ಒಟ್ಟು 19 ಕಡೆಗಳಲ್ಲಿ , 13 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಂಗ ನಿನ್ನಯ ಮುಖ ತೋರಯ್ಯ ಪ ಅರ್ಧರಾತ್ರಿಯಲ್ಲವತರಿಸಿದ್ಯೊ ಹೋಗಿ ಮುದ್ದು ಗೋಪಿಯ ಸುತನೆನಿಸಿದ್ಯೊ ಭದ್ರದೇವಿಯರ ನೀ ಕಳಿಸಿದ್ಯೊ ಬಂ ದಿದ್ದ ಪೂತಣಿಯ ಸಂಹರಿಸಿದ್ಯೊ 1 ವತ್ಸಕಾಯುತಲ್ಹೋಗಿ ವನದೊಳು ಬಂದ ಕಿಚ್ಚು ನುಂಗಿದೆ ನಿನ್ವದನದೊಳು ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ ಕುಕ್ಷಿಯೊಳಗೆ ತ್ರಿಜಗಂಗಳು 2 ದೇವಕ್ಕಿದೇವಿ ಯಶೋದಾನೆ ವಸು ದೇವ ನಂದ ಬಲರಾಮಗೆ ಎದುರು ಬಾರೋ ಭೂದೇವಿರಮಣನೆ ಭೀಮೇಶ ಕೃಷ್ಣನೆÀ ಶ್ಯಾಮವರಣನೆ3
--------------
ಹರಪನಹಳ್ಳಿಭೀಮವ್ವ
ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ. ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ ದಾಸರು ಜೀವರ್ಕಳು ಕೃಪಾಳು ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು ಸೂಸಿ ಪೇಳುತ್ತಲಿಹರು ಸಜ್ಜನರು ವಾಸುದೇವನೆ ಸರ್ವಾಸುನಿಲಯನೆ ಏಸೇಸು ಬಂದರು ದಾಸರ ಬಿಡದಿರು ನೀ ಸಲಹದೆ ಉದಾಸೀನ ಮಾಡಲು ಆಸರೆ ಯಾರಿನ್ನು ಶಾಶ್ವತ ವಿಭುವೆ 1 ನಿನ್ನಧೀನನÀವನು ನಿನ್ನ ದಾಸರ ಸೂನು ಎನ್ನುವ ಸಥೆಯಿಂದ ಮುಕುಂದ ನಿನ್ನನೆ ಬೇಡುವೆ ನಿನ್ನನೆ ಕಾಡುವೆ ಅನ್ಯಥಾ ಗತಿಗಾಣೆ ನಿನ್ನಾಣೆ ನಿನ್ನ ದಾಸರ ಪದವನ್ನು ಪಿಡಿದು ನಾ ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು ಬಿನ್ನಪ ಲಾಲಿಸಿ ಬನ್ನವ ಕಳೆದು ಘನ್ನ ಭಕುತಿಯಿತ್ತು ಧನ್ಯನ ಮಾಡೊ 2 ಶರಣರ ಮಹದೇವ ಶರಣರ ಬಿಡದೆ ಕಾವ ಶರಣರ ಉದ್ಧಾರ ಗಂಭೀರ ಶರಣ ರಕ್ಷಾಮಣಿ ಶರಣ ತ್ರಿದಶ ತರು ಶರಣ ಸುರಧೇನು ಎನಿಸಿನ್ನು ನಿರುತದಿ ಪೊರೆಯುವ ಬಿರುದಗಳರಿತು ಶರಣೆಂದು ನಿನ್ನಯ ಚರಣ ಕಮಲವನು ಮರೆಹೊಕ್ಕೆನು ಕಾಯೊ ಪರಮ ದಯಾಕರ ಕರಿರಾಜವರದ ಶ್ರೀಕಾಂತ ನಿಶ್ಚಿಂತ 3
