ಒಟ್ಟು 67 ಕಡೆಗಳಲ್ಲಿ , 28 ದಾಸರು , 67 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(32ನೇ ವರ್ಷದ ವರ್ಧಂತಿ) ಶ್ರೀಶ ಆಶಾಪಾಶದಿಂದಲಿ ಘಾಸಿಯಾದೆ ಬರಿದೆ ವಾಸವಾರ್ಜಿತ ಪಾದಪಂಕಜ ದಾಸಪೋಷಣ ಭೂಷಣಾಚ್ಯುತ ಪ. ಮತ್ತೆರಡು ಮೂವತ್ತು ವರುಷಗಳುತ್ತಮ ಕೃತ್ಯದಲಿ ಸತ್ಯ ಶೌಚಾಚಾರ ಭಕ್ತಿಗಳಿತ್ತು ಕೃಪಾರಸದಿ ಭೃತ್ಯನನು ಪೊರೆದಿತ್ತ ಮೋಹದ ಕತ್ತಲೆಯ ವಶಕಿತ್ತು ಬಿಡುವುದೇ ಶ್ರೀಶ 1 ನಿನ್ನ ಚರಣಾನನ್ಯ ಶರಣರ ಮುನ್ನ ಪೊರೆದ ತೆರದಿ ಇನ್ನು ಪೊರೆವುದಕೇನುಪೇಕ್ಷ ಪ್ರ- ಪನ್ನ ಪಾಲಯದಿ ಚಿನ್ಮಯಿನಂದೈಕ ಭರಿತ ಮ- ಭವ ಮಾಧವ 2 ಕೂರ್ಮ ವರಾಹ ನರಹರಿ ವಾಮನ ಭಾರ್ಗವನೆ ರಾಮಕೃಷ್ಣ ಜನಾದಿ ಮೋಹನೆ ಕಾಮಗಾಶ್ವ ಚರನೆ ರಾಮ ವಿಧುರಿತ ಪಾಪಚಯ ಕಮ- ಲಾ ಮನೋಹರ ಸುಂದರಾನನ 3 ಕಾಲ ಕರ್ಮವಿದೂರ ಯಮುನಾಕೂಲ ಕೇಳೀಲೋಲಾ ಮಂದ ಮರಾಳಗಮನ ಶೀಲಾ ನೀಲ ಮೇಘ ನಿಭಾಂಗ ಪಂಕಜ ಮಾಲಯದುಕುಲಬಾಲ ಪಾಲಯ 4 ನೀರಜಾಸನ ನಿಮ್ನನಾಭ ಸುರಾರಿವನ ಕುಠಾರಾ ಜಾರ ಚೋರ ವಾರಿಜಾಸನ ವಂದ್ಯ ಕರುಣಾ ಪೂರ ಸುರಪರಿವಾರ ಪಾಲಯ 5 ತಂದೆ ತಾಯಿ ಗುರು ಬಂಧು ಸೋದರನಂದನ ಸಖನೆಂದು ಮುಂದೆ ಭವಭಯದಿಂದ ನಿನ್ನನು ಹೊಂದಿದೆ ನಾ ಬಂದು ಹಿಂದೆ ಮಾಡಿದ ಕುಂದನೆಣಿಸದೆ ಇಂದು ಕರಪಿಡಿ ಎಂದು ಬಯಸುವೆ 6 ವಿನುತ ಚರಣಾ ಏಸು ಪೇಳುವುದಿನ್ನು ಎನ್ನನು ಪೋಷಿಸು ಬಹು ಕರುಣಾ ಶೇಷಗಿರಿ ನಿಲಯಾಕುವರದ ಕೃ- ಪಾಶ್ರಯನೆ ತವದಾಸ ಪಾಲಿಸು 7
--------------
ತುಪಾಕಿ ವೆಂಕಟರಮಣಾಚಾರ್ಯ
