ಒಟ್ಟು 31 ಕಡೆಗಳಲ್ಲಿ , 19 ದಾಸರು , 31 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ಪ ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ಅ.ಪ. ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ 1 ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ 2 ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ 3
--------------
ವ್ಯಾಸರಾಯರು
ಕಾಯಯ್ಯಾ ಎನ್ನಾ ಪ ಸರಸೀರುಹ ಶತಕಿರಣಾ | ಅರುಣಾಂಬುಜಾಲಯ ರಮಣಾ | ಅರುಣಾನುಜ ಗಮನಾ | ಅರಿದಮನಾ 1 ಕಿನ್ನರ ಸುತ ಚರಣಾ | ಶರಣಾಗತ ಜನಭಯ ಹರಣಾ | ಅರುಣಾದ್ರಿ ನಿಲಯ ಸಖಚಿದ ನಾ 2 ಗುರು ಮಹಿಪತಿ ಸುತ ಪ್ರಭು ಕರುಣಾ | ಹರಿಣಾಂಕ ಕುಲವರ ರನ್ನಾ | ಧರಣಿ ಧರಧರ ದೀನೋದ್ಧರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಜಯತೀರ್ಥ ಗುರುರಾಯ ಕವಿಗೇಯಾ ಪಾದ ದ್ವಯಕಭಿನಮಿಸುವೆ ಶುಭಕಾಯ ಪ ಪಾದ ಪಾದ ದ್ವಂದ್ವಾರಾಧಕರ ಸಂಬಂಧಿಗ ನರ ನೆಂದು ಪಾಲಿಪುದು ಕಾರುಣ್ಯ ಸಾಗರ ಮಂದ ನಾನು ಕರ್ಮಂದಿಗಳರಸ ಮು ಕುಂದನ ತೋರೋ ಮನಮಂದಿರದಲ್ಲಿ 1 ಹರಿಪಾದಾಂಬುಜಾಸಕ್ತ ನಿಜ ಭಕ್ತ ಜನರಾ ಪರಿಪಾಲಿಪ ಸಮರ್ಥ ಅಕ್ಷೋಭ್ಯ ತೀರ್ಥ ಕರಕಮಲ ಸಂಜಾತಾನಂದ ದಾತಾ ಪರÀಮಹಂಸ ಕುಲವರನೆ ವಂದಿಸುವೆ ಕರುಣದಿಂದಲೆನಗರುಪು ಸುತತ್ವವ 2 ಕಾಮಿತ ಫಲದಾತಾ ಜಗನ್ನಾಥ ವಿಠ್ಠಲ ಸ್ವಾಮಿ ಪರಮ ದೂತಾ ಸುವಿಖ್ಯಾತಾ ಶ್ರೀ ಮಧ್ವ ಮತಾಂಬರುಹ ಪ್ರದ್ಯೋತಾ ತಾಮಸಗಳೆದೀ ಮಹೀಸುರರ ಮ ಹಾಮಹಿತರ ಮಾಡ್ದೆ ಮುನಿವರ್ಯಾ 3
--------------
ಜಗನ್ನಾಥದಾಸರು
ಜಯದೇವ ಜಯದೇವ ಜಯ ವೆಂಕಟೇಶಾ| ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ| ಸುರವರ್ಧನ ಮುರಮರ್ದನ ಗೋವರ್ಧನಧಾರಿ| ವರಮಂದಿರ ಧೃತಕುಂದರ ಸುಂದರ ಸಹಕಾರಿ| ಶೌರಿ 1 ಜಗಕಾರಣ ಪರಿಪೂರಣ ಸುಂದರಸಾಕಾರಾ| ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ| ನಗಧರಣಾ ತವಶರಣಾಭರಣಾ ಮಯೂರಾ| ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ 2 ಸುಖಕರ್ತಾ ದುಃಖಹರ್ತಾ ಸರಸೀರುಹ ನಯನಾ| ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ| ನಿಖಿಲಾಸುರ ತಮಭಾಸುರ ದುರಿತಾವಳಿ ಶಮನಾ| ಮಕರಾಂಕಿತ ಪಿತಮಹೀಪತಿ ನಂದನಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೇವ ದೇವ ದೇವ ದೇವ ದೇವಾದಿದೇವ| ಶ್ರೀ ದೇವನೇ ದೇವಾ|ಸಲಹೆನ್ನ ಸದಾ ಪ ವಸುಧಿಯ ತನುಭವ ತನುಗಿರಿ ಕುಲಿ|ಶಾ| ಮರರಿಗಡಿಗಡಿಗೆ ನೀ ಸಲಹುವೆ ಕರುಣದಿ| ಬಿಸರುಹ ಲೋಚನ ದೇವ ದೇವಾ| ಸುರತರು ದೇವದೇವ1 ನಗವರಧರ ಮೃಗಕುಲದಧಿಪತಿ| ವೈರಿಯ ಕುಲವರ ವರದನೇ ಕೇಶವಾ| ಉಡಗಣ ಪತಿಯನ ಪಡೆದನ ತನುಜೆಯ| ರಮಣನೆ ಮಹಿಪತಿ ನಂದನ ಜೀವನಾ| ಪೊಡವಿ ಮನೋಹರ ದೇವ ದೇವಾ 2
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಿ ತುತಿಸಿರೋ ರಾಘವೇಂದ್ರ ಧ್ವರಿಯಾ ಸನ್ಮುನಿ ಕುಲವರಿಯಾ ಪ ಅಂಬುಜನಾಭನಿಗತಿ ಪ್ರೀಯಾ ಸಜ್ಜನರಿಗೆ ಸಹಾಯ ಅ.ಪ ಕನಕಶಯ್ಯನ ತನುಜನಾಗಿ ಜನಿಸಿ ನರಹರಿಯನ್ನೆ ಒಲಿಸಿ ಅನುಜರಿಗನುದಿನ ತತ್ತ್ವವ ತಾಕಲಿಸಿ ಮನದಲಿ ಶ್ರೀಹರಿ ಪದವನ್ನೇ ಭಜಿಸಿ ವರ ಕರುಣವನೇ ಸಲಿಸಿ ವನಜಭವಾಂಡದಿ ಬಹು ಬಲ್ಲಿದನೆನಿಪ ನತಜನರಿಗೆ ಸುರÀ 1 ಕಾಮಧೇನು ಸುರತರುವಿಗೆ ಸಮನೀತ ಕಾಮಿತ ಫಲ ದಾತಾ ರಾಮ ನರಹರಿ ಕೃಷ್ಣರ ಪದ ದೂತ ಲೋಕದಿ ಬಹು ಖ್ಯಾತ ಕಾಮಿನಿ ಸುತ ಧನ ಧಾನ್ಯದ ವ್ರಾತ ನೀಡುವೊನತಿ ಪ್ರೀತ ಪ್ರೇಮದಿ ನಿಜಜನಸ್ತೋಮಕೆ ಬಹು ದಾತ ಯತಿವರ ಕುಲನಾಥ 2 ಪಾತಕವನಕುಲ ವೀತಿಹೋತ್ರನೆನಿಸಿ ಭೂತಪ್ರೇತ ಮಹ ಭೀತಿಯನೇ ಬಿಡಿಸಿ ರೋಗವಪರಿಹರಿಸಿ ಮಾತಪಿತರ ತೆರ ದೂತರ ರಕ್ಷಿಸಿ ಮನೋಚಿಂತೆಯನೆ ಬಿಡಿಸಿ ದಾತಗುರುಜಗನ್ನಾಥವಿಠÀಲ ಪದದೂತ ದಾತ 3
--------------
ಗುರುಜಗನ್ನಾಥದಾಸರು