--------------
ಲಕ್ಷ್ಮೀನಾರಯಣರಾಯರು
ಅವತಾರತ್ರಯ ಅಕ್ಷಯ ನೀನಾಮೃತಂ ಕುಕ್ಷಿಯೊಳಗೆ ಪೂರ್ಣವಾಗಿಹ ಅಕ್ಷಯಾಂತಕನೀಕ್ಷಿಪುದು ಸುಜನರು ಪ ಇಕ್ವಾಕು ಕುಲಾಧ್ಯಕ್ಷ ರಾಘವನಾ ಶಿಕ್ಷೆಯಲಿ ಪ್ರಾಣ ರಕ್ಷಕನೆÉಂದರುಹಲು ಧರೆಗೆ ತಕ್ಷಣದಿ ಮರುದ್ವಾಕ್ಷ ಮರಕಟ ಕೃತಿಯ ತೋರಿ ಜಲಧಿಯನೆ ಪಾರಿ ರಕ್ಷಕೇಂದ್ರನ ಪುರಸೇರಿ ರಕ್ಕಸಿಯದೆಡೆಯಲಿ ಜನನಿಗೊಂದಿಸಿ ಲಕ್ಷಣದುಂಗುರವ ತೋರಿ ರಕ್ಷಸದಕ್ಷರವನಳಿದಾ 1 ಯದುಕುಲದೊಳುದಯಿಸೆÉ ಹರಿಯು ತದನರಿತು ವಾಯು ಉದಭವಿಸಿ ಭೀಮಾಭಿಧಾನದಿ ಮುದಗೊಳಿಸಲಿಳೆಗೆ ಕುದಿಯುವ ಬಕ ಹಿಡಿಂಬರರಳಿದು ಕೀಚಕನ ಸದೆದು ಅಧಮಕಾರವ ಕುಲವನಳಿದು ವಧಿಸಿzಖಿಲ ಬಲವ ತೋರಿ ಮುದವ ಬೀರಿ ಧರೆಯ ಜನಕೆ ಯಶವ ಗಳಿಸಿದವನ ಇಹಕೆ ಚರಕೆ2 ಗುರುವಾಗವತರಿಸಿ ಧರೆಯ ಸುಜನರು ಕರುಣಾಬ್ಧಿ ಹರಿಯು ಧರೆಯೊಳುಡುಪಿ ಪುರದಿ ಜನಿಸಲಿ ಸುರರಿಗೆ ತಿಳಿಯಲು ಹರಿಯ ಮತವ ಸೃಜಿಸಲಿಳೆಯಲು ತದಾಜ್ಞೆಯ ಕೇಳಲು ಭರದಿ ಮಧ್ವನಾಮ ಪಡೆದು ಹರಿಮತವ ಪಿಡಿಯ ಬೋಧಿಸಲು ನರಸಿಂಹವಿಠಲನ ಸ್ಮರಣೆಯಗೈದು ನರಜನ್ಮ ಸಾರ್ಥಕವು ಪರಮಪದವ ಗೈದು 3
--------------
ನರಸಿಂಹವಿಠಲರು
ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ಪ ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು ಅ ಮಾನಿನಿ ರನ್ನೆಕೇಳೀದ್ದು ಕೊಡುವೆನೆಂದ 1 ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿನಿನ್ನ ಮೋಹಿಪೆನೆನ್ನಲು 2 ಕೆಟ್ಟೆ ಕೆಟ್ಟೆನೊ ಕೃಷ್ಣ ಇತ್ತಲೇತಕೆ ಬಂದೆಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರು ನಿನ್ನಮುಟ್ಟದಿರೆಂದಳಾಕೆ3 ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ ಪಿಡಿದುಕೊಂಡ4 ಗಂಡನುಳ್ಳವಳ ಮುಂಗೈಯ ಪಿಡಿವಂಥಪುಂಡುತನವು ಸರಿಯೆಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ ಹುವ್ವಕಂಡರೆ ಬಿಡುವರೇನೆ 5 ಬಾಳುವ ಹೆಣ್ಣಿನ ತೋಳನೆ ಪಿಡಿವುದುನ್ಯಾಯವೇನೋ ನಿನಗೆಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ ಹುವ್ವಬಲ್ಲವರು ಬಿಡುವರೇನೆ6 ಬೈಗಾಯಿತು ಬೈದಾರು ಮನೆಯಲ್ಲಿಬಿಡು ಬಿಡು ಎಲೊ ಗೋವಳಐಗಾರ ನಾ ಕಾಣೆ ಜಗದಲ್ಲಿ ಜೀವರಹಿಡಿದು ಬಿಡುವನಲ್ಲವೆ 7 ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದುಎತ್ತಿಕೊಂಡು ಕುಡಿದಅಕ್ಕರೆಯಿಂದಲಿ ಬೇಡು ನೀ ಕೇಳಿದವಸ್ತುವ ಕೊಡುವೆನೆಂದ8 ವಸ್ತುವೇತಕೆ ಪರವಸ್ತುವೆ ನಾ ನಿನ್ನಮೆಚ್ಚಿ ಬಂದೇನೆಂದಳುಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ ಇಟ್ಟುರಕ್ಷಿಸು ಎಂದಳಾಕೆ 9
--------------
ವ್ಯಾಸರಾಯರು
ಚಿಂತಿಸೋ - ಶ್ರಿಹರಿಯ ನೀ ಚಿಂತಿಸೋ ಪ ಚಿಂತಿಸೊ ನೀ ವೈಶ್ವಾನರನ | ಹೃದಯದಂತರ ದೊಳಗಿರುವನ | ಆಹಸಂತತ ಜೀವರು ಭುಂಜಿಪಗಳನೆಲ್ಲಮಂಥಿಸಿ ಜಠರದಿ ಹಂಚಿಪ ಹರಿಯನುಅ.ಪ. ಅನಿರುದ್ಧ 1 ಕುಕ್ಷಿಯೊಳಗೆ ಸುರಮುಖನು | ಅವದಕ್ಷಿಣಾಭಿಧ ಪಾವಕನು | ಅಲ್ಲಿದಕ್ಷನು ವ್ಯಾನ ಮಾರುತನು | ಅಗ್ನಿದಕ್ಷಿಣ ವ್ಯಾನ ಚಂದ್ರಮನು | ಆಹಭಕ್ಷಭೋಜ್ಯಂಗಳ | ಕೊಡಲು ಈ ಪರಿಯಿಂದಪಕ್ಷಿವಾಹನ ವ್ಯಾನ | ಪ್ರದ್ಯುಮ್ನ ಪೊರೆವನು 2 ಪರಿ | ಅನ್ನವನರ್ಪಿಸೆಮುದದೊಳಪಾನಾತ್ಮ | ಸಂಕಷ್ರ್ಣ ಪಾಲಿಪ 3 ಪರಿ ಯಜಿಪರ 4 ಪರಿ ಇತ್ತುದನು 5 ಸರ್ವ ಸದ್ಗುಣ ಪೂರ್ಣ ವೈಶ್ವಾ | ನಾಶವಿರಹಿತ ನರನೆಂದು ಮೆರೆವಾ | ವೈಶ್ವಾನರನೆಂದು ತಾನು ಕರೆಸುವಾ | ಸರ್ವವರನೆನಿಸಿ ಅಗ್ನಿ ಎನಿಸುವಾ | ಆಹವರ ಪಂಚ ಪ್ರಾಣಾಖ್ಯ ಯಜ್ಞಾಭಿಧನು ವಾಯುಸುರ ಮೊಗಸ್ಥಿತ ಹರಿಯನ್ಯಜಿಪ ನೀ ಪರಿಯೆಂದು 6 ಮರುತ ಪಂಚಾತ್ಮಕ ಅನಿಲಾ | ಜೀವವರರಿಗಾಗಿ ಇತ್ತ ಸಕಲಾ | ಭೋಜ್ಯಹರಿಯ ಪಂಚರೂಪ ಅನಿಲಾ | ಕೊಂಡುಪರಿಪಾಲಿಪನೆಂಬ ಸೊಲ್ಲಾ | ಆಹಪರಿಪರಿ ಚಿಂತಿಸೆ ವೈಶ್ವಾನರ | ಗುರುಗೋವಿಂದ ವಿಠ್ಠಲ ಸಲಹದೆ ಬಿಡನೆಂದು 7
