ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು
ಸಂಕ್ಷೇಪ ರಾಮಾಯಣ ಶ್ರೀಜಾನಕೀಮನೋಹರ ಚರಿತೆಯನು ಮುನಿ ರಾಜವಾಲ್ಮೀಕರಿಗೆ ನಾರದಂಪೇಳ್ದನದು ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು ವರಮುನಿಯಯಾಗಮಂ ಕಾಯ್ದುತಾಟಕಿಯಸಂ ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು ಬಾಲಕಾಂಡದಲಿ 1 ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ ಭರತಬಂದು ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ ರಘುವರನಯೋಧ್ಯಾಕಾಂಡದಿ 2 ದಂಡಕಾರಣ್ಯದಿ ವಿರಾಧನಂ ಸಂಹರಿಸಿ ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು ಮಾಯಾಮೃಗದವ್ಯಾಜದಿಂ ರಾವಣಂ ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ ಕಂಡು ಶಬರಿಯನು ಪಂಪಾತಟಕೆಬಂದ ನಾರಣ್ಯಕಾಂಡದೊಳ್ರಾಮನು 3 ಮರುತಾತ್ಮಜನಕಂಡು ಸುಗ್ರೀವಸಖ್ಯವಾ ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ ಸೀತೆಯಕುಶಳವಂತಹುದೆನೆ ತೆರಳಲು ಚತುರ್ದಿಕ್ಕಿಗಾಗವಾನರರುಮೂ ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ ಕಿಷ್ಕಿಂಧಕಾಂಡದಲಿ 4 ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು ವನಭಂಗಮಂಗೈಯ್ಯುತ ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ ಪತಿಗೆಸುಂದರಕಾಂಡದಲ್ಲಿ ಹನುಮಾ 5 ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ ಪೊಗಳಲು ಜನಕನಂದನೆಯ ಪಾವಕನಿಂ ಪರಿಗ್ರಹಿಸಿ ಘನಪುಷ್ಪಕವನೇರಿಬರುತ ವಹಿಲದಲಿ ಭರ ಯುದ್ಧಕಾಂಡದಲಿ 6 ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ ವರನು ಹನ್ನೊಂದುಸಾವಿರಲವಣನಂ ಪುತ್ರರಿಗೆ ರಾಜ್ಯವಿತ್ತು ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ ತೆರಳಿದಂದಿವಿಗೆದೇವರ್ಕಳರಳಿನಮಳೆಯ ಸುರಿದು ಜಯಜಯವೆಂದು ಪೊಗಳಿದರುಹರಿ ಯನುತ್ತರಕಾಂಡದಲಿ ತಿಳಿವದು 7 ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು ವಾಲ್ಮೀಕಿ ಮುನಿವಿರಚಿಸಿದನು ತಪ್ಪದೇ ಪಠಿಸುವಗಮುದಿನಂ ಗಾಯತ್ರಿ ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು ಚರಿತಸಜ್ಜನ ಕಲ್ಪವೃಕ್ಷವಿದುವೆ 8 ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ ಸೇವಕಂಸೇವ್ಯನವನು ಎಂತಾದಡೆಯು ಹರಿಯನಾಮಾಮೃತದರುಚಿಮ ಹಾಂತರರಿವರು ದುರ್ಜನರು ನಿಂದಿಸಿದಡೇನು ಸಂಕ್ಷೇಪರಾಮಾಯಣಂ 9
--------------
ಗುರುರಾಮವಿಠಲ