ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ರಘುನಂದನ ರಾಮಾ ನಿರುತವು ನಿನ್ನನೆ ಸ್ಮರಿಸುವ ಭಾಗ್ಯವ ಪ ಪರಮಮಂಗಳನಾಮಾ ದುರಿತಭಂಜನ ನಾಮ ಗಿರಿಜೆಪಾಡುವ ನಾಮಾ | ಜಾನಕೀರಾಮ ಅ.ಪ ರಾಮನೆನೆ ಪಾಪವು ಲಯವಹುದಂತೆ ರಾಮಾಯೆನೆ ಭಯಗಳು ಪರಿಹರವಂತೆ 1 ರಾಮನೆನೆ ಮಾಯೆಯು ಹರವಂತೆ ರಾಮನ ನುತಿಸೆ ಮನ ಪರವಶವಂತೆ2 ಜಯರಾಮ ಜಯರಾಮ ಎನುತಿರುವಂತೆ] ದಯಮಾಡೊ ಮಾಂಗಿರಿರಂಗ ನೀನಂತೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜನಕಜಾಪತೇ ರಾಮಾ ಜಯ ಪ ಜನಕಜಾಪತೇ ಜಲದಶ್ಯಾಮಾ ಜಯರಘುವಂಶಲಲಾಮ ಅ.ಪ. ಮದನಜನಕ ಮಧುಕೈಟಭ ಭೀಮ ಮದನ ಬಿಂಬಾರ್ಚಿತ ಕಾಮಾ 1 ರಾಮಚಂದ್ರ ರಘುವೀರ ಜಾನಕೀರಾಮ ರಾವಣವೈರಿ ಶ್ರೀರಾಮಾ 2 ವಿನುತ ಸೋಮ ಶ್ರೀದವಿಠಲ ಗುಣಧಾಮ 3
--------------
ಶ್ರೀದವಿಠಲರು
ಪಾಲಿಸೋ ಸದಾ ಪರಿಪಾಲಿಸೋ ಪಾಲಿಸೋ ಪಾರ್ವತಿ ರಮಣ | ತ್ರಿದ ನಾಲಿಗೆಯಿಂದಲಿ | ಶ್ರೀಲಕುಮೀಶನ ಕಾಲ ಕಾಲಕ್ಕೆ ಕೊಟ್ಟು ಅ.ಪ ಭೇಷಪಾವಕ ಪತಂಗ | ನಯನ ಭಾಸುರ ಸ್ಪಟಿಕ ನಿಭಾಂಗ | ಹರಿ ದಾಸ ಜನರ ಸುಸಂಗವಿತ್ತು ದೋಷ ಕಳೆಯೊ ರಾಮಲಿಂಗ ಆಹಾ 1 ಕೇರ ಕುಮಾರ ಕುಮಾರ | ಪಿತ ಕೀರನಾಮಕನವತಾರ |ಕೀರಾ ದೇವನ ಗರ್ವಪರಿಹಾರ | ತಾಟ ಕಾರಿನಾಮ ಸವಿಗಾರ | ಆಹಾ ಶರಧಿ ವೈಕಾರಿಕÀ | ತತ್ವಾಧಿ ಕಾರಿ ವಿಕಾರಿ ಷಕಾರ ಪದಾರ್ಚಕ 2 ನಂದಿವಾಹನ ನಾಗಶರನೆ | ನೀಲ ಸುರನದಿ ಧರನೆ | ಶಾಮ ಸುಂದರ ವಿಠಲನ ಸಖನೆ ಮಹಿ ಶ್ಯಂದನ ಶಿವಶಂಕರನೆ | ಆಹಾ ಒಂದೂರಾರ್ಯರ ಕರದಿಂದ ಪೂಜಿತನಾಗಿ ನಿಂದು ಭಜಿಪರಿಗಾನಂದವೀವ ದೇವ 3
--------------
ಶಾಮಸುಂದರ ವಿಠಲ
ಸಿರಿ ಮನುಜಕೇಸರಿ ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ ಸರಸಿಜಾನನ ನಜಕ ತವಪದ ಮರೆದ ಪಾಮರನಾಗಿ ನಾ ಭವ ಶರಧಿಯೊಳು ಬಿದ್ದು ಪರಿದು ಪೋಗುವೆ ಎರಗರಿಪುಧ್ವಜನಾಗಿ ನೀ ಬಂದು ಸೂನು | ಸರ್ವೇಶ ರಾಘವ ಭಜಕಜನ ಸುರಧೇನು | ಸ್ವರತ ಸುಖಮಯ ಸುಜನ ವಾರಿಜ ಭಾನು ಖಳವನ ಕೃಶಾನು ತ್ರಿಜಗ ಪೋಷಕ ಪರಮ ಸುಲಭ ನೀ ನಿಜದಯದಿ ಹರಿಮದವ ಖಂಡ್ರಿಸಿ ವೃಜದ ತುರುಗಳ ಕಾಯ್ದ ಸಜನುತ ದ್ವಿಜಪ ಸುತೆ ಪತಿಧ್ವಜನ ಸುತನೆ 1 ಪತಿತ ಪಾವನ ರಂಗ | ಸಂತತದಿ ನಿನ್ನನು ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ ತತಿ ಮಾತಂಕ ಮರಿಗಳಿಗೆ ಸಿಂಗ ಸಿತ ತುರಂಗನ ರಥದಿ ಶೋಭಿಪ ಅತುಳ ಮಹಿಮನ ಜನನಿ ಅನುಜನಿಗೆ ಹಿತದಿ ಭ್ರಾತದಿ ಭೀತಿ ಬಿಡಿಸಿದ ಶೃತಿಗೆ ನಿಲುಲದ ಚ್ಯುತ ವಿದೂರನೆ 2 ಸಾಮಗಾನ ವಿಲೋಲ ಸುರರಾಜ ಪೂಜಿತ ಕಾಲ | ಕರಿದನುಜ ಹರನುತ ಸ್ವಾಮಿ ಶ್ರೀವನಮಾಲಧರ ಸುಗುಣಶೀಲ ಕಾಮಪಿತ ಹಿಮಧಾಮ ವದನ ಸು ಧಾಮಸಖ ಸುರಸ್ತೋಮ ವಂದಿತ ಯಾಮಿನೀ ಚರವೈರಿ ವಾಮನ ಶ್ರೀಮನೋಹರ ಶಾಮಸುಂದರ 3
--------------
ಶಾಮಸುಂದರ ವಿಠಲ