ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವತಾಸ್ತುತಿ ಅಂಜಿಕೆ ಬರುತಾದವ್ವ ನಿನ್ನನು ನೋಡ ಲಂಜಿಕೆ ಬರುತಾದವ್ವ ಪ ಅಂಜಿಕೆ ಬರುತಿದೆ ಮಂಜುಳಾಂಗಿಯೆ ನಿನ್ನ ಮಂಜುಳ್ವಾಕ್ಯಕೆ ತಪಭಂಗವಾದದ್ದು ಕೇಳಿ ಅ.ಪ ಪತಿಗೆ ನೀ ಮೃತ್ಯುವಾದೆವ್ವ ಮತ್ತು ನೀನು ಸುತರಿಗೆ ಕಷ್ಟಕೊಟ್ಟೆವ್ವ ಸತಿಯಾಗಿ ತಮ್ಮಗೆ ಭಾವನ್ನ ಕೊಲ್ಲಿಸಿದಿ ಮತಿಗೇಡಿ ಅಣ್ಣನ ಸತ್ಯನಾಶನ ಗೈದಿ 1 ಶಾಪಕೊಡಿಸಿದೆವ್ವ ಪತಿಯಿಂದ ಶಾಪವ ಪಡಕೊಂಡೆವ್ವ ಶಾಪಕೊಡಿಸಿ ಮುಖ ಕಪ್ಪು ಮಾಡಿಟ್ಟೆವ್ವ ಬಸಿರು ಮಾಡಿಟ್ಟೆವ್ವ 2 ಪತಿಗೆ ವಂದಕಳಾದೆವ್ವ ಮೀರಿದ ತಾಯಿ ಪತಿ ಪ್ರೀತಿ ಕಳಕೊಂಡೆವ್ವ ಸುತನ ಕತ್ತಿಯಿಂದ ಕುತ್ತಿಗೆ ಕೊಯ್ಸಿಕೊಂಡು ಪತಿತಪಾವನಳಾಗಿ ಮತ್ತೆ ಮುಂದಕೆ ಬಂದಿ 3 ಗರಡಿಯ ಮನೆ ಹೊಕ್ಕೆವ್ವ ಪತಿಯಕೈಲೆ ದುರುಳನ್ನ ವಧಿಸಿದವ್ವ ಧುರಕೆ ನಿಲ್ಲನೆ ಮತ್ತೆ ಕುರುಪನ ಕುಲಮೂಲ ತರಿಸಿದಂಥ ಮಹಮರಗಿ ನೀನವ್ವ 4 ಮಾತ್ಯಾಗಿ ಪಡೆದ್ಹಡದವ್ವ ಮತ್ತು ನೀನು ಸತಿಯಾಗಿ ನಡೆದೆ ಅವ್ವ ರೀತಿ ತಿಳಿಯಿತು ನಿನ್ನದ್ಯಾತರ ಭೀತಿನ್ನು ದಾತ ಶ್ರೀರಾಮನ ಪ್ರೀತಿ ದಾಸರಿಗೆ 5
--------------
ರಾಮದಾಸರು
ಮುಚ್ಚ್ಯಾಕೆ ಮರೆಯಾಕ್ಹೆಚ್ಚೀತನೆ ಅಚ್ಯುತ ಸಕಲಕ್ಕೆ ಅಧಿಕಿಹ್ಯನೆ ಪ ಬಚ್ಚಿಟ್ಟುಕೊಂಡು ವೇದ ಕುಚ್ಛಿತ ದೈತ್ಯರೊಯ್ಯೆ ಇಚ್ಛೆಗಾರ ಪಿತ ತಂದು ನಿಶ್ಚಯಗೈದ ಸೃಷ್ಟಿ ಅ.ಪ ಸವೆಯದ ವರವನ್ನು ಹಿರಣ್ಯಕಶ್ಯಪನಿಗೆ ಶಿವ ತಾನುಕೊಟ್ಟ ವೈಕುಂಠನ ಉದರ ಸೀಳಿ ಜವದಿ ತ್ರಿಭುವನವ ದಯದಿ ಸಲಹಿದ ಸಿರಿ ಧವ ನರಸಿಂಗನೆನಿಸಿ 1 ಕೇಳಿದ ವರವನ್ನು ದುರುಳರಾವಣನಿಗೆ ಪಾಲಿಸಿ ವರ ಶಂಭು ಹರಿಯನ್ನು ಅರ್ಚಿಸೆ ಕೀಳುದೈತ್ಯನ ಕುಲಮೂಲ ತರಿದು ಸುರರ ಪಾಲಿಸಿದನು ದಿವ್ಯ ಮೇಲುರೂಪವ ತಾಳಿ 2 ದುರುಳಗೊಲಿದು ಶಿವ ಉರಿಹಸ್ತ ಕರುಣಿಸಿ ಮರುಗುತ ಹರಿಯೆಂದು ಕರವೆತ್ತಿಕೂಗಲು ಭರದಿ ಒದಗಿಬಂದು ಮೆರೆವೀ ಅಸುರನನ್ನು ಉರಿಹಸ್ತ ಹರನಿಗೆ ವರವಿತ್ತ ಶ್ರೀರಾಮ 3
--------------
ರಾಮದಾಸರು