(ಶ್ರೀ ರಮಣನೆಲ್ಲಿಹ ಕರೆತಾರೆ ಸಖಿಯಳೆ ) * ಪ ಮನು ಕಮಂಡಲ ಕೂಪದಲ್ಲಿ ಹಿಡಿಯದಂತೆ ಬೆಳೆದು ಅವರ ಶರಧಿ ಒಳಗೆ ಹರಿದಾಡುತಿರುವ ಕೇಳ್ ಸಖಿಯಳೆ ಶರಧಿ ಒಳಗೆ ಹರಿದಾಡುತಲೆ ವೇದತಂದು ತೋರಿದ್ಹೊಳೆವ ಮಚ್ಛನ್ನ ಬಲಗೊಂಬೆ ಕೇಳ್ ಸತಿಯಳೆ 1 ಸೃಷ್ಟಿಗೆ ಅಧಿಕ ಸ್ತ್ರೀಯಳ ದೈತ್ಯರು ಮೋಹಿಸಲು ಕಂಡು ಹುಟ್ಟಿಸಿದ ಸುಧೆಯ ಸುರರಿಗೆರೆದ ಕೇಳ್ ಸಖಿಯಳೆ ಹುಟ್ಟಿಸಿದ ಸುಧೆಯ ಸುರರಿಗೆರೆದು ಬೆಟ್ಟವನು ಬೆನ್ನ- ಲಿಟ್ಟ ಕೂರ್ಮನ ಬಲಗೊಂಬೆ ಕೇಳ್ ಸತಿಯಳೆ 2 ವಾಸುದೇವ ಕ್ರೋಡರೂಪಿಲಿಂದ ಹಿರಣ್ಯಾಕ್ಷನ ನಾಶವ ಮಾಡಿ ಕೋರೆಯಿಂದ ಕೇಳ್ ಸಖಿಯಳೆ ನಾಶವ ಮಾಡಿ ಕೋರೆಯಿಂದ ಧರಣಿ ತಂದು ಹರ್ವಿ (ರವಿ?)ದ ಭೂಪತಿವರ್ಹ(ರಾಹ?)ನ್ನ ಬಲಗೊಂಬೆ ಕೇಳ್ ಸತಿಯಳೆ 3 ಒಡೆದು ಕಂಬ ಕಡೆಗೆ ಕಿತ್ತು ಬಿಡದೆ ಅರಿಯ ತೊಡೆಯಲಿಟ್ಟು ಒಡಲ ತಾ ಬಗೆದ ಭಕ್ತರೊಡೆಯ ಕೇಳ್ ಸಖಿಯಳೆ ಒಡಲ ತಾ ಬಗೆದ ಭಕ್ತರೊಡೆಯನಾಗಿದ್ದ ಲಕ್ಷ್ಮೀ- ನಾರಸಿಂಹನ್ನ ಬಲಗೊಂಬೆ ಕೇಳ್ ಸತಿಯಳೆ 4 ಪಾದ ದಾನ ಬೇಡಿ ಪೃಥ್ವಿ ಆಕ್ರಮಿಸಿದ ಪರಮಾತ್ಮ ಕೇಳ್ ಸಖಿಯಳೆ ಪೃಥ್ವಿ ಆಕ್ರಮಿಸಿದ ಪರಮಾತ್ಮನಾದ ನಮ್ಮ ಕಶ್ಯಪರ ಸುತ ವಾಮನನ ಬಲಗೊಂಬೆ ಕೇಳ್ ಸಖಿಯಳೆ 5 ಋಷಿಗಳಲ್ಲಿ ಜನಿಸಿ ಕರದಿ ಧರಿಸಿ ಕುಠಾರವನ್ನು ಅರಸು ಕ್ಷತ್ರಿಯರಿಗಂತಕನ ಕೇಳ್ ಸಖಿಯಳೆ ಅರಸು ಕ್ಷತ್ರಿಯರ ಕುಲಕೆ ಅಂತಕನಾಗಿದ್ದ ನಮ್ಮ ಪರÀಶುರಾಮನ್ನ ಬಲಗೊಂಬೆ ಕೇಳ್ ಸಖಿಯಳೆ 6 ಮುದ್ರೆ ಕಳುವಿ(ಹಿ?) ಲಂಕಾಪುರದಲ್ಲಿದ್ದ ವಾರ್ತೆ ಕೇಳಿ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೇಳ್ ಸಖಿಯಳೆ ಸ- ಮುದ್ರ ಸೇತುಗಟ್ಟಿ ಜಾನಕಿಯ ಕೂಡಿ ಬಂದ ಅ- ಯೋಧ್ಯಾರಾಮನ್ನ ಬಲಗೊಂಬೆ ಕೇಳ್ ಸಖಿಯಳೆ7 ಎಲ್ಲ ಜಗವ ತನ್ನ ಉದರದಲ್ಲೇ ಇಟ್ಟು ಗೋಕುಲದ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕೇಳ್ ಸಖಿಯಳೆ ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕದ್ದು ಮೆಲ್ಲುವಂಥ ಚೆಲ್ವ ಕೃಷ್ಣನ್ನ ಬಲಗೊಂಬೆ ಕೇಳ್ ಸುಖಿಯಳೆ 8 ಮಾಯಾಶಿಶುರೂಪ ತಾನಾಗಿ ವೇದನಿಂದ್ಯವನ್ನು ಮಾಡಿ ಬೋಧಿಸಿದ ದುರ್ಮತವ ಕೇಳ್ ಸಖಿಯಳೆ ಮಾಡಿ ಬೋಧಿಸಿದ ದುರ್ಮತವ ತ್ರಿಪುರಜನರಿಗೆಲ್ಲ ಬೋಧಿಸಿದ ಬೌದ್ಧನ್ನ ಬಲಗೊಂಬೆ ಕೇಳ್ ಸಖಿಯಳೆ 9 ಕಲಿಸಮಾಪ್ತಿ ಕಾಲದಲ್ಲಿ ಚೆಲುವ ಅಶ್ವಾರೂಢನಾಗಿ ಬಿಡದೆ ಪಾಲಿಸಿದ ಶರಣಜನರ ಕೇಳ್ ಸಖಿಯಳೆ ಬಿಡದೆ ಪಾಲಿಸಿದ ಶರಣಜನರನು ಭೀಮೇಶಕೃಷ್ಣನ ಚರಣಕಮಲಕೆರಗಿ ಬಲಗೊಂಬೆ ಕೇಳ್ ಸಖಿಯಳೆ 10
--------------
ಹರಪನಹಳ್ಳಿಭೀಮವ್ವ
ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಅಗಣಿತ ಬಂಟ ನೆನೆವರಿಗೆ ನಂಟಪ. ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ 1 ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ 2 ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ 3 ಮೋದ 4 ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ 5
--------------
ವಾದಿರಾಜ
ಈತನೆನೇ ಹನುಮನು ಈತನೆನೇ ನಮ್ಮಗುರು ಲಂಕೆಯ ಸಖಗ ನಿಶ್ಯಂಕೆಯಲುಣಿಸಿದಾ ಕೌರವ ಬಲದ ಕುಠಾರಿಯಂದೆನಿಸಿದಾ ಮೂರೇಳು ದುರ್ಭಾಷ್ಯ ಹಾರಿಸಿದಾ ಮುನಿ ಹರಿ ಮತ ಸ್ಥಾಪನ ಬಿರುದಾಂಕ ದೇವನು ಗುರುಮಹಿಪತಿ ಜನುದ್ಧರಿಸದ ದೇವನು ||
