ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ. ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ 1 ಹಿಂಡು ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ2 ಹಿಂಡು ಕರೆಸವ್ವ ಸಖಿಯೆ 3 ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ 4 ಹಿಂಡು ಬರಲೆವ್ವ ಸಖಿಯೆ 5 ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ 6 ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ7
--------------
ಗಲಗಲಿಅವ್ವನವರು
ಕೃಷ್ಣನ ತಂಗಿಯರೆಂಬೊ ಗರವಿಲೆಇಷ್ಟು ನುಡಿದಾರೆ ಇವರುನಮ್ಮನೆಗೆ ಬಂದಿನ್ನೆಷ್ಟುನುಡಿದಾರೆ ಪ.ಕೃಷ್ಣನ ಮನದಿ ನೆನಸಿಮುಯ್ಯದ ಸುದ್ದಿ ಅಷ್ಟು ಲೋಕಕ್ಕ ಮೆರೆಸಿಅಷ್ಟದಿಕ್ಕಿನ ಶ್ರೇಷ್ಠರಾಯರ ಕರೆಸಿಇಟ್ಟಮುದ್ರಿಕೆತೆಗಿಸಿಧಿಟ್ಟೆಯರು ಮುಯ್ಯವಿರಸಿನ್ನೆಷ್ಟು ನುಡಿದಾರೆ ಇವರು 1ಹರಿಯ ತಂಗಿಯರೆಂದು ದ್ರೌಪತಿಭದ್ರ ಗರವಿಲೆ ಮುಯ್ಯ ತಂದುರಾತ್ರಿಲೆ ತಮ್ಮ ಕರೆಯ ಬರಲಿಲ್ಲವೆಂದುಭರದಿ ಕೋಪಿಸಿ ಬಂದುಸರಿಯವರುನಗತಾರೆಇನ್ನೆಷ್ಟು ನುಡಿದಾರೆ ಇವರು 2ಬೇಗನೆ ಮುಯ್ಯಾ ತಂದುರಂಗನ ಯಾವಾಗ ನೋಡೆವೆಂದುಸೋಗುಮಾಡುತಬಾಗಿಲೊಳುನಿಂದುಬೀಗವ ತೆಗೆಸಿರೆಂದು ಕೂಗಾಡಿದರಿನ್ನೆಷ್ಟು ನುಡಿದಾರೆ ಇವರು 3ಸುಳ್ಳು ಮುಯ್ಯವ ತಂದುಹರಿಯಲ್ಲೆ ಸ್ನೇಹ ಬಳ್ಳಿಯ ಸುತ್ತಿಕೊಂಡುಜನರೊಳು ಬಹಳ ಒಳ್ಳೆಯವರೆನಿಸಿಕೊಂಡುತಳ್ಳಿಮಾತಾಡಿಕೊಂಡುತಳಮಳತಾವೆಗೊಂಡುಇನ್ನೆಷ್ಟು ನುಡಿದಾರೆ ಇವರು 4ರಮ್ಮಿ ಅರಸನ ಎದುರುದ್ರೌಪತಿ ಭದ್ರೆ ಹೆಮ್ಮಿಲೆ ದೂರಿದರುಎಲ್ಲರು ನಗಲು ಜಮ್ಮನೆ ನಾಚಿಹರುನಮ್ಮನ ಕರೆಯದೆ ಒಳಗೆಗುಮ್ಮನಂತೆ ಅಡಗಿದೆರಿನ್ನೆಷ್ಟು ನುಡಿದಾರೆ ಇವರು 5
--------------
ಗಲಗಲಿಅವ್ವನವರು