್ಲಿದಕ್ಷುಲ್ಲರದಲ್ಲಣನಲ್ಲವೆಹುಲ್ಲಲುಗಲಳವಲ್ಲ ನೀನಿಲ್ಲದೆಸಲ್ಲದು ಸೊಲ್ಲದು ನಿಲ್ಲದಿದೆಲ್ಲ 3ಅಂಗಕೆ ಹೆಂಗಳಾಲಿಂಗನಾಂತ ಗಡಮಂಗಳಾಪಾಂಗ ವಿಶ್ವಂಗಳ ಮಂಗಳಸಿಂಗರದುಂಗುಟ ಸಂಗದಗಂಗೆ ಜಗಂಗಳಘಂಗಳ ಹಿಂಗಿಪಳು ರಂಗ 4ಅಂಬರದಂಬುಗೆ ತುಂಬೆ ವಿಶ್ವಂ ಬಸುರಿಂಬಿಲಿ ಇಂಬಿಟ್ಟುಕೊಂಬ ಕೃಪಾಂಬುಧಿಡಿಂಬಕದಂಬದ ಬಿಂಬ ಪ್ರಸನ್ವೆಂಕಟನಂಬಿದರ್ಗಿಂಬೀವನೆಂಬ ಕುಟುಂಬಿ 5
--------------
ಪ್ರಸನ್ನವೆಂಕಟದಾಸರು
ನಾರಾಯಣ ಪಂಜರನಾರಾಯಣಾಯ ನಮೊ ನಾರಾಯಣಾಯ ನಮೊನಾರಾಯಣಾಯ ನಮೊ ನಾರಾಯಣನಾರದರ ಮುಖದಿಂದ ನರಕಸ್ಥರೆಬ್ಬಿಸಿದೆನಾರಾಯಣಾಯ ನಮೊ ನಾರಾಯಣ ಪ.ಮತ್ತಕರಿಯವಸಾನಕಂಜಿ ಹರಿಯೆ ನೀ ಕಾಯ್ದೆ *ಭಕ್ತ ಪ್ರಹ್ಲಾದನೇಕಾಂಗ ನಿಷ್ಠೆಗೆ ಒಲಿದೆ 1ಪೃಥುವಿಗಳ್ಳನನಿರಿದು ಸತಿಯನುದ್ಧರಿಸಿದೆಪೃಥುಚಕ್ರವರ್ತಿಗೆ ಪ್ರತ್ಯಕ್ಷನಾಗ್ಯೊಲಿದೆ2ಶೂಲಿಯನು ಬೆಂಬತ್ತಿ ಸುಡುವೆನೆಂಬನ ಸುಟ್ಟೆಶೀಲವಿಡಿದಂಬರೀಷನ ಮತವ ಗೆಲಿಸಿದೆಯೊ 3ಮಕರರೂಪದಿ ಸತ್ಯವ್ರತಗೆ ತತ್ವವನೊರೆದೆಮುಖದಿಶ್ರುತಿಪಿಡಿತಂದು ವಾರಿಜಾಸನಗಿತ್ತೆ4ಪುರುಹೂತಗಖಿಳ ಪರಮಾರ್ಥವನು ಅರುಹಿದೆಸುರಪನ್ನ ಭಯವಟ್ಟಿ ಧ್ರುವಗೆ ಧ್ರುವಪದವಿತ್ತ್ತ್ತೆ 5ಮಹಾಪಾಪನಿರತ ಅಜಾಮಿಳನಿಷ್ಟ ಕರಿಸಿದೆಮಹಿದಾಸನಾಗಿ ತಾಯಿಗೆ ತತ್ವವನು ಪೇಳ್ದೆ 6ಮುನಿ ಕಾಲಲೊದೆಯೆ ಎದ್ದು ಕರುಣಿಸಿದೆ ಕರುಣಾನಿಧಿಮುನಿವೆಂಗಳರೆಯಾಗೆ ಪದಸೋಂಕಿಸ್ಯೆತ್ತಿದೆಯೊ 7ಮಖವ ರಕ್ಷಿಸಿ ರಾಜಋಷಿಗಭೀಷ್ಟೆಯನಿತ್ತೆಮಕರಧ್ವಜಾರಿ ಧನು ಮುರಿದವನಿಜೇಶ8ಶುಭಕಪೀಶಗೆ ಅಭಯವರವಿತ್ತು ಕೈಪಿಡಿದೆಶುಭಕಂಠನಂಜಿಕೆಯ ಹನುಮ ಹೇಳಲು ಕಳೆದೆ 9ಶರಣು ಹೊಕ್ಕಿರೆ ವಿಭೀಷಣಗರಸುತನ ಕೊಟ್ಟೆಶರದಿ ರಾವಣನರಿದು