ನಿತ್ಯ ಮಂದಾರ ತರುವಂತೆಕುಂದದಲ ಭೀಷ್ಟಗಳ ಗರೆವ | ಸುರ ತರುವಾ ಪ ವಾಗೀಶ ಕರಜಾತ | ನಿಗಮಾರ್ಥ ಕೋವಿದರಭೋಗಿಶಯನನ ಭಕುತ | ಭಾಗ್ಯ ದಾತೃಗಳ |ಯೋಗಿ ಕುಲವರ್ಯ ಹೃ | ದ್ರೋಗ ನೀಗುವರಜಾಗು ಮಾಡದೆ ಭಜಿಪ | ಭಕ್ತರನು ಪೊರೆವರನು 1 ಭವ ಭವಣೆ ಹರಿಸು ವರ |ನವ ನವ ಸ್ತೋತ್ರಗಳ | ಕವನ ರೂಪದಿ ಪೇಳಿಪವನಾಂತರಾತ್ಮಕನ | ಪರಿತೋಷ ಗೈದವರಾ 2 ಗರಳ ಅಂಘ್ರಿ ಕಮಲಂಗಳನುನೆರೆನಂಬಿ ಸುಖಿಸುವರ | ಸುರವ ಭಯ ವಿರಹಿತರ 3 ಉಕ್ತಿಯನು ಸ್ವಪ್ನದಲಿ | ಶಕ್ತಹಯಮುಖಪೇಳೆಯುಕ್ತಿಮಲ್ಲಿಕೆ ಮಾಲೆ | ಮೌಕ್ತಿಕವ ನಿತ್ತವರ |ಭಕ್ತಿಪಥ ತೋರಿ | ಕು | ಯುಕ್ತಿಗಳನೇ ಕಳೆದುಮುಕ್ತಿ ಮಾರ್ಗವ ತೋರ್ವ | ಭಕ್ತಿಯೋಗಿಗಳಾ 4 ಮಾಯಿ ಶೈವರು ಶಾಕ್ತ್ಯ | ಅನ್ಯಮತಗಳಗೆದ್ದುಜಯ ಪತ್ರ ಘಂಟೆಗಳ | ವಿಜಯ ಸಾರಥಿಗಿತ್ತು |ಭಯ ವಿನಾಶನು ನಮ್ಮ | ತೋಯಜಾಂಬಕ ಸಿರಿಹಯ ವದನನರ್ಚಿಸುವ | ವಾದಿರಾಜರನೂ 5 ಅದ್ವೈತ ತಮ ಸೂರ್ಯಮೇದಿನೀ ಸುರವಂದ್ಯ | ಶ್ರೀವಾದಿರಾಜರನೂ 6 ಭಾವಿ ಮಾರುತಿಯ | ದಿನ ದಿನದಿ ಪ್ರಾರ್ಥಿಪರಭಾವ ಕೊಲಿಯುತ ತೋರ್ವ | ಹಯ ಮುಖಾತ್ಮಕನು |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನಭವ್ಯ ರೂಪವ ಹೃದಯ | ದವಕಾಶದೊಳಗೇ 7
--------------
ಗುರುಗೋವಿಂದವಿಠಲರು
ಬಾದರಾಯಣ ಮದದಿ ಮರೆತೆನೊ ಸದಯದಿಂ ಮುದ ಪಾಲಿಸೊ ಪ ಬೋಧ ಮೂರುತೆ ಭಕ್ತರಾ ನುಡಿ ಸಾದರದಿ ನೀನಾಲಿಸೋ ಅ.ಪ ವೇದಭಾಗವ ಮಾಡಿ ವೇದವ್ಯಾಸನೆಂದೆನಿಸಿದಿ ಸದಮಲಾಭಾವದಲಿ ನಿನ್ನಯ ಪಾದಕಮಲವ ತೋರಿದಿ 1 ಗಾತ್ರ ಎನ್ನಯ ಖೇದ ಭಾವವನೋಡಿಸೊ ಮೋದತೀರ್ಥ ಹೃದಾಬ್ಜ ಮಂದಿರ ಸಾಧು ಸಂಗವ ಮಾಡಿಸೋ 2 ತರ್ಕಮುಧ್ರಾಧರನೆ ಎನ್ನ ಕುತರ್ಕ ಬುದ್ಧಿಯನೋಡಿಸೋ ಅರ್ಕಸನ್ನಿಭ ಬ್ರಹ್ಮ ಸುತರ್ಕ ಮಾರ್ಗವ ಬೋಧಿಸೋ 3 ಅಭಯಪ್ರದಕರ ಎನ್ನಭವ ಭಯ ತ್ರಿಭುವನೇಶ್ವರ ಓಡಿಸೀ ಇಭವರದ ಮಧ್ವೇಶ ಸಂತತ ಸಭೆಯ ಸಹನೀ ತೋರೆಲೊ4 ಯೋಗ ಪೀಠನೆ ನೀಗಿಸೆನ್ನಯ ಭೋಗಬುದ್ಧಿಯ ಸರ್ವದಾ ಯೋಗಿಕುಲವರ ಬಾಗಿ ನಮಿಸುವೆ ಯೋಗಮಾರ್ಗವ ತೋರಿಸೊ5 ಮಾ ಕಮಲಜ ಭವೇಂದ್ರವಂದಿತ ಮಾಕಳತ್ರ ನಮೋಸ್ತುತೇ ಯಾಕೆ ಎನ್ನಲಿ ನಿರ್ದಯವು ನೀ ಸಾಕಲಾರದ ಪಾಪಿಯೇ 6 ಸನ್ನುತಿಸಿ ನಾ ನಿನ್ನ ಬೇಡುವೆ ಸನ್ನುತಾಂಘ್ರಿಯ ಸೇವೆಯಾ ಸನ್ಮುನೀವರ ಶ್ರೀ ನರಹರೆ ದಾಸದಾಸರ ದಾಸ್ಯವಾ 7
--------------