--------------
ಗುರುಗೋವಿಂದವಿಠಲರು
ತಂದೆ ನೀನೆ ದಯದಿ ಪಾಲಿಸೆಂದು ಬಂದೆನೋ ಪ ಹಿಂದುಮುಂದು ಗತಿಯದಾರುಯಿಲ್ಲವೆಂಬೆನೊ ಅ.ಪ ಕುಕ್ಷಿಯೊಳಗೆ ಜಗವನಿಟ್ಟುಕೊಂಡು ಪೊರೆವನೆ ಪಕ್ಷಿಗಮನ ನಿಮ್ಮ ನೆನೆವೆ ಭಜಕಗೊಲಿವನೆ 1 ಕ್ಷೀರವಾರ್ಧಿಶಯನ ಗೋಪಿ-ಜಾರ ಪಾಲಿಸೊ ಮಾರಜನಕ ಮುದದೊಳೆನ್ನ ದೂರಲಾಲಿಸೊ 2 ಸುಮಹದೇವಪುರದ ನಿಲಯ-ಸುಜನರಕ್ಷನೆ ಕ್ರಮದೊಳೆನ್ನ ರಕ್ಷಿಸಯ್ಯ-ಕಮಲೆಯಾಣ್ಮನೆ 3
--------------
ರಂಗದಾಸರು
ತ್ರ್ಯಕ್ಷಾಂಶ ಸಂಭೂತ | ಅಕ್ಷೋಭ್ಯ ಕರಜಾತಕುಕ್ಷಿಯೊಳಗೆ ಖ್ಯಾತ | ಟೀಕಾರ್ಯರೆಂಬಾತ ಪ ಮರುತ ಮತಾಬ್ಧಿ ಸೋಮ | ಹರಿಗುಣ ಗಣಸ್ತೋಮಬರೆದು ವಿಬುಧಸ್ತೋಮ | ಪೊರೆದ ನಿಸ್ಸೀಮಾ ಅ.ಪ. ಎರಗೋಳ ಗುಹೆಯಲ್ಲಿ | ಮರುತ ಮತ ಗ್ರಂಥದಲಿನಿರುತ ಬಹು ಆಸಕ್ತ | ಟೀಕೆಗಳ ಕರ್ತಾ 1 ವೃಷಭದಾಕೃತಿ ಧರಿಸಿ | ಅಸುಪತಿಯ ಸೇವಿಸೀಎಸೆವ ಗ್ರಂಥಗಳ್ಹೊತ್ತು | ಜನ್ಮ ಸ್ಮøತಿ ಪೊತ್ತೂ 2 ಭೋಗಿ ಆವೇಶಿತನೆಯೋಗಿ ಕುಲ ಕಮಲಾಪ್ತ | ಮಾಯಿ ಮತ ಹರ್ತಾ 3 ವೇನ ಮತ ದುಧ್ರ್ವಾಂತ | ಕಳೆಯಲ್ಕೆ ಸುಧೆ ಗ್ರಂಥಜ್ಞಾನ ಸೂರ್ಯನೆ ಇತ್ತೂ | ಕಳೆದೆ ಆಪತ್ತೂ4 ಗೋವುಗಳ ಪಾಲ ಗುರು | ಗೋವಿಂದ ವಿಠಲದೇವ ಗುಣಗಳ ಜಾತ | ಬರೆದ ವಿಖ್ಯಾತಾ 5
--------------
ಗುರುಗೋವಿಂದವಿಠಲರು
ನಡೆದು ಬಾರಯ್ಯ ಕೃಷ್ಣ ನಡೆದು ಪ ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ- ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1 ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ- ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ ಕರಿ ಸರ್ವೋತ್ತಮ ಹರಿಯೆ 2 ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ ಶೂರ ಸುತಗೆ ಸುಕುಮಾರನೆನಿಸಿದಂಥ ಅ- ಸಮೀರಜ ಭವ ಸುರ ನಾರದಪ್ರಿಯನೆ ಉದ್ಧಾರಮಾಡು ಎನ್ನನು 3 ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ ನಿಜವಾಗಿ ನೋಡೆನ್ನ ರಜತಮ ಕಳೆಯುವ 4 ಕಡಲಶಯನನಾದ ಉಡುರಾಜ್ವದನ ಬಿಟ್ಟು ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು ಕೊಡು ವರಗಳ ಪೊಡವಿ ಪಾಲಿಪನೆ 5
--------------
ಹರಪನಹಳ್ಳಿಭೀಮವ್ವ
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು
ಭವ ವನಧಿಗೆ ನವಪೋತ | ಪಾಲಿಸು ವಿಖ್ಯಾತ ಪ ವಿಯದಧಿಪನೆ ಎನ್ನ ಕೈಯ್ಯನು ಪಿಡಿಯೋ | ಜ್ಞಾನ ಭಿಕ್ಷ ಈಯೋ ಅ.ಪ. ಮಾಯಾಪತಿ ಪದ ಪದ್ಮಯುಗಳ ಭಜಿಪಾ | ಉತ್ತಮ ಪಥತೋರ್ಪಾಶ್ರೇಯಸು ಸಾಧನ ವೆನಿಸಿ ಮೆರೆಯುರ್ತಿರ್ಪಾ | ಹರಿಪರಮನು ಎನಿಪಾ ||ಮಾಯಾಮತ ತಮ ಸೂರ್ಯನೆನಿಸಿ ಮೆರೆವಾ | ಸುಜನಸುರದ್ರುಮವಾನ್ಯಾಯ ಸುಧೆಯನೇ ತಾರಚಿಸಿರುವಾ | ಮುಕುತಿ ಮಾರ್ಗ ತೋರ್ವಾ 1 ಕಾಕು ವೃತ್ರನಿಂದಾವೃತ ಜಗವಿರಲೂ | ಜ್ಞನರಹಿತ ವಿರಲೂಲೋಕ ಮಹಿತ ಮಂತ್ರವು ನಿನಗಿರಲೂ | ಜಪಿಸುತಾಸ್ತ್ರ ಬಿಡಲೂ ||ಆ ಕುಯೋನಿಗತ ಚಿತ್ರಕೇತು ಮೋಕ್ಷ | ಆಯಿತು ಸುರರಾಧ್ಯಕ್ಷಲೋಕಾಮಯವನು ಹರಿಸಿ ಜಗದಿ ಮೆರೆದೇ | ಮಹಾನ್ನು ಎನಿಸೀದೇ2 ಚಾಪ ಜೇತಾಕುಕ್ಷಿಯೊಳಗೆ ಬಲು ಬಲು ವಿಖ್ಯಾತಾ | ಕಾಗಿನಿ ತಟದಿಸ್ಥಿತ ||ಅಕ್ಷರೇಡ್ಯ ಗುರುಗೊವಿಂದ ವಿಠ್ಠಲನಾ ತನ ಹೃದ್ಗನಾಗಿರುವವನ ||ಅಕ್ಷಿಯೊಳಗೆ ಕಂಡು ಮೋಕ್ಷ ಪಧವ ಸೇರ್ದ | ಆನಂದವ ಬೀರ್ದ 3
--------------
ಗುರುಗೋವಿಂದವಿಠಲರು
ಮನ್ನಿಸೈ ಹರಿ ಪನ್ನಗೇಂದ್ರಶಯನ ಪ ಘನ್ನವಾದ ಪಾಪವನ್ನು ಮಾಡಿ ಜಗದಿ ನಿನ್ನ ನಾಮ ಮರದೆ ಸನ್ನುತಾಂಗ ಸಲಹೊಅ.ಪ ಜ್ಞಾನ ಶೂನ್ಯವಾಗಿ ನಾನಾ ವಿಷಯಗಳಲಿ ನಾನು ನನ್ನದೆಂಬ ಹೀನ ಮಮತೆಯಿಂದ ದಾನವಾರಿ ನಿನ್ನ ಧ್ಯಾನಿಸದಲೆ ಕಾಲ ಸಾನುರಾಗದಿಂದ ಶ್ವಾನನಂತೆ ಕಳೆದೆ 1 ರೋಗಹರನೆ ಭವದ ರೋಗವೈದ್ಯನೆಂದು ಬಾಗಿ ನಿನ್ನನುತಿಪೆ ನಾಗಾರಿವಾಹನ ಯೋಗಿವಂದ್ಯನೆ ಚನ್ನಾಗಿ ನಿನ್ನ ಸ್ತುತಿಪ ಭಾಗವತರ ಸಂಗ ದೇವ ಪಾಲಿಸಯ್ಯ 2 ರಕ್ಷಿಸೆಮ್ಮ ಬಿಡದೆ ಲಕ್ಷ್ಮಿರಮಣದೇವ ಕುಕ್ಷಿಯೊಳಗೆ ಜಗವ ರಕ್ಷಿಸುತ್ತ ಪೊರೆವ ಸೂಕ್ಷ್ಮ ಸ್ಥೂಲದೊಳು ಪ್ರತ್ಯಕ್ಷನಾದ ಹರಿ ಉ- ಪೇಕ್ಷಿಸದಲೆ ಕಾಯೋ ಪಕ್ಷಿವಾಹನ ದೇವ 3 ಕಡಲೊಡೆಯನೆ ದೇವ ಮೃಡನ ಸಖವೆ ಕಾಯೊ ಅಡಿಗಡಿಗೆ ಸ್ತುತಿಸಿ ಬಿಡದೆ ಮುಗಿವೆ ಕಯ್ಯ ಎಡಬಲದಲಿ ಶ್ರೀ ಭೂಮಡದೇರಿಂದ ಮೆರೆವ ಉಡುಪ ಮುಖನೆ ಕಾಯೋ ಕಡಲೊಡೆಯನೆ ರಂಗ 4 ಕಮಲಪತ್ರದಳಾಕ್ಷ ಕಮಲಜೋದ್ಭವೆ ಪ್ರಿಯ ಕಮಲಸಂಭವ ಜನಕ ಕಮನೀಯ ಸ್ವರೂಪ ಕಮಲನೇತ್ರೆರ ರಸಕಮಲಪುಷ್ಪಮಾಲಾ ಹೃ- ತ್ಕಮಲದೋಳು ಶೋಭಿಪ ಕಮಲನಾಭ ವಿಠ್ಠಲ 5
--------------
ನಿಡಗುರುಕಿ ಜೀವೂಬಾಯಿ
ರಕ್ಷಿಸಿ ಪೊರೆಯೊ ದೇವನೆ ಪಕ್ಷಿವಾಹನನೆ ಸೂಕ್ಷ್ಮ ಸ್ಥೂಲದಿ ವ್ಯಾಪ್ತನೆ ಪ ಲಕ್ಷ್ಮಿರಮಣ ಪುರುಷೋತ್ತಮ ಪುರುಷನೆ ಕುಕ್ಷಿಯೊಳಗೆ ಜಗ ರಕ್ಷಿಸಿ ಪೊರೆವನೆ ಅಕ್ಷರೇಢ್ಯ ಕಮಲೇಕ್ಷಣ ಮಾಧವ ರಕ್ಷ ಶಿಕ್ಷಕ ಜಗದ್ರಕ್ಷಕ ಹರಿಯೆ ಅ.ಪ ವಿಶ್ವರೂಪನೆ ಶ್ರೀಹರಿ ವಿಶ್ವವ್ಯಾಪಕನೆ ವಿಶ್ವತೋ ಮುಖನೆ ಶ್ರೀಶನೆ ವಿಶ್ವನಾಟಕನೆ ದೇವನೆ ವಿಶ್ವೋದ್ಧಾರಕನೆ ವಿಶ್ವಮಯನೆ ಶ್ರೀ ವಿಶ್ವನೆ ವಿಶ್ವರೂಪ ತಾಯಿಗೆ ಬಾಯೊಳು ತೋದರ್À ವಿಶ್ವರೂಪ ಮೈದುನನಿಗೆ ತೋರಿದ ವಿಶ್ವರೂಪ ಸಭೆಯೊಳು ಭಕ್ತರಿಗೆ ತೋರ್ದ ವಿಶ್ವ ಮೂರುತಿಯೆ 1 ಹಿಂದಿನ ಕರ್ಮಫಲದಲಿ ಬಂದು ಈ ಭವದಿ ಕಂದಿ ಕುಂದಿದೆನೋ ವ್ಯಥೆಯಲಿ ಬಂಧ ಮೋಚಕನೆನುತಲಿ ಬಂದೆರಗುತಲಿ ತಂದೆ ನೀ ಪೊರೆಯಬೇಕೆನುತಲಿ ಮಂದರೋದ್ಧರ ಗೋವಿಂದ ನಿನ್ನಯ ಪಾದ ದ್ವಂದ್ವಕೆ ನಮಿಸುವೆ ಬಂಧನ ಬಿಡಿಸೆಂದು ಇಂದು ಮುಂದು ಎಂದೆಂದಿಗೂ ನೀ ಗತಿ ಇಂದಿರೆ ರಮಣ2 ಶ್ರಮವ ಪರಿಹರಿಸೊ ಶ್ರೀಶನೇ ಶ್ರೀನಿಕೇತನನೆ ಕಮಲ ಸಂಭವನ ತಾತನೆ ಕಮಲ ಲೋಚನನೆ ಕಮಲ ಪೊಕ್ಕಳಲಿ ಪಡೆದನೆ ಕಮಲ ಭವೇಂದ್ರಾದ್ಯಮರರು ಪೊಗಳಲು ಕಮಲನಾಭ ವಿಠ್ಠಲ ವಿಠ್ಠಲನೆಂದು ಕಮಲಪುಷ್ಪ ಮಾಲಾಲಂಕೃತ ಶೋಭಿತ ಕಮಲದಳಾಕ್ಷನೆ ಕಮನೀಯರೂಪ 3
--------------
ನಿಡಗುರುಕಿ ಜೀವೂಬಾಯಿ
ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ. ಲಕ್ಷ್ಮೀಶ ಪಾಲಿಸೊ ಎನ್ನ | ಜಗ ದ್ರಕ್ಷಕ ಪರಮಪಾವನ್ನ ಈಕ್ಷಿಸು ಕರುಣ ಕಟಾಕ್ಷವ ಬೀರುತ ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ. ನಾಗರಾಜನ ಗಿರಿವಾಸ | ಭೋಗ ಆಗುಮಾಡೆಲೊ ಸರ್ವೇಶ | ನಿನಗೆ ಬಾಗಿ ನಮಿಸುವೆ ಜಗದೀಶ | ಭವ ರೋಗ ಹರಿಸು ಕ್ಲೇಶನಾಶ | ಆಹ ಕೂಗಿದರು ನಿನಗೀಗ ಕೇಳಿಸದೇನೊ ಜಾಗುಮಾಡದೆ ನೀಡೊ 1 ಸೃಷ್ಟಿಗೆ ಎನ್ನನು ಕರೆದೆ | ಭವ ಕಷ್ಟದಿ ಬಂಧಿಸಿ ತಂದೆ | ಇನ್ನು ಘಟ್ಯಾಗಿ ಕಾಪಾಡು ಎಂದೆ | ಮೊರೆ ಮುಟ್ಟದೆ ನಿನಗಿನ್ನು ತಂದೆ | ಆಹ ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2 ಕರ್ಮಬಂಧನಗಳ ಕಡಿಯೊ | ಶ್ರೀಶ ನಿರ್ಮಲರೂಪ ಕೈಪಿಡಿಯೊ | ಬೇಗ ಧರ್ಮ ಅಧರ್ಮವ ತಿಳಿಯೊ | ಜಗ ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3 ಶ್ರೀನಿವಾಸ ಬಾರೊ ಬೇಗ | ನಿನ್ನ ನಾನು ನಂಬಿದೆನೊ ಶ್ರೀ ಭೋಗ | ನೀಗು ನೀನೆ ತ್ರಿಕರ್ಮದ ಭೋಗ | ಬೇಗ ಭವ ರೋಗ | ಆಹ ಪೋಗುತಲಿದೆ ದಿನ ಜಾಗುಮಾಡಲು ಸಲ್ಲ ನಾಗಶಯನ ಎನ್ನ ಬೇಗನೆ ರಕ್ಷಿಸೊ 4 ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ ಬೆನ್ನ ಭಾರವಿದಿನ್ನೇನು | ಕೋರೆ ಮಣ್ಣು ಆರ್ಭಟಿಸುವೆ ನೀನು | ವಟು ಚಿಣ್ಣ ಭಾರ್ಗವ ನೀನು | ಆಹ ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ ಬಣ್ಣಗೆಟ್ಟು ಹಯವನ್ನೇರಿದ ಧೀರ 5 ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ ತತ್ವಾಧಿಪತಿಗಳು ಮುದದಿ | ಜಗ ತ್ಕರ್ತನೆ ಕಾಯ್ವ ದಯದಿ | ಬೇಗ ಇತ್ತು ಮತಿಯ ಸಲಹೊ ದೃಢದಿ | ಆಹ ಸತ್ಯರೂಪನೊ ನೀ ಸತ್ಯ ಸಂಕಲ್ಪನೊ ನಿತ್ಯ ನಿಂತು ಕಾಯೊ 6 ಗೋಪಾಲಕೃಷ್ಣ ವಿಠ್ಠಲ | ಭವ ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ ರಾಪು ಮಾಡುವುದುಚಿತಲ್ಲ | ಜಗ ದ್ವ್ಯಾಪಕ ಭಕ್ತವತ್ಸಲ | ಆಹ ಈ ಪಯೋಜಜಾಂಡದಿ ರೂಪ ರೂಪಾಂತರದಿ ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