ಸುರರ ಸಂಕಟ ಹರಿದೆ 10ಅನುಜನಗ್ನಿಗೆÉ ಧುಮುಕಲವಧಿ ಮೀರದೆ ಪೊರೆದೆಅನಿಮಿಷರ ನಿಕರಕತಿ ಆಹ್ಲಾದ ಬೆಳೆಯಿಸಿದೆ 11ಉರಿನುಂಗಿ ಗಿರಿನೆಗಹಿ ವ್ರಜವ ಪಾಲನೆ ಮಾಡ್ಡೆಉರಗನೆಳೆತಂದವನ ರಾಣಿಯರ ಸ್ತುತಿಗೊಲಿದೆ 12ಕ್ರತುನಾರಿಯರನ್ನ ಸವಿದುಂಡು ಸುಖವಿತ್ತೆಕ್ರತುಭೋಕ್ತø ಕ್ರತುಗಾತ್ರ ಕ್ರತುಪಾಲ ಕ್ರತುಶೀಲ13ಗೋಪ ಸ್ತ್ರೀಯರ ಕುಚದಿ ನ್ಯಸ್ತ ಚರಣಾಬ್ಜಯುಗಗೋಪೀ ಜನಜಾರನವನೀತದಧಿಚೋರ14ವಂಶಗಾಯನ ಪ್ರಿಯ ವಿಧುಕುಲೋದ್ಭವ ಕೃಷ್ಣವಂಶವರ್ಧಕಸುಜನವಂಶಮರ್ದಕ ಕುಜನ15ಅಕ್ರೂರವಂದ್ಯಕಂಸಾರಿಕುಬ್ಜಾರಮಣಆಕ್ರಂದಿಸಿದ ತಂದೆ ತಾಯಿಯರ ಭಯವಳಿದೆ 16ಅದಿತಿ ಕುಂಡಲದಾತ ಭಗದತ್ತವರದನೆಅಧಿಪತಿಗಳಧಿಪತಿಯೆ ಭೈಷ್ಮಿ ಸತ್ಯಾರಮಣ 17ಶಂಭುವಂದಿತಪಾದ ಸಾಂದೀಪೋದ್ಧವ ಪ್ರಿಯಶಂಬರಾರಿಯ ಜನಕ ಯಜÕಪೂಜಾಗ್ರಣಿಯೆ 18ಪಾಂಡವರ ಪ್ರಾಣ ದ್ರೌಪದಿ ಮಾನರಕ್ಷಕನೆಪೌಂಡ್ರಕಶೃಗಾಲಕೌರವ ಭೂಮಿ ಭಾರಹರ19ಅಭಿಮನ್ಯುನಾತ್ಮಜನ ಬಸುರೊಳಗೆ ಸಲಹಿದೆಯೊಅಭಯದಲಿ ಪಾಂಡವರ ಸಂತತಿಯ ಬೆಳೆಸಿದೆಯೊ 20ಗರುಡ ಗಂಧರ್ವಕಿನ್ನರಗೀತ ಸಂಪ್ರೀತಗರುವೆ ಲಕುಮಿಯ ಕೂಡ ಕ್ರೀಡಾದ್ರಿಯಲ್ಲಿರುವೆ 21ಶಂಖ ಚಕ್ರ ಗದಾಬ್ಜ ಶ್ರೀವತ್ಸ ಶೋಭಿತನೆಸಂಖ್ಯೆರಹಿತಾಭರಣ ಭೂಷಣಾವ್ಯಾಕೃತನೆ 22ಮೀನ ಕಶ್ಯಪ ಪೋತ್ರಿ ನೃಹರಿ ವಾಮನ ಭಾರ್ಗ್ವಮಾನವಪ ಕೃಷ್ಣಬುದ್ಧಕಲ್ಕಿ ಕಪಿಲಾತ್ರೇಯ23ಸ್ವಾಮಿ ತೀರ್ಥಾಂಬು ಅಂತರ್ಗಂಗಾಭಿಷಿಕ್ತಸ್ವಾಮಿ ಭೂವರಾಹ ವೈಕುಂಠನಾಥ ವಿಶ್ವೇಶ 24ಷಟ್ಕೋಟಿ ತೀರ್ಥಯುತಚರಣ ಶ್ರೀಭೂರಮಣಷಟ್ಕಮಲನಿಲಯ ಚಿನ್ಮಯ ಚಿದ್ಗುಣಾರ್ಣವನೆ 25ಭಕ್ತಾಭಿಮಾನಿ ಭವದೂರ ಭಕ್ತರ ಪ್ರಭುವೆಭಕ್ತವತ್ಸಲ ಕೃಪಾಂಬುಧಿಪರಾತ್ಪರಕೃಷ್ಣ26ವಸುಧೆವೈಕುಂಠ ಮಂದಿರವಾಸ ಶ್ರೀನಿವಾಸವಸುಪ್ರೀತ ವಸುಕರ್ತ ವಸುದಾತ ವಸುಪೂರ್ಣ 27ಆದಿನಾಥÀಪ್ರಮೇಯಾದಿ ಪುರುಷೋತ್ತಮನೆಆದಿಮಧ್ಯಾಂತ ರಹಿತಾದ್ಯಮೂರುತಿ ವಿಷ್ಣು 28ಬದುಕಿಪ್ಯಾದರೆ ನಿನ್ನ ಹೊಗಳಿಕೆಲಿ ಬದುಕಿಸೈಬುಧರ ಸಂಗತಿ ಕೊಟ್ಟು ಮನ್ನಿಸೆನ್ನನು ತಂದೆ 29ಕಿವಿಯಲ್ಲಿ ಮುಖದಲ್ಲಿ ನಾಮಾಮೃತವÀ ತುಂಬುಕವಲಾಗದೆ ಮನೋಳಿ ಮಿಗೆ ಪದಾಬ್ಜವ ತೋರು 30ಭವಭವದಿ ತೊಳತೊಳಲಿ ಬಳಬಳಲಿ ಬಲುದಣಿದೆಭವವಿರಿಂಚ್ಯಾದಿ ಕರಿಗಭಯದನೆ ನೀ ಸಲಹು31ನೀ ತಾಯಿ ನೀ ತಂದೆ ನೀ ಬಂಧು ನೀ ಬಳಗನೀತಿಗಳನರಿಯೆ ನಿನ್ನಯ ನಾಮವೆ ಗತಿಯು 32ತನು ನೆಚ್ಚಿಕಿಲ್ಲ ಚಿತ್ತದ ಗತಿಯು ನೀಟಿಲ್ಲತನಯತರುಣಿ ಕೊನೆಯ ಸಂಗತಿಗೆ ಆರಿಲ್ಲ33ದೋಷಗಳನರಸದೆನ್ನನು ಸಾಕು ಸಾಕಯ್ಯದಾಸಪಾಲಕ ದೇವ ಡಿಂಗರರ ಸಂಜೀವ 34ನಿನ್ನ ಮೂರುತಿ ನೋಡಿ ನೋಡಿ ನೋಡಿ ನೋಡಿನಿನ್ನ ಬಿಂಬವನೆಂದು ಕಂಡು ಕೊಂಡಾಡುವೆನೊ 35ನಿನ್ನ ಮೈ ಬೆಮರ್ಹೊಳೆಯಲ್ಲೆನ್ನ ಮುಳುಗಿಸಿನಿನ್ನವ ನಾ ನಿನ್ನವರ ಕೈಲಿ ಕೊಡು ಗಡಗಡ 36ವಾರಿಯಲಿ ಸ್ಥಳದಲ್ಲಿ ಅಡವಿಲೆಲ್ಲೆಲ್ಲಿ ಕಾಯೊವಾರಾಹ ವಾಮನ ನೃಸಿಂಹ ಕೇಶವ ಸ್ವಾಮಿ 37ಸತ್ಕುಲೋದ್ಭವನಾದೆ ಸನ್ಮಾರ್ಗರಿಯಲಿಲ್ಲಸತ್ಕರ್ಮಗಳಿಗೆ ಬಹಿಷ್ಕøತನಾಗಿ ಬಾಳುತಿಹೆ 38ಒಂದು ಜಾವದ ತಪ್ಪನೆಂದೆಂದಿಗುಣಲಾರೆವಂದಿಸುವೆ ಸಾಷ್ಟಾಂಗತ್ರಾಹಿತ್ರಾಹಿಪಾಹಿತ್ರಾಹಿ39ಮಧ್ವೇಶ ಮಧ್ವಪ್ರಿಯ ಮಧ್ವಮತ ಪ್ರತಿಪಾಲಮಧ್ವಗುರು ಸ್ತುತ್ಯ ಮಧ್ವಾರ್ಚಿತ ಪದಾಬ್ಜಹರಿ40ಏನರಿಯೆನೇನರಿಯೆ ನೀನೆ ನೀಗೆಲೆಲೆಎನ್ನಘವ್ರಜ ಪ್ರಸನ್ನವೆಂಕಟ ಕೃಷ್ಣ 41
--------------
ಪ್ರಸನ್ನವೆಂಕಟದಾಸರು