ಪ್ರದ್ಯುಮ್ನತೀರ್ಥರು
ಬಾರಯ್ಯಾ ಗೋವಿಂದಾ | ಬಾರೋ ನಂದನ ಕಂದಾ ಪ ಕನಕಗರ್ಭನ ತಂದೆ | ಕನಕಮೃಗವ ಕೊಂದೆ | ಕನಕಾಂಬರಧರ | ಕನಕನಯನ ಹರ | ಕನಕವಕ್ಕಿಗಮನ | ಕನಕಾಭರಣ1 ಹರಿಯಾನಂದನ ಕೊಲಿಸಿ | ಹಿರಯಾನಂದನನುಳಿಸಿ | ಹರಿಯಾ ಸುತನುತ | ಹರಿಯಾ ರಿಪುಸುತ | ಹರಿಯೇ ಬಾಯೆನೆ ಹರಿಯಾದೆ 2 ಗೋಕುಲವರಾಧಾರಾ | ಗೋಕುಲ ವಿಹಾರಾ | ಗೋಕರ್ಣ ಶಯನಾ | ಗೋಕೋಟಿ ತೇಜಾ | ಮಹಿಪತಿ ಸುತ ಪ್ರಭು ಗೋಪಾಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಾಲಕ ಕಂಡೆನು ನಿನ್ನ | ಬಾಲಕ ಪ. ಬಾಲಕ ಕಂಡೆನು ನಿನ್ನಾ | ಮುದ್ದು ಬಾಲ ತೊಡಿಗೆ ಇಟ್ಟರನ್ನಾ | ಆಹ ಕಾಲ ಕಾಲದ ಪೂಜೆ ಮೇಲಾಗಿ ಕೈಕೊಂಡು ಪಾಲಿಪ ಸುಜನರ ಅ.ಪ. ವಸುದೇವ ಕಂದ ಗೋವಿಂದ ವಸುಧಿ ಭಾರವನಿಳುಹೆ ಬಂದಾ | ಪುಟ್ಟ ಹಸುಗಳ ಕಾಯ್ವ ಮುಕುಂದ | ರ ಕ್ಕಸರನೆಲ್ಲರ ತಾನೆ ಕೊಂದಾ | ಆಹಾ ಹಸುಮಕ್ಕಳೊಡಗೂಡಿ ಮೊಸರು ಬೆಣ್ಣೆಯ ತಿಂದು ಶಶಿಮುಖಿಯರಮನಕಸಮ ಸಂತಸವಿತ್ತು 1 ವಿಶ್ವವ್ಯಾಪಕನಾದ ಬಾಲಾ | ಸರ್ವ ವಿಶ್ವ ತನ್ನೊಳಗಿಟ್ಟ ಬಾಲಾ | ಸ ರ್ವೇಶ್ವರನೆನಿಸುವ ಬಾಲಾ | ಬ್ರಹ್ಮ ಈಶ್ವರ ಸುರ ಪರಿಪಾಲಾ | ಆಹ ವಿಶ್ವ ಪ್ರದೀಪಕ ವಿಶ್ವನಾಟಕ ಸರ್ವ ವಿಶ್ವಚೇಷ್ಟಕನಾದ 2 ಸಿರಿಗರಿಯದ ಗುಣನೀತಾ | ಮತ್ತೆ ಸಿರಿಯ ತನ್ನೊಳಗಿಟ್ಟಾತಾ | ಆ ಸಿರಿಯಲ್ಲಿ ತಾನಿರುವಾತಾ | ಸೃಷ್ಟಿ ಸಿರಿಯಿಂದ ಮಾಡಿಸುವಾತಾ | ಆಹ ಸಿರಿಯ ಬಿಟ್ಟಗಲದೆ ಸಿರಿಗೆ ಮೋಹಕನಾಗಿ ಸಿರಿ ಸೇವೆ ಕೈಕೊಂಬ ಸಿರಿಕಾಂತ ಶ್ರೀಕೃಷ್ಣ 3 ಪ್ರಳಯಾಂಬುವಟಪತ್ರ ಶಯನಾ | ಥಳ ಥಳಿಸುವ ಪದತಳ ಅರುಣಾ | ವರ್ಣ ಎಳೆಗೂಸಿನಂತಿಹ ಚಿಣ್ಣಾ | ಆರು ತಿಳಿಯಲಾಗದ ಗುಣಪೂರ್ಣ | ಆಹ ನಳಿನಭವನ ಪೊಕ್ಕಳಲಿ ಪಡದು ತನ್ನ ನಿಲಯ ತೋರಿಸಿ ಕಾಯ್ದ ಚಲುವ ಚನ್ನಿಗ ದೇವ4 ಸತಿ ಪ್ರಾಯ ಕೆಡಿಸದೆ ತನ್ನಾ | ಮೈಯ್ಯೋಳ್ ಸುತರ ಪಡೆದಂಥ ಸಂಪನ್ನಾ | ವೇದ ತತಿಗೆ ಶಿಲ್ಕದ ಸುಗುಣಾರ್ಣ | ಅ ದ್ಭುತ ರೂಪ ಜಗದೇಕ ಘನ್ನಾ | ಆಹ ಜಿತಮಾನಿಗಳಿಗೆ ಹಿತಕೃತಿ ಕಲ್ಪಿಸಿ ಜತನದಿ ಜಗಜೀವತತಿಗಳ ಕಾಯೂವ 5 ಸುರತತಿಗಳನೆ ನಿರ್ಮೀಸಿ | ಅವರೊಳ್ ತರತಮ ಭೇದ ಕಲ್ಪಿಸಿ | ತನ್ನ ವರಪುತ್ರನೋಶಕೆ ವಪ್ಪೀಸಿ | ಸೃಷ್ಟಿ ಗರಸನ್ನ ಮಾಡಿ ನೀ ನಿಲಿಸೀ | ಆಹ ಪರಮೇಷ್ಟಿ ಪದವಿತ್ತು ಸರುವ ಜೀವರ ಶ್ವಾಸಕ್ಕರಸನೆಂದೆನಿಸಿದ 6 ಸರಿ ಇಲ್ಲ ವಾಯುಗೆಂದೆನಿಸೀ | ತತ್ವ ಸುರರಿಗಧೀಶನೆಂದೆನಿಸೀ | ತನ್ನ ಶರಣರ ಕಾಯ್ವನೆಂದೆನಿಸೀ | ಅವ ನಿರುವಲ್ಲಿ ತಾ ಸಿದ್ಧನೆನಿಸೀ | ಆಹ ತರಣಿಜಗೊಲಿಯುತ್ತ ಕುರುಕುಲವಳಿಯುತ್ತ ಪರಮತ ಖಂಡಿಸಿ ಕರೆಯೆ ತನ್ನನು ಬಂದಾ 7 ತ್ರಿವಿಧ ಜೀವರಗತಿದಾತಾ | ನಮ್ಮ ಪವನನಂತರ್ಯಾಮಿ ಈತಾ | ಪದ್ಮ ಭವ ರುದ್ರ ತ್ರಿದಶರ ಪ್ರೀತಾ | ಭಕ್ತ ರವಸರಕೊದಗುವ ದಾತಾ ಪವನಜ ಸತಿಭಕ್ತ ನಿವಹ ತಾಪದಿ ಕೂಗೆ ಭುವಿಯಲ್ಲಿ ಪೊರೆದಂಥ 8 ಶೋಣಿತ ನೀಲ ಕಾಯಾ | ದೇವ ಅಕ್ಲೇಶ ಆನಂದಕಾಯಾ | ಯುಗಕೆ ತಕ್ಕಂಥ ವರ್ಣಸುಕಾರ್ಯ | ಮಾಳ್ಪ ರಕ್ಕಸಾಂತಕ ಕವಿಗೇಯಾ | ಆಹ ಪೊಕ್ಕಳ ನಾಡಿಯೊಳ್ ಸಿಕ್ಕುವ ಜ್ಞಾನಿಗೆ ದಕ್ಕುವ ಸುರರಿಗೆ ಠಕ್ಕಿಪ ದನುಜರ 6 ಸಚ್ಚಿದಾನಂದ ಸ್ವರೂಪ | ಭಕ್ತ ರಿಚ್ಛೆ ಸಲ್ಲಿಸಿ ಕಳೆವ ತಾಪಾ | ಶ್ರೀ ಭವ ಕೂಪಾ | ದಲ್ಲಿ ಮುಚ್ಚಿಡ ತನ್ನನ್ನೆ ಸ್ತುತಿಪಾ | ಆಹ ಅಚ್ಚ ಭಾಗವತರ ಮೆಚ್ಚಿ ಕಾಯುತ ಅಘ ಕೊಚ್ಚಿ ತನ್ನುದರದಿ ಬಚ್ಚಿಟ್ಟು ಕಾಯುವ 10 ವಲ್ಲನು ಸಿರಿಸತಿ ಪೂಜೆ | ಮತ್ತೆ ವಲ್ಲನು ಸುರ ಸ್ತುತಿ ಗೋಜೆ | ತಾ ನೊಲ್ಲನು ಮುನಿಗಳ ಓಜೆ | ಹರಿ ವಲ್ಲನು ಋಷಿಯಾಗವ್ಯಾಜೆ | ಆಹ ಬಲ್ಲಿದ ಭಕುತರ ಸೊಲ್ಲಿಗೊದಗಿ ಬಂದು ಚಲ್ವರೂಪದಿ ಹೃದಯದಲ್ಲಿ ನಿಲ್ಲುವ ಕರುಣಿ11 ಅಂಬುದಿಶಯನ ಶ್ರೀಕಾಂತಾ | ಸರ್ವ ಬಿಂಬನಾಗಿಹ ಮಹಶಾಂತ | ತನ್ನ ನಂಬಿದ ಸುಜನರ ಅಂತಾ | ರಂಗ ಅಂಬುಜ ಮಧ್ಯ ಪೊಳೆವಂಥಾ | ಆಹ ಭಂಜನ ಪಶ್ಚಿ- ಮಾಂಬುಧಿ ತಡಿವಾಸ ಶಂಬರಾರೀಪಿತ12 ಸ್ವಪ್ನದಿ ಗೋಪಿಕರ ತಂದು | ಎನ ಗೊಪ್ಪಿಸೆ ತನ್ನ ಕೂಸೆಂದು | ಚಿನ್ನ ದಪ್ಪಾರಭರಣವದೆಂದೂ | ನಾನು ವಪ್ಪದಿರಲು ಎತ್ತೆನೆಂದೂ | ಆಹಾ ತಪ್ಪಿಸಿಕೊಳ್ಳೆ ಮತ್ತೊಪ್ಪಿಸಿ ಪೋದಳು ಅಪ್ಪಿ ಎನ್ನ ತೋಳೊಳೊಪ್ಪಿದ ಶಿಶುರೂಪ 13 ಶ್ರೀ ಮಾಯಾಜಯ ಶಾಂತಿ ರಮಣಾ | ಕೃತಿ ನಾಮಕ ಶಿರಿವರ ಕರುಣಾ | ಪೂರ್ಣ ಹೇಮಾಂಡ ಬಹಿರಾವರ್ಣ | ವ್ಯಾಪ್ತ ಮಾ ಮನೋಹರ ಪ್ರಣವ ವರ್ಣಾ | ಆಹ ಸ್ವಾಮಿ ಸರ್ವೋತ್ತಮ ಧಾಮತ್ರಯದಿ ವಾಸ ಶ್ರೀಮದಾಚಾರ್ಯರ ಪ್ರೇಮ ಮೂರುತಿ ಮುದ್ದು14 ದ್ವಿ ದಳ ಮಧ್ಯದಿ ರಥ ನಿಲಿಸೀ | ಪಾರ್ಥ ನೆದೆಗುಂದೆ ತತ್ವಾರ್ಥ ತಿಳಿಸೀ | ನಿನ್ನ ಅದುಭುತ ರೂಪ ತೋರಿಸೀ | ಸ- ನ್ಮುದವಿತ್ತು ಕುರುಕುಲವರಸಿ | ಆಹ ವಿದುರನ ತಾತ ನಿನ್ನೊಡೆಯ ಬಾಣದಿ ಫಣೆ ಯದುವೀರ ಚಕ್ರ ಹಸ್ತದಿ ಧರಿಸುತ ಬಂದ 15 ನಿತ್ಯನೂತನ ದೇವ ದೇವಾ | ಸರ್ವ ಶಕ್ತ ನಿನ್ಹೊರತಾರು ಕಾವಾ | ಎನ್ನ ಚಿತ್ತದಿ ನೆಲಸು ಪ್ರಭಾವಾ | ಸರ್ವ ಕೃತ್ಯ ನಿನ್ನದೊ ವಿಜಯ ಭಾವಾ | ಆಹಾ ಮುಕ್ತಿ ಪ್ರದಾತನೆ ಮುಕ್ತರಿಗೊಡೆಯನೆ ತತ್ವ ನಿಯಾಮಕ ತತ್ವಾರ್ಥ ತಿಳಿಸೈಯ್ಯಾ 16 ಚರಣತಳಾರುಣ ಪ್ರಭೆಯೂ | ಹತ್ತು ನಖ ಪಂಕ್ತಿಯ ಪರಿಯೂ | ಗೆಜ್ಜೆ ಸರಪಳಿ ಪಾಡಗರುಳಿಯೂ | ಮೇಲೆ ಜರೆಯ ಪೀತಾಂಬರ ನೆರಿಗೆಯೂ | ಆಹ ವರ ಜಾನುಜಂಘೆಯು ಕರಿಸೊಂಡಲಿನ ತೊಡೆ ಸರ ಮಧ್ಯ ಉರುಕಟಿ ಕಿರಿಗೆಜ್ಜೆ ಉಡುದಾರ 17 ಸರಸಿಜೋದ್ಭವ ವರಸೂತ್ರ | ಮೇಲೆ ಮೆರೆವಂಥ ಸಿರಿಯ ಮಂದೀರ | ಹೃದಯ ವರರತ್ನ ಪದಕದ ಹಾರ | ಸ್ವಚ್ಛ ದರ ವರ್ಣ ಪೊಲ್ವ ಕಂಧಾರಾ | ಆಹ ಕರದ್ವಯ ಕಂಕಣುಂಗುರ ತೋಳ ಬಾಪುರಿ ಸುರರಿಗಭಯ ತೋರ್ಪ ಕರಕಮಲದ ಪುಟ್ಟ 18 ಮೊಸರರ್ಧ ಕಡದಿರೆ ಜನನೀ | ಬಂದು ಹಸುಗೂಸು ಮೇಲೆ ಬೇಡೆ ನನ್ನೀ | ಯಿಂದ ಮುಸುಗಿಟ್ಟು ಪಾಲ್ಕುಡಿಯಲು ನೀ | ಒಲೆ ಬಿಸಿ ಹಾಲುಕ್ಕಲು ಪೋಗೆ ಜನನೀ | ಆಹ ಹಸಿವಡಗದ ಕೋಪಕ್ಮಸರ್ಗಡಿಗೆಯ ವಡ- ದೆಸೆವ ಕಡಗೋಲ್ವಡಿದ್ಕೊಸರೋಡಿ ಬಂದ ಹೇ19 ಪದ್ಮ ಮುಖದ ಕಾಂತಿ ಸೊಂಪೂ | ಅಧರ ತಿದ್ದಿ ಮಾಡಿದ ದಂತ ಬಿಳುಪೂ | ತುಂಬಿ ಮುದ್ದು ಸುರಿಸುವ ಗಲ್ಲದಿಂಪೂ | ಕರ್ಣ ಕುಂಡಲ ಕೆಂಪೂ | ಆಹ ಮಧ್ಯ ಮೂಗುತಿ ನಾಸ ಪದ್ಮದಳಾಕ್ಷವು ಸದ್ಭಕ್ತರೇಕ್ಷಣ ಶುದ್ಧಾತ್ಮ ಸುಖಪೂರ್ಣ20 ಕಮಲಸಂಭವ ವಾಯುಚಲನಾ | ಹುಬ್ಬು ವಿಮಲ ಫಣೆ ತಿಲುಕದಹನಾ | ಮೇಲೆ ಭ್ರಮರ ಕುಂತಳ ಕೇಶ ಚನ್ನಾ | ವಜ್ರ ಅಮಿತ ಸುವರ್ಣ ಮುತ್ತೀನಾ | ಆಹ ಕಮನೀಯ ಮಕುಟವು ಸುಮನಸರೊಂದಿತ ಕಮಲ ತುಳಸಿಹಾರ ವಿಮಲಾಂಗ ಸುಂದರ 21 ಅಂತರ ಬಹಿರ ದಿವ್ಯಾಪ್ತಾ | ಸರ್ವ ರಂತರ ಬಲ್ಲ ನೀ ಗುಪ್ತಾ | ಜೀವ ರಂತರಂಗದಿ ವಾಸ ಸುಪ್ತಾ | ದಿಗ ಳಂತಾನೆ ನಡೆಸುವ ಆತ್ತಾ | ಆಹ ಸಂತತ ಚಿಂತಿಪರಂತರಂಗದಿ ನಿಂತು ಕಂತುಪಿತ ಇನಕೋಟಿಕಾಂತಿ ಮೀರಿದ ಪ್ರಭ22 ಎಚ್ಚತ್ತು ಇರುವ ಸರ್ವದಾ | ಕಾಲ ಮುಚ್ಚಿ ಕೊಂಡಿಪ್ಪೊದೆ ಮೋದಾ | ಅಜ ನುಚ್ವಾಸದುತ್ಪತ್ತಿಯಾದ | ಬಾಯ ಪಾದ | ಆಹ ಮುಚ್ಚೆ ಭೂವ್ಯೋಮವು ಹೆಚ್ಚಿನ ಕೋಪವು ಇಚ್ಚಿಪವನವಾಸ ಸ್ವೇಚ್ಛಾ ವಿಹಾರನೇ 23 ಗೊಲ್ಲರೊಡನಾಟ ಬಯಸೀ | ವಸ್ತು ವಲ್ಲದೆ ಪರಸ್ತ್ರೀಯರೊಲಿಸೀ | ಮತ್ತೆ ಚಲ್ವ ಕುದುರೆ ಏರಿ ಚರಿಸೀ | ತಾ ನೆಲ್ಲಿ ನೋಡಲು ಪೂರ್ಣನೆನಿಸೀ | ಆಹ ವಲ್ಲದೆ ದ್ವಾರಕೆ ಇಲ್ಲಿಗೈತಂದು ಮ ತ್ತೆಲ್ಲರ ಕಾಯುವ ಚೆಲ್ವ ಮಧ್ವೇಶ ಶ್ರೀ 24 ಗೋಪಿ ಕಂದನೆ ಮುದ್ದು ಬಾಲಾ | ಚೆಲ್ವ ರೂಪ ಸಜ್ಜನ ಪರಿಪಾಲಾ | ಗುರು ನಿತ್ಯ ನಿರ್ಮಾಲಾ | ದೇವಾ ಗೋಪಾಲಕೃಷ್ಣವಿಠ್ಠಾಲ | ಆಹ ಪರಿ ನಿಂತು ಮ ಕೊಂಡ ಶ್ರೀಪತಿ ಮರುತೇಶ 25
--------------
ಅಂಬಾಬಾಯಿ
ಭಂಜನ ಶರಣು ತ್ರಿಭುವನ ರಂಜನ ಶರಣು ರವಿಕುಲವರ್ಧನ ಶರಣು ಪ ಪರಮಭಕ್ತ ಸರೋಜ ಭಾಸ್ಕರ ಪಾಹಿ ಪಾಹಿ ಕೃಪಾಕg À 1 ಪಾವಕ ದುರಿತಹರ ರಘುನಾಯಕ 2 ವಾಸುದೇವ ಜನಾರ್ಧನÀ ವಾಸವನುತ ವನಜಲೋಚನ ವಂದಿತಾಖಿಲ ಬುಧಜನ 3 ಬ್ರಹ್ಮಪಿತ ಪ್ರಹ್ಲಾದವರದ ನೃಸಿಂಹದೇವ ನಮೋಸ್ತುತೇ 4 ಎನುತ ಭಜಿಸುವ ಭಕ್ತ ಜನರಿಗೆ ಮನದಭೀಷ್ಟವ ಪಾಲಿಪ ಜನವರನೆ ಗುರುರಾಮವಿಠ್ಠಲ ಜಾನಕೀ ಪ್ರಾಣವಲ್ಲಭ 5
--------------
ಗುರುರಾಮವಿಠಲ
ಯಾಕೆ ಮೂಕನಾದ್ಯೋ ಗುರುವೆ ನೀ ನ್ಯಾಕ ಮೂಕನಾದ್ಯೋ ಪ ಲೋಕ ಪಾಲಕ ಎನ್ನ ಸಾಕುವರ್ಯಾರಯ್ಯ ಶ್ರೀಕರ ರಾಘವೇಂದ್ರ ಅ.ಪ ಹಿಂದಕ್ಕೆ ನೀ ಎನ್ನ ಮುಂದೆ ಸುಳಿದಾಡಿದೆ ಮಂದಿಯೊಳಗೆನ್ನ ಮಂದನ್ನ ಮಾಡಿದ್ಯೊ 1 ಬೇಕಾಗದಿದ್ದರಿನ್ಯಾಕೆ ಕೈಯನು ಪಿಡಿದೆ ಕಾಕುಜನರೊಳೆನ್ನ ನೂಕಿ ಬಿಟ್ಟು ನೀನು 2 ಹೀಂಗೆ ಪಾಲಿಸಿದರೆ ಯೋಗಿಕುಲವರ್ಯ ರಾಘ ಭವ ಸಾಗುವದ್ಹ್ಯಾಂಗಯ್ಯ 3 ನಿನ್ನಂಥ ಕರುಣಿಲ್ಲ ಎನ್ನಂಥ ಕೃಪಣಿಲ್ಲ ಘನ್ನ ಮಹಿಮ ನೀ ಎನ್ನನು ಬಿಟ್ಟೀಗ 4 ಜನನಿಯು ನೀ ಎನ್ನ ಜನಕನಯ್ಯ ಮನ್ನಿಸೋ ನೀ ನಿತ್ಯಾನನ್ಯ ಶರಣನೆ 5 ಎಂದಿಗಗಾದರು ನಿನ್ನ ಪೊಂದಿಕೊಂಡವನೆಲೊ ಇಂದು ಕೈ ಬಿಟ್ಟರೆನ್ನ ಮುಂದೆ ಕಾಯುವರ್ಯಾರೊ 6 ನಾಥನು ನೀ ಅನಾಥನು ನಾನಯ್ಯ ಪಾತಕದ ಜಗನ್ನಾಥ ವಿಠಲ ದೂತ 7