--------------
ಅಂಬಾಬಾಯಿ
ವಿಗ್ರಹವನು ನಿಲಿಸೊ ವೆಂಕಟ ಗಗ- ಪ ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ಅ.ಪ. ಕುಂಡಲ ತೇಜ ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ1 ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ 2 ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ- ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ3 ನಖದೊಳನಂತ ಬ್ರಹ್ಮಾಂಡವನಡಗಿಸಿ ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ4 ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ- ಗತ್ಪತಿ ವಿಜಯವಿಠ್ಠಲ ವೆಂಕಟ 5
--------------
ವಿಜಯದಾಸ
ಶೇಷ ಗಿರಿಯ ವಾಸಈಶ ಜಗತ್ರಯ ಪೋಷಕ ಸರ್ವೇಶ ಭಾಸುರ ಕೀರ್ತಿ ಶೇಷ ಎನ್ನ ನೀ ಪೋಷಿಸುವುದು ಈಶ ಪ ವಕ್ಷಸ್ಥಳದಲಿ ವಾಸವಾಗಿಹ ಶ್ರೀ ಪರಬ್ರಹ್ಮ ನಾ ಪಕ್ಷಿವಾಹನ ಪರಮಪರುಷ ಅಕ್ಷಯ ಫಲದಾಯಕನಾ ರಕ್ಷಕ ದೀನ ಜನರ ಸರ್ವೋತ್ತಮನ ರಾಜೀವದಳನಯನ ಈಕ್ಷಣದಲೆನ್ನ ನಿನ್ನ ಕುಕ್ಷಿಯೊಳಗೆ ಇಟ್ಟು ರಕ್ಷಿಸೊ ಸಂಪನ್ನ 1 ವೇಣುನಾದ ವಿನೋದನಾದ ಸುಗಾನಲೋಲ ಹರಿಯೆ ದಾನವಾಂತಕ ದಜನುರಕ್ಷಕ ಸುಜ್ಞಾನಿಗಳ ಧೊರಿಯೆ ಮಾನವಾಧಿ ಪ ಮದನವಿಲಾಸ ಮಾಧವ ಮುಕುಂದಾ ನೀನೆ ದಯಮಾಡಿ ಸಲಹೊ ಆನಂದಾ ನಿಜನಿತ್ಯ ಗೋವಿಂದಾ 2 ವಾರಿಧಿ ಬಂಧಿಸಿ ದೈತ್ಯರ ಬಲವನೆಲ್ಲ ಮುರಿದಾ ಬಲವಂತಾ ರಾವಣನ ಭಂಗವ ಬಡಿಸಿ ತಲೆಗಳ ಛೇದಿಸಿದಾ ಸುಲಭದಿ ಅವನನುಜಗೆ ಪಟ್ಟವನಿತ್ತು ಸತಿಯನೆ ತಂದಾ ಜಲಧಿಶಯನ ಅಹೋಬಲ 'ಹೊನ್ನವಿಠ್ಠಲ’ ಚಲುವ ಸದಾನಂದಾ 3
--------------
ಹೆನ್ನೆರಂಗದಾಸರು