ನೂತನಕೆ ನೂತನ ಬಲು ನೂತನಶೇಷಗಿರಿವಾಸ ನಿನ್ನ ಮಹಿಮೆ ನೂತನವು ಪಮಾಡದನೆ ಮಾಡಿಸುವಿ ನೋಡದನೆ ನೋಡಿಸುವಿಬೇಡದಿದ್ದುದನೆಲ್ಲ ಕಾಡಿ ಬೇಡಿಸುವಿನಾಡೊಳಗೆ ನಿನ್ನ ಪೋಲುವರುಂಟೆ ಸರ್ವೇಶಮೂಡಲಗಿರಿವಾಸ ನಿನ್ನ ಮಹಿಮೆ ನೂತನವು 1ಅಣುಮೇರು ಮಾಡಿಸುವಿ ಘನತೃಣವ ಮಾಡಿಸುವಿಘನಕೃಪಾಂಬುಧಿ ನಿನ್ನ ಮಹಿಮೆ ನೂತನವೊಅಣಕವಾಡುವರಲ್ಲಿ ಕುಣಿಸಿ ಮರೆಸುತಲಿರುವಿಫಣಿಶಾಯಿ ನಿನ್ನ ಮಹಿಮೆ ಪ್ರತಿಕ್ಷಣಕೆ ನೂತನವು 2ಕಮಲಸಂಭವ ಪಿತನೆ ಕಮಲಜಾತೆಯ ರಮಣವಿಮಲ ಮುನಿಗಳ ಹೃದಯಕಮಲಶೋಭಿತನೆಕಮಲದಳನೇತ್ರನೆ ಕಮಲನಾಭ ವಿಠ್ಠಲಕಮನೀಯರೂಪನಿನ್ನ ಮಹಿಮೆ ನೂತನವೊ3
--------------
ನಿಡಗುರುಕಿ ಜೀವೂಬಾಯಿ
ಬಂದದೆಲ್ಲವೊ ಬರಲಿ - ಗೋ -ವಿಂದನ ದಯೆ ನಮಗಿರಲಿ ಪಮಂದರಧರ ಗೋವಿಂದ ಮುಕುಂದನಸಂದರುಶನ ನಮಗೊಂದೇ ಸಾಲದೆ ? ಅ.ಪಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನತೋರುವ ದುರಿತದ ಬೆನ್ನ -ಭವಹಾರಿ ಕೃಪಾಂಬುಧಿ ಚೆನ್ನ ||ಶ್ರೀರಮಣನ ಶ್ರೀಚರಣ ಸೇವಕರಿಗೆಘೋರಯಮನು ಶರಣಾಗತನಲ್ಲವೆ ? 1ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದುದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||ಹರಿಕೃಪೆಯವರಲ್ಲಿದ್ದ ಕಾರಣದುರಿತವೆಲ್ಲ ಬಯಲಾದುದಲ್ಲವೆ ? 2ಸಿಂಗನ ಪೆಗಲೇರಿದಗೆ - ಕರಿಭಂಗವೇಕೆ ಮತ್ತವಗೆ |ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ ||ವiಂಗಳ ಮಹಿಮ ಶ್ರೀಪುರಂದರ ವಿಠಲನಹಿಂಗದ ದಯೆವೊಂದಿದ್ದರೆ ಸಾಲದೆ ? 3
--------------
ಪುರಂದರದಾಸರು
ಶರಣುಹರಿಆನತ ಜನಾಶ್ರಯದುರಿತಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
--------------
ಪ್ರಸನ್ನವೆಂಕಟದಾಸರು