--------------
ಜಗನ್ನಾಥದಾಸರು
ರಾಮನ ನೋಡಿರೈ ಮಂಗಳ ನಾಮನ ಪಾಡಿರೈ ಪ ಪೂಜಿತನ ಸೀತಾನ್ವಿತನ ಅ.ಪ ದಶರಥ ಗೃಹದಿ ಸುಜನರ ಸಲುಹಿ ಬೆಸಗೊಳಲಂದು ಸೀತಾವರನಾ 1 ಚಿಂತಿಸು ರಾಮನ ಶುಭಲಕ್ಷಣಗಳನೇಕ ಕರ್ಮವಿಪಾಕ ದೊಳಗೀ ವಿಷಯಾ- ಖರೆಯ ಯತಿಕುಲವರ್ಯ ಚರಣ ಸುಜನೋದ್ಧರಣ 2 ಕುಂದಣ ಮಣಿಮಯದ ಕಿರೀಟ ಯುಕ್ತಲಲಾಟ ಚಿನ್ಮಯಗಾತ್ರದಿ ಮಿನುಗುವ ರತ್ನಾಭರಣ ಜಿತರವಿ ಕಿರಣ ಹರಣ ಕರುಣಾಪೂರ್ಣ ರಿಪುಕುಲಮಥನಾ 3 ಶುಭಕಾಯಾಕವಿಜನಗೇಯಾ ಹೇಮ ಕೊಳುವ ಮನದೊಳು ಪೊಳೆವ ವೇದಾ ಮನಕತಿಮೋದಾ ಮುನಿ ಸಂಶೇವÀ್ಯ 4 ಶುಭಚರಿಯ ಬಹು ಆ ಮಂದಿರದಿ ಪಾರಾ- ಸುನಾದ ಕೇಳಲು ಮೋದ ಪೊಕ್ಕರು ಗೃಹದಿ 5 ಪೊಂದಿರೆ ಮುದವ ಪುಡಕಿದರಾಗೆ ಬಾಲವ ಹೀಗೆ ಕುಂಡಲಿಶಯನ ಶ್ರೀರಾಮನೆ ದರ್ಶನವಿತ್ತ ಲಕ್ಷ್ಮಣಸಹಿತ6 ಧರೆಯೊಳು ಬಹುಯತಿಕರ ಪೂಜಿತ ಪದಪದುಮಸ- ಧಾಮ ನಿರುತ ಶೇವಿಸುವ ಧರೆಸುರ ನಿಕರಕೆ ಕೊಡುವ ಬೇಡಿದ ವರವ ಶರಣು ಜನಕೆ ಸುರ ತರುವೆನಿಸಿದ ಸುರಪ್ರಿಯ ಕಾರ್ಪರನಿಲಯ ತರು ಪಿಪ್ಪಲಗತ ಶಿರಿನಾರಸಿಂಹನೆ ಈತ ಶ್ರೀರಘುನಾಥಾ7
--------------
ಕಾರ್ಪರ ನರಹರಿದಾಸರು
ವರದೇಂದ್ರ ಮುನಿಪ ದಿಕ್ಷತಿಗಳಂತೆ ಪರಮ ಸಂಭ್ರಮದಿ ರಾಜಿಸುವ ನೋಳ್ಪರಿಗೆ ಪ ಸುರರಾಜನಂತೆ ಭೂಸುರಗಡಣ ಮಧ್ಯದಲಿ ಮೆರೆವ ದುರ್ವಿಷಯಕೆ ಪಾವಕಾ ನಿರುತ ಸದ್ಧರ್ಮ ಶಿಕ್ಷಿಸುವಲ್ಲಿ ವರದಂಡ ಧರನಂತೆ ಇರುವ ದಿಗ್ವಜಿಯಿಸುವ 1 ಜ್ಞಾನಾದಿ ಗುಣದಿ ರತ್ನಾಕರನೆನಿಸಿ ಕುಮತ ಪಾನೀಯಧರಗಳಿಗೆ ಪವಮಾನನೆನಿಪ ದೀನಜನರಿಗೆ ಧನದ ವೈರಾಗ್ಯ ತಪದಲಿ ಕೃಶಾನು ಕೇತನ ತೆರದಲೊಪ್ಪುವನಜಸ್ರ 2 ಸೂರಿಕುಲವರಿಯ ವಸುಧೀಂದ್ರರಾಯ ಕರಸ ರೋರುಹದಿ ಜನಿಸಿ ಪರಮೋತ್ಸಹದಲಿ ಶ್ರೀರಾಮ ವ್ಯಾಸ ಜಗನ್ನಾಥ ವಿಠಲನ ಚರ ಣಾರವಿಂದರ್ಚನೆಯ ಪಡೆದು ಸಂತೋಷಿಸುವ3
--------------
ಜಗನ್ನಾಥದಾಸರು