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಎಲ್ಲಿ ನೋಡಿದರಲ್ಲಿ ರಾಮ - ಇದ ಪ ಬಲ್ಲ ಜಾಣರ ದೇಹದೊಳಗೆ ನೋಡಣ್ಣ ಅ ಕಣ್ಣೇ ಕಾಮನ ಬೀಜ - ಈಕಣ್ಣಿಂದಲೆ ನೋಡು ಮೋಕ್ಷ ಸಾಮ್ರಾಜ್ಯಕಣ್ಣಿನ ಮೂರುತಿ ಬಿಗಿದು - ಒಳಗಣ್ಣಿಂದಲೇ ದೇವರ ನೋಡಣ್ಣ 1 ಮೂಗೇ ಶ್ವಾಸ ನಿಶ್ವಾಸ - ಈಮೂಗಿಂದಲೇ ಕಾಣೊ ಯೋಗ ಸಂನ್ಯಾಸಮೂಗನಾದರೆ ವಿಶೇಷ - ಒಳಮೂಗಲಿ ನೋಡಣ್ಣ ಲೀಲಾವಿಲಾಸ 2 ಕರ್ಮ ಕುಠಾರ - ಒಳಗಿವಿಯಲ್ಲಿ ಕಾಣೊ ನಾದದ ಬೇರ 3 ಬೊಮ್ಮ ಮಾಡಿದ ತನುಬಿಟ್ಟು - ವಿಶ್ವಕರ್ಮನು ಮಾಡಿದ ಬೊಂಬೆಯನಿಟ್ಟುಸುಮ್ಮನೆ ಕೂಗುಗಳಿಟ್ಟು - ಅದನಂಬುವನೆಂಬೋನು ಹೋಹ ಕಂಗೆಟ್ಟು4 ರೂಢಿಯೊಳಗೆ ಶುದ್ಧ ಮೂಢ - ಈಕಾಡುಕಲ್ಲುಗಳನ್ನು ನಂಬಬೇಡನಾಡಾಡಿ ದೈವಗಳನೆಲ್ಲ - ನಮ್ಮಬಡದಾದಿ ಕೇಶವನೊಬ್ಬನೆ ಬಲ್ಲ 5
--------------
ಕನಕದಾಸ
ಗುರುವೇ ಮಹಾಗುರುವೇ ಚಿದಾನಂದಗುರುವೇ ಕೊಡಿರಿ ಮತಿ ನಮಗೆ ಪ ಅದ್ದಿ ಪಾಪದೊಳು ಸಮೃದ್ಧಿ ನನ್ನದೆಂಬ ಹಮ್ಮುಹೊದ್ದಿ ತುಂಬಿಹುದು ನನಗೆ ದು-ರ್ಬುದ್ಧಿ ನಮಗೆ ಕೊಡಿರಿ ನೀವುಸದ್ಬುದ್ಧಿ ಮಹಾಗುರುವೇ 1 ಅಂತೇ ಸಂಸಾರವು ಸತ್ಯಂತೆ ಇದನು ನಂಬುವನುಕತ್ಯಂತೆ ಮಾಡುವುದೆಲ್ಲ ಭ್ರಾಂತಂತೆ ನಮಗೆ ಕೊಡಿರಿ ಗುರುಚಿಂತೆ ಮಹಾಗುರುವೆ2 ಮಾನ ಉಳಿವುದಿಲ್ಲ ನಿದಾನಾ ಸಂಸಾರವೆ ಬಲುಹೀನ ತೊಳಲಿದೆ ನಾನು ಜನ್ಮನಾನಾ ನಮಗೆ ಕೊಡಿರಿ ಸು-ಜ್ಞಾನ ಮಹಾಗುರುವೇ 3 ಶಕ್ತಿ ಆದರೆಯು ವಿರಕ್ತಿ ಬ್ರಹ್ಮದಲಿ ಆ-ಸಕ್ತಿ ಕೊಡುವುದದು ಬಲುಭಕ್ತಿ ನಮಗೆ ಕೊಡಿರಿ ನೀವುಮುಕ್ತಿ ಮಹಾಗುರುವೇ 4 ಹಾರಿ ಭವದಾರಣ್ಯ ಕುಠಾರಿ ತೋರಿಸುವ ನಿಜದಾರಿ ಸಚ್ಚಿದಾನಂದ ತೋರಿ ನಮಗೆ ಹಿಡಿದು ಕೊ-ಡಿರಿ ಮಹಾಗುರುವೆ5
--------------
ಚಿದಾನಂದ ಅವಧೂತರು
ಜಯ ಜಯ ಮಹಿಪತಿ ಆನಂದ ಮೂರುತಿ ಗುರುರಾಯಾ ಪ ಪರಮ ಪುರುಷ ಮಹಾದೀನೋದ್ಧರಣಾ | ದುರಿತ ನಿವಾರಣ ಪತಿತ ಪಾವನಾ | ಶರಣ ಜನರ ಪಾಲನಾ ಕರುಣಾ ಸಾಗರಾ 1 ಬೋಧ ಶರಾಸನ ಧರಿಸಿ | ಅಗಣಿತ ದುಷ್ಟ ಗುಣವ ಮರ್ದಿಸಿದೆ | ಭಕುತ ಹೃತ್ಪಂಕಜ ಸಂಚಾರಾ ಆಗಮ ಸನ್ಮತನೇ 2 ಜನನ ಮರಣ ಆಂಕುರ ಕುಠಾರ | ಜಾತಕ ಜಲಧರನೇ | ಅನುದಿನ ಕೃಷ್ಣನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯ ಚಿದಾನಂದಜಯ ಜಯತು ಜಯ ಜಯತು ಜಯ ನಿತ್ಯಾನಂದ ಪ ದೃಶ್ಯಾ ದೃಶ್ಯವಿದೂರ ದೂರ ಪರತತ್ವಾಮಿಕ್ಕು ಮೀರಿಹ ತೇಜ ತೇಜ ಮಹತ್ವಾಪೊಕ್ಕು ನೋಡಿಯೆ ಕಂಡು ನಿನ್ನ ನಿಜತ್ವನಕ್ಕು ನಿಜದಲಿ ಮಾಳ್ವೆ ಪಂಚೋಪಚಾರತ್ವ 1 ತಾನೆ ತಾನಾದ ಸುವಸ್ತು ನಿರ್ಲೇಪಧ್ಯಾನ ಮೌನ ಸಮಾಧಿಗೆ ತೋರ್ವರೂಪಏನ ಬಣ್ಣಿಸುವೆನು ಈ ಜಗವ್ಯಾಪಾನಾನರ್ಪಿಸುವೆ ನಿನಗೆ ಗಂಧಾನುಲೇಪ 2 ದುರಿತ ಕುಠಾರ ನೀನೆನಿಪೆಭರ್ಗಾ ಶ್ರೀವತ್ಸ ವೀಥಿಗಳ ರಕ್ಷಿಸುವೆಸರ್ಗಾದಿ ಮಹಾಪುಷ್ಪ ನಿನಗೆ ನಾನರ್ಪಿಸುವೆ3 ವಾಸನಕ್ಷಯದ ನಿರ್ವಾಸನ ಸ್ಪೂರ್ತಿಭಾಸಮಾನದಿ ತೋರುತಿದೆ ನಿನ್ನ ವಾರ್ತೆಈಶ ತಾಪಸರುಗಳು ನಿನ್ನ ಮೂರ್ತಿದೇಶಿ ಕೋತ್ತಮ ನಿನಗರ್ಪಿಸುವೆ ಧೂಪಾರತಿ4 ವಿಶ್ವ ವಿಶ್ವ ಸೂತ್ರ ವಿಖ್ಯಾತವಿಶ್ವ ಪೂರಿತ ತಂತ್ರ ವಿಶ್ವಾತೀತವಿಶ್ವ ಜ್ಯೋತಿಯನರ್ಪಿಸುವೆ ಗುರುನಾಥ 5 ನಿತ್ಯ ಸಂತುಷ್ಟ ಶಿರೋಭಾಗಅತ್ಯಂತ ಆನಂದವಹ ಸದಾಭೋಗಪ್ರತ್ಯಗಾತುಮತರ ಪುಷ್ಪಪರಾಗಅರ್ಥಿಯಲಿ ಅರ್ಪಿಸುವೆ ನೈವೇದ್ಯ ನಾನೀಗ6 ಇಂತುಪಚಾರಪಂಚದ ಪೂಜೆಯನೀಗಅಂತರಂಗದಿ ಚಿದಾನಂದನಿಗೆ ಈಗ ಸಂತಸದಿಂದ ನಾ ಮಾಡುತಲಾಗಎಂತು ಎನಲಿ ತಾನೇ ತಾನಾದ ಬೇಗ7
--------------
ಚಿದಾನಂದ ಅವಧೂತರು
ತÉೂೀರೆ ಬೇಗನೆ ತೋಯಜನಯನೆಮದವಾರಣ ಗಮನೆ ಪ ಮಾರನ ತಾಪವ ಸೈರಿಸಲಾರೆನೆನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ ನೀರೊಳು ಮುಳು ಮುಳುಗಾಡುತ ಬಂದುಮಥಿಸಿದ ಪಯ ಸಿಂಧುಧಾರುಣಿ ಚಿಮ್ಮುತ ಮೇಲಕೆ ತಂದುದನುಜನ್ನ ಕೊಂದುಮೂರುಪಾದವ ಬೇಡುತ ನಿಂದುಮುನಿಕುಲದಲಿ ಬಂದುನಾರಿಬಿಟ್ಟು ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ 1 ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು ಕಾಯ್ದನು ಶೂರಕುಜನ ಕುಠಾರ ಹತ್ತು ಶಿರನ ಕತ್ತರಿಸಿ ಗೋಕುಲದೊಳುಬತ್ತಲೆ ರಾಹುತನಾಗಿ ಮೆರೆದನ 2 ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ ಸಾರಥಿಯಾಗಿಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ 3
--------------
ವ್ಯಾಸರಾಯರು
ದ್ರೌಪದೀ ವಸ್ತ್ರಾಪಹಾರ ಸಭೆಯನ್ನುದ್ದೇಶಿಸಿ ಹೇಳುವ ಮಾತು) ನೀತಿಯೋ ಪುನೀತಮಾನಸರೇ ಸುಗುಣಾತಿಶಯರೇ ನೀತಿಯೋ ಪುನೀತಮಾನಸರೇ ಪ. ದ್ಯೂತ ಕ್ಷತ್ರಿಯ ಜಾತಿಗನುಚಿತ ಕೈತವದ ವಿಪರೀತ ಮತಿಯಿದು ಖ್ಯಾತರಿಂಗೀ ರೀತಿ ನ್ಯಾಯವೆ ಪಾತಕಿ ಘಾತಕಿ ನೀತಿಯೆನಿಸುವುದು1 ಲೋಕನಿಂದಕನೀ ಕುಠಾರನು ಭೀಕರನು ಮನವ್ಯಾಕುಲಿಸುವನು ಶ್ರೀಕರಾತ್ಮರನೇಕರಿರುವಿರಿ ಯಾಕಿಂತ ಮೌನ ವಿವೇಕಿಗಳಿಗೆ ಹೀಗೆ2 ನ್ಯಾಯ ಧರ್ಮ ಸಹಾಯಗೈಯ್ಯುವ ರಾಯರೆಲ್ಲ ಮಹಾಯಶಸ್ವಿಗಳ್ ಈಯವಸ್ಥೆಗೆ ಪ್ರೀಯರಾದಿರೆ ಕಾಯೋ ಶ್ರೀಲಕ್ಷ್ಮೀನಾರಾಯಣ ನೀಯೆನ್ನ3
--------------
ತುಪಾಕಿ ವೆಂಕಟರಮಣಾಚಾರ್ಯ
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಮೋ ನಮಸ್ತೇ ನರಸಿಂಹ ದೇವಾ ಸ್ಮರಿಸುವವರ ಕಾವಾ ಪ ಸುಮಹಾತ್ಮ ನಿನೆಗೆಣೆ ಲೋಕದೊಳಾವಾ ತ್ರಿಭುವನ ಸಂಜೀವಾ ಉಮೆಯರಸನ ಹೃತ್ಕಮಲದ್ಯುಮಣಿ ಮಾ ರಮಣ ಕನಕ ಸಂಯಮಿ ವರವರದಾ ಅ ಕ್ಷೇತ್ರಜ್ಞ ಕ್ಷೇಮಧಾಮ ಭೂಮಾ ದಾನವ ಕುಲಭೀಮಾ ಸನ್ನುತ ಬ್ರಹ್ಮಾದಿ ಸ್ತೋಮಾ ಸನ್ಮಂಗಳ ನಾಮಾ ಚಿತ್ರ ಮಹಿಮನಕ್ಷತ್ರನೇಮಿಸ ರ್ವತ್ರಮಿತ್ರ ಸುಚರಿತ್ರ ಪವಿತ್ರ 1 ಅಪರಾಜಿತ ಅನಘ ಅನಿರ್ವಿಣ್ಣ ಲೋಕೈಕ ಶರಣ್ಯ ಶಫರಕೇತು ಕೋಟಿಲಾವಣ್ಯ ದೈತ್ಯೇಂದ್ರ ಹಿರಣ್ಯಕ ಶಿಪುಸುತನ ಕಾಯ್ದಪೆನೆನುತಲಿ ನಿ ಷ್ಕಪಟ ಮನುಜಹರಿವಪುಷ ನೀನಾದೆ 2 ತಪನ ಕೋಟಿ ಪ್ರಭಾವ ಶರೀರಾ ದುರಿತೌಘವಿದೂರಾ ಪ್ರಪಿತಾಮಹ ಮಂದಾರ ಖಳವಿಪಿನ ಕುಠಾರಾ ಕೃಪಣಬಂಧು ತವ ನಿಪುಣತನಕೆ ನಾ ನುಪಮೆಗಾಣೆ ಕಾಶ್ಯಪಿವರವಾಹನಾ 3 ವೇದವೇದಾಂಗವೇದ್ಯಾ ಸಾಧ್ಯ ಅಸಾಧ್ಯ ಶ್ರೀದ ಮುಕ್ತಾಮುಕ್ತರಾರಾಧ್ಯಾ ಅನವದ್ಯ ಮೋದಮಯನೆ ಪ್ರಹ್ಲಾದವರದ ನಿ ತ್ಯೋದಯ ಮಂಗಳ ಪಾದಕಮಲಕೆ 4 ಅನಿಮಿತ್ತ ಬಂಧು ಜಗನ್ನಾಥ ವಿಠಲ ಸಾಂಪ್ರತ ನಿನಗೆ ಬಿನ್ನೈಸುವೆ ಎನ್ನಯ ಮಾತಾ ಲಾಲಿಸುವುದು ತಾತಾ ಗಣನೆಯಿಲ್ಲದವ ಗುಣವೆನಿಸಿದೆ ಪ್ರತಿ ಕ್ಷಣಕೆ ಕಥಾಮೃತ ಉಣಿಸು ಕರುಣದಿ 5
--------------
ಜಗನ್ನಾಥದಾಸರು
ನಮೋ ನಮೋ ಭೀಮಾ | ಜೀವೋತ್ತುಮಾಪ್ತ ಜನ ಪ್ರೇಮಾ ಪ ಕುಮಾನ ಜನ ಸುಪ್ರಮೋದ ವಿನಾಶಕ ಶಮಾದಿ ಗುಣನಿಧೆ | ಕ್ಷಮಾಪಣಂ ಕುರು ಅ.ಪ. ಕಾನನ ಸುಕುಠಾರ ||ಭ್ರಾಂತ ದುಶ್ಯಾಸನ | ಅಂತ್ಯವ ಕಾಣಿಸಿಕಾಂತಾ ಮಣೀಯನು | ಸಂತೋಷ ಪಡಿಸಿದೆ 1 ಗೋಪಿ | ನಂದಾನಗತಿ ಪ್ರೀಯವಂದೀಸಿ ಬೇಡುವೆ | ಕುಂದೂಗಳೆನ್ನಯನೊಂದಾನು ಎಣಿಸಿದೆ | ನಂದನ ಪಾಲಿಸೊ 2 ಕಾಯ ಭವ ಮುಖಾದಿ ಗೇಯ ||ಅವಿರತದಿ ಗುರು | ಗೋವಿಂದ ವಿಠಲನಸ್ತವನ ಗೈವನ | ಭವವ ಕಳೆಯುವ 3
--------------
ಗುರುಗೋವಿಂದವಿಠಲರು